Breaking News

LOCAL NEWS

ಮೇಯರ್ ಸರೀತಾ ಪಾಟೀಲ ಪಾಲಿಕೆಗೆ ಹಾಜರ್

ಬೆಳಗಾವಿ- ಎಂಈಎಸ್ ಆಯೋಜಿಸಿದ್ದ ಕರಾಳ ದಿನಾಚರಣೆಯಲ್ಲಿ ಭಾಗವಹಿಸಿ ವಿವಾದಕ್ಕೆ ಕಾರಣವಾಗಿರುವ ಬೆಳಗಾವಿ ಪಾಲಿಕೆ ಮೇಯರ್ ಸರೀತಾ ಪಾಟೀಲ ಉಪ ಮೇಯರ್ ಸಂಜಯ ಶಿಂದೆ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಎಲ್ಲ ಎಂಈಎಸ್ ನಗರ ಸೇವಕರು ಪಾಲಿಕೆ ಕಚೇರಿಗೆ ಆಗಮಿಸಿ ಪಾಲಿಕೆಯ ಸಾಮಾನ್ಯ ಸಭೆ ನಡೆಸಲು ಮುಂದಾಗಿದ್ದಾರೆ ಶಾಸಕ ಸಂಬಾಜಿ ಪಾಟೀಲರ ಮನೆಯಲ್ಲಿ ಸಭೆ ನಡೆಸಿ ನೇರವಾಗಿ ಪಾಲಿಕೆ ಕಚೇರಿಗೆ ಆಗಮಿಸಿದ ಅವರು ಸಾಮಾನ್ಯ ಸಭೆ ನಡೆಸಲು ನಿರ್ಧರಿಸಿದ್ದು ಸಭೆಯಲ್ಲಿ ಪಾಲ್ಗೊಳ್ಳುವಂತೆ …

Read More »

ಕರವೇ ಕಾರ್ಯಕರ್ತರ ಬಂಧನ

ಬೆಳಗಾವಿ- ಮಹಾಪೌರ ಸರೀತಾ ಪಾಟೀಲ ಉಪ ಮಹಾಪೌರ ಸಂಜಯ ಶಿಂದೆ ಅವರ ಕಚೇರಿಯ ಬಾಗಿಲುಗಳಿಗೆ ಹಾಗು ನಾಮ ಫಲಕಕ್ಕೆ ಮಸಿ ಬಳಿದು ಪಾಲಿಕೆಯ ಎದರು ಪ್ರತಿಭಟನೆ ನೆಡೆಸುತ್ತಿದ್ದ ಕರವೇ ಕಾಯ೯ಕತ೯ರನ್ನು ಪೊಲೀಸರು ಬಂದಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯನ್ನು ವಜಾ ಮಾಡಬೇಕು. ಮಹಾಪೌರ ಹಾಗೂ ಉಪಮಹಾಪೌರರಿಗೆ ಸಕಾ೯ರ ನೀಡುತ್ತಿರುವ ವಾಹನ ಮತ್ತು ಇತರೆ ಸೌವಲತ್ತುಗಳನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿತ್ತಾ ಎಂಇಎಸ್‌ ವಿರುದ್ದ ದಿಕ್ಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸುತ್ತಿದ್ದ  ೫ …

Read More »

ಮೇಯರ್ ಚೇಂಬರ್ ಗೆ ಕಪ್ಪು ಮಸಿ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸರಿತಾ ಪಾಟೀಲ ಹಾಗು ಉಪ ಮೇಯರ್ ಸಂಜಯ ಶಿಂದೆ ಅವರ ಚೇಂಬರ್ ಬಾಗಿಲಿಗೆ ಹಾಗು ನಾಮಫಲಕಕ್ಕೆ ನಾರಾಯಣ ಗೌಡ ಬಣದ ಕಾರ್ಯಕರ್ತರು ಕಪ್ಪು ಮಸಿ ಬಳಿದು ಎಂಈಎಸ್ ವಿರುದ್ಧ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ ಬೆಳಗ್ಗೆ ಪಾಲಿಕೆ ಕಚೇರಿಗೆ ನುಗ್ಗಿದ ಕರವೇ ಕಾರ್ಯಕರ್ತರು ಕಪ್ಪು ಮಸಿ ಬಳಿದು, ಪಾಲಿಕೆ ಮುಂದೆ ಧರಣಿ ನಡೆಸಿ, ಪಾಲಿಕೆ ಸೂಪರ್ ಸೀಡ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ

Read More »

ಪ್ಲಾಸ್ಟಿಕ ಅಂಗಡಿಗಳ ಮೇಲೆ ಪಾಲಿಕೆ ಆಯುಕ್ತರ ದಾಳಿ ಆರು ಕ್ವಿಂಟಲ್ ಪ್ಲಾಸ್ಟಿಕ ವಶ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಶುಕ್ರವಾರ ಸಂಜೆ ನಗರದಲ್ಲಿರುವ ಹೋಲ್ ಸೇಲ್ ಪ್ಲಾಸ್ಟಿಕ ಅಂಗಡಿಗಳ ಮೇಲೆ ದಾಳಿ ಮಾಡಿ ಸುಮಾರು ಆರು ಕ್ವಿಂಟಲ್ ಪ್ಲಾಸ್ಟಿಕ ವಶಪಡಿಸಿಕೊಂಡಿದ್ದಾರೆ ಪಾಲಿಕೆಯ ಆರೋಗ್ಯಾಧಿಕಾರಿ ನಾಡಗೌಡ,ಪರಿಸರ ಅಭಿಯಂತರ ಯದಯಕುಮಾರ ಸೇರಿದಂತೆ ಪಾಲಿಕೆಯ ತಂಡ ಆಯುಕ್ತ ಶಶಿಧರ ಕುರೇರ ಅವರ ನೇತ್ರತ್ವದಲ್ಲಿ ಗಣಪತಿ ಗಲ್ಲಿ, ಮಾರುತಿ ಗಲ್ಲಿ ,ಖಡೇಬಝಾರ ಮಾರುತಿ ಗಲ್ಲಿ ರವಿವಾರ ಪೇಠೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿರುವ ಅಂಗಡಿಗಳ ಮೇಲೆ …

Read More »

200ಕ್ಕೂ ಹೆಚ್ಚು ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ

ಬೆಳಗಾವಿ- ಬೆಳಗಾವಿಯ ಹೆಮ್ಮೆಯ ಸಂಸ್ಥೆ KLE ಸಂಸ್ಥೆಯ ಶತಮಾನೋತ್ಸವದ ಅಂಗವಾಗಿ ಅಂಜುಮನ್ ಸಂಸ್ಥೆಯ ಸಹಯೋಗದಲ್ಲಿ ಅಂಜನ್ ಹಾಲ್ ನಲ್ಲಿ ಶನಿವಾರ ಬೃಹತ್ತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿದೆ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ರಾಜು ಸೇಠ ತಿಳಿಸಿದ್ದಾರೆ ಶನಿವಾರ ಬೆಳಿಗ್ಗೆ ೮ ಘಂಟೆಯಿಂದ ಮಧ್ಯಾಹ್ನ ಮೂರು ಘಂಟೆಯವರೆಗೆ ಶಿಬಿರ ನಡೆಯಲಿದ್ದು ಎರಡು ನೂರಕ್ಕು ಹೆಚ್ಚು ವೈಧ್ಯರು ಶಿಬಿರದಲ್ಲಿ ಎಲ್ಲ ರೀತಿಯ ಕಾಯಿಲೆಗಳನ್ನು ತಪಾಸಣೆ ಮಾಡಲಿದ್ದಾರೆ ಬಿಪಿ ಶುಗರ  ಅಸ್ತಮಾ …

Read More »

ಕೊಲ್ಲಾಪುರ ಇಲ್ಲವೇ ಸೊಲ್ಲಾಪುರದಲ್ಲಿ ಕನ್ನಡಿಗರ ಮಹಾಮೇಳಾವ್…!

  ಬೆಳಗಾವಿ:ನೆರೆಯ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡಿಗರ ಬೃಹತ್ ಮಹಾಮೇಳಾವ್ ನಡೆಸಲು ಬೆಳಗಾವಿ ಕನ್ನಡ ಸಂಘಟನೆಗಳು ಒಟ್ಟಾಗಿ ನಿರ್ಧರಿಸಿದ್ದಾರೆ ಎಂ ಇ ಎಸ್ ಬೆಳಗಾವಿಯಲ್ಲಿ ಮಹಾಮೇಳಾವ್, ಕರಾಳ ದಿನಾಚರಣೆಯಂಥ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಅವರಿಗೆ ನಮ್ಮ ಜಿಲ್ಲಾಡಳಿತ ಅನುಮತಿ ನೀಡುತ್ತದೆ. ಅದರಂತೆ ಕೊಲ್ಲಾಪುರ ಇಲ್ಲವೇ ಸೊಲ್ಲಾಪುರದಲ್ಲಿ ಕನ್ನಡಿಗರ ಮಹಾಮೇಳಾವ್ ನಡೆಸಲಾಗುವುದು ಎಂದು ಒಕ್ಕೂರಲ ನಿರ್ಣಯ ಮಂಡಿಸಲಾಯಿತು. ರಾಜ್ ಠಾಕ್ರೆ ಎಂ ಇ ಎಸ್ ಕುಚೋದ್ಯಕ್ಕೆ ತಕ್ಕ ಉತ್ತರ ನೀಡಿದ್ದು ರಾಜ್ ಠಾಕ್ರೆ ಕನ್ನಡಿಗರ …

Read More »

ಸರ್ಕಾರದ ಮೂಗು ಕಟ್ ಮಾಡ್ತಾರಂತೆ ….

ಬೆಳಗಾವಿ- ಅಧಿವೇಶನಕ್ಕೆ ವಿರುದ್ಧವಾಗಿ ನಾವು ಈ ಬಾರಿಯೂ ಮಹಾಮೇಳಾವ್ ಆಚರಿಸುತ್ತೇವೆ.ಎಂದು ಮಾಜಿ ಶಾಸಕ ಮನೋಹರ ಕಿಣೇಕರ,ದೀಪಕ ದಳವಿ ಪುಂಡಾಟಿಕೆಯ ಹೇಳಿಕೆ.ನೀಡಿದ್ದಾರೆ ೨೦೦೬ರ ಬೆಳಗಾವಿ ಪ್ರಥಮ ಅಧಿವೇಶನ ಸಂದರ್ಭದಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಸರ್ಕಾರದ ಮೂಗು ಕಟ್ ಮಾಡಿದ್ದೇವೆ. ಮಹಾಭಾರತದಲ್ಲಿ ಶೂರ್ಪಣಿಕೆಯ ಮೂಗು ಯಾವ ರೀತಿ ಕಟ್ ಮಾಡಿದರೋ ಅದೇ ರೀತಿಯಲ್ಲಿ ಈ ಬಾರಿಯೂ ಮೂಗು ಕಟ್ ಮಾಡುತ್ತೇವೆ. ಇದು ಪ್ರತಿ ವರ್ಷ ಅಧಿವೇಶನಕ್ಕೆ ವಿರುದ್ಧವಾಗಿ ಮಹಾಮೇಳಾವ್ ನಡೆಸುತ್ತೇವೆ.ಎಂದು ವಿವಾದಾತ್ಮಕ ಹೇಳಿಕೆ …

Read More »

ಎಂಈಎಸ್ ಮುಖಕ್ಕೆ ರಾಜ್ ಠಾಕ್ರೆ ಮಂಗಳಾರತಿ

ಬೆಳಗಾವಿ- ನಮ್ಮ ಮಹಾರಾಷ್ಟ್ರದಲ್ಲಿ ನಾನು ಸಿಎಂ ಇದ್ದಾಗ ಇಲ್ಲಿಯ ಮಹಾನಗರ ಪಾಲಿಕೆಯವರು ಮಹಾರಾಷ್ಟ್ರ ಉದಯವಾದ ದಿನ ಯಾರಾದರೂ ಕರಾಳ ದಿನ ಆಚರಿಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರೆ ಅವರನ್ನು ಒದ್ದು ಜೈಲಿಗೆ ಹಾಕಿಸುತ್ತಿದ್ದೆ ಎಂದು  ಮಹಾರಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್ ಠಾಕ್ರೆ ಎಂಈಎಸ್ ಮೂಖಕ್ಕೆ ಮಂಗಳಾರತಿ ಮಾಡಿದ್ದಾರೆ ಮಹಾರಾಷ್ಟ್ರದ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ ರಾಜ್ ಠಾಖ್ರೆ  ಕನ್ನಡ ರಾಜ್ಯೋತ್ಸವ ದಿನದಂದು ಎಂಇಎಸ್ ಕರಾಳ ದಿನ ಆಚರಣೆ …

Read More »

ಬಗಾದಿ ಗೌತಮ ವರ್ಗಾವಣೆ

ಬೆಳಗಾವಿ- ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೌತಮ ಬಗಾದಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ ಗೌತಮ ಬಗಾದಿ ಅವರು ಪದೋನ್ನತಿ ಹೊಂದಿದ್ದು ರಾಯಚೂರು ಜಿಲ್ಲಾಧಿಕಾರಿಗಳಾಗಿ ನಿಯ್ಯುಕ್ತಿಗೊಂಡಿದ್ದಾರೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಯಾರು ಬರ್ತಾರೆ ಕಾದು ನೋಡನೇಕಾಗಿದೆ

Read More »

ಸಮಿತಿಗೆ ಶಾಕ್..ಮೇಯರ್ ಚೇಂಬರ್ ಗೆ..ಲಾಕ್…!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗು ಉಪ ಮೇಯರ್ ಇಬ್ಬರೂ ಮಾಡಬಾರದ ಕಿತಾಪತಿ ಮಾಡಿ ಈಗ ಫೋನ್ ಸ್ವಿಚ್ ಆಫ್ ಮಾಡಿ ನಾಟ್ ರೀಚೇಬಲ್ ಆಗಿರುವದು ಹಾಸ್ಯಾಸ್ಪದದ ಸಂಗತಿಯಾಗಿದೆ ರಾಜ್ಯೋತ್ಸವದ ದಿನ ಎಂಈಎಸ್ ಕರಾಳ ದಿನ ಆಚರಿಸಿತ್ತು ಈ ಕರಾಳ ದಿನಾಚರಣೆಯಲ್ಲಿ ಮೇಯರ್ ಸರೀತಾ ಪಾಟೀಲ,ಹಾಗು ಉಪ ಮೇಯರ್ ಸಂಜಯ ಶಿಂಧೆ ಶಾಸಕರಾದ ಅರವಿಂದ ಪಾಟೀಲ ಸಂಬಾಜಿ ಪಾಟೀಲ ಮತ್ತು ಕೆಲವು ನಗರ ಸೇವಕರು ಭಾಗವಹಿಸಿದ್ದರು ಸರ್ಕಾರ ಈಗ …

Read More »

ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಿ,ಗಡಿಯಲ್ಲಿ ಕರವೇ ಕಿಡಿ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಸೇರಿದಂತೆ ಎಂಈಎಸ್ ನಗರ ಸೇವಕರು ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಪುಂಡಾಟಿಕೆ ಪ್ರದರ್ಶಿಸಿದ್ದು ರಾಜ್ಯ ಸರ್ಕಾರ ಕೂಡಲೇ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಒತ್ತಾಯಿಸಿ ಕರವೇ ಜಿಲ್ಲಾಧಿಕಾರಿಗಳ ಕಚೇರಿ ಎದುರು ಟೆಂಟ್ ಹಾಕಿದೆ ಪಾಲಿಕೆಯನ್ನು ಸೂಪರ್ ಸೀಎ್ ಮಾಡಬೇಕು ಶಾಸಕ ಸಂಬಾಜಿ ಪಾಟೀಲ ಹಾಗು ಅರವಿಂದ ಪಾಟೀಲರ ಸದಸ್ಯತ್ವ ರದ್ದು ಮಾಡಬೇಕು ಎಂದು ಕರವೇ ಒತ್ತಾಯಿಸಿದೆ ರಾಜ್ಯ ಸರ್ಕಾರ ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದರೆ …

Read More »

೧೩ ರಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ

ಬೆಳಗಾವಿ: ಐತಿಹಾಸಿಕ ಕ್ರಾಂತಿಯ ನೆಲದಲ್ಲಿ ಹುಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿ ಬೆಳಗಿದ ಕನ್ನಡಿಗರ ಹೆಮ್ಮೆಯ ಸಂಸ್ಥೆ ಆಗಿರುವ ಕೆಎಲ್ಇ ಸಂಸ್ಥೆಯ ಶತಮಾನೋತ್ಸವದ ವರ್ಣರಂಜಿತ ಕಾರ್ಯಕ್ರಮ ವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ 13ರಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಹಳ್ಳಿಯಿಂದ ದಿಲ್ಲಿಯವರೆಗೆ, ದಿಲ್ಲಿಯಿಂದ ದುಬೈವರೆಗೆ ನೂರಾರು ಶಾಖೆಗಳನ್ನು ತೆರೆದು ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ಗಳಿಸಿರುವ ಹೆಮ್ಮೆಯ ಕೆಎಲ್ಇ ಶತಮಾನೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ …

Read More »

ಮದುವೆಯಾಗಿ ಎರಡು ಮಕ್ಕಳಾದರೂ ಶಾಧಿ ಭಾಗ್ಯದ ಹಣ ಬಂದಿಲ್ಲ..!

ಬೆಳಗಾವಿ- ರಾಜ್ಯದಲ್ಲಿ ಶಾಧಿ ಭಾಗ್ಯ ಯೋಜನೆಯಲ್ಲಿ ೨೮ ಸಾವಿರ ಅರ್ಜಿಗಳು ಬಾಕಿ ಇವೆ ಅದಕ್ಕಾಗಿ ಕೂಡಲೇ ೧೦೦ ಕೋಟಿ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಳ್ಳಲಾಗಿದ್ದು ಅನುದಾನ ನೀಡುವದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತ,ಹಿಂದುಳಿದ,ಹಜ್ ಇಲಾಖೆಯ ಕಾರ್ಯದರ್ಶಿ ಮಹ್ಮದ ಮೋಹಸೀನ ತಿಳಿಸಿದ್ದಾರೆ ಬೆಳಗಾವಿ:ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ, ಹಜ್ ಇಲಾಖೆಗಳ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸೀನ್ ಇಲಾಖೆಗಳ ಪ್ರಗತಿ ಪರಿಶೀಲನೆ ಇಂದು ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಸಿದರು. ಜಿಲ್ಲಾಧಿಕಾರಿ …

Read More »

ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಫಿರೋಜ್ ಸೇಠ

ಬೆಳಗಾವಿ- ರಾಜ್ಯ ಸರ್ಕಾರ ನಿಗಮ ಮಂಡಳಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರು ಕ್ಯಾಬಿನೇಟ್ ದರ್ಜೆಯ ಸ್ಥಾನಮಾನ ಹೊಂದಿರುವ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ವಿಫುಲ ಅವಕಾಗಳಿದ್ದು ಸರ್ಕಾರ ಕೊಟ್ಟರುವ ಅವಕಾಶವನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಶಾಸಕ ಸೇಠ ತಿಳಿಸಿದ್ದಾರೆ

Read More »

ಮೇಯರ್ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ..!

ಬೆಳಗಾವಿ- ಗಡಿಯಲ್ಲಿ ನಾಡವಿರೋಧಿ ಎಂಈಎಸ್ ಪುಂಡಾಟಿಕೆ ವಿಪರೀತವಾಗಿದೆ ಮೇಯರ್ ಆದ ಮರು ದಿನ ಮಹಾರಾಷ್ಟ್ರ ಮುಖ್ಯಮಂತ್ರಿ ದವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಗಡಿವಿವಾದದ ಕುರಿತು ಸಮಾಲೋಚನೆ ಮಾಡಿ ಪುಂಡಾಟಿಕೆ ಪ್ರದರ್ಶಿಸಿದ್ದ ಮೇಯರ್ ಸರೀತಾ ಪಾಟೀಲ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡು ಸರ್ಕಾರಕ್ಕೆ ಸವಾಲು ಹಾಕಿದ್ದು ಇವರ ನೆತ್ತಿಯ ಮೇಲೆ ಅಮಾನತಿನ ತೂಗುಗತ್ತಿ ನೇತಾಡುತ್ತಿದೆ ರಾಜ್ಯೋತ್ಸವದ ದಿನ ಎಂಈಎಸ್ ಆಯೋಜಿಸಿದ್ಧ ಕರಾಳ ದಿನಾಚರಣೆಯಲ್ಲಿ ಶಾಸಕ ಸಂಬಾಜಿ ಪಾಟೀಲ,ಅರವಿಂದ ಪಾಟೀಲ.ಮೇಯರ್ ಸರೀತಾ ಪಾಟೀಲ ಉಪ …

Read More »
Sahifa Theme License is not validated, Go to the theme options page to validate the license, You need a single license for each domain name.