Breaking News

LOCAL NEWS

ಸಂಸದರಿಂದ ಸಿಟಿ ರೌಂಡ್ಸ..ಅಭಿವೃದ್ಧಿಗೆ ಸಹಕರಿಸಲು ವ್ಯಾಪಾರಿಗಳಿಗೆ ಮನವಿ

ಬೆಳಗಾವಿ- ಮಹಾನಗರ ಪಾಲಿಕೆಯ ಆಯುಕ್ತ ಶಶಿಧರ ಕುರೇರ ಅವರು ನಗರದಲ್ಲಿ ರಸ್ತೆ ಅತೀಕ್ರಮಣವನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದು ಸಂಸದ ಸುರೇಶ ಅಂಗಡಿ,ಮೇಯರ್ ಸರೀತಾ ಪಾಟೀಲ ಪೋಲೀಸ್ ಆಯುಕ್ತ ಕೃಷ್ಣಭಟ್ ಅವರು ತೆರವು ಕಾರ್ಯಾಚರಣೆ ನಡೆದ ಸ್ಥಳಗಳನ್ನು ಪರಶೀಲಿಸಿದರು ಗಣಪತಿ ಗಲ್ಲಿ,ಮಾರುತಿ ಗಲ್ಲಿ ಖಡೇ ಬಝಾರ ಪ್ರದೇಶದಲ್ಲಿ ಸಂಚರಿಸಿದ ಅವರು ಪಾಲಿಕೆ ಅಧಿಕಾರಿಗಳ ಯಶಸ್ವಿ ಕಾರ್ಯಾಚರಣೆ ಕುರಿತು ಮೆಚ್ಚುಗೆ ವ್ತಕ್ತಪಡಿಸಿದರು ಈ ಸಂಧರ್ಭದಲ್ಲಿ ವ್ಯಾಪಾರಿಗಳು ಸಂಸದ ಸುರೇಶ ಅಂಗಡಿ ಬಳಿ ತಮ್ಮ …

Read More »

ನೋಟಿನ ಗಲಾಟೆ..ಮೋದಿ ವಿರುದ್ಧ ಕಾಂಗ್ರೆಸ್ ತಮಟೆ

ಬೆಳಗಾವಿ: ಕೇಂದ್ರ ಸರ್ಕಾರ 500 ಹಾಗೂ 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿರುವುದರಿಂದ ಜನಸಾಮಾನ್ಯರಿಗೆ ಇದರಿಂದ ಆಗುತ್ತಿರುವ ತೊಂದರೆ ಖಂಡಿಸಿ ಬೆಳಗಾವಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕ ನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ತಮಟೆ ಚಳುವಳಿ ನಡೆಸುವುದರ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು. ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರ ನೇತೃತ್ವದಲ್ಲಿ ನಡೆದ ತಮಟೆ ಚಳುವಳಿಯಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ನೂರಾರು …

Read More »

ಕನ್ನಡ ನಾಡು- ನುಡಿಯ ಬಗ್ಗೆ ಅಭಿಮಾನವಿರಲಿ- ಶಾಂತಿನಾಥ ದಿಬ್ಬದ

ಬೆಳಗಾವಿ.ಜ.8: ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಸಾಹಿತಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ನಿವೃತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು. ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡ ಜೈನ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಹಳೆಗನ್ನಡದ ಬಗ್ಗೆ ಇಂದಿನ ಜನಾಂಗಕ್ಕೆ …

Read More »

ಆನ್ ಲೈನ್ ಅರ್ಜಿ ಹಾಕಿದರೆ ರೇಷನ್ ಕಾರ್ಡ ಮನೆಗೆ- ಯುಟಿ ಖಾದರ

ಬೆಳಗಾವಿ: ಕಳೆದ 15-20 ವರ್ಷಗಳಿಂದ ರಾಜ್ಯದಲ್ಲಿ ರೇಷನ್ ಕಾರ್ಡನಲ್ಲಿ ಅವ್ಯವಹಾರ ಹಾಗೂ ಸಮಸ್ಯೆಗಳು ನಡೆಯುತ್ತಿತ್ತು. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ರೇಷನ್ ಕಾರ್ಡ ಸಿಗದೇ ವಂಚಿತರಾಗುತ್ತಿದ್ದರು. ಇದನ್ನೆಲ್ಲ ಮನಗೊಂಡು ಎಪಿಎಲ್ ಕಾರ್ಡ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅಂತರ್ಜಾಲದಲ್ಲಿ ಎಪಿಎಲ್ ಕಾರ್ಡ ಪಡೆದುಕೊಳ್ಳುವ ವಿನೂತನ ಯೋಜನೆಯನ್ನು ಸೋಮವಾರದಿಂದ ಪ್ರಾರಂಭಗೊಳ್ಳಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ ಹೇಳಿದರು. ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಕಾರ್ಡ ನಂಬರ್ ಹಾಕಿದರೇ ಸಾಕು ತಮ್ಮ ಎಪಿಎಲ್ …

Read More »

ಟ್ಯುಶನ್ ಗೆ ಬರುತ್ತಿದ್ದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಶಿಕ್ಷಕ

ನಿಪ್ಪಾಣಿ-ಮನೆಗೆ ಟ್ಯುಶನ್ ಪಡೆಯಲು ಬರುತ್ತಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಶಿಕ್ಷಕನೋರ್ವ ತನ್ನ ಮಡದಿಯ ಸಹಕಾರದೊಂದಿಗೆ ನಿರಂತರವಾಗಿ ಅತ್ಯಾಚಾರ ನಡೆಸಿದ ಘಟನೆ ನಿಪ್ಪಾಣಿ ಪಟ್ಟಣದಲ್ಲಿ ನಡಡದಿದೆ ಕಿರಾತಕ ಶಿಕ್ಷಕ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ.ನಡೆಸಿದ್ದಾನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿ ಘಟನೆ ನಡೆದಿದೆ ೨೦೧೬ ಮೆ ತಿಂಗಳಿಂದ ನಿರಂತರ ಅತ್ಯಾಚಾರ ಮಾಡಿದ ಕಾಮುಕ ಶಿಕ್ಷಕ ಅಪ್ರಾಪ್ರ ಬಾಲಕಿಗೆ ಯಾರಿಗೂ ಹೇಳಕೂಡದು ಎಂದು ಹೆದರಿಸಿದ್ದ ಎನ್ನಲಾಗಿದೆ ಬೆಳಗಾವಿ ಜಿಲ್ಲೆಯ …

Read More »

ನೋಟು ಅಮಾನ್ಯ ತೊಂದರೆ ಪಡುತ್ತಿರುವ ಜನಸಾಮಾನ್ಯ,ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ

ಬೆಳಗಾವಿ-_ ಕೇಂದ್ರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ… ದೇಶದಲ್ಲಿ ನೋಟ್ ಬ್ಯಾನ್ ಹಾಗೂ ಪ್ರಧಾನಿ ವಿರುದ್ಧ ಭ್ರಷ್ಟಾಚಾರದ ತನಿಖೆಗೆ ಆಗ್ರಹಿಸಿ ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ನಗರದ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ದೇಶದಲ್ಲಿ 500,1000 ರೂಪಾಯಿ ಮುಖ ಬೆಲೆಯ ನೋಟ್ ನಿಷೇಧದಿಂದ ಬಡವರು, ಮಧ್ಯಮ ವರ್ಗದ ಜನರಿಗೆ ಭಾರೀ ಪರಿಣಾಮ ಬೀರಿದೆ. ಇನ್ನೂ ಪ್ರಧಾನಿ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರದ ಆರೋಪದ …

Read More »

ಇಂದು ಮಾಧುರಿ ದಿಕ್ಷೀತ್ ಬೆಳಗಾವಿಗೆ

ಬೆಳಗಾವಿ- ಖ್ಯಾತ ಬಾಲಿವುಡ್ ನಟಿ ಮಾಧುರಿ ದಿಕ್ಷೀತ್ ಇಂದು ಶನಿವಾರ ವಿಶೇಷ ವಿಮಾನದ ಮೂಲಕ ಬೆಳಗಾವಿಗೆ ಆಗಮಿಸಿ ಕಾಕತಿ ಬಳಿ ನಿರ್ಮಾಣಗೊಂಡಿರುವ ಪಂಚತಾರಾ ಹೊಟೆಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಬೆಳಿಗ್ಗೆ ೧೧ ಘಂಟೆಗೆ ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ಧಾಣಕ್ಕೆ ಆಗಮಿಸುವ ಅವರು ಕಾಕತಿ ಬಳಿಯ ಪಂಚತಾರಾ ಹೊಟೇಲ್ ಗೆ ತೆರಳಲಿದ್ದಾರೆ ಮಧ್ಯಾಹ್ನ ೧೨ ಘಂಟೆಗೆ ನಡೆಯಲಿರುವ ಪಂಚತಾರಾ ಹೊಟೆಲ್ ಉದ್ಘಾಟಿಸಿ ನಂತರ ಮುಂಬೈಗೆ ತೆರಳಲಿದ್ದಾರೆ ಬೆಳಗಾವಿ ನಗರದ ಹೊರ ವಲಯದಲ್ಲಿ …

Read More »

ವ್ಯಾಪಾರಿಗಳಿಗೆ ಸಿಹಿ ಸುದ್ಧಿ..ಆನ್ ಲೈನ್ ಮೂಲಕ ಟ್ರೇಡ್ ಲೈಸನ್ಸ

ಬೆಳಗಾವಿ- ಬೆಳಗಾವಿ ನಗರದ ವ್ಯಾಪಾರಿಗಳು ನಮಗೆ ಲೈಸನ್ಸ ಕೊಡಿ ಎಂದು ಪಾಲಿಕೆ ಕಚೇರಿಗೆ ಇನ್ನು ಮುಂದೆ ಅಲೆದಾಡ ಬೇಕಾಗಿಲ್ಲ ಬೆಳಗಾವಿ ಮಹಾನಗರ ಪಾಲಿಕೆ ಇ- ವ್ಯಾಪಾರ ಎಂಬ ಹೊಸ ಪದ್ದತಿಯನ್ನು ಜಾರಿಗೆ ತಂದಿದ್ದು ಗ್ರಾಹಕರು ತಮ್ಮ ಅಂಗಡಿಯಲ್ಲಿ ಕುಳಿತುಕೊಂಡು ಆನ್ ಲೈನ್ ಮೂಲಕ ಟ್ರೇಡ್ ಲೈಸನ್ಸ ಪಡೆಯಬಹುದಾಗಿದೆ ವ್ಯಾಪಾರಿಗಳು ಇಂಟರ್ ನೆಟ್ ಆನ್ ಮಾಡಿ www.mrc.gov.iw/tradelicance ಎಂದು ಲಾಗ್ ಇನ್ ಆದ್ರೆ ಅಪ್ಲಿಕೆಶನ್ ಓಪನ್ ಆಗುತ್ತದೆ ಅಪ್ಲಿಕೇಶನ್ ಪಿಲಪ್ ಮಾಡಬೇಕು …

Read More »

ಕೆವಿಜಿ ಬ್ಯಾಂಕಿನಿಂದ ಪ್ರಥಮ ಡಿಜಿಟಲ್ ಗ್ರಾಮವಾಗಿ ಝಡ್ ಶಹಾಪೂರ

ಬೆಳಗಾವಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಬೆಳಗಾವಿ ತಾಲೂಕು ಝಡ್ ಶಾಹಪೂರ ಗ್ರಾಮವನ್ನು ಸಂಪೂರ್ಣ ಡಿಜಿಟಲ್ ಗ್ರಾಮವನ್ನಾಗಿ ಪರಿವರ್ತಿಸಿದ್ದು ಆ ಗ್ರಾಮವನ್ನು ‘ಸಂಪೂರ್ಣ ಡಿಜಿಟಲ್ ಗ್ರಾಮವೆಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಎಸ್ ರವೀಂದ್ರನ್ ಘೋಷಿಸಿದರು. ಅವರು ಈ ಕುರಿತ ಘೋಷಣಾ ಫಲಕವನ್ನು ಶೆರೆವಾಡ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಗ್ರಾಮದಲ್ಲಿ ಇನ್ನು ಮುಂದೆ ನಗದು ವ್ಯವಹಾರ ಕಡಿಮೆಯಾಗುವುದಲ್ಲದೆ ನಗದು ರಹಿತ ವ್ಯವಹಾರ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಜನಸಾಮಾನ್ಯರು …

Read More »

ಬೆಳಗಾವಿಯಲ್ಲಿ ಆಸ್ಸಾಂ ಉಗ್ರನ ಬಂಧನ

ನಿಷೇಧಿತ ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡ ಓರ್ವ ಉಗ್ರ ಆರೋಪಿಯ ಬಂಧನ ನಿಷೇಧಿತ ಉಗ್ರವಾದಿ ಸಂಘಟನೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೂಡೋಲ್ಯಾಂಡ್ (ಎಸ್) ನೊಂದಿಗೆ ನಿಕಟ ಸಂಬಂಧ ಹೊಂದಿದ ಆಸ್ಸಾಂ ರಾಜ್ಯದ ಓರ್ವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಪೊಲೀಸ್‍ರು ಹಾಗೂ ಆಸ್ಸಾಂ ರಾಜ್ಯದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಿನ್ನೆ ಬೆಳಗಾವಿ ಜಿಲ್ಲೆ  ರಾಯಬಾಗ ತಾಲ್ಲೂಕಿನ ಯಡ್ರಾವ ಗ್ರಾಮದ  ಸಕ್ಕರೆ ಕಾರ್ಖಾನೆಯ ಹತ್ತಿರ ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು …

Read More »

ಸಿಐಡಿ ಪೋಲೀಸರ ದಾಳಿ ೨೦ ಕೆಜಿ ಗಾಂಜಾ ವಶ

  ಬೆಳಗಾವಿ ನಗರ ಹಾಗು ಜಿಲ್ಲೆಯ ಕಾಲೇಜು ವಿಧ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಸಿಐಡಿ ಪೋಲೀಸರು ಸಿಐಡಿ ಇನ್ಸ್ಪೆಕ್ಟರ್ ಎನ್.ವಿ. ಬರಮನಿ ನೇತೃತ್ವದ ತಂಡದ ದಾಳಿ..ಮಾಡಿ ಸುಮಾರು ೨೦ ಕೆಜಿ ಗಾಂಜಾ ವಶಪಡಿಸಿಕೊಂಡಿದೆ ಕಬ್ಬಿನ ಗದ್ದೆಯಲ್ಲಿ ಬೇಳೆದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಸಿದ್ದಪ್ಪಾ ಹಿರೇಕೊಡಿ ಎಂಬುವವರ ಹೊಲದಲ್ಲಿ ಬೆಳೆದ ಗಾಂಜಾ..ಇದಾಗಿದೆ ಆರೋಪಿ ಸಿದ್ದಪ್ಪಾ ಹಿರೇಕೊಡಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ …

Read More »

ಬೆಳಗಾವಿ ನಗರದಲ್ಲಿ ಈಜು ಸ್ಪರ್ಧೆ

ನಗರದ ಕೆಎಲ್‍ಇ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜ್ ಈಜುಕೊಳದಲ್ಲಿ ಜ. 6 ರಿಂದ 8ರವರೆಗೆ 29 ನೇ ದಕ್ಷಿಣ ವಲಯ ಈಜು ಸ್ಪರ್ದೆ ನಡೆಯಲಿದೆ ಎಂದು  ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್ ಅಧ್ಯಕ್ಷ ನೀಲಕಂಠರಾವ್ ಆರ್ ಜಗದಾಳೆ ಹೇಳಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಎಲ್‍ಇ ಸಂಸ್ಥೆ, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ ಇವರ ಸಹಯೋಗದೊಂದಿಗೆ ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್‍ನವರು ಈ ಸ್ಪರ್ದೆಯನ್ನು ಆಯೋಜಿಸಿದ್ದಾರೆ. ಈ ಈಜು …

Read More »

ಮಾರುತಿ ಗಲ್ಲಿಯಲ್ಲಿ ವ್ಯಾಪಾರಿಗಳಿಂದಲೇ ಟ್ರಾಫಿಕ್ ಮ್ಯಾನೇಜ್

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ನಿಂದಾಗಿ ನಗರದ ಟ್ರಾಫಿಕ್ ವ್ಯೆವಸ್ಥೆ ಹದಗೆಟ್ಟು ಹೋಗಿದೆ ನಗರದ ಟ್ರಾಫಿಕ್ ಪೋಲೀಸರಿಂದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆ ಸಾಧ್ಯವೇ ಇಲ್ಲ ಎಂದು ಮನವರಿಕೆ ಮಾಡಿಕೊಂಡ ಮಾರುತಿ ಗಲ್ಲಿಯ ವ್ಯಾಪಾರಿಗಳು ಸ್ವತಹ ತಾವೇ ಮುಂದಾಗಿ ಶಿಸ್ತಿನ ಪಾರ್ಕಿಂಗ್ ಸಿಸ್ಟಂ ಜಾರಿಗೆ ತಂದಿದ್ದಾರೆ ಮಾರುತಿ ಗಲ್ಲಿ ವ್ಯಾಪಾರಿಗಳ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ ಮಾರುತಿ ಗಲ್ಲಿಯಲ್ಲಿ ಯಾವದೇ ವ್ಯಾಪಾರಿ ರಸ್ತೆ ಬದಿಯ ಚರಂಡಿ ದಾಟಿ ರಸ್ತೆ ಅತೀಕ್ರಮಣ ಮಾಡಬಾರದು …

Read More »

ಶಿಥಿಲಗೊಂಡಿರುವ ಸೇತುವೆ ಪರಶೀಲಿಸಿದ ರೆಲ್ವೆ ಇಂಜನೀಯರಗಳು

ಬೆಳಗಾವಿ: ನಗರದ ಬೆಳಗಾವಿ ಖಾನಾಪೂರ ರಸ್ತೆಯಲ್ಲಿತುವ ಅತ್ಯಂತ ಹಳೆಯದಾದ ರೈಲ್ವೈ ಸೇತುವೆ ಶಿಥಿಲಗೊಂಡು ಅಪಾಯದ ಮಟ್ಟದಲ್ಲಿದ್ದು, ಬುಧವಾರ ರೈಲ್ವೈ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆ ಇಂಜಿನಿಯರ್ ಅಮರಗುಂಡಪ್ಪ ಹಾಗೂ ಪಾಲಿಕೆ ಆಯುಕ್ತ ಶಶೀಧರ್ ಕುರೇರ್, ಹಿರಿಯ ಅಭಿಯಂತರ ಆರ್.ಎಸ್. ನಾಯಕ, ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಅನೇಕ ತಾಂತ್ರಿಕ ತಜ್ಞರು ಸೇತುವೆಯ ಪರಿಶೀಲನೆ ಮಾಡಿದರು. ಪರಿಶೀಲನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ …

Read More »

ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು

  ಸವದತ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಸ್ವಿಪ್ಟ್ ಕಾರು ಮತ್ತು ರಾಜ್ಯಹಂಸ ಬಸ್ ಮಧ್ಯೆ ಮುಖಾಮುಖಿ ಢಿಕ್ಕಿಅಗಿದ ಪರಿಣಾಮ ಈ ಘಟನೆ ನಡೆದಿದೆ ಸವದತ್ತಿ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಈ ಘಟನೆ ನಡೆದಿರುವದರಿಂದ ಸವದತ್ತಿ ಧಾರವಾಡ ಮಧ್ಯದ ರಸ್ತೆಯಲ್ಲಿ ತಳಮಳವನ್ನುಂಟು ಮಾಡಿದೆ ಕಾರ ನಂಬರ ka 25 Ma 8387 ಮತ್ತು ಗೋಕಾಕ …

Read More »