Breaking News

LOCAL NEWS

“ಜೈ ಮಹಾರಾಷ್ಟ್ರ”ಎಂದು ಮನೆಯ ಅಂಗಳದಲ್ಲಿ ರಂಗೋಲಿ ಹಾಕಿದ್ದು ಎಲ್ಲಿ ಗೊತ್ತಾ ??

ಬೆಳಗಾವಿ-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಹೊಸ ವರಸೆ ಆರಂಭಿಸಿದೆ.ಮನೆಯ ಅಂಗಳದಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಎಂದು ರಂಗೋಲಿ ಹಾಕಿಸಿ ಮರಾಠಿ ಭಾಷಿಕರನ್ನು ಕೆರಳಿಸಿ ಎಂಇಎಸ್ ಸಂಘಟನೆಯನ್ನು ಬಲಿಷ್ಢಗೊಳಿಸಲು ಹೊಸ ಪ್ಲ್ಯಾನ್ ಮಾಡಿಕೊಂಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರು ಗ್ರಾಮದಲ್ಲಿ ಹತ್ತು ಹಲವು ಮನೆಗಳ ಎದುರು ಜೈ ಮಹಾರಾಷ್ಟ್ರ ಎಂದು ರಂಗೋಲಿಯಲ್ಲಿ ಬಿಡಿಸಿ ನಾಡದ್ರೋಹಿ ಕೆಲಸ ಮಾಡುತ್ತಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಮ್ಮ …

Read More »

ಗೆದ್ದವರಿಗೆ ಐದು ಲಕ್ಷ ₹ ಕೊಡ್ತಾರೆ,ಅಲ್ಲಿ ಸಾವಿರಾರು ಜನ ಸೇರ್ತಾರೆ,ಗಣ್ಯರೂ ಬರ್ತಾರೆ..!!

ಬೆಳಗಾವಿ- ಕಳೆದ ಹತ್ತು ದಿನಗಳಿಂದ ಬೆಳಗಾವಿ ಮಹಾನಗರದ ಸರ್ದಾರ್ ಮೈದಾನದಲ್ಲಿ ಧೂಳೆಬ್ಬಿಸಿರುವ MLA ಅನೀಲ ಬೆನಕೆ ಕ್ರಿಕೆಟ್ ಟ್ರೋಫಿಯ, ಫೈನಲ್ ಮ್ಯಾಚ್ ಮೋರೆ ಎಲೆವನ್ ಹಾಗೂ ಝಿಯಾನ್ ಸ್ಪೋರ್ಟ್ಸ್ ಬಲಾಡ್ಯ ತಂಡಗಳ ನಡುವೆ ಇಂದು ಬೆಳಗ್ಗೆ 10-00 ಗಂಟೆಗೆ ಅಂತಿಮ ಸೆಣಸಾಟ ನಡೆಯಲಿದೆ.. ಹತ್ತು ದಿನಗಳಿಂದ ಬೆಳಗಾವಿಯಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬದ ವಾತಾವರಣ ಸೃಷ್ಠಿ ಮಾಡಿರುವ ಅನೀಲ ಬೆನಕೆ ಟ್ರೋಫಿಯಲ್ಲಿ,ಮುಂಬಯಿ, ಗೋವಾ,ಜಮ್ಮು ಕಾಶ್ಮೀರ್ ಸೇರಿದಂತೆ ನಲವತ್ತಕ್ಕೂ ಹೆಚ್ಚು ದಿಗ್ಗಜ ಕ್ರಿಕೆಟ್ …

Read More »

ರವಿ ಕೋಕೀತ್ಕರ್ ಫೈರೀಂಗ್ ಕೇಸ್ ಗೆ ಹೊಸ ಟ್ವಿಸ್ಟ್….!!

ಬೆಳಗಾವಿ-ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ಗುಂಡಿನ ದಾಳಿ ಪ್ರಕರಣ ಹೊಸ ಟ್ವೀಸ್ಟ್ ಪಡೆದಿದೆ.ದಾಳಿಗೊಳಗಾದ ಬುಲೆರೋ ವಾಹನದಲ್ಲಿ ಇಂದು ಮತ್ತೊಂದು ಬುಲೇಟ್ ಪತ್ತೆಯಾಗಿದ್ದು,ಕೇವಲ ಒಂದು ಸುತ್ತಿನ ಗುಂಡು ಹಾರಿಸಲಾಗಿದೆ ಎಂದು ದೂರು ದಾಖಲು ಮಾಡಿದ್ದ ಪೋಲಿಸರುಇಂದು ಪೋಲಿಸ್ ಠಾಣೆ ಮುಂಭಾಗ ವಾಹನ ಓಪನ್ ಮಾಡಿದ್ದಾಗ ಮತ್ತೊಂದು ಬುಲೆಟ್ ಪತ್ತೆಯಾಗಿದೆ. ಒಂದು ಗುಂಡು ಚಾಲಕನ ಕೈ ಹೊಕ್ಕಿರುವ ಗುಂಡು, ಆದ್ರೆ ಅದೇ ವಾಹನದಲ್ಲಿ ಮತ್ತೊಂದು ಗುಂಡು ಪತ್ತೆಯಾಗಿದೆ.ಪೋಲಿಸರ ನಿರ್ಲಷ್ಯದ ವಿರುದ್ಧ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ …

Read More »

ಎಂಎಲ್‌ಎ ಅನಿಲ್ ಬೆನಕೆ, ಕೇರ್‌ ಆಪ್ ಸರ್ದಾರ್ ಗ್ರೌಂಡ್..!!

ಬೆಳಗಾವಿ: ಬೆಳಗಾವಿಯ ಕಾಲೇಜು ರಸ್ತೆಯ ಸರ್ಕಾರಿ ಸರ್ದಾರ ಪ್ರೌಢಶಾಲೆಯ ಮೈದಾನದಲ್ಲಿ ನಡೆಯುತ್ತಿರುವ ಎಂಎಲ್‌ಎ ಶ್ರೀ ಅನಿಲ್ ಎಸ್.ಬೆನಕೆ ಟ್ರೋಫಿ- ೨೦೨೩ ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಒಂದೆಡೆ ರಾಷ್ಟ್ರ ಮಟ್ಟದ ಗಮನ ಸೆಳೆಯುತ್ತಿದ್ದರೆ, ಇನ್ನೊಂದೆಡೆ ಕ್ರಿಕೆಟ್ ಆಟ ಆಡಿಸುತ್ತಲೇ ತಮ್ಮ ರಾಜಕೀಯ ಕಾರ್ಯವೈಖರಿ ಮೂಲಕ ಬೆಳಗಾವಿ ಉತ್ತರ ಶಾಸಕ ಅನಿಲ್ ಬೆನಕೆ ಅವರು ಕ್ಷೇತ್ರದ ಮತದಾರರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಅಂತಾರಾಜ್ಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯ ಆಯೋಜಿಸಿದ್ದೇನೆ ಎಂದು ಶಾಸಕ …

Read More »

ಕನ್ಹೇರಿ ಸಿದ್ದಗಿರಿಯ ಪಂಚಮಹಾಭೂತ ಲೋಕೋತ್ಸವಕ್ಕೆ ಪ್ರದಾನಿ ಮೋದಿ ಬರ್ತಾರೆ.

ಬೆಳಗಾವಿ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕನ್ಹೇರಿ ಸಿದ್ದಗಿರಿ ಮಹಾಸಂಸ್ಥಾನದ ಕಾಡಸಿದ್ದೇಶ್ವರ ಮಠದ ಬಳಿ ಮುಂಬರುವ ಫೆಬ್ರವರಿ ೨೦ರಿಂದ ೨೬ರವರೆಗೆ ೬೫೦ ಎಕರೆ ಭವ್ಯ ಪ್ರದೇಶದಲ್ಲಿ ಸುಮಂಗಲಮ್ ಪಂಚಮಹಾಭೂತ ಲೋಕೋತ್ಸವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬೃಹತ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಲಾಗಿದ್ದು, ಅವರ ಕಾರ್ಯಕ್ರಮದ ಕುರಿತು ಇನ್ನೂ ದಿನಾಂಕ …

Read More »

ಬೆಳಗಾವಿಯ ಸಾಂಬ್ರಾ ವಿನಾನ ನಿಲ್ಧಾಣ international Airport ಆಗಲಿ- ಟೋಪಣ್ಣವರ.

ಬೆಳಗಾವಿ- ಕರ್ನಾಟಕ,ಮಹಾರಾಷ್ಟ್ರ ಮತ್ತು ಗೋವಾ ಮೂರು ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣ ಅಂತರಾಷ್ಟ್ರೀಯ ವಿಮಾನ ನಿಲ್ಧಾಣವಾಗಲು ಅರ್ಹವಾಗಿದ್ದು,ಇದನ್ನು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನಾಗಿ ಮೇಲ್ದರ್ಜೆಗೆರಿಸುವಂತೆ ಆಪ್ ಮುಖಂಡ ರಾಜೀವ ಟೋಪಣ್ಣವರ ಒತ್ತಾಯಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ಧಾಣ ಪ್ರಯಾಣಿಕರ ಓಡಾಟದ ವಿಚಾರದಲ್ಲಿ ರಾಜ್ಯದಲ್ಲೇ ಎರಡನೇಯ ಸ್ಥಾನ ಪಡೆದಿತ್ತು,ಇದನ್ನು ಸಹಿಸಲಾಗದ ಹುಬ್ಬಳ್ಳಿಯ ಬಿಜೆಪಿ ನಾಯಕರು ಖಾಸಗಿ ವಿಮಾನ ಸಂಸ್ಥೆಗಳ ಮೇಲೆ ಒತ್ತಡ ಹೇರಿ, ಬೆಳಗಾವಿಯ 12 ವಿಮಾನ ಸೇವೆಗಳನ್ನು …

Read More »

ರಾತ್ರೋರಾತ್ರಿ ನಾಡದ್ರೋಹಿ ಎಂಇಎಸ್‌ಗೆ ಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ

ಬೆಳಗಾವಿ- ಚುನಾವಣೆ ಸಮೀಪ ಬಂದಾಗ ಕಾಲು ಕೆದರಿ ಕ್ಯಾತೆ ತೆಗೆಯುವ ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ ಲಗಾಮು ಹಾಕಿದ್ದಾರೆ. ರಾತ್ರೋರಾತ್ರಿ ನಾಡದ್ರೋಹಿ ಎಂಇಎಸ್‌ಗೆಬಿಗ್ ಶಾಕ್ ಕೊಟ್ಟ ಬೆಳಗಾವಿ ಡಿಸಿ,ಶಿವಸೇನೆ ಸಂಸದ ಧೈರ್ಯಶೀಲ್ ಮಾನೆಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧ ಹೇರಿ ನಿನ್ನೆ ರಾತ್ರಿ ಆದೇಶ ಹೊರಡಿಸಿದ್ದಾರೆ. ಜ. 17 ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿ ಡಿಸಿ ನಿತೇಶ ಪಾಟೀಲ ಆದೇಶ ಹೊರಡಿಸುವ ಮೂಲಕ …

Read More »

ಬಂಪರ್ ಲಾಟರಿ ಹೊಡೆದ ಶಾಸಕ ಅಭಯ ಪಾಟೀಲ…!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ,ವಿಜಯಪೂರ ಮಹಾನಗರ ಪಾಲಿಕೆ,ಗೋವಾ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಹಗಲು ರಾತ್ರಿ ಶ್ರಮಸಿ ರಾಜ್ಯದ ಬಿಜೆಪಿ ನಾಯಕರ ಹಾಗೂ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರೀತಿಗೆ ಪಾತ್ರರಾಗಿ ಪಕ್ಷದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಶಾಸಕ ಅಭಯ ಪಾಟೀಲ ಬಂಪರ್ ಲಾಟರಿ ಹೊಡೆದಿದ್ದಾರೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆ ಹರಿಸಿ ಹತ್ತು ಹಲವಾರು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಕ್ಷೇತ್ರದ ಜನತೆಯಿಂದ ಮೀಸ್ಟರ್ …

Read More »

ಬೆಳಗಾವಿ ಮೇಯರ್ ಉಪ ಮೇಯರ್, ಖುರ್ಚಿಗೆ ಜಾತಿ ಆಧಾರಿತ ಕಸರತ್ತು ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲೇ ಮೊದಲ ಬಾರಿಗೆ,ಭಾಷಾ ಆಧಾರಿತ ಚುನಾವಣೆ ಕೈಬಿಟ್ಟು, ಪಕ್ಷ ಆಧಾರಿತ ಚುನಾವಣೆ ನಡೆದು 58 ರಲ್ಲಿ 35 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಹೊಸ ಇತಿಹಾಸ ನಿರ್ಮಿಸಿದೆ. ಅನೇಕ ತಾಂತ್ರಿಕ,ಮತ್ತು ಕಾನೂನಾತ್ಮಕ ತೊಡಕುಗಳಿಂದಾಗಿ ಒಂದು ವರ್ಷದ ನಂತರ ಮೇಯರ್ ಚುನಾವಣೆಗೆ ದಿನಾಂಕ ನಿಗದಿಯಾಗಿದೆ.ಫೆಬ್ರುವರಿ 6 ರಂದು ಬೆಳಗಾವಿ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಇಲೆಕ್ಷನ್ ನಡೆಯಲಿದೆ. ಮೇಯರ್ ಸ್ಥಾನ …

Read More »

ಅಥಣಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬಿದ ಧರೆಪ್ಪ ಠಕ್ಕಣ್ಣವರ

ಬೆಳಗಾವಿ :ಅಥಣಿ ಮತ ವಿಧಾನಸಭಾ ಮತಕ್ಷೇತ್ರದಲ್ಲಿ ಯುವ ನಾಯಕ ಧರೆಪ್ಪ ಠಕ್ಕಣ್ಣವರ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಸಾಮಾಜಿಕ ಸೇವಾ ಕಾರ್ಯಗಳಿಂದ ಹಳ್ಳ-ಹಳ್ಳಿಗೂ ಚಿರಪರಿಚಿತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದ ಮಹೇಶ ಕುಮಠಳ್ಳಿ ಅವರು ಪಕ್ಷಾಂತರ ನಡೆಸಿದ್ದರಿಂದ ಅಥಣಿಯಲ್ಲಿ ಕಾಂಗ್ರೆಸ್ ಶೂನ್ಯಕ್ಕೆ ತಲುಪಿತ್ತು. ಈ ನಿಟ್ಟಿನಲ್ಲಿ ಅವರು ಪಕ್ಷ ಸಂಘಟನೆ ಜೊತೆ ಮತ್ತೆ ಹಿಂದಿನ ವರ್ಚಸ್ಸು ತರಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇಡೀ ಜಗತ್ತು …

Read More »

ಸುವರ್ಣ ವಿಧಾನಸೌಧ ಆವರಣದಲ್ಲಿ ಸಾವಿರಾರು ಜನರಿಂದ “ಯೋಗ”ಥಾನ್

ಬೆಳಗಾವಿ, : ಸೂರ್ಯದೇವನು ಪಥ ಬದಲಾಯಿಸಿದ ಸಂಕ್ರಮಣದ ಶುಭ ದಿನದಂದು ರಾಜ್ಯವನ್ನು ದೇಶದ ಮೊದಲ “ಯೋಗ ಸಾಕ್ಷರತಾ ರಾಜ್ಯ”ವನ್ನಾಗಿಸುವುದರ ಜತೆಗೆ ಯೋಗ ಪ್ರದರ್ಶನದಲ್ಲಿ ಗಿನ್ನಿಸ್ ದಾಖಲೆ ನಿರ್ಮಿಸುವ ಭಾಗವಾಗಿ ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ಭಾನುವಾರ (ಜ.15) ಬೃಹತ್ ಯೋಗಥಾನ್-2023 ಕಾರ್ಯಕ್ರಮ ನಡೆಯಿತು. ಮುಂಜಾನೆಯ ಮಂಜು ಮುಸುಕಿದ ವಾತಾವರಣದಲ್ಲಿ ನೇಸರನ ಹೊಂಗಿರಣಗಳ ಮಧ್ಯೆ ಸುವರ್ಣ ವಿಧಾನಸೌಧದ ಪಶ್ಚಿಮದ್ವಾರದ ಮೆಟ್ಟಿಲುಗಳ ಎದುರು ಸಾವಿರಾರು ಜನರು ಯೋಗ ಪ್ರದರ್ಶಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, …

Read More »

ಬೆಳಗಾವಿಯ ಹಿಂಡಲಗಾ ಜೈಲಿಗೆ ನಾಗಪೂರ ಪೋಲೀಸ್ರು ಬಂದಿದ್ದು ಯಾಕೆ ಗೊತ್ತಾ ??

ಬೆಳಗಾವಿ-ಹಿಂಡಲಗಾ ಜೈಲಿಗೆ ಬಂದಿರುವ ನಾಗ್ಪುರ ಪೊಲೀಸರು ಹಿಂಡಲಗಾ ಜೈಲಿನಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.ಬೆಳಗಾವಿಯಿಂದಲೇ ಕೇಂದ್ರ ‌ಹೆದ್ದಾರಿ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಪೂರ ಪೋಲೀಸರು ಹಿಂಡಲಗಾ ಜೈಲಿಗೆ ದೌಡಾಯಿಸಿದ್ದಾರೆ.ಬೆಳಗಾವಿಯ ಹಿಂಡಲಗಾ ಸೆಂಟ್ರಲ್ ಜೈಲಿನ‌ ಕೈದಿಯಿಂದಲೇ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದ ಘಟನೆ ನಡೆದಿದೆ.ಶನಿವಾರ ಬೆಳಗ್ಗೆ, ನಿತೀನ್ ಗಡ್ಕರಿ ಮೊಬೈಲ್‌ಗೆ ಫೋನ್ ಮಾಡಿ ಜೀವ ಬೆದರಿಕೆ ಹಾಕಿರುವ ಕೈದಿಯ ವಿಚಾರಣೆಗೆ ನಾಗಪೂರ ಪೋಲೀಸರು ಬೆಳಗಾವಿಗೆ …

Read More »

ಯುವ ಸಮೂಹದ ಬಗ್ಗೆ ಲೇಖನ ಬರೆದ ಶಾಲಿನಿ ರಜನೀಶ್…

26 ನೇ ರಾಷ್ಟ್ರೀಯ ಯುವ ಜನೋತ್ಸವದ ಉಸ್ತುವಾರಿವಹಿಸಿಕೊಂಡಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಯುವ ಸಮೂಹದ ಸ್ಥಿತಿಗತಿಗಳ ಕುರಿತು ಸಮಗ್ರ ಲೇಖನ ಬರೆದಿದ್ದಾರೆ. *ರಾಷ್ಟೀಯ ಯುವಜನೋತ್ಸವದಲ್ಲಿ ಯುವ ಶೃಂಗಸಭೆ: ಯುವ ಸಮೂಹಕ್ಕೆ ಪ್ರೇರಣಾದಾಯಕ* ಡಾ ಶಾಲಿನಿ ರಜನೀಶ್‌ ಐಎಎಸ್‌ ಅಪರ ಮುಖ್ಯ ಕಾರ್ಯದರ್ಶಿಗಳು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ …

Read More »

ಬೆಳಗಾವಿ ಕಾಂಗ್ರೆಸ್ಸಿನಲ್ಲಿ , ಹಮ್ ಸಾಥ್ ಸಾಥ್ ಹೈ….!!

ಬೆಳಗಾವಿ- ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ಸಿನ ಪ್ರಜಾಧ್ವನಿ ಯಾತ್ರೆ, ಕಾರ್ಯಕರ್ತರಿಗೆ ಅನೇಕ ಸಂದೇಶಗಳನ್ನು ನೀಡಿದೆ. ಈ ಸಂಧರ್ಭದಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಬೆಳಗಾವಿಯ ಕಾಂಗ್ರೆಸ್ ರಸ್ತೆಯಲ್ಲಿರುವ ತಿಲಕವಾಡಿಯ ಐತಿಹಾಸಿಕ ವೀರಸೌಧದಲ್ಲಿ ಬಸ್ ಯತ್ರೆಗೆ ಚಾಲನೆ ಕೊಡುವ ಮೊದಲು ಗಾಂಧಿ ಟೋಪಿಧಾರಿಗಳಾಗಿದ್ದ ಮಾಜಿ ಶಾಸಕ ಫಿರೋಜ್ ಸೇಠ,ಹಾಗೂ ವಿಧಾನ ಪರಿಷತ್ ಸದಸ್ಯ ಚನ್ಬರಾಜ್ ಹಟ್ಟಿಹೊಳಿ ಕ್ಯಾಮೆರಾಗೆ ಫೋಜು ಕೊಟ್ಟು ಎಲ್ಲರ ಗಮನ ಸೆಳೆದರು. ಬೆಳಗಾವಿ ಉತ್ತರ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ …

Read More »

ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಮಹಾರಾಷ್ಟ್ರದಲ್ಲೂ ಫೇಮಸ್..!!

ಬೆಳಗಾವಿ- ಬೆಳಗಾವಿ ಮಹಾನಗರ,ವಿಭಿನ್ನ, ವಿಶಿಷ್ಟ,ಅರ್ಥಪೂರ್ಣ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ.ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ರೇಸ್ ಪಕ್ಕದ ಮಹಾರಾಷ್ಟ್ರದಲ್ಲೂ ಪ್ರಭಾವ ಬೀರಿದೆ. ಅಂತರ್ ರಾಜ್ಯಗಳಲ್ಲಿ ಗಮನ ಸೆಳೆದಿರುವ ಬೆಳಗಾವಿಯಲ್ಲಿ ನಡೆದ ಎಮ್ಮೆಗಳ ಓಟವನ್ನು ಬೆಳಗಾವಿಯ ಕುಲಕರ್ಣಿ ಗಕ್ಲಿಯ ಗವಳಿ ಸಮಾಜದವರು ಆಯೋಜನೆ ಮಾಡಿದ್ಸರು ಈ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ಮುರುಘೇಂದ್ರ ಗೌಡ ಪಾಟೀಲ (ಕಣಬರ್ಗಿ) ಅವರು ಪ್ರಾಯೋಜಕತ್ವ ನೀಡಿದ್ದರು. ಎಮ್ಮೆಗಳ ರೇಸ್ ನಲ್ಲಿ ವಿಜೇತರಾದವರಿಗೆ ಮುರುಘೇಂದ್ರಗೌಡ್ರು ನಗದು ಬಹುಮಾನ ನೀಡಿ,ಗವಳಿ ಸಮಾಜ ಆಯೋಜಿಸಿದ …

Read More »