Breaking News
Home / LOCAL NEWS (page 97)

LOCAL NEWS

ಹೋದ ಕಡೆಯೆಲ್ಲಾ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ- ಸತೀಶ್ ಜಾರಕಿಹೊಳಿ

ಕೊಪ್ಪಳ: ಹೋದ ಕಡೆಯೆಲ್ಲಾ ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಘೋಷಣೆ ಮಾಡುವುದು ಸರಿಯಲ್ಲ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕೊಪ್ಪಳದ ಕುಷ್ಟಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಹಾಕಿದವರಿಗೆ ತಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಸಿದ್ದರಾಮಯ್ಯ ಅವರು ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆಯಾಗುತ್ತದೆ. ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ, ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ ಎಂದರು. …

Read More »

ಕುಡಿದು, ಬ್ಯುಲೆರೋ ಆ್ಯಕ್ಸಿಡೆಂಟ್ ಮಾಡಿದ್ದ, ಮರಾಠಿಗರು ಕಲ್ಲು ಎಸೆದಿದ್ದಾರೆ ಅಂತ ಕಥೆ ಕಟ್ಟಿದ್ದ ಭೂಪ..!!

ಬೆಳಗಾವಿ-ಸರ್ಕಾರಿ ವಾಹನದ ಮೇಲೆ ಕಲ್ಲು ತೂರಿದ್ದ ಪ್ರಕರಣಕ್ಕೆ ಟ್ವಿಸ್ಟ್ ಪಡೆದಿದೆ,ಕುಡಿದ ಅಮಲಿನಲ್ಲಿಬುಲೆರೋ ವಾಹನ ಅಪಘಾತ ಮಾಡಿ ಬೆಳಗಾವಿಯ ಸುವರ್ಣವಿಧಾನಸೌಧದ ಬಳಿ ನನ್ನ ವಾಹನದ ಮೇಲೆ ಮರಾಠಿ ಭಾಷಿಕರು ಕಲ್ಲು ತೂರಾಟ ಮಾಡಿ ವಾಹನ ಜಖಂ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದ ಚಾಲಾಕಿ ಚಾಲಕನ ನಿಜ ಬಣ್ಣವನ್ನು ಹಿರೇಬಾಗೇವಾಡಿ ಪೋಲೀಸರು ಬಯಲು ಮಾಡಿದ್ದಾರೆ. ಕಟ್ಟು ಕಥೆ ಕಟ್ಟಿದ ಡ್ರೈವರ್ ಚೇತನ್ ವಿಚಾರಿಸಿದ ಹಿರಿಯ ಪೋಲೀಸ್ ಅಧಿಕಾರಿಗಳು ಸತ್ಯಾಂಶವನ್ನು ಹೊರಹಾಕಿದ್ದಾರೆ.ಬೆಳಗಾವಿಯ ಸುವರ್ಣ …

Read More »

ಪಂಚಮಸಾಲಿ ಸಂಘಟನೆಯಲ್ಲಿ ಗುಂಡು ಪಾಟೀಲರಿಗೆ ಪ್ರಮೋಶನ್..!!

ಬೆಳಗಾವಿ-ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಕೂಡಲಸಂಗಮ ಪೀಠದ ಪ್ರಥಮ ಜಗದ್ಗುರು ಬಸವ /ಜಯ ಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ರಾಜ್ಯ ಪಂಚಮಸಾಲಿ ಕಾರ್ಯಕಾರಿನಿ ಸಭೆ ಬೆಳಗಾವಿಯ ಗಾಂಧಿ ಭವನದಲ್ಲಿ ನಡೆಯಿತು. ಸಭೆ ಮುಗಿದ ಬಳಿಕ ಪಂಚಮಸಾಲಿ ಸಂಘಟನೆಯ ಕೆಲವು ಪದಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಯಿತು.ಪಂಚಮಸಾಲಿ ಸಂಘಟನೆಯ ಹುಕ್ಕೇರಿ ತಾಲ್ಲೂಕಾ ಅಧ್ಯಕ್ಷರಾಗಿ ಸಂಘಟನೆಯನ್ನು ಬಲಿಷ್ಠಗೊಳಿಸಿದ ಗುಂಡು ಪಾಟೀಲ ಅವರನ್ನು ಪಂಚಮಸಾಲಿ ಸಂಘಟನೆಯ ಬೆಳಗಾವಿ ಜಿಲ್ಲಾ …

Read More »

ಬೆಳಗಾವಿಯ, ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ಮೋಸ, ದಾಳಿ ಆಯ್ತು, ಮುಂದೇನು..??

ಸಕ್ಕರೆ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲೆಯ ಪ್ರತಿಷ್ಢಿತ ನಾಯಕರ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ಅಳತೆ ಮತ್ತು ಮಾಪನ ಇಲಾಖೆ ದಾಳಿ ಮಾಡಿದೆ,ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮತ್ತು ರಮೇಶ್ ಜಾರಕಿಹೊಳಿ ಒಡೆತನದ ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ‌.ದಾಳಿ ಮಾಡಿರುವ ಬಗ್ಗೆ ಸಕ್ಕರೆ ಆಯುಕ್ತರು ಪತ್ರಿಕಾ ಪ್ರಕಟಣೆ ಹೊರಡಿದ್ದರು, ಆದ್ರೆ ದಾಳಿಯ ನಂತರ ಯಾವ ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿಲ್ಲ.ಹೀಗಾಗಿ ಪ್ರತಿಷ್ಠಿತ …

Read More »

ದೆಹಲಿಯಲ್ಲಿ ಸಂಧಾನ ಸಭೆ, ಬೆಳಗಾವಿಯಲ್ಲಿ ಪುಂಡಾಟಿಕೆ…!!

ಬೆಳಗಾವಿ-ಅಧಿವೇಶನಕ್ಕೂ ಮುನ್ನವೇ ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ ಮರಾಠಿ ಭಾಷಿಕ ಪುಂಡರು,ಅಧಿವೇಶನಕ್ಕೆ ಬರುತ್ತಿದ್ದ ವಾಹನ ಮೇಲೆ ಕಲ್ಲು ತೂರಿ ಗೂಂಡಾವರ್ತನೆ ಪ್ರದರ್ಶಿಸಿದ್ದಾರೆ. ನಿನ್ನೆ ರಾತ್ರಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮೀತ್ ಶಾ ಅವರ ನೇತ್ರತ್ವದಲ್ಲಿ ಕರ್ನಾಟಕ ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಂಧಾನ ಸಭೆ ನಡೆದ ಬೆನ್ನಲ್ಲಿಯೇ,ನಿನ್ನೆ ರಾತ್ರಿ ಬೆಳಗಾವಿ ಹೊರವಲಯದ ಸುವರ್ಣಸೌಧದ ಎದುರೇ ಈ ಘಟನೆ ನಡೆದಿದೆ ಬೆಂಗಳೂರಿನಿಂದ ಬೆಳಗಾವಿಗೆ ಚಳಿಗಾಲ ಅಧಿವೇಶನಕ್ಕೆ ಬರುತ್ತಿದ್ದ ವಾಹನ. ಕರ್ನಾಟಕ ರಾಜ್ಯ ಕೃಷಿ …

Read More »

ಬೆಳಗಾವಿ ಗಡಿವಿವಾದ ಅಮೀತ್ ಶಾ ಹೇಳಿದ್ದೇನು ಗೊತ್ತಾ..??

ಗಡಿವಿವಾದ ಕುರಿತು ದಿಲ್ಲಿಯಲ್ಲಿ ಗೃಹಸಚಿವ ಆಮಿತ ಶಹಾ ಸಮ್ಮುಖದಲ್ಲಿ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಏಕನಾಥ ಶಿಂಧೆ ಅವರ ಮಧ್ಯೆ ನಡೆದ ಮಾತುಕತೆಯು ಇಂದು ಸಂಜೆ 7 ರಿಂದ 8 ಗಂಟೆಯವರೆಗೆ ನಡೆಯಿತು. ಸಭೆಯ ನಿರ್ಣಯಗಳನ್ನು ಶಹಾ ಅವರೇ ನಂತರ ಮಾಧ್ಯಮಗಳಿಗೆ ತಿಳಿಸಿದರು.ಮಹತ್ವದ ಅಂಶಗಳು: 1) ಸರ್ವೋನ್ನತ ನ್ಯಾಯಾಲಯದ ಮುಂದಿರುವ ಗಡಿವಿವಾದ ಪ್ರಕರಣದ ತೀರ್ಪು ಬರುವವರೆಗೂ ಉಭಯ ರಾಜ್ಯಗಳು ಪರಸ್ಪರರ ಪ್ರದೇಶಗಳನ್ನು ಕೇಳುವಂತಿಲ್ಲ. 2)ಉಭಯ ರಾಜ್ಯಗಳ …

Read More »

ರಾಜ್ಯಸಭೆಯಲ್ಲಿ ಈರಣ್ಣಾ ಕಡಾಡಿ ಪ್ರಸ್ತಾಪಿಸಿದ ಬೇಡಿಕೆ ಏನು ಗೊತ್ತಾ ??

ಬೆಳಗಾವಿ-ಮುಂಬೈ ಮತ್ತು ಹೈದರಾಬಾದ್ ನಡುವೆ ದೈನಂದಿನ ರೈಲು ಸೇವೆ ಪ್ರಾರಂಭಕ್ಕೆ ಸಂಸದ ಈರಣ್ಣ ಕಡಾಡಿ ಒತ್ತಾಯ ಬೆಳಗಾವಿ: ಬೆಳಗಾವಿಯಿಂದ ಹೈದರಾಬಾದ್ ಮತ್ತು ಮುಂಬೈ ನಗರಗಳಿಗೆ ದೈನಂದಿನ ರೈಲು ಸೇವೆಯನ್ನು ಪ್ರಾರಂಭಿಸಬೇಕೆAದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಮಂಗಳವಾರ (ಡಿ-13) ರಂದು ರಾಜ್ಯಸಭಾ ಸಂಸತ್ತಿನ ಚಳಿಗಾಲ ಅಧಿವೇಶನದ ವಿಶೇಷ ಉಲ್ಲೇಖದ ಮೂಲಕ ವಿಷಯ ಪ್ರಸ್ತಾಪಿಸಿದ ಸಂಸದ ಈರಣ್ಣ ಕಡಾಡಿ ಅವರು, ಬೆಳಗಾವಿ ಐತಿಹಾಸಿಕ, ಕೈಗಾರಿಕಾ …

Read More »

ಇಂದು ಸಂಜೆ ದೆಹಲಿಯಲ್ಲಿ ಬೆಳಗಾವಿ ಗಡಿವಿವಾದ…!!

ಬೆಳಗಾವಿ- ಹಲವಾರು ದಶಕಗಳ ನಂತರ ಬೆಳಗಾವಿ ಗಡಿವಿವಾದ ದೇಶದ ರಾಜಧಾನಿಗೆ ತಲುಪಿದ್ದು, ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ಇಂದು ಸಂಜೆ ವಿವಾದ ಚರ್ಚೆಗೆ ಬರಲಿದೆ. ಕೇಂದ್ರ ಗೃಹ ಸಚಿವರಾದ ಅಮೀತ ಶಾ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಬೆಳಗಾವಿ ಗಡಿವಿವಾದದ ಕುರಿತು ಚರ್ಚೆ ಮಾಡಲು ದೆಹಲಿಗೆ ಅಹ್ವಾನಿಸಿದ್ದು ಇಂದು ಸಂಜೆ ದೇಶದ ರಾಜಧಾನಿ ದೆಹಲಿಯಲ್ಲಿ ತ್ರೀಮೂರ್ತಿಗಳ ಮತ್ವದ ಸಭೆ ನಡೆಯಲಿದೆ. …

Read More »

ಬೆಳಗಾವಿಯಲ್ಲಿ ಶರದ್ ಪವಾರ ಸಹೋದರನ ಪುತ್ರ ಪ್ರತ್ಯಕ್ಷ….!!

ಬೆಳಗಾವಿ-ಶರದ್ ಪವಾರ ಅವರ ಸಹೋದರನ ಪುತ್ರ ಎನ್ಸಿಪಿ ಶಾಸಕ ಇಂದು ಗಪ್ ಚುಪ್ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿಯ ಎಂಇಎಸ್ ನಾಯಕ ದೀಪಕ ದಳವಿಗೆ ಭೇಟಿ ಮಾಡಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ‌. ಗಡಿವಿವಾದ ಬಗ್ಗೆ ಮಹಾರಾಷ್ಟ್ರ ನಾಯಕರು ಹುಲಿಯಂತೆ ಮಾತನಾಡಿ, ನರಿಯಂತೆ ವರ್ತನೆ ಮಾಡುತ್ತಿದ್ದಾರೆ‌ಎನ್‌ಸಿಪಿ ಶಾಸಕ ರೋಹಿತ್ ಪವಾರ್ ಬೆಳಗಾವಿ ಗಪ್‌ಚುಪ್‌ ಭೇಟಿಗೆ ಅಶೋಕ ಚಂದರಗಿ ಕಿಡಿಕಾರಿದ್ದಾರೆ.ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ …

Read More »

ಮಹಾದಾಯಿ ಯೋಜನೆಗೆ ಶೀಘ್ರದಲ್ಲೇ ಮಂಜೂರಾತಿ…

ನವದೆಹಲಿ. ಡಿ.13 : ರಾಜ್ಯದ ಜಲ ಸಂಪನ್ಮೂಲ ಸಚಿವ ಶ್ರೀ ಗೋವಿಂದ ಕಾರಜೋಳ್ ರವರು ಇಂದು ನವ ದೆಹಲಿಯಲ್ಲಿ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತರ ವರನ್ನು ಭೇಟಿಯಾಗಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಸಿದ್ರು.. ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರದಲ್ಲಿ ಬಾಕಿ ಇರುವ ಅನುಮೋದನೆಗಳನ್ನು ದೊರಕಿಸಿ ಕೊಡುವಂತೆ ವಿನಂತಿಸಿದರು ಕೇಂದ್ರ ಜಲ ಶಕ್ತಿ ಸಚಿವ  ಗಜೇಂದ್ರ ಸಿಂಗ್ ಶೇಖವತ್ ಅವರ …

Read More »