Home / BGAdmin (page 601)

BGAdmin

ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕಡತ ಮಾಯ.. ತನಿಖೆಗೆ ಒತ್ತಾಯ

ಬೆಳಗಾವಿ- ರಾಜ್ಯದ ಸಕಾರಿ ಕಚೇರಿಗಳ ಮೇಲೆ ರಾಷ್ಟ್ರ ಧ್ವಜಕ್ಕೆ ಧಕ್ಕೆಯಾಗದ ರೀತಿಯಲ್ಲಿ ಕನ್ನಡ ನಾಡ ಧ್ವಜ ಹಾರಿಸುವ ಕಾನೂನಾತ್ಮಕ ಆದೇಶ ಹೊರಡಿಸುವ ಕಡತ ಮುಖ್ಯಮಂತ್ರಿಗಳ ಕಚೇರಿಯಿಂದ ಮಾಯವಾಗಿದ್ದು ಕಡತ ಹುಡಿಕಿ ಕೂಡಲೇ ಆದೇಶ ಹೊರಡಿಸುವಂತೆ ಸಮಾಜ ಸೇವಕ ಮಾಹಿತಿ ಹಕ್ಕು ಕಾರ್ಯಕರ್ತ ಭಿಮಪ್ಪಾ ಗಡಾದ ಒತ್ತಾಯಿಸಿದ್ದಾರೆ. ಕನ್ನಡ ನಾಡು ನುಡಿಗೆ ಸಮಂಧಿಸಿದ ಕಡತವೇ ಮುಖ್ಯಮಂತ್ರಿಗಳ ಕಚೇರಿಯಿಂದ ನಾಪತ್ತೆಯಾಗಿದೆ ಕನ್ನಡ ಧ್ವಜವನ್ನು ಹಾರಿಸಲು ಕಾನೂನಾತ್ಮಕ ಆದೇಶ ಹೊರಿಸಲು ಮುಖ್ಯಮಂತ್ರಿಗಳ ಅನುಮೋದನೆಗೆ ಹೋಗಿರುವ …

Read More »

ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಮೂರು ತಿಂಗಳ ಕಾಲ ಅತ್ಯಾಚಾರ ನಡೆಸಿದ ಮೂವರು ಖದೀಮರು

ಬೆಳಗಾವಿ-ಗಣೇಶ ಹಬ್ಬದ ದಿದಂದು ಕರಾಳ ಘಟನೆಯೊಂದು ಬೆಳಕಿಗೆ ಬಂದಿದೆ ನಿನ್ನ ತಂದೆ ಕರೆಯುತ್ತಿದ್ದಾನೆ ಯುವತಿಗೆ ಸುಳ್ಳು ಹೇಳಿ ಆ ಯುವತಿಯನ್ನು ಖಾನಾಪೂರ ತಾಲೂಕಿನಿಂದ ಕಿಡ್ನ್ಯಾಪ್ ಮಾಡಿದ ಮೂರು ಜನ ಯುವಕರು ಬೆಳಗಾವಿ ನಗರದ ಆಝಂ ನಗರದ ಕೋಣೆಯಲ್ಲಿ ಕೂಡಿ ಹಾಕಿ ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಅತ್ಯಾಚಾರ ನಡೆಸಿದ ಹೃದಯವಿದ್ರಾವಕ ಘಟಣೆ ನಡೆದಿದೆ ಖಾನಾಪುರ ತಾಲೂಕಿನ ನಾಗೋಡಾ ಗ್ರಾಮದ ಯುವತಿಯನ್ನು ಅಪಹರಿಸಿದ ನಾಗೋಡಾ ಗ್ರಾಮದ ಇಬ್ಬರು ಯುವಕರು ಜೂನ್ 20ರಂದು …

Read More »

ಭಕ್ತಿ ಭಾವದ ಹೊಳೆಯಲ್ಲಿ ತೇಲಿ ಬಂದ.. ಪಾರ್ವತಿ ಕಂದ..!

ಬೆಳಗಾವಿ 05: ಬೆಳಗಾವಿ ನಗರ ಹಾಗೂ ಜಿಲ್ಲಾದ್ಯಂತ ವಿಘ್ನ ನಿವಾರಕನಿಗೆ ಸಡಗರ ಸಂಬ್ರಮದಿಂದ ಸ್ವಾಗತಿಸಲಾಯಿತು. ಭಕ್ತಿ ಭಾವದ ಹೊಳೆಯಲ್ಲಿ ಪಾರ್ವತಿ ಕಂದ ತೇಲಿ ಬಂದ. ಭಕ್ತಾದಿಗಳು ಭಕ್ತಿ ಭಾವದ ಜಯಘೊಷಗಳೊಂದಿಗೆ ಶ್ರೀ ಗಣೇಶನನ್ನು ಸ್ವಾಗತಿಸಿದರು. ಬೆಳಗಾವಿ ನಗರದ ಗಲ್ಲಿ ಗಲ್ಲಿಗಳಲ್ಲಿ ಗನಪತಿ ಬಪ್ಪಾ ಮೋರಯಾ ಎಂಬ ಜಯಘೋಷಗಳೊಂದಿಗೆ ಸಿಡಿಮದ್ದಿನ ಅರ್ಭಟದೊಂದಿಗೆ ಸಂಪ್ರದಾಯಕ ವಾದ್ಯಗಳ ನೀನಾದದೊಂದಿಗೆ ಗಣೇಶನನ್ನು ಅದ್ದೂರಿಯಾಗಿ ಬರಮಾಡಿಕೊಂಡರು. ಒಟ್ಟಾರೆ ಕುಂದಾನಗರಿ ಬೆಳಗಾವಿ ಸಂಪೂರ್ಣವಾಗಿ ಗಣೇಶಮಯವಾಗಿತ್ತು. ಸಾರ್ವಜನಿಕ ಗಣೇಶ ಮಂಡಳಗಳು …

Read More »

ಕಿತ್ತೂರಿನಲ್ಲಿ ರಾಜಕೀಯ ಕಿತ್ತಾಟ….. ಬಿಜೆಪಿಯಲ್ಲಿ ಅದಲ್ ಬದಲ್ ಕಾಂಗ್ರೆಸ್‍ನಲ್ಲಿ ಬಾಬಾಸಾಬನ ಕದಲ್….!

ಬೆಳಗಾವಿ 05: ಬೆಳಗಾವಿ ಜಿಲ್ಲೆಯ ಐತಿಹಾಸಿಕ ಕಿತ್ತೂರು ಮತಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾಳೆಯದಲ್ಲಿ ಟಿಕೆಟ್‍ಗಾಗಿ ಈಗಿನಿಂದಲೇ ಕಿತ್ತಾಟ ಶುರುವಾಗಿದೆ. ಬಿಜೆಪಿಯಲ್ಲಿ ಅದಲ್ ಬದಲ್ ಮಾಡುವ ಪ್ರಯತ್ನಗಳು ನಡೆದಿವೆ, ಮಾಜಿ ಶಾಸಕ ಶಂಕರ ಮಾರಿಹಾಳ ಅವರಿಗೆ ಟಾಂಗ್ ಕೊಡಲು ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಮಹಾಂತೇಶ ದೊಡಗೌಡರ ಕಸರತ್ತು ನಡೆಸಿದ್ದಾರೆ. ಮಾಜಿ ಸಚಿವ ಲಕ್ಷ್ಮಣ ಸವದಿ ಅವರು ಮಹಾಂತೇಶ ದೊಡಗೌಡರನ್ನು ಕಿತ್ತೂರು ಕ್ಷೇತ್ರದಲ್ಲಿ ಪ್ರಮೋಟ್ ಮಾಡಲು …

Read More »

30 ಲಕ್ಷ ರೂ ಮಕ್ಮಲ್ ಟೋಪಿ ಇಬ್ಬರ ಬಂಧನ

ಬೆಳಗಾವಿ- ಕನಾಟಕ ಲೋಕಸೇವಾ ಆಯೋಗದಲ್ಲಿ ನೋಕರಿ ಕೊಡಿಸುವದಾಗಿ ವಂಚಿಸಿ 30 ಲಕ್ಷ ರೂ ಗುಳುಂ ಮಾಡಿದ ಆರೋಪದ ಮೇಲೆ ಬೆಳಗಾವಿ ನಗರದ ಅನಿಗೋಳ ಪ್ರದೇಶದ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ ಅಪಾದಿತರಾದ ಸಿದ್ದಪ್ಪಾ ಸೊಮನಾಥ ಹೊಸಮನಿ ಶ್ರೀಮತಿ.ಜ್ಯೋತಿ ಸಿದ್ದಪ್ಪಾ ಹೊಸಮನಿ ಇವರು.ನಿಂಗಪ್ಪಾ ಯಲ್ಲಪ್ಪಾ ತ್ಯಾನಗಿ ಸಾ;ಸಿದ್ದೇಶ್ವರ ನಗರ ಕಣಬರ್ಗಿ ಇವರ ಮಗನಿಗೆ ಹಾಗೂ ಇತರೆ 14 ಜನರಿಗೆಕರ್ನಾಟಕ ಲೋಕಸೇವಾ ಆಯೋಗದ ಮುಖಾಂತರ ಸರಕಾರಿ ನೌಕರಿ ಕೊಡಿಸುವುದಾಗಿ ಸುಳ್ಳುಹೇಳಿ ಅವರ ಕಡೆಯಿಂದ …

Read More »

ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ

ಬೆಳಗಾವಿಯಲ್ಲಿ ದರೋಡೆಗೆ ವಿಫಲ ಯತ್ನ ಬೆಳಗಾವಿ- ಚಾಕು ಚೂರಿ ಸಮೇತ ಬಂದ ದರೋಡೆಕೋರರು ಸಕ್ಯುರಿಟಿ ಗಾರ್ಡಗೆ ಅರವಳಿಕೆ ಮದ್ದು {ಕ್ಲೋರೋಫಾರ್ಮ}ನೀಡಿ ಮನೆಯ ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮದ್ಯರಾತ್ರಿ ನಡೆದಿದೆ ನಗರದ ಕಾಂಗ್ರೆಸ್ ರಸ್ತೆಯಲ್ಲಿರುವ ಅರುಣ ಚಿತ್ರ ಮಂದಿರದ ಹಿಂಬದಿಯಲ್ಲಿರು ಅಹಜಾ ಎಂಬ ಮನೆಗೆ ಬಂದ ಮೂರು ಜನ ದರೋಡೆಕೋರರು ಮೊದಲು ಸಕ್ಯುರಿಟಿ ಕಾರ್ಡಗೆ ಕಟ್ಟಿ ಹಾಕಿ ಆತನಿಗೆ ಕ್ಲೋರೋಫಾರ್ಮ ನೀಡಿ ಆತನನ್ನು ಮಲಗಿಸಿ ನಂತರ ಮನೆಗೆ …

Read More »

ಜಿಲ್ಲಾ ಆಸ್ಪತ್ರೆ ಈಗ ಕ್ಲೀನ್ …ಕ್ಲೀನ್

ಬೆಳಗಾವಿ-ಮಾಜಿ ಶಾಸಕ ಅಭಯ ಪಾಟೀಲರ ಸ್ವಚ್ಛತಾ ಪಡೆ ಜಿಲ್ಲಾ ಆಸ್ಪತ್ರೆಯಲ್ಲಿ ಶೌಚಾಲಯ ಡಸ್ಟಬೀನ್ ಸೇರಿದಂತೆ ಹೊರ ರೋಗಿಗಳ ವಿಭಾಗವನ್ನು ಕ್ಷಣಾರ್ಧದಲ್ಲಿಯೇ ಕ್ಲೀನ್ ಮಾಡಿ ಎಲ್ಲರ ಗಮನ ಸೆಳೆದರು ಸ್ವತಹ ಅಭಯ ಪಾಟೀಲರು ಹೊರ ರೋಗಿಗಳ ವಿಭಾಗದ ಶೌಚಾಲಯವನ್ನು ಸ್ವಚ್ಛಗೊಳಿಸಿದರು ನೂರಕ್ಕೂ ಹೆಚ್ಚು ಯುವಕರು ಕಸಗೂಡಿಸಿ ಅಭಿಯಾನದಲ್ಲಿ ಪಾಲ್ಗೊಂಡು ಇತರರಿಗೆ ಮಾದರಿಯಾದರು ಈ ಸಂಧರ್ಭದಲ್ಲಿ ಮಾತನಾಡಿದ ಅಭಯ ಪಾಟೀಲ ಬೆಳಗಾವಿಯ ಜನ ಪತ್ರ ಬರೆದು ಜಿಲ್ಲಾ ಆಸ್ಪತ್ರೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಸುವಂತೆ …

Read More »

ಅಭಯ ಅಂದ್ರೆ ಅಕ್ಷಯ ಪಾತ್ರೆ,, ಪೌರ ಕಾರ್ಮಿಕನಾಗಿ ಸ್ವಚ್ಛ ಮಾಡಿದ್ರು ಜಿಲ್ಲಾ ಆಸ್ಪತ್ರೆ…!

ಬೆಳಗಾವಿ-ಪ್ರದಾನಿ ನರೇಂದ್ರ ಮೋದಿ ಅವರು ಪೊರಕೆ ಹಿಡಿದು ದೇಶದ ಜನರಿಗೆ ಸ್ವಚ್ಛ ಭಾರತದ ಪಾಠ Àಹೇಳಿ ಮೊತ್ತೊಂದು ಬಾರಿ ಪೊರಕೆ ಹಿಡಿದ ಉದಾಹರಣೆ ಇಲ್ಲ ಆದರೆ ಮಾಜಿ ಶಾಸಕ ಅಭಯ ಪಾಟೀಲರು ನಿರಂತರವಾಗಿ ಅಭಿಯಾನ ಮುಮದುವರೆಸಿ ಎಲ್ಲರ ಗಮನ ಸೆಳೆದಿದ್ದಾರೆ ತಮ್ಮ ನೂರಾರು ಯುವ ಮಿತ್ರರೊಂದಿಗೆ ಪ್ರತಿ ಭಾನುವಾರ ನಗರದ ವಿವಿಧ ಪ್ರದೇಶಗಳಲ್ಲಿ ತಪ್ಪದೇ ಸ್ವಚ್ಛತಾ ಅಭಿಯಾನ ನಡೆಸುತ್ತಿದ್ದು ಈ ಭಾನುವಾರ ಅಭಯ ಪಾಟೀಲರ ಸ್ವಚ್ಛತಾ ಪಡೆ ಏಕಾ ಏಕಿ …

Read More »

ಮುಖ್ಯಮಂತ್ರಿಗಳ ಬಳಿ ನಿಯೋಗ

ಬೆಳಗಾವಿ-ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಯಿಸಲು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕೂಡಲೇ ಮುಖ್ಯಮಂತ್ರಿಗಳ ಬಳಿ ಜಿಲ್ಲೆಯ ಸರ್ವಪಕ್ಷಗಳ ಶಾಸಕರ ನಿಯೋಗ ಕೊಂಡೊಯ್ಯುವ ನಿರ್ಧಾರವನ್ನು ಇಂದಿನ ಕೆಡಿಪಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾಜಿ ಮಂತ್ರಿ ಊಮೇಶ ಕತ್ತಿ ಮಾತನಾಡಿ ಜಿಲ್ಲೆಯಲ್ಲಿ ಕೊಳವೆ ಬಾವಿಗಳಿಗೆ ಬೇಡಿಕೆ ಇದೆ ಆದರೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಅನುದಾನ ಕಡಿಮೆ ಇದೆ ಎಂದು ಸಭೆಯಲ್ಲಿ ಗಮನ ಸೆಳೆದಾಗ ಇದಕ್ಕೆ ಸ್ಪಂದಿಸಿದ ಜಿಲ್ಲಾ ಮಂತ್ರಿಗಳು ಹೆಚ್ಚಿನ ಅನುದಾನ …

Read More »

ಪಂಪ್‍ಸೆಟ್‍ಗಳಿಗೆ ಲಗಾಮ್ ಹಾಕಿ-ಕೆಡಿಪಿ ಸಭೆಯಲ್ಲಿ ಬಾಲಚಂದ್ರ ಅವಾಜ್..!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿರುವ ಘಟಪ್ರಭಾ ಎಡದಂಡೆ ಕಾಲುವೆ,ಬಲದಂಡೆ ಕಾಲುವೆಗಳಲ್ಲಿ ಹರಿಯುವ ನೀರನ್ನು ಪಂಪ್ ಸೆಟ್ ಗಳ ಮೂಲಕ ಕೊಳ್ಳೆ ಹೊಡೆಯಲಾಗುತ್ತಿದೆ ಎಲ್ಲಿ ನೋಡಿದಲ್ಲಿ ಕಾಲುವೆಗಳನ್ನು ಒಡೆದು ಹೊಲಗಳಿಗೆ ನೀರು ಹರಿಸಲಾಗುತ್ತಿದೆ ನೀರಾವರಿ ಇಲಾಖೆ ಅಧಕಾರಿಗಳು ಕೂಡಲೇ ಕ್ರಮ ಜರುಗಿಸಬೇಕೆಂದು ಮಾಜಿ ಮಂತ್ರಿ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಕೆಡಿಪಿ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು ಕೆಲವು ಶ್ರೀಮಂತ ರೈತರ ಪುಂಡಾಟಿಕೆಯಿಂದ ಸಾಮಾನ್ಯ ರೈತರು ತೊಂದರೆ ಅನುಭವಿಸಬೇಕಾಗಿದೆ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಿ ಎಲ್ಲ …

Read More »