Breaking News
Home / Breaking News (page 156)

Breaking News

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!!

ಚಡ್ಡಿ ಎಂದಾಕ್ಷನ,ಸಂಜಯ ನಾನೇ ಕೊಡ್ತೇನಿ ಅಂದ್ರು,ಯಡಿಯೂರಪ್ಪ ಕೈಮುಗಿದ್ರು…!! ಬೆಳಗಾವಿ- ಎಂಎಲ್ಸಿ ಚುನಾವಣೆಯ ಪ್ರಚಾರಕ್ಕೆ ಬೆಳಗಾವಿಗೆ ಬರುವ ಪ್ರತಿಯೊಬ್ಬ ನಾಯಕರು ಚಡ್ಡಿ ವಿಚಾರವನ್ನು ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಇವತ್ತು ಮಾದ್ಯಮ ಪ್ರತಿನಿಧಿಗಳು ಬೆಳಗಾವಿಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲರಿಗೆ ,ಕಾಂಗ್ರೆಸ್ ಚಡ್ಡಿ ಸುಡುವ ಅಭಿಯಾನ ಶುರು ಮಾಡಲಿದೆ ಎಂದು ಪ್ರಶ್ನಿಸಿದಾಗ ಅವರಿಗೆ ಚಡ್ಡಿ ಬೇಕಾದ್ರೆ ನಂದೇ ಕೊಡ್ತೀನಿ ಎಂದು ಕಾಂಗ್ರೆಸ್ಸಿಗೆ ಟಾಂಗ್ ಕೊಟ್ಟಿದ್ದು,ಆರ್ ಎಸ್ ಎಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ. …

Read More »

ಪರಿಷತ್ ಚುನಾವಣೆ: ಮತಗಟ್ಟೆಗಳ ಪಟ್ಟಿ ಪ್ರಕಟ

ಬೆಳಗಾವಿ, ಜೂ.5(ಕರ್ನಾಟಕ ವಾರ್ತೆ): ಕರ್ನಾಟಕ ವಾಯವ್ಯ ಪದವೀಧರ/ಶಿಕ್ಷಕರ ಮತಕ್ಷೇತ್ರಗಳ ಸಾರ್ವತ್ರಿಕ ಚುನಾವಣೆ-2022 ನೇದ್ದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ 95 ಮತಗಟ್ಟೆಗಳ ಪ್ರಸ್ತಾವಣೆಗೆ ಮಾನ್ಯ ಭಾರತ ಚುನಾವಣಾ ಆಯೋಗ ನವದೆಹಲಿ ಇವರು ಅನುಮತಿ ನೀಡಿದ್ದು, ಮತಗಟ್ಟೆಗಳ ಪಟ್ಟಿಯನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಪ್ರಕಟಿಸಲಾಗಿರುತ್ತದೆ. ಜಿಲ್ಲಾಧಿಕಾರಿಗಳ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ತಹಶೀಲದಾರ ಕಚೇರಿ, ಮಹಾನಗರ ಪಾಲಿಕೆ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯತ ಶಿಕ್ಷಣ ಇಲಾಖೆಯ ಸೂಚನೆ ಫಲಕದಲ್ಲಿ ನೋಡಲು ಲಭ್ಯವಿರುತ್ತದೆ ಎಂದು …

Read More »

ಎಂಎಲ್ಸಿ ಇಲೆಕ್ಷನ್, ಅಧಿಕಾರಿಗಳಿಗೆ ಬೆಳಗಾವಿಯಲ್ಲಿ ಟ್ರೇನಿಂಗ್…!!

ಬೆಳಗಾವಿ, – ವಿಧಾನ ಪರಿಷತ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮತಗಟ್ಟೆಯಲ್ಲಿ ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನ ನಡೆಯುವಂತೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ (ಜೂ.3) ನಡೆದ ಕರ್ನಾಟಕ ವಾಯುವ್ಯ ಪದವೀಧರ ಹಾಗೂ ವಾಯುವ್ಯ ಶಿಕ್ಷಕರ ಕ್ಷೇತ್ರಗಳ ದ್ವೈವಾರ್ಷಿಕ ಚುನಾವಣೆ-2022 ರ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳ ತರಬೇತಿ …

Read More »

ಎಡಿಜಿಪಿ ಅಲೋಕ್ ಕುಮಾರ್ ಚನ್ನಮ್ಮನ ಕಿತ್ತೂರಿಗೆ ಭೇಟಿ ನೀಡಿದ್ದು ಯಾಕೆ ಗೊತ್ತಾ..??

ಚೆನ್ನಮ್ಮನ ಠ ಬೆಳಗಾವಿ- ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇಂದು ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಕ್ರಾಂತಿಯ ನೆಲ ಕಿತ್ತೂರಿಗೆ ಭೇಟಿ ನೀಡಿದರು. ಎಡಿಜಿಪಿ ಅಲೋಕ್ ಕುಮಾರ್ ಅವರು ಪೋಲೀಸ್ ವೃತ್ತಿಯನ್ನು ಆರಂಭಿಸಿದ್ದು ಬೈಲಹೊಂಗಲ ತಾಲ್ಲೂಕಿನಲ್ಲಿ, ಪ್ರೋಭಿಷ್ನರಿ ಅವಧಿಯನ್ನು ಎಸಿಪಿಯಾಗಿ ಕಾಲ ಕಳೆದಿದ್ದು ಬೈಲಹೊಂಗಲ ಠಾಣೆಯಲ್ಲಿ ಎನ್ನುವದು ವಿಶೇಷ. ಬೈಲಹೊಂಗಲ ಎಸಿಪಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅಲೋಕ್ ಕುಮಾರ್ ದೇಸಿ ಬಂದೂಕು ತಯಾರಿಕಾ ಜಾಲವನ್ನು ಪತ್ತೆ ಮಾಡುವದರ ಮೂಲಕ ಅಲೋಕ್ …

Read More »

ಶಾವಿಗೆ-ಸಂಡಿಗೆ ಹಾಕಿ‌ ಶೈನ್ ಆದ ಮಲ್ಲಮ್ಮ…!!!!

ಬೆಳಗಾವಿ-ಸುವರ್ಣಸೌಧದ ಕೂಗಳತೆಯ ದೂರಿನಲ್ಲಿರುವ ಕೊಂಡಸಕೊಪ್ಪ ಗ್ರಾಮದಲ್ಲರುವ ಅಣ್ಣನ ಮನೆಯಲ್ಲಿ ಪುಟ್ಟ ಕೋಣೆಯಲ್ಲಿ ವಾಸವಾಗಿ,ಸುವರ್ಣ ವಿಧಾನಸೌಧದಲ್ಲಿ ಕೂಲಿ ಮಾಡಿ ಬದುಕುತ್ತಿರುವ ಮಲ್ಲಮ್ಮ ಅನುಭವಿಸುತ್ತಿರುವ ನೋವು ಎಂತಹದ್ದು ಎಂದು ತಿಳಿದರೆ ಮೈಯಲ್ಲಾ ಝುಂ ಅನ್ನುತ್ತದೆ‌. ಸುವರ್ಣಸೌಧದ ಘನತೆ ಗೌರವ ಸರ್ಕಾರಕ್ಕೆ ಇನ್ನುವರೆಗೆ ಗೊತ್ತಾಗಿಲ್ಲ.ಈ ವಿಚಾರದಲ್ಲಿ ಮಲ್ಲಮ್ಮ ಅತ್ಯಂತ ಮುಗ್ದೆ .ಸುವರ್ಣಸೌಧದಲ್ಲಿ ದಿನನಿತ್ಯ ಸ್ವಚ್ಚತಾ ಕೆಲಸ ಮುಗಿಸಿ ಮನೆಗೆ ಹೋಗುವದು ಮಲ್ಲಮ್ಮಳ ದಿನಚರಿ,ಇವಳ ಸಹೋದ್ಯೋಗಿ ಸಾಂವಕ್ಕ ಎಂಬುವಳು ಶಾವಗಿ,ಮತ್ತು ಸಂಡಿಗೆ ತಂದು ಕೊಟ್ಟಿದ್ದನ್ನು,ಊಟದ ಬಿಡುವಿನ …

Read More »

ಎರಡು ಟ್ರಕ್ ಗೊಬ್ಬರ ಕದ್ದವರು ಖಾಕಿ ಬಲೆಗೆ ಬಿದ್ದರು..!!

ಬೆಳಗಾವಿ: ತಾಲ್ಲೂಕಿನ ದೇಸೂರ ಗ್ರಾಮದ ರೈಲ್ವೆ ನಿಲ್ದಾಣ ಬಳಿ ಗೋದಾಮಿನಲ್ಲಿ ಕಳುವಾಗಿದ್ದ ಡಿಎಪಿ ರಸಗೊಬ್ಬರ ಚೀಲಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಬೆಳಗಾವಿ ತಾಲೂಕಿನ ಹಾಲಗಿಮರಡಿ ಗ್ರಾಮದ ನಾಗರಾಜ ಈರಣ್ಣ ಪಠಾತ(21), ಖಾನಾಪುರ ತಾಲೂಕಿನ ಲಕ್ಕೆಬೈಲ್ ಗ್ರಾಮದ ಪಂಡಿತ ಕಲ್ಲಪ್ಪ ಸನದಿ(37), ಮಂಜುನಾಥ ಸೋಮಪ್ಪ ಹಮ್ಮನ್ನವರ (30) ಹಾಗೂ ಬೆಳಗಾವಿ ತಾಲೂಕಿನ ಹೊಸ ವಂಟಮುರಿ ಗ್ರಾಮದ ವಸಿಮ್ ಇಸ್ಮಾಯಿಲ್ ಮಕಾನದಾರ(23), ಹುದಲಿ ಗ್ರಾಮದ ಗಜಬರಲಿ ಗೌಸಮುದ್ದಿನ್ ಜಿಡ್ಡಿಮನಿ(39)ಎಂಬವರನ್ನು ಬಂಧಿಸಿದ್ದಾರೆ. …

Read More »

ಸರ್ಕಾರಕ್ಕೆ ಶಾಕ್.. ಶ್ಯಾವಗಿ ಮಲ್ಲಮ್ಮಳಿಗೆ ಸಿಕ್ತು ಮತ್ತೆ ಜಾಬ್…!!

ಸುವರ್ಣ ಸುದ್ಧಿ, ಕೆಲಸಕ್ಕೆ ಸೇರಿದ ಶಾವಗಿ ಸಾಂವಕ್ಕ ಮತ್ತು ಮಲ್ಲಮ್ಮ… ಬೆಳಗಾವಿ – ಸುವರ್ಣಸೌಧದ ಅಂಗಳದಲ್ಲಿ ಶಾವಗಿ ಒಣಗಿಸಿ ಕೆಲಸದಿಂದ ವಜಾ ಆಗಿದ್ದ ಮಲ್ಲಮ್ಮ ಮತ್ತು ಸಾಂವಕ್ಕ ಇಬ್ಬರನ್ನೂ ಕೆಲಸಕ್ಕೆ, ಮರು ನೇಮಕ ಮಾಡಲಾಗಿದ್ದು ಈಗ ಇಂದಿನಿಂದ ಇಬ್ಬರೂ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚಿಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಅಂಗಳದಲ್ಲಿ ಶಾವಗಿ ಒಣಗಿಸಿದ ಹಿನ್ನಲೆಯಲ್ಲಿ ಮಲ್ಲಮ್ಮ ಮತ್ತು ಸಾಂವಕ್ಕ ಎಂಬ ಇಬ್ಬರು ದಿನಗೂಲಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿತ್ತು. …

Read More »

ಐ ಸ್ಟಾಂಡ್ ವಿಥ್ ಯೂ, ಸುವರ್ಣಸೌಧದ, ಮಲ್ಲಮ್ಮ…!!

ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಅಭಿವೃದ್ಧಿಗೆ ದಿಕ್ಸೂಚಿ ಯಾಗಬೇಕಿದ್ದ ಬೆಳಗಾವಿಯ ಸುವರ್ಣ ವಿಧಾನ ಸೌಧ ಈಗ ಮತ್ತೆ ಸುದ್ದಿಯಲ್ಲಿದೆ ಯಾಕೆಂದರೆ ಸರ್ಕಾರ ಇದನ್ನು ಸದುಪಯೋಗ ಪಡಿಸಿಕೊಳ್ಳುವುದರಲ್ಲಿ ವಿಫಲವಾಗಿದ್ದು ಈ ಸೌಧದ ಎದುರು ಶಾವಿಗೆ ಒಣಗಿ ಹಾಕಿದ ಮಹಿಳೆಯನ್ನು ಕೆಲಸದಿಂದ ತೆಗೆದು ಹಾಕಿರುವ ರಾಜ್ಯ ಸರ್ಕಾರ ಈಗ ಟೀಕೆಗೆ ಗುರಿಯಾಗಿದೆ. ಸುವರ್ಣ ವಿಧಾನ ಸೌಧದಲ್ಲಿ ದಿನಗೂಲಿ ಆಧಾರದ ಮೇಲೆ ಸ್ವಚ್ಚತಾ ಕಾಮಗಾರಿ ನಡೆಸುತ್ತಿದ್ದ ಪಕ್ಕದ ಕುಂಡಸಕೊಪ್ಪ ಗ್ರಾಮದ ಮಲ್ಲಮ್ಮ ಅರಿವಿಲ್ಲದೇ ಸೌಧದ …

Read More »

ಜೂನ್ 5 ಕ್ಕೆ ಮುಂಗಾರು ಮಳೆ ರಿಲೀಸ್ ಆಗತೈತಿ…!!

ಬೆಂಗಳೂರು: ರಾಜ್ಯದಲ್ಲಿ ಚಂಡಮಾರುತ ಎಫೆಕ್ಟ್ ನಿಂದಾಗಿ ಮೇ ತಿಂಗಳು ಪೂರ್ತಿ ಸುರಿದ ಮಳೆಯಿಂದಾಗಿ ರಾಜ್ಯದ ಜನ ತತ್ತರಿಸಿದ ಬೆನ್ನಲ್ಲಿಯೇ ಈಗ ಮುಂಗಾರು ಮಳೆ ಶುರುವಾಗಲಿದೆ. ಜೂನ್ 5 ರಿಂದ ಬೆಳಗಾವಿಯಲ್ಲೂ ಮುಂಗಾರು ಪ್ರವೇಶ ಮಾಡಲಿದೆ. ಬಹು ನಿರೀಕ್ಷಿತ ಮುಂಗಾರು ಆರಂಭ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ವಿಳಂಬವಾಗಿದ್ದು, ಜೂನ್ 5ಕ್ಕೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.ಈ ಹಿಂದೆ ಮೇ 27ರಂದೇ ಕೇರಳಕ್ಕೆ ಮುಂಗಾರು ಪ್ರವೇಶವಾಗಲಿದೆ ಎನ್ನಲಾಗಿತ್ತು. ಆದರೆ, ಮುಂಗಾರು …

Read More »

ಜಮೀನು ಫೋಡಿ,ನಕಾಶೆ,ಚಕ್ ಬಂದಿ,ಎಲ್ಲವೂ ಈಗ ಆನ್ ಲೈನ್ ನಲ್ಲಿ …!!

ಪೋಡಿ, ಭೂಪರಿವರ್ತನೆ, 11ಇ ಸ್ಕೆಚ್, ಹದ್ದುಬಸ್ತ್ ಮತ್ತಿತರ ನಕ್ಷೆ ಆನ್ ಲೈನ್ ನಲ್ಲಿ ಲಭ್ಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಜೂ.3(ಕರ್ನಾಟಕ ವಾರ್ತೆ): 11E, ಫೋಡಿ, ಭೂ ಪರಿವರ್ತನೆ ಸ್ಕೆಚ್, ಹದ್ದುಬಸ್ತ್ ಮತ್ತು ಇತರ ನಕ್ಷೆಗಳ ಮುದ್ರಣ ಮತ್ತು ನಾಗರಿಕರ ಅರ್ಜಿಗಳ ಸ್ಥಿತಿಯ ಮಾಹಿತಿಯನ್ನು ನಾಗರಿಕರು ಆನ್ ಲೈನ್( ONLINE )ನಲ್ಲಿ rdservices.karnataka.gov.in ಮುಖಾಂತರ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಮೇಲ್ಕಂಡ ಸೇವೆಗಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ, …

Read More »