Breaking News
Home / Breaking News (page 157)

Breaking News

ಬೆಳಗಾವಿಯ ಪತ್ರಕರ್ತರು ಈಗ ವ್ಹಾಲಿಬಾಲ್ ಆಟಗಾರರು…

ಬೆಳಗಾವಿ: ಪತ್ರಕರ್ತರು ಸದಾ ಒತ್ತಡದಿಂದ ಕೆಲಸ ಮಾಡೋದು ಎಲ್ಲರಿಗೂ ಗೊತ್ತಿರುವ ವಿಚಾರ. ಒತ್ತಡದಲ್ಲಿ ಇರುವಂತಹ ಪತ್ರಕರ್ತರಿಗಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ದಿಲೀಪ್ ಕುರಂದವಾಡೆ ಆಯ್ಕೆಯಾದ ದಿನದಿಂದ ಸದಾ ಒಂದಿಲ್ಲೊಂದು ವಿಭಿನ್ನ ಕಾರ್ಯ ಮಾಡುತ್ತಿದ್ದಾರೆ. ಸದ್ಯ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ನಿಯೋಜಿತ ಸ್ಥಳದಲ್ಲಿ ಪತ್ರಕರ್ತರು ಬಿಡುವಿನ ವೇಳೆಯಲ್ಲಿ ವ್ಹಾಲಿಬಾಲ್ ಆಡಲು ವ್ಯವಸ್ಥೆ ಮಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಮಾಧ್ಯಮ …

Read More »

ಬೆಳಗಾವಿಯ, ಗೋದಾಮಿನಲ್ಲಿದ್ದ 900 ಚೀಲ ಗೊಬ್ಬರ ಸ್ವಾಹಾ…!!

ಬೆಳಗಾವಿ-ಗೋದಾಮಿನಲ್ಲಿದ್ದ 50 ಕೆಜಿ ತೂಕದ 900 ಚೀಲ ರಸಗೊಬ್ಬರ ಕಳ್ಳತನ ಮಾಡಿದ ಘಟನೆ,ಬೆಳಗಾವಿ ತಾಲೂಕಿನ ದೇಸೂರು ರೇಲ್ವೆ ನಿಲ್ದಾಣ ಬಳಿ ನಡೆದಿದೆ. 12 ಲಕ್ಷ ಮೌಲ್ಯದ RCF DAP ರಾಸಾಯನಿಕ ಗೊಬ್ಬರ ನಿನ್ನೆ ರಾತ್ರಿ ಕಳವು ಆಗಿವೆ.ಗೋದಾಮಿನಲ್ಲಿದ್ದ ಗೊಬ್ಬರ ಚೀಲಗಳು ಏಕಾಏಕಿ ಮಾಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆ ಈಗ ಎಲ್ಲರನ್ನು ಕಾಡುತ್ತಿದೆ. 900 ಗೊಬ್ಬರ ಚೀಲ ಸಾಗಿಸಲು ಕನಿಷ್ಟ ಎರಡು ಲಾರಿಗಳಾದರೂ ಬೇಕು,ಪರಿಚಯಿಸ್ಥರಿಂದಲೇ ಗೋದಾಮಿನಲ್ಲಿದ್ದ ಗೊಬ್ಬರ ಚೀಲ ಕಳ್ಳತನ ಶಂಕೆ …

Read More »

ನಾಳೆ ಬೆಳಗಾವಿಗೆ ಬರುವ V I P ಯಾರು ಗೊತ್ತಾ…??

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಪರಿಷತ್ ಚುನಾವಣೆಯ ಕಾವು ಏರಿದೆ.ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಘಟಾನುಘಟಿ ನಾಯಕರನ್ನು ಕಣಕ್ಕಿಳಿಸಿದ್ದು.ಕಾಂಗ್ರೆಸ್ ಪಕ್ಷ ನಾಳೆ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದೆ. ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಿರಿಯ ಕಾಂಗ್ರೆಸ್ ಮುಖಂಡ, ಪ್ರಕಾಶ್ ಹುಕ್ಕೇರಿ,ಹಾಗೂ ಈ ಕ್ಷೇತ್ರದ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಸಂಕ್ ಅವರು ನಾಳೆ ಬುಧವಾರ ಬೆಳಗಾವಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ. ಕರ್ನಾಟಕ …

Read More »

ಮತ್ತೆ ಸುದ್ದಿಯಾದ್ರು,ಬೆಳಗಾವಿಯ ಲಕ್ಷ್ಮಣ ಸವದಿ….!!

ಬೆಳಗಾವಿ- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಅವರು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಬಿಜೆಪಿಯಿಂದ ಆಯ್ಕೆ ಆಗುವ ನಾಲ್ಕು ಜನ ಅಭ್ಯರ್ಥಿಗಳ ಪಟ್ಟಿಗೆ ಸಹಿ ಹಾಕಿದ್ದು ಈ ಪಟ್ಟಿಯಲ್ಲಿ ಮಾಜಿ ಸಿಎಂ ಬೆಳಗಾವಿಯ ಹಿರಿಯ ಬಿಜೆಪಿ ನಾಯಕ ಲಕ್ಷ್ಮಣ ಸವದಿ ಅವರ ಹೆಸರು ಇದೆ. ಲಕ್ಷ್ಮಣ ಸವದಿ ಅವರು ಅಥಣಿ ವಿಧಾಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡುತ್ತಾರೆ.ಹಾಲಿ ಶಾಸಕ ಮಹೇಶ್ ಕುಮಟೊಳ್ಳಿ ಅವರಿಗೆ ಬಾರಿ ಬಿಜೆಪಿ ಟಿಕೆಟ್ ಸಿಗೋದಿಲ್ಲ,ಎನ್ನುವ ಸುದ್ದಿ ಹರದಾಡಿತ್ತು.ಆದ್ರೆ …

Read More »

ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಹೈ ಪವರ್ ಮೀಟೀಂಗ್…!!!

ಬೆಳಗಾವಿ-ವಾಯುವ್ಯ ಪದವೀಧರ, ಹಾಗೂ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಸಿದ್ದತೆ ಕುರಿತು ಬೆಳಗಾವಿಯಲ್ಲಿ ಬಿಜೆಪಿ ಮಹತ್ವದ ಸಭೆ ನಡೆಸಿದ ಬೆನ್ನಲ್ಲಿಯೇ,ನಾಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಭೆ ನಡೆಯಲಿದೆ. ನಾಳೆ ಸೋಮವಾರ ಬೆಳಿಗ್ಗೆ 11-00 ಗಂಟೆಗೆ ಬೆಳಗಾವಿಯ ಹೊಟೇಲ್ ಸಂಕಮ್ ನಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ನೇತ್ರತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಬೆಳಗಾವಿ ಜಿಲ್ಲೆಯ ಹಾಲಿ,ಮಾಜಿ ಶಾಸಕರು,ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ವಾಯುವ್ಯ ಪದವೀಧರ ಮತಕ್ಷೇತ್ರದ ಕಾಂಗ್ರೆಸ್ …

Read More »

ಗೋವಾದಲ್ಲಿ ಕಾರು ಮರಕ್ಕೆ ಡಿಕ್ಕಿ,ಬೆಳಗಾವಿಯ ಮೂವರ ದುರ್ಮರಣ..

ಬೆಳಗಾವಿ: ಗೋವಾಕ್ಕೆ ಪ್ರವಾಸಕ್ಕೆ ಹೋಗಿದ್ದವರ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಬೆಳಗಾವಿಯ ಮೂವರು ಯುವಕರು ಮೃತಪಟ್ಟ ಘಟನೆ ಮಾಪುಸಾದ ಕುಚೇಲಿ ಬಳಿ ಭಾನುವಾರ ನಸುಕಿನ ಜಾವ ನಡೆದಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ರೋಹನ ಗಡಾದ(26), ನಾಯರ್‌ ಅನಗೋಳಕರ್‌(28) ಹಾಗೂ ಸನ್ನಿ ಅನ್ವೇಕರ್‌(31) ಮೃತಪಟ್ಟವರು. ಇದೇ ಪ್ರಕರಣದಲ್ಲಿ ವಿಶಾಲ ಕಾರೇಕರ್‌(27) ಗಂಭೀರವಾಗಿ ಗಾಯಗೊಂಡಿದ್ದಾರೆ.

Read More »

ಬೆಳಗಾವಿ TO ಗೋಕಾಕ್ ಹೇರಾಯಿನ್ ಸಪ್ಲಾಯ್ ಮೂವರ ಅರೆಸ್ಟ್

ಗೋಕಾಕ ನಗರದಲ್ಲಿ ಹೆರಾಯಿನ್, ಗಾಂಜಾ ವಶ ; ನಾಲ್ವರ ಆರೆಸ್ಟ್ ಬೆಳಗಾವಿ – ನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) …

Read More »

ಮಹಾರಾಷ್ಟ್ರದ ಜೊತೆ ನಿರಂತರ ಸಂಪರ್ಕದಲ್ಲಿ ಇರುವಂತೆ,ಬೆಳಗಾವಿ ಡಿಸಿಗೆ ಸಿಎಂ ಸೂಚನೆ…

ಜಲಾಶಯ ನೀರು ಬಿಡುಗಡೆ- ಮಹಾರಾಷ್ಟ್ರದ ಜತೆ ಸಮನ್ವಯ, ಮಾಹಿತಿ ವಿನಿಮಯಕ್ಕೆ ಸಿಎಂ‌ ಬೊಮ್ಮಾಯಿ ಸೂಚನೆ ಬೆಳಗಾವಿ, ಮೇ 21(): ಎಲ್ಲೆಡೆ ಮಳೆಯಾಗುತ್ತಿರುವುದರಿಂದ ನೆರೆಯ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಬಿಡುಗಡೆ ಸಾಧ್ಯತೆ ಇರುತ್ತದೆ. ಆದ್ದರಿಂದ ಆ ರಾಜ್ಯದ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ಅಲ್ಲಿನ ಮಳೆಯ ಪ್ರಮಾಣ, ಜಲಾಶಯಗಳ ಸಂಗ್ರಹ ಮತ್ತಿತರ ವಿಷಯಗಳ ಕುರಿತು ನಿರಂತರವಾಗಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು …

Read More »

ಸರ್ವರಿಗೂ ಸ್ವೀಟ್ ನ್ಯುಸ್ ಪೆಟ್ರೋಲ್ ಡಿಸೈಲ್ ದರದಲ್ಲಿ ಭಾರೀ ಇಳಿಕೆ…

ನವದೆಹಲಿ- ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಕಡಿಮೆ ಮಾಡಲು,ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು ಪೆಟ್ರೋಲ್ ಡಿಸೈಲ್ ಬೆಲೆಯಲ್ಲಿ ಅಬಕಾರಿ ಸುಂಕ ಕಡಿತ ಮಾಡಿದ್ದರಿಂದ,ಪೆಟ್ರೋಲ್ ಮತ್ತು ಡಿಸೈಲ್ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಪಟ್ರೋಲ್ ದರ ಪ್ರತಿ ಲೀಟರ್ ಗೆ 9.50 ₹ ಇಳಿಕೆಯಾಗಿದ್ದು,ಡಿಸೈಲ್ ಪ್ರತಿ ಲೀಟರ್ ಗೆ 7 ₹ ಇಳಿಕೆಯಾಗಿದೆ.ಈ ದರ ಇವತ್ತು ಮದ್ಯರಾತ್ರಿಯಿಂದಲೇ ಅನ್ವಯವಾಗಲಿದೆ‌. ಉಜ್ವಲ ಯೋಜನೆಯಲ್ಲಿ ಸಿಗುವ ಸಿಲೆಂಡರ್ ದರ 200 ₹ ಇಳಿಸಿದ್ದು ಕೇಂದ್ರದ ಹಣಕಾಸು …

Read More »

ಸ್ಮಾರ್ಟ್ ರಸ್ತೆಗಳ ಮ್ಯಾಜಿಕ್, ಅರ್ಧ ಗಂಟೆಯಲ್ಲಿ ಐದು ಬೈಕ್ ಸ್ಕಿಡ್…

ಸ್ಮಾರ್ಟ್ ರಸ್ತೆಗಳ ಮ್ಯಾಜಿಕ್ ಅರ್ಧ ಗಂಟೆಯಲ್ಲಿ ಐದು ಬೈಕ್ ಸ್ಕಿಡ್ ಬೆಳಗಾವಿ: ಸ್ಮಾರ್ಟ್ ಸಿಟಿಯ ಒಂದೊಂದೇ ಹುಳುಕುಗಳು ಕಾಮಗಾರಿ ಮುಗಿದ ಬಳಿಕ ಹೊರಬರುತ್ತಿವೆ. ನಗರದ ಪ್ರಮುಖ ರಸ್ತೆಗಳೆಲ್ಲ ಸಿಮೆಂಟ್ ರಸ್ತೆಗಳಾಗಿ ಪರಿವರ್ತನೆಗೊಂಡಿದ್ದು, ನೋಡಲಿಕ್ಕೇನೊ ಸುಂದವಾಗಿ ಕಾಣಿಸುತ್ತಿವೆ. ಆದರೆ, ಅವುಗಳ ಸೈಡ್ ಎಫೆಕ್ಟ್ ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಎರಡು ದಿನದಿಂದ ಸುರಿಯುತ್ತಿರುವ ಮಳೆಯಿಂದ ರಸ್ತೆಗಳು ಒದ್ದೆಯಾಗಿದ್ದು, ತಿರುವುಗಳಲ್ಲಿ ಬೈಕ್ ಗಳು ಸ್ಕಿಡ್ ಆಗುತ್ತಿವೆ.‌ ಅಶೋಕನಗರದ ಬಸ್ ನಿಲ್ದಾಣ ಬಳಿಯ ತಿರುವಿನಲ್ಲಿ ಇಂದು …

Read More »