Breaking News
Home / Breaking News (page 185)

Breaking News

ಬೆಳಗಾವಿಯಲ್ಲಿ ಮತ್ತೆ ಸೊಂಕಿತರ ಸಂಖ್ಯೆ ಜಾಸ್ತಿ…!!

ಬೆಳಗಾವಿ- ಕೊರೋನಾ ಅಟ್ಟಹಾಸಕ್ಕೆ ಮತ್ತೆ ಗಡಿನಾಡು ಗುಡಿ ಬೆಳಗಾವಿ ಜಿಲ್ಲೆ ಗಡಗಡಾ ಅಂತ ನಡುಗುತ್ತಿದೆ ಯಾಕಂದ್ರೆ ಇವತ್ತು ಏಕಾ ಏಕಿ ಒಂದೇ ದಿನ ಜಿಲ್ಲೆಯಲ್ಲಿ 45 ಜನ ಸೊಂಕಿತರು ಪತ್ತೆಯಾಗಿದ್ದಾರೆ. ಇಂದು ಸಂಜೆ ಬಿಡುಗಡೆಯಾದ ಹೆಲ್ತ್ ಬುಲಿಟೀನ್ ಜಿಲ್ಲೆಯ ಜನರ ನಿದ್ದೆಗೆಡಿಸಿದೆ.ಬೆಳಗಾವಿ ನಗರ, ಮತ್ತು ತಾಲ್ಲೂಕಿನಲ್ಲಿ 36 ಜನ ಸೊಂಕಿತರು ಪತ್ತೆಯಾಗಿದ್ದು ಆತಂಕಕಾರಿ ಬೆಳವಣಿಗೆ ಆಗಿದೆ. ಕರ್ನಾಟಕ,ಗೋವಾ,ಮತ್ತು ಮಹಾರಾಷ್ಟ್ರ ರಾಜ್ಯಗಳ ಸಂಪರ್ಕದ ಕೊಂಡಿಯಾಗಿರುವ ಬೆಳಗಾವಿ ನಗರದಲ್ಲಿ ಕೊರೋನಾ ಸೊಂಕಿನ ತಾಂಡವ …

Read More »

ಈ ವಿಚಾರದಲ್ಲೂ ಬೆಳಗಾವಿ ರಾಜ್ಯದಲ್ಲೇ ನಂ 1

ಬೆಳಗಾವಿ- ಸರ್ಕಾರದ ಕಾರ್ಯಕ್ರಮ ಯಾವುದೇ ಇರಲಿ ಅದನ್ನು ದಾಖಲೆ ಪ್ರಮಾಣದಲ್ಲಿ ಬೆಳಗಾವಿ ಜಿಲ್ಲಾಡಳಿತ ಅನುಷ್ಠಾನಗೊಳಿಸುತ್ತ ಬಂದಿದ್ದು, ಈಗ ಮಕ್ಕಳಿಗೆ ವ್ಯಾಕ್ಸೀನ್ ಕೊಡುವ ವಿಚಾರದಲ್ಲೂ ಬೆಳಗಾವಿ ಜಿಲ್ಲೆ ರಾಜ್ಯದಲ್ಲೇ ದಾಖಲೆ ಮಾಡಿದ್ದು ನಂಬರ್ ಒನ್ ಸ್ಥಾನ ಪಡೆದಿದೆ. 15 ರಿಂದ 18 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡುವ ವಿಚಾರದಲ್ಲಿ,ಮಕ್ಕಳ ಲಸಿಕಾಕರಣ ಅಭಿಯಾನದಲ್ಲಿ ಬೆಳಗಾವಿ ಜಿಲ್ಲಾಡಳಿತ ದಾಖಲೆ ಮಾಡಿದ್ದು,ಮಕ್ಕಳ ಲಸಿಕಾಕರಣ ಅಭಿಯಾನಕ್ಕೆ ಬೆಳಗಾವಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. *ನಿನ್ನೆ ಒಂದೇ ದಿನ …

Read More »

ಜನ ಸಹಕಾರ ಕೊಟ್ರೆ ಲಾಕ್ ಡೌನ್ ಇಲ್ಲ- ಸಿಎಂ

ಟಫ್ ರೂಲ್ಸ್ ಬಗ್ಗೆ ಎರಡು ದಿನಗಳಲ್ಲಿ ನಿರ್ಧಾರ; ಸಿಎಂ ಬೊಮ್ಮಾಯಿ ಬೆಳಗಾವಿ: ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಸಂಬಂಧ ಎರಡು ದಿನಗಳಲ್ಲಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೈಟ್ ಕರ್ಪ್ಯೂ ವಿಸ್ತರಣೆ ಬಗ್ಗೆ ನಾಳೆ ನಾಡಿದ್ದು ತೀರ್ಮಾನ ಮಾಡುತ್ತೇವೆ. ಕೋವಿಡ್ ಯಾವ ರೀತಿ ಬಿಹೇವ್ ಆಗ್ತಿದೆ ಎಂಬುದನ್ನು ಗಮನಿಸುತ್ತಿದ್ದೇವೆ. ವಿಶೇಷವಾಗಿ ಬೆಂಗಳೂರಲ್ಲಿ …

Read More »

ನಾಳೆ ಬೆಳಗಾವಿಯ ಯಾವ ಪ್ರದೇಶದಲ್ಲಿ ಕರೆಂಟ್ ಇರೋದಿಲ್ಲ. ಇಲ್ಲಿದೆ ಡಿಟೇಲ್ಸ್…

ನಾಳೆ ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ…. ಬೆಳಗಾವಿ- ತುರ್ತು ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಬೆಳಗಾವಿ ಮಹಾನಗರ ಶೇ 75 ರಷ್ಟು ಪ್ರದೇಶದಲ್ಲಿ ಹೊಸ ವರ್ಷದ ಎರಡನೇಯ ದಿನವೇ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ ಎಂದು ಹೆಸ್ಕಾಮ್ ಪ್ರಕಟನೆ ಹೊರಡಿಸಿದೆ ಹೊಸ ವರ್ಷದ ಎರಡನೇಯ ದಿನವಾದ ಭಾನುವಾರ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಕಾಂಟೋನ್ಮೆಂಟ್ ಏರಿಯಾ, ನಾನಾವಾಡಿ, ಪಾಟೀಲ ಗಲ್ಲಿ ಹಿಂದವಾಡಿ ತಿಳಕವಾಡಿ ಶಹಾಪೂರ ಎಸ್ …

Read More »

ಮೇಜರ್ ಸರ್ಜರಿ,ಬೆಳಗಾವಿಗೆ ಹೊಸ ಪೋಲೀಸ್ ಕಮಿಷನರ್….

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಇತ್ತೀಚೆಗೆ ನಡೆದ ಗದ್ದಲ,ಗಲಾಟೆ,ಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಬೆಳಗಾವಿಗೆ ಖಡಕ್ ಪೋಲೀಸ್ ಆಯುಕ್ತ ರನ್ನು ನಿಯುಕ್ತಿಗೊಳಿಸಿದೆ. ದಾವಣಗೇರೆಯಲ್ಲಿ ಪೋಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿಭಾಯಿಸಿರುವ ಎ.ಬಿ ಬೋರಲಿಂಗಯ್ಯ ಅವರನ್ನು ಬೆಳಗಾವಿ ಮಹಾನಗರದ ಪೋಲೀಸ್ ಆಯುಕ್ತರನ್ನಾಗಿ ನಿಯುಕ್ತಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿಯಲ್ಲಿ ಎಂಈಎಸ್ ಕಿತಾಪತಿ,ಪುಂಡಾಟಿಕೆಯನ್ನು ಹತ್ತಿಕ್ಕಲು ಸರ್ಕಾರ ಖಡಕ್ ಅಧಿಕಾರಿಯನ್ನು ಬೆಳಗಾವಿಗೆ ಕಳುಹಿಸಿದ್ದು ಇನ್ನು ಮುಂದೆ ಬೆಳಗಾವಿಯಲ್ಲಿ ಖಾಕಿ ಖದರ್ ಶುರುವಾಗಲಿದೆ.

Read More »

ಬೆಳಗಾವಿಯಲ್ಲಿ ರೇಡ್..ರೇಡ್…ರೇಡ್…!!!

ಬೆಳಗಾವಿ, ನಿಪ್ಪಾಣಿ ಯೋಜನಾ ಸಹಾಯಕ‌ ನಿರ್ದೇಶಕರ ಕಚೇರಿಗಳ ಮೇಲೆ ಎಸಿಬಿ ದಾಳಿ; ಮುಂದುವರಿದ ದಾಖಲೆ ಪರಿಶೀಲನೆ ಬೆಳಗಾವಿ: ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಬೆಳಗಾವಿ ಮತ್ತು ನಿಪ್ಪಾಣಿಯಲ್ಲಿನ ಕಚೇರಿಗಳ ಮೇಲೆ‌ ಭ್ರಷ್ಟಾಚಾರ ನಿರ್ಮೂಲನಾ ದಳದ ಅಧಿಕಾರಿಗಳು ಇಂದು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಭೂಪರಿವರ್ತನೆ ಮತ್ತು ಲೇಔಟ್ ಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತಮ್ಮ ಅಭಿಪ್ರಾಯ ತಿಳಿಸಲು ವಿನಾಕಾರಣ ವಿಳಂಬ ಮಾಡುವುದು ಮತ್ತು ಸಾರ್ವಜನಿಕರಿಂದ‌ ಹೆಚ್ಚಿಗೆ ಹಣ ಕೀಳುತ್ತಿರುವ ಬಗ್ಗೆ …

Read More »

ಎರಡು ತಾಸು ಮೊದಲೇ ಫೀಲ್ಡ್ ಗೆ ಇಳಿದ ಪೋಲೀಸ್ರು….

ಬೆಳಗಾವಿ- ಇಂದು ರಾತ್ರಿ ಹತ್ತು ಗಂಟೆಯಿಂದ ಬೆಳಿಗ್ಗ ಐದು ಗಂಟೆಯವರೆಗೆ ಸರ್ಕಾರ ನೈಟ್ ಕರ್ಫ್ಯು ಜಾರಿ ಮಾಡಿದೆ,ಆದ್ರೆ ಬೆಳಗಾವಿ ಪೋಲೀಸ್ರು ಎರಡು ತಾಸು ಮೊದಲೇ ಫೀಲ್ಡ್ ಗೆ ಇಳಿದಿದ್ದಾರೆ. ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿ ಎಂಟು ಗಂಟೆಯಿಂದಲೇ ಪೋಲೀಸರು ನೈಟ್ ಕರ್ಫ್ಯು ಜಾರಿಗೊಳಿಸಲು ಕಾರ್ಯಾಚರಣೆ ಶುರು ಮಾಡಿದ್ದಾರೆ. ರಾತ್ರಿ ಎಂಟು ಗಂಟೆಯಿಂದ ಪೋಲೀಸ್ರು ವಿಸಲ್ ಬಾರಿಸಲು ಆರಂಭಿಸಿದ್ರೆ ಅಂಗಡಿಕಾರರು ಹತ್ತು ಗಂಟೆಯವರೆ ಅಂಗಡಿಗಳನ್ನು ಸಂಪೂರ್ಣವಾಗಿ ಬಂದ್ ಮಾಡ್ತಾರೆ ಅನ್ನೋದು ಪೋಲೀಸರ ಲೆಕ್ಕಾಚಾರ, …

Read More »

ಪಕ್ಕದ್ಮನೆ ಲವ್ ಪ್ರಕರಣ,ಪುನವರ್ವಸತಿ ಕೇಂದ್ರಕ್ಕೆ ತಳ್ಳಿದ ಇನೆಸ್ಪೆಕ್ಟರ್ ಗೆ ದಂಡ…..!!!

ಗಂಡ ಹೆಂಡತಿ ಜಗಳ ಎಂದು ಠಾಣೆಗೆ ಬಂದಾಗ,ಹೆಂಡತಿಯನ್ನು ಪುನವರ್ಸತಿ ಕೇಂದ್ರದಲ್ಲಿ ಐದು ತಿಂಗಳ ಕಾಲ ದಿಗ್ಭಂಧನ ಮಾಡಿದ ಬೆಳಗಾವಿಯ ಮಾಳ ಮಾರುತಿ ಠಾಣೆಯ ಸಿಪಿಐಗೆ ಹೈಕೋರ್ಟ್ ದಂಡ ವಿಧಿಸಿ ಆದೇಶ ಹೊರಡಿಸಿದೆ. ಬೆಳಗಾವಿ-ಅರ್ಜಿದಾರ ಮಹಿಳೆ ನೆರೆ ಮನೆಯ ವ್ಯಕ್ತಿಯನ್ನು ಪ್ರೀತಿಸುತಿದ್ದು, ಇದೇ ಕಾರಣಕ್ಕೆ ಗಂಡನ ಮನೆ ತೊರೆಯಲು ನಿರ್ಧರಿಸಿದ್ದಾಳೆ ಎಂಬ ವಿಚಾರ ಕೌನ್ಸೆಲಿಂಗ್ ನಡೆಸುವ ವೇಳೆ ಇನ್ಸ್ ಪೆಕ್ಟರ್ ಗೆ ತಿಳಿದಿದೆ. ಈ ಕಾರಣದಿಂದ ಆಕೆಯನ್ನು ನೆರೆಮನೆಯ ವ್ಯಕ್ತಿಯಿಂದ ದೂರವಿರಿಸುವ …

Read More »

ನಾಳೆ ನಾನು ಬೆಳಗಾವಿಗೆ ಬರ್ತಾ ಇದ್ದೇನೆ….!!!

ಬೆಳಗಾವಿ- ಮಹಾರಾಷ್ಟ್ರ ಏಕೀಕರಣ ಸಮೀತಿ ನಿಷೇಧಿಸುವಂತೆ ಆಗ್ರಹ ಪಡಿಸಲು ನಾಳೆ ನಾನು ಬೆಳಗಾವಿಗೆ ಬರ್ತೀನಿ ಕ್ರಾಂತಿಯ ನೆಲ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಧರಣಿ ಮಾಡ್ತೀನಿ ಎಂದು ಚಳುವಳಿಯ ಹರಿಕಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ. ಸಾರಾ ಗೋವೀಂದ್,ಪ್ರವೀಣ ಶೆಟ್ಟಿ,ಶಿವರಾಮೇಗೌಡ ಸೇರಿದಂತೆ ಹಲವಾರು ಕನ್ನಡ ಸಂಘಟನೆಗಳ ನಾಯಕರು ನನ್ನ ಜೊತೆ ಬರ್ತಾರೆ ಅವರೂ ಧರಣಿ ಮಾಡ್ತಾರೆ ಎಂದು ತಿಳಿಸಿರುವ ವಾಟಾಳ್ ನಾಗರಾಜ್ ನಾಳೆ ಬುಧವಾರ ಬೆಳಿಗ್ಗೆ 11-30 ಗಂಟೆಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ …

Read More »