Breaking News
Home / Breaking News (page 187)

Breaking News

ಬೆಳಗಾವಿಯಲ್ಲಿ ತಡರಾತ್ರಿ ರಾಯಣ್ಣನ ಮೂರ್ತಿ ಧ್ವಂಸ..

ಬೆಳಗಾವಿ-ತಲವಾರ,ಬರ್ಚಿ ಹಿಡಿದುಕೊಂಡು ಬಂದ ಕಿಡಗೇಡಿಗಳು ರಾಯಣ್ಣ ಸರ್ಕಲ್ ನಲ್ಲಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಮೂರ್ತಿಯ ಮುಖವನ್ನು ಭಗ್ನಗೊಳಿಸಿ,ಖಡ್ಗವನ್ನು ಮುರಿದು ಮೂರ್ತಿಯ ಕೈಯನ್ನು ಧ್ವಂಸ ಮಾಡಿದ ಘಟನೆ ಮದ್ಯರಾತ್ರಿ ಅನಿಗೋಳದಲ್ಲಿ  ನಡೆದಿದೆ ತಡರಾತ್ರಿ ಏಕಾಏಕಿ ದಾಳಿ ಮಾಡಿದ ಕಿಡಗೇಡಿಗಳು ರಾಯಣ್ಣನ ಮೂರ್ತಿಯ ಮೇಲೆ ದಾಳಿ ಮಾಡಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಸಂಪೂರ್ಣವಾಗಿ ಭಗ್ನಗೊಳಿಸಿದ್ದಾರೆ. ರಾಯಣ್ಣನ ಮೂರ್ತಿ ಭಗ್ನಗೊಳಿಸಿ ವಿಚಾರವನ್ನು ಪೋಲೀಸರಿಗೆ ತಿಳಿಸುತ್ತಿದ್ದಂತೆಯೇ ಪೋಲೀಸರು ಸ್ಥಳಕ್ಕೆ …

Read More »

ನೈಜೇರಿಯಾದಿಂದ ಬೆಳಗಾವಿಗೂ ಬಂತು ಓಮಿಕ್ರಾನ್ ವೈರಸ್…!!

ಬೆಳಗಾವಿ- ಕೊರೋನಾ ಹೋಯ್ತಲ್ಲಾ ಅಂತಾ ಬೆಳಗಾವಿ ಜಿಲ್ಲೆಯ ಜನ ನಿಟ್ಟುಸಿರು ಬಿಡುವಾಗಲೇ ಮಹಾಮಾರಿ ಓಮಿಕ್ರಾನ್ ವೈರಸ್ ಬೆಳಗಾವಿ ಜಿಲ್ಲೆಗೂ ವಕ್ಕರಿಸಿದೆ. ನೈಜೇರಿಯಾದಿಂದ ಹೈದ್ರಾಬಾದ್ ಗೆ ಆಗಮಿಸಿ ಹೈದ್ರಾಬಾದಿನಿಂದ ಬೆಳಗಾವಿಗೆ ಆಗಮಿಸಿದ ಬೆಳಗಾವಿ ನಗರದ ಆಝಂ ನಗರದ ನಿವಾಸಿಯೊಬ್ಬನಿಗೆ ಓಮಿಕ್ರಾನ್ ಇರುವದು ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ. ನೈಜೇರಿಯಾದಿಂದ ಹೈದ್ರಾಬಾದ್ ,ಅಲ್ಲಿಂದ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸಿದ ಓಮಿಕ್ರಾನ್ ಸೊಂಕಿತನ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು ಆತನ …

Read More »

ಅಲ್ಲಿ ಹಟ್ಟಿಹೊಳಿ..ಇಲ್ಲಿ ಜಾರಕಿಹೊಳಿ…ಬಿಜೆಪಿಗೆ ನಿಂಬೆ ಹುಳಿ…!!!!

*ಬೆಳಗಾವಿ ಪರಿಷತ್ ಫಲಿತಾಂಶ : ಹೊಸ ದಾಖಲೆಯೊಂದಿಗೆ ತಕ್ಕ ಸಂದೇಶ ರವಾನಿಸಿದ ಮತದಾರ ಪ್ರಭು* ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರ ಪ್ರಭು ತಕ್ಕುದಾದ ನಿರ್ಧಾರ ತೆಗೆದುಕೊಳ್ಳವ ಅಧಿಕಾರ ಪಡೆದಿರುವುದಕ್ಕೆ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನ ಪರಿಷತ್ ನ ದ್ವಿಸದಸ್ಯ ಸ್ಥಾನಗಳಿಗೆ ಚುನಾವಣೆಯಲ್ಲಿ ಬೆಳಗಾವಿ‌ ಜಿಲ್ಲೆಯ ಮತದಾರ ನೀಡಿದ ತೀರ್ಪು ಅನೇಕ ಸಂದೇಶಗಳನ್ನು, ನೀಡುವದರ ಜೊತೆಗೆ ಪ್ರತಿಷ್ಠಿತ ಜಾರಕಿಹೊಳಿ ಕುಟುಂಬದ ನಾಲ್ಕಜನ ಸದಸ್ಯರು ಏಕಕಾಲದಲ್ಲಿ ವಿಧಾನಸೌಧಕ್ಕೆ ತೆರಳಲು ಮತದಾರರು ಅನುಮತಿ ಕಲ್ಪಿಸಿಕೊಟ್ಟಿದ್ದಾರೆ. ರಮೇಶ …

Read More »

ಮದ್ಯಾಹ್ನ 1 ಗಂಟೆಯ ನಂತರವೇ ಬೆಳಗಾವಿ ಪರಿಷತ್ ಫಲಿತಾಂಶ…

ಮತಪೆಟ್ಟೆಗೆ ಹೊತ್ತು ಹೊತ್ತು ಸುಸ್ತಾದ ಸಿಬ್ಬಂದ್ಧಿ ಬೆಳಗಾವಿ-ಚಿಕ್ಕೋಡಿಯ ಆರ್ ಡಿ ಕಾಲೇಜಿನಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಮತ ಏಣಿಕೆ ಪ್ರಕ್ರಿಯೆ ಬೆಳಿಗ್ಗೆ 8 ಗಂಟೆಗೆ ಆರಂಭವಾದರೂ ಇನ್ನೂ ಮತಪೆಟ್ಟಿಗೆಗಳನ್ನ ಮತ ಏಣಿಕೆಯ ಕೋಣೆಗೆ ಸಾಗಿಸುವ ಕಾರ್ಯವೇ ಮುಂದುವರೆದಿದೆ. ಸಿಬ್ಬಂಧಿಗಳು ಮತ ಪೆಟ್ಟುಗೆಗಳ ಸಾಗಾಟದಲ್ಲಿ ತೊಡಗಿದ್ದಾರೆ‌. ಒಟ್ಟು 511 ಮತಪೆಟ್ಟಿಗೆ ಹೊತ್ತು ಮತ ಎಣಿಕೆ ಕೇಂದ್ರಕ್ಕೆ ಸಾಗಿಸುತ್ತಿರುವ ಪ್ರಕ್ರಿಯೆ ಇನ್ನುವರೆಗೂ ನಡೆದಿದೆ ಈ ಪ್ರಕ್ರಿಯೆ 12 ಗಂಟೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. …

Read More »

ಬೆಳಗಾವಿಯಲ್ಲಿ ಅಧಿವೇಶನ್, ಪುಂಡಾಟಿಕೆ ನಡೆಸಲು ಎಂಈಎಸ್ ಗೆ ಪರ್ಮಿಶನ್…!!!!

ಬೆಳಗಾವ್ಯಾಗ ಸೋಮವಾರದಿಂದ ಜಾತ್ರೆ ಶುರು ಆಗತೈತಿ ನೋಡ ಗುರು….!!! ಬೆಳಗಾವಿ- ಸೋಮವಾರದಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ.ರಾಜ್ಯ ಸರ್ಕಾರದ ಸಂಪೂರ್ಣ ವ್ಯೆವಸ್ಥೆಯೇ ಗಂಟು ಮೂಟೆ ಕಟ್ಟಿಕೊಂಡು ಬೆಳಗಾವಿಗೆ ಬರುತ್ತಿರುವ ಹಿನ್ನಲೆಯಲ್ಲಿ,ಹಾಳಾದ ರಸ್ತೆಗಳು ಸುಧಾರಿಸುತ್ತಿವೆ,ಗಲೀಜ್ ಆಗಿದ್ದ ರಸ್ತೆಯ ಡಿವೈಡರ್ ಗಳಿಗೆ ಸುಷ್ಣ ಬಣ್ಣ ಹಚ್ವುವದರ ಜೊತೆಗೆ ಕುಂದಾ ನಗರಿ ಸುಂದರಿಯ ರೂಪ ಕೊಡುವ ಕಾರ್ಯ ಭರದಿಂದ ಸಾಗಿದೆ. ಇದೇ ಸೋಮವಾರ 13 ರಿಂದ 24 ರವರೆಗೆ ಸುವರ್ಣಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನಕ್ಕೆ …

Read More »

ಕರುಣೆಯಾ…ತೋರೆಯಾ….!!!

ವೃದ್ಧೆ ತಾಯಿ,ಅಂಗವಿಕಲ ಮಗನಿಗೆ ಈ ಬಸ್ ತಂಗುದಾಣವೇ ಆಲಯವು! ಹಾಸಲುಂಟು,ಹೊದೆಯಲುಂಟು ಇವರೊಂದಿಗೆ ಎಲ್ಲವೂ ಇಲ್ಲುಂಟು! ಇಂದು ಶುಕ್ರವಾರ ಸಂಜೆ ಬೆಳಗಾವಿಯ ಟಿವ್ಹಿ ಸೆಂಟರ್ (ಬೂಡಾ ಯೋಜನೆ ಸಂಖ್ಯೆ13) ನಲ್ಲಿರುವ ಬಸ್ ತಂಗುದಾಣದಲ್ಲಿ ಈ ದೃಶ್ಯ ಕಂಡು ಬಂದಿತು.ಸುಮಾರು ಎಪ್ಪತ್ತರ ಆಸು ಪಾಸು ವಯಸ್ಸಿನ ವೃದ್ಧೆ ಜಯಲಕ್ಷ್ಮೀ ಹಾಗೂ 25 / 30 ವರ್ಷ ವಯಸ್ಸಿನ ಗುರುದತ್ತ ವಿನಾಯಕ ತಮ್ಮ ಮನೆಯ ಸಾಮಾನು ಸರಂಜಾಮಿನ ಜೊತೆಗೆ ಇಲ್ಲಿ ಠಿಕಾಣಿ ಹೂಡಿದ್ದಾರೆ. ಗುರುದತ್ತನಿಗೆ …

Read More »

ಬೆಳಗಾವಿ ನಗರಕ್ಕೆ ವಿಶೇಷ ಕೊಡುಗೆ ನೀಡಲು ಸಿಎಂ ಗೆ ಮನವಿ

ಬೆಳಗಾವಿ- ಬಸವ ತತ್ವದ ಪ್ರಸಾರದ ವಿಚಾರವಾಗಿ ಬೆಳಗಾವಿ ಮಹಾನಗರದಲ್ಲಿ ಅನುಭವ ಮಂಟಪದ ಮಾದರಿಯ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅವರು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಅಧಿವೇಶನದ ಕೊಡುಗೆಯಾಗಿ ಅನುಭವ ಮಂಟಪದ ಮಾದರಿಯ ಕಡ್ಟಡ …

Read More »

ನಾಳೆ ಬೆಳಗಾವಿಗೆ ಮುಖ್ಯಮಂತ್ರಿ ಬೊಮ್ಮಾಯಿ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಚಿತ್ರಣವೇ ಬದಲಾಗಿದ್ದು ಎಲ್ಲ ಲೆಕ್ಕಾಚಾರಗಳು ಬುಡಮೇಲಾಗುವ ಲಕ್ಷಣಗಳು ಕಂಡು ಬಂದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ಧಾಣಕ್ಕೆ ಆಗಮಿಸಿ,ಶಿಗ್ಗಾಂವಗೆ ತೆರಳಿ ಮತ ಚಲಾಯಿಸಲಿದ್ದಾರೆ. ಶಿಗ್ಗಾಂವದಲ್ಲಿ ಮತ ಚಲಾಯಿಸಿದ ಬಳಿಕ ರಸ್ತೆಯ ಮೂಲಕ 2-15 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು ಬೆಳಗಾವಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ.

Read More »

ಬೆಳಗಾವಿಯ ತ್ರೀಬಲ್ ಫೈಟ್ ನಲ್ಲಿ ಯಾರಿಗೆ ಟ್ರಬಲ್….!!!

ಬೆಳಗಾವಿ- ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ತಿನ ಚುನಾವಣೆ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿ ಭೇಟಿಯ ಬಳಿಕ ಗುಣಾಕಾರ,ಭಾಗಾಕಾರದ ಸೂತ್ರವೇ ಬದಲಾಗಿದೆ. ಬೆಳಗಾವಿ ಕ್ಷೇತ್ರದ ಪರಿಷತ್ತಿನ ಚುನಾವಣೆ,ರಾಜ್ಯದ ಗಮನ ಸೆಳೆದಿದೆ,ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗುದ್ದಾಟ ಅಲ್ಲವೇ ಅಲ್ಲ,ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಜಿದ್ದಾಜಿದ್ದಿಯ ಯುದ್ಧ ಅನ್ನೋದು ಸ್ಪಷ್ಟವಾಗಿದೆ.ಈ ಯುದ್ಧದಲ್ಲಿ ಯಾರು ವಿಜಯಶಾಲಿ ಆಗ್ತಾರೆ,ಫಲಿತಾಂಶ ಏನಾಗುತ್ತದೆ ತ್ರೀಬಲ್ ಸೆಣಸಾಟದಲ್ಲಿ ಯಾರಿಗೆ …

Read More »

ದಕ್ಷಿಣ ಭಾರತದ ಏಕೈಕ ,ಬೆಳಗಾವಿಯ ಅಶ್ವತ್ಥಾಮ ಮಂದಿರದ ಮೂರ್ತಿ ಕಳ್ಳತನ..

ಬೆಳಗಾವಿ: ದಕ್ಷಿಣ ಭಾರತದ ಶ್ರದ್ಧಾಕೇಂದ್ರ ಹಾಗೂ ಪ್ರಸಿದ್ಧ ಜಾಗೃತ ಸ್ಥಳವಾದ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ  ಮೂರ್ತಿ ಸೋಮವಾರ ತಡರಾತ್ರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಈ ಸ್ಥಳಕ್ಕೆ ಧಾವಿಸಿದ್ದಾರೆ. ಅರ್ಚಕರು ಎಂದಿನಂತೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಭಾರತದಲ್ಲಿ ಇಂತಹ ಎರಡೇ ಮಂದಿರಗಳಿವೆ. ಆ ಪೈಕಿ ಉತ್ತರ ಭಾರತದಲ್ಲಿ ಇರುವುದು ಇದೊಂದೇ. ರಂಗಪಂಚಮಿಯಲ್ಲಿ ಶಾಪ ವಿಮೋಚನೆಗಾಗಿ ಜನರು …

Read More »