Home / Breaking News (page 65)

Breaking News

ಬೆಳಗಾವಿಯಲ್ಲಿ ಪ್ರತಿಭಟನೆಗೆ ಬರುತ್ತಿದ್ದ ಕಾರು ಅಪಘಾತ ಇಬ್ಬರ ಸಾವು,ಸ್ವಾಮೀಜಿಗೆ ಗಂಭೀರ ಗಾಯ.

ಬೆಳಗಾವಿ-ಮತಾಂತರ ನಿಷೇಧ ಕಾಯ್ದೆಯ‌್ನು ರದ್ದುಗೊಳಿಸುತ್ತಿರುವದನ್ನು ಖಂಡಿಸಿ ಬೆಳಗಾವಿಯಲ್ಲಿ ವಿಶ್ವಹಿಂದೂ ಪರಿಷತ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸುತ್ತಿದ್ದ ಸ್ವಾಮಿಜಿಯೊಬ್ಬರ ಕಾರು ಕಾಕತಿ ಬಳಿ ಅಪಘಾತಕ್ಕೀಡಾಗಿ ಇಬ್ಬರು ಮೃತಪಟ್ಟಿದ್ದು ಸ್ವಾಮೀಜಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಕಾರು, ಕಂಟೇನರ್‌ಗಳ ಮಧ್ಯೆ ಭೀಕರ ಸರಣಿ ಅಪಘಾತ ಸಂಭವಿಸಿದೆ, ಇಬ್ಬರು ಸಾವನ್ನೊಪ್ಪದ್ದಾರೆ-ಸ್ವಾಮೀಜಿಗೆ ಗಂಭೀರ ಗಾಯಗಳಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಳಗಾವಿಗೆ ಬರುತ್ತಿದ್ದ ಸ್ವಾಮೀಜಿ ಕಾರು,ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಪುಣೆ-ಬೆಂಗಳೂರು …

Read More »

MP ಇಲೆಕ್ಷನ್ ಗೆ ಬೆಳಗಾವಿಯಲ್ಲಿ ರೆಡಿಯಾಗುತ್ತಿದೆ ಅಖಾಡಾ…!!

ಬೆಳಗಾವಿ-ಬೆಳಗಾವಿ ಉತ್ತರ ಕ್ಷೇತ್ರದ ಶಾಸಕರಾಗಿದ್ದ ಅನೀಲ ಬೆನಕೆ ಅವರನ್ನು ಕೈಬಿಟ್ಟು,ಬೆಳಗಾವಿ ಉತ್ತರ,ಬೆಳಗಾವಿ ಗ್ರಾಮೀಣ ಮತ್ತು ದಕ್ಷಿಣದಲ್ಲಿ ಮರಾಠಿ ಸಮುದಾಯದ ಕೆಂಗಣ್ಣಿಗೆ ಗುರಿಯಾದ ಬಿಜೆಪಿ ಬರುವ ಲೋಕಸಭೆ ಚುನಾವಣೆಯಲ್ಲಿ ಲೆಕ್ಕಾಚಾರದ ನಡೆ ಅನುಸರಿಸಲು ತೀರ್ಮಾಣಿಸಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬೆಳಗಾವಿ ಉತ್ತರ,ದಕ್ಷಿಣ,ಗ್ರಾಮೀಣ,ಬೈಲಹೊಂಗಲ,ಗೋಕಾಕ್ ಅರಭಾವಿ,ರಾಮದುರ್ಗ ವಿಧಾನಸಭಾ ಕ್ಷೇತ್ರಗಳು ಬರುತ್ತವೆ.ಈ ಕ್ಷೇತ್ರದಲ್ಲಿ ಮರಾಠಾ ಹಾಗೂ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಈ ಎರಡೂ ಸಮುದಾಯಗಳ ಬಿಜೆಪಿ ನಾಯಕರು ಈಗ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. …

Read More »

ಮತಾಂತರ ಕಾಯ್ದೆ ವಾಪಸ್ ನಾಳೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ.

ಬೆಳಗಾವಿ-ಕರ್ನಾಟಕ ಸರ್ಕಾರವು ಮತಾಂತರ*ನಿಷೇಧ* *ಕಾನೂನನ್ನು* ಹಿಂಪಡೆಯಲು ತೀರ್ಮಾನಿಸಿರುವದನ್ನು ಖಂಡಿಸಿ ನಾಳೆ *17ಜೂನ ಶನಿವಾರ*11.30* ಕ್ಕೆ ಬೆಳಗಾವಿಯಲ್ಲಿ ವಿಶ್ವಹಿಂದೂ ಪರಿಷತ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಳಗಾವಿಯ ಚೆನ್ನಮ್ಮ ಸರ್ಕಲ್ ನಿಂದ ಡಿಸಿ ಆಫೀಸ ವರೆಗೆ ಮೆರವಣಿಗೆ ಮೂಲಕ ಹೋಗಿ ಡಿಸಿಯವರಿಗೆ ಮನವಿ ಕೊಡಲು ತೀರ್ಮಾಣಿಸಲಾಗಿದೆ. ಪೂಜ್ಯ ಸ್ವಾಮೀಜಿಯವರ ನೇತೃತ್ವದದಲ್ಲಿ,, ಹಿಂದು ಬಂದು ಬಾಂಧವರು, ಭಗಿನಿಯರು , ಮಹಿಳೆಯರು ,ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ವಿಶ್ವ ಹಿಂದುಪರಿಷತ್ತ ಕ್ಷೇತ್ರ* *ಧಾರ್ಮಿಕ ವಿಭಾಗ ಪ್ರಮುಖರಾದ* …

Read More »

ಮಹಾರಾಷ್ಟ್ರದ ಜತ್ತ್ ಶಾಲೆಯ ಟಿಸಿಯಲ್ಲಿ “ಕರ್ನಾಟಕ” ಎಂದು ನಮೂದಿಸಿದ ಶಿಕ್ಷಕ…!!

ಮಹಾರಾಷ್ಟ್ರದ ಶಾಲೆಯ ದಾಖಲೆ ಮರಾಠಿಯಲ್ಲಿದ್ದರೂ ಕನ್ನಡದಲ್ಲಿಯೇ ವಿವರಗಳನ್ನು ತುಂಬಿದ್ದಲ್ಲದೇ ” ಕರ್ನಾಟಕ ರಾಜ್ಯ”ಎಂದೂ ಬರೆದ ಮನದಾಳದ ಇಚ್ಛೆಯನ್ನು ಪ್ರಕಟಿಸಿದ ಗುಗವಾಡ ಶಾಲಾ ಮುಖ್ಯಾಧ್ಯಾಪಕರು! ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಗುಗವಾಡ ಗ್ರಾಮದ ಈ ಶಾಲೆಯ ಮುಖ್ಯಾಧ್ಯಾಪಕರು ನೀಡಿದ ಟಿಸಿ( ವರ್ಗಾವಣೆ ಪ್ರಮಾಣಪತ್ರ)ಈಗ ವೈರಲ್ ಆಗಿದೆ. ಅಚ್ಚ ಕನ್ನಡ ಪ್ರದೇಶಗಳಾದ ಜತ್ತ ತಾಲೂಕಿನ 44 ಹಳ್ಳಿಗಳ ಪೈಕಿ ಗುಗವಾಡ ಗ್ರಾಮವೂ ಒಂದಾಗಿದೆ.ಇಲ್ಲಿಯ ಶಾಲೆಯ ಮುಖ್ಯಾಧ್ಯಾಪಕರು ರಾಹುಲ್ ಚೌಗುಲೆ ಎಂಬವರಿಗೆ ನೀಡಿದ …

Read More »

ಕಬ್ಬಿನ ಬಿಲ್ ಬಾಕಿ, ಬೆಳಗಾವಿ ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತರು…

ಬೆಳಗಾವಿ-ಬೆಳಗಾವಿಯ ಸಕ್ಕರೆ ಸಂಸ್ಥೆಯಸಿಬ್ಬಂದಿಗಳನ್ನು ಹೊರದಬ್ಬಿ ನಿಜಲಿಂಗಪ್ಪ ‌ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಬೆಳಗಾವಿಯ ಗಣೇಶಪುರ ರಸ್ತೆಯಲ್ಲಿರುವ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ರೈತರ ಆಕ್ರೋಶ ವ್ಯಕ್ತಪಡಿಸಿದ್ದುಕಬ್ಬಿನ ಬಾಕಿ ಬಿಲ್ ಪಾವತಿಸಲು ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ರಾಮದುರ್ಗ ತಾಲೂಕಿನ ಶಿವಸಾಗರ, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್‌ ಕಾರ್ಖಾನೆಯ ಆಡಳಿತ ಮಂಡಳಿಗಳು ರೈತರ ಕಬ್ಬಿನ ಬಿಲ್ ಬಾಕಿ …

Read More »

ನಾನಿರುವುದು ನಿಮಗಾಗಿ, ಡೋಂಟ್ ವರೀ,- ರಾಜು ಸೇಠ…!!

ಸಹಾಯ ಕೇಳಲು ಕಚೇರಿಗೆ  ಬಂದ ಅಜ್ಜಿಗೆ, ಶಾಸಕ  ಅಸೀಪ್ ರಾಜು ಸೇಠ ಅವರಿಂದ ಸ್ಪಂದನೆ….!! ಬೆಳಗಾವಿ- ಬೆಳಗಾವಿ ನಗರದ ಮುಖ್ಯ ನೀರಿನ ಮೂಲವಾದ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ ಅರ್ದ ಅಡಿ ನೀರು ಮಾತ್ರ ಬಾಕಿ ಇದ್ದು, ಇನ್ನೊಂದು ವಾರದಲ್ಲಿ ಡೆಡ್ ಸ್ಟೋರೇಜ್ ಹಂತ ತಲುಪುವ ಸಾಧ್ಯತೆಗಳಿದ್ದು, ಬೆಳಗಾವಿ ನಗರದಲ್ಲಿ 100 ಹೊಸ ಬೋರ್ ವೆಲ್ ಮಂಜೂರು ಮಾಡುವಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. …

Read More »

27 ರಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೊಂದು ಸುತ್ತಿನ ಗುದ್ದಾಟ..!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು ಜೂನ್ 27 ರಂದು ಪಾಲಿಕೆಯ ಸಾಮಾನ್ಯ ಸಭೆ ನಡೆಯಲಿದೆ,ಈ ಸಭೆಯಲ್ಲಿ ಸ್ಥಾಯಿಸಮೀತಿಗಳ ಆಯ್ಕೆ ಪ್ರಕ್ರಿಯೆ ಕೂಡಾ ನಡೆಯಲಿದೆ. ಆರೋಗ್ಯ,ಹಣಕಾಸು,ಲೆಕ್ಕಪತ್ರ,ಮತ್ತು ಲೋಕೋಪಯೋಗಿ ಸಮೀತಿಗಳನ್ನು ರಚಿಸಲಾಗುತ್ತದೆ.ಒಂದು ಸಮೀತಿಯಲ್ಲಿ 7 ಜನ ಸದಸ್ಯರು ಇರುತ್ತಾರೆ.ಆಡಳಿತ ಪಕ್ಷದ ನಾಲ್ಕು,ವಿರೋಧ ಪಕ್ಷಗಳ ಮೂರು ಜನ ಸದಸ್ಯರು ಪ್ರತಿ ಸಮೀತಿಯಲ್ಲಿ ಇರುವುದು ಬೆಳಗಾವಿ ಮಹಾನಗರ ಪಾಲಿಕೆಯ ವಾಡಿಕೆ,ಆದ್ರೆ ಇದೇ ಮೊದಲ ಬಾರಿಗೆ ಪಕ್ಷ ಆಧಾರಿತ ಚುನಾವಣೆ ನಡೆದುದ್ದು ಬಹುಮತ …

Read More »

9 ಸಚಿವರು 53 ಶಾಸಕರನ್ನ ಅನರ್ಹ ಮಾಡಿ ಅಂತಾ ಹೇಳಿದ್ದು ಯಾಕೆ ಗೊತ್ತಾ..??

ಬೆಳಗಾವಿ-ಕಾನೂನು ಬಾಹಿರವಾಗಿ ಪ್ರಮಾಣ ವಚನ ಸ್ವೀಕರಿಸಿದ ಸಚಿವರು, ಹಾಗೂಶಾಸಕರ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಭೀಮಪ್ಪಾ ಗಡಾದ್ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ,ಅವರುಸುದ್ದಿಗೋಷ್ಠಿ‌ ನಡೆಸಿ,9 ಸಚಿವರು 53 ಶಾಸಕರನ್ನ ಅನರ್ಹಗೊಳಿಸಿ ಸೌಲಭ್ಯ ನಿಲ್ಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ.ರಾಜ್ಯಪಾಲರು ಮತ್ತು ವಿಧಾನಸಭಾಧ್ಯಕ್ಷರಿಗೆ ಪತ್ರ ಬರೆದು ಮನವಿ.ಮಾಡಿಕೊಂಡಿರುವ,ರಾಜ್ಯಪಾಲರು ಕ್ರಮ ಕೈಗೊಳ್ಳದಿದ್ರೇ ನ್ಯಾಯಾಲಯದಲ್ಲಿ ಪಿಆಯ್‌ಎಲ್ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ‌.ಕ್ರಮ ಬದ್ದವಾಗಿ ಪ್ರಮಾಣ ವಚನ ಸ್ವೀಕಾರ ಮಾಡುವವರೆಗೂ ಸೌಲಭ್ಯ ವಾಪಾಸ್ ಪಡೆಯಬೇಕು ಎಂದು …

Read More »

ಬೆಳಗಾವಿ: ಟೆಂಪೋ ಬೈಕ್ ಡಿಕ್ಕಿ ಮೂರುಜನ ಯುವಕರ ಸಾವು..

ಚಿಕ್ಕೋಡಿ: ಬೈಕ್ ಮತ್ತು ಟೆಂಪು ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ ಮೇಲೆ ತೆರಳುತ್ತಿದ್ದ ಮೂವರು ಯುವಕರು ಮೃತಪಟ್ಟಿರುವ ಘಟನೆ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೃತ ಯುವಕರನ್ನು ಕೇರೂರ ಗ್ರಾಮದ ಪ್ರಶಾಂತ ಬೈರು ಖೋತ(೨೨).ಸತೀಶ ಕಲ್ಲಪ್ಪ ಹಿರೇಕೊಡಿ(೨೩).ಯಲಗೌಡ ಚಂದ್ರಕಾಂತ ಪಾಟೀಲ (೨೨) ಎಂದು ಗುರ್ತಿಸಲಾಗಿದೆ. ಯುವಕರು ಬೈಕ ಮೇಲೆ ಚಿಕ್ಕೋಡಿ ಕಡೆಯಿಂದ ಕೇರೂರ ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ- ಅಂಕಲಿ ರಸ್ತೆಯ ಬಸವನಾಳಗಡ್ಡೆ …

Read More »

ರಿಯಾಯಿತಿ ಬಸ್ ಪಾಸ್ ಬೇಕಾ,ಹಾಗಾದ್ರೆ ಈ ಸುದ್ದಿ ಓದಿ.

ಬೆಳಗಾವಿ- 2023-24ನೇ ಶೈಕ್ಷಣಿಕ ವರ್ಷಕ್ಕೆ ರಿಯಾಯಿತಿ ಬಸ್ ಪಾಸ್ ಗಾಗಿ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಸಲ್ಲಿಸಲು ಸೇವಾಸಿಂಧು ಪೋರ್ಟಲ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ. ಪ್ರಸಕ್ತ ಸಾಲಿನಿಂದ ಸೇವಾಸಿಂಧು ಪೋರ್ಟಲ್ ಮೂಲಕ ಸಂಪೂರ್ಣ ಯಾಂತ್ರೀಕೃತ ವಿದ್ಯಾರ್ಥಿ ಬಸ್ ವಿತರಣೆ ಪ್ರಕ್ರಿಯೆಯನ್ನು ಆರಂಬಿಸಲಾಗಿದೆ. ಪಾಸ್ ಗಾಗಿ ವಿದ್ಯಾರ್ಥಿಗಳು ಸೇವಾಸಿಂಧು ಫೊರ್ಟಲ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. …

Read More »