Breaking News

LOCAL NEWS

ಸರ್ನೋಬತ್ ದಂಪತಿಗಳ “ನೀಯತ್ತು.”.. ಅಸಹಾಯಕರಿಗೆ ತಾಕತ್ತು…..!!!

ಬೆಳಗಾವಿ – ಬೆಳಗಾವಿಯಲ್ಲಿ ಡಾ.ಸರ್ನೋಬತ್ ದಂಪತಿಗಳು ನೀಯತಿ ಫೌಂಡೇಶನ್ ಮೂಲಕ ಸದ್ದಿಲ್ಲದೇ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು ಆರ್ಥಿಕವಾಗಿ ದುರ್ಬಲವಾಗಿರುವ ಶಾಲಾ ಮಕ್ಕಳಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಡಾ.ಸಮೀರ್ ಸರ್ನೋಬತ್ ದಂಪತಿಗಳು ನೀಯತಿ ಎಂಬ ಫೌಂಡೇಶನ್ ಮೂಲಕ ಈಗಾಗಲೇ 200 ಕ್ಕೂ ಹೆಚ್ಚು ಅಸಹಾಯಕ ವಿಧ್ಯಾರ್ಥಿಗಳ ಶಿಕ್ಷಣಕ್ಕಾಗಿ ಆರ್ಥಿಕವಾಗಿ ಸಹಾಯ ಮಾಡುವದರ ಜೊತೆಗೆ ಅನೇಕ ಕುಟುಂಬಗಳಿಗೆ ಹೊಲಿಗೆ ಯಂತ್ರಗಳನ್ನೂ ಸಹ ಕೊಟ್ಟಿದ್ದಾರೆ. …

Read More »

ಕಾಲೇಜು ಬಸ್ಸಿಗೆ ಲಾರಿ ಡಿಕ್ಕಿ, 40 ಕ್ಕೂ ಹೆಚ್ಚು ವಿಧ್ಯಾರ್ಥಿಗಳಿಗೆ ಗಾಯ….

ಬೆಳಗಾವಿ ಟಿಪ್ಪರ್ ಹಾಗೂ ಕಾಲೇಜು ಬಸ್ ನಡುವೆ ಅಪಘಾತ ನಡೆದಿದ್ದು, ಸುಮಾರು 40 ಕ್ಕೂ ವಿದ್ಯಾರ್ಥಿಗಳಿಗೆ ಗಾಯವಾದ ಘಟನೆಯ ಶುಕ್ರವಾರ ಸಂಜೆ ಭೂತರಾಮನಹಟ್ಟಿಯ ಕಿರು ಮೃಗಾಲಯದಲ್ಲಿ ಎದುರು ನಡೆದಿದೆ. ಕೊಲ್ಹಾಪುರದಿಂದ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಧಾರವಾಡ ವಿಶ್ವವಿದ್ಯಾಲಯ ನೋಡಿಕೊಂಡು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮೀಪ ಇರುವ ರಾಣಿ ಚನ್ನಮ್ಮ‌ ಕಿರು ಮೃಗಾಲಯಕ್ಕೆ ಭೇಟಿ ನೀಡಿ ಮರಳಿ ಕೊಲ್ಲಾಪುರಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ಗಾಯಾಳು ವಿದ್ಯಾರ್ಥಿಗಳು ಬೆಳಗಾವಿ ‌ಬೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ …

Read More »

ಇಂದಿನಿಂದ ಬೆಳಗಾವಿಯಲ್ಲಿ ಶೆಟ್ರ ಅಂಗಡಿ ಓಪನ್…!!

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಭರ್ಜರಿ ಜಯಭೇರಿ ಸಾಧಿಸಿ ಸಂಸದರಾಗಿ ಆಯ್ಕೆಯಾಗಿ, ದೆಹಲಿಗೆ ಹೋಗಿ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಬೆಳಗಾವಿಗೆ ಮರಳಿ ಬಂದಿರುವ ಜಗದೀಶ್ ಶೆಟ್ಟರ್ ಅವರು ಸೇವಾ ಅವಧಿಯ ಮೊದಲ ದಿನ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಗೆಲುವಿಗೆ ಶ್ರಮಿಸಿದ ಎಲ್ಲ ನಾಯಕರಿಗೆ ಕಾರ್ಯಕರ್ತರಿಗೆ ಧನ್ಯವಾದ ಹೇಳಿದ ಬಳಿಕ ಮೊದಲ ದಿನವೇ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ತೆರಳಿ ಅಲ್ಲಿಯ ಅಧಿಕಾರಿಗಳ ಜೊತೆ ಸಭೆ …

Read More »

ಬೆಳಗಾವಿಯ ಕೋರ್ಟ್ ನಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಆರೋಪಿ…

ಬೆಳಗಾವಿ-ಬೆಳಗಾವಿಯ ಜಿಲ್ಲಾ ನ್ಯಾಯಾಲಯದಲ್ಲೇ ಆರೋಪಿಯೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ. ಘಟನೆ ಇಂದು ಬೆಳಗ್ಗೆ ನಡೆದಿದೆ. ಬೆಳಗಾವಿಯಲ್ಲಿ ಓಪನ್ ಕೋರ್ಟಿನಲ್ಲಿ ನಟೋರಿಯಸ್ ಪಾತಕಿ ಜಯೇಶ್ ಪೂಜಾರಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಿದ್ದಂತೆ ವಕೀಲರು,ಹಾಗು ಕೋರ್ಟಿನಲ್ಲಿದ್ದ ಸಾರ್ವಜನಿಕರು ಘೋಷಣೆ ಕೂಗಿದ ಆರೋಪಿಗೆ ಧರ್ಮದೇಟು ನೀಡಿದ್ದಾರೆ ಥಳಿಸಿ ಆತನಿಗೆ ಪಾಠ ಕಲಿಸಿದ್ದಾರೆ. ಕೋರ್ಟ್ ಒಳ ಭಾಗದಲ್ಲೇ ಸಾರ್ವಜನಿಕರು ವಕೀಲರು ಘೋಷಣೆ ಕೂಗಿದವನ ಮೇಲೆ ತಕ್ಷಣವೇ ದಾಳಿ ಮಾಡಿ ಆತನಿಗೆ ಧರ್ಮದೇಟು.ಏಟು …

Read More »

ಸ್ಯಾಂಡಲ್ ವುಡ್ ಸ್ಟಾರ್ ದರ್ಶನ್ ಬಂಧನ

ಮೈಸೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ನಟ ದರ್ಶನ್ ಸೇರಿ 10 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಮೈಸೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಅವರನ್ನ ಬಂಧಿಸಲಾಗಿದೆ ಎನ್ನಲಾಗಿದೆ. ದರ್ಶನ್ ಗೆಳತಿ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದನು. ಈ ಕಾರಣಕ್ಕೆ ನಟ ದರ್ಶನ್ ಸೂಚನೆ ಮೇರೆಗೆ ಅವರ ಗೆಳೆಯಲು ಕಾಮಾಕ್ಷಿಪಾಳ್ಯದಲ್ಲಿ ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ್ದರು ಎಂದು ಹೇಳಲಾಗುತ್ತಿದೆ. …

Read More »

ಬೈಕ್ ಮೇಲೆ ಮರ ಬಿದ್ದು ಯುವಕನ ಸಾವು,ಇಬ್ಬರಿಗೆ ಗಾಯ

ಬೆಳಗಾವಿ- ಬೈಕ್ ಮೇಲೆ ಗೆಳೆಯರು ಸೇರಿಕೊಂಡು ಪಕ್ಕದ ಊರಿಗೆ ಹೋಗುವಾಗ ರಸ್ತೆ ಪಕ್ಕದ ಅಕೇಶಿಯಾ ಮರ ಬೈಕ್ ಮೇಲೆ ಬಿದ್ದು 20 ವರ್ಷದ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಪಕ್ಕದ ಬೆಳಗುಂದಿ ಕರ್ಲೆ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಬೈಕ್ ಮೇಲೆ ಮರ ಬಿದ್ದ ಪರಿಣಾಮ 20 ವರ್ಷದ ಸೋಮನಾಥ ಮುಚ್ಚಂಡಿಕರ್ ಸ್ಥಳದಲ್ಲೇ ಸಾವನ್ನೊಪ್ಪಿದ್ದಾನೆ. ಸ್ವಪ್ನೀಲ್ ದೇಸಾಯಿ,ವಿಠ್ಠಲ ತಳವಾರ …

Read More »

ಜೈ..ಜಗದೀಶ್ ಹರೇ..ಶೆಟ್ಟರ್ ಮಂತ್ರಿ ಆಗೋದು ಖರೇ…!!

ಬೆಳಗಾವಿ- ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿಯಾಗಿ ಬೆಳಗಾವಿಯ ಜನ ಗೆಲ್ಲಿಸಿದ್ದಾರೆ‌. ಶೆಟ್ಟರ್ ಅವರಿಗೆ ಬೆಳಗಾವಿ ಲಕ್ಕಿ ಯಾಕಂದ್ರೆ ಬೆಳಗಾವಿಯಿಂದ ಗೆದ್ದಿರುವ ಶಟ್ಟರ್ ಕೇಂದ್ರದ ಮಂತ್ರಿ ಆಗುವ ಎಲ್ಲ ಲಕ್ಷಣಗಳಿವೆ. ನರೇಂದ್ರ ದಾಮೋದರ್ ದಾಸ್ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.ಮೋದಿ ಅವರ ಜೊತೆ ಎಷ್ಟು ಜನ ಮಂತ್ರಿಗಳು ಪ್ರಮಾಣ ವಚನ ಸ್ವೀಕಾರ ಮಾಡ್ತಾರೆ, ಅದರಲ್ಲೂ ಕರ್ನಾಟಕದಿಂದ ಎಷ್ಟು ಜನ ಮಂತ್ರಿ ಆಗ್ತಾರೆ ಎನ್ನುವ …

Read More »

ನೀಟ್ ಪರೀಕ್ಷೆಯಲ್ಲಿ 647 ಅಂಕ ಪಡೆದ ಕೆಎಲ್ಇ ವಿಧ್ಯಾರ್ಥಿ…

ಬೆಳಗಾವಿ- ಕೆಎಲ್ಇ ಸಂಸ್ಥೆಯ ಆರ್.ಎಲ್.ಎಸ್‌. ಪದವಿ ಪೂರ್ಕಾಲೇಜಿನ ವಿದ್ಯಾರ್ಥಿ ಪ್ರದೀಪ ಹಳ್ಳೂರ ಎಂಬ ವಿದ್ಯಾರ್ಥಿ ಬಡನದ ನಡುವೆಯೂ ನೀಟ್ ಪರೀಕ್ಷೆಯಲ್ಲಿ 647 ಅಂಕ ಪಡೆದಿದ್ದಾನೆ‌. ಅವನಿಗೆ ಕೆಎಲ್ಇ ಸಂಸ್ಥೆಯು ಈ ವಿದ್ಯಾರ್ಥಿಗೆ ಶಿಷ್ಯ ವೇತನ ನೀಡಿ ಪ್ರೋತ್ಸಾಹಿಸಿದೆ ಎಂದು ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು ಶನಿವಾರ ಕೆಎಲ್ಇ ಆರ್ ಎಲ್ ಎಸ್ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ‌ ವರ್ಷ ನೀಟ್ ಪರೀಕ್ಷೆಯಲ್ಲಿ ಕೆಎಲ್ಇಯ 600ಕ್ಕಿಂತಲೂ ಹೆಚ್ಚಿಗೆ …

Read More »

ಪ್ರಾಣ ಭಯದಲ್ಲೇ ಮೈದುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ಮಕ್ಕಳು*

*ಪ್ರಾಣ ಭಯದಲ್ಲೇ ಮೈದುಂಬಿ ಹರಿಯುತ್ತಿರುವ ಹಳ್ಳ ದಾಟುತ್ತಿರುವ ಮಕ್ಕಳು* ರಠಮದುರ್ಗ- ಜೀವದ ಹಂಗು ತೊರೆದು ಹಳ್ಳದಲ್ಲೇ ನಿಂತು ಮಕ್ಕಳನ್ನು ಆ ಕಡೆಯಿಂದ ಈ ಕಡೆಗೆ ಶಿಫ್ಟ್ ಮಾಡ್ತಿರುವ ಪೋಷಕರು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉಡಚಮ್ಮನಗರ ಗ್ರಾಮದ ಹೊರ ವಲಯದಲ್ಲಿ ಘಟನೆ. ಅದೇ ಗ್ರಾಮದ ಲಕ್ಷ್ಮಿ ನಗರದಿಂದ ಉಡಚಮ್ಮನಗರ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು. ಹಳ್ಳದಲ್ಲಿ ಹರಿಯುವ ನೀರು ರಭಸವಾದ್ರೆ ಪೋಷಕರ ಜೊತೆಗೆ ಮಕ್ಕಳು ಕೊಚ್ಚಿಕೊಂಡು ಹೋಗುವ ಭೀತಿ. ಲಕ್ಷ್ಮಿ …

Read More »

ಶಾಸಕ ತಮ್ಮನ್ನವರಗೆ ತಿರುಗೇಟು ನೀಡಿದ ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರಗೆ ಟಿಕೆಟ್ ಕೊಡಿಸಲು ನಾನು ಕಾರಣವಾಗಿದ್ದೇನೆ. ಒಂದು ವೇಳೆ ಅವರನ್ನು ಬೆಳೆಸುವ ಉದ್ದೇಶವಿಲ್ಲದಿದ್ದರೇ ಬೇರೆಯವರಿಗೆ ಟಿಕೆಟ್ ನೀಡುವಂತೆ ಸೂಚಿಸುತ್ತಿದ್ದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಶಾಸಕ ತಮ್ಮನ್ನವರಗೆ ತಿರುಗೇಟು ನೀಡಿದ್ದಾರೆ. ಇಂದು ಬೆಳಗ್ಗೆ ಚಿಕ್ಕೋಡಿಯಲ್ಲಿ ಪ್ರೆಸ್ ಮೀಟ್ ಕರೆದು ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಶಾಸಕ ಮಹೇಂದ್ರ ತಮ್ಮಣ್ಣವರ ಅಸಾಮಾಧಾನ ಹೊರಹಕಿದ್ದಾರೆ.ಈ ಭಾಗದ ಎಸ್‌ಸಿ ನಾಯಕರನ್ನು ರಾಜಕೀಯವಾಗಿ ಜಾರಕಿಹೊಳಿ ಪ್ಯಾಮಿಲಿ ನಿರ್ನಾಮ ಮಾಡ್ತಿದೆ ಎಂದು …

Read More »

ಲಾಕರ್ ಮುರಿದು 21 ಲಕ್ಷ ರೂ ದೋಚಿದವರು ಅರೆಸ್ಟ್.

ಬೆಳಗಾವಿ, ಇಲ್ಲಿನ ಸಂಗಮೇಶ್ವರ ನಗರದ ಶ್ರೀ. ಕಾಮರ್ಸ್‌ ಮಾರ್ಕೆಟ್‌ ಸರ್ವಿಸ್‌ ಪ್ರೈವೇಟ್ ಲಿಮಿಟೆಡ್ ಕಚೇರಿ ಕೀಲಿ ತೆಗೆದು ಒಳಗೆ ಲಾಕರ್‌ನಲ್ಲಿಟ್ಟಿದ್ದ 21.18 ಲಕ್ಷ ರೂಪಾಯಿ ಮತ್ತು ಎಸ್ಸೆಸ್ಸೆಲ್ಸಿ ಅಂಕಪಟ್ಟಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಎಪಿಎಂಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಯಮನಾಪುರದ ಮಲ್ಲಿಕಜಾನ ಇಮಾಮಹುಸೇನ ಹವಾಲ್ದಾರ (28) , ಖಾನಾಪುರ ತಾಲೂಕಿನ ನಂದಗಡದ ಮೆಹಬೂಬಸುಬಾನಿ ಉರ್ಫ ತೋಹಿದ ಸಲಾವುದ್ದಿನ್‌ ಸಿಂಗರಗಾಂವ (30), ಉಲ್ಮಾನ ಸಲಾವುದ್ದೀನ ಸಿಂಗರಗಾಂವ (26) ಮತ್ತು …

Read More »

ಹತ್ಯೆ ಮಾಡಿ, ಅಪಘಾತವೆಂದು ಬಿಂಬಿಸಲೆತ್ನಿಸಿದ 6 ಆರೋಪಿಗಳು ಸೆರೆ

ಬೆಳಗಾವಿ-ವೈಯಕ್ತಿಕ ದ್ವೇಷದಿಂದ ವೃದ್ಧರೊಬ್ಬರನ್ನು ಕಾರು ಹಾಯಿಸಿ ಹತ್ಯೆ ಮಾಡಿ, ರಸ್ತೆ ಅಪಘಾತವೆಂದು ಬಿಂಬಿಸಲೆಯ್ನಿಸಿದ ಆರು ಜನ ಆರೋಪಿಗಳನ್ನು ಬೆಳಗಾವಿ ನಗರ ಸಂಚಾರ ಮತ್ತು ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳೆದ ಮೇ 30 ರಂದು ನಗರದ ಬಿಮ್ಸ್‌ ಆಸ್ಪತ್ರೆ ಎದುರಿರಿನ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತ ನಡೆದಿತ್ತು. ಈ ಅಪಘಾತದಲ್ಲಿ ಧಾರವಾಡದ ಎಸ್‌ಡಿಎಂ ಕಾಲೇಜು ಹಿಂದೆ ಸತ್ತೂರ ವನಶ್ರೀ ನಗರದ ನಿವಾಸಿ ವಿರೂಪಾಕ್ಷ ಕೊಟ್ರೆಪ್ಪ ಹರ್ಲಾಪುರ ( 60) ಮೃತಪಟ್ಟಿದ್ದರು. …

Read More »

ಜನರ ತೀರ್ಪನ್ನು ಗೌರವಿಸಿ, ಜಗದೀಶ್ ಶೆಟ್ಟರ್ ಗೆ  ಶುಭ ಹಾರೈಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡಿದ ತೀರ್ಪನ್ನು ಅತ್ಯಂತ ವಿನಮ್ರ ಭಾವದಿಂದ ಗೌರವಿಸುತ್ತೇವೆ. ನೂತನ ಸಂಸದರಾಗಿ ಆಯ್ಕೆಯಾಗಿರುವ ಜಗದೀಶ ಶೆಟ್ಟರ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ನಮ್ಮ ಪರವಾಗಿ ಕೆಲಸ ಮಾಡಿದ ಎಲ್ಲ ಕಾರ್ಯಕರ್ತರು, ಮುಖಂಡರು ಹಾಗೂ ಬೆಂಬಲಿಸಿದ ಎಲ್ಲ ಮತದಾರರಿಗೆ, ಸಹಕರಿಸಿದ ಮಾಧ್ಯಮದ ಸ್ನೇಹಿತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಜಿಲ್ಲಾ ಉಸ್ತುವಾರಿ …

Read More »

ಬೆಳಗಾವಿ ಅಭ್ಯರ್ಥಿ ಸೋಲಿಗೆ ಬಹಳಷ್ಟು ಕಾರಣವಿದೆ- ಸತೀಶ್ ಜಾರಕಿಹೊಳಿ

ಗೋಕಾಕ್-ಗೋಕಾಕ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ‌ ಸುದ್ಧಿಗೋಷ್ಠಿ ನಡೆಸಿಚಿಕ್ಕೋಡಿಯಲ್ಲಿ ಪುತ್ರಿ ಪ್ರಿಯಾಂಕಾ ಗೆಲುವಿನ ಕುರಿತು ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ಪಕ್ಷದ ಸಪೋರ್ಟ್, ನಮ್ಮ ಅಭಿವೃದ್ಧಿ ಕೆಲಸದಿಂದ ಗೆಲುವಾಗಿದೆ.ನಿರಂತರ ಸಂಪರ್ಕ ಈ ಚುನಾವಣೆ ಗೆಲ್ಲಲು ಅನುಕೂಲವಾಯಿತು.ಕೆಕವರು ನಮ್ಮ ವಿರುದ್ಧ ಜಾತಿ ಧರ್ಮ ಭಾಷೆ ಕುರಿತು ಪ್ರಚಾರ ಮಾಡಿದ್ರು. ವಿರೋಧಿಗಳು ತಮ್ಮ ಆ್ಯಂಗಲ್ ನಲ್ಲಿ ಮಾತ್ರ ವಿಚಾರ ಮಾಡ್ತಾರೆ.ಜಾತಿವಾದಿಗಳಿಗೆ ಎಲ್ಲಿ ನಿಂತ್ರೂ ಅವಕಾಶ ಇರೊದಿಲ್ಲ.ಹೊರಗಿನವರ ಬಂದ್ರೂ ಒಳಗಿನವರು ಬಂದ್ರೂ …

Read More »

ಬರ್ತ್ ಡೇ ಪಾರ್ಟಿಗೆ ಕರೆದು ಯುವಕನ ಮರ್ಡರ್….

ಬರ್ತ್ ಡೇ ಪಾರ್ಟಿಗೆ ಕರೆದು ಯುವಕನ ಮರ್ಡರ್ ಬೆಳಗಾವಿ-ಜನ್ಮ ದಿನಕ್ಕೆ ಕರೆದು ಸ್ನೇಹಿತನನ್ನೆ ಭೀಕರವಾಗಿ ಕೊಲೆ ಮಾಡಿದ ಘಟನೆ ನುಗ್ಗಾನಟ್ಟಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಯರಗಟ್ಟಿ ತಾಲೂಕಿನ ನುಗ್ಗಾನಟ್ಟಿ ಗ್ರಾಮದ ಬಸವರಾಜ ಗುರುಲಿಂಗಪ್ಪ ಮುದ್ದಣ್ಣವರ ( 23) ಕೊಲೆಯಾದ ದುರ್ದೈವಿಯಾಗಿದ್ದಾನೆ .ಜನ್ಮ ದಿನಕ್ಕೆ ಕರೆದು ವೈಯಕ್ತಿಕ ಜಗಳಕ್ಕೆ ತಿರುಗಿ ನಾಲ್ಕೈದು ಜನ ಸೇರಿಕೊಂಡು ಬಸವರಾಜನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ.ಎಂದು ತಿಳಿದು ಬಂದಿದೆ. ಯುವಕ ಮನೆಯಲ್ಲಿ ಚಹಾ ಕುಡಿಯುತ್ತಿದ್ದಾಗ ಈತನ …

Read More »