Breaking News

LOCAL NEWS

ಬೆಳಗಾವಿಯಲ್ಲಿ ಫ್ಲೈ ಓವರ್ ಆಗೋದು ಫಿಕ್ಸ್….!!

ಬೆಳಗಾವಿ‌ ಫ್ಲೈಓವರ್ ಯೋಜನೆ: ಅಧಿಕಾರಿಗಳ ಸಮನ್ವಯ  ಸಭೆ ಬೆಳಗಾವಿ, -ನಗರದಲ್ಲಿ ವಾಹನ ಸಂಚಾರ ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ-48 ರಿಂದ ಕಿತ್ತೂರು ಚೆನ್ನಮ್ಮ ವೃತ್ತದವರೆಗೆ ಒಟ್ಟಾರೆ 4.50 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಮಾಡಬೇಕು ಎಂಬ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಬಹುದಿನಗಳ ಕನಸಿನ ಯೋಜನೆಗೆ ಇದೀಗ ಚಾಲನೆ ಲಭಿಸಿದೆ. ಬೆಳಗಾವಿ‌ ನಗರದ ಫ್ಲೈಓವರ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ಅಧ್ಯಕ್ಷತೆಯಲ್ಲಿ …

Read More »

ಯುವಕ ಯುವತಿ ಕೂಡಿ ಕುಂತಾಗ ನೈತಿಕ ಪೋಲೀಸ್ಗಿರಿ…..!!!

ಬೆಳಗಾವಿ- ಹುಡುಗ ಹುಡುಗಿ ಕೂಡಿ ಕುಂತಾಗ ಅವರಿಬ್ಬರ ಮೇಲೆ ಏಕಾ ಏಕಿ ದಾಳಿ ಮಾಡಿದ ಹದಿನೈದು ಜನ ಯುವಕರ ಗುಂಪು ಅವರನ್ನು ಥಳಿಸಿ ಇಬ್ಬರನ್ನು ಬಲವಂತವಾಗಿ ಮನೆಯೊಂದರಲ್ಲಿ ದಿನವಿಡೀ ಕೂಡಿ ಹಾಕಿದ ಘಟನೆ ಬೆಳಗಾವಿ ಮಹಾನಗರದ ಕೋಟೆ ಕೆರೆಯ ಧ್ವಜದ ಆವರಣದಲ್ಲಿ ನಡೆದಿದೆ. ಬೆಳಗಾವಿಯ ಕೋಟೆ ಕೆರೆ ಕಿನಾರೆ ಈಗ ಪ್ರೇಮಿಗಳ ಅಡ್ಡಾ ಆಗಿದೆ. ಇಲ್ಲಿ ದಿನನಿತ್ಯ ನೂರಾರು ಜನ ಪ್ರೇಮಿಗಳು ಬರ್ತಾರೆ ಹೋಗ್ತಾರೆ. ಹುಡುಗ ಮತ್ತು ಹುಡುಗಿ ಇಬ್ಬರ …

Read More »

ಎಂಇಎಸ್ ,ಪುಂಡರ ಪುಂಡಾಟಿಕೆ ನೋಡಿದ್ರೆ, ಕನ್ಡಡಿಗರ ರಕ್ತ ಕುದಿಯುತ್ತೆ…!!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಮರಾಠಿಯಲ್ಲಿ ಬೋರ್ಡ್ ಹಾಕಿದವರ ಜೊತೆ ವ್ಯವಹಾರ ಮಾಡಬೇಕು,ಕನ್ನಡ ಫಲಕ ಹಾಕುವ ಕನ್ನಡ ಸಂಘಟನೆಗಳ ಹೋರಾಟ ತಡೆಯಬೇಕು‌ ಎಂದು ಆಗ್ರಹಿಸಿ ಎಂಇಎಸ್ ಪುಂಡರು ಬರುವ ಮಂಗಳವಾರ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸುವ ಪುಂಡಾಟಿಕೆಯ ನಿರ್ಧಾರ ಕೈಗೊಂಡಿದ್ದಾರೆ‌. ಎಂಇಎಸ್ ನಾಯಕರ ಪುಂಡಾಟಿಕೆ,ನಾಡ ವಿರೋಧಿ ಮಾತುಗಳನ್ನು ಕೇಳಿದ್ರೆ,ರಾಜ್ಯದಲ್ಲಿ ಕನ್ನಡದ ಸರ್ಕಾರ ಸತ್ತಿದೆಯೋ,? ಜೀವಂತವಾಗಿದೆಯೋ ? ಎನ್ನುವ ಅನುಮಾನ ಕನ್ನಡಿಗರನ್ನು ಕಾಡುತ್ತಿದೆ. ಯಾಕಂದ್ರೆ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕನ್ನಡ …

Read More »

ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, ಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..!!

ಬೆಳಗಾವಿ-ಮಾಳಮಾರುತಿ ಪೊಲೀಸರು ಕಳ್ಳನನ್ನು ಬಂಧಿಸಿ;3.5 ಲಕ್ಷದ ಆಭರಣ ವಶಕ್ಕೆ ಪಡೆದಿದ್ದಾರೆ. ಮದುವೆಗೆ ಬಂದಿದ್ದ…..ಆಭರಣ ಕದ್ದು ಪರಾರಿಯಾಗಿದ್ದ, cpiಕಾಲಿಮಿರ್ಚಿ ಕೈಗೆ ಸಿಕ್ಕಿಬಿದ್ದ…..! ಕೇವಲ 24 ಗಂಟೆಗಳಲ್ಲಿ ಕಳ್ಳತನ ಪ್ರಕರಣ ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ.ದಿನಾಂಕ 4-1.2024 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ .ಪಂಚಾಕ್ಷರಿ ಎಂ ಕೆ ಸಾ. ದಾವಣಗೆರೆ ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500/- …

Read More »

ಅಂಗನವಾಡಿ ಶಿಕ್ಷಕಿಯ ,ಮೂಗು ಕತ್ತರಿಸಿದ ಆರೋಪಿ ಅರೆಸ್ಟ್…

ಬೆಳಗಾವಿ- ಅಂಗನವಾಡಿ ಮಕ್ಕಳು ಮನೆ ಮುಂದಿನ ತೋಟದಲ್ಲಿ ಹೂವು ಕಿತ್ತ ಬಸುರ್ತೆ ಗ್ರಾಮದಲ್ಲಿ ಇತ್ತೀಚಿಗೆ ನಡೆದ ಘಟನೆಯ ಹಿನ್ನಲೆಯಲ್ಲಿ ಅಂಗನವಾಡಿ ಶಿಕ್ಷಕಿಯ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿದ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿದ್ದಾರೆ. ಕಾಕತಿ ಪೊಲೀಸ್ ಠಾಣಿ ವ್ಯಾಪ್ತಿಯ ಬಸುರ್ತೆ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿ ಶ್ರೀಮತಿ ಮೀರಾ ಮೋರೆ ರವರೊಡನೆ ಜಗಳವಾಡಿ ಕುಡುಗೋಲಿನಿಂದ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಪ್ರ ಸಂ. 02/2024 ಕಲಂ. 326 ಐಪಿಸಿ ದಾಖಲಿಸಿಕೊಂಡು …

Read More »

ಹೆಂಡತಿ ಜೊತೆಗಿನ ಖಾಸಗಿ ಕ್ಷಣಗಳನ್ನು ರಿಕಾರ್ಡ್ ಮಾಡಿದ ಗಂಡ,ಜೈಲಿಗೆ…!!

ಬೆಳಗಾವಿ – ಇಡೀ ಸಮಾಜವೇ ಶಾಕ್ ಆಗುವ ಮತ್ತೊಂದು ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಹೆಂಡತಿಯ ಜತೆಗಿನ ಖಾಸಗಿ ಕ್ಷಣಗಳನ್ನ ರೆಕಾರ್ಡ್ ಮಾಡಿ.ಮತ್ತೆ ಹೆಂಡತಿಗೆ ಗಂಡನೇ ಬ್ಲ್ಯಾಕ್ ಮೇಲ್ ಮಾಡಿದ ಗಂಡ ಜೈಲು ಪಾಲಾದ ಕರಾಳ ಕಹಾನಿ ಇದಾಗಿದೆ. *ಹೆಂಡತಿಯ ಅಶ್ಲೀಲ ವಿಡಿಯೋ ಮಾಡಿ, ಫೋಟೊ ತೆಗೆದ ಪಾಪಿ ಗಂಡ ಮತ್ತೊಂದು ಮದುವೆ ಮಾಡಿಕೊಳ್ಳಲು, ಹೆಂಡತಿಯಿಂದ ವಿಚ್ಛೇದನ ಪಡೆಯಲು ಬ್ಲ್ಯಾಕ್ ಮೇಲ್ ಮಾಡಿದಬೆಳಗಾವಿ ನಗರದ ನಿವಾಸಿ ಕಿರಣ್ ಪಾಟೀಲ್ ನೀಚ ಕೃತ್ಯ …

Read More »

ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ…!

ಬೆಳಗಾವಿ- ಬೆಳಗಾವಿ ನಗರ ವ್ಯಾಪ್ತಿ ಮತ್ತು ಜಿಲ್ಲೆಯಲ್ಲಿ ಇಲ್ಲಿಯ ಘನತೆ ಗೌರವಕ್ಕೆ ಧಕ್ಕೆ ತರುವ ತಲೆ ತಗ್ಗಿಸುವ ಘಟನೆಗಳು ಹೆಚ್ಚಾಗುತ್ತಿವೆ. ಇಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಎನ್ನುವ ಮುನ್ಸೂಚನೆಯನ್ನು ನೀಡುತ್ತಿವೆ.ಈಗಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆ ತನ್ನ ಜಮೀನಿನಲ್ಲಿ ಹಾದು ಹೋಗಿದ್ದ ಪೈಪ್ ಲೈನ್ ತೆರವು ಮಾಡುವಂತೆ ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಒಂಟಿಯಾಗಿರುವ ಮಹಿಳೆಯನ್ನ ಟಾರ್ಗೆಟ್ ಮಾಡಿ ಆಗಾಗಾ ಕ್ಯಾತೆ ತೆಗೆದು ಅವಳ ಮೇಲೆ ಹಲ್ಲೆ ಮಾಡಿ ಆ …

Read More »

ಮಕ್ಕಳು ಹೂವು ಕಟ್ ಮಾಡಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೂಗು ಕಟ್ ಆಯ್ತು…!!

ಗಾಯಗೊಂಡಿರುವ ಅಂಗನವಾಡಿ ಸಹಾಯಕಿ…. ಆರೋಪಿ …….. ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ‌ ಬೆಳಕಿಗೆ ಬಂದಿದ್ದು ಅಂಗನವಾಡಿ ಮಕ್ಕಳು ಹೂವು ಕಿತ್ತಿದ್ದಾರೆ ಎಂದು ಅಂಗನವಾಡಿ,ಸಹಾಯಕಿ ಮೇಲೆ ರಾಕ್ಷಸಿ ವರ್ತನೆ ತೋರಿದ ದುಷ್ಟ ಆಕೆಯ ಮೂಗನ್ನೆ ಕತ್ತರಿಸಿದ ಘಟನೆ ನಡೆದಿದೆ. ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಈ ನಡೆದ ಘಟನೆ.ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು …

Read More »

ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿತ್ತು…..!!!

ಬೆಳಗಾವಿ- ಮದುವೆಗಾಗಿ ಬೀಗರು ಕಲ್ಯಾಣ ಮಂಟಪಕ್ಕೆ ಆಗಮಿಸಿದ್ರು ಮಂಟಪದಲ್ಲಿ ಮದುವೆಯ ಮುನ್ನ ಹಳದಿ ಕಾರ್ಯಕ್ರಮ ನಡೆದಿತ್ತು.ವರ ವರದಕ್ಷಣೆಗಾಗಿ ಪಟ್ಟು ಹಿಡಿದ ಹಿನ್ನಲೆಯಲ್ಲಿ ತಾಳಿ ಕಟ್ಟುವ ಸಮಯದಲ್ಲೇ ಮದುವೆ ಮುರಿದು ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದಿದೆ. ವರದಕ್ಷಣೆಗೆ ಡಿಮ್ಯಾಂಡ್ ಮಾಡಿದ ವರ ಸರ್ಕಾರಿ ನೌಕರ, ಹುಬ್ಬಳ್ಳಿ ಮೂಲದ ವರ ಸಚಿನ್ ಪಾಟೀಲ ಸರ್ಕಾರಿ ನೌಕರ ಬೆಳಗಾವಿ ಡಿಸಿ ಕಚೇರಿಯಲ್ಲಿ SDA ಆಗಿ ಕೆಲಸ ಮಾಡುತ್ತಿದ್ದಾನೆ. ಕೇಳಿದಷ್ಟು ವರದಕ್ಷಣೆ ಕೊಡಲೇ …

Read More »

ಕ್ರಾಂತಿವೀರನ ಉತ್ಸವಕ್ಕೆ ಕೋಟಿ ಕೊಡ್ತಾರೆ.ಸಿಎಂ ಬರ್ತಾರೆ…!!

ಜ.17, 18 ರಂದು ಸಂಗೊಳ್ಳಿ ಉತ್ಸವ: ಶಾಸಕ ಮಹಾಂತೇಶ ಕೌಜಲಗಿ ಬೆಳಗಾವಿ,-ಈ ಬಾರಿ ಸಂಗೊಳ್ಳಿ ಉತ್ಸವವನ್ನು ಜ.17 ಹಾಗೂ 18 ರಂದು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ ಎಂದು ಶಾಸಕ ಮಹಾಂತೇಶ ಕೌಜಲಗಿ ತಿಳಿಸಿದರು. ಸಂಗೊಳ್ಳಿ ರಾಯಣ್ಣ ಸ್ಮಾರಕ ಕಲ್ಯಾಣ ಮಂಟಪದಲ್ಲಿ ಮಂಗಳವಾರ(ಜ.2) ನಡೆದ ಸಂಗೊಳ್ಳಿ ರಾಯಣ್ಣ ಉತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಬಾರಿಯ ಉತ್ಸವಕ್ಕೆ ಸರಕಾರ ಒಂದು ಕೋಟಿ ರೂಪಾಯಿ …

Read More »

ಲವ್ ಕ್ರಾಸೀಂಗ್..ಬುದ್ದಿಮಾತು ಹೇಳಿದ ಪಂಚರಿಗೆ ಡ್ಯಾಶೀಂಗ್……!!!

ಬೆಳಗಾವಿ – ಬೆಳಗಾವಿ ತಾಲ್ಲೂಕಿನ ನಾವಗೆ ಗ್ರಾಮದಲ್ಲಿ ನಿನ್ನೆ ರಾತ್ರಿ ಲವ್ ಪ್ರಕರಣಕ್ಕೆ ಸಂಭದಿಸಿದಂತೆ ಗಲಾಟೆ ನಡೆದಿದೆ. ಲವ್ ವಿಚಾರಲ್ಲಿ ಬುದ್ದಿಮಾತು ಹೇಳಿದ ಪಂಚರನ್ನೇ ಟಾರ್ಗೆಟ್ ಮಾಡಿ ಅವರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ, ವಾಹನಗಳನ್ನು ಜಖಂ ಗೊಳಿಸಿದ ಘಟನೆ ನಡೆದಿದೆ. ಸುಮಾರು ಮೂವತ್ತಕ್ಕೂ ಹೆಚ್ಚು ಜನ ಯುವಕರು ಮುಸುಕು ಹಾಕಿ ತಲ್ವಾರ್ ತ್ತು ರಾಡ್ ಹಿಡಿದುಕೊಂಡು ನಾವಗೆ ಗ್ರಾಮದ ಪಂಚರ ಮನೆಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸ್ಥಳಕ್ಕೆ …

Read More »

ಬೆಳಗಾವಿಯಲ್ಲಿ ಶುರುವಾಗಿದೆ, ಓಲ್ಡ್ ಮ್ಯಾನ್ ಮಾರ್ಕೆಟ್….!!

ಬೆಳಗಾವಿ- ಬೆಳಗಾವಿಯ ಕುಂದಾ,ಕರದಂಟು,ಫೇಮಸ್ ಇದೆ.ಇತ್ತೀಚಿನ ದಿನಗಳಲ್ಲಿ ಬೆಳಗಾವಿಯಲ್ಲಿ ಸಿದ್ಧಪಡಿಸಲಾಗುತ್ತಿರುವ ಓಲ್ಡ್ ಮ್ಯಾನ್ ಕೂಡಾ ಫೇಮಸ್ ಆಗುತ್ತಿದೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಓಲ್ಡ್ ಮ್ಯಾನ್ ಮಾರ್ಕೆಟ್ ಶುರುವಾಗಿದೆ. ವರ್ಷದ ಕೊನೆಯ ದಿನ ರಾತ್ರಿ ಹನ್ನೆರಡು ಗಂಟೆಗೆ ಮುಗಿದು ಹೋದ ವರ್ಷದ ಓಲ್ಡ್ ಮ್ಯಾನ್ ದಹನ ಮಾಡಿ ಹೊಸ ವರ್ಷವನ್ನು ಸ್ವಾಗತಿಸುವದು ಸಂಪ್ರದಾಯವೋ ಅಥವಾ ಪಕ್ಕದ ಗೋವಾ ರಾಜ್ಯದಿಂದ ನುಸುಳಿದ ಸಂಸ್ಕೃತಿಯೋ ಗೊತ್ತಿಲ್ಲ.ಆದ್ರೆ ಬೆಳಗಾವಿಯಲ್ಲಿ ಈ ಪದ್ದತಿಯನ್ನು ಅನುಸರಿಸುತ್ತಾರೆ. ಮಕ್ಕಳು ಯುವಕರು ಮದ್ಯರಾತ್ರಿ …

Read More »

ಕಾಡಿನಲ್ಲಿ ವಿದ್ಯಾರ್ಥಿಗಳಿಂದ ಎಡವಟ್ಟು, ನಿನ್ನೆ ರಾತ್ರಿ ಕಣ್ಮರೆ, ಬೆಳಗ್ಗೆ ಪ್ರತ್ಯಕ್ಷ….!!!

ಬೆಳಗಾವಿ-ಚಾರಣಕ್ಕೆ ಹೋಗಿ ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿಯ ಜಿಎಸ್ಎಸ್ ಕಾಲೇಜಿನ ಒಂಬತ್ತು ಜನ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಬೆಳಗಾವಿಯ ಜಿಎಸ್‌ಎಸ್ ಕಾಲೇಜಿನ 9 ವಿದ್ಯಾರ್ಥಿಗಳು ಚಾರಣಕ್ಕೆ ಹೋಗಿ ಶುಕ್ರವಾರ ರಾತ್ರಿ ಕಣ್ಮರೆಯಾಗಿದ್ದರು ಕಾಡಿ ನಲ್ಲಿ ಹಾದಿ ತಪ್ಪಿಸಿಕೊಂಡು ಕಾಡಿನಲ್ಲೇ ಸಿಲುಕಿದ್ದ ಒಂಬತ್ತು ಜನ ವಿಧ್ಯಾರ್ಥಿಗಳು ಶನಿವಾರ ಬೆಳಗ್ಗೆ ಸುರಕ್ಷಿತವಾಗಿ ಪ್ರತ್ಯಕ್ಷರಾಗಿದ್ದಾರೆ. ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಾವಾಣಿ ಫಾಲ್ಸ್ ನೋಡಲು ವಿದ್ಯಾರ್ಥಿಗಳು ಹೋಗಿದ್ದರು.ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ಜಾವಾಣಿ ಫಾಲ್ಸ್ …

Read More »

ಫಲಕದಲ್ಲಿ ಕನ್ನಡದ ತಿಲಕ…ಕರವೇ ಹೋರಾಟಕ್ಕೆ ಕಡ್ಡಾಯದ ಸ್ಪಂದನೆ. ಸಿಎಂ ಗೆ ವಂದನೆ…!!

ನಾಮ ಫಲಕ ಜಾಹಿರಾತು ಫಲಕಗಳಲ್ಲಿ ಕನ್ನಡ ಕಡ್ಡಾಯಕ್ಕೆ ಕರವೇ ನಡೆಸಿದ ಹೋರಾಟಕ್ಕೆ ಸರ್ಕಾರ ಸ್ಪಂದಿಸಿದೆ. ಈ ವಿಚಾರದಲ್ಲಿ ಕನ್ನಡದ ಅನುಷ್ಠಾನಕ್ಕೆ ಸಿಎಂ ಸಿದ್ರಾಮಯ್ಯ ಗಡುವು ನೀಡುವ ಮೂಲಕ ಮುಖ್ಯಮಂತ್ರಿ ಸಿದ್ರಾಮಯ್ಯ ಕನ್ನಡಿಗರ ಮೆಚ್ವುಗೆಗೆ ಪಾತ್ರರಾಗಿದ್ದಾರೆ. ಸಿದ್ರಾಮಯ್ಯ ಕನ್ನಡದ ಸಿಎಂ ಎನಿಸಿಕೊಂಡಿದ್ದಾರೆ. ಬೆಂಗಳೂರು: ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ 2022ರ ಸೆಕ್ಷನ್‌ 17 (6)ಕ್ಕೆ ತಿದ್ದುಪಡಿ ತಂದು 2024ರ ಫೆಬ್ರವರಿ 28ರೊಳಗೆ ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಶೇ. 60 …

Read More »

ಯುವನಿಧಿ” ಫಲಾನುಭವಿಗಳ ನೋಂದಣಿ ಡಿ.26 ರಿಂದ ಆರಂಭ..

ಬೆಳಗಾವಿ, -ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ನಿರುದ್ಯೋಗಿ ಪದವೀಧರರಿಗೆ ನಿರುದ್ಯೋಗ ಭತ್ಯೆ ನೀಡುವ “ಯುವನಿಧಿ” ಯೋಜನೆಯನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ನಿರ್ದೇಶನ ನೀಡಿದರು. ಯುವನಿಧಿ ಅನುಷ್ಠಾನ ಹಿನ್ನೆಲೆಯಲ್ಲಿ ಕೌಶಲ್ಯಾಭಿವೃದ್ದಿ, ಜೀವನೋಪಾಯ ಹಾಗೂ ಉದ್ಯಮಶೀಲತೆ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ವಿಡಿಯೋ ಕಾನ್ಫರೆನ್ಸ್ ಸಭೆಯ ಬಳಿಕ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ತಿಳಿಸಿದರು. ಬೆಳಗಾವಿ …

Read More »