Breaking News

LOCAL NEWS

ರಾಜ್ಯಮಟ್ಟದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ಬೆಳಗಾವಿಯ ಹುಡುಗ…

ದೆಹಲಿಯಲ್ಲಿ ದಿನಾಂಕ 10/05/2022 ರಿಂದ ಪ್ರಾರಂಭವಾಗಿರುವ ಐಪಿಎಲ್ ಮಾದರಿಯ ರಾಷ್ಟ್ರಮಟ್ಟದ ಮೂರನೇ ಆವೃತ್ತಿಯ *”ಡೆಫ್ ಪ್ರೀಮಿಯರ್ ಲೀಗ್-2022″* ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಚೆನ್ನೈ ಬ್ಲಾಸ್ಟರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಬೆಳಗಾವಿ ಜಿಲ್ಲೆಯ ಮದವಾಲ್ ಗ್ರಾಮದ ಯುವ ಪ್ರತಿಭೆ *ನಾಗರಾಜ ಅನಿಲ್ ನಿರವಾಣಿ* ಅವರು ನಮ್ಮ ಜಿಲ್ಲೆಯ ಕೀರ್ತಿಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದು ನಾವೆಲ್ಲ ಹೆಮ್ಮೆ ಪಡುವ ವಿಷಯವಾಗಿದೆ. ಬಾಲ್ಯದಿಂದಲೂ ಕಿವುಡತನವಿದ್ದರೂ ಆ ನ್ಯೂನತೆಯನ್ನು ತನ್ನ ಅಗಾಧವಾದ ಶಕ್ತಿಯನ್ನಾಗಿ ಪರಿವರ್ತಿಸಿ ಸಾಧನೆಗಳ ಶಿಖರವೇರಿರುವ ಇವರು ನಡೆದುಬಂದ …

Read More »

ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಕಿಡಿಗೇಡಿಗಳು….

ಬೆಳಗಾವಿ-ಹಿಜಾಬ್ ಆಯ್ತು,ದೇವಾಲಯಗಳ ಆವರಣದಲ್ಲಿ ಮುಸ್ಲೀಂ ವ್ಯಾಪಾರಿಗಳಿಗೆ ಬಹಿಷ್ಕಾರ,ಹಾಕಿದ್ದಾಯ್ತು, ಆಜಾನ್ ವಿರುದ್ದ ಭಜನೆ ಮಾಡಿದ ಬಳಿಕ ಈಗ ಹೊಸ ವರಸೆ ಶುರುವಾಗಿದೆ. ಗೋಕಾಕ್ ತಾಲ್ಲೂಕಿನ ಪುಟ್ಟ ಹಳ್ಳಿಯೊಂದರಲ್ಲಿ ಮಸೀದಿಯ ಮೇಲೆ ಬೆಳಗಿನ ಜಾವ ಕೇಸರಿ ಧ್ವಜ ಹಾರಿಸುವ ಕೃತ್ಯವೂ ಈಗ ನಡೆದಿದೆ. ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಘಟನೆ ಅರಭಾವಿ ಸಮೀಪದ ಸತ್ತಿಗೇರಿ ಮಡ್ಡಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಗೋಕಾಕ ಸಮೀಪದ ಸತ್ತಿಗೇರಿ ಮಡ್ಡಿ ಗ್ರಾಮ ಇದಾಗಿದ್ದುಮುಂಜಾನೆ ನಮಾಜಗೆ ಬಂದ …

Read More »

ಶರದ ಪವಾರ್, ಎದುರು ಎಂಇಎಸ್ ಪುಂಡರ ಪುಂಡಾಟಿಕೆ….

ಬೆಳಗಾವಿ- ಬೆಳಗಾವಿಯಲ್ಲಿ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಪುಂಡರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಎದುರೇ ಪುಂಡಾಟಿಕೆ ಪ್ರದರ್ಶಿಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಮರಾಠಾ ಬ್ಯಾಂಕಿನಲ್ಲಿ ನಡೆದ ಕಾರ್ಯಕ್ರಮದಲ್ಲಿ,ಶರದ್ ಪವಾರ್ ಭಾಷಣ ಶುರುವಾಗುತ್ತಿದ್ದಂತೆ ಎಂಇಎಸ್ ಪುಂಡರು ನಾಡದ್ರೋಹ ಘೋಷಣೆ ಕೂಗಿದ್ದಾರೆ.ಮರಾಠ ಕೋ ಆಪರೇಟಿವ್ ಬ್ಯಾಂಕ್ ಅಮೃತ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿರುವ ಶರದ್ ಪವಾರ್, ಎಂಇಎಸ್ ಪುಂಡರ ಪೂರ್ವನಿಯೋಜಿತ ಘೋಷಣೆಗಳಿಂದ ತಬ್ಬಿಬ್ಬಾದರು. ಶರದ್ ಪವಾರ್‌ …

Read More »

ದ್ವನಿವರ್ದಕಗಳ ನಿಯಂತ್ರಣದ ಕುರಿತು ಸಿಎಂ ನೇತ್ರತ್ವದಲ್ಲಿ ಉನ್ನತ ಮಟ್ಟದ ಸಭೆ…

ಬೆಂಗಳೂರು: ಸುಪ್ರೀಂಕೋರ್ಟ್‌ ಆದೇಶದಂತೆ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆ ನಿಯಂತ್ರಿಸಲು ಹೊಸ ಆದೇಶ ಹೊರಡಿಸಲು ಸರ್ಕಾರ ನಿರ್ಧರಿಸಿದೆ. ಶೀಘ್ರದಲ್ಲಿ ಪರಿಷ್ಕೃತ ಆದೇಶ ಹೊರಬೀಳಲಿದ್ದು, ಆ ಬಳಿಕ ನಿಗದಿತ ಮಿತಿಗಿಂತ ಹೆಚ್ಚಿನ ಧ್ವನಿ ಹೊರಡಿಸುವ ಧ್ವನಿವರ್ಧಕಗಳನ್ನು ತೆರವುಗೊಳಿಸುವ ಸಾಧ್ಯತೆ ಇದೆ. ಮಸೀದಿಗಳಲ್ಲಿ ಆಜಾನ್‌ ಕೂಗುವ ಧ್ವನಿವರ್ಧಕಗಳನ್ನು ತೆರವು ಮಾಡಬೇಕು ಎಂದು ಆಗ್ರಹಿಸಿ ಶ್ರೀರಾಮ ಸೇನೆ ಸೇರಿದಂತೆ ಹಿಂದುತ್ವ ಪರ ಸಂಘಟನೆಗಳು ಅಭಿಯಾನ ನಡೆಸಲು ಮುಂದಾಗಿವೆ. ಆಜಾನ್‌ಗೆ ಪ್ರತಿಯಾಗಿ ದೇವಸ್ಥಾನಗಳಲ್ಲಿ ಧ್ವನಿವರ್ಧಕಗಳ ಮೂಲಕ ಹನುಮಾನ್‌ ಚಾಲೀಸಾ …

Read More »

ಸಾಲದ ಎಲ್ಲ ಕಂತುಗಳನ್ನು ಪಾವತಿ ಮಾಡಿದ್ದೇವೆ- ಚನ್ನರಾಜ್

ಬೆಳಗಾವಿ-ಹರ್ಷಾ ಶುಗರ್ಸ್ ಸ್ಥಾಪನೆ ಮಾಡುವಾಗ ಅಪೆಕ್ಸ್ ಸೇರಿದಂತೆ ವಿವಿಧ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದು ನಿಜ,ಆದ್ರೆ ಸಾಲದ ಕಂತುಗಳನ್ನು ನಿಗದಿತ ಸಮಯದಲ್ಲಿ ಪಾವತಿ ಮಾಡಿದ್ದೇವೆ ಎಂದು ಹರ್ಷಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ,ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ್ ಹಟ್ಟಿಹೊಳಿ ಹೇಳಿದ್ದಾರೆ. ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಲಕ್ಷ್ಮೀ ಹೆಬ್ಬಾಳಕರ ಅವರು ಅಪೆಕ್ಸ್ ಬ್ಯಾಂಕಿನಿಂದ ಸಾಲ. ಪಡೆದಿರುವ ವಿಚಾರವನ್ನು ಮಾದ್ಯಮಗಳ ಎದುರು ಹೇಳಿಕೆ ನೀಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಚನ್ನರಾಜ್ …

Read More »

ನಾನೊಬ್ಬನೆ ಸರ್ಕಾರದ ತಂದಿಲ್ಲ – ಸಚಿವ ಸೋಮಶೇಖರ್

ಬೆಳಗಾವಿ-ಸಚಿವ ಸಂಪುಟ ಮುಖ್ಯಮಂತ್ರಿ ಪರಮಾಧಿಕಾರ,ಸಿಎಂ ದೆಹಲಿಗೆ ಹೋಗಿದ್ದಾರೆ, ಕೆಲ ಕೇಂದ್ರ ಸಚಿವರನ್ನ ಭೇಟಿ ಮಾಡಲಿದ್ದಾರೆ,ಯಾರನ್ನ ತಗೊತಾರೇ ಯಾರನ್ನ ಕೈ ಬಿಡ್ತಾರೆ ಅಂತಾ ಮುಖ್ಯಮಂತ್ರಿ ಅವರನ್ನೇ ಕೇಳಬೇಕು ಎಂದುಬೆಳಗಾವಿಯಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆಯ ವಿಚಾರ, ಸಿಎಂ, ರಾಷ್ಟ್ರೀಯ ನಾಯಕರಿಗೆ ಗೊತ್ತು,ಸಂಪುಟದ ಬಗ್ಗೆ ನಮ್ಮ ಮಂತ್ರಿಗಳಿಗೂ ಗೊತ್ತಾಗುವುದಿಲ್ಲ, ಯಾರಿಗೂ ಗೊತ್ತಾಗುವುದಿಲ್ಲರಮೇಶ್ ಜಾರಕಿಹೊಳಿ‌ ಮಂತ್ರಿ ಆಗೋ ಬಗ್ಗೆ ನಾನು ಮುಖ್ಯಮಂತ್ರಿ ಕೇಳಿ …

Read More »

ಸಾಹುಕಾರ್ ವಿರುದ್ಧ ಡಿಕೆಶಿ ಆರೋಪದ ಬೆನ್ನಲ್ಲೇ ಬೆಳಗಾವಿಗೆ ಸಚಿವ ಸೋಮಶೇಖರ್ ದೌಡು…

ಬೆಳಗಾವಿ-ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಅಪೆಕ್ಸ್ ಬ್ಯಾಂಕಿನ ಕೋಟ್ಯಾಂತರ ರೂ ಗುಳುಂ ಮಾಡಿದೆ,ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪ ಮಾಡಿದ ಬೆನ್ನಲ್ಲಿಯೇ ರಾಜ್ಯ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಇಂದು ಮಂಗಳವಾರ ಬೆಳಗಾವಿಗೆ ಆಗಮಿಸುವ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಬೆಳಗಾವಿಯ ಡಿಸಿಸಿ ಬ್ಯಾಂಕಿನಲ್ಲಿ ಪ್ರಗತಿ ಪರಶೀಲನಾ ಸಭೆ ನಡೆಸಲಿದ್ದು,ಬೆಳಗಾವಿ ಡಿಸಿಸಿ ಬ್ಯಾಂಕ್ ಜಿಲ್ಲೆಯ ಯಾವ.ಯಾವ …

Read More »

ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!!

ನಾಳೆ ನಾಡಿದ್ದು,ಬೆಳಗಾವಿಯಲ್ಲಿ ಶರದ್ (ಪ)ವಾರ್…..!!!! ಬೆಳಗಾವಿ- ರಾಷ್ಟ್ರೀಯ ನಾಯಕ,ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ನಾಳೆ ಮಂಗಳವಾರ,ಮತ್ತು ಬುಧವಾರ,ಎರಡು ದಿನ ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯಲಿರುವ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನಾಳೆ ಮಂಗಳವಾರ,ಚಿಕ್ಕೋಡಿಯ ಅಂಕಲಿಯಲ್ಲಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಪ್ರತಿಮೆ ಅನಾವರಣ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವರು ಬುಧವಾರ, ಬೆಳಗಾವಿಯ ಮರಾಠಾ ಬ್ಯಾಂಕ್,ಮತ್ತು ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಸಮೀತಿ ಜ್ಯೋತಿ ಕಾಲೇಜಿನ ಕಾರ್ಯಕ್ರಮದಲ್ಲಿ ಶರದ್ ಪವಾರ್ ಭಾಗವಹಿಸಲಿದ್ದಾರೆ. ಕೆಎಲ್ಇ …

Read More »

ಬೆಳಗಾವಿಯಲ್ಲಿ ಶಾಸ್ತ್ರೀ ಕುಟುಂಬದವರಿಗೆ ಅಪರೂಪದ ಗೌರವ,ಸಮ್ಮಾನ…!!

ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ ಬೆಳೆಯಲಿ- ಎಲ್.ಎಸ್ ಶಾಸ್ತೀ ಬೆಳಗಾವಿ- ಕಾಲಕ್ಕೆ ತಕ್ಕಂತೆ ಪತ್ರಿಕೋದ್ಯಮದ ಶೈಲಿಯೂ ಬದಲಾಗಿದೆ.ಹೊಸ.ಹೊಸ ತಂತ್ರಜ್ಞಾನ ಕಾರ್ಯಕ್ಷೇತ್ರದ ಭಾರವನ್ನು ಇಳಿಸಿದ್ದು ಇಂದಿನ ಯುವ ಪತ್ರಕರ್ತರಲ್ಲಿ ಅದ್ಯಯನದ ಹವ್ಯಾಸ,ಹಲವಾರು ವಿಚಾರಗಳ ಬಗ್ಗೆ ವಿಷಯ ಸಂಗ್ರಹಣೆ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳುವದು ಅತ್ಯಗತ್ಯವಾಗಿದೆ.ಎಂದು ಹಿರಿಯ ಪತ್ರಕರ್ತ ಎಲ್.ಎಸ್ ಶಾಸ್ತೀ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ ಹಾಗೂ ಅವರ ತಂಡ,ಇಂದು ಭಾನುವಾರದ ಬಾಂಧವ್ಯ ಕಾರ್ಯಕ್ರಮದ …

Read More »

ನಾನು ಯಾವುದೇ ಕಾಂಟರ್ವರ್ಸಿ ವಿಚಾರದ ಬಗ್ಗೆ ಹೇಳಿಕೆ ನೀಡಲ್ಲ.

ಬೆಳಗಾವಿ-ರಮೇಶ್ ಜಾರಕಿಹೊಳಿ‌ ಒಡೆತನದ ಸಕ್ಕರೆ ಕಾರ್ಖಾನೆ ಸಾಲ ಮರುಪಾವತಿ ಮಾಡಿಲ್ಲ ಎಂಬ ಆರೋಪ ವಿಚಾರವಾಗಿ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆ ನೀಡಿದ್ದು,ಯಾರ ಮಾಲೀಕತ್ವದ ಕಾರ್ಖಾನೆ ಎಂದು ಚಿಂತನೆ ಮಾಡದೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತೇನೆ.ಎಂದು ಸಚಿವರು ಹೇಳಿದರು. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಅಪೆಕ್ಸ್ ಬ್ಯಾಂಕ್, ಡಿಸಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರಬಹುದು ಅದು ಅವರ ಇಲಾಖೆಗೆ ಸಂಬಂಧಿಸಿದು. ಸಕ್ಕರೆ ಇಲಾಖೆಗೆ ಸಂಬಂಧಿಸಿದ್ದಿದ್ರೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ.ಯಾರು …

Read More »

ಬೆಳಿಗ್ಗೆ ಆಜಾನ್ ವಿರುದ್ದ ಬೆಳಗಾವಿಯ ಹತ್ತು ಮಂದಿರಗಳಲ್ಲಿ ಸುಪ್ರಭಾತ

ಬೆಳಗಾವಿ-ಮಸೀದಿಗಳಲ್ಲಿ ದಿನದ ಐದು ಬಾರಿ ಹೇಳುವ ಆಜಾನ್ ವಿರುದ್ಧ ಸಮರ ಸಾರಿರುವ ಹಿಂದೂಪರ ಸಂಘಟನೆಗಳು,ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಆಜಾನ್ ಗೆ ಪ್ರತಿಯಾಗಿ ಮಂದಿರಗಳಲ್ಲಿ ಸುಪ್ರಭಾತ,ಶಿವ ಭಜನೆ,ಹನುಮಾನ ಚಾಲೀಸ್ ಬಿತ್ತರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಬೆಳಗಾವಿಯ ಮಸೀದಿ ಸಮೀಪದಲ್ಲಿರುವ ಹತ್ತು ಮಂದಿರಗಳನ್ನು ಆಯ್ಕೆ ಮಾಡಿಕೊಂಡಿರುವ ಹಿಂದೂಪರ ಘಟನೆಗಳು ಸೋಮವಾರ ಬೆಳಗಿನ ಜಾವ ಐದು ಘಂಟೆಗೆ ಬೆಳಗಾವಿಯ ಮಂದಿರಗಳಲ್ಲಿ ಸುಪ್ರಭಾತ,ಭಜನೆ,ಮತ್ತು ಹಿಂದೂ ಧಾರ್ಮಿಕ ಸಂಗೀತ ಮೊಳಗಲಿದೆ. ಬೆಳಗಾವಿ,ಬೆಂಗಳೂರು,ಮೈಸೂರು …

Read More »

ಮಶೀನ್ ಚಕ್ರ ತಲೆಗೆ ಅಪ್ಪಳಿಸಿ ಕಾರ್ಮಿಕನ ಸಾವು

ಬೆಳಗಾವಿ: ಗ್ರೈಂಡಿಂಗ್ ಮಷಿನ್ ಚಕ್ರ ತಲೆಗೆ ಬಡಿದು ಗಾಯಗೊಂಡಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ಮಚ್ಛೆ ಗ್ರಾಮದ ಫ್ಯಾಕ್ಟರಿಯಲ್ಲಿ ಶನಿವಾರ ಸಂಭವಿಸಿದೆ. ಅದೇ ಗ್ರಾಮದ ಸಂಭಾಜಿ ಗಲ್ಲಿಯ ಲಗಮಣ್ಣಾ ರುದ್ರಪ್ಪ ನಾಯ್ಕ ಮೃತರು. ಅವರ ಮಷೀನ್ ಗೆ ಚಕ್ರ ಅಳವಡಿಸುವಾಗ ಚಕ್ರ ತಲೆಗೆ ಬಡಿದು ಮೃತಪಟಟ್ಟಿದ್ದಾರೆಂದು ಗ್ರಾಮೀಣ ಠಾಣೆ ಪೊಲೀಸರು ಬೆಳಗಾವಿ ಸುದ್ದಿ ಡಾಟ್ ಕಾಂಗೆ ತಿಳಿಸಿದ್ದಾರೆ.

Read More »

2500 ಕೋಟಿ ಯಾರು ಕೇಳಿದ್ರು, ಯಾರು ಕಳುಹಿಸಿದ್ರು ಎನ್ನುವದನ್ನು ತನಿಖೆ ಮಾಡಲಿ- ಸಿದ್ರಾಮಯ್ಯ…

ಬೆಳಗಾವಿ: ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕಾಗಿ 2,500 ಕೋಟಿ ರೂ. ಕೇಳಿದವರಾರು ? ಕಳುಹಿಸಿದವರಾರು ಎನ್ನುವುದನ್ನು ತನಿಖೆ ನಡೆಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮುಖ್ಯಮಂತ್ರಿ ಅಥವಾ ಮಂತ್ರಿ ‌ಸ್ಥಾನದ ಆಕಾಂಕ್ಷಿಯಾಗಿರುವ ಯತ್ನಾಳ್ ಅವರ ಹೇಳಿಕೆಯನ್ನು ಹಗುರವಾಗಿ ಪರಿಗಣಿಸಬಾರದು ಎಂದರು. ಯತ್ನಾಳ್ ಕೇಂದ್ರದ ಮಾಜಿ ಸಚಿವರಾಗಿದ್ದವರು. ಅಂಥವರೇ 2,500 ಕೋಟಿ ರೂ. ಕೇಳಿದ್ದರು ಎಂದು …

Read More »

ನೀ ಹಿಂಗ್ ನೋಡಬ್ಯಾಡ ನನ್ನ…ತಿರುಗಿ ನಾ ಹೆಂಗ್ ನೋಡಲಿ ನಿನ್ನ…!!!

ಸರ್ಕಾರ ನಡೆಯುವದು ಅಬಕಾರಿ ಆದಾಯದಿಂದ ಎನ್ನುವದು ಜನಸಾಮಾನ್ಯರ ಅಭಿಪ್ರಾಯ, ಆದ್ರೆ ಸರ್ಕಾರ ಬಾರ್ ಮತ್ತು ವೈನ್ ಅಂಗಡಿ ಮಾಲೀಕರ ಮಾತೂ ಕೇಳುತ್ತಿಲ್ಲ,ಆಕ್ರಮ ಮದ್ಯ ಮಾರಾಟ ತಡೆಯಲು ಸರ್ಕಾರ ಮದ್ಯ ಖರೀಧಿಯ ವಿಚಾರದಲ್ಲಿ ಹೊಸ ನಿಯಮ ಜಾರಿಗೆ ತಂದಿದೆ,ಆದ್ರೆ ಸರ್ಕಾರದ ಹೊಸ ನಿಯಮ ಬಾರ್ ಮತ್ತು ವೈನ್ ಮಾರ್ಚಂಟ್ಸ್ ಮಾಲೀಕರಿಗೆ ಮಾರಕ ಆಗಿದೆ. ಬೆಂಗಳೂರು-ಕೆಎಸ್‍ಬಿಸಿಎಲ್ ಹೊಸ ನೀತಿಯಿಂದ ಸಂಕಷ್ಟ ಎದುರಾಗಿದೆ ಎಂದು ಆರೋಪಿಸಿ ಮದ್ಯ ವರ್ತಕರು ಇಂದಿನಿಂದ ಮೇ 19ರ ವರೆಗೆ …

Read More »

ಕುಂತಿನಾಥ ಕಲಮನಿ ಅವರಿಗೆ ಪ್ರಭಾತಕಾರ ವಾ.ರಾ.ಕೋಠಾರಿ ಪುರಸ್ಕಾರ

ಬೆಳಗಾವಿ 27 : ಪ್ರತಿ ಮೂರು ವರ್ಷಕ್ಕೊಮ್ಮೆ ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ನೀಡಲಾಗುವ ಪ್ರತಿಷ್ಠಿತ ಪುರಸ್ಕಾರವಾದ “ಪ್ರಭಾತಕಾರ ವಾ.ರಾ,ಕೋಠಾರಿ ಆದರ್ಶ ಪತ್ರಕರ್ತ ಪುರಸ್ಕಾರ” ಬೆಳಗಾವಿಯ ಹಿರಿಯ ಪತ್ರಕರ್ತರಾದ ಹಾಗೂ ಹಳ್ಳಿಯ ಸಂದೇಶ ಕನ್ನಡ ದಿನಪತ್ರಿಕೆ ಸಂಪಾದಕರಾದ ಕುಂತಿನಾಥ ಕಲಮನಿ ಇವರಿಗೆ ಲಭಿಸಿದೆ. ದಕ್ಷಿಣ ಭಾರತ ಜೈನ ಸಭೆಯ ವತಿಯಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ತ್ರೈವಾರ್ಷಿಕ ಅಧಿವೇಶನ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನಿಯರನ್ನು ಗುರುತಿಸಿ ಅವರಿಗೆ …

Read More »