Breaking News

LOCAL NEWS

ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳಿದ ಏಕೈಕ ಜಿಲ್ಲಾಧಿಕಾರಿ….

ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಮಾಡಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ,ಬಹಿರಂಗವಾಗಿ ಹೇಳಿದ ಮೊದಲ ಜಿಲ್ಲಾಧಿಕಾರಿ ಹಿರೇಮಠ ಇದರಲ್ಲಿ ಎರಡು ಮಾತಿಲ್ಲ. ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಬೆಳಗಾವಿಯ ಎಲ್ಲ ಕನ್ನಡ ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಎಂ‌.ಜಿ ಹಿರೇಮಠ ಅವರು ಈಬಾರಿ ರಾಜ್ಯೋತ್ಸವದ ದಿನ ಎಂಈಎಸ್ ಗೆ ಕಪ್ಪು ದಿನ ಆಚರಿಸಲು ಅನುಮತಿ ಕೊಡೋದಿಲ್ಲ ಎಂದು ನೇರವಾಗಿ ಹೇಳುವ ಮೂಲಕ ಗಡಿನಾಡಿನ ಹೋರಾಟದಲ್ಲಿ ಹೊಸ ದಾಖಲೆ ಮಾಡಿದ್ದಾರೆ. ಬೆಳಗಾವಿಯಲ್ಲಿ …

Read More »

ದಸರಾ ಮುಗಿದ ಬಳಿಕ,ಬೆಳಗಾವಿ ಮೇಯರ್ ಇಲೆಕ್ಷನ್…

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಆಗಬೇಕು ಎಂದು ಪಟ್ಟು ಹಿಡಿದು ಚುನಾವಣೆ ಮಾಡಿಸಿದ್ದೇವೆ.35 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ.ಬೆಳಗಾವಿ ಪಾಲಿಕೆ ಈಗ ನಮ್ಮ ಹಿಡಿತದಲ್ಲಿದ್ದು,ದಸರಾ ಹಬ್ಬ ಮುಗಿದ ಬಳಿಕ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಶಾಸಕ ಅನೀಲ ಬೆನಕ ಹೇಳಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಯಾರದೋ ಕಂಟ್ರೋಲ್ ಇರೋದು ಬೇಡ,ನಗರಸೇವಕರು ತಮ್ಮ,ತಮ್ಮ ವಾರ್ಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ.ಈ ವಿಚಾರದಲ್ಲಿ …

Read More »

ಈ ಬಾರಿ ಕರಾಳ ದಿನಾಚರಣೆಗೆ ಪರ್ಮಿಶನ್ ಕೊಡೋಲ್ಲ- ಡಿಸಿ

ಬೆಳಗಾವಿ, -: ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡುವುದಿಲ್ಲ. ಅದೇ ರೀತಿ ಸರಕಾರದ ಮಾರ್ಗಸೂಚಿ ಹಾಗೂ ಕಾನೂನು ಚೌಕಟ್ಟಿನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಅ.12) ನಡೆದ ಕರ್ನಾಟಕ ರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕರಾಳ ದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ. ರಾಜ್ಯೋತ್ಸವ …

Read More »

34 ವರ್ಷದ ಹಿಂದೆ ಬಡಾಲ ಅಂಕಲಗಿಯಲ್ಲಿ ಮತ್ತೊಂದು ದುರಂತ ನಡೆದಿತ್ತು…!!

ಬಡಾಲ ಅಂಕಲಗಿ:34ವರ್ಷಗಳ ಹಿಂದೆ ಈ ಗ್ರಾಮ ಬೇರೊಂದು ದುರಂತದಿಂದಾಗಿ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು:ಒಂದೇ ಕುಟುಂಬದ ಹನ್ನೊಂದು ಜನರನ್ನು ಸಜೀವವಾಗಿ ದಹಿಸಲಾಗಿತ್ತು! ಮನೆಯೊಂದು ಕುಸಿದು ಒಂದೇ ಕುಟುಂಬದ ಆರು ಜನರು ದಾರುಣವಾಗಿ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮವು ಈಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆದ ಈ ಗ್ರಾಮದ ದುರ್ಘಟನೆ ಕಂಡು ಮರಗದವರಿಲ್ಲ. 34ವರ್ಷಗಳ ಹಿಂದೆ 1987 ರ ಜನೇವರಿಯಲ್ಲಿ ಇದೇ ಗ್ರಾಮದಲ್ಲಿ …

Read More »

ಅರ್ಬಾಜ್ ಕೊಲೆಗೆ ಸುಪಾರಿ,ಆರೋಪಿಯಾದ ಬೇಪಾರಿ….!!

ಬೆಳಗಾವಿ(8)- ಅನ್ಯ ಕೋಮಿನ ಯುವಕನೊಂದಿಗೆ ಮಗಳು ಪ್ರೀತಿ ಮಾಡಿದ ಕಾರಣ ಯುವಕನ ಹತ್ಯೆಗೆ ಸುಫಾರಿ‌ ಕೊಟ್ಟ ಯುವತಿಯ ಪೋಷಕರು ಅಂದರ್.ಆಗಿದ್ದಾರೆ. ಖಾನಾಪುರ ಪಟ್ಟಣದ ಅರ್ಬಾಜ್ ಎಂಬ ಯುವಕನ ಬರ್ಬರ್ ಕೊಲೆ ಪ್ರಜರಣ ರಹಸ್ಯವನ್ನು ಬೆಳಗಾವಿ ಜಿಲ್ಲಾ ಪೊಲೀಸರು. ಭೇದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ‌ಖಾನಾಪುರ ಪಟ್ಟಣದಲ್ಲಿ ಸೆಪ್ಟೆಂಬರ್ 28 ರಂದು ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ.ಅರ್ಬಾಜ್ ಹಾಗೂ ಶ್ವೇತಾ ಇಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. …

Read More »

ಶ್ರದ್ಧಾ ಶೆಟ್ಟರ್ ನಡೆ,ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಡೆ….!!

ಬೆಳಗಾವಿ-ರಾಜಕಾಣದಲ್ಲಿ ಯಾರು ? ಯಾವತ್ತು ಝಿರೋ ಆಗ್ತಾರೋ ? ಕ್ಷಣಾರ್ಧದಲ್ಲಿ ಯಾರು ಹಿರೋ ಆಗ್ತಾರೋ ಅನ್ನೋದನ್ನು ಉಹೆ ಮಾಡಲೂ ಸಾದ್ಯವಿಲ್ಲ.ಇಲ್ಲಿ ನಡೆಯುವ ಬೆಳವಣಿಗೆಗಳು,ನಿರ್ಣಯಗಳು ತರ್ಕಕ್ಕೆ ನಿಲುಕಲು ಸಾಧ್ಯವೇ ಇಲ್ಲ. ಸುರೇಶ ಅಂಗಡಿ ಅವರ ಅಗಲಿಕೆಯ ನಂತರ ಅವರ ಪುತ್ರಿ ಶ್ರದ್ಧಾ ಅವರ ವಾರಸುದಾರ ಆಗ್ತಾರೆ ಅನ್ನೋದು ಎಲ್ಲರ ಲೆಕ್ಕಾಚಾರವಿತ್ತು ಆದ್ರೆ ನಿರ್ಧಾರ ಆಗಿದ್ದೆ ಬೇರೆ,ದಿ‌ಸುರೇಶ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಸಿಕ್ತು ಉಪ ಚುನಾವಣೆಯಲ್ಲಿ ಅವರೇ …

Read More »

ದುರಂತ ನಡೆಯುವ ಮುನ್ನ ಜೆಸಿಬಿ ಬಂದು ಹೋಗಿತ್ತು….!!

ಬೀಮಪ್ಪ ಖನಗಾಂವಿ ಕುಟುಂಬ ವಾಸವಾಗಿದ್ದ ಶೆಡ್ ಇದು…‌‌‌ ಬೆಳಗಾವಿ- ವಿಧಿ ಹಿಗೂ ಆಟವಾಡುತ್ತಾ ಎಂದು ಊಹೆ ಮಾಡಲೂ ಸಾದ್ಯವಿಲ್ಲ ನಿನ್ನೆ ಸಂಜೆ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ನಡೆದ ಮನೆ ಕುಸಿದ ದುರಂತಕ್ಕೂ ಮುನ್ನ ನಡೆದ ಘಟನಾವಳಿಗಳನ್ನು ಗಮನಿಸಿದ್ರೆ ಅಯ್ಯೋ ದೇವಾ ನೀನು ಹೀಗೆ ಮಾಡಬಾರದಾಗಿತ್ತು ಎನ್ನುವ ಕೂಗು ಮನದಾಳದಿಂದ ಹೊರಬರುವದರಲ್ಲಿ ಸಂದೇಹವೇ ಇಲ್ಲ‌. ರಣ ಭಯಂಕರ ಮಳೆಯಿಂದಾಗಿ ಮನೆ ಕುಸಿದು 7 ಜನ ಬಲಿಯಾದ ಘಟನೆ ಬಡಾಲ …

Read More »

ಬಡಾಲ ಅಂಕಲಗಿ ದುರಂತ. ಒಟ್ಟು 7 ಜನರ ಸಾವು

ಬೆಳಗಾವಿ- ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆ ಕುಸಿದು ಒಂದೇ ಕುಟುಂಬದ ಒಟ್ಟು 7 ಜನರು ಸಾವನ್ನೊಪ್ಪಿದ್ದಾರೆ. ಮಳೆಯಂದಾಗಿ ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನಪಪ್ಪಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಇಬ್ಬರು ಮರಣ ಹೊಂದಿದ್ದಾರೆ. ಬಡಾಲ ಅಂಕಲಗಿ ಗ್ರಾಮದ ಒಂದೇ ಕುಟುಂಬದ ಅರ್ಜುನ ಹನಮಂತ ಖನಗಾಂವಿ (48), ಪತ್ನಿ ಸತ್ಯವ್ವ ಅರ್ಜುನ ಖನಗಾಂವಿ (45), ಪುತ್ರಿಯರಾದ …

Read More »

ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸಾವು

ಬೆಳಗಾವಿ- ಮನೆ ಕುಸಿದು ಒಂದೇ ಕುಟುಂಬದ ಐದು ಜನ ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆ ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ನಡೆದಿದೆ. ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಬಡಾಲ ಅಂಕಲಗಿ ಗ್ರಾಮದ ಭೀಮಪ್ಪಾ ಖನಗಾಂವಿ ಎಂಬುವವರಿಗೆ ಸೇರಿದ ಮನೆ ಕುಸಿದು ಸ್ಥಳದಲ್ಲೇ ಐದು ಜನ ಸಾವನ್ನೊಪ್ಪಿದ್ದು ಮೂರು ಜನ ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಸ್ಥಳಕ್ಕೆ ಹಿರೇಬಾಗೇವಾಡಿ ಪೋಲೀಸರು ಧಾವಿಸಿದ್ದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.ಈಗ ಸದ್ಯಕ್ಕೆ ಐದು …

Read More »

ಹಿರಿಯ ಸಂಪಾದಕ ,ಕಲ್ಯಾಣರಾವ್ ಮುಚಳಂಬಿ ವಿಧಿವಶ

ಬೆಳಗಾವಿ- ಹಸಿರು ಕ್ರಾಂತಿ ದಿನಪತ್ರಿಕೆಯ ಸಂಪಾದಕ,ಹಿರಿಯ ರೈತ ಹೋರಾಟಗಾರ, ಕಲ್ಯಾಣರಾವ್ ಮುಚಳಂಬಿ(72) ಅವರು ಇಂದು ಸಂಜೆ ವಿಧಿವಶ ರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್‌‌ನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.ಅಕ್ಟೋಬರ್ ,2 ರಂದು ಜನ್ಮ ದಿನ ಆಚರಿಸಿಕೊಂಡು ,ಸಾವಳಗಿ ಶಿವಲಿಂಗೇಶ್ವರ ಮಠಕ್ಕೆ ಪಾದಯಾತ್ರೆಗೆ ತೆರಳಿದ್ದರು. ಮಠಕ್ಕೆ ಪಾದಯಾತ್ರೆ ಮೂಲಕ ಬರೋದಾಗಿ ಹರಕೆ ಹೊತ್ತಿದ್ದರು ಅಕ್ಟೋಬರ್ 3ರಂದು ಬೆಳಗಾವಿಯಿಂದ ಸಾವಳಗಿಗೆ ಪಾದಯಾತ್ರೆಗೆ ತೆರಳಿದ್ದರು.ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಮಠಕ್ಕೆ ತೆರಳುವಾಗ,ಮಾರ್ಗಮಧ್ಯೆ …

Read More »

ಎಲ್ಲದಕ್ಕೂ ಎಸ್..ಎಸ್..ಎನ್ನುತ್ತಲೇ ಅಭಿವೃದ್ಧಿಯ ಬಾಸ್ ಆಗಿರುವ ಅನೀಲ ಬೆನಕೆ….!!!

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಸರಳ ವ್ಯಕ್ತಿತ್ವದ ನಾಯಕರು.ಅವರ ಬಳಿ ಯಾರೇ ಹೋದರೂ ವಿನಯಯದಿಂದ ಮಾತನಾಡಿ ಸರ್ವರ ಸಮಸ್ಯೆ ಆಲಿಸುವ ಅವರು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಸದ್ದಿಲ್ಲದೇ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬೆಳಗಾವಿಯ ರೇಲ್ವೇ ನಿಲ್ಧಾಣದ ಎದುರಲ್ಲಿದ್ದ ಬಸ್ ನಿಲ್ದಾಣ ಅತ್ಯಂತ ಹಳೆಯದಾಗಿತ್ತು,,ಈ ನಿಲ್ಧಾಣವನ್ನು ಬೆಳಗಾವಿಯ ಜನ ಗೋವಾ ನಿಲ್ಧಾಣ ಎಂದು ಕರೆಯುತ್ತಿದ್ದರು,ಬೆಳಗಾವಿಯಿಂದ ಗೋವಾಕ್ಕೆ ಹೋಗುವ ಬಸ್ ಗಳು ಈ ನಿಲ್ಧಾಣಕ್ಕೆ ಬಂದೇ ಹೋಗುತ್ತವೆ.ಗೋವಾದಿಂದ …

Read More »

ಲಕ್ಷ್ಮೀ ಹೆಬ್ಬಾಳ್ಕರ್‌ನ್ನು ಆನಂದಿಬಾಯಿ ಪೇಶ್ವೆಗೆ ಹೋಲಿಸಿದ ಸಂಜಯ್ ಪಾಟೀಲ್

ಬೆಳಗಾವಿ- ಮಾಜಿ ಶಾಸಕ ಸಂಜಯ ಪಾಟೀಲ ಮತ್ತು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನಡುವಿನ ವಾಕ್ ಸಮರ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ,ಯಾಕಂದ್ರೆ,ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮತ್ತೆ ಮಾಜಿ ಶಾಸಕ ಸಂಜಯ್ ಪಾಟೀಲ್ ವಾಗ್ದಾಳಿ ನಡೆಸಿದ್ದು ಲಕ್ಷ್ಮೀ ಹೆಬ್ಬಾಳ್ಕರ್‌ನ್ನು ಆನಂದಿಬಾಯಿ ಪೇಶ್ವೆಗೆ ಹೋಲಿಸಿ ಟೀಕೆ ಮಾಡಿದ್ದಾರೆ. ರೋಡ್ ಪಾಲಿಟಿಕ್ಸ್ ಆಯ್ತು ನೈಟ್ ಪಾಲಿಟಿಕ್ಸ್ ಆಯ್ತು ಈಗ ಭಾಷಾ ಪಾಲಿಟಿಕ್ಸ್ ಶುರುವಾಗಿದ್ದು,ಸಂಜಯ್ ಪಾಟೀಲ್ ಮರಾಠಾ ಸಮುದಾಯಕ್ಕೆ ಅಪಮಾನ‌ ಮಾಡಿದ್ದಾರೆ ಎಂದು ಹೆಬ್ಬಾಳಕರ ಬೆಂಬಲಿಗರು …

Read More »

ಲಕ್ಷ್ಮೀ ಹೆಬ್ಬಾಳಕರ ಕ್ಷೇತ್ರದಲ್ಲಿ ಮುಂದುವರೆದ ರೋಡ್ ಪಾಲಿಟೀಕ್ಸ್…!!

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ನಡೆಯುತ್ತಿರುವ ಆರೋಪ,ಪ್ರತ್ಯಾರೋಪ,ವಾಕ್ಸಮರ ನೋಡಿದ್ರೆ ಈ ಕ್ಷೇತ್ರದಲ್ಲಿ ಇವತ್ತೇ ಚುನಾವಣೆ ಘೋಷಣೆ ಆದಂತೆ ಕಾಣುತ್ತಿದೆ. ಮಾಜಿ ಶಾಸಕ ಸಂಜಯ ಪಾಟೀಲ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ರು,ಇದಕ್ಕೆ ಲಕ್ಷ್ಮೀ ಹೆಬ್ಬಾಳಕರ ಅಭಿಮಾನಿಗಳು ತಿರಗೇಟು ನೀಡಿದ್ರು,ಈ ವಾಕ್ಸಮರ ಮುಗಿಯುತ್ತಿದ್ದಂತೆಯೇ ಈಗ ರೋಡ್ ಪಾಲಿಟೀಕ್ಸ್ ಶುರುವಾಗಿದೆ. ಬಿಜೆಪಿ ಯುವ ಮುಖಂಡ ಧನಂಜಯ ಜಾಧವ ನೇತ್ರತ್ವದಲ್ಲಿ ಬಿಜೆಪಿ ಕಾರ್ಯಕರ್ತರು …

Read More »

ಅಮಿತಾಬ್ ಬಚ್ಚನ್ ಅಂದು ಖಾನಾಪೂರದ ಅಸೋಗಾಕ್ಕೆ ಬಂದಿದ್ದು “ಅಭಿಮಾನ”

ಬೆಳಗಾವಿ-ವಿಶ್ವ ವಿಖ್ಯಾತ ಹಿಂದಿ ಚಿತ್ರನಟ ಅಮಿತಾಬ್ ಬಚ್ಚನ್ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಅಸೋಗಾ ಗೆ ಬಂದಿದ್ದು ಅಭಿಮಾನಕ್ಕಾಗಿ,ಅಂದ್ರೆ ಅಭಿಮಾನ್ ಹಿಂದಿ ಚಿತ್ರದ ಶೂಟಿಂಗ್ ಗಾಗಿ ಅನ್ನೋದು ಅಭಿಮಾನದ ಸಂಗತಿಯಾಗಿದೆ. ಉತ್ತರ ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಅದರಲ್ಲಿಯೂ ಗಡಿನಾಡ ಗುಡಿ ಬೆಳಗಾವಿಯ ನಿಸರ್ಗ ಸೌಂಧರ್ಯವನ್ನು ಸ್ಯಾಂಡಲ್ ವುಡ್ ಚಿತ್ರೀಕರಣ ಮಾಡದಿದ್ದರು ಬಾಲಿವುಡ್ ಮಾಡಿದೆ.ಅನ್ನೋದಕ್ಕೆ ಸಾಕಷ್ಟು ಉಧಾಹರಣೆಗಳಿವೆ. ಗೋಕಾಕ್ ಜಲಪಾತದ ತಟದಲ್ಲಿ‌ ಖ್ಯಾತ ಹಿಂದಿ ಚಿತ್ರನಟ ದಿಲೀಪ್ ಕುಮಾರ್ ಅವರ ಚಿತ್ರದ …

Read More »

ಹುದಲಿಯಲ್ಲಿ ಏಕಕಾಲಕ್ಕೆ ತಾಯಿ ಮತ್ತು ಮಗ, ಇಬ್ಬರ ಸಾವು…

ಬೆಳಗಾವಿ- ಹೊಲದಿಂದ ಮನೆಗೆ ಮರಳಿದ ಬಳಿಕ ಮನೆಯಲ್ಲಿ ಭಜಿ ಮಾಡಿ ತಿಂದ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಸಮೀಪದ ಹುದಲಿ ಗ್ರಾಮದಲ್ಲಿ ನಡೆದಿದೆ. ಹುದಲಿ ಗ್ರಾಮದ ಪಾರ್ವತಿ ಮಾರುತಿ ಮಳಗಲಿ (58) ಮತ್ತು ಮಗ ಸೋಮನಿಂಗ ಮಾರುತಿ ಮಳಗಲಿ ಇಬ್ಬರೂ ಫುಡ್ ಪಾಯಿಸನ್ ಪರಿಣಾಮ ಮೃತಪಟ್ಟಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಭಜಿ ಮಾಡಿಕೊಂಡು ತಾಯಿ ಮತ್ತು ಮಗ ಇಬ್ಬರು ಸೇವನೆ ಮಾಡಿದ್ದಾರೆ,ಆದ್ರೆ ನಿನ್ನೆ ಬೆಳಿಗ್ಗೆ ಇಬ್ಬರಿಗೂ …

Read More »