Breaking News

LOCAL NEWS

17 ರಂದು ಬೆಂಗಳೂರಿನಲ್ಲಿ ನಡೆಯಲಿದೆ, ಬೆಳಗಾವಿ ಕಾಂಗ್ರೆಸ್ ಲಡಾಯಿ….!!!

ಬೆಳಗಾವಿ- ಬೆಳಗಾವಿ ಕಾಂಗ್ರೆಸ್ ಕಮೀಟಿಯ ಆಂತರಿಕ ಜಗಳ ಈಗ ವಿಕೋಪಕ್ಕೆ ಹೋಗಿದೆ. ಇತ್ತೀಚಿಗೆ ಸತೀಶ್ ಜಾರಕಿಹೊಳಿ ಅವರು ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಮಾಜಿ ಶಾಸಕ ಫಿರೋಜ್ ಸೇಠ್ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲಿಯೇ ಇವತ್ತು ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಶಾಸಕ ರಮೇಶ್ ಕುಡಚಿ ಅವರು ಪ್ರತ್ಯಕ್ಷರಾಗಿದ್ದಾರೆ. ಮಾಜಿ ಶಾಸಕ ರಮೇಶ್ ಕುಡಚಿ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿ ನಂತರ ವಿವಿಧ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿದ್ದರು. ರಮೇಶ್ …

Read More »

ಅವರು ಚೀರಾಡಿದ್ರು ,ಕಿಡ್ನ್ಯಾಪ್ ಆಗಿದ್ದ ಮೂವರು ಮಕ್ಕಳು ಬಿಡುಗಡೆ ಆದ್ರು…!!

ಬೆಳಗಾವಿ- ಚಾಕಲೇಟ್ ಕೊಟ್ಟು ಮಕ್ಕಳನ್ನು ಕಿಡ್ನ್ಯಾಪ್ ಮಾಡಲು ಗ್ಯಾಂಗ್ ಒಂದು ಬಂದಿತ್ತು. ಆದ್ರೆ ಗ್ರಾಮಸ್ಥರು ಕಿರುಚಾಡಿದ ಪರಿಣಾಮ ಆ ಖದೀಮರು ಮಕ್ಕಳನ್ನು ಬಿಟ್ಟು ಹೋದ್ರು…. ಹಾಡಹಗಲೇ ಮಕ್ಕಳ ಕಿಡ್ನಾಪ್‌ಗೆ ವಿಫಲಯತ್ನ ನಡೆಯಿತು ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ರು.ಈ ಘಟನೆ ನಡೆದಿದ್ದು,ಬೆಳಗಾವಿ ತಾಲೂಕಿನ ಕಂಗ್ರಾಳಿ ಬಿ.ಕೆ ಗ್ರಾಮದಲ್ಲಿ. ಆಟವಾಡುತ್ತಿದ್ದ ಮಕ್ಕಳನ್ನು ಟಾರ್ಗೆಟ್ ಮಾಡಿ ಕಿಡ್ನ್ಯಾಪ್ ಮಾಡಲು ಯತ್ನಿಸಿದ ಗ್ಯಾಂಗ್ ಮಕ್ಕಳಿಗೆ ಚಾಕೊಲೇಟ್ ಕೊಡ್ತೇನಿ ಬಾ ಅಂತಾ ಮಕ್ಕಳನ್ನು ಕರೆದು ಕಿಡ್ನ್ಯಾಪ್ ಮಾಡಲು …

Read More »

ಬೆಳಗಾವಿಯಿಂದ ಕೆಪಿಸಿಸಿಗೆ ಮೂವರ ಹೆಸರು ಶಿಫಾರಸ್ಸು…!!!

ಬೆಳಗಾವಿ-ವಿಧಾನ ಪರಿಷತ್ತಿನ ಚುನಾವಣೆಯ ದಿನಾಂಕ ಇನ್ನು ಘೋಷಣೆ ಆಗಿಲ್ಲ‌. ಆದ್ರೆ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಚುನಾವಣೆಯ ತಯಾರಿ ನಡೆದಿದೆ. ಬೆಳಗಾವಿಯಿಂದ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಪಕ್ಷದಿಂದ ಹಲವಾರು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು ಆದ್ರೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಕಮೀಟಿ ಸಭೆ ಮಾಡಿ ಮೂವರು ಜನ ಆಕಾಂಕ್ಷಿಗಳ ಹೆಸರನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ,ಕಿರಣ ಸಾಧುನವರ,ಮತ್ತು ಗೋವಾ ಕಾಂಗ್ರೆಸ್ …

Read More »

ಕೃಷ್ಣಾ ಭಾಗ್ಯ ಜಲನಿಗಮ ಆಲಮಟ್ಟಿಗೆ ಸ್ಥಳಾಂತರ….!!

ಉತ್ತರ ಕರ್ನಾಟಕಕ್ಕೆ ಕಚೇರಿಗಳ ಸ್ಥಳಾಂತರದತ್ತ ಮತ್ತೊಂದು ಹೆಜ್ಜೆ ಕೃಷ್ಣಾ ಭಾಗ್ಯ ಜಲನಿಗಮ ಆಲಮಟ್ಟಿಗೆ ಸ್ಥಳಾಂತರಿಸಲು ಅಧಿಕೃತ ಆದೇಶ! ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಿಸುವ ಸಂಬಂಧ ತಾವು ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಶ್ರೀಬಸವರಾಜ ಬೊಮ್ಮಾಯಿ ಅವರು ನಡೆದುಕೊಳ್ಳುತ್ತಿದ್ದು ಕೃಷ್ಣಾ ಭಾಗ್ಯ ಜಲನಿಗಮದ ಕಚೇರಿಗಳನ್ನು ಬೆಂಗಳೂರಿನಿಂದ ವಿಜಯಪುರ ಜಿಲ್ಲೆಯ ಆಲಮಟ್ಟಿಗೆ ಸ್ಥಳಾಂತರಿಸಲು ಇಂದು ಶನಿವಾರ ಅ.30 ರಂದು ಸಂಜೆ ಅಧಿಕೃತ ಆದೇಶ ಹೊರಬಿದ್ದಿದೆ. ಸಕ್ಕರೆ ನಿರ್ದೇಶನಾಲಯ ಆಯುಕ್ತರ ಕಚೇರಿಯು ಈಗಾಗಲೇ …

Read More »

ಪುನೀತ್ ಭಾವಚಿತ್ರಕ್ಕೆ ಪೂಜೆ ಮಾಡಿ,ಆತ್ಮಹತ್ಯೆ ಮಾಡಿಕೊಂಡ. ಅಭಿಮಾನಿ…

ಬೆಳಗಾವಿ- ಅಪ್ಪು ಅಗಲಿಕೆಯಿಂದ ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ.ಬೆಳಗಾವಿ ಜಿಲ್ಲೆಯ ಅಭಿಮಾನಿಯೊಬ್ಬ ಪುನೀತ್ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪುನೀತ್ ರಾಜಕುಮಾರ ಅಭಿಮಾನಿ.ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.ಬೆಳಗಾವಿ ಜಿಲ್ಲೆಯ ಗವಅಥಣಿ ಪಟ್ಟಣದಲ್ಲಿ ಘಟನೆ ನಡೆದಿದೆ.ರಾಹುಲ್ ಗಾಡಿವಡ್ಡರ ಎಂಬ ಯುವಕ ನೆಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುನಿತ್ ರಾಜಕುಮಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಆತ್ಮಹತ್ಯೆ …

Read More »

ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಕನ್ನಡ ಡಿಂಡಿಮ…

ಬೆಳಗಾವಿ, : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಬೆಳಗಾವಿಯ ಸುವರ್ಣ ‌ವಿಧಾನಸೌಧದ ಮೆಟ್ಟಿಲುಗಳ ಮೇಲೆ ಲಕ್ಷ ಕಂಠ ಗೀತಗಾಯನ ನಡೆಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗಿರುವ ಲಕ್ಷ ಕಂಠ ಕನ್ನಡ ಗೀತಗಾಯನ ಕಾರ್ಯಕ್ರಮದ ಅಂಗವಾಗಿ ಗುರುವಾರ(ಅ.28) ಗೀತಗಾಯನವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ರಾಷ್ಟ್ರಕವಿ ಕುವೆಂಪು ವಿರಚಿತ ‘ಬಾರಿಸು ಕನ್ನಡ ಡಿಂಡಿಮ’; ನಿಸಾರ್ ಅಹಮದ್ ಅವರ ‘ಜೋಗದ ಸಿರಿ‌ ಬೆಳಕಿನಲ್ಲಿ’ ಹಾಗೂ ಹಂಸಲೇಖ ಅವರ …

Read More »

ಬೆಳಗಾವಿಯೆಂದರೆ ಬಂಗಾರೆಪ್ಪ ಬಂಗಾರೆಪ್ಪ ಎಂದರೆ ಬೆಳಗಾವಿ

ಬೆಳಗಾವಿಯೆಂದರೆ ಬಂಗಾರೆಪ್ಪ ಬಂಗಾರೆಪ್ಪ ಎಂದರೆ ಬೆಳಗಾವಿ ಎನ್ನುವ ಕಾಲವೊಂದಿತ್ತು……. ಇಂದು ಅಕ್ಟೋಬರ್ 26.ದಿವಂಗತ ಮುಖ್ಯಮಂತ್ರಿ ಬಂಗಾರೆಪ್ಪ ಅವರ ಜನ್ಮದಿನ.ಬಂಗಾರೆಪ್ಪ ಅವರು ಬೆಳಗಾವಿಯಿಂದ ದೂರದ ಶಿವಮೊಗ್ಗ ಜಿಲ್ಲೆಯ ಸೊರಬದವರಾಗಿದ್ದರೂ ಬೆಳಗಾವಿಗೂ ಅವರಿಗೂ ಬಿಡಿಸಲಾಗದ ನಂಟಿತ್ತು.ಗಡಿ, ನಾಡು,ನುಡಿಯ , ಜಲದ ಸಂಬಂಧಿತ ವಿಷಯಗಳ ಬಗ್ಗೆ ತಮ್ಮದೇ ಆದ ಗಟ್ಟಿಯಾದ ನಿಲುವು ಹಾಗೂ ಬದ್ಧತೆ ಹೊಂದಿದ್ದ ಬಂಗಾರೆಪ್ಪ ಅವರು 1993 ರಲ್ಕ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿದಾಗ ನನ್ನಂಥ ಸಾವಿರಾರು ಯುವಕರು ಅವರ ಬೆನ್ನಿಗೆ …

Read More »

ಸೈಬರ್ ನೋವಿಗೆ ಬೆಳಗಾವಿ ಪೋಲೀಸರಿಂದ ಫಾಸ್ಟ್ ರಿಲೀಫ್…!!!

*ಸೈಬರ್ ನೋವಿಗೆ ಪೋಲೀಸರಿಂದ ಮುಲಾಮು…!!!* *ವರ್ಷದಲ್ಲೇ ಸಾವಿರ, 309 ದೂರುಗಳಿಗೆ ಸ್ಪಂದನೆ* *ಬೆಳಗಾವಿ ಸೈಬರ್ ಪೋಲೀಸರಿಗೆ ವಂದನೆ*   ಬೆಳಗಾವಿ-ಪಿಐ ಗಡ್ಡೇಕರ ಅವರು ಬೆಳಗಾವಿ ಸೈಬರ್ ಪೋಲೀಸ್ ಠಾಣೆಗೆ ಬಂದಾಗಿನಿಂದ ಈ ಠಾಣೆಯ ದೂರುದಾರರಿಗೆ ಫಾಸ್ಟ್ ರಿಲೀಫ್ ಸಿಗುತ್ತಿದೆ.ಯಾಕಂದ್ರೆ ಈ ಠಾಣೆಯ ಸಿಬ್ಬಂಧಿಗಳ ಕ್ರಿಯಾಶೀಲತೆಯಿಂದಾಗಿ ಬೆಳಗಾವಿ CEN ಠಾಣೆಯ ಗೋಲ್ಡನ್ ಹಾವರ್ ಈಗ ಶುರುವಾಗಿದೆ. ಬೆಳಗಾವಿಯ ಸೈಬರ್ ಪೋಲೀಸ್ ಠಾಣೆಯಲ್ಲಿ ಕಳೆದ ಒಂದು ವರ್ಷದಿಂದ 1309 ಸೈಬರ್ ಪ್ರಕರಣಗಳು ದಾಖಲಾಗಿದ್ದವು.ಈ …

Read More »

ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ವಿಜ್ಞಾನಿ….

ಬೆಳಗಾವಿ- ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಜೆ. ಮಂಜಣ್ಣ ಅವರಿಗೆ ಸ್ಥಾನ ಸಿಕ್ಕಿರುವದು ಬೆಳಗಾವಿಯ ಹೆಮ್ಮೆ… ಅಮೇರಿಕಾದ ಪ್ರತಿಷ್ಠಿತ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯ ಹೊರತಂದಿರುವ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರೊ. ಜೆ. ಮಂಜಣ್ಣ ಸ್ಥಾನ ಪಡೆದಿದ್ದಾರೆ. ಎಲ್ಸೇವಿಯರ್ ಸಂಸ್ಥೆಯ ಸಹಯೋಗದಲ್ಲಿ ಸ್ಟ್ಯಾನ್‍ಫೋರ್ಡ್ ವಿಶ್ವವಿದ್ಯಾಲಯದ ಜೆರೋಯಿನ್ ಬಾಸ್, ಕೆವಿನ ಬೋಯಾಕ್ ಮತ್ತು ಜಾನ್ ಪಿ.ಎ. …

Read More »

ಮರಾಠಿ ಶಿಕ್ಷಕನ ಕಂಠಸಿರಿಯಲ್ಲಿ ಕನ್ನಡ ಗೀತಗಾಯನ….

ಬೆಳಗಾವಿ, – ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗುತ್ತಿರುವ “ಲಕ್ಷ ಕಂಠಗಳಲ್ಲಿ” ಕನ್ನಡ ಗೀತಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಬೆಳಗಾವಿ ಜಿಲ್ಲೆಯಲ್ಲಿನ 2000 ವಿದ್ಯಾರ್ಥಿನಿಯರಿಗೆ ಆಯ್ದ ಕನ್ನಡ ಗೀತೆಗಳನ್ನು ಕಲಿಸುವ ಮಹತ್ವಪೂರ್ಣ ಕಾರ್ಯವನ್ನು ಮರಾಠಿ ಶಿಕ್ಷಕರಾದ ಹಾಗೂ ಸಮೂಹ ಗಾಯನದ ಮಾಸ್ಟರ್ ಎಂದು ಪ್ರಸಿದ್ಧರಾದ ವಿನಾಯಕ ಮೋರೆಯವರು ಮಾಡಿದ್ದಾರೆ. ಅ.28 ರಂದು ನಡೆಯಲಿರುವ ಸಮೂಹ ಗೀತಗಾಯನ ಕಾರ್ಯಕ್ರಮದಲ್ಲಿ ಈ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ 1000 ವಿದ್ಯಾರ್ಥಿಗಳು …

Read More »

ಬೆಳಗಾವಿಯಲ್ಲಿ, ಮಾತಾಡ್ ಮಾತಾಡ್ ಕನ್ನಡ….!!!

ಮಾತಾಡ್ ಮಾತಾಡ್ ಕನ್ನಡ, ಗೀತಗಾಯನ ಕಾರ್ಯಕ್ರಮ ಕನ್ನಡಕ್ಕಾಗಿ ನಾವು ಅಭಿಯಾನ ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ಬೆಳಗಾವಿ,-2021 ನೇ ಸಾಲಿನ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ನಿಮಿತ್ತ “ಕನ್ನಡಕ್ಕಾಗಿ ನಾವು-ಅಭಿಯಾನ”ವನ್ನು ಸರಕಾರ ಹಮ್ಮಿಕೊಂಡಿದೆ. ಈ ಅಭಿಯಾನದಡಿ ಬರುವ ಗೀತಗಾಯನ, ಮಾತಾಡ್ ಮಾತಾಡ್ ಸೇರಿದಂತೆ ವಿವಿಧ ಬಗೆಯ  ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. “ಕನ್ನಡಕ್ಕಾಗಿ ನಾವು-ಅಭಿಯಾನ”ದ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ (ಅ.26) …

Read More »

ಬೆಳಗಾವಿಯಲ್ಲಿ ಇವತ್ತು ಎಂಈಎಸ್ ಮತ್ತೆ ಹೈಡ್ರಾಮಾ…!!

ಬೆಳಗಾವಿ- ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆಯೇ ಬೆಳಗಾವಿಯಲ್ಲಿ ನಾಡವಿರೋಧಿ ಎಂಈಎಸ್ ನಾಯಕರ ಪುಂಡಾಟಿಕೆ ಶುರುವಾಗುತ್ತದೆ, ವಾಡಿಕೆಯಂತೆ ಇವತ್ತು ಎಂಈಎಸ್ ನಾಯಕರು ಹೈಡ್ರಾಮಾ ನಡೆಸಿದ್ದಾರೆ. ರಾಜ್ಯೋತ್ಸವ ಕೇಲವೆ ದಿನಗಳ ಮೊದಲು ಎಂಇಎಸ್ ಕಿರಿಕ್ ಶುರುವಾಗಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕುವಂತೆ, ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆ ಕ್ಯಾತೆ ತೆಗೆದಿದೆ. ಸಂಭಾಜೀ ವೃತ್ತದಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ನಡೆಸಿ ಬ್ಯಾರಿಕೆಟ್ ತಳ್ಳಿ ನುಗ್ಗಲು ಯತ್ನಿಸಿ ಗುಂಡಾಗಿರಿ ಪ್ರದರ್ಶಿಸಿದ ನಾಡವಿರೋಧಿಗಳು, ಪೊಲೀಸರ ಜತೆಗೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. …

Read More »

ಬೆಳಗಾವಿಯಲ್ಲೂ, ಅಂಡರ್ ಗ್ರೌಂಡ್ ಹೈಡ್ರೋಲೀಕ್ , ಹೈಟೇಕ್ ಡಸ್ಟಬೀನ್…!!

ಬೆಳಗಾವಿ- ಬೆಳಗಾವಿ ಮಹಾನಗರ ಅದೆಷ್ಟು ಹೈಟೆಕ್ ಆಗುತ್ತಿದೆ ಅನ್ನೋದಕ್ಕೆ ಈ ನಗರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಅದಕ್ಕೆ ಸಾಕ್ಷ್ಯ. ಬೆಳಗಾವಿಯಲ್ಲಿ,ಹೈಟೆಕ್ ಡಿಜಿಟಲ್ ಲೈಬ್ರರಿ,ಬುದ್ದಿಮಾಂದ್ಯ,ವಿಕಲ ಚೇತನ ಮಕ್ಕಳ ಮನರಂಜನೆಗೆ ವಿಶೇಷ ಪಾರ್ಕ್, ತಿನಿಸು ಕಟ್ಟೆ,(ಖಾವು ಕಟ್ಟಾ) ನಿರ್ಮಾಣ,ಜೊತೆಗೆ ವ್ಯಾಕ್ಸೀನ್ ಡಿಪೋದಲ್ಲಿ ಎವಿಯೇಶನ್ ಸೆಂಟರ್ ಮತ್ತು ನಾಥ ಪೈ ಸರ್ಕಲ್ ಬಳಿಯ ರಸ್ತೆಯ ಡಿವೈಡರ್ ಜಾಗದಲ್ಲಿ ಬೀದಿ ವ್ಯಾಪಾರಿಗಳಿಗೆ ವಿಶೇಷ ಮಳಿಗೆ ನಿರ್ಮಿಸುವದು ಸೇರಿದಂತೆ ಹತ್ತು ಹಲವು ವಿಶೇಷ ಸವಲತ್ತುಗಳನ್ನು ಬೆಳಗಾವಿ ಜನಗರದ …

Read More »

ಕ್ರಾಂತಿಯ ನೆಲ ಕಿತ್ತೂರಿಗೆ ಬಂಪರ್ ಲಾಟರಿ….

ಕಿತ್ತೂರು-ಕರ್ನಾಟಕ ನಾಮಕರಣಕ್ಕೆ ನಿರ್ಧಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಣೆ ಬೆಳಗಾವಿ(ಕಿತ್ತೂರು), ಅ.23(ಕರ್ನಾಟಕ ವಾರ್ತೆ): ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ. ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರಕಟಿಸಿದರು. ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ …

Read More »

ಬೆಳಗಾವಿಯಲ್ಲಿ ಬುಡಾ ವಿರುದ್ದ ಆಲ್ ಪಾರ್ಟಿ ಪ್ರತಿಭಟನೆ….!!!

ಮನವಿ ಸ್ವೀಕರಿಸಿದ ಬಿಸ್ವಾಸ್, ಕಣಬರ್ಗಿಯ ಬುಡಾ ಲೇಔಟ್ ಠರಾವ್ ಪಾಸ್ ಆಗುವ ವಿಶ್ವಾಸ…. ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಬೇಕು,ಈ ಸಭೆಯಲ್ಲಿ ಕಣಬರ್ಗಿ ಗ್ರಾಮದ ಹೊಸ ಲೇಔಟ್ ಕುರಿತು ಠರಾವ್ ಪಾಸ್ ಆಗಲೇಬೇಕು ಎಂದು, ಆಗ್ರಹಿಸಿ ಆಮ್ ಆದ್ಮಿ,ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಮುಖಂಡರು ಜಂಟಿಯಾಗಿ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ. ಕಾಂಗ್ರೆಸ್ಸಿನ ಆರ್ ಪಿ ಪಾಟೀಲ,ಬಿಜೆಪಿಯ ರಾಜೀವ ಟೋಪಣ್ಣವರ ,ಸುಜೀತ ಮುಳಗುಂದ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗು …

Read More »