Breaking News

LOCAL NEWS

ಸವದತ್ತಿ ಯಲ್ಲಮ್ಮ ದೇವಸ್ಥಾನ ಓಪನ್ ಮಾಡಲು ಡಿಸಿ ಆದೇಶ..

ಬೆಳಗಾವಿ- ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಬಿದ್ದ ಬೆನ್ನಲ್ಲಿಯೇ ಬೆಳಗಾವಿ ಜಿಲ್ಲಾಧಿಕಾರಿಗಳು ಈಗ ಮತ್ತೊಂದು ಆದೇಶವನ್ನು ಹೊರಡಿಸಿದ್ದಾರೆ. ನಿನ್ನೆಯ ದಿನ ಜಿಲ್ಲಾಧಿಕಾರಿಗಳು ಸವದತ್ತಿ ಯಲ್ಲಮ್ಮ ದೇವಿ,ದೇವಸ್ಥಾನ ಹೊರತುಪಡಿಸಿ ಉಳಿದ ನಾಲ್ಕು ಪ್ರಮುಖ ದೇವಸ್ಥಾನಗಳನ್ನು ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದರು. ಆದ್ರೆ ಭಕ್ತರ,ಮತ್ತು ಜನಪ್ರತಿನಿಧಿಗಳ ಮನವಿಗೆ ಸ್ಪಂದಿಸಿದ ಬೆಳಗಾವಿ ಜಿಲ್ಲಾಧಿಕಾರಿ ಹಿರೇಮಠ ಅವರು ಇಂದು ಸವದತ್ರಿ ಯಲ್ಲಮ್ಮದೇವಿ ದೇವಸ್ಥಾನ ಓಪನ್ ಮಾಡುವಂತೆ ಆದೇಶ ಹೊರಡಿಸಿದ್ದು ಬೆಳಗಾವಿ …

Read More »

ಬೆಳಗಾವಿ ಜಿಲ್ಲೆಯ ನಾಲ್ಕು ಪ್ರಮುಖ ದೇವಸ್ಥಾನಗಳು ಓಪನ್..

ಬೆಳಗಾವಿ- ಕೋವಿಡ್ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇವಸ್ಥಾನಗಳು ಇಂದು ಓಪನ್ ಮಾಡಲು ಬೆಳಗಾವಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಆದರೆ,ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಸದ್ಯಕ್ಕೆ ಓಪನ್ ಇಲ್ಲ ಯಲ್ಲಮ್ಮ ದೇವಸ್ಥಾನ ಹೊರತುಪಡಿಸಿ ನಾಲ್ಕು ಪ್ರಮುಖ ದೇವಸ್ಥಾನ ಗಳು ಭಕ್ತರ ದರ್ಶನಕ್ಕೆ ಇಂದಿನಿಂದ ಓಪನ್ ಆಗಲಿವೆ,ಇಂದಿನಿಂದ 4 ದೇವಸ್ಥಾನಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಸವದತ್ತಿಯ ಜೋಗಳಭಾವಿ ಸತ್ಯಮ್ಮದೇವಿ ದೇವಸ್ಥಾನ,ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ,ಹುಕ್ಕೇರಿ …

Read More »

ಖಾತೆ ಬಂದ್ ಆದ್ರೂ ಕ್ಯಾತೆ ನಿಂತಿಲ್ಲ…..!!!

ಬೆಳಗಾವಿ- ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸಂಪೂರ್ಣವಾಗಿ ಸೋತು ಗಡಿಭಾಗದ ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು ಸಂಪೂರ್ಣವಾಗಿ ಕಂಗಾಲಾಗಿರುವ ನಾಡವಿರೋಧಿ ಎಂಇಎಸ್ ನಾಯಕರು ಈಗ ಬೆಳಗಾವಿಯ ಮುಗ್ಧ ಮರಾಠಿ ಭಾಷಿಕರನ್ನು ಪ್ರಚೋದಿಸಿ ಭಾಷಾ ವೈಷಮ್ಯಮ ವಿಷಬೀಜ ಬಿತ್ತುವ ಪ್ರಯತ್ನ ಮಾಡುತ್ತಿದೆ. ಬೆಳಗಾವಿಯ ಗಣೇಶ ವಿಸರ್ಜನಾ ವೇದಿಕೆಯ ಮೇಲೆ ಮರಾಠಿ ಬ್ಯಾನರ್ ಹಾಕಿಲ್ಲ ಎಂತು ಕ್ಯಾತೆ ತೆಗೆದು ಪಾಲಿಕೆಯ ಮಹಿಳಾ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಅವರಿಗೆ ಘೇರಾವ್ ಹಾಕಲು ಹೋಗಿ ಮುಖಭಂಗಕ್ಕೊಳಗಾದ ಎಂಇಎಸ್ ನಾಯಕರು …

Read More »

ಸಿಇಟಿ , ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್

ಬೆಳಗಾವಿ-ಸಿಇಟಿ ಪಶು ವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿಗೆ 5ನೇ ರ‌್ಯಾಂಕ್ ಪಡೆದಿದ್ದಾನೆ. ಸಿಇಟಿ ಪಶುವೈದ್ಯಕೀಯ ವಿಭಾಗದಲ್ಲಿ ಬೆಳಗಾವಿಗೆ ಐದನೇ ರ‌್ಯಾಂಕ್ ಲಭಿಸಿದೆ. ಬೆಳಗಾವಿಯ ಮಹ್ಮದ್ ಕೈಫ್ ಮುಲ್ಲಾ ಐದನೇಯ ರ‌್ಯಾಂಕ್ ಪಡೆದಿದ್ದಾನೆ. ಏರ್‌ಪೋರ್ಸ್ ತರಬೇತಿ ಕೇಂದ್ರದಲ್ಲಿ ಮಹ್ಮದ ಕೈಫ್ ತಂದೆ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮಹ್ಮದ್ ಕೈಫ್ ತಂದೆ ಕುತ್ಬುದ್ದೀನ್ ಮುಲ್ಲಾ ಬೆಳಗಾವಿ ತಾಲೂಕಿನ ಸಾಂಬ್ರಾದಲ್ಲಿರುವ ಏರ್‌ಫೋರ್ಸ್ ತರಬೇತಿ ಕೇಂದ್ರದಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಯೋಗ, ನ್ಯಾಚುರೋಪಥಿ, …

Read More »

ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಬಿರು”ಘಾಳಿ”…!!

ಬೆಳಗಾವಿ- ಬೆಳಗಾವಿ ಪಾಲಿಕೆಯಲ್ಲಿ ಈ ಬಂದ ಬಹುತೇಕ ಅಧಿಕಾರಿಗಳು ಕನ್ನಡ‌ ಹಾಗೂ ಮರಾಠಿಯಲ್ಲಿ ನಾಮಫಲಕ ಹಾಕುತ್ತಿದ್ದರು. ಇದೇ ಮೊದಲ ಸಲ ಕೇವಲ ಕನ್ನಡದಲ್ಲಿ ಬ್ಯಾನರ್ ಹಾಕುವ ಮೂಲಕ ಪಾಲಿಕೆಯಲ್ಲಿ ಕನ್ನಡ ಗಾಳಿ ಆರಂಭಿಸಲಾಗಿದೆ.‌ ಇದು ಎಂಇಎಸ್ ಜನ ಹೊಟ್ಟೆ ಕಿಚ್ಚಿಗೆ ಕಾರಣವಾಗಿದ್ದ ಡೋಂಟ್ ಕೇರ್ ಎಂದು ಪಾಲಿಕೆ ಆಯುಕ್ತ ರುದ್ರೇಶ ಗಾಳಿ ಮುನ್ನುಗ್ಗುತ್ತಿದ್ದಾರೆ. ಬೆಳಗಾವಿಯಲ್ಲಿ ನಿನ್ನೆ ವಿಜೃಂಭಣೆಯ ಗಣೇಶ ವಿಸರ್ಜನೆ ಕಾರ್ಯ ನಡೆಯಿತು. ಕಪಿಲೇಶ್ವರ ಹೊಂಡದ ಬಳಿಯಲ್ಲಿ ಕೇವಲ ಕನ್ನಡದಲ್ಲಿ …

Read More »

ಎಂಇಎಸ್ ಪುಂಡರಿಗೆ ಲಕ್ಷ್ಮೀ ಬಾಂಬ್….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣೇಶ ವಿಸರ್ಜನಾ ಮೆರವಣಿಗೆಯ ಸಂಧರ್ಭದಲ್ಲಿ ಅಚ್ಚು ಕನ್ನಡದಲ್ಲಿ ನಾಮಫಲಕ ಹಾಕಲಾಗಿತ್ತು,ಇದಕ್ಕೆ ವಿರೋಧ ವ್ಯೆಕ್ತಪಡಿಸಲು ಬಂದ,ಎಂಇಎಸ್ ಪುಂಡರಿಗೆ ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು,ಎಂಇಎಸ್ ಗೆ ತಕ್ಕ ಪಾಠ ಕಲಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಬೆಳಗಾವಿ ನಗರದ ಕಪಿಲೇಶ್ವರ ಹೊಂಡದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಗಣೇಶ ವಿಸರ್ಜನೆಗೆ ಎಲ್ಲ ರೀತಿಯ ಅನಕೂಲ ಕಲ್ಪಿಸಿ ಕೊಡಲಾಗಿತ್ತು,ಹೊಂಡದ ಪಕ್ಕದಲ್ಲಿ …

Read More »

ಹಾ..ಹಾ..ಹಾ…….ಹೂ..ಹೂ..ಹೂ…ಗೌಡ್ರ ವಿಡಿಯೋ ಯಾ..ಹೂ…!!!

ಬೆಳಗಾವಿ- ರಾಜ್ಯರಾಜಕಾರಣ ನಿಜವಾಗಿಯೂ ಉದ್ರೇಕಗೊಂಡಂತೆ ಕಾಣುತ್ತಿದೆ.ಇವರ ನಡುವಳಿಕೆ ನೋಡಿದವರೂ ಉದ್ರೇಕಗೊಳ್ಳುವ ಪರಿಸ್ಥಿತಿ ಎದುರಾಗಿದೆ. ಇಂದು ಮದ್ಯಾಹ್ನ ವ್ಯಾಟ್ಸಪ್ ನಲ್ಲಿ ಪರ್ಸನಲ್ ಮೆಸ್ಸೇಜ್ ಗಳ ಹಾವಳಿ ಶುರುವಾಯಿತು ವಿಡಿಯೋ ಓಪನ್ ಮಾಡುವದಷ್ಟೇ ತಡ ,ಹಾ..ಹಾ…ಹೂ..ಹೂ..ಎನ್ನುವ ಶಬ್ದ ಕೇಳಿ ಸಾಕಾಯ್ತು, ಯಾಕಂದ್ರೆ ಹಾ..ಹಾ..ಹೂ.ಹೂ ಅಂದವರು ಸಾಮಾನ್ಯ ವ್ಯೆಕ್ತಿ ಅಲ್ಲ ಅವರೊಬ್ಬ ಕೇಂದ್ರದ ಮಾಜಿ ಸಚಿವರು,ರಾಜ್ಯದ ಮಾಜಿ ಮುಖ್ಯಮಂತ್ರಿ,ಅವರ ಬಾಯಿಂದ ಹಾ..ಹಾ…ಶಬ್ದ ಕೇಳಿ ರಾಜ್ಯದ ಜನ ಬೆಚ್ಚಿ ಬಿದ್ರು, ಇನ್ನು ಕೆಲವರು ಶಬ್ದ ಕೇಳಿ …

Read More »

ಮಗುವನ್ನು ಬೋರವೇಲ್ ಗೆ ಹಾಕಿದ್ದು ಬೇರೆ ಯಾರೂ ಅಲ್ಲ….

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಅಲಖನೂರ ಗ್ರಾಮದಲ್ಲಿ ಎರಡು ವರ್ಷದ ಮಗು ಶವವಾಗಿ ಪತ್ತೆಯಾಗಿದೆ. ತೋಟದ ಮನೆಯ ಪಕ್ಕದ ಬೋರವೆಲ್ ನಿಂದ ಮಗುವಿನ ಶವವನ್ನು ಹೊರ ತೆಗೆಯುವಲ್ಲಿ ಅಗ್ನಿಶಾಮಕ ದಳದ ಸಿಬ್ಬಂಧಿ ಯಶಸ್ವಿಯಾಗಿದ್ದಾರೆ. ಎರಡು ವರ್ಷದ ಮಗು ಶರತ ನನ್ನು ತಂದೆ ಸಿದ್ಧಪ್ಪ ಕೊಲೆ ಮಾಡಿದ್ದಾನೆ ಎಂದು ಮಗುವಿನ ಅಜ್ಜಿ ಆರೋಪಿಸಿದ್ದು ತಂದೆ ಸಿದ್ಧಪ್ಪ ಕೃತ್ಯ ತಾನೇ ಮಾಡಿದ್ದೇನೆ ಎಂದು ತಪ್ಪೊಪ್ಪಿಕೊಂಡಿದ್ದು ಪೋಲೀಸರು ತಂದೆ ಸಿದ್ದಪ್ಪನ ಮೇಲೆ ನಿಗಾ …

Read More »

ಕಾಣೆಯಾದ ಮಗು ಬೋರವೆಲ್ ನಲ್ಲಿ ಬಿದ್ದಿದೆ,ರಕ್ಷಣಾ ಕಾರ್ಯಚರಣೆ ಶುರುವಾಗಲಿದೆ.

ಬೆಳಗಾವಿ- ರಾಯಬಾಗ ತಾಲ್ಲೂಕಿನ ಗ್ರಾಮವೊಂದರ ಎರಡು ವರ್ಷದ ಮಗು ನಿನ್ನೆಯ ದಿನ ಕಾಣೆಯಾದ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಆದ್ರೆ ಇವತ್ತು ಈ ಮಗು ಬೋರವೆಲ್ಲನಲ್ಲಿ ಬಿದ್ದಿರುವದು ಖಚಿತವಾಗಿದೆ. ರಾಯಭಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಿನ್ನೆ ಕಾಣೆಯಾಗಿದ್ದ ಎರಡು ವರ್ಷದ ಮಗು ಬೊರವೇಲ್ಲದಲ್ಲಿ ಬಿದ್ದಿರುವ ಇಂದು ಸಂಜೆ ಖಚಿತವಾಗಿದ್ದು ರಾಯಬಾಗ ಪೋಲೀಸರು ಸ್ಥಳಕ್ಕೆ ದೌಡಾಯಿಸಿ ಮಗುವಿನ ರಕ್ಷಣೆಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಬೆಳಗಾವಿ ಸುದ್ಧಿ …

Read More »

ಸಾಧನೆ ಮಾಡಿದ ಬೆಳಗಾವಿ ಜಿಲ್ಲೆಯ ರೈತನ ಮಗಳು…

ಬೆಳಗಾವಿ-ಪ್ಯಾರಾ ಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ರೈತನ ಮಗಳು ಅಧ್ಬುತ ಸಾಧನೆ ಮಾಡಿದ್ದಾಳೆ. ರಷ್ಯಾದ ಮಾಸ್ಕೋದಲ್ಲಿ ನಡೆದ ಪ್ಯಾರಾ ಕ್ಲೈಂಬಿಂಗ್ ವಿಶ್ವಚಾಂಪಿಯನ್‌ಶಿಪ್ ನಲ್ಲಿ ಸುನಿತಾ ದುಂಡಪ್ಪನವರ್‌ಗೆ ಕಂಚಿನ ಪದಕ ಲಭಿಸಿದೆ. ಸಮರ್ಥನಂ ಅಂಗವಿಕಲರ ಸಂಸ್ಥೆಗೆ ಸೇರಿದ್ದ ಸುನಿತಾ ದುಂಡಪ್ಪನವರ್ ವಿಶೇಷ ಸಾಧನೆ ಮಾಡುವ ಮೂಲಕ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ. ತೋಲಗಿ ಗ್ರಾಮದ ರೈತ ನೀಲಕಂಠ ಬಸಪ್ಪ ದುಂಡಪ್ಪನವರ್, ಸಾವಿತ್ರಿ ಪುತ್ರಿಯಾಗಿರುವ ಸುನಿತಾ ಹಲವಾರು ವರ್ಷಗಳಿಂದ ಪರಿಶ್ರಮ ಪಟ್ಟಿದ್ದರು.ರೈತ ನೀಲಕಂಠ ದುಂಡಪ್ಪನವರ್‌ಗೆ ಒಟ್ಟು …

Read More »

ದೇಶದಲ್ಲಿಯೇ ಬೆಳಗಾವಿಗೆ ಎರಡನೇಯ ಸ್ಥಾನ…

ಮೆಗಾ ಲಸಿಕಾಮೇಳ- ದೇಶಕ್ಕೆ‌ಬೆಳಗಾವಿ ದ್ವಿತೀಯ ಸ್ಥಾನ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ, -: ದೇಶದಲ್ಲಿ ಸೆ.17 ರಂದು ನಡೆದ ಮೆಗಾ‌ ಲಸಿಕಾ ಮೇಳದಲ್ಲಿ ಇಡೀ ದೇಶದಲ್ಲಿಯೇ ಬೆಳಗಾವಿ ಜಿಲ್ಲೆಯು ಎರಡನೇ ಸ್ಥಾನ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು 4,09,977 ಲಸಿಕೆ ನೀಡುವ ಮೂಲಕ ಪ್ರಥಮ ಸ್ಥಾನ ಪಡೆದಿದೆ. ಬೆಳಗಾವಿ ಜಿಲ್ಲೆಯಲ್ಲಿ ಸೆ.17 ರಂದು‌‌ ಒಂದೇ ದಿನದಲ್ಲಿ 2,57,604 ಲಸಿಕೆ …

Read More »

ಅಣ್ಣ ಸತ್ತ ಮೇಲೆ ತಮ್ಮನ, ಕಮಾಲ್,ಬೆಳಗಾವಿಯಲ್ಲಿ ಗೋಲ್ಡ್ ಗೋಲ್ ಮಾಲ್…!!!

ಅಣ್ಣ ಕೋವೀಡ್ ನಿಂದ ಸತ್ತ ತಮ್ಮ ಅಣ್ಣನ ಅಂಗಡಿಯಿಂದ ಬಂಗಾರ ಹೊತ್ಕೊಂಡ ಹೋದ… ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಮತ್ತೊಂದು ಗೋಲ್ಡ್ ಗೋಲ್‌ಮಾಲ್ ಪ್ರಕರಣ ಬೆಳಕಿಗೆ ಬಂದಿದೆ. ಅಣ್ಣ ಕೋವಿಡ್‌ನಿಂದ ಮೃತಪಟ್ಟ ಆದ್ರೆ ತಮ್ಮ ಅಣ್ಣನ ಬಂಗಾರ ಅಂಗಡಿ ಖಾಲಿ ಮಾಡಿದ ಪ್ರಕರಣ ಈಗ ಪೋಲೀಸ್ ಠಾಣೆ ಕಟ್ಟೆ ಏರಿದೆ. ಹಿರಿಯ ಸಹೋದರ ಕೋವಿಡ್ ನಿಂದ ಸಾಯ್ತಾನೆ,ನಂತರ ತಮ್ಮ ಅಣ್ಣನ,ಚಿನ್ನದಂಗಡಿಯಲ್ಲಿದ್ದ 4 ಕೋಟಿ ಮೌಲ್ಯದ ಚಿನ್ನ, ಹಣದೊಂದಿಗೆ ಎಸ್ಕೇಪ್ ಆಗ್ತಾನೆ. ಈ …

Read More »

ಶುಕ್ರವಾರ ಬೆಳಗಾವಿ ಜಿಲ್ಲೆಯ ಮೂರು ಲಕ್ಷ ಜನರಿಗೆ ಡೋಸ್…

ಸೆ.17 ರಂದು ಲಸಿಕಾಮೇಳ: ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆಗೆ ಕ್ರಮ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಬೆಳಗಾವಿ, –  ಇದೇ ಶುಕ್ರವಾರ (ಸೆ.17) ನಡೆಯಲಿರುವ ಲಸಿಕಾ ಮೇಳದ ಸಂದರ್ಭದಲ್ಲಿ ಸರಕಾರದಿಂದ ಪೂರೈಸುವ ಲಸಿಕೆಗಳನ್ನು ನಗರದ ಎಲ್ಲ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಲಸಿಕಾ ಮೇಳದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಸೆ.15) ನಡೆದ ಖಾಸಗಿ ಆಸ್ಪತ್ರೆಗಳ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು. …

Read More »

ಬೆಳಗಾವಿ, ಜಿಲ್ಲಾ ಆಸ್ಪತ್ರೆಯಿಂದ ಆರೋಪಿ ಪರಾರಿ,ಕೇವಲ ಒಂದು ತಾಸಿನಲ್ಲಿ ಮತ್ತೇ ಸರೆಸ್ಟ್…

ಬೆಳಗಾವಿ-ಪೋಸ್ಕೋ ಪ್ರಕರಣದಡಿಯಲ್ಲಿ ಬಂಧನಕ್ಕೊಳಗಾಗಿ ಮೆಡಿಕಲ್ ಟೆಸ್ಟ್‌ ಗಾಗಿ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದ ಆರೋಪಿಯೊಬ್ನ ಪರಾರಿಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಪೋಸ್ಕೋ ಪ್ರಕರಣಕ್ಕೆ ಸಮಂಧಿಸಿದಂತೆ ….ಎಂಬ ಆರೋಪಿಯನ್ನು ಕಾಕತಿ ಪೋಲೀಸರು ಬಂಧಿಸಿ ಮೆಡಿಕಲ್ ಟೆಸ್ಟ್ ಮಾಡಲು ಆತನನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ತರಲಾಗಿತ್ತು,ಆದ್ರೆ ಈ ಆರೋಪಿ ಪೋಲೀಸರ ಕಣ್ಣುತಪ್ಪಸಿ ಆಸ್ಪತ್ರೆಯಿಂದ ಪರಾರಿ ಆಗಿದ್ದಾನೆ. ಆರೋಪಿಯ ಪತ್ತೆಗೆ ಪೋಲೀಸರು ವ್ಯಾಪಕ ಶೋಧ ನಡೆಸಿದ್ದಾರೆ.ಪರಾರಿಯಾದ ಆರೋಪಿ ಪೋಸ್ಕೋ ಪ್ರಕರಣದ ಆರೋಪಿ ಆಗಿರುವದರಿಂದ ಆರೋಪಿಯ ಹೆಸರು …

Read More »

ಬೆಳಗಾವಿಯಲ್ಲಿ ಎರಡು ದಿನ ಸಿಎಂ ಬೊಮ್ಮಾಯಿ..

ಬೆಳಗಾವಿ-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೆಪ್ಟೆಂಬರ್ 25,ಹಾಗೂ 26 ರಂದು ಎರಡು ದಿನ ಬೆಳಗಾವಿಯಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ,ಶಾಸಕರು ಸಿಎಂ ಬೊಮ್ಮಾಯಿ ಅವರನ್ನು ಅಭಿನಂದಿಸಲು ಬೆಂಗಳೂರಿಗೆ ಹೋದ ಸಂಧರ್ಭದಲ್ಲಿ 25,ಹಾಗೂ26 ರಂದು ಎರಡು ದಿನ ಬೆಳಗಾವಿಯಲ್ಲೇ ಇರುತ್ತೇನೆ,ಬೆಳಗಾವಿ ಅಭಿವೃದ್ಧಿಗೆ ಸಮಂಧಿಸಿದ. ವಿಚಾರವನ್ನು ಅಲ್ಲೇ ಚರ್ಚೆ ಮಾಡೋಣ ಎಂದು ಸಿಎಂ ಭರವಸೆ ನೀಡಿದ್ದಾರೆ. ಮುಖ್ಯಮಂತ್ರಿ ಆದ ಬಳಿಕ ಎರಡನೇಯ ಬಾರಿಗೆ ಬೆಳಗಾವಿಗೆ ಬರುತ್ತಿರುವ ಬಸವರಾಜ ಬೊಮ್ಮಾಯಿ …

Read More »