Breaking News

LOCAL NEWS

ಆಸ್ತಿಗಾಗಿ ತಂದೆಯನ್ನೇ ಮರ್ಡರ್ ಮಾಡಿದ ಕಿರಾತಕ ಮಗ..!

ಬೆಳಗಾವಿ- ಆಸ್ತಿಗಾಗಿ,ದುಡ್ಡಿಗಾಗಿ ತಂದೆಯನ್ನೇ ಮಗನೊಬ್ಬ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿತ್ತು,ಮಗ ಮಾಡಿದ ಹಲ್ಲೆಯಿಂದ ತಂದೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು,ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ಹದ್ದಿಯ ಪಾಟೀಲ ಮಾಳಾದಲ್ಲಿ ವಾಸವಿರುವ ಲಕ್ಷ್ಮಣ ಲಕ್ಕಪ್ಪ ಶಿರೂರ, ವಯಾ-50 ವರ್ಷ ಇವರ ಮಗ ಆರೋಪಿ ಸೋಮನಾಥ ಲಕ್ಷ್ಮಣ ಶಿರೂರ, ಸಾ-ಕೊತ್ವಾಲ್ ಗಲ್ಲಿ, ಬೆಳಗಾವಿ ಇವನು …

Read More »

ಬೆಳಗಾವಿಗೆ ಸಿಂಗಾಪೂರ್ ಲುಕ್…!!

ಬೆಳಗಾವಿ- ಬೆಳಗಾವಿಯಲ್ಲಿ ಅಗಣಿತ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ,ಕುಂದಾನಗರಿ ಬೆಳಗಾವಿ ಈಗ ಹೊಸ ಸ್ವರೂಪ ಪಡೆದುಕಿಳ್ಳುತ್ತಿದೆ.ಸ್ಮಾರ್ಟಿ ಸಿಟಿಯ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದ ಬಳಿಕ ಬೆಳಗಾವಿಯ ಚಿತ್ರಣವೇ ಬದಲಾಗಲಿದೆ. ಈ ಸುದ್ಧಿಯಲ್ಲಿನ ಪೋಟೋ ನೋಡಿದ್ರೆ ಸಾಕು,ಬೆಳಗಾವಿ ಯಾವ ರೀತಿ ಶೈನೀಂಗ್ ಆಗ್ತಾ ಇದೆ,ಅಂತಾ ನಾವು ಲೆಕ್ಕ ಹಾಕಬಹುದು,ಯಾಕಂದ್ರೆ ಇದು ಬೆಳಗಾವಿಯಲ್ಲಿ ಆರಂಭಗೊಂಡ ಹೊಸ ಮಾರುಕಟ್ಟೆಯ ಚಿತ್ರ…. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಬೆಳಗಾವಿ ನಗರಕ್ಕೆ ಸಿಂಗಾಪೂರ ಲುಕ್ ಕೊಡುವ ಯೋಜನೆಗಳನ್ನು …

Read More »

ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆ…..!!!

ಬೆಳಗಾವಿ- ರಾಜ್ಯ ಸರ್ಕಾರ ಸೋಮವಾರ ಬಜೆಟ್ ಮಂಡಿಸಲಿದ್ದು ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಬೆಳಗಾವಿ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವ ನಿರೀಕ್ಷೆಯ ಲೆಕ್ಕಾಚಾರ ಈಗ ಶುರುವಾಗಿದೆ. ರಾಜ್ಯ ಸರ್ಕಾರದ ಬಜೆಟ್ ಕೊಡುಗೆಯಾಗಿ ಈಗಾಗಲೇ ಬೆಳಗಾವಿಯಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ,ಹೈಟೆಕ್ ಕೇಂದ್ರ ಬಸ್ ನಿಲ್ಧಾಣ ನಿರ್ಮಾಣ ಆಗುತ್ತಿದೆ.ಈ ಬಾರಿಯ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವದಕ್ಕೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ.ಈಸಮಸ್ಯೆ …

Read More »

ವೀರ ಮದಕರಿ ನಾಯಕರ ಪ್ರತಿಮೆ,ಸ್ಥಾಪನೆಗೆ ಕ್ರಮ

ಬೆಳಗಾವಿ-  ದೌರ್ಜನ್ಯ ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಮಾ.5) ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ನಿಯಮಗಳ ಅನ್ವಯ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪರಿಶಿಷ್ಟ ಜಾತಿ/ವರ್ಗಗಳ ಮೇಲಿನ ದೌರ್ಜನ್ಯ ಅಧಿನಿಯಮ ಅನ್ವಯ ದಾಖಲಾದ ಪ್ರತಿಯೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಹಾರ ಧನ ಮಂಜೂರು …

Read More »

ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ಕರದಂಟು, ದುಬೈನಲ್ಲೂ ಸಿಗುತ್ತೆ.

ಬೆಳಗಾವಿ-ಬೆಳಗಾವಿ ಕುಂದಾ ಜೊತೆ ಗೋಕಾಕ್ ಕರದಂಟು ಚೆನ್ನಾಗಿರುತ್ತದೆ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ವಿಚಾರ ಈಗ ಮತ್ತೆ ಚರ್ಚೆಗೆ ಗುರಿಯಾಗಿದೆ ಯಾಕಂದ್ರೆಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇವತ್ತು ಈ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯ ಭೂತರಾಮನಹಟ್ಟಿ ರಾಣಿ ಚನ್ನಮ್ಮ ಝೂನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಕರದಂಟು ಬೇಕಾದರೆ ಗೋಕಾಕ್‌ನಲ್ಲೂ ಸಿಗುತ್ತೆ, ಬೆಳಗಾವಿಯಲ್ಲೂ ಸಿಗುತ್ತೆ,ಮೆಜೆಸ್ಟಿಕ್ ನಲ್ಲಿಯೂ ಸಿಗುತ್ತೆ, ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ರೆ ದುಬೈನಲ್ಲೂ,ಗೋಕಾಕಿನ ಪ್ರಸಿದ್ಧ ಕರದಂಟು …

Read More »

ಅಕ್ರಮ ಕ್ವಾರಿ, ಸ್ಫೋಟಕಗಳ ಅಕ್ರಮ ಸಾಗಾಟ ನಿಯಂತ್ರಣಕ್ಕೆ ಕ್ರಮ: ಎಸ್ಪಿ ಲಕ್ಷ್ಮಣ ನಿಂಬರಗಿ

ಬೆಳಗಾವಿ, ): ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ತಾಲೂಕಿನ ಹಿರೆನಗವೆಲಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದ ಸ್ಫೋಟ ದುರಂತದ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಆಗದಂತೆ ಎಚ್ಚರಿಕೆ ವಹಿಸಬೇಕು. ಅಕ್ರಮ ಕ್ವಾರಿ ಹಾಗೂ ಸ್ಫೋಟಕಗಳ ಅಕ್ರಮ ಸಂಗ್ರಹ ಮತ್ತು ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ವಿವಿಧ ಇಲಶಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರ್ಯಾಲಯದ ಸಭಾಭವನದಲ್ಲಿ ಬುಧವಾರ (ಫೆ. 24) …

Read More »

ಸ್ಮಾರ್ಟ್ ಸಿಟಿ ಕಾಮಗಾರಿ,ಮೂರು ತಿಂಗಳಲ್ಲಿ ಮುಗಿಸಲು ವಾರ್ನಿಂಗ್…!!

ಸ್ಮಾರ್ಟ್ ಸಿಟಿ ಕಾಮಗಾರಿ: ಪ್ರಗತಿ ಪರಿಶೀಲನೆ ———————————————————- ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ.ಅತೀಕ್ ಗಡುವು ಬೆಳಗಾವಿ,: ರಸ್ತೆ ನಿರ್ಮಾಣ ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಎಲ್ಲ ಪ್ರಮುಖ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಎಲ್.ಕೆ‌.ಅತೀಕ್ ಅವರು ಸೂಚನೆ ನೀಡಿದ್ದಾರೆ. ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಬುಧವಾರ (ಫೆ‌.24) ಸ್ಮಾರ್ಟ್ ಸಿಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ …

Read More »

ರಾಹುಲ್ ಪ್ರತಿಭಟನೆಯಲ್ಲಿ,ಪ್ರಿಯಾಂಕಾ ಹಾಜರಿ…ಜನರಿಗೆ ಅಚ್ಚರಿ…!!

ಕೇಂದ್ರ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಗೋಕಾಕ್ ನಲ್ಲಿ ಬೃಹತ್ ಪ್ರತಿಭಟನೆ ಗೋಕಾಕ: ರೈತ ವಿರೋಧಿ ಕಾನೂನುಗಳು, ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎತ್ತಿನ ಬಂಡಿಯ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಕೇಂದ್ರ …

Read More »

ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಪೇಂಟರ್ ಮರ್ಡರ್…

ಬೆಳಗಾವಿ- ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ವ್ಯಕ್ತಿಯ ಹತ್ಯೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಬೈಲಹೊಂಗಲ‌ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ಬಸ್ ನಿಲ್ದಾಣ ಬಳಿ ಖುಲ್ಲಾ ಜಾಗದಲ್ಲಿ ಶವ ಪತ್ತೆಯಾಗಿದ್ದು,ಹತ್ಯೆಯಾದ ವ್ಯೆಕ್ತಿಯನ್ನು 34 ವರ್ಷದ ಶಶಿಕಾಂತ ಮಿರಜಕರ್ ಎಂದು ಗುರುತಿಸಲಾಗಿದೆ. ಮುಖಕ್ಕೆ ಪ್ಲಾಸ್ಟಿಕ್ ರ‌್ಯಾಪರ್ ಸುತ್ತಿ ಹತ್ಯೆ ಮಾಡಲಾಗಿದೆ ಎಂದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ.ರಾತ್ರಿಹೊತ್ತು ಈ ಹತ್ಯೆ ಮಾಡಿದ್ದು ಶವ ಬಸ್ ನಿಲ್ಧಾಣದ ಬಳಿ ಇರುವ ಖುಲ್ಲಾ ಜಾಗೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಜೆ ಬೈಲಹೊಂಗಲ …

Read More »

ನಾಳೆ ಬೆಳಗಾವಿ ಬೈ ಇಲೆಕ್ಷನ್ ದಿನಾಂಕ ಘೋಷಣೆ….!!!

ಬೆಳಗಾವಿ- ಕೇಂದ್ರದ ರಾಜ್ಯ ರೇಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಬೇಕಿದ್ದು ನಾಳೆ ಈ ಉಪ ಚುನಾವಣೆಯ ವೇಳಾಪಟ್ಟಿ ಪ್ರಕಟವಾಗುವ ಸಾದ್ಯತೆ ಇದೆ. ತಮೀಳುನಾಡು,ಪಶ್ಚಿಮ ಬಂಗಾಲ,ಕೇರಳ ಸೇರಿದಂತೆ ದೇಶದ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದ್ದು ಕೇಂದ್ರ ಚುನಾವಣಾ ಆಯೋಗ ಈ ರಾಜ್ಯಗಳ ಚುನಾವಣೆಯ ದಿನಾಂಕ ಪ್ರಕಟಿಸಲಿದ್ದು,ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಸುದ್ಧಿಗೋಷ್ಠಿ ಕರೆದಿದ್ದು. ಈ ಸುದ್ಧಿಗೋಷ್ಠಿಯಲ್ಲಿ ಬೆಳಗಾವಿ ಲೋಕಸಭಾ …

Read More »

ಮಾರಿಹಾಳ ಗ್ರಾಪಂ ಅದ್ಯಕ್ಷರಿಗೆ,ಹಿರೇಬಾಗೇವಾಡಿಯಲ್ಲಿ ಸಮ್ಮಾನ…

ಬೆಳಗಾವಿ-ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷ ತೌಸೀಫ್ ಫನೀಬಂದ್ ಅವರನ್ನು ಹಿರೇಬಾಗೇವಾಡಿ ಗ್ರಾಮದಲ್ಲಿ ಸತ್ಕರಿಸಿ ಗೌರವಿಸಲಾಯಿತು. ಹಿರೇಬಾಗೇವಾಡಿ ಗ್ರಾಮದ ದರ್ಗಾ ಆವರಣದಲ್ಲಿ ದರ್ಗಾ ಅಜ್ಜನವರು ತೌಸೀಫ್ ಫನೀಬಂಧ್ ಅವರನ್ನು ಸತ್ಕರಿಸಿ ಆಶಿರ್ವದಿಸಿದರು.ಸಮ್ಮಾನ ಸ್ವೀಕರಿಸಿ ಮಾತನಾಡಿದ ತೌಸೀಫ್ ಫನೀಬಂಧ್, ಮಾರಿಹಾಳ ಗ್ರಾಮ ಪಂಚಾಯತಿ ಅದ್ಯಕ್ಷನಾದ ಮೇಲೆ ಜವಾಬ್ದಾರಿ ಹೆಚ್ಚಾಗಿದೆ.ಮಾರಿಹಾಳ ಗ್ರಾಮವನ್ನು ಆದರ್ಶ ಗ್ರಾಮವನ್ನಾಗಿ ಅಭಿವೃದ್ಧಿಪಡಿಸುವ ಸಂಕಲ್ಪ ಮಾಡಿದ್ದೇನೆ,ಗ್ರಾಮದ ಮನೆ,ಮನೆಗೂ ಶುದ್ಧ ಕುಡಿಯುವ ನೀರಿನ ವ್ಯೆವಸ್ಥೆ ಮಾಡುವದು,ಮೊದಲ ಗುರಿಯಾಗಿದೆ.ಎಂದು ತೌಸೀಫ್ ಹೇಳಿದರು. ಮಾರಿಹಾಳ ಗ್ರಾಮವನ್ನು …

Read More »

ಗೋವಾ ಕುತಂತ್ರಕ್ಕೆ ಬ್ರೇಕ್, ಸಾಹುಕಾರ್ ನಿರಾಳ….!!

ಬೆಳಗಾವಿ- ಕರ್ನಾಟಕ ಸರ್ಕಾರ ಮಹಾದಾಯಿ ನದಿ ನೀರನ್ನು ಡೈವೋರ್ಟ್ ಮಾಡಿದೆ ಎಂದು ಸುಳ್ಳು ಆಪಾದನೆ ಮಾಡಿ ಯೋಜನೆ ಇನ್ನಷ್ಟು ವಿಳಂಬವಾಗಬೇಕು ಎನ್ನುವ ಗೋವಾ ಸರ್ಕಾರದ ಕುತಂತ್ರಕ್ಕೆ ಮಾನ್ಯ ಸರ್ವೋಚ್ಛ ನ್ಯಾಯಾಲಯ ಬ್ರೇಕ್ ಹಾಕಿರುವ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ನಿರಾಳವಾಗಿದ್ದಾರೆ. ಸತ್ಯ ಅರಿಯಲು ಕರ್ನಾಟಕ,ಮಹಾರಾಷ್ಟ್ರ ,ಮತ್ತು ಗೋವಾ ಮೂರು ರಾಜ್ಯಗಳ ಇಂಜಿನಿಯರ್ ಗಳು ಸ್ಥಳಕ್ಕೆ ಭೇಟಿ ನೀಡಿ ನ್ಯಾಯಾಲಯಕ್ಕೆ ವರದಿ ಸೂಚಿಸುವಂತೆ ಆದೇಶಿಸಿರುವದರಿಂದ ಗೋವಾ ಸರ್ಕಾರಕ್ಕೆ ಸೆಟ್ …

Read More »

ಕತ್ತಲೆಗೆ ಅಂಜದ ಅಂಜಲಿ,,ಭರವಸೆಯ ಬೆಳಕಾದರು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಖಾನಾಪೂರ ವಿಧಾನಸಭಾ ಕ್ಷೇತ್ರ ಶೇ 80% ರಷ್ಟು ಅರಣ್ಯ ಪ್ರದೇಶದಲ್ಲಿ ವಿಸ್ತರಿಸಿದೆ. ಇಲ್ಲಿಯ ಅರಣ್ಯರೋಧನ ಕೇಳಲು ಈ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಜರ್ ಸಾಕ್ಷಾತ್ ತಾಯಿಯಾಗಿ ಅವತರಿಸಿದ್ದಾರೆ ಎನ್ನುವದಕ್ಕೆ ಅವರು ಮಾಡುತ್ತಿರುವ ಮಹತ್ಕಾರ್ಯಗಳೇ ಅದಕ್ಕೆ ಸಾಕ್ಷಿಯಾಗಿವೆ… ಖಾನಾಪೂರ ಕ್ಷೇತ್ರದ ಅತ್ಯಂತ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸ ಮಾಡುತ್ತಿರುವ ಕಾಡು ಪ್ರದೇಶದ ಜನರಿಗೆ ಅಂಜಲಿ ನಿಂಬಾಳ್ಕರ್ ಧ್ವನಿಯಾಗಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಈ ಕ್ಷೇತ್ರದ ಯಾವುದೇ ಒಬ್ಬ …

Read More »

ಮಂಗಳಸೂತ್ರವನ್ನೇ ತೆಗೆದು ಸರ್ ಇದನ್ನು ಮಾರಿ ನಿಮ್ಮ ದಂಡ ತುಂಬಿಸಿಕೊಳ್ಳಿ ಎಂದ ಮಹಿಳೆ….

ಬೆಳಗಾವಿ- ಬೆಳಗಾವಿಯಲ್ಲಿ ವಾಹನಸವಾರರಿಂದ ದಂಡ ವಸೂಲಿ ಮಾಡುವ ಟ್ರಾಫಿಕ್ ಪೋಲೀಸ್ ದಬ್ಬಾಳಿಕೆ ಯಾವ ಮಟ್ಟಕ್ಕೆ ಹೋಗಿದೆ ಎಂದು ನಾವು ಕಲ್ಪನೆ ಮಾಡಿಕೊಳ್ಳಲೂ ಸಹ ಸಾದ್ಯವಿಲ್ಲ ಅಂತಹದೊಂದು ಘಟನೆ ಭಾನುವಾರ ಮದ್ಯಾಹ್ನ ಬೆಳಗಾವಿ ನಗರದಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಭಾನುವಾರ ಮದ್ಯಾಹ್ನ ,ಬೆಳಗಾವಿ ನಗರದ ಮಾರ್ಕೆಟ್ ಪೋಲೀಸ್ ಠಾಣೆ ಎದುರಿನ ಹೊಟೇಲ್ ಪೈ ಎದುರುಗಡೆ,ಈ ಘಟನೆಯ ಕುರಿತು ಸುದ್ದಿ ಮಾಡಬೇಕೋ ಅಥವಾ ಬಿಡಬಿಕೋ ಎನ್ನುವ ಗೊಂದಲದಲ್ಲಿದ್ದೆ,ಯಾಕಂದ್ರೆ ಇಷ್ಟು ದಂಡ ವಸೂಲಿ …

Read More »

ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಎಂದು ಕರೆಯುವ ಠಾಣೆ ಇರೋದು ಬೆಳಗಾವಿಯಲ್ಲಿ ಮಾತ್ರ….

ಬೆಳಗಾವಿ- ಬೆಳಗಾವಿಯಲ್ಲಿ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಎಂದು ಕರೆಯುವ ಪೋಲೀಸ್ ಠಾಣೆಯೊಂದು ಬೆಳಗಾವಿ ನಗರದಲ್ಲೇ ಇದೆ.. ಇವರು ಪೋಲೀಸ್ ಇನೆಸ್ಪೆಕ್ಟರ್ ಹುದ್ದೆಯಲ್ಲಿದ್ದರೂ ಠಾಣೆಯ ಸಿಬ್ಬಂಧಿಗಳು,ಪಿಸಿಗಳು,ಎಲ್ಲರೂ ಇವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ. ಠಾಣೆಯ ವ್ಯಾಪ್ತಿಯ ಜನರೂ ಪೋಲೀಸ್ ಇನೆಸ್ಪೆಕ್ಟರ್ ಅವರನ್ನು ಹವಾಲ್ದಾರ್ ಸರ್ ಎಂದೇ ಕರೆಯುತ್ತಾರೆ. ಈ ರೀತಿ ಯಾಕೆ ? ಎನ್ನುವ ಪ್ರಶ್ನೆ ಹಲವಾರು ದಿನಗಳಿಂದ ಕಾಡುತ್ತಿತ್ತು ಈ ರೀತಿಯ ಸನ್ನಿವೇಶಕ್ಕೆ ಕಾರಣವಾಗಿರುವ ಠಾಣೆ ಬೆಳಗಾವಿಯ ಶಹಾಪೂರ್ …

Read More »