Breaking News

LOCAL NEWS

ಬೆಳಗಾವಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಓರ್ವನ ಸಾವು…

ಬೆಳಗಾವಿ-ಇಂದು ಸಂಜೆ ಹೊತ್ತು ಗುಡುಗು ಮಿಂಚಿನ ಮಳೆ ಸುರಿಯುತ್ತಿರುವಾಗ ಸಿಡಿಲು ಬಡಿದು ಓರ್ವನು ಸಾವನ್ನೊಪ್ಪಿದ ಘಟನೆ ಖಾನಾಪೂರ ತಾಲ್ಲೂಕಿನ ನೀಡಗಲ್ ಗ್ರಾಮದಲ್ಲಿ ನಡೆದಿದೆ. ಜೋಯಿಡಾ ಗ್ರಾಮದ 20 ವರ್ಷದ ಗುರುನಾಥ್ ನಾರ್ವೇಕರ್ ಇಂದು ಸಂಜೆ ಸಿಡಿಲು ಬಡಿದು ಮೃತಪಟ್ಟಿದ್ದಾನೆ ಈತ ಮೂಲತಹ ಜೋಯಿಡಾ ಗ್ರಾಮದವನಾಗಿದ್ದು, ಕುಟುಂಬ ಸಮೇತ ಖಾನಾಪೂರ ತಾಲ್ಲೂಕಿನ ನೀಡಗಲ್ ಇಟ್ಟಂಗಿ ತಯಾರಿಕಾ ಘಟಕದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಇಂದು ಸಂಜೆ ಮಳೆ ಶುರುವಾದ ಸಂಧರ್ಭದಲ್ಲಿ ಇಟ್ಟಂಗಿ ರಾಶಿಯ …

Read More »

ಮಳೆಯಲ್ಲಿ ದರ್ಶನ ಪಡೆದ ಸಾವಿರಾರು ಭಕ್ತರು

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆ ನಡುವೆಯ ಭಕ್ತರು ಸರದಿ ಸಾಲಿನಲ್ಲಿ ನಿಂತು ಯಲ್ಲಮ್ಮ ದೇವಿ ದರ್ಶನ ಆಶೀರ್ವಾದ ಪಡೆದುಕೊಂಡರು. ಬೆಳಗ್ಗೆಯಿಂದ ಬಿಸಿಲಿನ ವಾತಾವರಣ ಇತ್ತು. ಯಲ್ಲಮ್ಮ ದೇವಿ ದರ್ಶನಕ್ಕೆ ದೇಶದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಸಂಜೆ ಏಕಾಏಕಿ ಮಳೆ ಶುರುವಾಯಿತು. ಆದರೂ, ಭಕ್ತರು ಸ್ಥಳಬಿಟ್ಟು ಕದಲದೆ, ಮಳೆಯಲ್ಲಿ ನೆನೆಯುತ್ತಲೇ ಭಕ್ತರು ದೇವಿ ದರ್ಶನ ಪಡೆದಿದ್ದು ವಿಶೇಷವಾಗಿತ್ತು.ಮಳೆಯಿಂದಾಗಿ ವ್ಯಾಪಾರಸ್ಥರು ಪರದಾಡುವಂತಾಯಿತು.

Read More »

ಕುಂದಾನಗರಿ.,..ಥಂಡಾ..ಥಂಡಾ..ಕೂಲ್..ಕೂಲ್….!!

ಬೆಳಗಾವಿ- ಇಂದು ಮಧ್ಯಾಹ್ನ ಎರಡು ಘಂಟೆಗೆ ಬೆಳಗಾವಿಯಲ್ಲಿ ಏಕಾ ಏಕಿ,ಗುಡುಗು ಸಿಡಿಲಿನ ಜೊತೆಗೆ ಮಳೆ ಶುರುವಾಯಿತು,ವಾತಾವರಣ ತಂಪಾಗುವದರ ಜೊತೆಗೆ ತಂಗಾಳಿ ಬೀಸಿತು ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು. ಬೆಳಗಾವಿಯಲ್ಲಿಂದು ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಅಬ್ಬರದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೇರೆದಿದೆ. ಮಳೆ ಜೊತೆಗೆ ತಂಗಾಳಿಯೂ ಬಿಸತೊಡಗಿದ್ದರಿಂದ ಇಡೀ ನಗರದಲ್ಲಿ ತಂಪಿನ ವಾತಾವರಣ ಸೃಷ್ಟಿಯಾಗಿದೆ. ಬಿಸಿಲಿನ ನಡುವೆಯೇ ಮಧ್ಯಾಹ್ನ …

Read More »

ಬೆಳಗಾವಿ ಡಿಸಿ ಮಾಡ್ತಾರೆ ಗ್ರಾಮ ವಾಸ್ತವ್ಯ.

ಬೆಳಗಾವಿ, : ರಾಜ್ಯ ಸರಕಾರದ ನಿರ್ದೇಶನದಂತೆ ಪ್ರತಿ ತಿಂಗಳ ಮೂರನೇಯ ಶನಿವಾರ ಜಿಲ್ಲಾಧಿಕಾರಿಗಳು ಮತ್ತು ತಾಲೂಕುಗಳ ತಹಶೀಲ್ದಾರರು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ವರೆಗೆ ಅಹವಾಲುಗಳನ್ನು ಸ್ವೀಕರಿಸಿ, ಅಂದು ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಎಂಬ ಘೋಷದಡಿ ಮೊದಲ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಶನಿವಾರ(ಫೆ.20) ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ನಡೆಸಲಿದ್ದಾರೆ. …

Read More »

ಬೆಳಗಾವಿಯಲ್ಲಿ ಮನೆಗೆ ನುಗ್ಗಿ ಚಾಕು ತೋರಿಸಿ, ದರೋಡೆ….

ಬೆಳಗಾವಿ-ಬೆಳಗಿನ ಜಾವ ಮನೆಯ ಕಿಟಕಿ ಮುರಿದು ಮನೆಗೆ ನುಗ್ಗಿದ ದರೋಡೆಕೋರರುಮನೆಯಲ್ಲಿದ್ದ ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿದ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ. ಟಿಳಕವಾಡಿಯ ಮೂರನೇಯ ಗೇಟ್ ಬಳಿ ರಾಣಾ ಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜೀತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ಈ ದರೋಡೆ ನಡೆದಿದೆ. ಮನೆಯ ಕಿಟಕಿ ಮುರಿದು ಮನೆಗೆ ನುಗ್ಗಿರುವ 7ಜನ ದರೋಡೆಕೋರರು, ಮನೆಯಲ್ಲಿನ ಟ್ರೇಝರಿಯಲ್ಲಿನ ಬಟ್ಟೆಗಳನ್ನು ಚಿಲ್ಲಾಪಿಲ್ಲಿಯಾಗಿ ಎಸೆದಿದ್ದಾರೆ ಮನೆಯಲ್ಲಿ ಮಲಗಿದ್ದ ದಂಪತಿ …

Read More »

ಡಿಕೆಶಿ ಮಗಳ ಮದುವೆಯಲ್ಲಿ ಸಾಹುಕಾರ್ ಹಾಜರ್..

ಬೆಳಗಾವಿ- KPCC ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪುತ್ರಿಯ ಮದುವೆ ಆರತಾಕ್ಷತೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌, ವಧು ವರರಿಗೆ ಶುಭಕೋರಿದರು. ಈ ಚಿತ್ರ ನೋಡಿದ್ರೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ ಶಿವಕುಮಾರ್ ನಡುವೆ ಯಾವುದೇ ಜಗಳವೇ ಇಲ್ಲ ಅನ್ನೋದು ಗೊತ್ತಾಗುತ್ತದೆ. ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಸಾಹುಕಾರ್ ರಮೇಶ್ ಜಾರಕಿಹೊಳಿ ನಡುವೆ ಈಗಲೂ ಉತ್ತಮ ಸಂಬಂಧ ಇದೆ ಅನ್ನೋದು ಗೊತ್ತಾಗುತ್ತದೆ. ಯಾರೇ …

Read More »

ಬೆಳಗಾವಿಯಲ್ಲಿ ಭರ್ಜರಿ ಮಟಕಾ ದಾಳಿ

ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರ ಮಾರ್ಗದರ್ಶನದಲ್ಲಿ ಡಿಸಿಪಿ ರವರ ವಿಶೇಷ ತಂಡದಿಂದ ಕಲೆಗಾರಗಲ್ಲಿಯ ಮತವಾಲಾ ಕಾಂಪ್ಲೆಕ್ಸ್ ಮೇಲೆ ಮಟಕಾ ದಾಳಿ ಮಾಡಿ 14 ಅನ ಆರೋಪಿತರನ್ನು ದಸ್ತಗಿರ ಮಾಡಿ ಅವರಿಂದ ರೂ. 10,020/- ನಗದು ಮತ್ತು 08 ಮೊಬೈಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮಾರ್ಕೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಆರೋಪಿತರ ವಿವರ : 1) ಅಯ್ಯಪ್ಪ ಶೇಖರ್‌ರಾಜ ಶೆಟ್ಟಿ ಸಾ|| 2 ನೇ ಕ್ರಾಸ್ …

Read More »

ಡಲ್ ಹೊಡೆದ ಮಾಜಿ ಶಾಸಕ ಸಂಜಯ ಪಾಟೀಲ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕಾರಣವನ್ನು ಅಳತೆ ಮಾಡಿ ತೂಗಿ,ಗುಣಾಕಾರ,ಭಾಗಾಕಾರ ಮಾಡಲು ಸಾಧ್ಯವೇ ಇಲ್ಲ ಅಂತಾ ಕೆಲವು ಅನುಭವಿಗಳು ಹೇಳ್ತಾರೆ,ಇವತ್ತು ಸಂಜಯ ಪಾಟೀಲರ ಹತಾಶೆಯ ನುಡಿಗಳನ್ನು ಗಮನಿಸಿದರೆ ಇದು ನಿಜ ಅನಿಸುತ್ತೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸಾಹುಕಾರ್ ರಮೇಶ್ ಜಾರಕಿಹೊಳಿ ಅವರು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಅದ್ಯಕ್ಷ ಉಪಾದ್ಯಕ್ಷರನ್ನು ಮತ್ತು ಸದಸ್ಯರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ …

Read More »

ಬೆಳಗಾವಿಯಲ್ಲಿ ಹೊಸ ಬಾಂಬ್ ಸಿಡಿಸಿದ ಸಾಹುಕಾರ್…!!

ಬೆಳಗಾವಿ-ಬೆಳಗಾವಿಯಲ್ಲಿ ಸಚಿವ ರಮೇಶ ‌ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ ಕಾಂಗ್ರಸ್ಸಿನ ಐದು ಜನ ಟಾಪ್ ಲೀಡರ್ ಗಳು ನನ್ನನ್ನು ಸಂಪರ್ಕ ಮಾಡಿದ್ದು ನಾನು ಮನಸ್ಸು ಮಾಡಿದ್ರೆ 24 ಗಂಟೆಯಲ್ಲಿ ಅವರನ್ನು ಬಿಜೆಪಿಗೆ ತರಬಲ್ಲೇ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಪಂ ಸದಸ್ಯರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಸಂಜಯ ಪಾಟೀಲ್ ಕ್ಷಮೆ ಕೊರುತ್ತೇನೆ. ಈ ಹಿಂದೆ ಕಾಂಗ್ರೆಸ್ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ. …

Read More »

ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ….

ಬೆಳಗಾವಿ-ಬೆಳಗಾವಿಯಲ್ಲಿ ಕಟ್ಟಿಗೆ ಸಂಗ್ರಹಣೆ ಘಟಕಕ್ಕೆ ಬೆಂಕಿ ತಗಲಿದ್ದು ಕಟ್ಟಿಗೆ ಸಂಗ್ರಹ ಘಟಕ ಹೊತ್ತಿ ಉರಿಯುತ್ತಿದೆ. ಉದ್ಯಮಬಾಗ ಪ್ರದೇಶದಲ್ಲಿ ಇರೋ ಸಂಗ್ರಹಣೆ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿದ್ದು ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ದಳ ದೌಡಾಯಿಸಿದೆ. ಬೆಂಕಿ ನಂದಿಸಲು ಹರ ಸಾಹಸ ಪಡುತ್ತಿದ್ದು ಬೆಳಗಾವಿಯ ನಾಲ್ಕು ಅಗ್ನಿ ಶಾಮಕ ವಾಹನ ಸ್ಥಳಕ್ಕೆ ದೌಡಾಯಿಸಿವೆ.

Read More »

ಇಬ್ಬರು ಕಂದಮ್ಮಗಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

*ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳು ನದಿಯಲ್ಲಿ ಹೆಣವಾಗಿ ಪತ್ತೆ* ಬೆಳಗಾವಿ/ಗೋಕಾಕ: ಮನೆಯಲ್ಲಿ ಜಗಳವಾಡಿ ಮೂರು ದಿನಗಳಿಂದ ಕಾಣೆಯಾಗಿದ್ದ ತಾಯಿ, ಇಬ್ಬರು ಮಕ್ಕಳೊಂದಿಗೆ ಘಟಪ್ರಭಾ ನದಿಗೆ ಹಾತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಅರಭಾಂವಿಯ ಸಾವಿತ್ರಿ ರಾಜು ಬನಾಜ(೩೦), ಪೂಜಾ(೪), ಲಕ್ಷ್ಮೀ (೨) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳವಾಡಿ, ಜೀವನದಲ್ಲಿ ಜಿಗುಪ್ಸೆಗೊಂಡು ಮೂರು ದಿನಗಳಿಂದ ಕಾಣೆಯಾಗಿದ್ದರು. ನಾಪತ್ತೆ ಆಗಿರುವ ಬಗ್ಗೆ ಗಂಡನ ಮನೆಯವರು ಶನಿವಾರ ದೂರು ನೀಡಿದ್ದರು. …

Read More »

ಲೋಕಸಭೆಯಲ್ಲಿ ಮತ್ತೇ ಶಿವಸೇನೆ ಕಿರಿಕ್….

ಬೆಳಗಾವಿ- ಲೋಕಸಭೆಯಲ್ಲಿ ಇಂದು ನಡೆಬಾರದ ಘಟನೆ ನಡೆದು ಹೋಯಿತು.ಶಿವಸೇನೆ ಸಂಸದನೊಬ್ಬ ಬೆಳಗಾವಿ ಕಾರವಾರ ನಿಪ್ಪಾಣಿ ಪ್ರದೇಶಗಳು ಕೇಂದ್ರಾಡಳಿತ ಪ್ರದೇಶ ಆಗಲೇಬೇಕು ಎಂದು ಒತ್ತಾಯ ಮಾಡಿದ್ರೂ ಕರ್ನಾಟಕದ ಯಾವೊಬ್ಬ ಸಂಸದನೂ ಅದಕ್ಕೆ ಅಡ್ಡಿ ಪಡಿಸಲಿಲ್ಲ,ರಾಜ್ಯದ ಕೋಟ್ಯಾಂತರ ಕನ್ನಡಿಗರು ಕ್ಷಮಿಸಲಾರದ ಘಟನೆ ಇಂದು ನಡೆದಿದೆ. ಇವತ್ತು ಶಿವಸೇನೆಯ ಸಂಸದ, ರಾಹುಲ್ ಶೇವಾಲೆ ಎಂಬಾತ ಲೋಕಸಭೆಯಲ್ಲಿ ಮಾತಾಡಿ ಬೆಳಗಾವಿ ಕಾರವಾರ,ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೆಳಗಾವಿ ಮಹಾನಗರ ಪಾಲಿಕೆ ಠರಾವ್ ಪಾಸ್ ಮಾಡಿದೆ ಈ ಕುರಿತು …

Read More »

ಕೇಂದ್ರ ರಕ್ಷಣಾ ಸಚಿವರನ್ನು ಭೇಟಿಯಾದ ಶಾಸಕ ಅಭಯ ಪಾಟೀಲ..

ಬೆಳಗಾವಿ- ಬೆಳಗಾವಿಯಲ್ಲಿ ಹೈಟೆಕ್ ಐಟಿ,ಬಿಟಿ ಪಾರ್ಕ್ ನಿರ್ಮಿಸಲು ಸಂಕಲ್ಪ ಮಾಡಿರುವ ಶಾಸಕ ಅಭಯ ಪಾಟೀಲ ಇಂದು ದೆಹಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಬೆಳಗಾವಿಯ ರಕ್ಷಣಾ ಇಲಾಖೆಗೆ ಸೇರಿದ ಜಮೀನನ್ನು ಐಟಿ,ಬಿಟಿ ಪಾರ್ಕ್ ನಿರ್ಮಾಣಕ್ಕೆ ಹಸ್ತಾಂತರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಉಪ ಮುಖ್ಯಮಂತ್ರಿ,ಹಾಗೂ ಐಟಿ,ಬಿಟಿ ಸಚಿವ ಅಶ್ವಥ್ ನಾರಾಯಣ ಮತ್ತು ಶಾಸಕ ಅಭಯ ಪಾಟೀಲ ಅವರು ಇಂದು ದೆಹಲಿಯಲ್ಲಿ ಭೇಟಿಯಾಗಿ ,ಬೆಳಗಾವಿ ನಗರದಲ್ಲಿ ಕೆ,ಎಲ್,ಇ ಆಸ್ಪತ್ರೆ …

Read More »

22 ರಂದು ದೆಹಲಿಗೆ ಹೋಗ್ತೇನೆ,ಚರ್ಚೆ ಮಾಡ್ತೀನಿ….

ಬೆಳಗಾವಿ-ಇದೇ 22 ರಂದು ದೆಹಲಿಗೆ ಪ್ರಯಾಣ ಮಾಡಲಿದ್ದೇನೆ.. ರಾಜ್ಯ ನೀರಾವರಿ ಯೋಜನೆ ಕುರಿತು ಮಾತನಾಡಲಿದ್ದೇನೆ ಎಂದು ಬೆಳಗಾವಿಯಲ್ಲಿ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಇಲ್ಲಿ ಪೀಠದ ತಜ್ಞರು ಅಧಿಕಾರಿಗಳು ಜೊತೆಗೆ ಚೆರ್ಚೆ ಮಾಡುತ್ತೇನೆ. ಹಳೆಯ ಭದ್ರ ಮೇಲ್ದಂಡೆ ಯೋಜನೆ ಕೃಷ್ಣ ಮೇಲ್ದಂಡೆ ಯೋಜನೆ , ಮಹದಾಯಿ, ಮೇಕೆ ದಾಟು ಯೋಜನೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಕುರಿತು ಚೆರ್ಚೆ ಮಾಡುತ್ತೇನೆ.ಕೃಷ್ಣ ಮೇಲ್ದಂಡೆ ಯೋಜನೆ ಗೆ ಅಡ್ಡಿಯಾಗಿರುವ …

Read More »

ಮಚ್ಛೆ ಬೈಪಾಸ್… ರೈತರಿಗೆ ಲಾಸ್…ಸ್ಥಳಕ್ಕೆ ದೌಡಾಯಿಸಿದ್ರು ಬಿಗ್ ಬಾಸ್….!!!

ಬೆಳಗಾವಿ- ಹಲಗಾ ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲಿಯೇ ರೈತರು ಮೊತ್ತೊಂದು ಗಂಭೀರ ಆರೋಪ ಮಾಡಿರುವ ಹಿನ್ನಲೆಯಲ್ಲಿ,ಜಿಲ್ಲಾಧಿಕಾರಿ ಹಿರೇಮಠ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ರಸ್ತೆ ಕಾಮಗಾರಿಯಲ್ಲಿ ಜಮೀನು ಕಳೆದುಕೊಂಡ ರೈತನಿಗೆ 57 ,ಲಕ್ಷ ರೂ ಪರಿಹಾರ ಕೊಡಲು 11 ಲಕ್ಷ ರೂ ಕಮೀಷನ್ ಕೇಳುತ್ತಿದ್ದಾರೆ ಎಂದು ರೈತರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಶೀಲನೆ ನಡೆಸಿದ್ದಾರೆ. ಇತ್ತೀಚಿಗೆ ರೈತರು ಅಹೋ ರಾತ್ರಿ …

Read More »