Breaking News

LOCAL NEWS

ಮಚ್ಛೆ ಗ್ರಾಮದಲ್ಲಿ ಬಿಗ್ ಗ್ಯಾಂಬಲಿಂಗ್ ಬಿಗ್ ರೇಡ್….!!!

ಬೆಳಗಾವಿ- ಬೆಳಗಾವಿ ಪಕ್ಕದ ಮಚ್ಛೇ ಗ್ರಾಮದಲ್ಲಿ ಅತೀ ದೊಡ್ಡ ಇಸ್ಪೀಟ್ ಆಟ ನಡೆದಿತ್ತು ದಾಳಿ ಮಾಡಿದ ಬೆಳಗಾವಿ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸರು, 83 ಸಾವಿರ ನಗದು,16 ಬೈಕ್, 16 ಮೋಬೈಲ್, ವಶಪಡಿಸಿಕೊಂಡು, 12 ಜನರನ್ನು ಬಂಧಿಸಿದ್ದಾರೆ. 1)ಇಮ್ತಿಯಾಜ್ ಅಬ್ದುಲ್ ಲತಿಫ್ ಅತ್ತಾರ, ವಯಾ :30 ವರ್ಷ ಸಾ, ಗಾಂಧಿನಗರ ಖಾನಪುರ ಜಿ, ಬೆಳಗಾವಿ 2)ಸಮೀರ್ ಚಾನಂದ ಸಾಬ್ ಬಾಳೆಕುಂದ್ರಿ, ವಯಸ್ಸು, 42 ವರ್ಷ ಸಾ, ಅಂಬೇಡ್ಕರ್ ನಗರ ಅನಾಗೋಲ್ …

Read More »

ಅಪ್ಪಾಜೀ, ಫೀಲ್ಡೀಂಗ್….ರಾಹುಲ್ ಬ್ಯಾಟೀಂಗ್…!!

ಯಮಕನಮರಡಿ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಕ್ರೀಯಾಶೀಲರಾಗಿದ್ದಾರೆ.ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಸಕ್ರೀಯವಾಗಿರುವ ರಾಹುಲ್ ಈ ಕ್ಷೇತ್ರದಲ್ಲಿ ತಂದೆಯ ಪರವಾಗಿ ಬ್ಯಾಟೀಂಗ್ ನಡೆಸಿದ್ದಾರೆ…. ಬೆಳಗಾವಿ : ‘ಕ್ರೀಡೆಯಲ್ಲಿ ನಿರಂತರ ಪ್ರಯತ್ನದಿಂದ ಹಂತ ಹಂತವಾಗಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ಯಾವುದೇ ಕ್ರೀಡೆಯಲ್ಲಿ ಯಶಸ್ವಿಯಾಗಬೇಕಾದ್ರೆ, ಕಠಿಣ ಪರಿಶ್ರಮ ಮುಖ್ಯ. ಕ್ರೀಡಾಪಟುಗಳು ಸೋಲು, ಗೆಲುವು ಸಮಾನವಾಗಿ ಸ್ವೀಕರಿಸಬೇಕು’ ಎಂದು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಕಡೋಲಿ …

Read More »

ಕೋವೀಡ್ ವ್ಯಾಕ್ಸೀನ್ ತುರ್ತು ಬಳಕೆಗೆ ಸಿಕ್ಕಿತು ಕೇಂದ್ರದ ಪರ್ಮಿಷನ್..!!

ಬೆಳಗಾವಿ- ಕೊವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಸಂತಸ ತಂದಿದೆ ಎಂದುಬೆಳಗಾವಿಯಲ್ಲಿ ಡಾಕ್ಟರ್ ಅಮಿತ್ ಭಾತೆ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು, ಕೋವ್ಯಾಕ್ಸಿನ್ ಬಳಕೆ ಅನುಮತಿ ಕೊಟ್ಟಿದ್ದು ಸಂತಸ ತಂದಿದೆ, ಕೊರೊನಾ ವಾರಿಯರ್ಸ್ ಗೆ ಮೊದಲ ಹಂತದಲ್ಲಿ ಲಸಿಕೆ  ನಂತರ 50 ವರ್ಷದ ಮೇಲ್ಪಟ ಹಿರಿಯ ನಾಯಕರಿಗೆ ಲಸಿಕೆ ಮೊದಲು ಹಂತ ಲಸಿಕೆ ಪ್ರಯೋಗ ಮಾಡಿದಾಗ ತುಂಬ ಕಷ್ಟ ಇತ್ತು ಮೊದಲು ಸ್ವಯಂ …

Read More »

ಗೋಕಾಕಿನಲ್ಲಿ ಸಾವಿತ್ರಿಬಾಯಿ ಪುಲೆ ಸ್ಮರಣೆ….

ಗೋಕಾಕ : ಸಾವಿತ್ರಿ ಬಾಯಿ ಫುಲೆ ಅವರು ಮೇಲ್ವರ್ಗ ಜಾತಿ, ವ್ಯಕ್ತಿಗಳಿಗೆ ಮೀಸಲಾಗಿದ್ದ ಶಿಕ್ಷಣವನ್ನು ಶೋಷಿತ ಸಮುದಾಯಗಳಿಗೆ ಮುಟ್ಟಿಸುವಲ್ಲಿ ಶ್ರಮಿಸಿದವರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಹಿಲ್ ಗಾರ್ಡನ್ ಗೃಹ ಕಚೇರಿಯಲ್ಲಿ ಮಾತನಾಡಿದ ಅವರು, ಸಾವಿತ್ರಿ ಬಾಯಿ ಫುಲೆ ಅವರ 190ನೇ ಜಯಂತಿ ಅಂಗವಾಗಿಯೇ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗಿದೆ. ವಿಭಿನ್ನ ಕಾರ್ಯಕ್ರಮ ಮಾಡುವ ಮೂಲಕ ಸಾವಿತ್ರಿ ಬಾಯಿ ಫುಲೆ ಅವರ ಹೋರಾಟ, ಜೀವನ ಚರಿತ್ರೆ …

Read More »

ಸುರೇಶ ಅಂಗಡಿ ಅವರ ಕುಟುಂಬದವರಿಗೆ ಟಿಕೆಟ್ ಕೊಡಲಿ

ಗೋಕಾಕ : ಬೆಳಗಾವಿ ಲೋಕಸಭಾ ಉಪಚುನಾವಣಾ ಬಿಜೆಪಿ ಟಿಕೆಟ್ ದಿ.ಸುರೇಶ ಅಂಗಡಿ ಕುಟುಂಬದವರಿಗೆ ನೀಡಬೇಕು ಎಂಬುವುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಅಂತಾ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಪಟ್ಟಣದಲ್ಲಿ ಭಾನುವಾರ ನಡೆದ ಬಿಜೆಪಿ ಬೆಂಬಲಿತ ನೂತನ ಗ್ರಾ.ಪಂ. ಸದಸ್ಯರಿಗೆ ಸತ್ಕಾರ್ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಟಿಕೆಟ್ ಅಂಗಡಿ ಕುಟುಂಬದವರಿಗೆ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ. ಆದ್ರೆ ವರಿಷ್ಠರು ಏನೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆ …

Read More »

ಬೆಳಗಾವಿಯಲ್ಲಿ,ಹುಲಿ,ಸಿಂಹ ,ಚಿರತೆ,ಕರಡಿ ತಂದು ಬಿಡಿ….!!!

ಬೆಳಗಾವಿ :ಮೈಸೂರು ಮೃಗಾಲಯ ಮಾದರಿಯಲ್ಲೇ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯ ರಾಣಿ ಕಿತ್ತೂರು ಚನ್ನಮ್ಮ ಮೃಗಾಲಯ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ ಅಭಿವೃದ್ಧಿ ವೇದಿಕೆ ಪದಾಧಿಕಾರಿಗಳು ಶನಿವಾರ ಸಚಿವ ರಮೇಶ ಜಾರಕಿಹೊಳಿಗೆ ಮನವಿ ಸಲ್ಲಿಸಿದರು. ಬೆಳಗಾವಿ ನಗರ ಸ್ಮಾರ್ಟ್‌ಸಿಟಿಯಾಗುತ್ತಿದೆ. ಜಿಲ್ಲೆಯಲ್ಲಿ ಗೋಕಾಕ ಫಾಲ್ಸ್, ಗೊಡಚಿನಮಲ್ಕಿ ಫಾಲ್ಸ್, ಭೀಮಗಡ ಅಭಿಯಾರಣ್ಯ, ಘಟಪ್ರಭಾ ಜಲಾಶಯ, ಶಿರೂರ ಜಲಾಶಯ, ಮಲಪ್ರಭಾ ಜಲಾಶಯ ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ …

Read More »

ಹಳ್ಳದಲ್ಲಿ ಮುಳುಗಿ ಯುವಕನ ಸಾವು…

ಬೆಳಗಾವಿ-ಹಳ್ಳದಲ್ಲಿ ಮುಳುಗಿ ಯುವಕನೊಬ್ಬ ಸಾವನ್ನೊಪ್ಪಿದ ಘಟನೆ ಬೆಳಗಾವಿ ತಾಲ್ಲೂಕಿನ ಮುತ್ನಾಳ ಗ್ರಾಮದಲ್ಲಿ ನಡೆದಿದೆ. ವಿಠ್ಠಲ ಉದಯ ಉಪರಿ 20 ವರ್ಷದ ಯುವಕ ಇಂದು ಮುತ್ನಾಳ ಗ್ರಾಮದ ಹದ್ದಿಯಲ್ಲಿರುವ ಹಳ್ಳದಲ್ಲಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.ಮೃತಯುವಕನಿಗೆ ಈಜಲು ಬರುತ್ತಿರಲಿಲ್ಲ ಎಂದು ಗೊತ್ತಾಗಿದೆ. ಹಿರೇಬಾಗೇವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Read More »

ಪಾಲಿಕೆ ಕನ್ನಡ ಧ್ವಜ, ನಾಡವಿರೋಧಿಗಳ ವಿರುದ್ಧ ಕುಮಾರಸ್ವಾಮಿ ಗರಂ….

ಬೆಳಗಾವಿ ಪಾಲಿಕೆ ಎದುರು ಡಿ.28ರಂದು ಕನ್ನಡಪರ ಹೋರಾಟಗಾರರು ನಾಡ ಧ್ವಜ ಹಾರಿಸಿದ ನಂತರದ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ನಮ್ಮ ನೆಲದಲ್ಲಿ ನಮ್ಮ ಧ್ವಜ ಹಾರಿಸಲು ಹರಸಾಹಸಪಡುವುದು, ಅದಕ್ಕೆ ಕಾವಲು ಕಾಯುವುದು, ಧ್ವಜ ತೆರವು ಮಾಡದಂತೆ ಅಧಿಕಾರಿಗಳಲ್ಲಿ ಮನವಿ ಮಾಡುವುದು ಇವೆಲ್ಲವೂ ಕನ್ನಡಿಗರ ಸ್ವಾಭಿಮಾನಕ್ಕೆ ಉಂಟಾದ ಧಕ್ಕೆ. ಪಾಲಿಕೆ ಎದುರು ಧ್ಜಜ ಸ್ಥಾಪಿಸಿದ ಕನ್ನಡ ಹೋರಾಟಗಾರ ಶ್ರೀನಿವಾಸ ತಾಳಕೂರ ಎಂಬುವವರ ಅಂಗಡಿಗೆ ಕಿಡಿಗೇಡಿಗಳು ಬೆಂಕಿ ಇಡಲು ಯತ್ನಿಸಿರುವ ಘಟನೆಯೂ ನಡೆದು ಹೋಗಿದೆ. …

Read More »

ಪಾಲಿಕೆ ಮುಂಭಾಗದ ಕನ್ನಡ ಧ್ವಜ ಅನಧಿಕೃತ ಎಂಇಎಸ್ ವಿರೋಧ!

ಬೆಳಗಾವಿ- ಹೈಕೋರ್ಟ್ ಆದೇಶವನ್ನು ವಿರೋಧಿಸಿ ಅನಧಿಕೃತವಾಗಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಾಡಿಸಲಾಗಿದೆ. ಧ್ವಜವನ್ನು ತೆರವುಗೊಳಿಸಬೇಕು ಎಂದು ಎಂಇಎಸ್ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿದೆ. ಪ್ರಚಾರಕ್ಕಾಗಿ ಕನ್ನಡ ಸಂಘಗಳು ಪಾಲಿಕೆ ಮುಂಭಾಗದಲ್ಲಿ ಧ್ವಜ ಹಾರಾಡುತ್ತಿದೆ. ಕಾನೂನು ಸುವ್ಯವಸ್ಥೆ ದಕ್ಕೆಯಾಗುತ್ತಿದೆ. ಧ್ವಜ ತೆರವುಗೊಳಿಸಬೇಕು. ಇಲ್ಲವೇ ಭಾಗವಾ ಧ್ವಜ ಹಾಕೋದಾಗಿ ಹೇಳಿತ್ತು. ಆದರೇ ಜಿಲ್ಲಾಢಳಿತ ಸೂಚನೆ ಮೇರೆಗೆ ಸುಮ್ಮನೆ ಇದ್ದೇವೆ ಎಂದು ಎಂಇಎಸ್ ಮುಖಂಡರು ಹೇಳಿದ್ದಾರೆ‌. ಎಂಇಎಸ್ ಮುಖಂಡರು ಒನ್ ನೇಷನ್‌ ಒನ್ …

Read More »

ಬೆಳಗಾವಿಯಲ್ಲಿ ವ್ಯಾಕ್ಸೀನ್ ಡೆಮೋ ಸೆಕ್ಸೆಸ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಕೊರೋನಾ ವ್ಯಾಕ್ಸೀನ್ ಲಸಿಕೆ ನೀಡುವ ಡೆಮೋ ಯಶಸ್ವಿಯಾಗಿ ನಡೆಯಿತು ಬೆಳಗಾವಿ ನಗರದ ವಂಟಮೂರಿ ಸ್ಮಾರ್ಟ್ ಸಿಟಿ ಆಸ್ಪತ್ರೆ,ಹುಕ್ಕೇರಿಯ ತಾಲ್ಲೂಕು ಆಸ್ಪತ್ರೆ ಮತ್ತು ಕಿತ್ತೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಡೆಸಿದ ವ್ಯಾಕ್ಸೀನ್ ಡೆಮೋ ಯಶಸ್ವಿಯಾಗಿ ನಡೆಯಿತು. ಕೋವೀನ್ ಆ್ಯಪ್ ನಲ್ಲಿ ಹೆಸರು ನೊಂದಾಯಿಸಿದ ತಲಾ 25 ಜನ ಬೆಳಗಾವಿ ಜಿಲ್ಲೆಯಲ್ಲಿ ಮೂರು ಕಡೆ ನಡೆಸಿದ ಡ್ರೈರನ್ ನಲ್ಲಿ ಭಾಗವಹಿಸಿದ್ದರು, ಹೆಸರು ನೊಂದಾಯಿಸಿದ 25 …

Read More »

ಅಸ್ಸಾಂ ದೇಗುಲದಲ್ಲಿ ಸಾಹುಕಾರ್ ತಪಸ್ಸು…!!

ಬೆಳಗಾವಿ- ಹೊಸ ವರ್ಷದ ಪ್ರಾರಂಭಿಕ ದಿನವಾದ ಇಂದು, ಅಸ್ಸಾಂ ರಾಜ್ಯದ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿಪೀಠ ಶ್ರೀ ಕಾಮಾಕ್ಯ ದೇವಾಲಯ*ಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕಾಮಾಕ್ಯ ದೇವಾಲಯ ದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ‌ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಮತ್ತು ತಾರ ಅವರನ್ನು ಒಳಗೊಂಡಂತೆ ವಿವಿಧ ರೂಪಗಳಲ್ಲಿ ಕಂಗೊಳಿಸುವ,ಜಗನ್ಮಾತೆ ತಾಯಿ* ಗೆ ಪೂಜೆ ಸಲ್ಲಿಸಿದ ಸಚಿವ ರಮೇಶ್ ಜಾರಕಿಹೊಳಿ ಮಾರಕ ಕೊರೋನಾ …

Read More »

ರಾಜು ಜಿಕ್ಕನಗೌಡರ ಅಂತ್ಯಸಂಸ್ಕಾರ ನಾಳೆ

ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಜು ಚಿಕ್ಕನಗೌಡರ (40) ಹೃದಯಾಘಾತದಿಂದ ಬೆಂಗಳೂರಿನಲ್ಲಿ ಶುಕ್ರವಾರ ಮೃತರಾಗಿದ್ದು ಮೃತರ ಪಾರ್ಥಿವ ಶರೀರ ಮುಂಜಾನೆ 9 ಘಂಟೆಗೆ ಬೆಳಗಾವಿಗೆಯ ಆಜಂನಗರ 5 ನೇ ಅಡ್ಡ ಕ್ರಾಸ್ ನಲ್ಲಿರುವ ಸ್ವಗೃಹಕ್ಕೆ ಆಗಮಿಸಲಿದೆ. ನಂತರ 12 ಘಂಟೆಗೆ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮಕ್ಕೆ ತೆರಳಿ ಸಂಜೆ 4ಘಂಟೆಗೆ ಅಂತಿಮ ಸಂಸ್ಕಾರ ನೆರವೆರಲಿದೆ.

Read More »

ಬೆಳಗಾವಿ ಜಿಲ್ಲೆಯ, ಮೂರು ಕಡೆ ನಾಳೆ ಕೋವಿಡ್ ಲಸಿಕೆ ಡೆಮೊ.

ನಬೆಳಗಾವಿ- ಬೆಳಗಾವಿಯಲ್ಲಿ ನಾಳೆ ಮೂರು ಕಡೆ ಕೋವಿಡ್ ಲಸಿಕೆ ಡೆಮೊ. ಪ್ರಾತ್ಯಕ್ಷಿಕೆ ನಡೆಯಲಿದೆ ವ್ಯಾಕ್ಸೀನ್ ಲಸಿಕೆ ನೀಡುವಾಗ ಯಾವ ಯಾವ ರೀತಿಯ ಕ್ರಮಗಳನ್ನು ಅನುಸರಿಸಲಾಗುತ್ತದೆ ಅನ್ನೋದರ ಬಗ್ಗೆ ಬೆಳಗಾವಿ ಜಿಲ್ಲೆಯ ಮೂರು ಕಡೆಗಳಲ್ಲಿ ಡೆಮೋ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಬೆಳಗಾವಿ ವಂಟಮೂರಿ ಪಿ ಎಚ್ ಸಿ, ಕಿತ್ತೂರು ಹಾಗೂ ಹುಕ್ಕೇರಿ ಆಸ್ಪತ್ರೆಯಲ್ಲಿ ಡೆಮೋ ಮಾಡಲಾಗುತ್ತದೆ. ಆನ್ ಲೈನ್ ನಲ್ಲಿ ರೆಜಿಸ್ಟರ್ ಮಾಡಿದ 25 ಜನ ಮೇಲೆ ಪ್ರಾಯೋಗಿಕ …

Read More »

ಸ್ನೇಹ ಜೀವಿ ರಾಜು ಜಿಕ್ಕನಗೌಡರ ಇನ್ನಿಲ್ಲ…

ಬೆಳಗಾವಿ- ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ಸುದ್ಧಿ ಹೊರಬಿದ್ದಿದೆ. ಸ್ನೇಹಿತರೂ, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಜು ಚಿಕ್ಕನಗೌಡರ್ ಅವರ‌ಉ ಅಕಾಲಿಕ ನಿಧನರಾಗಿದ್ದಾರೆ. ಪಕ್ಷದ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದ ಅವರು,ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ‌ ಮುಂಚೂಣಿ ನಾಯಕರಾಗಿದ್ದ ರಾಜು, ಜಿಕ್ಕನಗೌಡರ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ‌ …

Read More »

ಜಗತ್ತಿಗೆ ವಾಸ್ತುಶಿಲ್ಪ ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿ

ಬೆಳಗಾವಿ, : “ಮಾನವ ಕುಲಕ್ಕೆ ಶಿಲ್ಪಕಲೆ ಎಂಬುದು ವರ. ಶತಮಾನಗಳ ಹಿಂದೆಯೇ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅಮರ ಶಿಲ್ಪಿ ಜಕಣಾಚಾರಿ” ಎಂದು ವಿಶ್ವಕರ್ಮ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಆಚಾರ್ಯ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಜ.1) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »