Breaking News

LOCAL NEWS

ನಾಳೆ ಬೆಳಗಾವಿಯಲ್ಲಿ ಬಿಜೆಪಿಯ ಮಹತ್ವದ ಸಭೆ…

ಬೆಳಗಾವಿ- ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,ನಾಳೆ ಬೆಳಗಾವಿ ನಗರಕ್ಕೆ ಆಗಮಿಸಲಿದ್ದು ,ಬಿಜೆಪಿ ನಾಯಕರ ಮಹತ್ವದ ಸಭೆ ನಡೆಯಲಿದೆ. ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ,ಉಮೇಶ ಕತ್ತಿ ಅವರ ಪ್ರವಾಸದ ಪಟ್ಟಿಯಲ್ಲಿ ನಾಳೆ ನಳೀನ್ ಕುಮಾರ್ ಕಟೀಲು ಅವರು ಮದ್ಯಾಹ್ನ 3-30 ಕ್ಕೆ ನಗರದ ಸಂಕಮ್ ಹೊಟೇಲ್ ನಲ್ಲಿ ಸಭೆ ನಡೆಸಲಿದ್ದು ಈ ಸಭೆಯಲ್ಲಿ ಉಮೇಶ್ ಕತ್ತಿ ಅವರು ಭಾಗವಹಿಸುತ್ತಾರೆ ಎಂದು ತಿಳಿಸಲಾಗಿದೆ. ಬೆಳಗಾವಿ ಬಿಜೆಪಿ ನಾಯಕರ ಸಭೆಯಲ್ಲಿ ಲೋಕಸಭಾ …

Read More »

ಆಸ್ತಿ ವಿವಾದ,4 ವರ್ಷದ ಬಾಲಕನ ಕೊಲೆ..

ಬೆಳಗಾವಿ- ಆಸ್ತಿ ವಿವಾದಕ್ಕೆ ಸಮಂಧಿಸಿದಂತೆ 4 ವರ್ಷದ ಬಾಲಕನನ್ಮೇ ಕೊಲೆ ಮಾಡಿದ ಘಟನೆ ಸವದತ್ತಿ ತಾಲ್ಲೂಕಿನ ಹಾರುಗೊಪ್ಪ ಗ್ರಾಮದಲ್ಲಿ ನಡೆದಿದೆ. ನಾಲ್ಕು ವರ್ಷದ, ಮಾರುತಿ ವಿರೇಶ್ ಸಂಕಣ್ಣವರ ಎಂಬ ಪುಟ್ಟ ಬಾಲಕನನ್ನು ಹತ್ಯೆ ಮಾಡಲಾಗಿದೆ. ಈರಪ್ಪ ಬಸಪ್ಪ ಸಂಕಣ್ಣವರ 35 ವರ್ಷ, ಈತನೇ ,ಕೊಲೆ ಪ್ರಕರಣದ ಮುಖ್ಯ ಆರೋಪಿ ಎಂದು ತಿಳಿದು ಬಂದಿದ್ದು ,ಮುರಗೋಡ ಪೋಲೀಸರು ತನಿಖೆ‌ ,ನಡೆಸಿದ್ದಾರೆ.

Read More »

ಮರಾಠಿಗರ ಕನ್ನಡ ಪ್ರೇಮ,ಕನ್ನಡ ಪತ್ರಕರ್ತರಿಗೂ ಪ್ರಶಸ್ತಿ…

ಕನ್ನಡ ಮರಾಠಿ ಎಷ್ಟು ಸೌಹಾರ್ದತೆಯಿಂದ ಇದೆ ಅನ್ನೋದಕ್ಕೆ ಈ ಪೋಟೋ ನೋಡಿದ್ರೆ ಸಾಕು ,ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತದೆ,ಮರಾಠಿ ವಾಚನಾಲಯ ಸಂಘಟನೆ ಪ್ರತಿ ವರ್ಷ ಉದಯೋನ್ಮುಖ ಕನ್ನಡ ಪತ್ರಕರ್ತರ ನ್ನು ಗುರುತಿಸಿ ಅವರನ್ನು ಗೌರವಿಸುತ್ತಾ ಬಂದಿದೆ ಈ ವರ್ಷ ಕನ್ನಡಿಗರ ಮುಖವಾಣಿ ಕನ್ನಡಮ್ಮ ದಿನಪತ್ರಿಕೆಯ ಮುಖ್ಯ ವರದಿಗಾರ ರಾಜ್ ಹಿರೇಮಠ ಅವರಿಗೆ ಸಮ್ಮಾನ ಮಾಡಿರುವದು ವಿಶೇಷ…. ಬೆಳಗಾವಿ-ಕನ್ನಡ ಮತ್ತು ಮರಾಠಿ ಪತ್ರಕರ್ತರು ಜಿಲ್ಲೆಯ ಸಮಸ್ಯೆಯನ್ನು ಬೆಳಕು ಚೆಲ್ಲುವ ಕಾರ್ಯ …

Read More »

ಸಿಡಿ ಪಾಲಿಟೀಕ್ಸ್ ಶುರು ಆಗಿದ್ದೇ ಬೆಳಗಾವಿಯಿಂದ ….!!!

ಬೆಳಗಾವಿ- ಸಿಡಿ ಇದೇ ಅದನ್ನು ರಿಲೀಸ್ ಮಾಡ್ತೀವಿ ,ನಮಗೆ ಅನುದಾನ ಕೊಡದಿದ್ದರೆ ಅದನ್ನು ರಿಲೀಸ್ ಮಾಡ್ತೀವಿ ಅಂತಾ ಈಗ ಸಿಎಂ ಯಡಿಯೂರಪ್ಪ ಅವರಿಗೆ ಹೆದರಿಸಿ,ಬೆದರಿಸಿ ಅನುದಾನ ಪಡೆಯುತ್ತಿದ್ದಾರೆ ಎಂದು ದೃಶ್ಯ ಮಾದ್ಯಮಗಳಲ್ಲಿ ಪ್ರಕಟವಾಗಿದೆ. ಮಾಜಿ ಕೇಂದ್ರ ಸಚಿವ ಬಸವರಾಜ್ ಯತ್ನಾಳ ಅವರು ಸಿಡಿ ತೋರಿಸಿ ಕೆಪಿಸಿಸಿ ಅದ್ಯಕ್ಷ ಡಿ.ಕೆ ಶಿವಕುಮಾರ್ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ,ಬೆಂಗಳೂರಿನ ಕಾಂಗ್ರೆಸ್ ಶಾಸಕ ಜಮೀರ ಅಹ್ಮದ್ ಅವರು ವಿಶೇಷ ಅನುದಾನ ಪಡೆಯುತ್ತಿದ್ದಾರೆ ಎಂದು …

Read More »

ಮಹಾ ಸಿಎಂ ಠಾಖ್ರೆ ವಿರುದ್ಧ ಕನ್ನಡ ಸಂಘಟನೆಗಳ ಗರಂ…

ಳಗಾವಿ- ಪದೇಪದೇ ಗಡಿ ಕ್ಯಾತೆ ತಗೆಯುತ್ತಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಬೆಳಗಾವಿಯಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯೆಕ್ತಪಡಿಸಿವೆ. ಉದ್ಧವ್ ಠಾಕ್ರೆ ಶವಯಾತ್ರೆ ಮಾಡುವ ಮೂಲಕ ಕನ್ನಡಪರ ಸಂಘಟನೆಗಳ ಆಕ್ರೋಶ ವ್ಯೆಕ್ತಪಡಿಸಿ,ಕನ್ನಡ ಸಾಹಿತ್ಯ ಭವನದಿಂದ ಚೆನ್ನಮ್ಮ ವೃತ್ತಕ್ಕೆ ಉದ್ಧವ ಠಾಕ್ರೆ ಪ್ರತಿಕೃತಿ ತಂದು ಶವಯಾತ್ರೆ ಮಾಡಿದ್ದಾರೆ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಸಚಿವ ಏಕನಾಥ ಶಿಂಧೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕ್ಷಮೆಯಾಚಿಸಬೇಕು, …

Read More »

ಬೆಳಗಾವಿಗೆ ಆಗಮಿಸಿದ, ಅಮಿತ್ ಶಾ…

ಬೆಳಗಾವಿ, – ಜನಸೇವಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಆಗಮಿಸಿದ ಕೇಂದ್ರ ಗೃಹ ಸಚಿವರನ್ನು ಬರಮಾಡಿಕೊಳ್ಳಲಾಯಿತು. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಗಣ್ಯರನ್ನು ಸ್ವಾಗತಿಸಿದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ …

Read More »

ಗೋ ಬ್ಯಾಕ್, ಎಂದು ಘೋಷಣೆ ಕೂಗಿದವರು,ಅರೆಸ್ಟ್ ಆದ್ರು…!!

ಬೆಳಗಾವಿ- ಕೇಂದ್ರ ಗೃಹ ಸಚಿವ ಅಮೀತ ಶಾ ಅವರು ಇಂದು ಬೆಳಗಾವಿಗೆ ಬರುತ್ತಿರುವ ಹಿನ್ನಲೆಯಲ್ಲಿ ,ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಪೋಲೀಸರು ಬಂಧಿಸಿದ್ದಾರೆ.. ಇಂದು ಬೆಳ್ಳಂ ಬೆಳಿಗ್ಗೆ ವಿವಿಧ ರೈತಪರ ಸಂಘಟನೆಗಳು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟಿಸಿದರು,ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿಯವರೆಗೆ ಉರುಳು ಸೇವೆಮಾಡಿದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಅಮೀತ ಶಾ ಗೋ ಬ್ಯಾಕ್…ರೈತ ವಿರೋಧಿ ಕಾನೂನು ಜಾರಿಗೆ …

Read More »

ಕೋರೆ ಅಂಗಳದಲ್ಲಿ ಬಿಜೆಪಿ ಕೋರ್ ಕಮೀಟಿ….!!!

ಬೆ ಬೆಳಗಾವಿ-ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರಲಿ ಅಥವಾ ಬಿಜೆಪಿ ಇರಲಿ,ಕೇಂದ್ರ ಸಚಿವರು,ರಾಷ್ಟ್ರೀಯ ನಾಯಕರು ಯಾರೇ ಆಗಲಿ ಅವರು ಬೆಳಗಾವಿಗೆ ಬಂದರೆ,ಅವರು ಕಡ್ಡಾಯವಾಗಿ ಕೆ ಎಲ್ ಇ ಗೆ ಹೋಗಲೇಬೇಕು. ಈ ವಿಷಯದಲ್ಲಿ ಡಾ. ಪ್ರಭಾಕರ ಕೋರೆ ಯಾವತ್ತೂ ಫೇಲ್ ಆಗಿಲ್ಲ,ಮುಂದೆ ಆಗುವದೂ ಇಲ್ಲ,ಯಾಕಂದ್ರೆ ಪ್ರಭಾಕರ ಕೋರೆ ಎನ್ನುವ ಹೆಸರಿನಲ್ಲೇ ಪವರ್ ಅಡಗಿದೆ,ಮಾಜಿ…ಎನ್ನಯವ ಪದವನ್ನು ಅವರು ಸಹಿಸಿಕೊಂಡಿಲ್ಲ,ಮಾಜಿ ರಾಜ್ಯಸಭಾ ಸದಸ್ಯ ಆಗಿರುವ ಪ್ರಭಾಕರ ಕೋರೆ ಈಗ ಹಾಲಿ ಆಗಲು ಎಲ್ಲಿಲ್ಲದ ಕಸರತ್ತು …

Read More »

ನಾಳೆ ಅಮೀತ ಶಾ ಕಾರ್ಯಕ್ರಮಕ್ಕೆ ಲಕ್ಷ..ಲಕ್ಷ..ಜನ…

ಬೆಳಗಾವಿ- ಕೇಂದ್ರ ಗೃಹ ಸಚಿವ,ಬಿಜೆಪಿಯ ಚಾಣಕ್ಯ ಎಂದೇ ಪ್ರಸಿದ್ಧಿ ಪಡೆದಿರುವ ಅಮೀತ ಶಾ ಅವರು ನಾಳೆ ಕುಂದಾನಗರಿ ಬೆಳಗಾವಿಗೆ ಆಗಮಿಸುತ್ತಿದ್ದು ಬೆಳಗಾವಿ ಈಗ ಬಿಜೆಪಿ ಮಯವಾಗಿದೆ. ನಾಳೆ ಮಧ್ಯಾಹ್ನ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಮೀತ ಶಾ ಅವರ ಕಾರ್ಯಕ್ರಮ ನಡೆಯಲಿದ್ದು,ಇಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಲಕ್ಷ.. ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬೆಳಗಾವಿಯಲ್ಲಿ ಅಮೀತ ಶಾ ಅವರಿಗೆ ಸ್ವಾಗತ ಕೋರಿ ದೊಡ್ಡ ದೊಡ್ಡ ಬ್ಯಾನರ್ ಗಳನ್ನು …

Read More »

ಮಂತ್ರಿಯಾದ ಬಳಿಕ ಅಖಂಡ ಕರ್ನಾಟಕದ ಮಂತ್ರ ಜಪಿಸಿದ ಸಾಹುಕಾರ್…!

ಬೆಳಗಾವಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ನನಗೆ ಸಚಿವ ಸ್ಥಾನ ಸಿಗುವಲ್ಲಿ ವಿಳಂಬವಾದರೂ ಸಿಎಂ ನನ್ನ ಮೇಲೆ ವಿಶ್ವಾಸ ಇಟ್ಟು ಸಚಿವ ಸ್ಥಾನ ನೀಡಿದ್ದಾರೆ. ಉತ್ತರ ಕರ್ನಾಟಕದ ಜತೆ ಜತೆಗೆ ಅಖಂಡ ಕರ್ನಾಟಕದ ಅಭಿವೃದ್ದಿಗೆ ಶ್ರಮಿಸುವೆ ಎಂದು ನೂತನ ಸಚಿವ ಉಮೇಶ ಕತ್ತಿ ಹೇಳಿದರು. ಶುಕ್ರವಾರ ನಗರದ ಲಕ್ಷ್ಮೀ ಟೇಕಡಿಯ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಮಾತನಾಡಿದರು. ರಾಜ್ಯದಲ್ಲಿ …

Read More »

ಯಮಕನಮರಡಿಯಲ್ಲಿ ಗೆದ್ದು ತೋರಿಸಲಿ……ಹೊಸ ಸವಾಲ್..!!

ಬೆಳಗಾವಿ- ಸತೀಶ್ ಜಾರಕಿಹೋಳಿಗೆ ರಮೇಶ್ ಜಾರಕಿಹೋಳಿ ತಿರಿಗೇಟು ನೀಡಿದ್ದಾರೆ. ಸತೀಶ್ ಜಾರಕಿಹೋಳಿ ಹೇಳಿಕೆ ನನಗೆ ನಗು ಜೊತೆಗೆ ವಿಚಿತ್ರ ಎನಿಸುತ್ತಿದೆ ಸತೀಶ್ ಜಾರಕಿಹೊಳಿ ಕೃತಕ ರಾಜಕಾರಣಿ ಎಂದು ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಗೆ ಟಾಂಗ್ ಕೊಟ್ಟಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ತಂದೆ ಲಕ್ಷ್ಮಣರಾವ್ ಜಾರಕಿಹೋಳಿ ಬಗ್ಗೆ ಮಾದ್ಯಮದವರೇ ಗೋಕಾಕ್ ಗೆ ಹೋಗಿ ಚೆಕ್ ಮಾಡಬಹುದು, ಜನಸಂಘದಿಂದ ಬಂದಿದ್ದು ನಿಜ, ಕಾಂಗ್ರೆಸ್ ನಲ್ಲಿ ಜಾತ್ಯಾತೀತ ಆಗಿದ್ದು …

Read More »

ಬೆಳಗಾವಿಯಲ್ಲಿ ಅಮೀತ ಶಾ ಕೋರ್ ಕಮೀಟಿ ಮೀಟೀಂಗ್ ಮಾಡ್ತಾರೆ…!!

ಬೆಳಗಾವಿ-ರಾಜ್ಯಕ್ಕೆ ಎರಡು ದಿನ ಅಮಿತ್ ಶಾ ಬರ್ತಾಯಿದ್ದಾರೆ 16 ರಂದು ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬರ್ತಾರೆ. ಬೆಂಗಳೂರಿನಲ್ಲಿ ಇಲಾಖೆ ಪರಿಶೀಲನೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ಕೊಡ್ತಾರೆ. ಭದ್ರವಾತಿಗೆ ಕಾರ್ಯಕ್ರಮಕ್ಕೆ ಹೋಗಿ ಮರಳಿ ಬೆಂಗಳೂರಿಗೆ ವಾಸ್ತವ್ಯಕ್ಕೆ ಬರಲಿದ್ದಾರೆ. 17 ರಂದು ಬೆಳಗ್ಗೆ 10.30ಕ್ಕೆ ಅಮಿತ್ ಶಾ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಕ್ಕೆ ಬರಲಿದ್ದಾರೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ …

Read More »

ರಮೇಶ್ ಹಾಕಿದ್ದು ಮುಸ್ಲೀಂ ಟೋಪಿ……!

ಬೆಳಗಾವಿ ರಮೇಶ ಜಾರಕಿಹೊಳಿ ಮುಸ್ಲಿಂ ಟೋಪಿ ಹಾಕಿದ್ದು ನೋಡಿದ್ದೇವೆ ಆದರೆ ಕರಿ ಟೋಪಿ ಹಾಕಿದ್ದು ನೋಡಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಶುಕ್ರವಾರ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ರಮೇಶ ಜಾರಕಿಹೊಳಿ ಮುಸ್ಲಿಂ ಪರವಾಗಿ ಹೋರಾಟ ಮಾಡಿದ್ದರು. ಮುಂದೆಯೂ ಇರುತ್ತಾರೆ ಎನ್ನುವ ವಿಶ್ವಾಸ ಇದೆ.ರಮೇಶ ಜಾರಕಿಹೊಳಿ ಅಧಿಕಾರ ಎಂಜಾಯ್ ಮಾಡಲಿ ಆದರೆ ಹಿಂದಿನ ಹೋರಾಟ ಮುಂದುವರೆಸಬೇಕು ಎಂದು ಸಲಹೆ‌ ನೀಡಿದರು. ನಮ್ಮ ತಂದೆ ಪತ್ರ ಚಳವಳಿಯಲ್ಲಿ …

Read More »

ಪ್ರಮಾಣ ವಚನ ಸ್ವೀಕರಿಸಿದ ಹುಕ್ಕೇರಿ ಸಾಹುಕಾರ್….!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ರಾಜಕೀಯ ಮನೆತನದ ಹಿರಿಯ ಸದಸ್ಯ ಉಮೇಶ್ ಕತ್ತಿ ಇಂದು ಕೊನೆಗೂ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅಚ್ಚರಿಯ ಬೆಳವಣಿಗೆಯಲ್ಲಿ ಉಮೇಶ್ ಕತ್ತಿ ಅವರಿಗೆ ಕೊನೆಗೂ‌ ಮಂತ್ರಿ ಸ್ಥಾನ ಸಿಕ್ಕಿದ್ದು ಎಂ‌ ಟಿ ಬಿ ನಾಗರಾಜ್ ಅರವಿಂದ ಲಿಂಬಾವಳಿ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದೆ, ರಾಜಾ ಹುಲಿ ಸಂಪುಟಕ್ಕೆ ಒಟ್ಟು 7 ಜನ ಹೊಸ ಸಚಿವರು ಸೇರ್ಪಡೆ ಆಗಿದ್ದಾರೆ..

Read More »

ಬೆಳಗಾವಿಯಲ್ಲಿ ಬ್ಯಾಂಡ್ ಬಾರಿಸಿ.. ವ್ಯಾಕ್ಸೀನ್ ವೆಲ್ ಕಮ್ ಮಾಡಿದ್ರು….!!

ಬೆಳಗಾವಿ- ಕೋವೀಡ್ ವ್ಯಾಕ್ಸೀನ್ ಇಂದು ಬೆಳಗಿನ ಜಾವ ಬೆಳಗಾವಿಗೆ ತಲುಪಿದ್ದು ಆರೋಗ್ಯ ಇಲಾಖೆಯ ಅಧಿಕಾರಿಗಳು ಬ್ಯಾಂಡ್ ಬಾರಿಸಿ ಮಹಾಮಾರಿಯ ವ್ಯಾಕ್ಸೀನ್ ಬರಮಾಡಿಕೊಂಡಿದ್ದಾರೆ‌ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿನ್ನೆಯಿಂದೇ ವ್ಯಾಕ್ಸೀನ್ ಯಾವಾಗ ಬರುತ್ತೇ ಅಂತಾ ದಾರಿ ಕಾಯುತ್ತಿದ್ದರು ಆದ್ರೆ ಈ ವ್ಯಾಕ್ಸೀನ್ ಇಂದು ಬೆಳಗಿನ ಜಾವವೇ ರಸ್ತೆ ಮೂಲಕ ಬೆಳಗಾವಿಗೆ ತಲುಪಿದೆ,ವ್ಯಾಕ್ಸೀನ್ ಹೊತ್ತು ತಂದ ವಾಹನಕ್ಕೆ ಆರತಿ ಮಾಡಿ ಬ್ಯಾಂಡ್ ಬಾರಿಸಿ ಸ್ವಾಗತ ಮಾಡಿದ್ದಾರೆ. ಒಂದು ವಾಹನದಲ್ಲಿ ಕೋವೀಡ್ ವ್ಯಾಕ್ಸೀನ್ ಬೆಳಗಾವಿಗೆ …

Read More »