Breaking News

LOCAL NEWS

ಸ್ನೇಹ ಜೀವಿ ರಾಜು ಜಿಕ್ಕನಗೌಡರ ಇನ್ನಿಲ್ಲ…

ಬೆಳಗಾವಿ- ಹೊಸ ವರ್ಷದ ಮೊದಲ ದಿನವೇ ಶಾಕಿಂಗ್ ಸುದ್ಧಿ ಹೊರಬಿದ್ದಿದೆ. ಸ್ನೇಹಿತರೂ, ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿದ್ದ ರಾಜು ಚಿಕ್ಕನಗೌಡರ್ ಅವರ‌ಉ ಅಕಾಲಿಕ ನಿಧನರಾಗಿದ್ದಾರೆ. ಪಕ್ಷದ ಕಾರ್ಯದ ನಿಮಿತ್ಯ ಬೆಂಗಳೂರಿಗೆ ತೆರಳಿದ್ದ ಅವರು,ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ನಾಯಕತ್ವ ಬೆಳೆಸಿಕೊಂಡು ಎಬಿವಿಪಿಯ‌ ಮುಂಚೂಣಿ ನಾಯಕರಾಗಿದ್ದ ರಾಜು, ಜಿಕ್ಕನಗೌಡರ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ 2 ಬಾರಿ ನೇಮಕಗೊಂಡು ವಿಶ್ವವಿದ್ಯಾಲಯದ ಉನ್ನತಿಗಾಗಿ ಕೆಲಸ‌ …

Read More »

ಜಗತ್ತಿಗೆ ವಾಸ್ತುಶಿಲ್ಪ ಪರಿಚಯಿಸಿದವರು ಅಮರಶಿಲ್ಪಿ ಜಕಣಾಚಾರಿ

ಬೆಳಗಾವಿ, : “ಮಾನವ ಕುಲಕ್ಕೆ ಶಿಲ್ಪಕಲೆ ಎಂಬುದು ವರ. ಶತಮಾನಗಳ ಹಿಂದೆಯೇ ಶಿಲ್ಪಕಲೆಯನ್ನು ಜಗತ್ತಿಗೆ ಪರಿಚಯಿಸಿದ್ದು ಅಮರ ಶಿಲ್ಪಿ ಜಕಣಾಚಾರಿ” ಎಂದು ವಿಶ್ವಕರ್ಮ ಅಭಿವೃದ್ದಿ ನಿಗಮ ಮಾಜಿ ಅಧ್ಯಕ್ಷರಾದ ಆರ್.ಶ್ರೀನಿವಾಸ್ ಆಚಾರ್ಯ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಜ.1) ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …

Read More »

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು

ದ್ವಿಚಕ್ರ ವಾಹನ, ಶ್ರೀಗಂಧದ ತುಂಡು ಮುಟ್ಟುಗೋಲು ಬೆಳಗಾವಿ, ಜ.1(ಕರ್ನಾಟಕ ವಾರ್ತೆ): ಸದಲಗಾ ಪೊಲೀಸ್ ಠಾಣೆಯ ಪ್ರಕರಣ ಸಂಖ್ಯೆ 81/2015 ದಿನಾಂಕ 30-6-2015 ರಲ್ಲಿ ಅಮಾನತುಪಡಿಸಿಕೊಂಡ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟರ್ ಸೈಕಲ್ ನಂ. ಎಂಎಚ್-16 ಪಿ-3661 ಅನ್ನು ಶ್ರೀಗಂಧದ 4 ತುಂಡುಗಳ ಸಮೇತ ಸರ್ಕಾರದ ಪರ ಮುಟ್ಟುಗೋಲು ಹಾಕಿಕೊಳ್ಳಲಾಗಿರುತ್ತದೆ. ಅದೇ ರೀತಿ ಕಾಗವಾಡ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ 18/2016 ದಿನಾಂಕ 26-1-2016 ರಲ್ಲಿ ಅಮಾನತುಪಡಿಸಿಕೊಂಡ ಟಿವಿಎಸ್ ಮೋಟಾರು …

Read More »

ಫಸ್ಟ್ ಡೇ…ಫಸ್ಟ್ ಶೋ…ಹೌಸ್ ಫುಲ್…!!

  ಬೆಳಗಾವಿ-ಸರ್ಕಾರ ಇಂದಿನಿಂದ ಎಸ್ ಎಸ್ ಎಲ್ ಸಿ, ಮತ್ತು ಪಿಯುಸಿ ದ್ವೀತಿಯ ವರ್ಷದ ತರಗತಿಗಳನ್ನು ಆರಂಭಿಸಿದ್ದು,ಬೆಳಗಾವಿಯಲ್ಲಿ ಇಂದು ಮೊದಲನೇಯ ದಿನ ಸಕತ್ತ್ ರಿಸ್ಪಾನ್ಸ್ ಸಿಕ್ಕಿದೆ. ಬೆಳಗಾವಿ ನಗರದಲ್ಲಿ ಶಾಲೆ ಆರಂಭೋತ್ಸವದ ಮೊದಲ ದಿನ ಎಸ್ ಎಸ್ ಎಲ್ ಸಿ ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗಳಲ್ಲಿ ಭಾಗವಹಿಸಿದ್ದಾರೆ. ಕಾಲೇಜುಗಳಲ್ಲಿಯೂ ಪಿಯುಸಿ ದ್ವೀತಿಯ ವರ್ಷದ ವಿಧ್ಯಾರ್ಥಗಳು ಸರ್ಕಾರದ ಕರೆಗೆ ಓಗೊಟ್ಟು ತರಗತಿಗಳಲ್ಲಿ ಭಾಗವಹಿಸಿದ್ದಾರೆ ಬೆಳಗಾವಿಯ ಸರ್ದಾರ ಹೈಸ್ಕೂಲ್ ಮತ್ತು ಕಾಲೇಜು,ವನಿತಾ ವಿದ್ಯಾಲಯ,ಮಹಿಳಾ …

Read More »

ಹಿರೇಬಾಗೇವಾಡಿಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ

ಬೆಳಗಾವಿ- ಬೆಳಗಾವಿ ಪಕ್ಕದ ಹಿರೇಬಾಗೇವಾಡಿ ಗ್ರಾಮದಲ್ಲಿ ಪ್ರತ್ಯೇಕವಾದಿಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಿದ್ದಾರೆ. ಗಡಿನಾಡು ಗುಡಿ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಪಟ್ಟಣದಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಧ್ವಜ ಹಾರಾಡಿದ್ದು,ಬೆಳಗಾವಿ ಜಿಲ್ಲೆಯಿಂದ ಮತ್ತೇ ಪ್ರತ್ಯೇಕ ರಾಜ್ಯದ ಕೂಗು ಎದ್ದಿದೆ. ಪೊಲೀಸರ ಕಣ್ಣು ತಪ್ಪಿಸಿ, ಯಾಮಾರಿಸಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಿದ ಹೋರಾಟಗಾರರು,ಬೆಳಗಾವಿ ಜಿಲ್ಲೆಯಿಂದಲೇ ಪ್ರತ್ಯೇಕ ರಾಜ್ಯದ ಕಿಡಿ ಹೊತ್ತಿಸಿದ್ದಾರೆ. ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮೀತಿಯಿಂದ ಧ್ವಜಾರೋಹಣ ಮಾಡಲಾಗಿದ್ದು. …

Read More »

ಪಾಲಿಕೆ ಎದುರು ಕನ್ನಡ ಬಾವುಟ ಹಾರಿಸಿದ ತಾಳೂರಕರ ಅಂಗಡಿಗೆ ಬೆಂಕಿ…

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಮುಂಭಾಗ ಕನ್ನಡ ಧ್ವಜ ಸ್ತಂಭ ಸ್ಥಾಪನೆ ಮಾಡಿ ಕನ್ನಡ ಧ್ವಜ ಹಾರಿಸಿದ ಹೋರಾಟಗಾರ ಶ್ರೀನಿವಾಸ್ ತಾಳೂರಕರ್ ಅಂಗಡಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ ತಡರಾತ್ರಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿಗಳು, ತಾಳೂರಕರ ಅಂಗಡಿ ಭಸ್ಮ ಮಾಡುವ ಪ್ರಯತ್ನ ಮಾಡಿದ್ದಾರೆ. ತಕ್ಷಣ ನೋಡಿದ್ದರಿಂದ ಅನಾಹುತ ತಪ್ಪಿದೆ. ಬೆಳಗಾವಿ ‌ಶಹಾಪುರದಲ್ಲಿ ಇರೋ‌ ತಾಳೂರಕರ್ ಮನೆ, ಮನೆಯ ಹತ್ತಿರವೇ ಅಂಗಡಿ ಇದೆ‌ ಸ್ಥಳಕ್ಕೆ ಶಹಾಪುರ ಪೊಲೀಸರು …

Read More »

ಕ್ರಿಯಾಶೀಲವಾಗಿರುವ ಡಾ.ಸೋನಾಲಿ ಸರ್ನೋಬತ್….!!!

    ಬೆಳಗಾವಿ- ಕ್ರೀಯಾಶೀಲ ವ್ಯಕ್ತಿಗೆ ಹುದ್ದೆಗಳು ತಾನಾಗಿಯೇ ಒಲಿದು ಬರುತ್ತವೆ,ಕೊಟ್ಟ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರೆ.ಯಶಸ್ಸು ಸಿಗುತ್ತದೆ.ಯಶಸ್ಸು ಸಿಗುತ್ತಾ ಹೋದಂತೆ ಟೀಕೆ ಟಿಪ್ಪಣಿ ಗಳು ಎದುರಾಗುತ್ತವೆ.ಕೊಟ್ಟ ಜವಾಬ್ದಾರಿಯನ್ನು ಕಳಕಳಿಯಿಂದ ನಿಭಾಯಿಸಿದ ಬಳಿಕ ಟೀಕೆಗಳು ಸಾಯುತ್ತವೆ ಸಾಧನೆಗಳು ಉಳಿಯುತ್ತವೆ ಎನ್ನುವದಕ್ಕೆ ಬೆಳಗಾವಿಯ ಡಾ.ಸೋನಾಲಿ ಸರ್ನೋಬತ್ ಅವರೇ ಉತ್ತಮ ಉದಾಹರಣೆ ಯಾಗಿದ್ದಾರೆ. ಡಾ.ಸೋನಾಲಿ ಸರ್ನೋಬತ್ ಅವರು ಯಾವುದೇ ನಿಗಮ ಮಂಡಳಿಯ ಅಧ್ಯಕ್ಷರಾಗಿಲ್ಲ,ಯಾವುದೇ ರೀತಿಯ ಲಾಭದಾಯಕ ಹುದ್ದೆಗಳು ಅವರ ಹತ್ತಿರವಿಲ್ಲ ಬಿಜೆಪಿ ಪಕ್ಷದ ಸಂಘಟನಾತ್ಮಕ …

Read More »

ಕೊರೋನಾ 2020 ಕರಾಳ ವರ್ಷದ ಕೊನೆಯ ದಿನದ ರಿಪೋರ್ಟ್…!!

ಬೆಳಗಾವಿ- 2020 ಕೊರೋನಾ ವರ್ಷ,ಎಲ್ಲರೂ ಪರದಾಡಿದ ವರ್ಷ,ದೇಶ ಲಕ್ಷಾಂತರ ಜನರನ್ನು ಕಳೆದುಕೊಂಡ ಕರಾಳ ವರ್ಷ.ಇವತ್ತು ಈ ಕರಾಳ ವರ್ಷದ ಕೊನೆಯ ದಿನದ ಹೆಲ್ತ್ ಬುಲೀಟೀನ್ ಬಿಡುಗಡೆಯಾಗಿದೆ. ಇವತ್ತಿನ ಹೆಲ್ತ್ ಬುಲಿಟೀನ್ ಪ್ರಕಾರ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು 25 ಜನ ಕೋವೀಡ್ ಸೊಂಕಿತರು ಪತ್ತೆಯಾಗಿದ್ದಾರೆ,ಇವತ್ತು 28 ಜನ ಗುಣಮುಖರಾಗಿ ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು.ಈ ಕರಾಳ ವರ್ಷದ ಕೊನೆಯ ದಿನ ಬೆಳಗಾವಿ ಜಿಲ್ಲೆಯಲ್ಲಿ ಇವತ್ತು ಒಟ್ಟು 196 ಜನರಲ್ಲಿ …

Read More »

ಜಾರಕಿಹೊಳಿ ಕುಟುಂಬದ ಕುಡಿಗಳಲ್ಲಿಯೂ ಸಮಾಜ ಸೇವೆಯ ಸಂಸ್ಕಾರ….!!!

  ಕಾಂಗ್ರೆಸ್ ಸೇರ್ಪಡೆಯಾದ ಬಿಜೆಪಿ ಕಾರ್ಯಕರ್ತರು ,……………………… ಮೃತ ಮಹಿಳೆ ಕುಟುಂಬಸ್ಥರಿಗೆ ದನ ಸಹಾಯ: ಮಾನವೀಯತೆ ಮೆರೆದ ರಾಹುಲ್, ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ: ಜಮೀನಿನಲ್ಲಿ ಸೊಯಾಬಿನ್ ರಾಶಿ ಮಾಡುವಾಗ ಮಷಿನ್ ನಡಿ ಸಿಲುಕಿ ಮೃತಪಟ್ಟಿದ್ದ ಮಹಿಳೆ ಕುಟುಂಬಕ್ಕೆ ಶಾಸಕ ಸತೀಶ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಧನ ಸಹಾಯ ಚೆಕ್ ನೀಡುವ ಮೂಲಕ ಮಾನ ವೀಯತೆ ಮೆರೆದಿದ್ದಾರೆ. ಎರಡು ತಿಂಗಳ‌ ಹಿಂದೆ ಹುಕ್ಕೇರಿ ತಾಲೂಕಿನ …

Read More »

ಹಾಲಿ, ಜಿಪಂ…ತಾಪಂ..ಸದಸ್ಯರಿಗೆ ಗ್ರಾಪಂ ನಲ್ಲಿ ಸೋಲು……!!

ಬೆಳಗಾವಿ- ತಾಲ್ಲೂಕಿನ ಹಾಲಿ ಜಿಲ್ಲಾ ಪಂಚಾಯತಿ ಸದಸ್ಯೆ ಮತ್ತು ಓರ್ವ ಹಾಲಿ ತಾಲ್ಲೂಕಾ ಪಂಚಾಯತಿ ಸದಸ್ಯ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದಾರೆ. ಸುಳೇಭಾವಿ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯೆ ಲಕ್ಷ್ಮೀ ವಿಠ್ಠಲ ಪಾರ್ವತಿ,ಸುಳೆಭಾವಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ದೆ ಮಾಡಿ ಸೋತಿದ್ದಾರೆ.ಇವರು ಕಾಂಗ್ರೆಸ್ಸಿನ ಜಿಪಂ ಸದಸ್ಯರಾಗಿದ್ದಾರೆ. ಬಾಳೆಕುಂದ್ರಿ ಕೆ.ಹೆಚ್ ಕ್ಷೇತ್ರದ ತಾಲ್ಲೂಕಾ ಪಂಚಾಯತಿ ಸದಸ್ಯ ನಿಲೇಶ್ ಚಂದಗಡಕರ ಅವರು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ದೆ ಮಾಡಿದ್ದರು ಇವರನ್ನೂ ಮತದಾರರು …

Read More »

ಲಂಡನ್ ನಿಂದ ಬೆಳಗಾವಿಗೆ ಬಂದಿದ್ದು 15 ಜನ…

ಬೆಳಗಾವಿ- ಲಂಡನ್ ನಿಂದ ಬೆಳಗಾವಿ ಜಿಲ್ಲೆಗೆ 15 ಜನ ಬಂದಿದ್ದು ಈ ಹದಿನೈದು ಜನರ ಪೈಕಿ 10 ಜನ ಬೆಳಗಾವಿ ನಗರದಲ್ಲಿದ್ದು ಉಳಿದ ಐದು ಜನ ಬೆಳಗಾವಿ ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಎಂಜಿ ಹಿರೇಮಠ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯ ಬೆಳಗಾವಿ ತಾಲ್ಲೂಕಿನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಇಂಗ್ಲೆಂಡ್ ದಿಂದ ಬೆಳಗಾವಿಗೆ ಬಂದಿರುವ ಹದಿನೈದು …

Read More »

20 ವರ್ಷದ ಬಳಿಕ ಬಂದ ಗೆಲುವಿನ ಸುದ್ಧಿಗೆ ಕಣ್ಣೀರು….!!!

ಬೆಳಗಾವಿ- ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲು ಸಾಧ್ಯವಾಗಿರಲಿಲ್ಲ ಆದ್ರೆ ಇವತ್ತು ಗೆಲುವಿನ ಸುದ್ಧಿ ಕೇಳಿ ಮತೆಣಿಕೆ ಕೇಂದ್ರದ ಹೊರಗೆ ಆ ಅಭ್ಯರ್ಥಿ ಕಣ್ಣೀರು ಸುರಿಸಿದ ಘಟನೆ ನಡೆಯಿತು. ಗೆಲುವಿನ ಖುಷಿಯಲ್ಲಿ ಕಣ್ಣೀರು ಹಾಕಿದ ನೂತನ ಗ್ರಾ.ಪಂ.ಸದಸ್ಯ ಹಾಗೂ ಕುಟುಂಬ 20 ವರ್ಷದ ನಂತರ ಮೊದಲ ಬಾರಿಗೆ ಸಂಭ್ರಮಿಸಿತು. ಬೆಳಗಾವಿಯ ಮತ‌ಎಣಿಕೆ ಕೇಂದ್ರದ ಹೊರಗೆ ಈ ರೀತಿಯ ಘಟನೆ ನಡೆಯಿತು. ಮುತಗಾ ಗ್ರಾ.ಪಂ. ವಾರ್ಡ್ ನಂಬರ್ 4ರಲ್ಲಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಗಾರ್ಡ್ ಮರ್ಡರ್…

ಬೆಳಗಾವಿ-ಬೈಕ್ ಮೇಲೆ ಬಂದ ಭಗ್ನ ಪ್ರೇಮಿಯೊಬ್ಬ ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮಹಿಳಾ ಸೆಕ್ಯೂರಿಟಿ ಗಾರ್ಡ್ ಮೇಲೆ ತಲವಾರ್ ನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ಸುಧಾರಾಣಿ ಹಡಪದ(30) ಎಂಬ ಮಹಿಳೆಯ ಹತ್ಯೆ ಮಾಡಲಾಗಿದ್ದು ಈ ಮಹಿಳೆ,ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಸಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದ್ದು.ಜಿಲ್ಲಾಸ್ಪತ್ರೆ ಆವರಣದಲ್ಲೇ ತಲವಾರ್‌ನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ …

Read More »

ಬೆಳಗಾವಿ ಪಾಲಿಕೆಯ,ಕನ್ನಡ ಧ್ವಜ ಸ್ತಂಭದ ಬುನಾದಿ ಈಗ ಸುಭದ್ರ….!!!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಮೇಲೆ ನಿರಂತರವಾಗಿ ಕನ್ನಡದ ಧ್ವಜ ಹಾರಾಡಬೇಕು ಎನ್ನುವದು ಗಡಿನಾಡು ಕನ್ನಡಿಗರ ದಶಕಗಳ ಮಹಾದಾಸೆಯಾಗಿತ್ತು,ಈ ಕುರಿತು, ಹಲವಾರು ಜನ ಕನ್ನಡಪರ ಹೋರಾಟಗಾರರು ಕಂಡ ಕನಸು ಇವತ್ತು ನನಸಾಗಿದೆ. ನಿನ್ನೆ ಬೆಳಿಗ್ಗೆ ಕನ್ನಡಪರ ಹೋರಾಟಗಾರ ಶ್ರೀನಿವಾಸ ತಾಳೂರಕರ,ಕಸ್ತೂರಿ ಭಾವಿ,ವಾಜೀದ ಹಿರೇಕೋಡಿ ಸೇರಿದಂತೆ ಹಲವಾರು ಜನ ಕನ್ನಡಪರ ಹೋರಾಟಗಾರರು ಬೆಳಗಾವಿ ಮಹಾನಗರ ಪಾಲಿಕೆಯ ಎದುರು ಕನ್ನಡ ಧ್ವಜ ಸ್ತಂಭ ಅನಾವರಣ ಮಾಡಿ ಕನ್ನಡ ಧ್ವಜವನ್ನು ಹಾರಿಸಿದ್ದರು. ಪಾಲಿಕೆ ಎದುರು ಕನ್ನಡ …

Read More »

ಧ್ವಜ ಸ್ತಂಭ ಇರಬೇಕಾ..ಬೇಡವಾ..? ಸರ್ಕಾರ ನಿರ್ಧಾರ ಕೈಗೊಳ್ಳಲಿ

ಬೆಳಗಾವಿ- ಪರಿಷತ್ತಿನ ಉಪಸಭಾಪತಿ ಧರ್ಮೆಗೌಡ ಆತ್ಮಹತ್ಯೆ ಪ್ರಕರಣದ ಕುರಿತು ತನಿಖೆಯಾಗಬೇಕು ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಧರ್ಮೆಗೌಡ ಅವರು ಜೆಡಿಎಸ್ ನಲ್ಲಿ ಇದ್ದಾಗ ನಮಗೆ ಆತ್ಮೀರಾಗಿದ್ದರು. ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ. ಸದ್ಯ ಅವರ ಕುಟುಂಬಸ್ಥರಿಗೆ ದೈರ್ಯ ಹೇಳಬೇಕಾಗಿದೆ, ಪರಿಷತ್ತ ನಲ್ಲಿ ಗಲಾಟೆ ನಡೆದು ಬಹಳ ದಿನ ಆಗಿದೆ. ಅದಕ್ಕೂ ಇದಕ್ಕೂ ಲಿಂಕ್ ಮಾಡೋಕೆ ಆಗಲ್ಲ. ಅವರ …

Read More »