Breaking News

LOCAL NEWS

ವಿಡಿಯೋದಲ್ಲಿ ಯೋಧನ, ರೋಧನ….ಮೂವರ ಬಂಧನ…!

ಯೋಧನ ಕುಟುಂಬದ ಮೇಲೆ ಹಲ್ಲೆ,ಭೀತಿಯಿಂದ ಗ್ರಾಮ ತೊರೆದ ಯೋಧನ ಕುಟುಂಬ….! ಬೆಳಗಾವಿ- ಅಣ್ಣ ಮತ್ರು ತಂಗಿ ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಮಾಡುತ್ತಿದ್ದಾರೆ,ಈ ಯೋಧನ ಮನೆಗೆ ನುಗ್ಗಿರುವ ದುಷ್ಕರ್ಮಿಗಳು ಮನೆಯಲ್ಲಿದ್ದ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಯೋಧ ಮತ್ತು ಯೋಧನ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ ಘಟನೆ ಬೆಳಗಾವಿ ಸಮೀಪದ ಕಿಣಿಯೇ ಗ್ರಾಮದಲ್ಲಿ ನಡೆದಿದೆ. ಮೂಳೆ ಚಿಕಿತ್ಸೆಗೆ ಪ್ರಸಿದ್ದಿ ಪಡೆದಿರುವ ಕಿಣಿಯೇ ಗ್ರಾಮದಲ್ಲಿ ಈ ಘಟನೆ ನಡೆದಿದೆ,ನನ್ನ ಹಾಗು ನನ್ನ ಕುಟುಂಬದವರ …

Read More »

ಬೆಳಗಾವಿ ಮಹಾನಗರದ ಹೊಸ ಡಿಸಿಪಿ ವಿಕ್ರಂ ಆಮಟೆ

ಬೆಳಗಾವಿ- ಬೆಳಗಾವಿಯ ಕಾನೂನು ಮತ್ತು ಸುವ್ಯೆವಸ್ಥೆ ವಿಭಾಗದ ಡಿಸಿಪಿ ಯನ್ನಾಗಿ ವಿಕ್ರಂ ಆಮಟೆ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ಡಿಸಿಪಿ ಸೀಮಾ ಲಾಟ್ಕರ್ ಅವರ ವರ್ಗಾವಣೆಯಿಂದ ತೆರುವಾದ ಸ್ಥಾನಕ್ಕೆ ವಿಕ್ರಂ ಆಮಟೆ ಅವರನ್ನು ಡಿಸಿಪಿ ಯನ್ನಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ ಬೆಳಗಾವಿಯ ಪೋಲೀಸ್ ಇಲಾಖೆಯಲ್ಲಿ ವರ್ಗಾವಣೆಯ ಪರ್ವ ಆರಂಭವಾಗಿದ್ದು, ಇತ್ತೀಚಿಗಷ್ಟೆ ಡಿಸಿಪಿ,ಸೀಮಾ ಲಾಟ್ಕರ್, ಮತ್ತು ಎಸಿಪಿ ನಾರಾಯಣ ಭರಮಣಿ ಅವರ ವರ್ಗಾವಣೆ ಆಗಿತ್ತು ವಿಕ್ರಂ ಆಮಟೆ …

Read More »

ಶಾಲೆಗಳ ಆರಂಭಕ್ಕೆ ಶುರುವಾದ ಚಿಂತನೆ….!

ಬೆಳಗಾವಿ- ಸೆಪ್ಟೆಂಬರ್ 21 ರಿಂದ ಶಿಕ್ಷಕರು 9 ನೇಯ ತರಗತಿಯಿಂದ 12 ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬಹುದು ಎಂದು ಕೇಂದ್ರ ಮಾರ್ಗಸೂಚಿ ಪ್ರಕಟಿಸಿದ್ದು ಇದನ್ನು ರಾಜ್ಯದಲ್ಲಿ ಯಾವ ರೀತಿ ಅನುಷ್ಠಾನ ಮಾಡಬಹುದು ಎಂದು ರಾಜ್ಯ ಸರ್ಕಾರ ಚಿಂತನೆ ಶುರು ಮಾಡಿದೆ. ಈಗಾಗಲೇ ಈ ಕುರಿತು ಕೇಂದ್ರ ಸರ್ಕಾರದಿಂದ SOP ,ಬಂದಿದೆ ಕರ್ನಾಟಕ ಸರ್ಕಾರ SOP ಮಾಡಿಕೊಳ್ಳುತ್ತದೆ,ಶಾಲೆಗಳ ಆರಂಭದ ಕುರಿತು ಸರ್ಕಾರ ಸೆಪ್ಟೆಂಬರ್ 12 ಅಥವಾ 13 ಕ್ಕೆ SOP …

Read More »

ಚನ್ನಮ್ಮನ ಮೂರ್ತಿಗೆ ಜೇನಿನ ಮುಸುಕು….!

ಹುಬ್ಬಳ್ಳಿ- ಬ್ರಿಟೀಷರ ವಿರುದ್ಧ ಹೋರಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಮೂರ್ತಿಗೆ ಜೇನು ಮುಸುಕು ಹಾಕಿದೆ. ಹುಬ್ಬಳ್ಳಿಯ ಹಳೆಯ ಬಸ್ ನಿಲ್ಧಾಣದ ಎದುರಿನ ಚನ್ನಮ್ಮನ ವೃತ್ತದಲ್ಲಿರುವ ಮೂರ್ತಿಗೆ ಜೇನಿನ ಮುಸುಕು,ಅತ್ಯಂತ ಜನನಿಬಿಡ ಪ್ರದೇಶದ್ಲಿರುವ ಈ ಮೂರ್ತಿ ಈಗ ಜನರ ಗಮನ ಸೆಳೆಯುತ್ತಿದೆ. ಮೂರ್ತಿಯ ಮುಖಕ್ಕೆ ಸಂಪೂರ್ಣವಾಗಿ ಜೇನುನೊಣಗಳು ಮುಸುಕು ಹಾಕಿದ್ದು ವಿಶೇಷವಾಗಿದೆ.

Read More »

ನನಗೆ ಕಷ್ಟ ಕೊಡುತ್ತಿದ್ದಾರೆ,ಯಾರು ಕಷ್ಟ ಕೊಡುತ್ತಿದ್ದಾರೆ ಅನ್ನೋದು ನಿಮಗೆಲ್ಲ ಗೊತ್ತಿದೆ

ಐದು ಲಕ್ಷ ಸಾಂಕ್ಷನ್ ಮಾಡಲು ಕಷ್ಟ ಕೊಡ್ತೀದ್ದಾರೆ,ಆದ್ರೂ ಪ್ರತಿದಿನ ಒಂದು ಕೋಟಿ ಕೆಲಸ ಮಾಡ್ತೀದ್ದೀನಿ.- ಹೆಬ್ಬಾಳಕರ ಬೆಳಗಾವಿ- ಐದು ಲಕ್ಷ ರೂ ಸಾಂಕ್ಷನ್ ಮಾಡಿಸಬೇಕಂದ್ರೂ ಬಹಳ ಕಷ್ಟ ಕೊಡುತ್ತಿದ್ದಾರೆ,ಯಾರು ಕಷ್ಟ ಕೊಡುತ್ತಿದ್ದಾರೆ ಅನ್ನೋದು ನಿಮಗೆಲ್ಲ ಗೊತ್ತಿದೆ,ಆದ್ರೆ,ನೀವೆಲ್ಲಾ ಫೇಸ್ ಬುಕ್ ನೋಡಿರಬಹುದು ಪ್ರತಿ ದಿನ ಒಂದು ಕೋಟಿ ರೂ ಕೆಲಸ ಮಾಡುತ್ತಿದ್ದೇನೆ,ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೊನ್ನಿಹಾಳ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿಗೆ …

Read More »

ಯಾವ ರಾಗಿಣಿ ಇರಲಿ, ಪಾಗಿಣಿ ಇರಲಿ ನಮಗೆ ಸಂಬಂಧ ಇಲ್ಲ-ಡಿಸಿಎಂ,ಸವದಿ

ಬೆಳಗಾವಿ- ಡ್ರಗ್ ಮುಕ್ತ ಕರ್ನಾಟಕ ಮಾಡಲು ಸರ್ಕಾರ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಸರ್ಕಾರ ಕೊಟ್ಟಿದೆ, ಯಾವುದೇ ಒತ್ತಡ, ಬಲಾಡ್ಯ ಇದ್ದರೂ ಯಾವುದಕ್ಕೂ ಮಣಿಯದೇ ಗೃಹ ಇಲಾಖೆ ಕೆಲಸ ಮಾಡುತ್ತಿದೆ, ಗೃಹಸಚಿವರು ಸಹ ವಿಶೇಷವಾದ ನಿಗಾ ವಹಿಸಿದ್ದಾರೆ, ಯಾರಿಗೂ ಸಂಶಯ ಬೇಡ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಯಾವುದೇ ರಾಜಕಾರಣಿ ಮಕ್ಕಳಿರಲಿ, ಪ್ರಭಾವ ವ್ಯಕ್ತಿಗಳಿರಲಿ …

Read More »

ಮತ್ತೆ ಬೆಳಗಾವಿಗೆ ಬರತೈತಿ ಪೋಲೀಸ್ ಟೈಗರ್….!

ಬಬೆಳಗಾವಿ- ಬೆಳಗಾವಿಯಲ್ಲಿ ಖಾಕಿ ಖದರ್ ತೋರಿಸುವ ಮೂಲಕ ಅಪಾರ ಜನ ಮೆಚ್ಚುಗೆ ಗಳಿಸಿದ್ದ ಬೆಳಗಾವಿಯ ಮಾರ್ಕೆಟ್ ಎಸಿಪಿ ಯಾಗಿ ಕರ್ತವ್ಯನಿಭಾಯಿಸಿದ್ದ ಎಸಿಪಿ ನಾರಾಯಣ ಭರಮಣಿ ಅವರನ್ನು ಮತ್ತೆ ಬೆಳಗಾವಿ ಮಹಾನಗರಕ್ಕೆ ನಿಯೋಜಿಸುವ ಪ್ರಯತ್ನ ನಡೆದಿದೆ. ಬೆಳಗಾವಿ ಮಾರ್ಕೆಟ್ ಎಸಿಪಿ ಯಾಗಿದ್ದ ನಾರಾಯಣ ಭರಮಣಿ ಅವರನ್ನು ಸರ್ಕಾರ ಖಾನಾಪೂರ ಪೋಲೀಸ್ ತರಬೇತಿ ಶಾಲೆಗೆ ವರ್ಗಾವಣೆ ಮಾಡಿ ಇತ್ತೀಚಿಗೆ ಸರ್ಕಾರ ಆದೇಶ ಮಾಡಿತ್ತು,ಆದ್ರೆ ಬೆಳಗಾವಿ ಮಹಾನಗರ ಅತೀ ಸೂಕ್ಷ್ಮ ನಗರವಾಗಿದ್ದು ಕಾನೂನು ಸುವ್ಯೆವಸ್ಥೆ …

Read More »

ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಧಕ್ಕೆ ಇಲ್ಲ,- ಸತೀಶ್ ಜಾರಕಿಹೊಳಿ

ಬೆಳಗಾವಿ- ಭುತರಾಮನಹಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸಂಪೂರ್ಣವಾಗಿ ಹಿರೇಬಾಗೇವಾಡಿ ಗ್ರಾಮಕ್ಕೆ ಶಿಪ್ಟ್ ಆಗುವದಿಲ್ಲ ಮೂಲ ವಿಶ್ವ ವಿದ್ಯಾಲಯಕ್ಕೆ ಯಾವುದೇ ರೀತಿಯ ಧಕ್ಕೆ ಆಗುವದಿಲ್ಲ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಭೂತರಾಮನಹಟ್ಟಿ ಯಲ್ಲಿರುವ ವಿಶ್ವ ವಿದ್ಯಾಲಯ ಅರಣ್ಯ ಇಲಾಖೆಯ ಜಾಗೆಯಲ್ಲಿರುವದರಿಂದ ವಿಶ್ವ ವಿದ್ಯಾಲಯದ ಕಟ್ಟಡ ವಿಸ್ತರಣೆ,ಹಾಗು ಇನ್ನಿತರ ಹೆಚ್ವುವರಿ ಕಾರ್ಯಚಟುವಟೆಕೆಗಳನ್ನು ನಡೆಸಲು ಸಾಧ್ಯವಾಗಿರಲ್ಲಿಲ್ಲ,ಜಾಗೆಯ ಸಮಸ್ಯೆ ಇರುವದರಿಂದ ವಿಶ್ವ ವಿದ್ಯಾಲಯದ ಹೆಚ್ಚುವರಿ ಕಟ್ಟಡ ನಿರ್ಮಾಣ ಮಾಡಲು ಹಿರೇಬಾಗೇವಾಡಿ ಯಲ್ಲಿ …

Read More »

ಜೈಲಿನಿಂದಲೇ ಟೈಗರ್ ಗ್ಯಾಂಗ್ ಆಪರೇಟಿಂಗ್ ಶಂಕೆ ಡಿಸಿಐಬಿ ಪೋಲೀಸರ ದಾಳಿ

ಬೆಳಗಾವಿ-ಬೆಳಗಾವಿ ಜಿಲ್ಲೆ ಗೋಕಾಕ್‌ನಲ್ಲಿ ಟೈಗರ್ ಗ್ಯಾಂಗ್ ಸದಸ್ಯರು ಕೊಲೆ ಪ್ರಕರಣದ ಆರೋಪದ ಮೇಲೆ ಹಿಂಡಲಗಾ ಜೈಲಿನಲ್ಲಿದ್ದು,ಜೈಲಿನಿಂದಲೇ ಗ್ಯಾಂಗ್ ಆಪರೇಟಿಂಗ್ ಶಂಕೆಯ ಮೇಲಿ ಡಿಸಿಐಬಿ ಪೋಲೀಸರು ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿದ್ದಾರೆ. ಹಿಂಡಲಗಾ ಜೈಲಿನ ಮೇಲೆ ದಾಳಿ ಮಾಡಿರುವ ಡಿಸಿಐಬಿ ಪೋಲೀಸರು,ಎರಡು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ.ಜೈಲಿನಲ್ಲಿದ್ದುಕೊಂಡೇ ಟೈಗರ್ ಗ್ಯಾಂಗ್ ಆಪರೇಟ್ ಮಾಡುತ್ತಿದ್ದ ಶಂಕೆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ರಾಮದುರ್ಗ ಡಿವೈಎಸ್‌ಪಿ ಎಸ್.ಎ.ಪಾಟೀಲ್ ನೇತೃತ್ವದಲ್ಲಿ ನಡೆದಿದ್ದ ದಾಳಿ ನಡೆದಿದ್ದು ಹಿಂಡಲಗಾ …

Read More »

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಹಿರೇಬಾಗೇವಾಡಿಗೆ ಶಿಪ್ಟ್ ….!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಪ್ರತಿಷ್ಟಿತ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಭೂತರಾಮಟ್ಟಿಯಿಂದ ಹಿರೇಬಾಗೇಡಿಗೆ ಶಿಪ್ಟ್ ಮಾಡಲು ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ರಾಜ್ಯದ ಕಂದಾಯ ಸಚಿವ ಆರ್ ಅಶೋಕ ಅವರು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಿಸಲು ಹಿರೇಬಾಗೇವಾಡಿ ಗ್ರಾಮ ಪಂಚಾಯತಿ ಹದ್ದಿಯಲ್ಲಿರುವ 70 ಎಕರೆ ಸರ್ಕಾರಿ ಜಮೀನು ನೀಡಲು ಕಂದಾಯ ಸಚಿವ ಆರ್ ಅಶೋಕ ಅನುಮೋದನೆ ನೀಡಿದ್ದು,ಕ್ಯಾಬಿನೇಟ್ ಅನುಮೋದನೆ ಅಷ್ಟೇ ಬಾಕಿ ಉಳಿದಿದೆ ಬೆಳಗಾವಿಯ ರಾಣಿ …

Read More »

ಎಂಇಎಸ್ ನಾಯಕರು ನಮ್ಮ ಸೋದರರಿದ್ದಂತೆ ಎಂದ ಅನಂತಕುಮಾರ್ ಹೆಗಡೆ

ಬೆಳಗಾವಿ- ಎಂಇಎಸ್ ನಾಯಕರು ನಮ್ಮ ಸೋದರರಿದ್ದಂತೆ ಎಂದು, ನಾಡದ್ರೋಹಿ ಎಂಇಎಸ್ ಪರ ಸಂಸದ ಅನಂತಕುಮಾರ್ ಹೆಗಡೆ ಬ್ಯಾಟಿಂಗ್ ಮಾಡಿ ಸಮಸ್ತ ಕನ್ನಡದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಿನ್ನೆ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ ಅನಂತಕುಮಾರ್ ಹೆಗಡೆ ಎಂ.ಈ.ಎಸ್ ನಾಯಕರು ನಮ್ಮ ಸಹೋದರರು,ಎಂದಿದ್ದಾರೆ. ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ್ದ ಅನಂತಕುಮಾರ್ ಹೆಗಡೆ,ಈ ವೇಳೆ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಅನಂತಕುಮಾರ್ ಹೆಗಡೆ ಭಾಷಣ ಮಾಡಿದ್ದಾರೆ. ಖಾನಾಪುರ ಕ್ಷೇತ್ರದಲ್ಲಿ ಒಂದು ಬಾರಿ ಬಿಜೆಪಿ ಶಾಸಕ ಆಯ್ಕೆಯಾಗಿದ್ದರು’,ಅದಕ್ಕೂ ಮುನ್ನ …

Read More »

ಕಬ್ಬು ಸೋಯಾ,ಎಲ್ಲಾ ಹಾಳಾಗಿದೆ,ಬೇಗ ಸಹಾಯ ಮಾಡ್ರಿ….!

ನೆರೆಹಾನಿ: ಕೇಂದ್ರ ಅಧ್ಯಯನ ತಂಡ ಭೇಟಿ; ಪರಿಶೀಲನೆ ಬೆಳಗಾವಿ, ಸೆ.8(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.8) ಭೇಟಿ ನೀಡಿ ಪರಿಶೀಲಿಸಿತು ಹೈದ್ರಾಬಾದ್ ನಲ್ಲಿರುವ ಕೃಷಿ ಇಲಾಖೆಯ ಎಣ್ಣೆಬೀಜಗಳ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕರಾದ ಡಾ.ಮನೋಹರನ್ ಹಾಗೂ ಬೆಂಗಳೂರಿನ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಎಂಜಿನಿಯರ್ ಗುರುಪ್ರvಸಾದ್ ಜೆ. ಅವರು ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸಂಚರಿಸಿ ಮಾಹಿತಿಯನ್ನು ಕಲೆಹಾಕಿದರು. ನಗರಕ್ಕೆ ಆಗಮಿಸಿದ …

Read More »

ಬೆಳಗಾವಿಗೆ ಬಂದಿದೆ,ಕೇಂದ್ರದ ಅಧ್ಯಯನ ತಂಡ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾದ ಪ್ರದೇಶದಲ್ಲಿ ಬೆಳೆ ಹಾನಿ ಸೇರಿದಂತೆ ಇತರ ಹಾನಿಯನ್ನು ಅದ್ಯಯನ ಮಾಡಲು ಕೇಂದ್ರದ ಅದ್ಯಯನ ತಂಡ ಬೆಳಗಾವಿಗೆ ಆಗಮಿಸಿದೆ ಇಂದು ಬೆಳಿಗ್ಗೆ ಬೆಳಗಾವಿಗೆ ಬಂದಿರುವ ಕೇಂದ್ರದ ತಂಡ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲೆಯ ಇತರ ಅಧಿಕಾರಿಗಳ ಜೊತೆ,ಸಭೆ ನಡೆಸಿದೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ವಿಪರೀತ ಮಳೆಯಿಂದ ಎಷ್ಟು ನಷ್ಟ ವಾಗಿದೆ ಎನ್ನುವದರ ಬಗ್ಗೆ ಮಾಹಿತಿ ನೀಡಿದ್ದಾರೆ,ಬೆಳೆಹಾನಿ,ಸಾರ್ವಜನಿಕ ಆಸ್ತಿ,ಮನೆಗಳ ಹಾನಿ ಸೇರಿದಂತೆ …

Read More »

ಕ್ರಾಂತಿ ನೆಲದಲ್ಲೂ ಓಡಾಡತೈತಿ ರೈಲು ಗಾಡಿ….ವ್ಹಾರೆ ವ್ಹಾ ಸುರೇಶ ಅಂಗಡಿ…..!

ಬೆಳಗಾವಿ-ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಬ್ರಿಟೀಷರ ರುಂಡ ಚೆಂಡಾಡಿದ ಕ್ರಾಂತಿಯ ನೆಲ ವೀರರಾಣಿ ಕಿತ್ತೂರ ಚನ್ನಮ್ಮ ನಾಡಿನಲ್ಲೂ ರೈಲು ಗಾಡಿ ಓಡಾಡುವ ಕಾಲ ಕೂಡಿ ಬಂದಿದೆ,ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಇಚ್ಛಾಶಕ್ತಿಯಿಂದಾಗಿ ಐತಿಹಾಸಿಕ ನಗರಿ ಕಿತ್ತೂರಿಗೂ ರೈಲು ಬರಲಿದೆ. ಬಹುದಿನಗಳ ಕನಸನ್ನು ಸಚಿವ ಸುರೇಶ ಅಂಗಡಿ ನನಸು ಮಾಡಿದ್ದು, ಬೆಳಗಾವಿಯಿಂದ ಕಿತ್ತೂರು ಮಾರ್ಗವಾಗಿ ಧಾರವಾಡ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ರೈಲ್ವೆ …

Read More »

ಗಂಡನನ್ನು ಕೊಂದು,ಮನೆಯ ಅಂಗಳದಲ್ಲಿ ಸಮಾಧಿ ಮಾಡಿದವಳು,ಈಗ ಪಂಜರದಲ್ಲಿ….!

ಬೆಳಗಾವಿ- ಅನೈತಿಕ ಸಂಬಂಧದ ಬಗ್ಗೆ ಗಂಡ ಪ್ರಶ್ನೆ ಮಾಡಿದ್ದಕ್ಕೆ ಗಂಡನನ್ನು ಕೊಂದು ಮನೆಯ ಅಂಗಳದಲ್ಲೇ ಸಮಾಧಿ ಮಾಡಿದ ಪತ್ನಿಯನ್ನು ಪೋಲೀಸರು ಅರೆಸ್ಟ್ ಮಾಡಿದ್ದಾರೆ. ಗಂಡನ ಕೊಲೆಗೆ ಪತ್ನಿಗೆ ಸಾಥ್ ಕೊಟ್ಟ ಮೂವರು ಸೇರಿದಂತೆ ಒಟ್ಟು ನಾಲ್ಕು ಜನ ಆರೋಪಿಗಳನ್ನು ಪೋಲೀಸರು ಬಂಧಿಸಿದ್ದಾರೆ. ನಿಪ್ಪಾಣಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಪತಿಯನ್ನು ಕೊಲೆಗೈದು ಎಮ್ಮೆ ಸತ್ತಿದೆ ಎಂದು ಸುಳ್ಳು ಹೇಳಿ ಜೆಸಿಬಿಯಿಂದ ತಗ್ಗಾ ತೆಗೆಸಿ ಶವವನ್ನು ಮನೆಯ ಅಂಗಳದಲ್ಲೇ ಹೂತು ಹಾಕಿದ್ದ ಪತ್ನಿ …

Read More »