Breaking News

LOCAL NEWS

ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ: ಮದ್ಯಂತರ ಅಧಿವೇಶನ ಬೆಳಗಾವಿಯಲ್ಲಿ ನಡೆಸಲು ಸರ್ಕಾರದ ಬಳಿ ಇಚ್ಚಾಶಕ್ತಿಯ ಕೊರತೆ ಕಾಣುತ್ತಿದೆ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಆರೋಪಿಸಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ, ಮಾಧ್ಯಮಗಳ ಜೊತೆ ಮಾತನಾಡಿದ ಅವರು ಬೆಳಗಾವಿ ಅಧಿವೇಶನ ನಡೆದರೆ ಈ ಭಾಗದ ಹಲವು ಸಮಸ್ಯೆಗಳ ಇತ್ಯರ್ಥ ವಾಗುತ್ತವೆ ಇಲ್ಲಿ ನೂರಾರು ಕೋಟಿ ವೆಚ್ಚದಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಅಲ್ಲದೇ ರಾಜ್ಯಪಾಲರ ಭಾಷಣ ಸುವರ್ಣಸೌಧದಲ್ಲಿ ನಡೆಯಬೇಕು. ವರ್ಷದಲ್ಲಿ ಒಮ್ಮೆಯಾದರೂ ಸಚಿವ ಸಂಪುಟ ಸಭೆ ಕರೆಯಬೇಕು …

Read More »

ಉತ್ತರ ಕರ್ನಾಟಕದ ಶಕ್ತಿ ಕೇಂದ್ರದಿಂದಲೇ ಪ್ರತ್ಯೇಕತೆಯ ಕೂಗು….!

ಬೆಳಗಾವಿ-ಉತ್ತರ ಕರ್ನಾಟಕದ ಶಕ್ತಿ ಕೇಂದ್ರ,ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲೇ ಈಗ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಕೇಳಿ ಬಂದಿದೆ. ಧಾರವಾಡ ಹೈಕೋರ್ಟಿನ ಹೋರಾಟದ ರೂವಾರಿ,ಬಿ.ಡಿ ಹಿರೇಮಠ ಅವರು ಇಂದು,ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯಮಟ್ಟದ ಕಚೇರಿಗಳನ್ನು ಸರ್ಕಾರ ಸ್ಥಳಾಂತರ ಮಾಡದಿದ್ದರೆ,ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮಾಡುವಂತೆ ಹೋರಾಟ ಶುರು ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಸರ್ಕಾರ ಹುಬ್ಬಳ್ಳಿ- ದಾರವಾಡದ ನೀರಾವರಿ ಕಚೇರಿಯನ್ನು ಬೆಳಗಾವಿಯ ಸುವರ್ಣವಿಧಾನ ಸೌಧಕ್ಕೆ ಶಿಪ್ಟ್ ಮಾಡುವದು ಬೇಡ ಅದರ …

Read More »

ಡಿಸೆಂಬರ್ ಅಥವಾ ಜನೇವರಿ ತಿಂಗಳಲ್ಲಿ ಬೆಳಗಾವಿ ಪಾಲಿಕೆ ಚುನಾವಣೆ…!!

ಬೆಳಗಾವಿ- ಬೆಳಗಾವಿ- ಹಾಗು ಧಾರವಾಡ- ಹುಬ್ಬಳ್ಳಿ ಮಹಾನಗರ ಪಾಲಿಕೆ ಚುನಾವಣೆ ಬಹುತೇಕ ಡಿಸೆಂಬರ್ ಅಥವಾ ಜನೇವರಿ ತಿಂಗಳಲ್ಲಿ ನಡೆಯುವ ಸಾಧ್ಯತೆ ಇದೆ. ಮೀಸಲಾತಿಗೆ ಸಮಂಧಿಸಿದಂತೆ ಹೈಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ,ಮಾರ್ಚ ತಿಂಗಳಲ್ಲಿ ವಿಚಾರಣೆ ನಡೆಯಬೇಕಿತ್ತು ಆದ್ರೆ ಕೋವೀಡ್ ಹಿನ್ನಲೆಯಲ್ಲಿ ವಿಚಾರಣೆ ವಿಳಂಬವಾಗಿದ್ದು ಮುಂದಿನ ತಿಂಗಳು ಫೈನಲ್ ಹೇರಿಂಗ್ ನಡೆಯಲಿದ್ದು ಎರಡೂ ಮಹಾನಗರ ಪಾಲಿಕೆಗಳ ಚುನಾವಣೆಯ ತೊಡಕು ನಿವಾರಣೆ ಆಗುವ ಸಾಧ್ಯತೆ ಇದೆ. ನ್ಯಾಯಾಲಯದ ಆದೇಶ ಹೊರಬಿದ್ದ ತಕ್ಷಣ ಚುನಾವಣೆ ನಡೆಸಲು …

Read More »

ಸವದತ್ತಿಯ ಸೇವಕ, ಆನಂದ್ ಚೋಪ್ರಾ ನಿಧನ

ಬೆಳಗಾವಿ- ಸವದತ್ತಿಯ ಖ್ಯಾತ ಸಮಾಜ ಸೇವಕ,ಆನಂದ ಚೋಪ್ರಾ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ‌. ಸಮಾಜ ಸೇವೆಯ ಮೂಲಕ ಅಪಾರ ಜನಮೆಚ್ಚುಗೆ ಗಳಿಸಿದ್ದ ಆನಂದ ಚೋಪ್ರಾ ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಿದ್ದರು.

Read More »

ಬೆಳಗಾವಿ ಜಿಪಂ ಸಭೆಯಲ್ಲಿ ಓನ್ಲೀ ಲ್ಯಾಪ್ಸ್…ಉಳಿದಿದ್ದು ಕೋಲ್ಯಾಪ್ಸ್…!!

ಬೆಳಗಾವಿ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಲ್ಯಾಪ್ಸ್ ಆಗಿರುವ ಅನುದಾನದ ಕುರಿತು ಭರ್ಜರಿ ಚರ್ಚೆ ನಡೆಯಿತು. ಸಭೆಯಲ್ಲಿ ಓನ್ಲೀ ಲ್ಯಾಪ್ಸ್ ಬಗ್ಗೆ ಚರ್ಚೆ ನಡೆದರೆ ಉಳಿದಿದ್ದು ಕೋಲ್ಯಾಪ್ಸ್ ಆಯಿತು ಬೆಳಗಾವಿ-: ಲ್ಯಾಪ್ಸ್ ಆಗಿರುವ ಕಳೆದ ವರ್ಷದ ಜಿಲ್ಲಾ ಪಂಚಾಯತ ಅನುದಾನವನ್ನು ಮರಳಿ ಪಡೆಯುವ ಕುರಿತು ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುವುದು ಸೇರಿದಂತೆ ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ ಸಿಇಒ ದರ್ಶನ. ಎಚ್.ವಿ. ಅವರು ತಿಳಿಸಿದರು. …

Read More »

ನಿಸಾರಾಹ್ಮದ ಈಗ ಬೆಳಗಾವಿ JDLR

ಬೆಳಗಾವಿ- ಬೆಳಗಾವಿಯಲ್ಲಿ ADLR ಆಗಿ ಹಲವಾರು ವರ್ಷಗಳ ಕಾಲ ಕರ್ತವ್ಯ ನಿಭಾಯಿಸಿ ಪದೋನ್ನತಿ ಹೊಂದಿJDLR ಆಗಿರುವ ನಿಸಾರ ಅಹ್ಮದ ಅವರು ಇಂದು ಅಧಿಕಾರ ಸ್ವೀಕರಿಸಿದರು JDLR ಆಗಿ ಪದೋನ್ನತಿ ಹೊಂದಿರುವ ನಿಸಾರ ಅಹ್ಮದ ಅವರನ್ನು ಸರ್ಕಾರ ಬೆಳಗಾವಿ JDLR ನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದು ಇಂದು ಬೆಳಿಗ್ಗೆ ನಿಸಾರ ಅಹ್ಮದ ಅವರು ಅಧಿಕಾರ ಸ್ವೀಕರಿಸಿದರು .

Read More »

ಸಿಎಂ ವಿರುದ್ಧ ಉಲ್ಟಾ ಹೊಡೆದ ಉಮೇಶ್ ಕತ್ತಿ…..!

ಬೆಳಗಾವಿ- 2008 ರಲ್ಲಿದ್ದ ಬಿ.ಎಸ್ ಯಡಿಯೂರಪ್ಪ ಈಗಿಲ್ಲ ಯಾಕಂದ್ರೆ ಅವರು ಸಂಪೂರ್ಣವಾಗಿ ಬದಲಾಗಿದ್ದಾರೆ,ಕೇವಲ ಶಿವಮೊಗ್ಗ ಜಿಲ್ಲೆಗೆ ಸೀಮೀತರಾಗಿದ್ದಾರೆ.ಎಲ್ಲ ಅಭಿವೃದ್ಧಿ ಕೆಲಸಗಳನ್ನು ಶಿವಮೊಗ್ಗ ಜಿಲ್ಲೆಗೆ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಉಮೇಶ್ ಕತ್ತಿ ಸಿಎಂ ವಿರುದ್ಧ ಅಪಸ್ವರ ಎತ್ತಿ ಬಂಡಾಯದ ಬಾವುಟ ಹಾರಿಸಿದ್ದಾರೆ. ಉಮೇಶ ಕತ್ತಿ ನಿನ್ನೆ ರಾತ್ರಿ ಕೆಲವು ದಿನಪತ್ರಿಕೆಗಳಿಗೆ ಹೇಳಿಕೆ ನೀಡಿದ್ದು,ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದೆ,ಕಳೆದ ಒಂದು ವರ್ಷದಿಂದ,ಮೌನ ವಾಗಿದ್ದೆ,ಬಿಜೆಪಿ ನಾಯಕರು ಏನು ಬೇಕಾದ್ರೂ …

Read More »

ಸೇವಾದಳ ಅಕಾಡೆಮಿ ತರಬೇತಿ ಕೇಂದ್ರ ನಿರ್ಮಿಸಿ ರಾಷ್ಟ್ರದ ಗಮನ ಸೆಳೆದ ಸತೀಶ್ ಸಾಹುಕಾರ್….

ಬೆಳಗಾವಿ: ಬೆಳಗಾವಿ ಜಿಲ್ಲೆಯ ಘಟಪ್ರಭಾ ಭಾರತದ ಭೂಪಟದಲ್ಲಿ ಮತ್ತೊಮ್ಮೆ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ. ಸ್ವಾತಂತ್ರ್ಯಸೇನಾನಿ ಡಾ.ನಾ.ಸು.ಹರ್ಡಿಕರ ಸೇವಾದಳ ತರಬೇತಿ ಅಕಾಡೆಮಿಯ ರಾಷ್ಟ್ರಮಟ್ಟದ ತರಬೇತಿ ಕೇಂದ್ರದ ಬೃಹತ್ ಕಟ್ಟಡ ತಲೆ ಎತ್ತಿನಿಂತಿದ್ದು, ಮುಂಬರುವ ಅಕ್ಟೋಬರ ೨ರ ಮಹಾತ್ಮ ಗಾಂಧೀಜಿಯವರ ಜಯಂತಿ ದಿನದಂದೇ ಈ ತರಬೇತಿ ಕೇಂದ್ರದ ಕಟ್ಟಡ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದೆ. ಈ ತರಬೇತಿ ಕೇಂದ್ರ ಕಾಂಗ್ರೆಸ್ ಪಕ್ಷದ ತತ್ವ,ಸಿದ್ದಾಂತದ ಜೊತೆಗೆ ಶಿಸ್ತಿನ ತರಬೇತಿಯ ಪ್ರಮುಖ ಭಾಗವಾಗಲಿದೆ. ಕಾಂಗ್ರೆಸ್ ಸೇವಾದಳದ ಪುನಶ್ಚೇತನಕ್ಕೆ ಈ …

Read More »

ಹಲಗಾ ಗ್ರಾಮದಲ್ಲಿ ತಾಯಿ,ಮಗ,ಆತ್ಮಹತ್ಯೆ

ಬೆಳಗಾವಿ- ಬೆಳಗಾವಿ ಪಕ್ಕದ ಹಿರೇಬಾಗೇವಾಡಿ ಪೋಲೀಸ್ ಠಾಣೆ ವ್ಯಾಪ್ತಿಯ ಹಲಗಾ ಗ್ರಾಮದಲ್ಲಿ ತಾಯಿ ಮತ್ತು ಮಗ ಒಟ್ಟಿಗೆಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ತಾಯಿ,ಭಾರತಿ ಗಿರಾಣಿ,35 ಮಗ ಪ್ರಜ್ವಲ್ 15 ಇಬ್ಬರೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಭಾರತಿ ಗೋಕಾಕಿನ ವ್ಯೆಕ್ತಿಯೊಬ್ಬನ ಬಾಲ್ಯವಿವಾಹವಾಗಿತ್ತು,ಇತ್ತೀಚಿಗೆ ಭಾರತಿ ಬೇರೊಬ್ಬನ ಜೊತೆ ಲಿವಿಂಗ್ ರಿಲೇಶನ್ ನಲ್ಲಿ ಹಲಗಾ ಗ್ರಾಮದಲ್ಲಿ ವಾಸವಾಗಿದ್ದಳು ಆತ್ಮಹತ್ಯೆ ಮಾಡಿಕೊಂಡ ಮಗ ಪ್ರಜ್ವಲ್ ಮೊದಲನೇಯ ಗಂಡನ ಮಗ ಎಂದು ತಿಳಿದು ಬಂದಿದೆ.ಹಿರೇಬಾಗೇವಾಡಿ …

Read More »

ಮೋದಿ‌ ಹೆಸರಲ್ಲಿ ಗೆದ್ದಿರುವ ರಾಜ್ಯದ ಎಪಿಂಗಳು ಫೇಸ್ ಲೇಸ್ ಆಗಿದ್ದಾರೆ.

ಬೆಳಗಾವಿ ಕಾಂಗ್ರೆಸ್ ಸೋತಿರಬಹುದು. ಆದರೆ‌ ನಾವು ನೀಡಿದ ಕಾರ್ಯಕ್ರಮಗಳು ಸೋತಿಲ್ಲ ಎಂದು ಮಾಜಿ ಸಂಸದ ಧ್ರುವನಾರಾಯಣ ತಿಳಿಸಿದರು. ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಒಂದು ಧರ್ಮಕ್ಕೆ ಸಿಮೀತವಾಗಿರುವ ಪಕ್ಷ ಬಿಜೆಪಿ ಇದೆ‌. ಅವರೇ ಇದನ್ನು ಮಾಡುತ್ತಿದ್ದಾರೆ. ಜಾತ್ಯಾತೀತ ಪಕ್ಷ ಅಂದರೆ ಕಾಂಗ್ರೆಸ್, ಸಂಜನಾ ಮತ್ತು ರಾಗಿಣಿ ಬಿಜೆಪಿಯ ಸ್ಟಾರ್ ಕ್ಯಾಪನ್ ಆಗಿದ್ದರೂ ಅವರಿಗೆ ಬಿಜೆಪಿಯವರಿಗೆ ಶೇಮ್ ಆಗಬೇಕು, ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣ ಮಾಡಲು ಬಿಜೆಪಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. …

Read More »

ಸಾಹುಕಾರ್ ಮಾಡ್ತಾರಾ ಮಹಾರಾಷ್ಟ್ರದಲ್ಲಿ ಸರ್ಕಾರ್……!

*ಮಹಾರಾಷ್ಟ್ರ ರಾಜಕಾರಣ ; ಮಾಜಿ‌ ಸಿಎಂ & ರಮೇಶ್ ಜಾರಕಿಹೊಳಿ‌ ಮಹತ್ವದ ಭೇಟಿ* ಕಿರುತೆರೆ ಮತ್ತು ಹಿರಿತೆರೆಯ ಪ್ರಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಸುತ್ತ ಸೃಷ್ಟಿಯಾದ ಗೊಂದಲ ಮತ್ತು ತನ್ನ ವೈಫಲ್ಯಗಳಿಂದ ಜನರ ನಂಬಿಕೆ ಕಳೆದುಕೊಳ್ಳುತ್ತಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆಗೆ ಚಳಿಬಿಡಿಸುವ ಕೆಲಸವನ್ನು ಭಾರತೀಯ ಜನತಾ ಪಾರ್ಟಿಯ ಹೈಕಮಾಂಡ್ ಮಾಡುತ್ತಿದೆ. ಇದಕ್ಕೆ ಪೂರಕವಾಗಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ *ಶ್ರೀ ದೇವೇಂದ್ರ ಫಡ್ನವಿಸ್* ಮತ್ತು ಗಡಿ …

Read More »

ಬೆಲ್ಲ,ಅರಿಷಿಣದ ಉದ್ಯೋಗ ಮಾಡಲು ಟ್ರೇನಿಂಗ್ ಕೊಡ್ತಾರಂತೆ….!

ಬೆಳಗಾವಿ, ಸೆ.16(ಕರ್ನಾಟಕ ವಾರ್ತೆ): ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಬೆಳಗಾವಿ, ಹಾಗೂ ಕರ್ನಾಟಕ ಉದ್ಯಮಶೀಲತಾಭಿದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೆಲ್ಲ ಮತ್ತು ಅರಿಶಿಣ (Jaggery and Turmeric) ಉತ್ಪನ್ನಗಳ ತಯಾರಿಕಾ ಕುರಿತು ಆರು ದಿನಗಳ ಉದ್ಯಮಶೀಲತಾಭಿದ್ಧಿ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಸದರಿ ಉತ್ಪನ್ನಗಳ ತಯಾರಿಕೆ ಕುರಿತು ಉದ್ಯಮ ಪ್ರಾರಂಭಿಸುವವರಿಗಾಗಿ ಈ ತರಬೇತಿಯಲ್ಲಿ ಬೆಲ್ಲ ಮತ್ತು ಅರಿಶಿಣ …

Read More »

ವಿಮಾನ ನಿಲ್ಧಾಣಕ್ಕೆ ಚೆನ್ನಮ್ಮ,ಬಸ್ ನಿಲ್ಧಾಣಕ್ಕೆ, ರಾಯಣ್ಣಾ,ರೈಲು ನಿಲ್ಧಾಣಕ್ಕೆ ಮಲ್ಲಮ್ಮನ ಹೆಸರಿಡಲು ಒತ್ತಾಯ….

ವಿಮಾನ ನಿಲ್ಧಾಣಕ್ಕೆ ಚೆನ್ನಮ್ಮ,ಬಸ್ ನಿಲ್ಧಾಣಕ್ಕೆ, ರಾಯಣ್ಣಾ,ರೈಲು ನಿಲ್ಧಾಣಕ್ಕೆ ಮಲ್ಲಮ್ಮನ ಹೆಸರಿಡಲು ಒತ್ತಾಯ…. ಬೆಳಗಾವಿ- ಬೆಳಗಾವಿಯ ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪನೆ ಮಾಡಿದ ಬಳಿಕ,ಈಗ ಗಡಿನಾಡು ಗುಡಿ ಬೆಳಗಾವಿಯಲ್ಲಿ ನಾಮಕರಣದ ಪರ್ವ ಆರಂಭವಾಗಿದೆ. ಬೆಳಗಾವಿಯ ವಿವಿಧ ಕನ್ನಡಪರ ಸಂಘಟನೆಗಳು ಒಟ್ಟಾಗಿ ಒಮ್ಮತದ ಬೇಡಿಕೆ ಇಟ್ಟಿದ್ದಾರೆ,ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ,ರಾಣಿ ಚೆನ್ನಮ್ಮ,ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣಕ್ಕೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು,ಬೆಳಗಾವಿಯ ರೈಲು ನಿಲ್ಧಾಣಕ್ಕೆ,ಬೆಳವಡಿ ಮಲ್ಲಮ್ಮನ ಹೆಸರು ನಾಮಕರಣ ಮಾಡುವಂತೆ …

Read More »

ಹಳ್ಳಿಗಳಲ್ಲಿ ಕುಡುಕರು ಎಸೆದ ಬಾಟಲ್ ಗಳನ್ನು ಸ್ವಚ್ಛ ಮಾಡ್ತಾರಂತೆ

ಬೆಳಗಾವಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಸೂಚನೆ ಮೇರೆಗೆ ದೇಶದ ಎಲ್ಲ ಕಡೆ ಸೆ.14 ರಿಂದ 20 ರವರೆಗೂ ಸೇವಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂ.ಜಿ.ಜೀರಲಿ ಹೇಳಿದರು. ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ‌ಮಾತನಾಡಿದರು. ಅಕ್ಟೋಬರ್ ನಲ್ಲಿ ಗಾಂಧಿ ಜಯಂತಿ, ದೇಶ ಕಂಡ ಅಪ್ರತಿಮ ನಾಯಕ ಪ್ರಧಾನಿ ನರೇಂದ್ರ ‌ಮೋದಿ ಅವರ ಜನ್ಮ ದಿನದ ಪ್ರಯುಕ್ತ ಈ ಸಪ್ತಾಹ ಸೇವಾ ಅಭಿಯಾನ ನಡೆಸಲಾಗುತ್ತಿದೆ. ಸೆ.17 ರಂದು …

Read More »

ಬೆಳಗಾವಿ ಮಹಾನಗರದ ಹೊಸ ಸಿಡಿಪಿ ಮಾಡಲು ಫ್ರಾನ್ಸ್ ಕಂಪನಿಗೆ ಗುತ್ತಿಗೆ….!

ಬೆಳಗಾವಿ- ಪ್ರತಿ ಹತ್ತು ವರ್ಷಕ್ಕೊಮ್ಮೆ ಬೆಳಗಾವಿ ಮಹಾನಗರದ ಹೊಸ ಸಿಡಿಪಿ,ಮಾಡುವದು ವಾಡಿಕೆ,ಹಳೆಯ ಸಿಡಿಪಿ ಅವಧಿ ಮಾರ್ಚ ತಿಂಗಳಿಗೆ ಮುಕ್ತಾಯ ವಾಗಲಿದ್ದು ಹೊಸ ಸಿಡಿಪಿ ಸಿದ್ಧಗೊಳಿಸಲು ಕೇಂದ್ರ ಸರ್ಕಾರ ಅಮೃತ ಯೋಜನೆಯ ಅಡಿಯಲ್ಲಿ ಫ್ರಾನ್ಸ್ ಮೂಲದ ಕಂಪನಿಗೆ ಗುತ್ತಿಗೆ ನೀಡಿದೆ. ಬೆಳಗಾವಿ,ಹುಬ್ಬಳ್ಳಿ-ಧಾರವಾಡ,ಗದಗ ಮೂರು ಜಿಲ್ಲೆಗಳ ಹೊಸ ಸಿಡಿಪಿ,ಅಂದ್ರೆ ಕಾಂಪ್ರಯೇನ್ಸೀವ್ ಡೆವಲಪ್ಮೆಂಟ್ ಪ್ಲ್ಯಾನ್,ಕನ್ನಡದಲ್ಲಿ ಇದಕ್ಕೆ ಮಹಾ ಯೋಜನೆ ಅಂತಾ ಕರೀತಾರೆ,ಈ ಮೊದಲು ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವೇ ಸಿಡಿಪಿ ಮಾಡುತ್ತಾ ಬಂದಿತ್ತು ಆದ್ರೆ ಈ …

Read More »