Breaking News

LOCAL NEWS

ಡಬಲ್ ಮರ್ಡರ್ ಹಿಂದೆ,ತ್ರೀಬಲ್ ಪ್ರೇಮ್ ಕಹಾನಿ ಇದೆಯಾ……?

ಬೆಳಗಾವಿ- ಇತ್ತೀಚಿಗೆ ಮಚ್ಛೆ ಗ್ರಾಮದಲ್ಲಿ ನಡೆದ ಇಬ್ಬರು ವಿವಾಹಿತ ಮಹಿಳೆಯರ ಡಬಲ್ ಮರ್ಡರ್ ಪ್ರಕರಣ ಭೇದಿಸಲು ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ತನಿಖೆ ಮುಂದುವರೆಸಿದ್ದಾರೆ. ಡಬಲ್ ಮರ್ಡರ್ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಗಣಿಸಿರುವ ಬೆಳಗಾವಿಯ ಪೋಲೀಸರು,ಇಬ್ಬರು ಮಹಿಳೆಯರ ಹತ್ಯೆಗೆ ಕಾರಣ ಏನು,ಎಂಬುವದನ್ನು ಪತ್ತೆ ಹಚ್ವಲು,ಪೋಲೀಸರು ಹಲವಾರು ಜನರನ್ನು ವಿಚಾರಣೆಗೊಳಪಡಿಸಿದ್ದು,ಪೋಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ ಕೊಲೆಯಾದ ಕಾಳೇನಟ್ಟಿ ಗ್ರಾಮದ ರೋಹಿಣಿಯ ಗಂಡ,ರೋಹಿಣಿಯ ಜೊತೆ ಮದುವೆಯಾಗುವ ಮೊದಲು ಒಬ್ಬಳ …

Read More »

ಟಿಕೆಟ್ ಕೊಡುವಾಗ ಪಾಪುಲ್ಯಾರಿಟಿ ಕನ್ಸೀಡರ್ ಮಾಡ್ತೀವಿ

ಬೆಳಗಾವಿ- ಬೆಳಗಾವಿ ಲೋಕಸಭಾ ಚುನಾವಣೆ ಘೋಷಣೆ ಆಗಿಲ್ಲ,ಆಕಾಂಕ್ಷಿಗಳು ಇನ್ನುವರೆಗೆ ಯಾರು ಮುಂದೆ ಬಂದಿಲ್ಲ,ಟಿಕೆಟ್ ಯಾರಿಗೆ ಅನ್ನೋ ಚರ್ಚೆ ನಡೆದಿಲ್ಲ,ಚುನಾವಣೆ ಘೋಷಣೆಯಾದ ಬಳಿಕ ಎಲ್ಲರೂ ಸೇರಿ ಸಭೆ ಮಾಡ್ತೀವಿ,ಗೆಲ್ಲುವ ಸಾಮರ್ಥ್ಯ ಯಾರಿಗಿದೆ,ಯಾರು ಪಾಪುಲರ್ ಆಗಿದ್ದಾರೆ ಅನ್ನೋದನ್ನು ಕನ್ಸೀಡರ್ ಮಾಡಿಯೇ ಟಿಕೆಟ್ ಕೊಡ್ತೀವಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು,ಬಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯ ಚರ್ಚೆ ನಡೆದಿಲ್ಲ. ಚುನಾವಣೆ ಘೋಷಣೆಯಾದ …

Read More »

ಮುಖ್ಯಮಂತ್ರಿಗಳನ್ನು ಭೇಟಿಯಾದ ಸುರೇಶ್ ಅಂಗಡಿ ಅಳಿಯಂದಿರು

ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಸ್ಮಾರಕ ನಿರ್ಮಿಸಲು ಸಿಎಂಗೆ ಮನವಿ ಅರ್ಪಿಸಿದ ಅಳಿಯಂದಿರು ಬೆಳಗಾವಿ- ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ಸ್ಮಾರಕವನ್ನು ಬೆಳಗಾವಿಯಲ್ಲಿ ನಿರ್ಮಿಸುವಂತೆ ಸುರೇಶ್ ಅಂಗಡಿ ಅವರ ಇಬ್ಬರು ಅಳಿಯಂದಿರು ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ ಮನವಿ ಅರ್ಪಿಸಿದರು. ಸಚಿವ,ಮತ್ತು ಸುರೇಶ್ ಅಂಗಡಿ ಅವರ ಬೀಗರಾದ,ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಸುರೇಶ್ ಅಂಗಡಿ ಅವರ ಇಬ್ಬರು ಅಳಿಯಂದಿರು,ಸುರೇಶ್ ಅಂಗಡಿ ಅವರ …

Read More »

ಈ ವರ್ಷ ಒಂದೇ ದಿನ,ಮುಂದಿನ ವರ್ಷ ಅದ್ದೂರಿ ಕಿತ್ತೂರು ಉತ್ಸವ

ಬೆಳಗಾವಿ,-ಕೋವಿಡ್-೧೯ ಹಿನ್ನೆಲೆಯಲ್ಲಿ ಜನರ ಒಮ್ಮತದ ಅಭಿಪ್ರಾಯದಂತೆ ಇದೇ ಅಕ್ಟೋಬರ್ 23 ರಂದು ಒಂದು ದಿನ ಮಾತ್ರ ಸಂಪ್ರದಾಯಬದ್ಧವಾಗಿ ಸರಳರೀತಿಯಲ್ಲಿ ಕಿತ್ತೂರು ಉತ್ಸವವನ್ನು ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹಾಗೂ ಕಿತ್ತೂರು ಶಾಸಕ ಮಹಾಂತೇಶ ದೊಡಗೌಡ್ರ ಅವರು ತಿಳಿಸಿದ್ದಾರೆ. ಕಿತ್ತೂರು ಉತ್ಸವಕ್ಕೆ ಸಂಬಂಧಿಸಿದಂತೆ ಚೆನ್ನಮ್ಮನ ಕಿತ್ತೂರಿನ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ (ಸೆ.30) ನಡೆದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚೆನ್ನಮ್ಮ ಸ್ವಾಭಿಮಾನದ ಸಂಕೇತ. ಆದರೆ ಪ್ರಸ್ತುತ …

Read More »

ರಾಷ್ಟ್ರಪಿತ ಹುಟ್ಟಿದ ದಿನವೇ, ರಾಷ್ಟ್ರಪಿತ ನಡೆದಾಡಿದ ನೆಲದಲ್ಲಿ ಕಾಂಗ್ರೆಸ್ ಕಚೇರಿ ಉದ್ಘಾಟನೆ…..!

ಬೆಳಗಾವಿ- ಮಹಾತ್ಮಾ ಗಾಂಧೀಜಿಯವರ ಅದ್ಯಕ್ಷತೆಯಲ್ಲಿ ಕಾಂಗ್ರೆಸ್ ಮಹಾ ಅಧಿವೇಶನ ನಡೆದಿದ್ದು ಕೇವಲ ಒಂದೇ ಬಾರಿ,ಈ ಅಧಿವೇಶನ ನಡೆದಿದ್ದು ಬೆಳಗಾವಿಯಲ್ಲಿ ಅನ್ನೋದು ವಿಶೇಷ. ರಾಷ್ಟ್ರಪಿತ ಓಡಾಡಿದ ನೆಲದಲ್ಲಿ ಕಾಂಗ್ರೆಸ್ ಪಕ್ಷದ ಸ್ವಂತ ಕಚೇರಿ ಕಟ್ಟಡವೇ ಇರಲಿಲ್ಲ. ಸತೀಶ್ ಜಾರಕಿಹೊಳಿ ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮಹಾನಗರ ಪಾಲಿಕೆಯ ಜಾಗೆಯನ್ನು ಮಂಜೂರು ಮಾಡಿಸಿದ್ರು,ಆಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದ ಲಕ್ಷ್ಮೀ ಹೆಬ್ಬಾಳಕರ ಅವರು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಜಾಗೆಯನ್ನು ಖರೀಧಿ ಮಾಡಿದ್ದರು ಈಗ ಅದೇ ಜಾಗೆಯಲ್ಲಿ …

Read More »

ಬೆಳಗಾವಿಯಲ್ಲಿ ಪೋಲೀಸ್ ಫೋರ್ಸ್ ನಿಯೋಜನೆ

ಬೆಳಗಾವಿ- ಬಾಬರಿ ಮಸೀದಿ ದ್ವಂಸಹೊಳಿಸಿದ ಪ್ರಕರಣಕ್ಕೆ ಸಮಂಧಿಸಿದಂತೆ ಇಂದು ಸಿಬಿಐ ತೀರ್ಪು ನೀಡಲಿದ್ದು,ಬೆಳಗಾವಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿ ಏರ್ಪಡಿಸಲಾಗಿದೆ. ಉಮಾಭಾರತಿ,ಎಲ್ ಕೆ ಅಡ್ವಾಣಿ ಸೇರಿದಂತೆ ಹಲವಾರು ಜನರ ವಿರುದ್ಧ ಸಿಬಿಐ ನ್ಯಾಯಾಲಯದಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ ಆರೋಪದ ಪ್ರಕರಣಕ್ಕೆ ಸಮಂಧಿಸಿದಂತೆ ಸಿಬಿಐ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದ್ದು ,ಬೆಳಗಾವಿ ನಗರದಲ್ಲಿ ಕಾನೂನು ಸುವ್ಯೆವಸ್ಥೆ ಕಾಪಾಡಲು ಬ ಪೋಲೀಸ್ ಫೋರ್ಸ್ ನಿಯೋಜಿಸಲಾಗಿದೆ. ACP 4 PI. 19 PSI. 24 …

Read More »

ಬೆಳಗಾವಿಯಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್,ಪೋಲೀಸರಿಂದ RAID

ಬೆಳಗಾವಿ- ಬೆಳಗಾವಿಯಲ್ಲಿ ಐಪಿಎಲ್ ಶೆಕೆ ಶುರುವಾಗಿದೆ,ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜೋರಾಗಿಯೇ ನಡೆದಿದ್ದು ಬೆಳಗಾವಿ ಪೋಲೀಸರು ಬೆಟ್ಟಿಂಗ್ ಜಾಲವನ್ನು ಪತ್ತೆ ಮಾಡಿದ್ದಾರೆ. ಬೆಳಗಾವಿಯ ಖಡೇಬಝಾರ್ ಪೋಲೀಸರು ಇಂದು ಬೆಳಗಾವಿಯಲ್ಲಿ ದಾಳಿ ಮಾಡಿ ಬೆಟ್ಟಿಂಗ್ ಜಾಲವನ್ನು ಆಪರೇಟ್ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ ಮೋಬೈಲ್ ಸೇರಿದಂತೆ ನಾಲ್ವರು ಐಪಿಎಲ್ ಬೆಟ್ಟಿಂಗ್ ಹಿರೋಗಳನ್ನು ಅರೆಸ್ಟ್ ಮಾಡಿದ್ದಾರೆ. ಬೆಳಗಾವಿಯಲ್ಲಿ ಐಪಿಎಲ್ ಬೆಟ್ಟಿಂಗ್ ನಡೆಸುತ್ತಿದ್ದ ಖಡಕ್ ಗಲ್ಲಿಯ ಉತ್ಸವ ಪ್ರಮೋದ್ ಜಾದವ,ಖಂಜರಗಲ್ಲಿಯ ಶಕೀಲ ಶಹಾಪೂರವಾಲೆ,ಮತ್ತು ಅಮೀರ ಮುಲ್ಲಾ,ಚಾಂದೂ ಗಲ್ಲಿಯ,ಮುಜವರ್ …

Read More »

ಅವರು ಇಲ್ಲಾ ಅಂದ್ರೆ ನಮಗೆ ಕೊಡಿ…. ನಿಲ್ಲಾಕ ನಾವು ರೆಡಿ….!

ಬೆಳಗಾವಿ-ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಅಕಾಲಿಕ ಮರಣದಿಂದ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಉಪ ಚುನಾವಣೆ ನಡೆಲಿದೆ. ಸುರೇಶ್ ಅಂಗಡಿ ಅವರ ನಿಧನದ ಬಳಿಕ ಬೆಳಗಾವಿ ಜಿಲ್ಲಾ ರಾಜಕಾರಣ ಚುರುಕುಗೊಂಡಿದೆ.ಆಕಾಂಕ್ಷಿಗಳ ಸಂಖ್ಯೆಯೂ ಅಗಣಿತ,ಆದರೆ ಯಾರೊಬ್ಬರೂ ಟಿಕೆಟ್ ನನಗೆ ಬೇಕು,ನನಗೆ ಕೊಡಿ ಎಂದು ಕೇಳುತ್ತಿಲ್ಲ,ಎಲ್ಲ ಆಕಾಂಕ್ಷಿಗಳು ಗಪ್ ಚುಪ್ ಲಾಭಿ ನಡೆಸಿರುವದು ಸತ್ಯ. ಇಂದು ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲು ಬೆಳಗಾವಿಗೆ ಬಂದಿದ್ರು,ಸುರೇಶ ಅಂಗಡಿ ಅವರ ಮನೆಗೆ ಹೋಗಿ,ಸಾಂತ್ವನ ಹೇಳಿ …

Read More »

ಮೋಟಾರ್ ಟ್ಯಾಕ್ಸ್ ಇಳದೈತಿ,ಮಂತ್ರಿಗಳ ಮೆಸ್ಸೇಜ್ ಬಂದೈತಿ…..!

ಬೆಳಗಾವಿ-ಕರ್ನಾಟಕ ಮೋಟಾರು ವಾಹನಗಳ ತೆರಿಗೆ ಅಧಿನಿಯಮ 1957 ( ಕರ್ನಾಟಕ ಕಾಯ್ದೆ 35/1957) ಕಲಂ 16(1) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಮೋಟಾರು ವಾಹನಗಳ ಅಧಿನಿಯಮ 1957ರ ಷೆಡ್ಯೂಲ್ (ಎ) ಐಟಂ ಸಂಖ್ಯೆ: 5(ಎ)(iii) ರಂತೆ ರಾಜ್ಯದಲ್ಲಿನ 13 ರಿಂದ 20 ಆಸನ ಸಾಮರ್ಥ್ಯವುಳ್ಳ ಒಪ್ಪಂದ ವಾಹನಗಳಿಗೆ ಪ್ರತಿ ಆಸನಕ್ಕೆ ನಿಗದಿಪಡಿಸಿರುವ ರೂ. 900/- ಗಳ ಮೋಟಾರು ವಾಹನ ತೆರಿಗೆಯನ್ನು ರೂ. 700/- ಗಳಿಗೆ ಇಳಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳು …

Read More »

ಸುರೇಶ್ ಅಂಗಡಿ ಕುಟುಂಬ ದವರಿಗೆ ಟಿಕೆಟ್ ನೀಡಲು ಬಿಜೆಪಿ ಅಧ್ಯಕ್ಷರಿಗೆ ಮನವಿ….

. ಬೆಳಗಾವಿ- ಬಿಜೆಪಿ ರಾಜ್ಯಾದ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಇಂದು ಬೆಳಗಾವಿಯ ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ಮತ್ತು ಸುರೇಶ್ ಅಂಗಡಿ ಅವರು ಸಮಂಧಿಕರು ಉಪಸ್ಥಿತರಿದ್ದರು ಈ ಸಂಧರ್ಭದಲ್ಲಿ ಸುರೇಶ್ ಅಂಗಡಿ ಅವರ ಮಾವ ನವರಾದ ಲಿಂಗರಾಜ್ ಪಾಟೀಲ್ ಅವರು ಮಾತನಾಡಿ,ಸುರೇಶ್ ಅಂಗಡಿ ಅವರ ಶ್ರೀಮತಿ ಮಂಗಳಾ ಅಂಗಡಿ ಅವರಿಗೆ ಉಪ …

Read More »

ಆರು ತಿಂಗಳ ಬಳಿಕ ಮತ್ತೆ ಕಾರ್ಯಾರಂಭಿಸಿದ ಬೆಳಗಾವಿ ಪಾಸ್ ಪೋರ್ಟ್ ಕೇಂದ್ರ….

ಬೆಳಗಾವಿ – ಕೋವೀಡ್ ಹಿನ್ನಲೆಯಲ್ಲಿ ಕಳೆದ 6 ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದ್ದ ಬೆಳಗಾವಿಯ ಪಾಸ್ ಪೋರ್ಟ್ ಸೇವಾ ಕೇಂದ್ರ ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯ ಎರಡನೇಯ ಮಹಡಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಇತ್ತು ಆದ್ರೆ ಈಗ ಪ್ರಧಾನ ಅಂಚೆ ಕಚೇರಿಯ ಕ್ಯಾಂಟೀನ್ ಪಕ್ಕದ ಹೊಸ ಕಟ್ಟಡದ ನೆಲ ಮಹಡಿಯಲ್ಲಿಯೇ ಕೇಂದ್ರ ಶಿಪ್ಟ್ ಆಗಿದ್ದು ಹೊಸತನದೊಂದಿಗೆ ಇಂದಿನಿಂದ ಸೇವೆ ಆರಂಭಿಸಿದೆ ಪ್ರತಿದಿನ ಕೇವಲ 25 …

Read More »

ರ‌್ಯಾಲಿ ಪವರ್ ಫುಲ್. ಆದ್ರೆ ಬಂದ್ ಕೂಲ್ ಕೂಲ್….!!!

ಬೆಳಗಾವಿ-ಭೂಸುಧಾರಣೆ ತಿದ್ದುಪಡಿ ಕಾಯ್ದೆ,ಎಪಿಎಂಸಿ ಕಾಯ್ದೆ ವಿರೋಧಿಸಿ ವಿವಿಧ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಕರೆಗೆ ಬೆಳಗಾವಿಯಲ್ಲಿ ನಿರಸ ಪ್ರತಿಕ್ರಿಯೆ ವ್ಯೆಕ್ತವಾಯಿತು. ತಡವಾದರೂ ಬೆಳಗಾವಿ ಮಾರುಕಟ್ಟೆ ಓಪನ್ ಆಗಿತ್ತು ಬೆಳಿಗ್ಗೆ ನಗರ ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು ರೈತರ ಪ್ರತಿಭಟನೆ ಸುವರ್ಣಸೌಧಕ್ಕೆ ಸಾಗಿದ ಬಳಿಕ ಬಸ್ ಸಂಚಾರ ಶುರುವಾಯಿತು,ಪರಸ್ಥಳಕ್ಕೆ ಹೊರಡುವ ಬಸ್ ಗಳು ಬೆಳಿಗ್ಗೆ ಸ್ಥಗಿತಗೊಂಡರೂ ಪೋಲೀಸರ ಕಣ್ಗಾವಲು ನಲ್ಲಿ ಬಸ್ ಸಂಚಾರ ಆರಂಭಗೊಂಡಿತು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತವಿರೋಧಿ ಕಾಯ್ದೆಗಳನ್ನು …

Read More »

ಬೆಳ್ಳಂ ಬೆಳಿಗ್ಗೆ,ಬೆಳಗಾವಿಯಲ್ಲಿ ಬಂದ್ ಬಿಸಿ….!

ಬೆಳಗಾವಿ- ಭೂಸುಧಾರಣೆ,ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತರು ಇಂದು ಕರ್ನಾಟಕ ಬಂದ್ ಕರೆ ನೀಡಿದ್ದುಬೆಳ್ಳಂ ಬೆಳಿಗ್ಗೆ ಇಂದು ಬೆಳಗಾವಿಯಲ್ಲಿ ಬಂದ್ ಬಿಸಿ ತಟ್ಟಿತು. ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬಸ್ ಗಳು ಬಂದ್ ಇರೋಲ್ಲ,ಎಂದಿನಂತೆ ಓಡಾಡುತ್ತವೆ ಎಂದು ಹೇಳಿಕೆ ನೀಡಿದ್ದನ್ನು ಗಮನಿಸಿದ್ದ ಕನ್ನಡಪರ ಹೋರಾಟಗಾರರು ಇಂದು ಬೆಳಗಿನ ಜಾವವೇ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣಕ್ಕೆ ಮುತ್ತಿಗೆ ಹಾಕಿ ಬಸ್ ಗಳ ಓಡಾಟಕ್ಕೆ ಬ್ರೇಕ್ ಹಾಕಿದ್ರು. ಕರ್ನಾಟಕ ನವ …

Read More »

ಸುರೇಶ ಅಂಗಡಿ ಸ್ಮರಿಸಿ ಭಾವುಕರಾದ ಜಗದೀಶ್ ಶೆಟ್ಟರ್

ಬೆಳಗಾವಿ- ಯಾವುದೇ ಚಟವಿಲ್ಲದೇ ನನಗೆ ಏನೂ ಆಗುವದಿಲ್ಲ,ಎನ್ನುವ ಅತೀವ ಆತ್ಮ ವಿಶ್ವಾಸ ಅವರಲ್ಲಿತ್ತು,ಅದಕ್ಕಾಗಿಯೇ ಅವರು ಮಾಸ್ಕ ಹಾಕಿಕೊಳ್ಳುವದರಲ್ಲಿ ನಿರ್ಲಕ್ಷ್ಯ ಮಾಡಿದ್ರು,ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದ್ದರೆ ಸುರೇಶ ಅಂಗಡಿ ಬದುಕುತ್ತಿದ್ದರೆನೋ,ಎಂದು ಕೈಗಾರಿಕಾ ಸಚಿವ,ಸುರೇಶ ಅಂಗಡಿ ಅವರ ಬೀಗರು ಆದ ಜಗದೀಶ ಶೆಟ್ಟರ್ ಭಾವುಕರಾದರು. ಬೆಳಗಾವಿ ಅನಿಗೋಳದಲ್ಲಿ ನಡೆದ ಸಂತ ಮೀರಾ ಶಾಲೆಯಲ್ಲಿ ಆರ್ ಎಸ್ ಎಸ್ ವತಿಯಿಂದ ನಡೆದ ಸುರೇಶ ಅಂಗಡಿ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕೊರೋನಾ ವಿಷಯದಲ್ಲಿ …

Read More »

ನಾಳೆ ಬೆಳಗಾವಿಯಲ್ಲಿ ಒತ್ತಾಯಪೂರ್ವಕ ಬಂದ್ ಗೆ ಅವಕಾಶವಿಲ್ಲ.

ಬೆಳಗಾವಿ- ಬೆಳಗಾವಿ ನಗರ ಹಾಗೂ ಜಿಲ್ಲೆಯಲ್ಲಿ ಅಂಗಡಿ,ಸೇರಿದಂತೆ ಇತರ ಯಾವುದೇ ವಹಿವಾಟುಗಳನ್ನು ಒತ್ತಾಯಪೂರ್ವಕವಾಗಿ ಬಂದ್ ಮಾಡದಂತೆ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ಮತ್ತು ನಗರ ಪೋಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಒತ್ತಾಯ ಪೂರ್ವಕವಾಗಿ ಅಂಗಡಿ ಬಂದ್ ಮಾಡಬಾರುದು,ವಾಹನ ಸಂಚಾರಕ್ಕೆ ಅಡ್ಡಿ ಪಡಿಸಬಾರದು,ಅಗತ್ಯ ಸೇವೆಗಳಿಗೆ ಅಡ್ಡಿ ಪಡಿಸಬಾರದು,ಯಾರಾದ್ರೂ ಕಾನೂನು ಉಲ್ಲಂಘಿಸಿದರೆ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವದು ಎಂದು ಪ್ರಕಟನೆಯ ಮೂಲಕ ಎಚ್ಚರಿಕೆ ನೀಡಲಾಗಿದೆ ರಸ್ತೆ ತಡೆ,ರೈಲು ತಡೆಗೆ ಅವಕಾಶ ಇಲ್ಲ,ಅಂಗಡಿ,ವಹಿವಾಟು ಬಂದ್ ಮಾಡುವಂತೆ ಯಾರಿಗೂ …

Read More »