Breaking News

LOCAL NEWS

ಭೂಸುಧಾರಣಾ ಕಾಯ್ದೆಯಿಂದ ಜಮೀನಿನ ಮೌಲ್ಯ ಹೆಚ್ಚಳ- ಕಡಾಡಿ

ಬೆಳಗಾವಿ-ಭೂ ಸುಧಾರಣೆ ಕಾಯ್ದೆ ರೈತರ ಪರವಾಗಿದ್ದು ಕಾಂಗ್ರೆಸ್ ರೈತರಿಗೆ ತಪ್ಪು ಮಾಹಿತಿ ನೀಡಿ ರೈತರ ದಿಕ್ಕು ತಪ್ಪಿಸುತ್ತಿದೆ ಕೇಂದ್ರ ಸರ್ಕಾರದ ಈ ಕಾಯ್ದೆಯಿಂದ,ರೈತರ ಜಮೀನಿನ ಮೌಲ್ಯ ಹೆಚ್ಚಾಗಲಿದೆ.ಎಂದು ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ, ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ವಿಚಾರವಾಗಿ ನಾಳೆ ಕರ್ನಾಟಕ ಬಂದ್ ಕರೆ ನೀಡಿದ ಹಿನ್ನಲೆಯಲ್ಲಿ ಈರಣ್ಣಾ ಕಡಾಡಿ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. …

Read More »

ನಾಳೆ ಬೆಳಗಾವಿಯನ್ನು ರೈತರು ಶೀಲ್ ಡೌನ್ ಮಾಡ್ತಾರೆ…..!

ಬೆಳಗಾವಿ- ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ತಿದ್ದುಪಡಿ ಕಾಯ್ದೆ,ಮತ್ತು,ಎಪಿಎಂಸಿ ಕಾಯ್ದೆ ವಿರೋಧಿಸಿ,ವಿವಿಧ ರೈತಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು,ಬಂದ್ ಗೆ ಬೆಳಗಾವಿಯ ಕನ್ನಡಪರ,ದಲಿತಪರ,ಮತ್ತು ರೈತಪರ ,ಸಂಘಟನೆಗಳು ಬೆಂಬಲ ಸೂಚಿಸಿವೆ, ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಭೆ ಮಾಡಿ ನಂತರ ಪತ್ರಿಕಾಗೋಷ್ಠಿ ನಡೆಸಿದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಬಂದ್ ಗೆ ಬೆಂಬಲ ವ್ಯೆಕ್ತಪಡಿಸಿದ್ದಾರೆ. ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾತನಾಡಿ,ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಪಾಲಿಗೆ …

Read More »

ಬೆಳಗಾವಿ ಗಾಂಜಾ ದಂಧೆಗೆ ಮಹಾರಾಷ್ಟ್ರದ ಕನೆಕ್ಷನ್….

ಮಹಾರಾಷ್ಟ್ರದ ಡ್ರಗ್ ಪೆಡ್ಲರ್ ಬಂಧನ, 120 ಕೆಜಿ ಗಾಂಜಾ ಜಪ್ತಿ ಬೆಳಗಾವಿ- ಜಿಲ್ಲೆಯ ಡಿಸಿಐಬಿ ಘಟಕದ ಪೊಲೀಸರು ಮಹಾರಾಷ್ಟ್ರದ ಮಿರಜದ ಡ್ರಗ್ ಪೆಡ್ಲರ್ ನನ್ನು ಬಂಧಿಸಿದ್ದು, ಆತನಿಂದ  ರೂಪಾಯಿ 28.5 ಲಕ್ಷ ಮೌಲ್ಯದ 120 ಕೆಜಿ ಗಾಂಜಾ , ಸ್ವೀಪ್ಟ್ ಕಾರ ಮತ್ತು ಆಕ್ಟಿವ ಹೋಂಡಾ ಸ್ಕೂಟಿ ಜಪ್ತಿ ಮಾಡಿದ್ದಾರೆ .ಮಿರಜ ಆಶ್ಪಾಕ ಮೈನುದ್ದೀನ ಮುಲ್ಲಾ ( 42) ಬಂಧಿತ ಆರೋಪಿ. ಗಾಂಜಾ ಮಾರಾಟಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಮಿರಜನ …

Read More »

ಬೆಳಗಾವಿಯಲ್ಲಿ ಇಬ್ಬರು ಮಹಿಳೆಯರ ಮರ್ಡರ್

ಬೆಳಗಾವಿ- ಹಾಡುಹಗಲೇ ಬೈಕ್ ಮೇಲೆ ಬಂದ ಇಬ್ಬರು ಯುವಕರು,ಇಬ್ಬರು ಯುವತಿಯರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಬೆಳಗಾವಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿಯ ಮಚ್ಛೆ ಗ್ರಾಮದ ಬ್ರಹ್ಮಲಿಂಗ ನಗರದಲ್ಲಿ ಈ ಘಟನೆ ನಡೆದಿದೆ,ಕೊಲೆಯಾದ ಇಬ್ಬರು ವಿವಾಹಿತರು ಎಂದು ತಿಳಿದು ಬಂದಿದೆ.ಕೊಲೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಪೋಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಪೋಲೀಸರ ಪರಶೀಲನೆಯ ಬಳಿಕ ಘಟನೆಯ ಸಂಪೂರ್ಣ ವಿವರ ಗೊತ್ತಾಗಲಿದೆ.

Read More »

ಮಾಸ್ಕ ಹಾಕದಿದ್ದರೆ ದಂಡದ ಪಾವತಿ ಹರೀತಾರೆ ಹುಷಾರ್…!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಕೊರೋನಾ ಮಹಾಮಾರಿಯ ಅಟ್ಟಹಾಸ ಮುಂದುವರೆದಿದ್ದು ಮಹಾಮಾರಿಗೆ ಲಗಾಮು ಹಾಕಲು ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಕಾರ್ಯಾಚರಣೆ ನಡೆಸಿದೆ. ಬೆಳಗಾವಿ ಮಹಾನಗರದಲ್ಲಿ ಮಾಸ್ಕ ಹಾಕದೇ ಸುತ್ತಾಡುವವರನ್ನು ಗುರುತಿಸಿ ಅವರಿಗೆ ದಂಡ ವಿಧಿಸುವ ಕಾರ್ಯಾಚರಣೆ ನಡೆಸಿದ್ದು ನಿನ್ನೆ 38 ಸಾವಿರ ರೂ ದಂಡ ವಸೂಲಿ ಮಾಡಿದ್ರೆ ಇಂದು ಶುಕ್ರವಾರ ಒಂದೇ ದಿನ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬರೊಬ್ಬರಿ ಒಂದು ಲಕ್ಷ ₹ ದಂಡ ವಸೂಲಿ ಮಾಡಿದ್ದಾರೆ. ಈ …

Read More »

ಬೆಳಗಾವಿ ಕ್ರೈಂ ಪೋಲೀಸರ ಭರ್ಜರಿ ದಾಳಿ 15 ಕೆಜಿ ಗಾಂಜಾ ವಶ….

ಬೆಳಗಾವಿ- ಬೆಳಗಾವಿಯ ಕ್ರೈಂ ಬ್ರ್ಯಾಂಚಿನ ಪೋಲೀಸರು ಇಂದು ಭರ್ಜರಿ ಬೇಟೆಯಾಡಿದ್ದಾರೆ,ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದ ಜಾಲವನ್ನು ಪತ್ತೆ ಮಾಡಿ ಬರೊಬ್ಬರಿ 15 ಕೆಜಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿಯ ಹೋಲ್ ಸೇಲ್ ಫ್ರುಟ್ ಮಾರ್ಕೆಟ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ,ಮಲ್ಲಪ್ಪ ಸಿದ್ರಾಮಣಿ ನಿಪ್ಪಾಣಿ ಸಾ! ನಾಗರಮುನ್ನೋಳಿ,ಹಾಲಿ ಮುಗುಳಖೋಡ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ,ಈತನಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ,ಕಲ್ಬುರ್ಗಿ ಜಿಲ್ಲೆಯ ಇಬ್ಬರನ್ನು ಬಂಧಿಸಿ ಒಟ್ಟು ಎರಡುವರೆ ಲಕ್ಷ ₹ …

Read More »

ಬೆಳಗಾವಿಯಲ್ಲಿ CBI ರೇಡ್…ಮೂವರು ಅಧಿಕಾರಿಗಳು ವಶಕ್ಕೆ

ಬೆಳಗಾವಿ- ಬೆಳಗಾವಿಯ ಮೂವರು GST ಅಧಿಕಾರಿಗಳು ಐದು ಲಕ್ಷ ರೂ ಲಂಚ ಪಡೆಯುತ್ತಿರುವಾಗ CBI ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬೆಳಗಾವಿಯ GST ತೆರಿಗೆ ವಿಭಾಗದ ಇಬ್ಬರು ಸುಪರಿಡೆಂಟ್ ಗಳು ಮತ್ತು ಓರ್ವ ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳು ಐದು ಲಕ್ಷ ರೂ ಲಂಚ ನಡೆಯುತ್ತಿರುವಾಗ ಸಿಬಿಐ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ. ಬೆಳಗಾವಿಯ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳು ಅವರನ್ನು ಧಾರವಾಡದ ನ್ಯಾಯಾಲಯದಲ್ಲಿ ಹಾಜರು ಮಾಡಿದ್ದಾರೆ. BI …

Read More »

ಸುರೇಶ ಅಂಗಡಿ ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಬಹಳ ಪ್ರಯತ್ನ ಮಾಡಿದೆ.

ದಿವಂಗತ ಸುರೇಶ್ ಅಂಗಡಿ ಅವರಿಗೆ ಗಣ್ಯರ ನಮನ ಬೆಳಗಾವಿ,-ಬೆಳಗಾವಿಯ ಸದಾಶಿವ ನಗರ ಬಳಿಯ ಸಂಪಿಗೆ ನಗರದಲ್ಲಿರುವ ರೈಲ್ವೆ ಇಲಾಖೆಯ ರಾಜ್ಯ ಸಚಿವ ಹಾಗೂ ಸಂಸದರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರಿಗೆ ಗಣ್ಯರು ಇಂದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ಕೈಗಾರಿಕಾ ಸಚಿವರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜಗದೀಶ್ ಶೆಟ್ಟರ್ ದಂಪತಿ, ಶಾಸಕ ಅನಿಲ್ ಬೆನಕೆ, ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಪೊಲೀಸ್ ಆಯುಕ್ತರಾದ ತ್ಯಾಗರಾಜನ್, ಡಿಸಿಪಿ ವಿಕ್ರಮ್, ಬೆಳಗಾವಿ ಸ್ಮಾರ್ಟ್ …

Read More »

ಸುರೇಶ್ ಅಂಗಡಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲು ದೆಹಲಿಗೆ ತೆರಳಿದ ಬೆಳಗಾವಿಯ ಸ್ವಾಮೀಜಿ

ಬೆಳಗಾವಿ- ದೆಹಲಿಯಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಹಿನ್ನಲೆಯಲ್ಲಿ ಸುರೇಶ ಅಂಗಡಿ ಅವರ ಕುಟುಂಬಸ್ಥರ  ಜತೆಗೆ ಸ್ವಾಮೀಜಿ ಬಾಳಯ್ಯ ಹಿರೇಮಠ ಕೂಡ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಬೆಳಗಾವಿಯಿಂದ ಒಂಬತ್ತು ಜನ ಕುಟುಂಬಸ್ಥರು ದೆಹಲಿಗೆ ಪ್ರಯಾಣ ಬೆಳೆಸಿದ್ದು,ದೆಹಲಿಯ ಲಿಂಗಾಯತ ಸಮಾಜದ ರುದ್ರಭೂಮಿಯಲ್ಲಿ ಸುರೇಶ ಅಂಗಡಿ ಅವರ ಅಂತ್ಯಸಂಸ್ಕಾರವನ್ನು ಲಿಂಗಾಯತ ಸಮಾಜದ ಪದ್ದತಿಯ ಪ್ರಕಾರ, ನೆರವೇರಿಸಲು ಬೆಳಗಾವಿಯಿಂದ ಬಾಳಯ್ಯ ಸ್ವಾಮೀಜಿ ಅವರು ದೆಹಲಿಗೆ ತೆರಳಿದ್ದಾರೆ. ಇತ್ತ ಬೆಳಗಾವಿಯ ಸದಾಶಿವನಗರದ ಮನೆಯಲ್ಲಿ ಬೆಂಬಲಿಗರು,ನಾಯಕರು,ಅಭಿಮಾನಿಗಳು …

Read More »

ಬೆಳಗಾವಿಯಿಂದ ದೆಹಲಿಗೆ ತೆರಳಿದ, ಮಗಳು ಸ್ಪೂರ್ತಿ

ಬೆಳಗಾವಿ- ಇಂದು ಸಂಜೆ 4 ಗಂಟೆಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದ್ದು ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಗಳು ಸ್ಪೂರ್ತಿ ಬೆಳಗಾವಿಯಿಂದ ದೆಹಲಿಗೆ ನಿರ್ಗಮಿಸಿದರು. ಬೆಳಗಾವಿಯ ಸದಾಶಿವ ನಗರದಲ್ಲಿರುವ ಮನೆಯಿಂದ ಸುರೇಶ ಅಂಗಡಿ ಅವರ ಹಿರಿಯ ಪುತ್ರಿ ಸ್ಪೂರ್ತಿ ತಮ್ಮ ಮಗಳ ಜೊತೆ ದೆಹಲಿಗೆ ತೆರಳಿದರು. ಬೆಳಗಿನ ಜಾವ ಸುರೇಶ್ ಅಂಗಡಿ ಅವರ ಅಭಿಮಾನಿಗಳು,ಗಣ್ಯರು,ನಾಯಕರು,ಸದಾಶಿವ ನಗರದಲ್ಲಿರುವ ಸುರೇಶ್ ಅಂಗಡಿ ಅವರ ಮನೆಗೆ ದೌಡಾಯಿಸಿ,ಸಾಂತ್ವನ ಹೇಳುತ್ತಿರುವ ದೃಶ್ಯ …

Read More »

ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲಿ ಸುರೇಶ್ ಅಂಗಡಿ, ಅಂತ್ಯಕ್ರಿಯೆ

ಬೆಳಗಾವಿ-ಕೊರೋನಾ ಸೊಂಕು ತಗಲಿದ್ದರಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ದೆಹಲಿಯಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ. ನಿನ್ನೆ ರಾತ್ರಿ ಸಚಿವ ಸುರೇಶ್ ಅಂಗಡಿ ಅವರು ನಿಧನರಾದ ಬಳಿಕ,ಅವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ತರಲು ಸಚಿವರಾದ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಜನ ಕರ್ನಾಟಕದ ನಾಯಕರು ದೆಹಲಿಯಲ್ಲಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದರು,ರಾತ್ರಿ ಜಗದೀಶ್ ಶೆಟ್ಟರ್ ಅವರು …

Read More »

ಕೇಂದ್ರ ಸಚಿವ ಸುರೇಶ್ ಅಂಗಡಿ ಇನ್ನಿಲ್ಲ

ಬೆಳಗಾವಿ- ಕೇಂದ್ರದ ರಾಜ್ಯ ರೇಲ್ವೇ ಸಚಿವ ಸುರೇಶ ಅಂಗಡಿ ನಿಧನರಾಗಿದ್ದಾರೆ ಎಂದು ಸುದ್ಧಿ ವಾಹಿನಿಗಳು ವರದಿ ಮಾಡಿವೆ ಕೊರೋನಾ ಸೊಂಕಿನಿಂದ ಬಳಲುತ್ತುದ್ದ ಅವರು ಇಂದು ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಗೊತ್ತಾಗಿದೆ ರಾಜ್ಯ ರೇಲ್ವೆ ಸಚಿವರಾಗಿದ್ದ ಅವರಿಗೆ ಇತ್ತೀಚಿಗಷ್ಟೇ ಕೊರೋನಾ ಸೊಂಕು ತಗಲಿತ್ತು

Read More »

ಬೆಂಗಳೂರಲ್ಲಿ ಬೆಳಗಾವಿ ಎಪಿಎಂಸಿ ಅವಾಜ್……!

ಬೆಂಗಳೂರು- ಬೆಂಗಳೂರಲ್ಲಿ ಹಂಗೇನಿಲ್ಲ,ಎಲ್ಲಾರೂ ಸೇರ್ಕೊಂಡು ಮನವಿ ಕೊಡ್ತಾರೆ ಅನ್ನೋದು,ಪೋಟೋ ನೋಡಿದ್ರೆ ನಿಮಗೆ ಗೊತ್ತಾಗುತ್ತದೆ. ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಆಡಳಿತ ಮಂಡಳಿಯ ನಿಯೋಗ ಇಂದು,ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಸಹಕಾರ,ಮತ್ತು ಎಪಿಎಂಸಿ ಸಚಿವ ಟಿ‌.ಸೋಮಸೇಖರ್ ಅವರು ಭೇಟಿಯಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿತು. ಬೆಳಗಾವಿ ಎಪಿಎಂಸಿಯ ಬಾಕಿ ಉಳಿದಿರುವ ಆರ್ ಡಿ ಪಿ ಯೋಜನೆಯ 15 ಕೋಟಿ ರೂ ಅನುದಾನ ಬಿಡುಗಡೆ ಮಾಡಬೇಕು,ಬೆಳಗಾವಿ ಎಪಿಎಂಸಿ ಮಾರುಕಟ್ಟೆಯ ಅಭಿವೃದ್ಧಿಗಾಗಿ,ಹೆಚ್ಚುವರಿಯಾಗಿ 15 ಕೋಟಿ …

Read More »

ಬೆಂಗಳೂರಲ್ಲಿ ಸೇಷನ್…ಬೆಳಗಾವಿಯಲ್ಲಿ ಪ್ರತಿಭಟನೆಗಳ ಸೀಝನ್…!

ಕೂಲಿ ನೇಕಾರ ಕಾರ್ಮಿಕ ಬಳಗದ ಪ್ರತಿಭಟನೆ ಬೆಳಗಾವಿ ವಿದ್ಯುತ್ ಚಾಲಿತ ಮಗ್ಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ಸ್ಥಾಪನೆ, ಗುರುತಿನ ಚೀಟಿ (ಲೇಬರ್ ಕಾರ್ಡ್) ನೀಡುವಂತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಕೂಲಿ ನೇಕಾರ ಕಾರ್ಮಿಕರ ಬಳಗ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ರವಾನಿಸಿದರು. ರಾಜ್ಯದ ವಿದ್ಯುತ್ ಚಾಲಿತ ಮಗ್ಗಗಳ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಟ್ಟಡ ಕಾರ್ಮಿಕರ ಮಾದರಿಯಲ್ಲಿಯೇ ಕಲ್ಯಾಣ …

Read More »

ಬೆಳಗಾವಿಯಲ್ಲಿ ಗಾಂಜಾ,,,ಮಾಂಜಾ…ಮಟಕಾ ದಂಧೆಗೆ ಮಹಾ ಬ್ರೇಕ್….!

ಬೆಳಗಾವಿ- ಡಿಸಿಪಿ ವಿಕ್ರಮ್ ಅಮಟೆ ಅವರು ಬೆಳಗಾವಿಗೆ ಬಂದ ಬಳಿಕ,ನಗರದಲ್ಲಿ ಪೋಲೀಸ್ ಖದರ್ ಕಾಣಿಸುತ್ತಿದೆ. ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಗಾಂಜಾ ಮಾರಾಟಗಾರರ ಮೇಲೆ ದಾಳಿಗಳು ನಡೆಯುತ್ತಿವೆ,ನಿನ್ನೆ ರಾತ್ರಿ ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿರುವ ಮಟಕಾ ಅಡ್ಡೆಯ ಮೇಲೆ ಡಿಸಿಪಿ ವಿಕ್ರಮ್ ಅಮಟೆ ಖುದ್ದಾಗಿ ದಾಳಿ ಮಾಡಿ,ಬರೋಬ್ಬರಿ 23 ಜನರನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಪೋಲೀಸರು ಮಟಕಾ ಬುಕ್ಕಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಬೆಳಗಾವಿ …

Read More »