LOCAL NEWS

ಆತ ಹೋಗಿದ್ದು ಕುರಿ ಮೇಯಿಸಲು ಆದ್ರೆ, ಅಲ್ಲಿ ಆಗಿದ್ದೇ ಬೇರೆ…..

ಬೆಳಗಾವಿ- ಕುರಿ ಮೇಯಿಸಲು ಹೋಗಿದ್ದ ಯುವಕನೊಬ್ಬ ಕೃಷಿ ಹೊಂಡದಲ್ಲಿ ಕಾಲು ಜಾರಿ ನೀರು ಪಾಲಾದ ಘಟನೆ ಸುಳಗಾ,(ಹಿಂಡಲಗಾ) ಗ್ರಾಮದಲ್ಲಿ ನಡೆದಿದೆ. ಕುರಿ ಮೇಯಿಸಲು ತೆರಳಿದ್ದ 32 ವರ್ಷದ ಯುವಕ ವಿಠ್ಠಲ ಅನಗೋಳಕರ ಕಾಲು ಜಾರಿ ಕೃಷಿ ಹೊಂಡಕ್ಕೆ ಬಿದ್ದು ಈಜಲು ಬಾರದೇ ಇರುವದರಿಂದ ಕೃಷಿ ಹೊಂಡದಲ್ಲೇ ಮೃತಪಟ್ಟಿದ್ದಾನೆ. ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Read More »

ಮೊತ್ತೊಬ್ಬರ ಹೆಸರಿನಲ್ಲಿ ಪೋಲೀಸ್ ಎಕ್ಸಾಮ್ ಬರೆಯುತ್ತಿದ್ದ. ಓರ್ವನ ಬಂಧನ….

ಬೆಳಗಾವಿ- ಇಂದು ಬೆಳಗಾವಿಯಲ್ಲಿ DAR /CAR ಪೋಲೀಸ್ ಕಾನ್ಸಟೇಬಲ್ ಹುದ್ದೆ ನೇಮಕಾತಿಗಾಗಿ,ಪರೀಕ್ಷೆ ನಡೆಯುತ್ತಿದೆ ಬೇರೆಯವರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿದ್ದ ಓರ್ವ ನಕಲಿ ಅಭ್ಯರ್ಥಿ ಖಾಕಿ ಬಲೆಗೆ ಬಿದ್ದಿದ್ದಾರೆ. ಬೆಳಗಾವಿಯ ಪರೀಕ್ಷಾ ಕೇಂದ್ರಗಳಲ್ಲಿ ಮತ್ತೊಬ್ಬರ ಹೆಸರಿನಲ್ಲಿ ಪರೀಕ್ಷೆ ಬರೆಯುತ್ತಿರುವಾಗ,ಪರೀಕ್ಷಾ ಮೇಲ್ವೀಚಾರಕರ ಕೈಗೆ ಸಿಕ್ಕಿರುವ ಓರ್ವನನ್ನು ಬಂಧಿಸಿರುವ ಪೋಲೀಸರು ವಿಚಾರಣೆ ನಡೆಸಿದ್ದಾರೆ

Read More »

ಸಹೋದರ ಚನ್ನರಾಜ್ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲೋದಿಲ್ಲ

ಬೆಳಗಾವಿ- ನಮಗೆ ಮಾಡಲು ಬೇರೆ ಕೆಲಸ ಇದೆ ಹೀಗಾಗಿ ಸಹೋದರ ಚನ್ನರಾಜ್ ಹಟ್ಟಿಹೊಳಿ ಡಿಸಿಸಿ ಬ್ಯಾಂಕ್ ಇಲೆಕ್ಷನ್ ಗೆ ನಿಲ್ಲುವದಿಲ್ಲ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದ್ದಾರೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಹಸಿದವರಿಗೆ ಊಟ ಕೊಡುವುದು ಕಾಂಗ್ರೆಸ್ ಕಾನ್ಸೆಪ್ಟ್ಕಾ ರ್ಯಕರ್ತರಿಗೆ ಮಾತ್ರ ಕ್ಯಾಂಟೀನ್ ಅಲ್ಲ, ಎಲ್ಲಾ ಸಾರ್ವಜನಿಕರಿಗೂ ಅನುಕೂಲ ಆಗುತ್ತೆ,ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಸುಸಜ್ಜಿತ, ಹೈಜೆನಿಕ್ ಕ್ಯಾಂಟೀನ್ ಉದ್ಘಾಟನೆ ಮಾಡ್ತಿದೀವಿಬೆಳಗಾವಿಯಲ್ಲಿ ಕೆಪಿಸಿಸಿ ವಕ್ತಾರೆ ಲಕ್ಷ್ಮೀ …

Read More »

ಬಳಗಾನೂರ ಗ್ರಾಮದಲ್ಲಿ,ರಾಯಣ್ಣ,ಮತ್ತು ಚನ್ನಮ್ಮ ಅಭಿಮಾನಿಗಳ ನಡುವೆ ಗಲಾಟೆ….

ಬೆಳಗಾವಿ- ವೀರರಾಣಿ ಕಿತ್ತೂರು ಚನ್ನಮ್ಮ,ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ,ಇಬ್ಬರೂ ಒಟ್ಟಾಗಿ ಬ್ರಿಟೀಷರ ವಿರುದ್ಧ ಹೋರಾಡಿದರು ಅವರ,ಧೈರ್ಯ ಮತ್ತು ಸಹಾಸ ದೇಶಕ್ಕೆ ಸ್ಪೂರ್ತಿಯಾಗಿದೆ,ಆದ್ರೆ ಇವತ್ತು ರಾಯಣ್ಣ, ಮತ್ತು ಚನ್ನಮ್ಮನ ಅಭಿಮಾನಿಗಳು ಪರಸ್ಪರ ಸಂಘರ್ಷಕ್ಕೆ ಇಳಿದಿರುವದು ಅತ್ಯಂತ ದು:ಖದ ಸಂಗತಿಯಾಗಿದೆ ರಾಯಣ್ಣ ಮತ್ತು ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆಯ ಕುರಿತು,ಗದಗ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ,ಹಾಲುಮತ ಸಮಾಜ ಮತ್ತು ಪಂಚಮಸಾಲಿ ಸಮಾಜದ ನಡುವೆ ದೊಡ್ಡ ಸಂಘರ್ಷವೇ ನಡೆಯುತ್ತಿದೆ. ಕಳೆದ ನಾಲ್ಕೈದು ವರ್ಷಗಳಿಂದ ನಡೆತುತ್ತಿರುವ ಈ ಸಂಘರ್ಷ ನಿನ್ನೆ …

Read More »

ಮಣಗುತ್ತಿ ಗ್ರಾಮದಲ್ಲಿ ಮೂರ್ತಿ ವಿವಾದಕ್ಕೆ ಟೋಟಲ್ ಬ್ರೇಕ್…

ಬೆಳಗಾವಿ: ಮಣಗುತ್ತಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜ ಹಾಗೂ ವಾಲ್ಮೀಕಿ ಮಹರ್ಷಿ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಕಾರ್ಯಕ್ರಮವನ್ನು ಶಾಸಕ ಸತೀಶ್ ಜಾರಕಿಹೊಳಿ ಶನಿವಾರ ನೆರವೇಸಿದರು. ಶಿವಾಜಿ ಪ್ರತಿಮೆ ಸ್ಥಾಪನೆ ವಿವಾದಕ್ಕೆ ಇಡಾಗಿದ್ದ ಮಣಗುತ್ತಿ ಗ್ರಾಮದಲ್ಲಿ, ಮೂರು ಗ್ರಾಮಗಳ ಗ್ರಾಮಸ್ಥರ ಮುಖಂಡರೊಂದಿಗೆ ಚರ್ಚಿಸಿ, ಒಮ್ಮತ ಅಭಿಪ್ರಾಯದಿಂದ ಮೂರ್ತಿ ಪ್ರತಿಷ್ಠಾಪನೆ ಅಡಿಗಲ್ಲು ಸಮಾರಂಭವನ್ನು ನಡೆಯಿತು. ಇದೇ ವೇಳೆ ಮಾತನಾಡಿದ ಅವರು, ಗ್ರಾಮದ ಹಿತದೃಷ್ಟಿಯಿಂದ ಧರ್ಮದಲ್ಲಿ ರಾಜಕೀಯ ಮಾಡುವುದು ಬೇಡ. ಎಲ್ಲರೂ ಗ್ರಾಮದ ಅಭಿವೃದ್ಧಿಗೆ …

Read More »

ಟ್ರಾಕ್ಟರ್ ಡಿಕ್ಕಿ ಬೈಕ್ ಮೇಲೆ ತೆರಳುತ್ತಿದ್ದ ಹಸುಗೂಸು, ದಂಪತಿ ದುರ್ಮರಣ

ಬೆಳಗಾವಿ-ಟ್ರಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲೆ ತೆರಳುತ್ತಿದ್ದ ಹಸುಗೂಸು, ದಂಪತಿ ಸಾವನ್ನೊಪ್ಪಿದ್ದಾರೆ. 5 ತಿಂಗಳ ಹಸುಗೂಸು ಸೇರಿ ಮೂವರು ಸ್ಥಳದಲ್ಲೆ ಮೃತಪಟ್ಟಿದ್ದು ಸಂಗನಕೇರಿ ಗ್ರಾಮದ ಬಳಿ ಭೀಕರ ರಸ್ತೆ ಅಪಾಘಾತ ಸಂಭವಿಸಿದೆ.ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮೃತರು ಹಿಡಕಲ್ ಗ್ರಾಮದ ನಿವಾಸಿಗಳೆಂದು ಪೊಲೀಸರ ಮಾಹಿತಿ ನೀಡಿದ್ದು, ಮೃತರ ಹೆಸರು ಇನ್ನೂ ಪತ್ತೆಯಾಗಿಲ್ಲ, ಸ್ಥಳಕ್ಕೆ ಘಟಪ್ರಭಾ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಘಟಪ್ರಭಾ ಪೊಲೀಸ್ …

Read More »

ಕರಾಳ ದಿನಾಚರಣೆಗೆ ಕನ್ನಡ ಸಂಘಟನೆಗಳ ಆಕ್ಷೇಪ

ಬೆಳಗಾವಿ – ಕರಾಳ ದಿನಾಚರಣೆಗೆ ಅನುಮತಿ ನೀಡುವದಾದರೆ,ರಾಜ್ಯೋತ್ಸವದ ಸಭೆ ಕರೆಯಬೇಡಿ,ಕರಾಳ ದಿನಾಚರಣೆಗೆ ಅನುಮತಿ ನೀಡುವದಿಲ್ಲ ಅಂತಾ ರಾತ್ರೋ ರಾತ್ರಿ ಅನುಮತಿ ಕೊಡ್ತೀರಾ,ಈ ಬಗ್ಗೆ ಜಿಲ್ಲಾಡಳಿತ ನಿಲುವು ತಿಳಿಸಿ ಆಮೇಲೆ ಸಭೆ ನಡೆಸಿ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಪಟ್ಟು ಹಿಡಿದರು. ಸರಳ, ಸಾಂಕೇತಿಕ ರಾಜ್ಯೋತ್ಸವ: ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕೋವಿಡ್ -19 ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕ ರಾಜ್ಯೋತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಣೆ ಮಾಡಲಾಗುವುದು. ರಾಜ್ಯೋತ್ಸವದಲ್ಲಿ ಪೋಲಿಸ್ ಪರೇಡ್ …

Read More »

ಕರಾಳ ದಿನಕ್ಕಾಗಿ ಮತ್ತೆ ಕ್ಯಾತೆ ತೆಗೆದ ಕಂಗಾಲ್ ಕಂಪನಿ…..!!!

ಬೆಳಗಾವಿ- ಸೋತರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ,ಬೆಳಗಾವಿಯಲ್ಲಿ ಅಸ್ತಿತ್ವ ಕಳೆದುಕೊಂಡು,ಸಮಾಧಿ ಯಾಗಿರುವ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ವರ್ಷ ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ಅನುಮತಿ ನೀಡುವಂತೆ ಮತ್ತೆ ಕ್ಯಾತೆ ತೆಗೆದಿದೆ. ರಾಜ್ಯದಲ್ಲಿ ಕೋವೀಡ್ ಇದೆ,ಈ ವರ್ಷ,ದಸರಾ ಉತ್ಸವ,ಕಿತ್ತೂರು ಉತ್ಸವ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿದೆ.ಜೊತೆಗೆ ರಾಜ್ಯೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ ಬೆನ್ನಲ್ಲಿಯೇ ನಿನ್ನೆ ಶುಕ್ರವಾರ ಎಂ ಈ ಎಸ್ ಮುಖಂಡರು ದೀಪಕ ದಳವಿ ಅವರ ನೇತ್ರತ್ವದಲ್ಲಿ …

Read More »

ಡೆತ್‌ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಸೂರಜ್

ಬೆಳಗಾವಿ-22 ವರ್ಷದ ಯುವಕನೊಬ್ಬ ಮನೆಯಲ್ಲಿ ಯಾರೂ ಇಲ್ಲದಿರುವಾಗ ಬಾಗಿಲು ಹಾಕಿಕೊಂಡು,ಡೆತ್ ನೋಟ್ ಬರೆದಿಟ್ಟು ,ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಪಕ್ಕದ ಪೀರನವಾಡಿಯಲ್ಲಿ ನಡೆದಿದೆ. ಪೀರನವಾಡಿಯ 22 ವರ್ಷದ ಸೂರಜ್ ಅಶೋಕ ನಾಯಕ ಎಂಬಾತ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾನೆ.ಈತ ಮೂಲತಹ ಹುಕ್ಕೇರಿ ತಾಲ್ಲೂಕಿನ ಹಂಚಿನಾಳ ಗ್ರಾಮದವನಾಗಿದ್ದು,ತಂದೆ ತಾಯಿಯ ಜೊತೆ ಪೀರನವಾಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ,ಈ ಕೂಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ. ಈತನ ತಮ್ಮ ಮತ್ತು ತಂದೆ ತಾಯಿ …

Read More »

ಇಂದು ರೇಲ್ವೆ ಸೇತುವೆ ಮೇಲೆ ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿ ಯಾರು ಗೊತ್ತಾ….?

ಬೆಳಗಾವಿ-ಇಂದು ಬೆಳ್ಳಂ ಬೆಳಿಗ್ಗೆ ಬೆಳಗಾವಿಯ ರೈಲು ನಿಲ್ಧಾಣದ ಬಳಿ ಇರುವ ರೇಲ್ವೇ ಮೇಲ್ಸೆತುವೆಯ ಮೇಲೆ ವ್ಯಕ್ತಿಯಿಬ್ಬನ ಶವ ನೇತಾಡುವದನ್ನು ನೋಡಿ ಜನ ಭಯಭೀತರಾಗಿದ್ದರು. ಆತ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ..? ಆತ ಯಾರು ..? ಯಾವ ಊರಿನವನು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು ರೇಲ್ವೆ ಮೇಲ್ಸೆತುವೆಯ ಮೇಲೆ ಶವ ನೇತಾಡುವದನ್ನು ನೋಡಿದ ಜನ ರೇಲ್ವೆ ಪೋಲೀಸರಿಗೆ ಮಾಹಿತಿ ನೀಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಪೋಲೀಸರು ಪರಶೀಲನೆ ಮಾಡಿ,ಆತ್ಮಹತ್ಯೆ ಮಾಡಿಕೊಂಡ ವ್ಯೆಕ್ತಿಯ …

Read More »

ಆದಷ್ಟು ಬೇಗನೆ ಬೆಳೆ ಪರಿಹಾರ,ವಿತರಣೆ

ಅತಿವೃಷ್ಟಿ: ಮುನ್ನೆಚ್ಚರಿಕೆಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ ಕೋವಿಡ್ ನಿಯಂತ್ರಣ: ನಿರ್ಲಕ್ಷ್ಯ ಸಲ್ಲದು; ಅಧಿಕಾರಿಗಳಿಗೆ ಸಚಿವರ ತಾಕೀತು ಬೆಳಗಾವಿ,): ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಪ್ರಮಾಣ ಕಡಿಮೆಗೊಂಡಿರುವುದರಿಂದ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲ. ಆದಾಗ್ಯೂ ಮಳೆಯ ಪ್ರಮಾಣ ಹೆಚ್ಚಾದರೆ ಅದನ್ನು ಗಮನದಲ್ಲಿರಿಸಿಕೊಂಡು ಆಲಮಟ್ಟಿ ಜಲಾಶಯದಿಂದ ಇನ್ನಷ್ಟು ನೀರು ಬಿಡುಗಡೆ ಮಾಡಲು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಸಚಿವರಾದ ರಮೇಶ್ ಜಾರಕಿಹೊಳಿ ಸೂಚನೆ ನೀಡಿದರು. ಅತಿವೃಷ್ಟಿ ಹಾಗೂ …

Read More »

ಡಿಕೆಶಿ ಹತಾಶರಾಗಿದ್ದಾರೆ- ರಮೇಶ್ ಜಾರಕಿಹೊಳಿ

ಬೆಳಗಾವಿ ರಾಜ್ಯದ ಅ ಢಲ್ಲಿ ನಡೆಯುತ್ತಿರುವ ಆರ್ ಆರ್ ವಿಧಾನಸಭಾ‌ ಉಪಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಮ್ಮದೆ ಶೈಲಿಯಲ್ಲಿ ತಿರುಗೇಟು ನೀಡಿದರು. ಶುಕ್ರವಾರ ಜಿಪಂ ಸಭಾಂಗಣದಲ್ಲಿ ವಿವಿಧ ಸ್ಥಾಯಿ ಸಮಿತಿ ಚುನಾವಣೆಯ ಅಧ್ಯಕ್ಷ, ಸದಸ್ಯರ ಆಯ್ಕೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು. ಗೋಕಾಕ ಉಪಚುನಾವಣೆಯ ವೇಳೆಯಲ್ಲಿ ಪ್ರಚಾರಕ್ಕೆ ಆಗಮಿಸಿದ್ದ ಸಿಎಂ ಯಡಿಯೂರಪ್ಪನವರ ಮೇಲೆ ಪ್ರಕರಣ ದಾಖಲಾಗಿತ್ತು. ಆರ್. ಆರ್. ಕ್ಷೇತ್ರದ …

Read More »

ಸೊಂಕಿತರ ಸಂಖ್ಯೆ ಇಳಿಕೆ,ಸಾವಿನ ಸಂಖ್ಯೆಯೂ ಕಡಿಮೆ,- DHO

ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳು ಕಡಿಮೆಯಾಗಿದೆ. ಇದಕ್ಕೆ ಇನ್ನು ವ್ಯಾಕ್ಸಿನ್ ಸಿಕ್ಕಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ವಿ.ಮುನ್ಯಾಳ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ‌ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು. ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ. ಸಾವಿನ ಪ್ರಮಾಣವೂ ಕಡಿಮೆಯಾಗಿದೆ. ಆದರೂ ಜನರು ಜಾಗೃತೆಯಿಂದ ಇರಬೇಕು. ಇದಕ್ಕೆ ಇನ್ನೂ ವ್ಯಾಕ್ಸಿ ಕಂಡು ಹಿಡಿದಿಲ್ಲ. ಸದ್ಯ ಬೆಳಗಾವಿಯಲ್ಲಿ ಸಾಲು ಸಾಲು ಹಬ್ಬ ಇರುವುದರಿಂದ ಜನರು ಸಾಮಾಜಿಕ ಅಂತರ, …

Read More »

ಮಳೆಗೆ ಓರ್ವ ವ್ಯೆಕ್ತಿ,6 ಜಾನುವಾರು,35 ಸಾವಿರ ಹೆಕ್ಟೇರ್ ಬೆಳೆ ನಾಶ- ಡಿಸಿ

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಈ ಬಾರಿ ಓರ್ವ ವ್ಯಕ್ತಿ,6 ಜಾನುವಾರುಗಳ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಹೇಳಿದರು. ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮಳೆಯಿಂದ ಜೀವ ಹಾನಿಯಾದ ಜನ ಜಾನುವಾರುಗಳಿಗೆ ಜಿಲ್ಲಾಡಳಿತದಿಂದ ಈಗಾಗಲೇ ಪರಿಹಾರ ನೀಡಲಾಗಿದೆ. ಅಕ್ಟೋಬರ್ ನಲ್ಲಿ ಸುಮಾರು 62 ಮನೆಗಳು ಮಳೆಯಿಂದ ಹಾನಿಯಾಗಿವೆ.70 ಮನೆಗಳು ಭಾಗಶ ಬಿದ್ದಿವೆ. ಇನ್ನೂ ಸರ್ವೆ ಕಾರ್ಯಾಚರಣೆ ನಡೆಸಲಾಗಿದೆ. ಅವುಗಳಿಗೂ ಸಹ ಪರಿಹಾರ ನೀಡಲಾಗುವುದು ಎಂದರು. ಮಳೆಯಿಂದ ಸುಮಾರು …

Read More »

ಬೆಳಗಾವಿಯಲ್ಲಿ ಆಗಲೇ ಬೇಕು,ಸಿಗಲೇ ಬೇಕು ಚಳವಳಿ

ಬೆಳಗಾವಿ- ಮಳೆಯ ಅರ್ಭಟದಿಂದ ಉತ್ತರ ಕರ್ನಾಟಕ ತತ್ತರಿಸಿ ಹೋಗಿದ್ದು ಪ್ರಧಾನಿ ನರೇಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡಿ 25 ಸಾವಿರ ಕೋಟಿ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ಹಿರಿಯ ಕನ್ನಡಪರ ಹೋರಾಟಗಾರ, ವಾಟಾಳ್ ನಾಗರಾಜ್ ಅವರು ಇಂದು ಶುಕ್ರವಾರ ಬೆಳಿಗ್ಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ,ಪ್ರಧಾನಿ ಬರಲೇ ಬೇಕು,ಪರಿಹಾರ ಸಿಗಲೇ ಬೇಕು ಎಂದು ಚಳವಳಿ ಮಾಡಿದ್ದಾರೆ. ಬೆಳಗಾವಿ ಸುವರ್ಣ ಸೌಧ ಮುಂದೆ ಪ್ರತಿಭಟಿಸಿ ಮಾತನಾಡಿದ ವಾಟಾಳ್ …

Read More »