Breaking News

LOCAL NEWS

ತಾಸುಗಟ್ಟಲೆ ಭಾಷಣ ಬಿಗಿದವರು ಮನೆಗೆ…ಭಾಷಣ ಕೇಳಿದವರು ಕೊರೆಯುವ ಚಳಿಗೆ…..!!!!

ಬೆಳಗಾವಿ: ನಗರದಲ್ಲಿ ಇಂದು ಬೆಳಗ್ಗೆಯಿಂದಲೇ ರೈತರನ್ನು ಹುರುದುಂಬಿಸಿ ತಾಸು ಗಂಟೆ ರೈತರ ಪರವಾಗಿ ಭಾಷಣ ಮಾಡಿ ಗಂಟಲು ಹರಿದುಕೊಂಡು ಕಬ್ಬಿನ ಬಾಕಿ ಬಿಲ್ ಕೊಡಲೇಬೇಕು ಎಂದು ಪುಕಾರು ಹಾಕಿ ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಣೆ ಮಾಡಿದ ರೈತ ನಾಯಕರು ಅಹೋರಾತ್ರಿ ಧರಣಿಯಲ್ಲಿ ಮುಗ್ದ ರೈತರನ್ನು ಕೊರೆಯುವ ಚಳಿಯಲ್ಲಿ ಬಿಟ್ಟು ಪಲಾಯನಗೈದಿದ್ದಾರೆ‌. ಪ್ರಸಕ್ತಸಾಲಿನ ಕಬ್ಬಿನ ದರವನ್ನು ನಿಗದಿ ಮಾಡಬೇಕು ಹಾಗೂ ಎಫ್ ಆರ್ ಪಿ ದರ ಕೊಡಿಸಬೇಕು. ಕಬ್ಬಿನ ಬಾಕಿ ಬಿಲ್ …

Read More »

ಡಿಸೆಂಬರ್ 10 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಳಗಾವಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 10ರಿಂದ 10 ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯುವ ಸಾಧ್ಯತೆ ಇದೆ. ಹತ್ತು ದಿನಗಳ ಕಲಾಪ ನಡೆಸಲು ತೀರ್ಮಾನಿಸಲಾಗಿದ್ದು ಮುಂದಿನ ಸೋಮವಾರ ನಡೆಯುವ ಸಚಿವ ಸಭೆಯಲ್ಲಿ ಈ ನಿರ್ಧಾರಕ್ಕೆ ಅಧಿಕೃತ ವಾಗಿ ನಿರ್ಣಯ ದೊರೆಯಲಿದೆ. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ …

Read More »

ಬೆಳಗಾವಿಗೆ ರಾಜಮಾತಾ ಒಡೆಯರ್ ಭೇಟಿ

ಬೆಳಗಾವಿ ಜನಕಲ್ಯಾಣಕ್ಕೆ ರಾಜಕಾರಣ ಅನಿವಾರ್ಯವಲ್ಲ. ರಾಜರಜಾರಣದಿಂದ ದೂರವುಳಿದು ಜನಕಲ್ಯಾಣ ಮಾಡಬಹುದು. ಚುನಾವಣೆಗೆ ಯಾವ ಕಾರಣಕ್ಕೂ ನಾನು ಸ್ಪರ್ಧಿಸುವುದಿಲ್ಲ. ಎಲ್ಲ ಪಕ್ಷದವರು ಹದಿನೈದು ವರ್ಷಗಳಿಂದ ಚುನಾವಣೆ ಸಮೀಪಿಸಿದಾಗ ಸಂಪರ್ಕಿಸುತ್ತಾರೆ. ಚುನಾವಣೆ ಸ್ಪರ್ದಿಸಲು ಇಚ್ಚೆ ಇದೆಯಾ ಎಂದು ಕೇಳುತ್ತಾರೆ. ಆದರೆ ನಾನು ಮಾತ್ರ ಚುನಾವಣೆಗೆ ಸ್ಪರ್ದಿಸುವುದಿಲ್ಲ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ ಹೇಳಿದರು. ಬುಧವಾರ ಕೆಎಲ್ಇ ಪಿಸಿಯೋಥೆರಪಿ ಕೇಂದ್ರವನ್ನು ಉದ್ಘಾಟಿಸಿ ಪತ್ರಕರ್ತರೊಂದಿಗೆ ಮಾತ‌ನಾಡಿದರು. ಟಿಪ್ಪು ಸುಲ್ತಾನನಿಂದ ನಮ್ಮ ಕುಟುಂಬಕ್ಕೆ ತೊಂದರೆಯಾಗಿದೆ. ನಮ್ಮ ರಾಜ …

Read More »

ಟಿಪ್ಪು ಜಯಂತಿ ಕುರಿತು ಗೊಂದಲ ಬೇಡ- ಜಯಮಾಲಾ

ಬೆಳಗಾವಿ ಟಿಪ್ಪು ಜಯಂತಿ ಆಚರಣೆಯನ್ನು ನಮ್ಮ ರಾಜ್ಯದಲ್ಲಿ ಆಚರಣೆ ಮಾಡದೆ ಬೇರೆ ಎಲ್ಲಿ ಆಚರಣೆ ಮಾಡಬೇಕು ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಜಯಮಾಲ ಪ್ರಶ್ನಿಸಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದರು. ಬ್ರಿಟಿಷ್ ರ ವಿರುದ್ದ ಹೋರಾಟ ಮಾಡಿದ ಮಹಾನ್ ವ್ಯಕ್ತಿಯ ಜಯಂತಿಯನ್ನು ಆಚರಣೆ ಮಾಡಲು ಕೆಲವರು ವಿರೋಧ ಮಾಡುತ್ತಿದ್ದಾರೆ‌. ಚರಿತ್ರೆಯಲ್ಲಿ ರಾಜ್ಯ ಬಾರ ಮಾಡುವಾಗವ ಕೆಲವರ ಹತ್ಯೆಮಾಡಿ ಮಾಡಿದ್ದಾರೆ. ಇದೊಂದು ಚರ್ಚೆಯಾಗುವುದುದಾದರೆ …

Read More »

ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಮಾಸ್ಟರ್ ಪ್ಲ್ಯಾನ್, ಆರಂಭ

ಬೆಳಗಾವಿ- ನಗರದ ಗಣಪತಿ ಗಲ್ಲಿಗೆ ಹೊಂದಿಕೊಂಡಿರುವ ಅತೀ ಇಕ್ಕಟ್ಟಾದ ಪಾಂಗುಳ್ ಗಲ್ಲಿಯ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ರಸ್ರೆ ಅಗಲೀಕರಣದ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿದ್ದರು ಇಂದು ಮಹಾನಗರ ಪಾಲಿಕೆ ಅಧಿಕಾರಿಗಳು ರಸ್ತೆ ಅಗಲೀಕರಣದ ಕಾಮಗಾರಿ ಆರಂಭ ಮಾಡುವದಾಗಿ ಅಲ್ಲಿಯ ನಿವಾಸಿಗಳಿಗೆ ಭಾನುವಾರ ತಿಳಿಸಿದ ಹಿನ್ನಲೆಯಲ್ಲಿ ನಿನ್ನೆ ರಾತ್ರಿಯಿಂದಲೇ ಕಟ್ಟಡ ತೆರವು ಕಾಮಗಾರಿ ನಡೆದಿದೆ ಪಾಲಿಕೆ ಅಧಿಕಾರಿಗಳ ಸೂಚನೆ ಮೇರೆಗೆ ಪಾಂಗುಳ್ …

Read More »

ಬೆಳಗಾವಿಯ ಕಣ..ಕಣದಲ್ಲಿಯೂ ಕುಣಿದಾಡಿದ…ಕನ್ನಡ….!!!!

ಬೆಳಗಾವಿ- ಗಡಿನಾಡ ಗುಡಿಯ ಘಂಟೆಯಿಂದ ಇಂದು ಈಡೀ ದಿನ ಕನ್ನಡದ ನೀನಾದ ಕೇಳಿಬಂದಿತು ಎಲ್ಲಿ ನೋಡಿದಲ್ಲಿ ಕನ್ನಡದ ಬಾವುಟಗಳು ಹಾರಾಡಿದವು ಲಕ್ಷಾಂತರ ಜನ ಕನ್ನಡ ತಾಯಿಯ ತೇರು ಎಳೆದು ಕುಣಿದು ಕುಪ್ಪಳಿಸಿದರು ಕನ್ನಡ ಅಭಿಮಾನಿಗಳ ಸಾಗರವೇ ಇಂದು ಬೆಳಗಾವಿಗೆ ಹರಿದು ಬಂದು ಬೆಳಗಾವಿಯ ಕಣ ಕಣದಲ್ಲಿಯೂ ಕನ್ನಡ ಕುಣಿದಾಡಿತು ಗಡಿನಾಡು ಕುಂದಾನಗರಿಯಲ್ಲಿ ಅದ್ದೂರಿ ರಾಜ್ಯೋತ್ಸವ ನಡೆದಿದ್ದು, ಹೆಲಿಕಾಪ್ಟರ್ ಮೂಲಕ ರಾಣಿ ಚೆನ್ನಮ್ಮನಿಗೆ ಪುಷ್ಪವೃಷ್ಠಿ ಮಾಡುವ ಮೂಲಕ ರಾಜ್ಯೋತ್ಸವ ಹಿಂದೆಂದಿಗಿಂತಲೂ ಅದ್ದೂರಿಯಾಗಿ …

Read More »

ಪಾಲಿಕೆಯಲ್ಲಿ ರಾಜ್ಯೋತ್ಸವ ಆಚರಿಸಿ ,ಕರಾಳ ದಿನಾಚರಣೆಯಲ್ಲೂ ಪಾಲ್ಗೊಂಡ ಉಪ ಮೇಯರ್

ಬೆಳಗಾವಿ- ಬೆಳಗಾವಿ ಮಹಾನಗ ಪಾಲಿಕೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಾಲಿಕೆಯ ಕೌನ್ಸಿಲ್ ಹಾಲ್ ನಲ್ಲಿ ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಕನ್ನಡದ ಸಂಪ್ರದಾಯ ಆರಂಭಿಸಲಾಯಿತು ಪಾಲಿಕೆಯಲ್ಲಿ ಭುವನೇಶ್ವರಿ ದೇವಿಗೆ ಪೂಜೆ ನೆರವೇರಿಸಿ ರಾಜ್ಯೋತ್ಸವ ಆಚರಿಸಿದ ಉಪ ಮೇಯರ್ ಮಧುಶ್ರೀ ಪೂಜಾರಿ ನಂತರ ಎಂ ಈ ಎಸ್ ಕರಾಳ ದಿನಾಚರಣೆಯಲ್ಲೂ ಭಾಗವಹಿಸಿ ಪುಂಡಾಟಿಕೆ ಪ್ರದರ್ಶಿಸಿದ್ದಾರೆ ಪಾಲಿಕೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೇಯರ್ ಬಸವರಾಜ ಚಿಕ್ಕಲದಿನ್ನಿ,ಪಾಲಿಕೆ ಆಯುಕ್ತ ಶಶಿಧರ ಕುರೇರ, ಸೇರಿದಂತೆ …

Read More »

ಚನ್ನಮ್ಮ ವೃತ್ತದಲ್ಲಿ ಚಮತ್ಕಾರ್‌…ಡಿಸಿ ಪಾಲಿಕೆ ಆಯುಕ್ತರಿಗೆ ಕನ್ನಡದ ಸತ್ಕಾರ್….!!

ಬೆಳಗಾವಿ- ಬೆಳಗಾವಿಯ ಚನ್ನಮ್ಮ ವೃತ್ತವನ್ನು ನವೀಕರಿಸಿ ರಾಜ್ತೋತ್ಸವದ ಮೆರವಣಿಗೆಯ ಮೇಲೆ ಹೆಲಿಕಾಪ್ಟರ್ ನಿಂದ ಪುಷ್ಪವೃಷ್ಠಿ ಮಾಡಲು ನಿರ್ಧರಿಸಿ ಕನ್ನಡಿಗರ ಉತ್ಸಾಹ ಇಮ್ಮಡಿ ಗೊಳಿಸಿದ ಜಿಲ್ಲಾಧಿಕಾರಿ ಮೊಮ್ಮನಹಳ್ಳಿ ಮತ್ತು ಪಾಲಿಕೆ ಆಯುಕ್ತರಿಗೆ ಕನ್ನಡ ಸಂಘಟನೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು ಬೆಳಗಾವಿ ಜಿಲ್ಲಾಧಿಕಾರಿ ಗಳ ಚೇಂಬರ್ ನಲ್ಲಿ ಸೇರಿದ ವಿವಿಧ ಕನ್ನಡಪರ ಸಂಘಟನೆಗಳ ನಾಯಕರು ಜಿಲ್ಲಾದಿಕಾರಿ ಬೊಮನಹಳ್ಳಿ ಮತ್ತು ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರಿಗೆ ಕನ್ನಡದ ಪೇಟಾ ಹಾಕಿ ಮುತ್ತಿನ ಮಾಲೆ …

Read More »

ಎಂ ಈ ಎಸ್ ಕರಾಳ ದಿನಾಚರಣೆಗೆ ಅನುಮತಿ ನೀಡಿದ ಪೋಲೀಸ್ ಇಲಾಖೆ

ಬೆಳಗಾವಿ- ಕನ್ನಡ ಸಂಘಟನೆಗಳ ವಿರೋಧದ ನಡುವೆಯೂ ನಗರ ಪೋಲೀಸ್ ಇಲಾಖೆ ಮಹಾರಾಷ್ಟ್ರ ಏಕೀಕರಣ ಸಮೀತಿಗೆ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ನಡೆಸಲು ಷರತ್ತು ಭದ್ಧ ಅನುಮತಿ ನೀಡಿದೆ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರಿಂದ 5 ಲಕ್ಷ ರೂ ಗಳ ಮುಚ್ಚಳಿಕೆ ಬರೆಯಿಸಿಕೊಂಡು ಪ್ರಚೋದನಕಾರಿ ಘೋಷಣೆ ಕೂಗದಂತೆ ಷರತ್ತು ವಿಧಿಸಿ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗಿದೆ ಡಿಸಿಪಿ ಸೀಮಾ ಲಾಟ್ಕರ್ ಮಾರ್ಕೆಟ್ ಠಾಣೆಯ ವರದಿಯನ್ನು ಆಧರಿಸಿ ದೀಪಕ ದಳವಿ ಸೇರಿದಂತೆ ಹಲವಾರು …

Read More »

ಕಂಬ ಹತ್ತಿ ಪ್ರತಿಭಟಿಸಿದ ನಗರ ಸೇವಕಿ

ಬೆಳಗಾವಿ – ಅಧಿಕಾರಿಗಳು ಮಾತು ಕೇಳುತ್ತಿಲ್ಲ ಬೀದಿ ದೀಪಗಳು ಉರಿಯುತ್ತಿಲ್ಲ ಹೈ ಮಾಸ್ಕಗಳು ಬಂದ್ ಆಗಿವೆ ದೂರು ಕೊಟ್ಟರೂ ಅಧಿಕಾರಿಗಳು ಸ್ಪಂದನೆ ಮಾಡುತ್ತಿಲ್ಲ ಎಂದು ಆರೋಪಿಸಿ ನಗರ ಸೇವಕಿ ಸರಳಾ ಹೇರೇಕರ ತಮ್ಮ ವಾರ್ಡಿನ ವಿದ್ಯುತ್‌ ಕಂಬ ಏರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ ಸರಳಾ ಹೇರೇಕರ ತಮ್ಮ ವಾರ್ಡಿನ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಲು ಈ ರೀತಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ ಕಂಬ ಏರಿದ ಅವರನ್ನು ಕೆಳಗಿಳಿಸಲು ಪಾಲಿಕೆ ಅಧಿಕಾರಿಗಳು …

Read More »

ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಥಮಿಕ ಶಾಲೆ

ಬೆಳಗಾವಿ : ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆಯಿಂದ 6 ನೇ ತರಗತಿಗಳಿಗೆ ಸೇರಬಯಸುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ  1 ರಿಂದ 5 ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆಯನ್ನು ಆರಂಭಿಸಲಾಗುತ್ತಿದೆ ಎಂದು ಅಮೆರಿಕಾದ ಸಗೀನಾವ್ ವ್ಯಾಲಿ ವಿಶ್ವ ವಿದ್ಯಾಲಯದ ಡಾ. ಡೇವಿಡ್ ಕ್ಲೈನ್ ತಿಳಿಸಿದರು. ಅವರು ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆಗಾಗಿಯೇ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಸೈನಿಕ ಶಾಲೆ …

Read More »

ಬೆಳಗಾವಿ ರಾಜ್ಯೋತ್ಸವದಲ್ಲಿ ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ..!!

ಬೆಳಗಾವಿ, ನವಂಬರ 1 ರಂದು ವಿಜೃಂಭಣೆಯಿಂದ ರಾಜ್ಯೋತ್ಸವ ಆಚರಣೆ ಮಾಡುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಬೊಮ್ಮನಳ್ಳಿ ಹಾಗೂ ಪಾಲಿಕೆ ಆಯುಕ್ತ ಶಶಿಧರ ಕುರೇರ ಅವರು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನ ಭೇಟಿ ಮಾಡಿ ಚರ್ಚೆ ಮಾಡಿದರು. ಬೆಳಗಾವಿಯ ಲಕ್ಷ್ಮೀ ಟೇಕ್ ಡಿ ಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿ ನೀಡಿದ ಅಧಿಕಾರಿಗಳು ಬೆಳಗಾವಿಯಲ್ಲಿ ವಿಜೃಂಭಣೆಯಿಂದ ನಡೆಯುವ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕನ್ನಡಾಭಿಮಾನಿಗಳಿಗೆ ಕಳೆದ 4 ವರ್ಷಗಳಿಂದ …

Read More »

ಬೆಳಗಾವಿಯಲ್ಲಿ ಬೌವ್… ಬೌವ್…ನೋಡಿದವರೇಲ್ಲ ಕೌವ್ ಬೌವ್….!!!

ಬೆಳಗಾವಿ: ಬೌವ್..‌ಬೌವ್.. ಅದಾಕ್ಷಣ‌ ಹೇದರಬೇಡಿ. ಏಕೆಂದರೆ ಇದು ಕಚ್ಚುವ ಬೌವ್…‌ಬೌವ್ ಅಲ್ಲವೇ ಅಲ್ಲ. ಇದು ಶೋಕಿಗಾಗಿ ಸಾಕಿದ ಸಾಕಿದ ಬೌವ್… ಬೌವ್ ಗಳು. ಅದು ಹೇಗೆ ಎಲ್ಲಿ ಅಂತೀರಾ. ಬೆಳಗಾವಿ ಸುದ್ದಿ ನೋಡಿ ಮಜಾಮಾಡಿ. ದೇಶದಲ್ಲಿರುವ ಎಲ್ಲಾ ಜಾತಿಯ ನಾಯಿಗಳು ಇಂದು ಬೆಳಗಾವಿಗೆ ಬಂದಿದೆ.‌ಏಕೆಂದರೆ ಬೆಳಗಾವಿಯಲ್ಲಿ ಇಂದು ರಾಷ್ಟ್ರಮಟ್ಟದ ಡಾಗ್ ಶೋ‌ ನಡೆಯುತ್ತಿದೆ. ಬೆಳಗಾವಿಯ ಶಗುನ್ ಗಾರ್ಡನಲ್ಲಿ ಎಲ್ಲ ಜಾತಿಯ ನಾಯಿಗಳು ಸದ್ದು ಮಾಡುತ್ತಿವೆ. ಅದನ್ನು ನೋಡಲು ಶ್ವಾನ ಪ್ರಿಯರು …

Read More »

ಐದು ಜನ ಹೋರಾಟಗಾರರು ಐವರು ಹಿರಿಯ ಪತ್ರಕರ್ತರಿಗೆ ಜಿಲ್ಲಾಡಳಿತದಿಂದ ಗೌರವ

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹೊಸ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದಾರೆ ಈ ವರ್ಷ ರಾಜ್ಯೋತ್ಸವದ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಐವರು ಕನ್ನಡ ಹೋರಾಟಗಾರರನ್ನು ಮತ್ತು ಐವರು ಹಿರಿಯ ಪತ್ರಕರ್ತರಿಗೆ ಕನ್ನಡದ ಸಮ್ಮಾನ ನೀಡಲಿದೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರರಾದ ರಾಮಚಂದ್ರ ಢವಳಿ,ಜೋರಾಪೂರೆ,ಶಿವಪ್ಪ ಕೋರವಾರ,ಕಸ್ತೂರಿ ಭಾವಿ ,ಮೈನೋದ್ದೀನ್ ಮಕಾನದಾರ ಅವರನ್ನು ಜಿಲ್ಲಾಡಳಿತದಿಂದ ರಾಜ್ಯೋತ್ಸವದ ದಿನ ಸತ್ಕರಿಸಲಾಗುತ್ತಿದೆ ಕಳೆದ 71 ವರ್ಷದಿಂದ ಬೆಳಗಾವಿಯಲ್ಲಿ ಕನ್ನಡದ ಸೇವೆ ಮಾಡುತ್ತಿರುವ …

Read More »

ಹೊಡೀ ಒಂಬತ್ತ್..,..ನವೆಂಬರ್ ಒಂದಕ್ಕ ಬೆಳಗಾವಿ ಬಸ್ ಹತ್ತ್…..!!!!

ಬೆಳಗಾವ್ಯಾಗ ಚನ್ನಮನ ಮೂರ್ತಿ ಲಕ…ಲಕ…ಹೊಳೀತೈತಿ ನೋಡ್ಲ ಮಗಾ….!!! ಬೆಳಗಾವಿ- ನೋಡಾಕ್ ಸುಂದರಿ ಜನ ಕರೀತಾರೆ ಇದಕ್ಕೆ ಕುಂದಾನಗರಿ ಜಗಳಕ್ಕ ಬಂದ್ರ ಇಲ್ಲಿ ಜನ ಆಗ್ತಾರೆ ಭಜರಂಗಿ ನಾಡ ವಿರೋಧಿಗಳಿಗೆ ಬಿಡ್ತಾರ ಫಿರಂಗಿ ಮೊದ್ಲ ಚನ್ನಮ್ಮ ಸರ್ಕಲ್ ನೋಡಿದ್ರ ದ್ವಜ ಚಿಂದಿ ಆಗಿರತಿತ್ತ ,ಚನಮ್ಮನ ಮೂರ್ತಿಮ್ಯಾಲ ಧೂಳು ಕುಂಡುರ್ತಿತ್ತ ಅದನ್ನ ತೊಳ್ಯಾವ್ರ ಯಾರೂ ಗತಿ ಇರ್ತಿರಲಿಲ್ಲ ಈಗ ಈ ಸರ್ಕಲ್ ನಸೀಬ್ ಚೇಂಜ್ ಆಗೈತಿ ನೋಡ್ಲ ಮಗಾ ಬೆಳಗಾವಿಗೆ ಹೊಸ ಡಿಸಿ …

Read More »