Breaking News

LOCAL NEWS

ಗುಡುಗಿದ ಮೀಸೆ ಮಾವ ನಡುಗಿದ ಕಾಂಗ್ರೆಸ್..

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಅವರ ರಾಜಕೀಯ ನಿವೃತ್ತಿಯ ಘೋಷಣೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿರುವ ವಿಷಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದ ವಲಯದಲ್ಲಿ ತಳಮಳವನ್ನುಂಟು ಮಾಡಿದೆ ಚಿಕ್ಕೋಡಿ ಸಂಸದ ಪ್ರಕಾಶ ಹುಕ್ಕೇರಿ ಎಸ್ ಎಂ ಕೃಷ್ಣ ಅವರಿಗೆ ಬೆಂಬಲ ಸೂಚಿಸಿದ್ದು ಪ್ರಸಂಗ ಬಂದರೆ ಅವರೂ ರಾಜಿನಾಮೆ ನೀಡಲು ಸಿದ್ಧವಿರುವದಾಗಿ ಗುಡಗಿದ ಪರಿಣಾಮ ಕಾಂಗ್ರೆಸ್ ಪಕ್ಷದ ನಾಯಕರನ್ನೇ ನಡುಗಿಸಿದೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಕೆಲವು …

Read More »

ಎಸ್. ಎಂ. ಕೃಷ್ಣ ,ಕಾಂಗ್ರೆಸ ಬಿಡುವ ನಿರ್ಧಾರ ಕೈ ಬಿಡಲಿ-ರಾಜು ಸೇಠ-

,ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಳೆದ ಐದು ದಶಕಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಮಾಡಿದ್ದು ,ಕಾಂಗ್ರೆಸ್ ಪಕ್ಷವನ್ನು ಬಿಟ್ಟು ರಾಜಕೀಯದಿಂದ ನಿವೃತ್ತಿಯಾಗುವ ಅವರ ನಿರ್ಧಾರದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ನೋವಾಗಿದ್ದು ಎಸ್ ಎಂ ಕೃಷ್ಣ ಅವರು ತಮ್ಮ ನಿರ್ಧಾರ ವನ್ನು ಕೈಬಿಟ್ಟು ಪಕ್ಷಕ್ಕೆ ಮರಳಿ ಬರಲಿ ಎಂದು ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ರಾಜು ಸೇಠ ಮನವಿ ಮಾಡಿಕೊಂಡಿದ್ದಾರೆ ಎಸ್ ಎಂ  ಕೃಷ್ಣ ಅವರು ರಾಜ್ಯದ …

Read More »

ಸೇವೆ ಮೂಲಕ ಸಮಾದ ಋಣ ತೀರಿಸಿ-ಓಂ ಪ್ರಕಾಶ

ಬೆಳಗಾವಿ 28: ಸಮಾಜದಿಂದ ಬಂದ ನಾವು ಸಮಾಜದ ಋಣವನ್ನು ತಿರಿಸಬೇಕು. ಪೊಲೀಸ್ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿಗಳೆಂದರೆ ಸಾರ್ವಜನಿಕರು ಹೆದರಬಾರದು. ಪೊಲೀಸ್ ಸಿಬ್ಬಂದಿಗಳು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಡಿಜಿ ಮತ್ತು ಐಜಿಪಿ ಓ ಪ್ರಕಾಶ ಸಿಬ್ಬಂದಿಗಳಿಗೆ ಕರೆ ನೀಡಿದರು. ಅವರು ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಉತ್ತರ ವಲಯದ ಎಲ್ಲಾ ಜಿಲ್ಲೆಗಳು ಮತ್ತು ಪೊಲೀಸ್ ಕಮೀಷನರೇಟ್, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯನ್ನು …

Read More »

ಮೂರು ಲಕ್ಷಕ್ಕಿಂತ ಹೆಚ್ಚಿನ ಹಣ ಸಿಕ್ಕಿರುವದು ಸಾಭೀತಾದರೆ,ಸಚಿವ,ಶಾಸಕ ಸ್ಥಾನಕ್ಕೂ ರಾಜಿನಾಮೆ-ರಮೇಶ ಜಾರಕಿಹೊಳಿ

ಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯಿಂದ ಐಟಿ ದಾಳಿ ಹಿನ್ನೆಲೆಯಲ್ಲಿ ಸಚಿವ ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪ ವಿಚಾರ.ಪ್ರಸ್ಥಾಪಿಸಿರುವದಕ್ಕೆ ಸಚಿವ ರಮೇಶ ದಿಗ್ಭ್ರಮೆ ವ್ತೆಕ್ರಪಡಿಸಿದ್ದಾರೆ ಜವಾಬ್ದಾರಿ ಸ್ಥಾನದಲ್ಲಿ ಪ್ರಧಾನಿ ಮಾತನಾಡಿದ್ದು ಬೇಸರ ತಂದಿದೆ. ನನ್ನ ಮನೆ ಕಚೇರಿಯಲ್ಲಿ ೩ ಲಕ್ಷ ಹಣ ಸಿಕ್ಕಿದೆ. ಅದಕ್ಕಿಂತ ಹೆಚ್ಚಿನ ಹಣ ಸಿಕ್ಕಿದ್ದು ಸಾಬೀತಾಗಿದ್ರೆ. ರಾಜಕೀಯ ನಿವೃತ್ತಿ ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ.ನೀಡುತ್ತೇನೆ ಎಂದು ಹೇಳಿದ್ದಾರೆ ಯುಪಿ ಚುನಾವಣೆ ಸೋಲಿನ ಭಯದಿಂದ ಪ್ರಧಾನಿ ನರೇಂದ್ರ ಮೋದಿ …

Read More »

ಎಸಿಬಿ ಬಲೆಗೆ ಬಿದ್ದ ,ಗಂಡ ಹೆಂಡತಿ,ಮಚ್ಛೆ ಗ್ರಾಮ ಪಂಚಾಯತಿಯಲ್ಲಿ ಫಜೀತಿ

ಬೆಳಗಾವಿ ತಾಲೂಕಿನ ಮಚ್ಚೆ ಗ್ರಾಪಂ ಅಧ್ಯಕ್ಷೆ‌ ಹಾಗೂ‌ ಪತಿ  ಇಬ್ಬರೂ ಎಸಿಬಿ ಬಲೆಗೆ.ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ ಕಂಪ್ಯೂಟರ್ ಪಹಣಿ ಪತ್ರ ನೀಡಲು ೨.೫ ಸಾವಿರ ಹಣ ಬೇಡಿಕೆ.ಇಟ್ಟಿದ್ದ ಅವರು ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಎಸಿಬಿ ಬಲೆಗೆ.ಬಿದ್ದಿದ್ದಾರೆ ಗ್ರಾಪಂ ಅಧ್ಯಕ್ಷೆ ಪದ್ಮಶ್ರೀ ಹುಡೆದ್, ಪತಿ ಮಹಾವೀರ ಹುಡೆದ್ ಬಲೆಗೆ.ಬಿದ್ದಿದ್ದು ಮಚ್ಚೆ ಗ್ರಾಪಂ ನಲ್ಲಿಯೇ ಹಣಪ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ ಸ್ಥಳೀಯ ನಿವಾಸಿ ಕಸ್ತೂರಿ‌ ಕೋಲ್ಕಾರ್ …

Read More »

ಸಮಸ್ಯೆಗಳ ದರ್ಶನ ,ಸಚಿವ ರಮೇಶ ಜಾರಕಿಹೊಳಿ ಅವರಿಂದ ಪರಿಹಾರದ ಚಿಂತನ

ಬೆಳಗಾವಿ ಬೆಳಗಾವಿಯ ಪ್ರವಾಸಿಮಂದಿರ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಜನತಾದರ್ಶನ. ನಡೆಯಿತು ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ ಜಾರಕಿಹೊಳಿ ಅವರು ಸಾರ್ವಜನಿಕರ ಅಹವಾಲು ಸ್ವೀಕಾರ. ಮಾಡುದರು ಸ್ಮಶಾನ ಭೂಮಿ, ಬಸ್ ಸೌಲಭ್ಯ, ಕುಡಿಯುವ ನೀರು, ಕೊಳವೆ ಬಾವಿ, ರೇಷ್ಮೆ ಗೂಡು ಪ್ರೋತ್ಸಾಹ ಧನ ಹೆಚ್ಚಳ, ಅನುಕಂಪ ಆಧಾರಿತ ನೌಕರಿ, ನಿವೃತ್ತಿ ವೇತನ ಮಂಜೂರಾತಿ, ಭೂವ್ಯಾಜ್ಯಗಳು, ಟಿಸಿ ವಿಳಂಬ ಸೇರಿದಂತೆ ನೂರಾರು ಸಮಸ್ಯೆಗಳ ಬಗ್ಗೆ ಅಹವಾಲು ಆಲಿಸಿದ ಸಚಿವ ರಮೇಶ ಜಾರಕಿಹೊಳಿ. …

Read More »

ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಲ್ವೇ..ಹಾಗಾದ್ರೆ ಜನತಾ ದರ್ಶನಕ್ಕೆ ಬನ್ನಿ…!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡದೇ ತಮ್ಮನ್ನು ಸತಾಯಿಸುತ್ತಿದ್ದರೆ ನೀವು ಕೊರಗ ಬೇಕಾಗಿಲ್ಲ ಇಂದು ಶನಿವಾರ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಸರ್ಕ್ಯಿಟ್ ಹೌಸ್ ನಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಅದಕ್ಕೆ ಪರಿಹಾರ ಕಂಡು ಹಿಡಿಯಲಿದ್ದಾರೆ ಇಂದು ಶನಿವಾರ ದಿನಾಂಕ ೨೮ ರಂದು ಬೆಳಿಗ್ಗೆ ಹತ್ತು ಘಂಟೆಗೆ ಸರ್ಕ್ಯಿಟ್ ಹೌಸ್ …

Read More »

ಬ್ರಿಗೇಡ್ ಎಫೆಕ್ಟ ,ಸಂಗೊಳ್ಳಿ ರಾಯಣ್ಣನ ಉತ್ಸವಕ್ಕೆ ಸಿಎಂ ದೌಡು

ಬ್ರಿಗೇಡ್ ಎಫೆಕ್ಟ್; ಸಂಗೊಳ್ಳಿ ಉತ್ಸವಕ್ಕೆ ಸಿಎಂ ದೌಡು ‌‌ ಬೆಳಗಾವಿ, ಜ. ೨೭: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಉತ್ಸವ ಕೇವಲ ಹೋಬಳಿ ಮಟ್ಟಕ್ಕೆ ಸೀಮಿತವಾಗಿತ್ತು. ಆದರೆ ಬಿಜೆಪಿ ನಾಯಕ ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡುತ್ತಿದ್ದಂತೆಯೇ ರಾಯಣ್ಣನ ಉತ್ಸವಕ್ಕೆ ಈ ವರ್ಷ ಎಲ್ಲಿಲ್ಲದ ಮಹತ್ವ ಬಂದಿದ್ದು, ಈ ಉತ್ಸವಕ್ಕೆ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿ ಉತ್ಸವಕ್ಕೆ ರಾಜ್ಯಮಟ್ಟದ ಮಾನ್ಯತೆ ನೀಡಿದ್ದಾರೆ. ಪ್ರತಿವರ್ಷ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ರಾಯಣ್ಣನ ಉತ್ಸವ …

Read More »

ಟ್ರಾಫಿಕ್ ಇನೆಸ್ಪೆಕ್ಟರ್ ಆದ ಆಹಾರ ಸಚಿವ

ಬೆಳಗಾವಿಯಲ್ಲಿ ಟ್ರಾಫಿಕ್ ನಿಯಂತ್ರಿಸಿದ ಸಚಿವ ಯು.ಟಿ. ಖಾದರ್. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ ಬಳಿ ಟ್ರಾಫಿಕ್ ಜಾಮ್ ಆದ ಸಂಧರ್ಭದಲ್ಲಿ ಕಾರಿನಿಂದ ಇಳಿದು ಟ್ರಾಫಿಕ್ ನಿಯಂತ್ರಿಸುವ ಪ್ರಯತ್ನ ಮಾಡಿದರು ಇದು ನಿಯಂತ್ರಣಕ್ಕೆ ಬಾರದೇ ಇದ್ದಾಗ ಸಚಿವರು ಬೈಕ್ ಏರಿ ಸಾಂಬ್ರಾ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದರು ವಿಮಾನ ನಿಲ್ದಾಣಕ್ಕೆ ಸಿಎಂ ಆಗಮಿಸಿದ ಹಿನ್ನೆಲೆ. ಸಾಂಬ್ರಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್. ಆಗಿತ್ತು ಇದೇ ವೇಳೆಯಲ್ಲಿ ಧಾರವಾಡದಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತ ಸಚಿವ …

Read More »

ರಾಯಣ್ಣನ ಹೆಸರಿನಲ್ಲಿ ರಾಜಕಾರಣ ಸಲ್ಲದು-ಸಿಎಂ

ಬೆಳಗಾವಿ- ರಾಜಕೀಯ ಲಾಭಕ್ಕಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸಂಘಟನೆ ಮಾಡಿ ದೇಶ ಭಕ್ತ ರಾಯಣ್ಣನ ಹೆಸರಿನಲ್ಲಿ ರಾಜಕಾರಣ ಮಾಡುವದು ಸರಿಯಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಕ್ಷೇಪ ವ್ಯೆಕ್ತಪಡಿಸಿದ್ದಾರೆ ಬೆಳಗಾವಿಯ ಸಾಂಬ್ರಾ ವಿಮಾಣ ನಿಲ್ದಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿ ನಾಯಕ ಈಶ್ವರಪ್ಪನವರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದಾರೆ ಆದರೆ ರಾಯಣ್ಣ ಕಿತ್ತೂರ ಸಂಸ್ಥಾನದಲ್ಲಿ ವೀರ ರಾಣಿ ಕಿತ್ತೂರ ಚನ್ನಮಾಜಿಯ ಬಲಗೈ ಬಂಟನಾಗಿ …

Read More »

ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ ಖಾಲಿ,ನಾಳೆ ನೆಲಸಮ

  ಬೆಳಗಾವಿ – ಅಂತೂ ಇಂತೂ ಬೆಳಗಾವಿ ಕೇಂದ್ರ ಬಸ್ ನಿಲ್ಧಾಣಕ್ಕೆ ಅಭಿವೃದ್ಧಿಯ ಭಾಗ್ಯ ಒದಗಿ ಬಂದಿದೆ ಕೊಲ್ಲಾಪೂರ ಬಸ್ ಸ್ಟ್ಯಾಂಡ ಎಂಬ ಹೆಸರಿನಲ್ಲಿ ಕರೆಯಲ್ಪಡುತ್ತಿದ್ದ ಈ ನಿಲ್ಧಾಣದಲ್ಲಿರುವ ಎಲ್ಲ ಅಂಗಡಿಗಳನ್ನು ಜೊತೆಗೆ ಹೊಟೇಲ್ ಕ್ಯಾಂಟೀನ್ ಸಹ ಖಾಲಿ ಮಾಡಿಸಲಾಗಿದ್ದ ಶನಿವಾರ ಬೆಳಿಗ್ಗೆ ನಿಲ್ಧಾಣದ ಹಳೇಯ ಕಟ್ಟಡವನ್ನು ನೆಲಸಮ ಮಾಡಲಾಗುತ್ತಿದೆ ಈಗ ಸದ್ಯಕ್ಕೆ ಹಳೆಯ ಬಸ್ ನಿಲ್ಧಾಣ ಖಾಲಿಯಾಗಿದ್ದು ಶನಿವಾರ ಕಟ್ಟಡ ನೆಲಸಮ ಮಾಡುವ ಮೊದಲು ನಿಲ್ದಾಣದ ಕಾರ್ಯ ಚಟುವಟಿಕೆಗಳು …

Read More »

ಸಾವಿನ ದವಡೆಯಿಂದ ಪಾರಾಗಿ ಬಂದ ಬೆಳಗಾವಿಯ ಯೋಧರು

ಬೆಳಗಾವಿ- ಜಮ್ಮು ಕಾಶ್ಮೀರದಲ್ಲಿ ನಡೆದ ಹಿಮಪಾತದಲ್ಲಿ ಬೆಳಗಾವಿಯ ಇಬ್ಬರು ಸೈನಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಗಣರಾಜ್ಯೋತ್ಸವದ ಮುನ್ನಾ ದಿನವಾದ ಸೇನಾ ಕ್ಯಾಂಪ್ ಮೇಲೆ ಸಂಭವಿಸಿದ ಭಾರಿ ಹಿಮಪಾತದಲ್ಲಿ ಅವರು ಪಾರಾಗಿದ್ದಾರೆ ಜಮ್ಮು ಕಾಶ್ಮೀರದ ಗಂದರ್ಬಾಲ್ ಜಿಲ್ಲೆಯ ಸೋನಾಮಾರ್ಗ ಬಳಿಯ ಸೇನಾ ಕ್ಯಾಂಪ ಮೇಲೆ ಹಿಮಪಾತವಾಗಿತ್ತು.. ಬೆಳಗಾವಿಯ ಸೇನಾಧಿಕಾರಿ ಮೇಜರ್ ಶ್ರೀಹರಿ ಕುಗಜಿ ಮತ್ತು ಸೈನಿಕ ಬಂಡಿವಡ್ಡರ ಪವಾಡಸ ದೃಶ್ಯ ಬದುಕುಳಿದಿದ್ದಾರೆ. ಘಟನೆಯಲ್ಲಿ ಅಸ್ವಸ್ಥಗೊಂಎ ೧೧೫ನೇ ಮಹಾರ್ ಬೆಟಾಲಿಯನ್ ಶ್ರೀಹರಿ ಕುಗಜಿ ಅವರನ್ನ …

Read More »

ಹಿಂಡಲಗಾ ಕಾರಾಗೃಹದಿಂದ ೧೭ ಕೈದಿಗಳ ಬಿಡುಗಡೆ

ಬೆಳಗಾವಿ: ಸನ್ನಡತೆ ಆಧಾರದ ಮೇರೆಗೆ ಜೈಲಿನಿಂದ ಬಿಡುಗಡೆಹೊಂದಿರುವ ಕೈದಿಗಳು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಸಂಸದ ಸುರೇಶ ಅಂಗಡಿ ಹೇಳಿದರು. ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಸನ್ನಡತೆ ಆಧಾರದ ಮೇಲೆ ೧೭ ಕೈದಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸನ್ನಡತೆ ಆಧಾರದಲ್ಲಿ ಬಿಡುಗಡೆ ಹೊಂದಿರುವ ಕೈದಿಗಳು ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಬೇಕು. ಯಾವುದೇ ಕೆಟ್ಟಗಳಿಕೆಯಲ್ಲಿ ಅಪರಾಧ ಕೃತ್ಯಗಳಲ್ಲಿ ತೊಡಗಿ ಜೈಲುವಾಸ ಅನುಭವಿಸಿದ್ದೀರಿ. ಆದರೆ, ಕೆಲವರು ಯಾವುದೇ ಅಪರಾಧ ಮಾಡದೇ …

Read More »

ಶಾಸಕ ಸಂಜಯ ಪಾಟೀಲ ವಿರುದ್ಧ ಸಚಿವ ರಮೇಶ ಜಾರಕಿಹೊಳಿ ಆಕ್ರೋಶ

ಬೆಳಗಾವಿ ಸಚಿವರ ಮನೆ ಮೇಲೆ ಐಟಿ ದಾಳಿ ನಡೆದ ನಂತರ ರಾಜೀನಾಮೆ ನೀಡಿದ್ರೆ ಇಡೀ ಸಂಪುಟ ಈಗಾಗಲೇ ಖಾಲಿಯಾಗುತ್ತಿತ್ತು ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಇನ್ನೂ ಸಚಿವ ರಮೇಶ್ ಜಾರಕಿಹೊಳಿ ಗಣರಾಜ್ಯೋತ್ಸವ ಸಂದರ್ಭದಲ್ಲಿಯೆ ಬಿಜೆಪಿ ಶಾಸಕ ಸಂಜಯ ಪಾಟೀಲ್ ಜತೆಗೆ ಐಟಿ  ದಾಳಿ ವಿಚಾರವಾಗಿ ಮಾತನಾಡಿದ್ದಾರೆ. ನಿನೇ ಐಟಿ ರೇಡ್ ಗೆ ಕಾರಣ ಎಂದು ಸಚಿವರು ಸಂಜಯ ವಿರುದ್ಧ ವಾಗ್ವಾಳಿ ನಡೆಸಿದ್ದಾರೆ. ನಾನು ಯಾರದೋ ವೈಯಕ್ತಿಕ ವಿಷಯ …

Read More »

ಶೀಘ್ರದಲ್ಲಿಯೇ ಬೆಳಗಾವಿ ಜಿಲ್ಲೆಯಿಂದ ಸರ್ವಪಕ್ಷ ನಿಯೋಗ-ರಮೇಶ ಜಾರಕಿಹೊಳಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು ಕೂಡಲೇ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹಾಗು ಪ್ರಧಾನಿಗಳ ಬಳಿ ಜಿಲ್ಲೆಯಿಂದ ಸರ್ವ ಪಕ್ಷಗಳ ನಿಯೋಗ ಕೊಂಡೊಯ್ಯಲಾಗುವದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ತಿಳಿಸಿದರು ಗಣರಾಜ್ಯೋತ್ಸವ ಕಾರ್ಯಕ್ರಮದ ಬಳಿಕ ಮಾದ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಂದು ಮೇವು ಬ್ಯಾಂಕ್ ತೆರೆಯಲಾಗಿದೆ ಒಂದು ಗ್ರಾಮದಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ …

Read More »