Breaking News

LOCAL NEWS

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಲ್ಲಿ ಯಡವಟ್ಟು,ಬೆಳಗಾವಿಯಲ್ಲಿ ಗೊಂದಲ…!!

ರಾಜ್ಯ ಸರ್ಕಾರ ಇವತ್ತು ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಬೆಳಗಾವಿಯ ಶಂಕರ ಚಚಡಿ ಎನ್ನುವ ಹೆಸರೂ ಇದೆ,ಈ ಹೆಸರಿನ ಖ್ಯಾತ ಸಾಹಿತಿ ಬೈಲಹೊಂಗಲನಲ್ಲಿ ಇದ್ದಾರೆ.ಆದ್ರೆ ಬೆಳಗಾವಿಯ ಹಿರಿಯ ಕನ್ನಡಪರ ಹೋರಾಟಗಾರ ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಹೆಸರು ತಪ್ಪಾಗಿದೆ.ಶಂಕರ ಬುಚಡಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ ಎಂದು ಹೇಳಲಾಗುತ್ತಿದೆ.ಶಾಸಕ ಅಭಯ ಪಾಟೀಲ ಅವರು ಶಂಕರ ಬುಚಡಿ ಅವರ ಮನೆಗೆ …

Read More »

ಬೆಳಗಾವಿಯ ರಾಜ್ಯೋತ್ಸವದಲ್ಲಿ ಅಪ್ಪು ಉತ್ಸವ….!!

ಕರಾಳ ದಿನಾಚರಣೆಗೆ ಅನುಮತಿ ಬೇಡ- ಕರವೇ ಬೆಳಗಾವಿ-ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರದಲ್ಲಿ ಲಕ್ಷಾಂತರ ಕನ್ನಡಿಗರು ಸೇರಿ ಕರ್ನಾಟಕ ರಾಜ್ಯೋತ್ಸವದ ದಿನ ಕನ್ನಡದ ಹಬ್ಬವನ್ನಾಗಿ ಆಚರಿಸುವ ಸಂಧರ್ಭದಲ್ಲಿ ನಾಡದ್ರೋಹಿ ಎಂಇಎಸ್ ಸಂಘಟನೆಗೆ ಕರಾಳ ದಿನ ಆಚರಿಸಲು,ಸೈಕಲ್ ರ್ಯಾಲಿ ನಡೆಸಲು ಅನುಮತಿ ನೀಡಬಾರದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. ರಾಜ್ಯೋತ್ಸವದ ದಿನ ಕರಾಳ ದಿನ ಆಚರಿಸಲು ರಾಜ್ಯ ಸರ್ಕಾರ ಎಂಇಎಸ್ ಸಂಘಟನೆಗೆ ಅನುಮತಿ ನೀಡಿದ್ರೆ,ಸರ್ಕಾರ ನಾಡವಿರೋಧಿ ಸರ್ಕಾರ, ಎಂದು …

Read More »

ಬೆಳಗಾವಿಯಲ್ಲಿ LOVELY ಡಾಗ್ ಶೋ….!!

ಬೆಳಗಾವಿ- ಬೆಳಗಾವಿಯ ಉದ್ಯಮಬಾಗ ಪ್ರದೇಶದಲ್ಲಿರುವ ಶಗುನ್ ಗಾರ್ಡನ್ ಗೆ ಎಂಟ್ರೀ ಹೊಡೆದ್ರೆ ಸಾಕು,ಕಲರ್ ಪುಲ್ ನಾಯಿಗಳ ತುಂಟಾಟ ನೋಡಲು ಎರಡು ಕಣ್ಣುಗಳು ಸಾಲುವದಿಲ್ಲ‌‌.ಬಗೆ ಬಗೆಯ ನಾಯಿಗಳು ಡಾಗ್ ಶೋ ನಲ್ಲಿ ಪಾಲ್ಗೊಂಡಿವೆ.ಇಲ್ಲಿಯ ನಾಯಿ ಮರಿಗಳನ್ನು ನೋಡಿದ್ರೆ ಭೂಮಿಯ ಮೇಲೆ ಇಷ್ಟೊಂದು ಜಾತಿಯ ನಾಯಿಗಳು ಇವೆ ಅಂತ ಅಚ್ಚರಿಯಾಗುತ್ತದೆ. ನಂಬಿಕೆಗೆ ಮತ್ತೊಂದು ಹೆಸರು ನಾಯಿ. ಸಂಸ್ಕೃತದಲ್ಲಿ ಇದಕ್ಕೆ ಶ್ವಾನ ಎನ್ನುವ ಹೆಸರಿದೆ. ಇತ್ತೀಚಿನ ದಿನಗಳಲ್ಲಿ ನಾಯಿ ಸಾಕುವುದು ಒಂದು ಹವ್ಯಾಸವಾಗಿದೆ. ತರ …

Read More »

ಮಗಳ ಶವವನ್ನು ಮನೆಯಲ್ಲಿಟ್ಟು ಪತ್ರಿಕೆ ಹಂಚಿದ್ದ ಮಹಾದೇವ !

ಡೆಡ್ಲಿ ಡೆರಿಂಗ್ ಡೆಡಿಕೆಶನ್ ಅಂದ್ರೆ ಇದೇನಾ ? ಕರ್ತವ್ಯ ಪ್ರಜ್ಞೆ – ಕರ್ತವ್ಯ ನಿಷ್ಠೆ* ಎಂಬುದು ಅತ್ಯಂತ ಮಹತ್ವದ್ದು ಹಾಗೂ ವ್ಯಕ್ತಿತ್ವ ವಿಕಾಸನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಡೆಡಿಕೆಶನ್ ಎಂಬ ಪದಕ್ಕೆ ಇದನ್ನೊಂದು ಹೆಸರು ಎನ್ನುವಂತಿದೆ ಈ ಸ್ಟೋರಿ. ಇವರು ಮಹಾದೇವ ತುರಮರಿ ವಯಸ್ಸು 70 ವರ್ಷ. ಬೆಳಗಾವಿ ಜಿಲ್ಲೆಯ *ಚೆನ್ನಮ್ಮನ‌ ಕಿತ್ತೂರಿನಲ್ಲಿ ಕಡು ಬಡತನದಲ್ಲಿ ಹುಟ್ಟಿ* ನೇಕಾರಿಗೆ ‌ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾಗ ಉದ್ಯೋಗಲ್ಲಿ ಲಾಸ್ ಆಗಿ ಭಾರಿ ತೊಂದರೆಯಲ್ಲಿದ್ದರು. …

Read More »

ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿದ್ದು ಯಾರಿಗೆ ಗೊತ್ತಾ..??

ಕನ್ನಡಪರ ಹೋರಾಟಗಾರರು, ಪತ್ರಕರ್ತರಿಗೆ ಸನ್ಮಾನ ಬೆಳಗಾವಿ, ನವೆಂಬರ್ 1 ರಂದು ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 67ನೇ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡನಾಡು-ನುಡಿಗಾಗಿ ಸೇವೆ ಸಲ್ಲಿಸಿರುವ ಕನ್ನಡಪರ ಹೋರಾಟಗಾರರು ಹಾಗೂ ಪತ್ರಕರ್ತರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಿ, ಗೌರವಿಸಲು ನಿರ್ಧರಿಸಲಾಗಿದೆ. ಸನ್ಮಾನ ಆಯ್ಕೆ ಉಪ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ(ಅ.28) ಜಿಲ್ಲಾ ಪಂಚಾಯತಿಯಲ್ಲಿ ನಡೆದ ಸನ್ಮಾನ ಆಯ್ಕೆ ಉಪ ಸಮಿತಿ …

Read More »

ಬೆಳಗಾವಿ ಪಕ್ಕದ ಚೋರ್ಲಾ ಘಾಟ್ ನಲ್ಲಿ ಕಾರು ಬ್ಲಾಸ್ಟ್…..

ಗೋವಾದಿಂದ ಬೆಳಗಾವಿ ಬರುತ್ತಿದ್ದ ಕಾರು ಬ್ಲ್ಯಾಸ್ಟ್; ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ‌ ಪಾರು…! ಬೆಳಗಾವಿ: ಗೋವಾದಿಂದ ಬೆಳಗಾವಿ ಬರುತ್ತಿದ್ದ ಕಾರಿನಲ್ಲಿ ಬೆಂಕಿ ಹಾಣಿಸಿಕೊಂಡು ಬ್ಲ್ಯಾಸ್ಟ್ ಆಗಿರುವ ಘಟನೆ ಚೋರ್ಲಾ ಘಾಟ್ ಬಳಿ ಇಂದು ಮುಂಜಾನೆ ನಡೆದಿದೆ. ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದಾಗ ಕಾರ್ ಬ್ಲ್ಯಾಸ್ಟ್ ಆಗಿದೆ. ಈ ವೇಳೆ ನೋಡನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಇನ್ನೂ ಕಾರಿನಲ್ಲಿ ಇದ್ದವರಿಗೆ ಯಾವುದೇ ಪ್ರಾಣಹಾನಿ‌ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ …

Read More »

ಬೆಳಗಾವಿಯಲ್ಲಿ, ಕರಾಳ ದಿನ ಆಚರಿಸಲು ಎಂಇಎಸ್ ತಯಾರಿ….!!

ಬೆಳಗಾವಿ-ರಾಜ್ಯೋತ್ಸವದ ದಿನ ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ತೇರು ಎಳೆದು ಬಾನೆತ್ತರದಲ್ಲಿ ಕನ್ನಡದ ಬಾವುಟ ಹಾರಿಸುವದನ್ನು ನೋಡಿ ಸಹಿಸಲು ನಾಡವಿರೋಧಿ ಎಂಇಎಸ್ ಸಹಿಸುವದಿಲ್ಲ,ಕನ್ನಡಿಗರ ಉತ್ಸಾಹ ನೋಡಿ ಪ್ರತಿ ವರ್ಷವೂ ಮೈ ಪರಚಿಕೊಳ್ಳುವ ಕಂಗಾಲ್ ಕಂಪನಿ ಎಂಇಎಸ್ ಈ ವರ್ಷವೂ ರಾಜ್ಯೋತ್ಸವದ ದಿನ ಕಿತಾಪತಿ ನಡೆಸಲು ಮುಂದಾಗಿದೆ. ಬೆಳಗಾವಿಯಲ್ಲಿ ರಾಜ್ಯೋತ್ಸವದ ದಿನ ಒಂದು ಕಡೆ ಕನ್ನಡಿಗರು ಕನ್ನಡದ ಹಬ್ಬ ಆಚರಿಸಿದ್ರೆ,ಇನ್ನೊಂದು ಕಡೆ ಎಂಇಎಸ್ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಿ ಎಂದು …

Read More »

ಬೆಳಗಾವಿ: ಸಿಲೆಂಡರ್ ಸ್ಪೋಟಕ್ಕೆ ಓರ್ವ ಬಲಿ..

ಬೆಳಗಾವಿ-ಅಡುಗೆ ಅನಿಲದ ಸಿಲೆಂಡರ್ ಸ್ಪೋಟಗೊಂಡ ಪರಿಣಾಮ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪೋಲೀಸ್ ಠಾಣಾ ವ್ಯಾಪ್ತಿಯ ನಾಗನೂರು ಗ್ರಾಮದಲ್ಲಿ ನಡೆದಿದೆ. ಬಾಡಿಗೆ ಮನೆಯಲ್ಲಿ ಮೊದಲ ಮಹಡಿಯಲ್ಲಿ ವಾಸವಾಗಿದ್ದ,19 ವರ್ಷದ ಶ್ರೀಧರ ಪ್ಯಾಟಿ,ಮೃತ ದುರ್ದೈವಿಯಾಗಿದ್ದು ಈತ ನರ್ಸಿಂಗ್ ವಿಧ್ಯಾರ್ಥಿಯಾಗಿದ್ದ ಎಂದು ತಿಳಿದು ಬಂದಿದೆ. ಮೊದಲ ಮಹಡಿಯಲ್ಲಿ ಸಿಲೆಂಡರ್ ಬ್ಲಾಸ್ಟ್ ಆದ ಕಾರಣ ಮನೆಯೂ ದ್ವಂಸಗೊಂಡಿದ್ದು ಮನೆಯಲ್ಲಿ ವಾಸವಿದ್ದ ನರ್ಸಿಂಗ್ ಕಾಲೇಜು ವಿಧ್ಯಾರ್ಥಿ ಬಲಿಯಾಗಿದ್ದು ಈ ಘಟನೆಯಿಂದಾಗಿ ನಾಗನೂರ …

Read More »

ಇವತ್ತೂ ಹದಿನೈದು ಜನ ಆಸ್ಪತ್ರೆಗೆ ದಾಖಲು..

.ಬೆಳಗಾವಿ-ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವನ್ನೊಪ್ಪಿದ ಘಟನೆ ನಡೆದ ಬಳಿಕವೂ,ಐದು ದಿನಗಳು ಕಳೆದರೂ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಬಾಂತಿ-ಭೇದಿಯಿಂದ ಬಳಲುತ್ತಿದ್ದ ಮುದೇನೂರು ‌ಗ್ರಾಮದ 15 ಮಂದಿ ಇಂದೂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ತಾಲೂಕಾಸ್ಪತ್ರೆ, ಬಾಗಲಕೋಟೆ,‌ ಮುಧೋಳ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲು ಮಾಡಲಾಗಿದೆ.ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ.ನಿರಂತರ ವಾಂತಿ–ಭೇದಿಯ ಕಾರಣ ಹಲವರಲ್ಲಿ ತಲೆದೂರಿದ ಸುಸ್ತು, ಆಯಾಸ ಹೆಚ್ಚಾಗಿದೆ. ಶುಕ್ರವಾರ ಮತ್ತೆ 15 …

Read More »

ಬೆಳಗಾವಿಯಲ್ಲಿ ಭಾವುಕರಾದ ಅಪ್ಪು ಅಭಿಮಾನಿಗಳು

ಬೆಳಗಾವಿ-ಇಂದು ವಿಶ್ವದಾದ್ಯಂತ ಪವರ್‌ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಯಾಗುತ್ತಿದೆ.ಅಪ್ಪು ಅಗಲಿಕೆಯ ನಂತರ ಗಂಧದ ಗುಡಿ ಬಿಡುಗಡೆಯಾಗುವ ಸಂಧರ್ಭದಲ್ಲಿ ಅಪ್ಪು ಅಭಿಮಾನಿಗಳು ಭಾವುಕರಾದರು. ಕುಂದಾನಗರಿ ಬೆಳಗಾವಿಯಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ಆಗುತ್ತಿದೆ.ಸ್ವರೂಪ – ನರ್ತಕಿ, ಕಾರ್ನಿವಲ್, ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10:45ಕ್ಕೆ ಮೊದಲ ಶೋ ನಡೆಯಿತು‌ ನವವಧುವಿನಂತೆ ಚಿತ್ರಮಂದಿರಗಳನ್ನು ಸಿಂಗರಿಸಿರುವ …

Read More »

ಲಂಡನ್ ಗೆ ಮುಟ್ಟಲಿರುವ ಬೆಳಗಾವಿ ರಾಜ್ಯೋತ್ಸವ..!!

ಬೆಳಗಾವಿ-ಬೆಳಗಾವಿ ರಾಜ್ಯೋತ್ಸವ ಅಂದ್ರೆ ಸಾಕು ,ಕನ್ನಡದ ಹುಡುಗರು ತಾಯಿ ಭುವನೇಶ್ವರಿಯ ತೇರು ಎಳೆದು ಹುಚ್ಚೆದ್ದು ಕುಣೀತಾರೆ,ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಬೆಳಗಾವಿಯ ಕಣ,ಕಣವೂ ಕನ್ನಡ,ಕನ್ನಡ ಎನ್ನುವ ಹಾಗೆ ಇಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಈಬಾರಿಯ ರಾಜ್ಯೋತ್ಸವದ ಸಂಬ್ರಮ ಲಂಡನ್ ವರೆಗೂ ಮುಟ್ಟಲಿದೆ. ಅದು ಹೇಗೆ ಅಂದ್ರೆ,ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಹೊಸ ಇತಿಹಾಸ‌ವೊಂದು ನಿರ್ಮಾಣವಾಗಲಿದೆ. ೧೦,೦೦೦ ಅಡಿಗಳ ಕರ್ನಾಟಕದ ಬಾವುಟದ ಮೆರವಣಿಗೆಯನ್ನು ನಗರದ ರಾಣಿ ಚೆನ್ನಮ್ಮ …

Read More »

ಬೆಳಗಾವಿಯಲ್ಲಿ, ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ….!!

ಬೆಳಗಾವಿ – ಬೆಳಗಾವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ರಾಜ್ಯೋತ್ಸವದ ತಯಾರಿ ಶುರುವಾಗುತ್ತದೆ.ಕನ್ನಡದ ಹಬ್ಬ ಎಂದಾಗ ನೆನಪಾಗೋದು ಹಿರೇಮಠದ ಹೋಳಿಗೆ ಊಟ. ಹೌದು ರಾಜ್ಯೋತ್ಸವದ ದಿನ ತಾಯಿ ಭುವನೇಶ್ವರಿಯ ತೇರು ಎಳೆಯಲು ಲಕ್ಷಾಂತರ ಜನ ಸೇರ್ತಾರೆ, ಬೆಳಗಾವಿಯ ಹಿರೇಮಠದ ಜೋಳಿಗೆಯಿಂದ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡ ಕನ್ನಡದ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಞೆ ಮಾಡ್ತಾರೆ. ಬೆಳಗಾವಿಯಲ್ಲಿ ನಡೆಯುವ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿ ವರ್ಷ …

Read More »

ಖಾನಾಪುರ ಕೋರ್ಟ್‌ಗೆ ಹಾಜರಾದ ಮಹಾರಾಷ್ಟ್ರದ ಶಿವಸೇನೆ ಮುಖಂಡ

ಬೆಳಗಾವಿ-2006ರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ MES ಪುಂಡರು ಮಾಡಿದ ಗಲಭೆ ಪ್ರಕರಣಕ್ಕೆ ಸಂಭಂದಿಸಿದಂತೆ,ಖಾನಾಪುರ ಕೋರ್ಟ್‌ಗೆ, ಮಹಾರಾಷ್ಟ್ರದ ಶಿವಸೇನೆ ಮುಖಂಡ ಹಾಜರಾಗಿದ್ದಾರೆ.ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕ ರಾಮದಾಸ ಖದಂ ಖಾನಾಪುರ ಕೋರ್ಟ್‌ಗೆ ಇಂದು ಗುರುವಾರ ಹಾಜರಾಗಿದ್ದಾರೆ.ರಾಮದಾಸ ಕದಂ, ಕೇಂದ್ರದ ಮಾಜಿ ಸಚಿವರಾಗಿದ್ದಾರೆ. 2006ರ ಅಕ್ಟೋಬರ್ 26ರಂದು ಖಾನಾಪುರದಲ್ಲಿ ಎಂಇಎಸ್ ಯುವ ಮೇಳಾವ್ ನಡೆದಿತ್ತು,ಖಾನಾಪುರದ ತಾರಾರಾಣಿ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ MES ಸಮಾವೇಶದಲ್ಲಿ ರಾಮದಾಸ್ ಕದಂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ …

Read More »

ಹೆಂಡತಿಯನ್ನು ಹಾಸಿಗೆಯಲ್ಲೇ ಹೆಣವಾಗಿಸಿದ ಗಂಡ…

ಬೆಳಗಾವಿ-ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಪಾಪಿ ಪತಿ ಹಾಸಿಗೆಯಲ್ಲಿಯೇ ಹೆಣವಾಗಿಸಿದ ಘಟನೆ ನಡೆದಿದೆ.ಮದ್ಯಪಾನ ಮಾಡಿದ ಪತಿ ಹೆಂಡತಿಯನ್ನೇ ಹತ್ಯೆಮಾಡಿದ ಘಟನೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಪಾಂಡುರಂಗ ಹಾರೂಗೇರಿ(೫೫) ಗಂಡನಿಂದ ಕೊಲೆಯಾದ ಪತ್ನಿ,ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿ ಯನ್ನು ಪೋಲೀಸರು ಪತ್ತೆ ಮಾಡುತ್ತಿದ್ದುಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.ಮೂಡಲಗಿ ಪೊಲೀಸ್ …

Read More »

ಈ ರೀತಿಯ ಓಟ ನಡೆಯುವುದು,ಬೆಳಗಾವಿಯಲ್ಲಿ ಮಾತ್ರ…!!

ಬೆಳಗಾವಿಯಲ್ಲಿ ಗಮನ ಸೆಳೆದ ಎಮ್ಮೆಗಳ ಓಟ… ಬೆಳಗಾವಿ-ದೀಪಾವಳಿಯ ಪಾಡ್ಯದ ದಿನವೇ ಕುಂದಾನಗರಿಯಲ್ಲಿ ಎಮ್ಮೆಗಳ ಓಟ ಎಲ್ಲರ ಗಮನ ಸೆಳೆದಿದೆ. ಬೆಳಗಾವಿಯ ಚವಾಟ್ ಗಲ್ಲಿ, ಶೆಟ್ಟಿ, ಗವಳಿ ಗಲ್ಲಿಗಳಲ್ಲಿ ಎಮ್ಮೆಗಳ ಓಟ ಸ್ಪರ್ಧೆ ನಡೆಯಿತು.ಎಮ್ಮೆಗಳ ಓಟದ‌ ಸ್ಪರ್ಧೆಗೆ ಬಿಜೆಪಿ ಶಾಸಕ ಶಾಸಕ‌ ಅನಿಲ್ ಬೆನಕೆ ಚಾಲನೆ ನೀಡಿದ್ರು.ದೀಪಾವಳಿ ಹಬ್ಬದ ಪ್ರಯುಕ್ತ ಗವಳಿ ಸಮುದಾಯದಿಂದ ಎಮ್ಮೆಗಳ ಓಟದ ಸ್ಪರ್ಧೆ ಆಯೋಜನೆ ಮಾಡುವದು ಇಲ್ಲಿಯ ಸಂಪ್ರದಾಯವಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಿಶೇಷ ಆಚರಣೆ ಮಾಡಲಾಗುತ್ತದೆ. ಎಮ್ಮೆಗಳನ್ನು …

Read More »