Breaking News
Home / ಬೆಳಗಾವಿ ನಗರ (page 22)

ಬೆಳಗಾವಿ ನಗರ

ಸ್ವಾಮಿಜಿ ವಿರುದ್ಧ ಅವಹೇಳನಕಾರಿ ಟ್ವಿಟ್-ಜೈನ ಸಮಾಜದ ಖಂಡನೆ

ಬೆಳಗಾವಿ.ಆ.28: ಇತ್ತಿಚಿಗೆ ಜೈನ ಮುನಿ ರಾಷ್ಟ್ರಸಂತ ಅವರು ಹರಿಯಾಣ ವಿಧಾನಸಭೆಯಲ್ಲಿ 40 ನಿಮಿಷಗಳ ಕಾಲ ನೀಡಿದ ಪ್ರವಚನಕ್ಕೆ ಸಂಬಂಧಿಸಿದಂತೆ ದೆಹಲಿ ಆಮ್ ಆದ್ಮಿ ಪಕ್ಷದ ವಕ್ತಾರ ವಿಶಾಲ ದಾದಲಾನಿ ಮತ್ತು ಕಾಂಗ್ರೆಸ ಮುಖಂಡ ತಹಶೀನ ಪೂನಾವಾಲಾ ಇವರು ಆಚಾರ್ಯ ತರುಣಸಾಗರಜೀ ಅವರ ವಿರುದ್ದ ಟ್ವೀಟರ್‍ನಲ್ಲಿ ಅವಹೇಳನಕಾರಿ ಹೇಳಿಕೆಗಳನ್ನು ಪ್ರಕಟಿಸಿರುವುದನ್ನು ಸಮಸ್ತ ಜೈನ ಸಮಾಜ ತೀವ್ರವಾಗಿ ಖಂಡಿಸಿದ್ದು, ಬೆಳಗಾವಿಯ ಪೀರನವಾಡಿಯಲ್ಲಿ ಈ ಉಭಯ ಜನರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ನಡೆಸಲಾಯಿತು. ಹರಿಯಾಣದ …

Read More »

ಹಂಡಿಬಾಗ್ ಕುಟುಂಬಕ್ಕೆ ನಾಲ್ಕು ಲಕ್ಷ ರೂ ಸಹಾಯ

ಬೆಳಗಾವಿ-ಆತ್ಮಹತ್ಯೆಗೆ ಶರಣಾದ ಡಿಎಸ್ಪಿ ದಿ. ಕಲ್ಲಪ್ಪ ಬಸಪ್ಪ ಹಂಡಿಬಾಗ್ ತಂದೆ ಬಸಪ್ಪ ಹಾಗೂ ತಾಯಿ ಬಸಮ್ಮ ಅವರಿಗೆ ಹಿಂದುಳಿದ ಜಾತಿಗಳ ಅಧಿಕಾರಿಗಳ ಅಧಿಕಾರಿಗಳ ಸಂಘದ ವತಿಯಿಂದ ೩ ಲಕ್ಷ ಧನ ಸಹಾಯ ನೀಡಲಾಯಿತು. ಅಲ್ಲದೇ ಕಲ್ಲಪ್ಪ ಅವರ ಪತ್ನಿಗೆ ಪ್ರತ್ಯೇಕ ೧ ಲಕ್ಷ ಕೊಡಲು ಸಂಘ ನಿರ್ಧರಿಸಿತು. ಈ ಸಂದರ್ಭ ಮಾತನಾಡಿದ ಕಲ್ಲಪ್ಪ ತಂದೆ ಬಸಪ್ಪ ನನ್ನ ಮಗ ಪ್ರಾಮಾಣಿಕ ಆತ ತಪ್ಪು ಮಾಡಲು ಸಾಧ್ಯವೇ ಇಲ್ಲ ನನ್ನ ಮಗನಿಗೆ …

Read More »

ಬೆಳಗಾವಿಗೆ ಹೈ-ಟೆಕ್ ಪೋಲಿಸ್ ವಾಹನ

ಬೆಳಗಾವಿ -ಬೆಳಗಾವಿ ನಗರದಲ್ಲಿ ಕಾನೂನು ಸು ವ್ಯೆವಸ್ಥೆ ಕಾಪಾಡಲು ಅನಕೂಲವಾಗುವಂತೆ ಪೋಲಿಸ್ ಇಲಾಖೆ ಎರಡು ಹೈ-ಟೆಕ್ ಪೋಲಿಸ್ ವಾಹನಗಳನ್ನು ಬೆಳಗಾವಿಗೆ ನೀಡಿದೆ ಈ ವಾಹನಗಳಲ್ಲಿ ಅತ್ಯಾಧುನಿಕ ಸೌಲಬ್ಯಗಳನ್ನು ಹೊಂದಿದೆ ವಾಹನದಲ್ಲಿ ಕಂಪ್ಯೂಟರ್,ಸೂಕ್ಷ್ಮ ಗ್ರಹಿಕೆಯ ಕ್ಯಾಮರಾ ಮರಳು ಲಾರಿಗಳನ್ನು ಅತೀ ದೂರದಿಂದ ಪತ್ತೆ ಹಚ್ಚುವ ಸಾಧನ ಸೇರಿದಂತೆ ಅನೇಕ ಸಾಧನೆ ಸಲಕರಣೆಗಳನ್ನು ಇದರಲ್ಲಿ ಅಳವಡಿಸಲಾಗಿದೆ ಬೆಳಗಾವಿ ಐಜಿಪಿ ಡಾ ರಾಮಚಂದ್ರ ರಾವ ಅವರು ಶನಿವಾರ ಈ ವಾಹನಗಳನ್ನು ಸೇವೆಗೆ ಸಮರ್ಪಿಸಲಿದ್ದಾರೆ

Read More »

ಬೆಳಗಾವಿ ನಗರದ, ಖಂಜರ್ ಗಲ್ಲಿಯಲ್ಲಿ ಪಾರ್ಕಿಂಗ್ ಯಾವಾಗ..?

ಬೆಳಗಾವಿ -ಬೆಳಗಾವಿ ನಗರದ ಖಂಜರ್ ಗಲ್ಲಿಯ ಪಾರ್ಕಿಂಗ್ ಸ್ಥಳದ ಎಲ್ಲ ಅಡತಡೆಗಳು ನಿವಾರಣೆಯಾದರೂ ಪಾರ್ಕಿಂಗ್ ಸ್ಥಳದ ಉದ್ಘಾಟನೆಗೆ ಗ್ರಹಣ ಹಿಡಿದಿದೆ ಗೋರಿ ಸಮಸ್ಯೆ ನಿವಾರಣೆಯಾಗಿ ಆರು ತಿಂಗಳು ಗತಿಸಿದೆ ಆದರೆ ಪಾರ್ಕಿಂಗ್ ಸ್ಥಳದ ಊದ್ಘಾಟನೆ ಆಗಿಲ್ಲ. ಹೀಗಾಗಿ ಜನ ಅಲ್ಲಿ ಮತ್ತೆ ಮೋಡಕಾ ಸಾಮುಗ್ರಿಗಳನ್ನು ಇಡಲು ಆರಂಭಿಸಿದ್ದು ಮತ್ತೊಂದು ವಿವಾದ ಎದುರಾಗುವ ಲಕ್ಷಣಗಳು ಗೋಚರಿಸುತ್ತಿವೆ ಬೆಳಗಾವಿ ನಗರದ ಮುಖ್ಯ ಮಾರುಕಟ್ಟೆ ರಸ್ತೆಗಳಾಗಿರುವ ಖಡೇಬಝಾರ,ಗಣಪತಿಗಲ್ಲಿ,ಮತ್ತು ಕಚೇರಿ ರಸ್ತೆಯಲ್ಲಿನ ಪಾರ್ಕಿಂಗ್ ನಿಷೇಧಿಸಿ ಖಂಜರ್ …

Read More »

ಬಾರ್ ಬಂದ್ ಮಾಡುವಂತೆ ಡಿಸಿ ಕಾಲಿಗೆ ಬಿದ್ದ ಮಹಿಳೆ

ಬೆಳಗಾವಿ-ಗೋಕಾಕ ತಾಲೂಕಿನ ಹುಳ್ಳೂರ ಗ್ರಾಮದ ಬಾರ್ ಬಂದ್ ಮಾಡುವಂತೆ ಆಗ್ರಹಿಸಿ ಗ್ರಾಮದ ಜನ ಕಚೇರಿ ಎದರು ಪ್ರತಿಭಟನೆ ನಡೆಸಿದರು ಹಳ್ಳೂರು ಗ್ರಾಮದ ಮನಿಷ್ ಬಾರ್ ಬಂದ್ ಮಾಡುವಂತೆ ಮಹಿಳೆಯರಿಂದ ಜಿಲ್ಲಾಧಿಕಾರಿ ಎನ್. ಜಯರಾಂ ಜತೆಗೆ ವಾಗ್ವಾದ ನಡೆಯಿತು ಮನವಿ ನೀಡಲು ಬಂದಿದ್ದಿರೋ ಅಸಭ್ಯ ವರ್ತನೆ ಮಾಡಲು ಬಂದಿದ್ದಿರೋ ಎಂದ ಡಿಸಿ ನೀವು ಹೇಳಿದಂತೆ ಬಾರ್ ಬಂದ್ ಮಾಡಲು ಆದೇಶ ನೀಡಿದ್ದೇನೆ ಇದನ್ನು ಪ್ರಶ್ನಿಸಿ ಬಾರ್ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದಾರೆ …

Read More »

PACL ಕಂಪನಿ ವಿರುದ್ಧ ವಂಚನೆ ಆರೋಪ.

ಬೆಳಗಾವಿ- PACL ಕಂಪನಿ ವಿರುದ್ಧ ವಂಚನೆ ಆರೋಪ. ಕಂಪನಿ ಕಚೇರಿ ಮುಂದೆ ಮಹಿಳೆಯರಿಂದ ಪ್ರತಿಭಟನೆ. ನಗರದ ಆರ್ ಪಿ ಡಿ ವೃತ್ತದ ಬಳಿ ಇರುವ ಕಚೇರಿ. ೬ ವರ್ಷದಲ್ಲಿ ಹಣ ದ್ವಿಗುಣ ಮಾಡಿಕೊಡುವುದಾಗಿ ಹೇಳಿದ್ದ ಕಂಪನೆ. ನೂರಾರು ಜನರಿಂದ ಕಂಪನಿಯಲ್ಲಿ ಹಣ ಹೂಡಿಕೆ. ಮದ್ಯ ವರ್ತಿಗಳ ಮೂಲಕ ಹಣ ಹೂಡಿಕೆ. ಕಂಪನಿ ಗೆ ಬೀಗ ಹಿನ್ನೆಲೆ ಗ್ರಾಹಕರ ಆತಂಕ. ಕಚೇರಿಯಲ್ಲಿ ಬಾಗಿಲು ಒಡೆಯಲು ಯತ್ನ. ಹಣ ಹುಡಿಕೆ ಮಾಡಿದ ನೂರಾರು …

Read More »

ನವಜಾತ ಶಿಶು ವಿಘ್ನ ವಿನಾಯಕನಿಗೆ ಸಮರ್ಪಣೆ

ಬೆಳಗಾವಿ – ವಿನಾಯಕನ ಸ್ವಾಗತಕ್ಕೆ ಎಲ್ಲರೂ ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮುದ್ದಾದ ನವಜಾತ ಶಿಶುವನ್ನು ತಾಯಿಯೊಬ್ಬಳು ವಿಘ್ನ ವಿನಾಯಕನಿಗೆ ಸಮರ್ಪಿಸಿದ ಘಟನೆ ನಡೆದಿದೆ, ತಾಯಿಯೊಬ್ಬಳು ನಾಲ್ಕು ದಿನದ ಹಿಂದೆ ಜನಿಸಿದ ಹೆಣ್ಣು ಶಿಶುವನ್ನು ಬಿಮ್ಸ ವೈದ್ಯಕೀಯ ಕಾಲೇಜಿನ ಬದಿಯಲ್ಲಿರುವ ಗಣಪತಿ ಮಂದಿರದ ಮುಖ್ಯದ್ವಾರದಲ್ಲಿ ಬಿಟ್ಟು ಹೋಗಿದ್ದಾಳೆ ಮಂದಿರದ ಬಳಿ ಮಗು ಅಳುತ್ತರುವದನ್ನು ಗಮನಿಸಿದ ಕೆಲವರು ಕೂಡಲೇ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಆಗಮಿಸಿದ ವೈದ್ಯಾಧಿಕಾರಿಗಳು ಮಗುವನ್ನು ಪರೀಕ್ಷೆ ಮಾಡಿ ಮಗು …

Read More »

ಸ್ಮಾರ್ಟ ಸಿಟಿಯಲ್ಲಿ ಹಂಗೇನಿಲ್ಲ..ಹಂದಿ..ಮಂದಿ..ಕೂಡಿ..ಇರ್ತಾರೇ..!

ಬೆಳಗಾವಿ- ಬೆಳಗಾವಿ ನಗರದಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದೆ ಹಂದಿ ಸಾಕುವವರು ಬೆಳಗಾವಿ ಹಂದಿ ಸಾಕಲು ಬೆಳಗಾವಿಯೇ ಸೂಕ್ತ ಎಂದು ತಿಳಿದು ಬೆಳಗಾವಿಗೆ ವಲಸೆ ಬರುತ್ತಿದ್ದಾರೆ ಹಂದಿ ಸಾಕುವವರು ಬೆಳಗಾವಿ ನಗರದ ಕಂಡು ಕಂಡಲ್ಲಿ ಹಂದಿ ಮರಿಗಳನ್ನು ಬಿಡುತ್ತಿದ್ದು ಇದಕ್ಕೆ ಲಗಾಮು ಹಾಕುವವರು ಯಾರು ಅನ್ನೋ ಪ್ರಶ್ನೆ ಬೆಳಗಾವಿ ನಿವಾಸಿಗರನ್ನು ಕಾಡುತ್ತಿದೆ ಬೆಳಗಾವಿ ನಗರ ಈಗ ಎರಡನೇಯ ರಾಜಧಾನಿಯಾಗುವತ್ತ ದಾಪುಗಾಲು ಹಾಕುತ್ತಿದೆ ಸ್ಮಾರ್ಟ ಸಿಟಿ ಪಟ್ಟಿಯಲ್ಲಿ ಬೆಳಗಾವಿ ಹೆಸರು ಬಂದಿದೆ ಇಂತಹ …

Read More »

ಗಲೀಜು ಜಾಗೆಯಲ್ಲಿ ಪೂಜೆ..ಗುತ್ತಿಗೆದಾರರ ಡ್ರಾಮಾ

ಬೆಳಗಾವಿ- ಬೆಳಗಾವಿ ನಗರದ ವಡಗಾಂವ ಖಾಸಬಾಗ ಟಿಳಕವಾಡಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಗುತ್ತಿಗೆದಾರರರು ಚರಂಡಿ ಬದಿಯಲ್ಲಿ ಜನ ಕಸ ಎಸೆಯಬಾರದು ಎನ್ನುವ ಉದ್ದೇಶದಿಂದ ದೊಡ್ಡ ದೊಡ್ಡ ಕಲ್ಲುಗಳನ್ನು ಇಟ್ಟು ಅದಕ್ಕೆ ಕುಂಕುಮ ಹಚ್ಚಿ ಮಾಲೆ ಹಾಕಿ ಉದ್ದಿನಕಡ್ಡಿ ಬೆಳಗಿ ಪೂಜೆ ನೆರವೇರಿಸುತ್ತಿರುವ ಘಟನೆ ನಡೆದಿದೆ ಜನ ಚರಂಡಿ ಬದಿಯಲ್ಲಿ ಕಸ ಎಸೆಯುತ್ತಿರುವದನ್ನು ಗಮನಿಸಿದ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಹೊಸ ಐಡಿಯಾ ಕಂಡು ಹಿಡಿದು ಕಂಡಲ್ಲಿ ಕಲ್ಲಿಟ್ಟು ಅದಕ್ಕೆ ಪೂಜೆ ನೆರವೇರಿಸುತ್ತಿದ್ದಾರೆ …

Read More »

ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…!

ಅಪ್ಪ,ಅಮ್ಮ ಬೇಡ.. ಅವರ ಆಸ್ತಿ ಬೇಕು…! ಬೆಳಗಾವಿ-ಮುಪ್ಪಿನಾವಸ್ಥೆಯಲ್ಲಿರುವ ತಂದೆ ತಾಯಿಯ ಸೇವೆ ಮಾಡದೇ ತಂದೆ ತಾಯಿಗೆ ಅಡುಗೆ ಮಾಡಿ ಊಟ ಹಾಕದೇ ತಂದೆ ಹೆಸರಿನಲ್ಲಿರುವ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಮಾಡುವಂತೆ ಮಗನೊಬ್ಬ ತಮಗೆ ಕಿರುಕಳ ನೀಡುತ್ತಿದ್ದಾನೆ ನಮಗೆ ನ್ಯಾಯ ಕೊಡಿ ಎಂದು ಹೆತ್ತವರು ಜಿಲ್ಲಾಧಿಕಾರಿಗಳ ಮೊರೆ ಹೋದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ ಬೆಳಗಾವಿಯ ಶಹಾಪೂರನಲ್ಲಿರುವ ಪವಾರ ಕುಟುಂಬ ತಮಗೆ ನ್ಯಾಯ ಕೊಡಿಸುವಂತೆ ಬೆಳಗಾವಿ ಉಪವಿಭಾಗಾಧಕಾರಿಗಳ ಮೊರೆ ಹೋಗಿ …

Read More »