Home / LOCAL NEWS (page 41)

LOCAL NEWS

ತೇಲಗಿ ಕಹಾನಿ ಈಗ ವೆಬ್ ಸೀರೀಸ್ ಸೋನಿ ಆ್ಯಪ್ ನಲ್ಲಿ ರಿಲೀಸ್…!!

ಕರೀಂ ಲಾಲಾ ತೇಲಗಿ ಕಹಾನಿ ಈಗ ವೆಬ್ ಸಿರೀಸ್…. ಬೆಳಗಾವಿ- ಸೋನಿ ಟಿವ್ಹಿ ಆ್ಯಪ್ ಡೌನ್ ಲೋಡ್ ಮಾಡಿಕೊಂಡ್ರೆ Scam 2023 ಎಂಬ ವೆಬ್ ಸೀರೀಸ್ ಪೋಸ್ಟರ್ ಪ್ರತ್ಯಕ್ಷ ಆಗುತ್ತದೆ.ಇದನ್ನು ನೋಡುತ್ತ ಹೋದ್ರೆ ಬೆಳಗಾವಿ ಜಿಲ್ಲೆಯ ಖಾನಾಪೂರದಲ್ಲಿ ನಡೆದ ನಕಲಿ ಛಾಪಾ ಕಾಗದ ಹಗರಣದ ಸಂಪೂರ್ಣ ಕಹಾನಿ ನಮ್ಮ ಕಣ್ಣೆದುರಿಗೆ ಬರುವದರಲ್ಲಿ ಸಂದೇಹವೇ ಇಲ್ಲ. ನಾವೂ ತೀರಾ ಹತ್ತಿರದಿಂದ ನೋಡಿದ ವ್ಯಕ್ತಿ ಕುರಿತಾದ ಬಹುಕೋಟಿ ಹಗರಣದ ವೆಬ್ ಸೀರಿಜ್ ಈಗ …

Read More »

ಮಲ್ಲಿಕಾರ್ಜುನ್ ಜಗಜಂಪಿ ಅವರೂ MP ಇಲೆಕ್ಷನ್ ಗೆ ನಿಲ್ತಾರಂತೆ….!!

ಬೆಳಗಾವಿ-ಬಜಾಜ್ ಕಂಪನಿಯ ಬೈಕ್ ಗಳನ್ನು ಬೆಳಗಾವಿ ಜಿಲ್ಲೆಯ ಹಳ್ಳಿ,ಹಳ್ಳಿಗಳಲ್ಲಿ ಮಾರಾಟ ಮಾಡಿ ದಾಖಲೆ ಮಾಡುವ ಮೂಲಕ ಬೆಳಗಾವಿಯ ಯಶಸ್ವಿ ಉದ್ಯಮಿಯಾಗಿರುವ ಮಲ್ಲಿಕಾರ್ಜುನ್ ಜಗಜಂಪಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ವ್ಯಾಟ್ಸಪ್ ಸಂದೇಶ ಕಳುಹಿಸಿರುವ ಅವರು,ನಾನು ಬಿಜೆಪಿಯ ಸದಸ್ಯನೂ ಅಲ್ಲ,ನಾನು ಕಾಂಗ್ರೆಸ್ಸಿನ ಸದಸ್ಯನೂ ಅಲ್ಲ.ನಾನು ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ …

Read More »

ಬೆಳಗಾವಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ..

ಬೆಳಗಾವಿ- ಬೆಳಗಾವಿಯ ರಾಮತೀರ್ಥ ನಗರದಲ್ಲಿ ನವಜಾತ ಶಿಶುವನ್ನು ರಸ್ತೆಯಲ್ಲಿ ಎಸೆದು ಹೋದ ಘಟನೆ ಬೆಳಗಾವಿಯ ರಾಮತೀರ್ಥ ನಗರದಲ್ಲಿ ನಡೆದಿದೆ. ಇಂದು ಬೆಳಗ್ಗೆ ಒಂದು ದಿನದ ಈ ಶಿಶುವನ್ನು ರಾಮತೀರ್ಥ ನಗರದ ರಸ್ತೆಯ ಪಕ್ಕದಲ್ಲೇ ಇರುವ ಗಿಗಂಟೆಗಳಲ್ಲಿ ಎಸೆದು ಹೋಗಿದ್ದು ಈ ಶಿಶು ಶವವಾಗಿ ಪತ್ತೆಯಾಗಿದೆ.ಬಹುಶ ಈ ಶಿಶು ಇಲ್ಲೇ ಉಸಿರು ನಿಲ್ಲಿಸಿದೆ ಎಂದು ಶಂಕಿಸಲಾಗಿದೆ. ಬೆಳಗಾವಿಯ ಮಾಳಮಾರುತಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು.ಈ ಶಿಶು ಯಾರದ್ದು ? ಇದನ್ನು …

Read More »

ಚಾಕುವಿನಿಂದ ಕತ್ತು ಸೀಳಿ ಬಾವನ ಹತ್ಯೆಗೈದ ಬಾಮೈದ…

ಚಿಕ್ಕೋಡಿ-ಚಾಕುವಿನಿಂದ ಬಾವನ ಕತ್ತು ಸೀಳಿ ಬಾಮೈದನೇ ಕೊಲೆ ಮಾಡಿದ ಘಟನೆ,ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ವಿದ್ಯಾನಗರದಲ್ಲಿ ನಡೆದಿದೆ. ಕತ್ತು ಸೀಳಿ ನಿವೃತ್ತ ಯೋಧ ಈರಗೌಡ ಟೋಪಗೋಳ(45) ಹತ್ಯೆ ಮಾಡಲಾಗಿದೆ.ಕೊಲೆಯಾದ ಈರಗೌಡ ಪತ್ನಿಯ ಸಹೋದರ ಸಂಜಯ್ ಭಾಕರೆಯಿಂದ ಕೃತ್ಯ ನಡೆದಿದೆ.ಸೇನೆಯಿಂದ ವಾಪಸ್ ಆದ ಬಳಿಕ ಸ್ಟೋನ್‌ ಕ್ರಷರ್ ಘಟಕ ನಡೆಸುತ್ತಿದ್ದ ಈರಗೌಡ,ಮೂಲತಃ ಜೈನಾಪುರ ಗ್ರಾಮದ ನಿವಾಸಿಯಾಗಿದ್ದ. ಇಂದು ಸಂಜೆ ಬಾವ ಈರಗೌಡ ಭೇಟಿಗೆ ಆಗಮಿಸಿದ್ದ ಸಂಜಯ್,ಈ ವೇಳೆ ಪತ್ನಿ ಮನೆಯೊಳಗೆ ಇದ್ದಾಗ ಚಾಕುವಿನಿಂದ …

Read More »

ಬೆಳಗಾವಿ ಯುವಕನ ಕೊಲೆ ಮಾಡಿದ ಆರೋಪಿಗಳು ಅರೆಸ್ಟ್ …

ಕೊಲೆಯಾದ  ಬೆಳಗಾವಿಯ ನಾಗರಾಜ್ ಗಾಡಿವಡ್ಡರ್… ಬೆಳಗಾವಿ- ಇತ್ತೀಚಿಗೆ ಬೆಳಗಾವಿ ಶಿವಬಸವ ನಗರದಲ್ಲಿ ಬೆಳಗಾವಿಯ ಯುವಕ ನಾಗರಾಜ್ ಗಾಡಿವಡ್ಡರ್ ಕೊಲೆ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು 48 ಗಂಟೆಯೊಳಗಾಗಿ ಭೇದಿಸಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾದ ಮೂರು ಜನ ಹಂತಕರ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ‌.ಈತನ ಬಂಧನಕ್ಕೆ ಬೆಳಗಾವಿ ಪೋಲೀಸರು ಜಾಲ ಬೀಸಿದ್ದು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಿದ್ದಾರೆ. ನಾಗರಾಜ್ ಗಾಡಿವಡ್ಡರ್ ಕೊಲೆಗೆ ಲವ್ ಮ್ಯಾಟರ್ ಕಾರಣ …

Read More »

ಬೆಳಗಾವಿ ಡಿಸಿಪಿಯಾಗಿ ರೋಹನ್ ಜಗದೀಶ್

ಬೆಳಗಾವಿ- ಬೆಳಗಾವಿ ನಗರದ ಡಿಸಿಪಿಯಾಗಿ ರೋಹನ್ ಜಗದೀಶ್ ಐಪಿಎಸ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಬೆಳಗಾವಿ ನಗರ ಪೋಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿ ರೋಹನ್ ಜಗದೀಶ್ ಅವರನ್ನು ನಿಯೋಜಿಸಲಾಗಿದೆ.

Read More »

ಪುಷ್ಪಾ ಸಿನಿಮಾ ಮಾದರಿಯಲ್ಲಿ ಗೋವಾ ಎಣ್ಣೆ ಸ್ಮಗಲೀಂಗ್…!!

ಬೆಳಗಾವಿ- ಪುಷ್ಪಾ ಸಿನಿಮಾ ಸ್ಟೈಲ್ ನಲ್ಲೇ ಗೋವಾ ಸರಾಯಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗೋವಾ – ಬೆಳಗಾವಿ ಮಾರ್ಗವಾಗಿ ಬೇರೆ ಬೇರೆ ರಾಜ್ಯಗಳಿಗೆ ಗೋವಾದಲ್ಲಿ ತಯಾರಿಸಲಾದ ವಿವಿಧ ಬ್ರ್ಯಾಂಡಗಳ ಮದ್ಯದ ಬಾಟಲಿಗಳನ್ನು ಅತ್ಯಂತ ವ್ಯವಸ್ಥಿತವಾಗಿ,ನಿಗೂಢವಾಗಿ ತುಂಬಿದ ಲಾರಿಯನ್ನೇ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಲಾರಿ ಚಾಲಕನನ್ನು ಬಂಧಿಸಿದ್ದಾರೆ. ಲಾರಿಯಲ್ಲಿ ಫ್ಲೈವುಡ್ ಅರ್ದತುಂಬಿ ನಂತರ …

Read More »

ಲಾರಿಯೊಳಗ ಏನೇನ್ ಐತಿ ಅದು ಇವತ್ತ್ ಓಪನ್ ಆಗತೈತಿ..!!

ಬೆಳಗಾವಿ- ನಿನ್ನೆ ಮದ್ಯರಾತ್ರಿ ಗೋವಾ- ಬೆಳಗಾವಿ ಮಾರ್ಗದಲ್ಲಿ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಬೆಂಜ್ ಲಾರಿಯಲ್ಲಿ ಸುತ್ತಮುತ್ತಲು ಫ್ಲೈವುಡ್ ತುಂಬಿ ಲಾರಿ ತುಂಬೆಲ್ಲಾ ಮದ್ಯದ ಬಾಟಲಿಗಳನ್ನೇ ತುಂಬಿ,ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಲಾರಿಯನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಲಾರಿ ತುಂಬೆಲ್ಲಾ ಗೋವಾ ಎಣ್ಣೆ ತುಂಬಿಕೊಂಡಿದ್ದು ಈ ಲಾರಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಈವರೆಗೆ ಓಪನ್ ಮಾಡಿಲ್ಲ.ಇಂದು ಶನಿವಾರ 11-45 ಗಂಟೆಗೆ ಸಮಯಕ್ಕೆ …

Read More »

ಇಂದು ಬೆಳಗಾವಿಯಲ್ಲಿ IAS ಮತ್ತು KAS ತರಬೇತಿ…

ಬೆಳಗಾವಿ- ಬೆಳಗಾವಿ,ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಇಂದು ಶನಿವಾರ (ಸೆ.2) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಐ.ಎ.ಎಸ್ ಹಾಗೂ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಕಾರ್ಯಾಗಾರದ ಲಾಭ ಪಡೆದುಕೊಳ್ಳಿ. ***

Read More »

ಮಹಾರಾಷ್ಟ್ರದ, ಕಿಚ್ಚಿಗೆ ಬೆಂಕಿಗಾಹುತಿಯಾದ, ನಮ್ಮ ಬಸ್‌…!!

ಬೆಳಗಾವಿ-ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿಗಾಹುತಿಯಾದ ಘಟನೆ,ಪಕ್ಕದ ಮಹಾರಾಷ್ಟ್ರದಲ್ಲಿ ನಡೆದಿದೆ. ಔರಂಗಾಬಾದ್ – ಹುಬ್ಬಳ್ಳಿ ಮಾರ್ಗದ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಹಂಚಿರುವ ದುಷ್ಕರ್ಮಿಗಳು,ಮಹಾರಾಷ್ಟ್ರದ ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಗೆ ಬೆಂಕಿ ಹಚ್ಚಿದ್ದಾರೆ.ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ವಡಿಗೋದ್ರಿ ಗ್ರಾಮದ ಹದ್ದಿಯಲ್ಲಿ ಈ ಘಟನೆ ನಡೆದಿದೆ. ಮರಾಠಾ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು,ಶಿಕ್ಷಣ ಮತ್ತು ಉದ್ಯೋಗದಲ್ಲಿ …

Read More »