Breaking News
Home / Breaking News (page 108)

Breaking News

ಇವತ್ತೂ ಹದಿನೈದು ಜನ ಆಸ್ಪತ್ರೆಗೆ ದಾಖಲು..

.ಬೆಳಗಾವಿ-ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಇಬ್ಬರು ಸಾವನ್ನೊಪ್ಪಿದ ಘಟನೆ ನಡೆದ ಬಳಿಕವೂ,ಐದು ದಿನಗಳು ಕಳೆದರೂ ವಾಂತಿ-ಭೇದಿ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಬಾಂತಿ-ಭೇದಿಯಿಂದ ಬಳಲುತ್ತಿದ್ದ ಮುದೇನೂರು ‌ಗ್ರಾಮದ 15 ಮಂದಿ ಇಂದೂ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.ತಾಲೂಕಾಸ್ಪತ್ರೆ, ಬಾಗಲಕೋಟೆ,‌ ಮುಧೋಳ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲು ಮಾಡಲಾಗಿದೆ.ಗುರುವಾರದವರೆಗೆ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 94 ಮಂದಿಗೂ ಚಿಕಿತ್ಸೆ ನೀಡಲಾಗುತ್ತಿದೆ.ನಿರಂತರ ವಾಂತಿ–ಭೇದಿಯ ಕಾರಣ ಹಲವರಲ್ಲಿ ತಲೆದೂರಿದ ಸುಸ್ತು, ಆಯಾಸ ಹೆಚ್ಚಾಗಿದೆ. ಶುಕ್ರವಾರ ಮತ್ತೆ 15 …

Read More »

ಬೆಳಗಾವಿಯಲ್ಲಿ ಭಾವುಕರಾದ ಅಪ್ಪು ಅಭಿಮಾನಿಗಳು

ಬೆಳಗಾವಿ-ಇಂದು ವಿಶ್ವದಾದ್ಯಂತ ಪವರ್‌ಸ್ಟಾರ್, ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿನಯದ ಗಂಧದ ಗುಡಿ ಚಿತ್ರ ಬಿಡುಗಡೆಯಾಗುತ್ತಿದೆ.ಅಪ್ಪು ಅಗಲಿಕೆಯ ನಂತರ ಗಂಧದ ಗುಡಿ ಬಿಡುಗಡೆಯಾಗುವ ಸಂಧರ್ಭದಲ್ಲಿ ಅಪ್ಪು ಅಭಿಮಾನಿಗಳು ಭಾವುಕರಾದರು. ಕುಂದಾನಗರಿ ಬೆಳಗಾವಿಯಲ್ಲಿ ಮೂರು ಚಿತ್ರ ಮಂದಿರಗಳಲ್ಲಿ ಗಂಧದ ಗುಡಿ ಚಿತ್ರ ಬಿಡುಗಡೆ ಆಗುತ್ತಿದೆ.ಸ್ವರೂಪ – ನರ್ತಕಿ, ಕಾರ್ನಿವಲ್, ಹಾಗೂ ಐನಾಕ್ಸ್ ಚಿತ್ರಮಂದಿರಗಳಲ್ಲಿ ಗಂಧದ ಗುಡಿ ಬಿಡುಗಡೆಯಾಗುತ್ತಿದೆ.ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಬೆಳಗ್ಗೆ 10:45ಕ್ಕೆ ಮೊದಲ ಶೋ ನಡೆಯಿತು‌ ನವವಧುವಿನಂತೆ ಚಿತ್ರಮಂದಿರಗಳನ್ನು ಸಿಂಗರಿಸಿರುವ …

Read More »

ಲಂಡನ್ ಗೆ ಮುಟ್ಟಲಿರುವ ಬೆಳಗಾವಿ ರಾಜ್ಯೋತ್ಸವ..!!

ಬೆಳಗಾವಿ-ಬೆಳಗಾವಿ ರಾಜ್ಯೋತ್ಸವ ಅಂದ್ರೆ ಸಾಕು ,ಕನ್ನಡದ ಹುಡುಗರು ತಾಯಿ ಭುವನೇಶ್ವರಿಯ ತೇರು ಎಳೆದು ಹುಚ್ಚೆದ್ದು ಕುಣೀತಾರೆ,ಲಕ್ಷಾಂತರ ಕನ್ನಡಿಗರು ಒಂದು ಕಡೆ ಸೇರಿ ಕನ್ನಡದ ಹಬ್ಬವನ್ನು ಆಚರಿಸುತ್ತಾರೆ. ಬೆಳಗಾವಿಯ ಕಣ,ಕಣವೂ ಕನ್ನಡ,ಕನ್ನಡ ಎನ್ನುವ ಹಾಗೆ ಇಲ್ಲಿ ರಾಜ್ಯೋತ್ಸವ ನಡೆಯುತ್ತದೆ. ಈಬಾರಿಯ ರಾಜ್ಯೋತ್ಸವದ ಸಂಬ್ರಮ ಲಂಡನ್ ವರೆಗೂ ಮುಟ್ಟಲಿದೆ. ಅದು ಹೇಗೆ ಅಂದ್ರೆ,ಬೆಳಗಾವಿಯ ರಾಜ್ಯೋತ್ಸವದಲ್ಲಿ ಈ ಬಾರಿ ಹೊಸ ಇತಿಹಾಸ‌ವೊಂದು ನಿರ್ಮಾಣವಾಗಲಿದೆ. ೧೦,೦೦೦ ಅಡಿಗಳ ಕರ್ನಾಟಕದ ಬಾವುಟದ ಮೆರವಣಿಗೆಯನ್ನು ನಗರದ ರಾಣಿ ಚೆನ್ನಮ್ಮ …

Read More »

ಬೆಳಗಾವಿಯಲ್ಲಿ, ಹಿರೇಮಠದ ಜೋಳಿಗೆಯಿಂದ ಕನ್ನಡಿಗರಿಗೆ ಹೋಳಿಗೆ….!!

ಬೆಳಗಾವಿ – ಬೆಳಗಾವಿಯಲ್ಲಿ ಅಕ್ಟೋಬರ್ ತಿಂಗಳಲ್ಲಿಯೇ ರಾಜ್ಯೋತ್ಸವದ ತಯಾರಿ ಶುರುವಾಗುತ್ತದೆ.ಕನ್ನಡದ ಹಬ್ಬ ಎಂದಾಗ ನೆನಪಾಗೋದು ಹಿರೇಮಠದ ಹೋಳಿಗೆ ಊಟ. ಹೌದು ರಾಜ್ಯೋತ್ಸವದ ದಿನ ತಾಯಿ ಭುವನೇಶ್ವರಿಯ ತೇರು ಎಳೆಯಲು ಲಕ್ಷಾಂತರ ಜನ ಸೇರ್ತಾರೆ, ಬೆಳಗಾವಿಯ ಹಿರೇಮಠದ ಜೋಳಿಗೆಯಿಂದ ಕನ್ನಡದ ಹಬ್ಬದಲ್ಲಿ ಪಾಲ್ಗೊಂಡ ಕನ್ನಡದ ಭಕ್ತರಿಗೆ ಹೋಳಿಗೆ ಊಟದ ವ್ಯವಸ್ಞೆ ಮಾಡ್ತಾರೆ. ಬೆಳಗಾವಿಯಲ್ಲಿ ನಡೆಯುವ ಅದ್ಧೂರಿಯ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಪ್ರತಿ ವರ್ಷ …

Read More »

ಖಾನಾಪುರ ಕೋರ್ಟ್‌ಗೆ ಹಾಜರಾದ ಮಹಾರಾಷ್ಟ್ರದ ಶಿವಸೇನೆ ಮುಖಂಡ

ಬೆಳಗಾವಿ-2006ರಲ್ಲಿ ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿ MES ಪುಂಡರು ಮಾಡಿದ ಗಲಭೆ ಪ್ರಕರಣಕ್ಕೆ ಸಂಭಂದಿಸಿದಂತೆ,ಖಾನಾಪುರ ಕೋರ್ಟ್‌ಗೆ, ಮಹಾರಾಷ್ಟ್ರದ ಶಿವಸೇನೆ ಮುಖಂಡ ಹಾಜರಾಗಿದ್ದಾರೆ.ಶಿವಸೇನೆ ಏಕನಾಥ ಶಿಂಧೆ ಬಣದ ನಾಯಕ ರಾಮದಾಸ ಖದಂ ಖಾನಾಪುರ ಕೋರ್ಟ್‌ಗೆ ಇಂದು ಗುರುವಾರ ಹಾಜರಾಗಿದ್ದಾರೆ.ರಾಮದಾಸ ಕದಂ, ಕೇಂದ್ರದ ಮಾಜಿ ಸಚಿವರಾಗಿದ್ದಾರೆ. 2006ರ ಅಕ್ಟೋಬರ್ 26ರಂದು ಖಾನಾಪುರದಲ್ಲಿ ಎಂಇಎಸ್ ಯುವ ಮೇಳಾವ್ ನಡೆದಿತ್ತು,ಖಾನಾಪುರದ ತಾರಾರಾಣಿ ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದ MES ಸಮಾವೇಶದಲ್ಲಿ ರಾಮದಾಸ್ ಕದಂ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ …

Read More »

ಹೆಂಡತಿಯನ್ನು ಹಾಸಿಗೆಯಲ್ಲೇ ಹೆಣವಾಗಿಸಿದ ಗಂಡ…

ಬೆಳಗಾವಿ-ಊಟ ಮಾಡಿ ಮಲಗಿದ್ದ ಹೆಂಡತಿಯನ್ನ ಪಾಪಿ ಪತಿ ಹಾಸಿಗೆಯಲ್ಲಿಯೇ ಹೆಣವಾಗಿಸಿದ ಘಟನೆ ನಡೆದಿದೆ.ಮದ್ಯಪಾನ ಮಾಡಿದ ಪತಿ ಹೆಂಡತಿಯನ್ನೇ ಹತ್ಯೆಮಾಡಿದ ಘಟನೆ,ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ನಡೆದಿದೆ.ಯಲ್ಲವ್ವ ಪಾಂಡುರಂಗ ಹಾರೂಗೇರಿ(೫೫) ಗಂಡನಿಂದ ಕೊಲೆಯಾದ ಪತ್ನಿ,ಪಾಂಡುರಂಗ ಹಾರೂಗೇರಿ ಹೆಂಡತಿಯನ್ನು ಕೊಲೆ ಮಾಡಿದ ಪತಿ. ಹೆಂಡತಿಯನ್ನು ಕೊಂದು ತಲೆ ಮರೆಸಿಕೊಂಡ ಪತಿ ಯನ್ನು ಪೋಲೀಸರು ಪತ್ತೆ ಮಾಡುತ್ತಿದ್ದುಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.ಮೂಡಲಗಿ ಪೊಲೀಸ್ …

Read More »

ಈ ರೀತಿಯ ಓಟ ನಡೆಯುವುದು,ಬೆಳಗಾವಿಯಲ್ಲಿ ಮಾತ್ರ…!!

ಬೆಳಗಾವಿಯಲ್ಲಿ ಗಮನ ಸೆಳೆದ ಎಮ್ಮೆಗಳ ಓಟ… ಬೆಳಗಾವಿ-ದೀಪಾವಳಿಯ ಪಾಡ್ಯದ ದಿನವೇ ಕುಂದಾನಗರಿಯಲ್ಲಿ ಎಮ್ಮೆಗಳ ಓಟ ಎಲ್ಲರ ಗಮನ ಸೆಳೆದಿದೆ. ಬೆಳಗಾವಿಯ ಚವಾಟ್ ಗಲ್ಲಿ, ಶೆಟ್ಟಿ, ಗವಳಿ ಗಲ್ಲಿಗಳಲ್ಲಿ ಎಮ್ಮೆಗಳ ಓಟ ಸ್ಪರ್ಧೆ ನಡೆಯಿತು.ಎಮ್ಮೆಗಳ ಓಟದ‌ ಸ್ಪರ್ಧೆಗೆ ಬಿಜೆಪಿ ಶಾಸಕ ಶಾಸಕ‌ ಅನಿಲ್ ಬೆನಕೆ ಚಾಲನೆ ನೀಡಿದ್ರು.ದೀಪಾವಳಿ ಹಬ್ಬದ ಪ್ರಯುಕ್ತ ಗವಳಿ ಸಮುದಾಯದಿಂದ ಎಮ್ಮೆಗಳ ಓಟದ ಸ್ಪರ್ಧೆ ಆಯೋಜನೆ ಮಾಡುವದು ಇಲ್ಲಿಯ ಸಂಪ್ರದಾಯವಾಗಿದೆ.ಉತ್ತರ ಕರ್ನಾಟಕದ ಬೆಳಗಾವಿಯಲ್ಲಿ ವಿಶೇಷ ಆಚರಣೆ ಮಾಡಲಾಗುತ್ತದೆ. ಎಮ್ಮೆಗಳನ್ನು …

Read More »

ಬೆಳಗಾವಿ ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ವೃದ್ಧ ಸಾವು…

ಬೆಳಗಾವಿ-ಕುಡಿಯುವ ನೀರಿನ ಪೈಪ್ ಒಡೆದು ಅದರಲ್ಲಿ ಚರಂಡಿ ನೀರು ಮಿಕ್ಸ್ ಆಗಿ ಅವಘಡ ಸಂಭವಿಸಿದೆ.ಇದೇಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಓರ್ವ ವೃದ್ಧ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ಮುದೇನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಒಟ್ಟು 94 ಜನರು ಅಸ್ವಸ್ಥಗೊಂಡಿದ್ದಾರೆ.ನಾಲ್ವರ ಸ್ಥಿತಿ ಗಂಭೀರಾಗಿದೆ.ಅವರನ್ನು ಬಾಗಲಕೋಟ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಮುದೇನೂರು ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಯ ಪೈಪ್ ಒಡೆದು ಅವಘಡ ಸಂಭವಿಸಿದೆ.ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ …

Read More »

ಅದ್ಧೂರಿಯಾಗಿ ಕಿತ್ತೂರು ಉತ್ಸವ ಪಾರು..ಸ್ಥಳೀಯ ಜನಪ್ರತಿನಿಧಿಗಳೇ ಗೈರು…!!!

ಮೊದಲ ಬಾರಿ ಜಿಲ್ಲಾ ಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಆಚರಿಸಲು ಸರ್ಕಾರ ನಿರ್ಧರಿಸಿತ್ತು. ಆದ್ರೆ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ನಿಧನ ಹಿನ್ನೆಲೆ ಮೂರು ದಿನಗಳ ಉತ್ಸವ ಎರಡು ದಿನಕ್ಕೆ ಸೀಮಿತಗೊಳಿಸಲಾಗಿತ್ತು. ಈ ಬಾರಿಯ ಕಿತ್ತೂರು ಉತ್ಸವವನ್ನು ಜನಪ್ರತಿನಿಧಿಗಳ ಗೈರಾಗಿದ್ದರೂ ರಾಣಿ ಚನ್ನಮ್ಮಾಜಿಯ ಅಭಿಮಾನಿಗಳು ಉತ್ಸವವವನ್ನು ಯಶಸ್ವಿಗೊಳಿಸಿದರು. ಕಿತ್ರೂರು ಉತ್ಸವದ ಅಂಗಳದಿಂದ ಸೋಮವಾರ ಬೆಳಗ್ಗೆ ಅದ್ಧೂರಿ ಮೆರವಣಿಗೆ ಮೂಲಕ ನಾಂದಿ ಹಾಡಿದ್ದ ಉತ್ಸವದಲ್ಲಿ ಎರಡು ದಿನ ಇನ್ನಿಲ್ಲದಂತೆ …

Read More »

ಕಿತ್ತೂರು ಉತ್ಸವ ನೋಡಿ ಮರಳುವಾಗ ಅಪಘಾತಕ್ಕೆ ಇಬ್ಬರ ಬಲಿ….

ಬೆಳಗಾವಿ-ಕಿತ್ತೂರು ಉತ್ಸವ ನೋಡಿ ಹಿಂದಿರುಗುವಾಗ ಭೀಕರ ರಸ್ತೆ ಅಪಘಾತ,ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಕಿತ್ತೂರು ಪಟ್ಟಣದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೇಲೆ ಈ ಘಟನೆ ನಡೆದಿದ್ದು,ಖಾನಾಪುರ ತಾಲೂಕಿನ ಕೊರವಿಕೊಪ್ಪ ಗ್ರಾಮದ ಬಾಳಪ್ಪ ತಳವಾರ (33), ಕರೆಪ್ಪ ತಳವಾರ (36) ಮೃತರು ಎಂದು ಗುರುತಿಸಲಾಗಿದೆ. ಹೆದ್ದಾರಿ ದಾಟುತ್ತಿದ್ದವರ ಮೇಲೆ ಕಾರು ಹರಿದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮಧ್ಯರಾತ್ರಿ 12 ಕ್ಕೆ ಬೆಳಗಾವಿಯಿಂದ ಧಾರವಾಡ ಕಡೆಗೆ ಕಾರು ಹೊರಟಿದ್ದಾಗ ಅವಘಡ …

Read More »