ಬೆಳಗಾವಿ-ಜಗತ್ತು ಎಲ್ಲಿ ಹೊರಟಿದೆ ನೋಡಿ ಜನ ದುಡ್ಡಿಗಾಗಿ ಏನೆಲ್ಲಾ ಮಾಡ್ತೀದ್ದಾರೆ ನೋಡಿ,50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದಿದ್ದಾನೆ.ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ. ಮೃತನ ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದ್ದ ಘಟನೆ ತನಿಖೆಯ ಬಳಿಕ ಬೆಳಕಿಗೆ ಬಂದಿದೆ. ಹಣಮಂತ ಗೋಪಾಲ ತಳವಾರ(35) ಕೊಲೆಯಾಗಿದ್ದ ದುರ್ದೈವಿ. ಬಸವರಾಜ ತಳವಾರ ತನ್ನ …
Read More »ಸಾಲಗಾರರ ಕಾಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೂಲಿ ಕಾರ್ಮಿಕ.
ಬೆಳಗಾವಿ-ಸಾಲಗಾರರ ಕಾಟಕ್ಕೆ ಬೇಸತ್ತು ಕೂಲಿ ಕಾರ್ಮಿಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ,ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.ದಿಗ್ಗೇವಾಡಿ ಗ್ರಾಮದ ಅಪ್ಪಾಸಾಬ ಕಂಬಾರ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಘಟನೆ ನೆದಿದ್ದು,ಆತ್ಮಹತ್ಯೆಗೂ ಮುನ್ನ ಸೆಲ್ಪಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ.ರೇಖಾ ಸಮಗಾರ ಹಾಗೂ ಭೀಮು ವಾಳಕೆ ಹೆಸರು ಹೇಳಿ ಸೆಲ್ಪಿ ವಿಡಿಯೋ ಮಾಡಿದ ಬಳಿಕ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಬ್ಬರಿಂದ ಅಂದಾಜು 50 ಸಾವಿರ ಸಾಲ ಪಡೆದಿದ್ದ ಅಪ್ಪಾಸಾಬ,50 ಸಾವಿರಕ್ಕೆ …
Read More »ಬ್ಯಾಂಕ್ ಸಿಬ್ಬಂಧಿಯಿಂದಲೇ ಎಟಿಎಂ ಕಳ್ಳತನ, ಶಾಕ್ ಆದ ಪೋಲೀಸರು
ಬೆಳಗಾವಿ–ಎಚ್ಡಿಎಫ್ಸಿ ಬ್ಯಾಂಕ್ ಸಿಬ್ಬಂದಿಯಿಂದಲೇ ಎಟಿಎಂ ಕಳ್ಳತನ ಮಾಡಿರುವ ಕೃತ್ಯ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. HDFC ಎಟಿಎಂ ನಲ್ಲಿ ಹಣ ಎಗರಿಸಿದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ.ಎಂಟು ಲಕ್ಷ ಹಣ ಎಟಿಎಂ ನಿಂದ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಖಾಕಿ ಬಲೆಗೆ ಬಿದ್ದಿದ್ದಾನೆ.ಬೆಳಗಾವಿ ನಗರದ ಆರೋಪಿ ಕೃಷ್ಣಾ ಸುರೇಶ್ ದೇಸಾಯಿ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ಕೃಷ್ಣಾ ಎಟಿಎಂಗೆ ಹಣ ಹಾಕುವ ಕೆಲಸ ಮಾಡುತ್ತಿದ್ದ.ತನ್ನ ಬಳಿಯೇ ಇರ್ತಿದ್ದ ಎಟಿಎಂ ಮಷೀನ್ ಕೀಯನ್ನು …
Read More »ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!
ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ ಮುಸ್ಲಿಂ ಸಮಾಜವನ್ನು ಸಂಘಟಿಸಿ ಆಯೋಗಗಳ ಎದುರು ಎಲ್ಲ ಮುಸ್ಲೀಂರನ್ನು ಹಾಜರುಪಡಿಸಿ, ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಪ್ರತಿಪಾದಿಸಿ ಕನ್ನಡದ ಹಿತವನ್ನು ಕಾಪಾಡಿದ ಬೆಳಗಾವಿಯ ನೂರುದ್ದೀನ್ ಸೇಠ ಅವರನ್ನು ಬೆಳಗಾವಿಯ ಕನ್ನಡಿಗರು,ರಾಜ್ಯದ ಜನ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ, ನೂರುದ್ದೀನ್ ಸೇಠ ಅವರ ಸುಪುತ್ರರಾದ ಫಿರೋಜ್ ಸೇಠ ಅವರ ನಂತರ …
Read More »ಲಕ್ಷ ರೂ ಸಾಲದಲ್ಲಿ, ಫಿಫ್ಟೀ ,ಗುಳುಂ, ಸಾವಿರಾರು ಮಹಿಳೆಯರು ಗರಂ….!!!!
ಮನೆಗೆ ಬಂದು ಒಂದು ಲಕ್ಷ ರೂ ಸಾಲ ಕೊಡ್ತಿವಿ ಅಂತಾ ಹೇಳಿದ್ರೆ ಯಾರಾದ್ರೂ ಬೇಡ ಅಂತಾರಾ…? ಮೈಕ್ರೋ ಫೈನಾನ್ಸ್ ಮೂಲಕ ಸಾಲ ಕೊಡಿಸಿ ಐವತ್ತು ಸಾವಿರ ನುಂಗಿ ನೀರು ಕುಡಿದು ಐವತ್ತು ಸಾವಿರ ರೂ ಸಾಲಗಾರರಿಗೆ ಮುಟ್ಟಿಸಿ ಮಹಿಳೆಯೊಬ್ಬಳು ಕೋಟ್ಯಾಂತರ ರೂ ವಂಚನೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಅವರೆಲ್ಲರೂ ಕೃಷಿ ಮಹಿಳಾ ಕಾರ್ಮಿಕರು, ಕೂಲಿ ಕೆಲಸವನ್ನೇ ನಂಬಿ ಜೀವನ ಮಾಡ್ತಿದ್ದವರು ಅಂತಹ ಮುಗ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ ವಂಚಕ …
Read More »ಯತ್ನಾಳಗೆ ನೋಟೀಸ್, ರಮೇಶ್ ಜಾರಕಿಹೊಳಿ ರಿಯಾಕ್ಷನ್
ಬೆಳಗಾವಿ-ಬಸನಗೌಡ ಯತ್ನಾಳಗೆ ಬಿಜೆಪಿ ಕೇಂದ್ರ ಶಿಸ್ತು ಸಮೀತಿಯಿಂದ ಶೋಕಾಸ್ ನೋಟಿಸ್ ಹೊರಡಿಸಲಾಗಿದ್ದು ಈ ವಿಚಾರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗುಡುಗಿದ ರಮೇಶ್ ಜಾರಕಿಹೊಳಿ,ಯತ್ನಾಳಗೆ ಶೋಕಾಸ್ ನೋಟಿಸ್ ಇಂದು ಬಂದಿದ್ದಲ್ಲ, ಎರಡು ದಿನಗಳ ಹಿಂದೆಯೇ ಬಂದಿದೆ,ಮಾಧ್ಯಮಗಳಲ್ಲಿ ಇಂದು ಪ್ರಚಾರ ಆಗಿದೆ.ವಿಜಯೇಂದ್ರಗೆ ರಾಜ್ಯಾದ್ಯಕ್ಷ ಸ್ಥಾನ ನಿಭಾಯಿಸಲು ಆಗುವುದಿಲ್ಲ,ತಕ್ಷಣವೇ ಅವರನ್ನು ಬದಲಾವಣೆ ಮಾಡಬೇಕೆಂದ ರಮೇಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಬಿ.ಎಸ್. ಯಡಿಯೂರಪ್ಪ ಹುಟ್ಟು ಹೋರಾಟಗಾರ,ಆದರೆ …
Read More »ಎರಡು ಕರಡಿ ದಾಳಿ ಮಾಡಿ ಕಾಲು ಕಟ್ ಮಾಡಿದ್ರೂ, ಆತ ಬದುಕಿದ್ದು ಪವಾಡ….!!
ಬೆಳಗಾವಿ – ಅಜ್ಜ ಎಂದಿನಂತೆ ದನ ಮೇಯಿಸಲು ತನ್ನ ಗದ್ದೆಗೆ ಹೋಗಿದ್ದ ಸಂಧರ್ಭದಲ್ಲಿ ಎರಡು ಕರಡಿಗಳು ಆತನ ಮೇಲೆ ದಾಳಿ ಮಾಡಿ ಕಾಲು ಕಟ್ ಮಾಡಿದರೂ ಆತ ಮರ ಏರಿ ಬದುಕಿದ್ದು ಪವಾಡವೇ ಸರಿ, ಈ ಘಟನೆ ನಡೆದಿದ್ದು ಖಾನಾಪೂರ ತಾಲ್ಲೂಕಿನ ಕಣಕುಂಬಿ ಹತ್ತಿರದ ಮಾನಗಾಂವ್ ಗ್ರಾಮದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮೇಲೆ ಎರಡು ಕರಡಿ ದಾಳಿ ನಡೆಸಿ ರೈತನ ಕಾಲು ತುಂಡು ತುಂಡು ಮಾಡಿವೆ.ಬೆಳಗಾವಿ ಜಿಲ್ಲೆಯ ಖಾನಾಪುರ …
Read More »ಮದ್ಯರಾತ್ರಿ ಸಾರಾಯಿ ಹುಡುಕಾಡದಿದ್ದರೆ ಅವರು ಸಿಗುತ್ತಿರಲಿಲ್ಲ……!!
ವೈನ್ ಇಸ್ ಇನ್…ಮೈಂಡ್ ಇಸ್ ಔಟ್ ಆತ ಹೇಳ್ತಾರೆ ಅದು ಸತ್ಯ…. ಆತ ಕಂಠಪೂರ್ತಿ ಕುಡುದಿದ್ದ ಬೆಳಗಾವಿಗೆ ಬರಲು ಬಸ್ ಏರಿದ್ದ ಆದ್ರೆ ನಶೆಯಲ್ಲಿ ಆತ ಬೆಳಗಾವಿ ಬಂತು ಅಂತ ತಿಳಿದು ದಾರಿ ಮದ್ಯದ ಊರಿನಲ್ಲಿ ಇಳಿದಿದ್ದ ಅದು ಬೆಳಗಾವಿ ಅಲ್ಲ ಎಂದು ಆತನಿಗೆ ತಿಳಿದಾಗ ದಾರಿಯಲ್ಲಿ ಹೋಗುವ ಬೈಕ್ ತಡೆದು ಲೀಫ್ಟ್ ಕೇಳಿದ್ದ ನಿಮಗೆ ಎಷ್ಟು ಬೇಕಾದ್ರೂ ಹಣ ಕೊಡ್ತೀನಿ ನನ್ನನ್ನು ಬೆಳಗಾವಿಗೆ ಮುಟ್ಟಿಸಿ ಎಂದು ಕೇಳಿಕೊಂಡಿದ್ದ ಲಿಫ್ಟ್ …
Read More »ಹಾಡು ಹಗಲೇ ಯುವಕನ ಬರ್ಬರ ಹತ್ಯೆ.
ಬೆಳಗಾವಿ- ಹಾಡು ಹಗಲೇ ಯುವಕನ ಬರ್ಬರ ಹತ್ಯೆ ಮಾಡಿದ ಘಟನೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಹೊರ ವಲಯದಲ್ಲಿ ನಡೆದಿದೆ. ಸೋಹಿಲ್ ಅಹ್ಮದ್ ಕಿತ್ತೂರು(17) ಮೃತ ಯುವಕನಾಗಿದ್ದು ಮುರುಗೋಡು ಹೊರ ವಲಯದಲ್ಲಿ ಚಾಕುವಿನಿಂದ ಎಲ್ಲೆಂದರಲ್ಲಿ ಇರಿದು ಕೊಲೆ ಮಾಡಲಾಗಿದೆ.ಗ್ರಾಮದಲ್ಲಿ ಎಗ್ ರೈಸ್ ಅಂಗಡಿ ಇಟ್ಟುಕೊಂಡಿದ್ದ ಯುವಕನ ಕೊಲೆಯಾಗಿದೆ. ಐವರು ಯುವಕರನಿಂದ ಕೊಲೆ ಮಾಡಿರೋ ಶಂಕೆ ವ್ಯಕ್ತವಾಗಿದೆ.ಈ ಹಿಂದೆ ಯುವಕರಿಂದ ಮೃತನಿಗೆ ಕೊಲೆ ಬೆದರಿಕೆ ಬಂದಿದ್ದ ಬಗ್ಗೆ ಮಾಹಿತಿ …
Read More »ಶೆಟ್ಟರ್ ಶ್ರಮದಾನ ಬೆಳಗಾವಿಗೆ 100 ಕೋಟಿ ಅನುದಾನ….!!!
ಬೆಳಗಾವಿ -ಬೆಳಗಾವಿ ಮಹಾನಗರಕ್ಕೆ ವಂದೇ ಭಾರತ್ ರೈಲು ಬಿಡುವದು,ಸವದತ್ತಿ ಯಲ್ಲಮ್ಮ ದೇವಿಯ ಪುಣ್ಯಕ್ಷೇತ್ರಕ್ಕೆ ರೈಲು ಮಾರ್ಗ ನಿರ್ಮಿಸುವದು ಸೇರಿದಂತೆ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ರಾಜಧಾನಿ ದೆಹಲಿಯಲ್ಲಿ ಸಚಿವರನ್ನು ಭೇಟಿ ಮಾಡುತ್ತಲೇ ಇದ್ದು, ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದೇವಸ್ಥಾನದ ಅಭಿವೃದ್ಧಿಗೆ 100 ಕೋಟಿ ರೂ ವಿಶೇಷ ಅನುದಾನ ಮಂಜೂರು ಮಾಡಿಸುವಲ್ಲಿ ಶೆಟ್ಟರ್ ಯಶಸ್ವಿ ಆಗಿದ್ದಾರೆ.ಸುಕ್ಷೇತ್ರ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಕೇಂದ್ರ ಪ್ರವಾಸೋದ್ಯಮ …
Read More »