Breaking News
Home / Breaking News (page 172)

Breaking News

ಅಭಯ ಪಾಟೀಲ್ ಫೇಸ್ ಬುಕ್ ಪೇಜ್ ಹ್ಯಾಕ್…..!!!

ಬೆಳಗಾವಿ-ಸಾಮಾಜಿಕ ಕಾರ್ಯಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟವನ್ನು ಕೆಲವು ಕಿಡಗೇಡಿಗಳು ಹ್ಯಾಕ್ ಮಾಡಿದ್ದಾರೆ. ಅಭಯ ಪಾಟೀಲ ಎಂಬ ಹೆಸರಿನಲ್ಲಿದ್ದ ವೇರಿಫೈಡ್ ಪೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಕುರಿತು ಶಾಸಕ ಅಭಯ ಪಾಟೀಲ ಬೆಳಗಾವಿಯ ಸೈಬರ್ ಕ್ರೈಂ, ಸಿಇಎನ್ ಪೋಲೀಸ್ ಠಾಣೆಗೆ ದೂರು ನೀಡಿದ್ದು ಇನೆಸ್ಪೆಕ್ಟರ್ ಗಡ್ಡೇಕರ ಅವರು ದೂರು ದಾಖಲಿಸಿಕೊಂಡು ವಿಚಾರಣೆ …

Read More »

ಬೆಳಗಾವಿ ಜಿಲ್ಲೆಯ ಸಾವಿರಾರು ಪ್ರಕರಣಗಳು ಇತ್ಯರ್ಥ..

ಬೆಳಗಾವಿ-ರಾಷ್ಡ್ರೀಯ ಲೋಕ ಅದಾಲತ್ ಅಂಗವಾಗಿ ಬೆಳಗಾವಿ ಜಿಲ್ಲೆಯ 81 ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಸಾವಿರಾರು ಪ್ರಕರಣಗಳು ಒಂದೇ ದಿನ ಇತ್ಯರ್ಥ ವಾಗಿವೆ. ಬೆಳಗಾವಿ ಜಿಲ್ಲೆಯಾದ್ಯಂತ 81 ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಅದಾಲತ್‌ಗೆ ಕಕ್ಷಿದಾರರು ಮತ್ತು ನ್ಯಾಯವಾದಿಗಳಿಂದ ಉತ್ತಮ ಸಹಕಾರ ದೊರೆತಿದ್ದು, ಒಂದೇ ದಿನದಲ್ಲಿ 12514 ವಿವಿಧ ಕೇಸ್‌ಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ ಜೋಶಿ ಅವರು ತಿಳಿಸಿದ್ದಾರೆ. ಶನಿವಾರ ಸಂಜೆ ಪತ್ರಿಕಾ ಪ್ರಕಟಣೆಯ …

Read More »

ಭೂಮಿ ಪೂಜೆ ನೆರವೇರಿಸಿ,ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದ ಶಾಸಕಿ …

ಖಾನಾಪೂರ ಬಸ್ ನಿಲ್ಧಾಣ ಶಂಕು ಸ್ಥಾಪನೆ ವಿಚಾರದಲ್ಲಿ ಬಿಜೆಪಿ- ಕಾಂಗ್ರೆಸ್ ನಡುವೆ ಕಿತ್ತಾಟ ನಡೆದಿದೆ.ಇದರ ನಡುವೆ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಬೆಂಬಲಿಗರೊಂದಿಗೆ ಉಸ್ತುವಾರಿ ಸಚಿವರ ಅನುಪಸ್ಥಿತಿಯಲ್ಲಿ ಶಂಕು ಸ್ಥಾಪನೆ ನೆರವೇರಿಸಿ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದಿದ್ದಾರೆ. 2020 ರಲ್ಲಿ ಖಾನಾಪೂರ ಬಸ್ ನಿಲ್ಧಾಣದ ಕಾಮಗಾರಿಗೆ 7.35 ಕೋಟಿ ಹಣ ಮಂಜೂರಾಗಿತ್ತು 2022 ಜನೇವರಿಯಲ್ಲಿ ಟೆಂಡರ್ ಪ್ರಕ್ರಿಯೆ ಮುಗಿದು ಗುತ್ತಿಗೆ ದಾರನಿಗೆ ವರ್ಕ್ ಆರ್ಡರ್ ಕೊಡಲಾಗಿತ್ತು.ಆದ್ರೆ ಕಾಮಗಾರಿ ಶುರು …

Read More »

ಡಿಸಿಸಿ ಬ್ಯಾಂಕ್ ಲೂಟಿ ಮಾಡಿದ ದರೋಡೆಕೋರ ಯಾರು ಗೊತ್ತಾ…???

ಬೆಳಗಾವಿ- ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಮುರುಗೋಡ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣವ‌ನ್ನು ಭೇಧಿಸುವಲ್ಲಿ ಬೆಳಗಾವಿ ಪೋಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಮುರುಗೋಡ ಡಿಸಿಸಿ ಬ್ಯಾಂಕಿನಲ್ಲಿ ನಕಲಿ ಕೀ ಉಪಯೋಗಿಸಿ ಸುಮಾರು ನಾಲ್ಕು ಕೋಟಿಗೂ ಅಧಿಕ ನಗರದು 4.41 ಕೋಟಿ ಮತ್ತು ಬ್ಯಾಂಕಿನಲ್ಲಿ ಅಡವಿಟ್ಟ 1.5 ಕೋಟಿ ರೂ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಮಾರ್ಚ್ 6 ರಂದು ನಡೆದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು …

Read More »

ಗಾಂಜಾ ಸೇಲ್ ಮಾಡಾಕ್ ಕೊಲ್ಹಾಪೂರದಿಂದ ಬೆಳಗಾವಿಗೆ ಬರಾತಾರ್ರೀ…!!!

ಬೆಳಗಾವಿ- ನಗರ ಪೋಲೀಸ್ ಆಯುಕ್ತ ಡಾ. ಬೋರಲಗಯ್ಯ ಅವರು ಗಾಂಜಾ ಮಾರಾಟ ಮತ್ತು ಮಾದಕ ವಸ್ತುಗಳ ಮಾರಾಟದ ವಿರುದ್ಧ ಸಮರ ಸಾರಿದ್ದಾರೆ. ಬೆಳಗಾವಿ ಮಹಾನಗರವನ್ನು ಗಾಂಜಾ,ಪನ್ನಿದಂತಹ ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ನಗರ ಪೋಲೀಸ್ ಆಯುಕ್ತರು ಬೆಳಗಾವಿ ಮಹಾನಗರದಲ್ಲಿ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದೆ,ಅದಕ್ಕೆ ಯುವಕರು ಬಲಿಯಾಗುತ್ತಿದ್ದಾರೆ,ಎನ್ನುವ ಅಂಶವನ್ನು ಅತ್ಯಂತ ಗಂಭೀರವಾಗಿ ತೆಗೆದುಕೊಂಡಿರುವ ಅವರು,ಗಾಂಜಾ ವಿರುದ್ಧ ಸಮರ ಸಾರಿದ್ದಾರೆ. ನಗರ ಪೋಲೀಸ್ ಆಯುಕ್ತರ ವಿಶೇಷ ಕಾಳಜಿಯಿಂದಾಗಿ ಬೆಳಗಾವಿ …

Read More »

ಅಪಂಗ, ಮಾಡಲು ಸುಪಾರಿ ಕೊಟ್ಟ ಲಫಂಗ್ ಅರೆಸ್ಟ್….!

ಬಂಧಿತ ಆರೋಪಿಗಳ ಪಟ್ಟಿ ಇದು ಬೆಳಗಾವಿ- ಜಯಂತ ತಿಣೇಕರ ಯಾರಿಗೆ ಗೊತ್ತಿಲ್ಲ, ಅವರೊಬ್ಬ ದಿಟ್ಡ ಹೋರಾಟಗಾರ,ಸರ್ಕಾರಿ ಜಮೀನುಮಾರಾಟಕ್ಕೆ ಸಮಂಧಿಸಿದಂತೆ ಪ್ರಶ್ನೆ ಮಾಡಿದ ಜಯಂತ್ ತಿಣೇಕರ ಮೇಲೆ ಹಲ್ಲೆ ಮಾಡಲು ಸುಫಾರಿ ಕೊಟ್ಟ ಲಫಂಗ್ ಈಗ ಅರೆಸ್ಡ್ ಆಗಿದ್ದಾನೆ. ಖಾನಾಪೂರದಲ್ಲಿ ಸರ್ಕಾರಿ ಜಮೀನನ್ನು ಲಕ್ಷ್ಮಣ ಶೆಟ್ಟಿ ಎಂಬಾತ ಖರೀಧಿ ಮಾಡಿದ್ದ , ಕಾನೂನು ಬಾಹಿರವಾಗಿ ಜಮೀನು ಮಾರಾಟ ಮಾಡಲಾಗಿದೆ ಎಂದು ಹೋರಾಟಗಾರ ಜಯಂತ್ ತಿಣೇಕರ ಪ್ರಶ್ನಿಸಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಜಯಂತ್ …

Read More »

ಶಿಕ್ಷಣ ಸಂಸ್ಥೆಗಳು ಕೇವಲ ಪದವಿ ನೀಡುವುದಕ್ಕೆ ಸೀಮಿತವಾಗಬಾರದು ಅಂತಾ ಮಂತ್ರಿಗಳೇ ಹೇಳಿದ್ರು..

*ವಿಟಿಯುನಲ್ಲಿ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆ, ಸಂಶೋಧನೆಯ ಸಂಗಮ: ಅಶ್ವತ್ಥನಾರಾಯಣ* *ಬೆಳಗಾವಿಯಲ್ಲಿ ಜರುಗಿದ 21ನೇ ಘಟಿಕೋತ್ಸವದಲ್ಲಿ ಸಚಿವರ ಮಾತು* ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ಇನ್ನು ಮುಂದೆ ಉದ್ಯಮಗಳೊಂದಿಗೆ ಬೆಸೆಯುವ ಮೂಲಕ ವೆಂಚರ್ ಕ್ಯಾಪಿಟಲ್, ಪಾಲುದಾರಿಕೆಗಳಿಗೆ ಅವಕಾಶ ಮಾಡಿಕೊಡಲಾಗುವುದು. ಜೊತೆಗೆ, ವೃತ್ತಿನಿರತರು ಕೂಡ ಸಂಶೋಧನೆ ಕೈಗೊಳ್ಳುವುದನ್ನು ಉತ್ತೇಜಿಸಲು ಜಾಗತಿಕ ಸಾಮರ್ಥ್ಯ ಕೇಂದ್ರ(ಜಿಸಿಸಿ)ಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಗುರುವಾರ ಇಲ್ಲಿ ನಡೆದ 21ನೇ …

Read More »

ಒಬ್ಬಳಿಗೆ 16 ಗೋಲ್ಡ್ ಮೆಡಲ್…ಬುಷ್ರಾ ಮತೀನ್, VTU ಗೋಲ್ಡನ್ ಗರ್ಲ್….

ಬೆಳಗಾವಿ- ರಾಯಚೂರಿನ ಸಿವ್ಹಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷ್ರಾ ಮತೀನ್ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 16 ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಈ ವಿಧ್ಯಾರ್ಥಿನಿ ರಾಷ್ಟ್ರದ ಗಮನ ಸೆಳೆದಿದ್ದಾಳೆ. ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ೨೧ನೇ ಘಟಿಕೋತ್ಸವದಲ್ಲಿ 16 ಚಿನ್ನದ ಪದಕಗಳ ಬೇಟೆಯಾಡಿದ ರಾಯಚೂರಿನ ಗೋಲ್ಡನ್ ಗರ್ಲ್ ಬುಷ್ರಾ ಮತೀನ್ ತಮ್ಮ ಭವಿಷ್ಯದ ಸೇವೆಯ ಕುರಿತು ತಮ್ಮ ಅಭಿಪ್ರಾಯಗಳು ಹಂಚಿಕೊಂಡಿದ್ದಾರೆ. ನಾನು ಅತೀ ಹೆಚ್ಚು ಎಂದರೆ 16 …

Read More »

ಡಿಜಿಟಲ್ ವಿಶ್ವಕ್ಕೆ‌ ಭಾರತವೇ ಗುರು: ಓಂ ಬಿರ್ಲಾ

ಬೆಳಗಾವಿ-‌ಭಾರತದಲ್ಲಿ ಡಿಜಿಟಲ್ ಶಿಕ್ಷಣದ ಹೊಸ ಯುಗ ಆರಂಭಗೊಂಡಿದೆ. ಡಿಜಿಟಲ್ ಶಿಕ್ಷಣದಲ್ಲಿ ಹಲವು ಸವಾಲುಗಳಿವೆ. ಆದಾಗ್ಯೂ ‌ಇವುಗಳನ್ನು ಮೀರಿ ಭಾರತವು ಡಿಜಿಟಲ್ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು‌ ಜಗತ್ತಿನಲ್ಲಿ ವಿಶಿಷ್ಟ ಕೀರ್ತಿಗೆ ಪಾತ್ರವಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ (ಮಾ .10) ನಡೆದ ವಿಟಿಯು 21 ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. …

Read More »

ಬೆಳಗಾವಿ ರೈಲು ನಿಲ್ಧಾಣದಲ್ಲೇ ಉಸಿರು ನಿಲ್ಲಿಸಿದ ಮಹಿಳೆ…..

ಬೆಳಗಾವಿ- ಜೀವನದಲ್ಲಿ ಚಿಗುಪ್ಸೆ ಹೊಂದಿ,ದೂರದ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಪ್ರಕರಣಗಳನ್ನು ನೋಡಿದ್ದೇವೆ. ಆದ್ರೆ ಇವತ್ತು ರಾತ್ರಿ 9-00 ಗಂಟೆ ಸುಮಾರಿಗೆ ಬೆಳಗಾವಿ ರೇಲ್ವೆ ನಿಲ್ಧಾಣದಲ್ಲಿ ನಡೆದಿದ್ದೇ ಬೇರೆ. ರಾತ್ರಿ 9-00 ಗಂಟೆಗೆ ದಿ.ಸುರೇಶ್ ಅಂಗಡಿ ಟ್ರೇನ್ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿತ್ತು,ರೈಲು ಹೊರಡುವ ಮೊದಲೇ ಅಪರಿಚಿತ ಮಹಿಳೆಯೊಬ್ಬಳು ಟ್ರ್ಯಾಕ್ ಮೇಲೆ ಮಲಗಿ ಉಸಿರು ನಿಲ್ಲಿಸಿದ ಘಟನೆ ನಡೆದಿದೆ. ರೈಲು ಹೊರಡುವ ಮೊದಲೇ ಈ ಮಹಿಳೆ ಟ್ರ್ಯಾಕ್ …

Read More »