Breaking News

Breaking News

7 ಸೇತುವೆಗಳು ಜಲಾವೃತ, ಮುಳುಗಿದ ದರ್ಗಾ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ…

ಬೆಳಗಾವಿ- ಪಕ್ಕದ ಮಹಾರಾಷ್ಡ್ರದಲ್ಲಿ ಮತ್ತು ಬೆಳಗಾವಿಯ ಗಡಿಯಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿರುವ ಕಾರಣ,ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ.ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳ ಒಳಹರಿವು ಗಣನೀಯವಾಗಿ ಏರಿಕೆಯಾಗಿದೆ.ನದಿಗಳುಪಾತ್ರ ಬಿಟ್ಟು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ನದಿಯ ನೀರು ಪಕ್ಕದ ಗದ್ದೆಗಳಿಗೆ ನುಗ್ಗುತ್ತಿದೆ.ಕೃಷ್ಣಾ ನದಿಯ ಒಳಹರಿವು ಸಧ್ಯ 95 ಸಾವಿರ ಕ್ಯೂಸೆಕ್ಸ್ ಇಷ್ಟು ದಿನ …

Read More »

ಬೆಳಗಾವಿ ಜಿಲ್ಲೆಯಲ್ಲಿ ಆಪರೇಷನ್ ಮಂಕಿ…!!

ಬೆಳಗಾವಿ- ವಾಹನಸವಾರರ ಮೇಲೆ ದಾಳಿ ಮಾಡುವದು,ಮಕ್ಕಳಿಗೆ ಕಾಟ ಕೊಡುವದು ಮನೆಯ ಹಿತ್ತಲಲ್ಲಿ ಇರುವ ಗಿಡಗಳ ಮೇಲೆ ಜೋತಾಡುವದು, ಮನೆಗೆ ನುಗ್ಗಿ ಮಾಡಿಟ್ಡ ಅಡುಗೆಯನ್ನು ಚೆಲ್ಲಾಪಿಲ್ಲಿ ಮಾಡುವದರ ಜೊತೆಗೆ ಗ್ರಾಮದಲ್ಲಿ ರಂಪಾಟ ನಡೆಸಿದ ಮಂಗಗಳನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ. ತಾವಂಶಿ ಗ್ರಾಮದಲ್ಲಿ ಇತ್ತೀಚಿಗೆ ಮಂಗಗಳ ಕಾಟ ಹೆಚ್ಚಾಗಿತ್ತು, ಇದು ಮಳೆಗಾಲ, ಹಂಚಿನ ಮನೆಗಳಗಳ ಛಾವಣಿಗಳ ಮೇಲೆ ಥೈ..ಥೈ ಕುಣಿತ, ಊರಿನ ಗಿಡಗಳ …

Read More »

ಸೇತುವೆಗಳಗಳು ಡ್ಯಾಮೇಜ್ ,ಮಾರ್ಗ ಬದಲಿಸಲು ಸೂಚನೆ…

ಬೆಳಗಾವಿ-ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿಬೆಳಗಾವಿಯಿಂದ ಗೋವಾ ಸಂಚರಿಸುವ ಭಾರೀ ವಾಹನಗಳು ಬದಲಿ ರಸ್ತೆ ಬಳಸಲು ಸೂಚನೆ ನೀಡಲಾಗಿದೆ. ಜಾಂಬೋಟಿ, ಚೋರ್ಲಾ ಭಾಗದಲ್ಲಿ ಹಲವು ಸೇತುವೆಗಳು ಶಿಥಿಲಗೊಂಡ ಹಿನ್ನೆಲೆಯಲ್ಲಿ,ಬೆಳಗಾವಿಯಿಂಗ ಗೋವಾ ಹೋಗುವವರು ಪೀರನವಾಡಿಯಿಂದ ಎಡಕ್ಕೆ ತಿರುಗಬೇಕು. ಖಾನಾಪುರ ಮಾರ್ಗವಾಗಿ ಗೋವಾಕ್ಕೆ ಹೋಗಬೇಕು ಎಂದು ಸೂಚನೆ ನೀಡಲಾಗಿದೆ.

Read More »

ಬೆಳಗಾವಿಯ ಭಕ್ತರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ…

ಬೆಳಗಾವಿ- ಮಹಾರಾಷ್ಡ್ರದ ಪ್ರಸಿದ್ದ ಪಂಡರಪೂರ ವಿಠ್ಠಲನ ದರ್ಶನ ಪಡೆದು ಮರಳುತ್ತಿರುವಾಗ ಬೆಳಗಾವಿಯ ಭಕ್ತರ ಮೇಲೆ ಮಹಾರಾಷ್ಟ್ರದ ಪುಂಡರು ಹಲ್ಕೆ ನಡೆಸಿದ್ದು ಮೂವರು ಜನ ಗಾಯಗೊಂಡ ಘಟನೆ ತಡರಾತ್ರಿ ನಡೆದಿದೆ. ಬೆಳಗಾವಿಯ ಭಕ್ತರು ಲಾರಿಯಲ್ಲಿ ಪಂಢರಪುರಕ್ಕೆ ಹೋಗಿದ್ದರು. ದರ್ಶನ ಪಡೆದು ಬೆಳಗಾವಿಗೆ ವಾಪಸ್ ಬರುವಾಗ ಇವರು ದಾರಿ ತಪ್ಪಿ ಅನ್ಯ ಮಾರ್ಗದಿಂದ ಬಂದಿದ್ದಾರೆ ಅಲ್ಲಿಯ ಗ್ರಾಮವೊಂದರಲ್ಲಿ ರಸ್ತೆಯ ಮೇಲೆ ಕಾರು ನಿಂತಿದೆ.ದಾರಿ ಚಿಕ್ಕದಾಗಿರುವದರಿಂದ ಕಾರು ತೆಗೆಯುವಂತೆ ಲಾರಿ ಚಾಲಕ ಮನವಿ ಮಾಡಿಕೊಂಡಿದ್ದಾನೆ …

Read More »

ತಲಾಠಿ ಕಾರಿನಲ್ಲಿ 1 ಕೋಟಿ ಹತ್ತು ಲಕ್ಷ ₹ ಪತ್ತೆ….!!

ಬೆಳಗಾವಿ- ತಲಾಠಿಯೊಬ್ಬ ತನ್ನ ಕಾರಿನಲ್ಲಿ 1 ಕೋಟಿ 10 ಲಕ್ಷ ರೂ ಸಾಗಿಸುತ್ತಿರುವಾಗ ಪೋಲೀಸರು ದಾಳಿ ಮಾಡಿ ದಾಖಲೆ ಇಲ್ಲದ ಈ ಹಣವನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಚೆಕ್ ಪೋಸ್ಟ್ ಹತ್ತಿರ ಗ್ರಾಮ ಲೆಕ್ಕಾಧಿಕಾರಿಯ ಕಾರು ನಿಲ್ಲಿಸಿ ಪೋಲೀಸರು ತಪಾಸಣೆ ಮಾಡಿದ ಸಂಧರ್ಭದಲ್ಲಿ ತಲಾಠಿ ಕಾರಿನಲ್ಲಿ ಕೋಟಿ ಹತ್ತು ಲಕ್ಷ ಪತ್ತೆಯಾಗಿದ್ದು ಪೋಲೀಸರು ವಶಕ್ಕೆ ಪಡೆದಿದ್ದಾರೆ.ದಾಖಲೆ‌ ಇಲ್ಲದೆ ಸಾಗಿಸ್ತಿದ್ದ 1 ಕೋಟಿ 10 ಲಕ್ಷ …

Read More »

ಕನ್ನಡಿಗರ ಮುಖವಾಣಿ ಕನ್ನಡಮ್ಮ ದಿನಪತ್ರಿಕೆಗೆ ಪ್ರಶಸ್ತಿಯ ಗೌರವ

ಬೆಳಗಾವಿ- ಕನ್ನಡಿಗರ ಮುಖವಾಣಿ, ಕನ್ನಡಿಗರ ಹೃದಯದಿಂದ ಹೊರಹೊಮ್ಮಿದ ಜನಮನದ ಧ್ವನಿ, ಬೆಳಗಾವಿಯ ಕನ್ನಡಮ್ಮ ದಿನಪತ್ರಿಕೆಗೆ ನಾಡೋಜ ಪಾಟೀಲ ಪುಟ್ಟಪ್ಪ ಪ್ರಶಸ್ತಿ ಲಭಿಸಿದೆ. ಬೆಳಗಾವಿಯ ಕನ್ನಡಪರ ಹೋರಾಟದ ಇತಿಹಾಸದ ರೂವಾರಿ ದಿ.ಮಹಾದೇವ ಟೋಪಣ್ಣವರ ಅವರು ಆರಂಭಿಸಿದ ಕನ್ನಡಮ್ಮ ದಿನಪತ್ರಿಕೆ ರಾಜ್ಯಮಟ್ಟದಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಪತ್ರಿಕಾರಂಗದ ಮೂಲಕ ಕನ್ನಡದ ಆಂದೋಲನ ಮಾಡಿರುವ ಕನ್ನಡಮ್ಮ ದಿನಪತ್ರಿಕೆ ಕನ್ನಡಿಗರ ಅಭಿಮಾನದ ಪತ್ರಿಕೆಯಾಗಿ ಗೌರವಿಸಲ್ಪಡುತ್ತಿದೆ. ಪತ್ರಿಕಾ ಲೋಕದ ವಿಶ್ವವಿದ್ಯಾಲಯ ಎಂದೇ ಖ್ಯಾತಿ ಪಡೆದಿರುವ ಕನ್ನಡಮ್ಮ ದಿನಪತ್ರಿಕೆ ಪ್ರದೇಶಿಕ …

Read More »

ಬೆಳಗಾವಿ ಬಿಜೆಪಿ ಕಾರ್ಯಕಾರಿಣಿ ಯಲ್ಲಿ ನಿರಾಣಿ,ಕಾಗೇರಿ ಭಾಗಿ…

ಬೆಳಗಾವಿ-ಹತ್ತಿರದ ಮುತಗಾ ದಲ್ಲಿ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲೆ ವತಿಯಿಂದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲೆ ವತಿಯಿಂದ ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಸಂಸದ ಜಗದೀಶ್ ಶೆಟ್ಟರ್ ಅವರು ಮಾತನಾಡಿ ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳು ಯೋಜನೆಗಳ ಬಗ್ಗೆ ಕೇಂದ್ರದ ಮಂತ್ರಿಗಳ ಜೊತೆ ಭೇಟಿಯಾಗಿ ಮಾತನಾಡಿದ್ದೇನೆ ಜಿಲ್ಲೆಗೆ ಹೊಸ …

Read More »

ಶಬ್ದ ಕೇಳಿತು …ಪ್ರಾಣ ಉಳಿಯಿತು….ಆದ್ರೆ ಮನೆ ಕುಸಿಯಿತು…!!!

ಬೆಳಗಾವಿ- ಖಾನಾಪೂರ ಪ್ರದೇಶದಲ್ಲಿ ಮಳೆ ವಿಪರೀತಾಗಿ ಸುರಿಯುತ್ತಿದೆ. ಪ್ರತಿದಿನ ಮನೆಗಳು ಕುಸಿದು ಬೀಳುವ ಪ್ರಕರಣಗಳು ಖಾನಾಪೂರ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿವೆ. ನಿನ್ನೆ ತಡರಾತ್ರಿಯೂ ಮನೆಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಣಾಪಾಯದಿಂದ ಪಾರಾದ ಮತ್ತೊಂದು ಘಟನೆ ನಡೆದಿದೆ. ಖಾನಾಪೂರ ತಾಲ್ಲೂಕಿನ ಕಸಮಳಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವಂತ್ ತೇಗೂರ್ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ತುಂಬು ಗರ್ಭಿಣಿ ಪ್ರಣಾಪಾಯದಿಂದ ಪಾರಾಗಿದ್ದಾಳೆ. ತಡರಾತ್ರಿ ಮಳೆಯ ಜೊತೆ ಬೀರುಗಾಳಿ ಬೀಸಿದೆ.ಮಳೆಯ …

Read More »

ಖಾನಾಪೂರ ತಾಲ್ಲೂಕಿನ ಶಾಲಾ ಕಾಲೇಜುಗಳಿಗೆ ಎರಡು ದಿನ ರಜೆ

ಖಾನಾಪೂರ-ವ್ಯಾಪಕ ಮಳೆಯ ಹಿನ್ನೆಲೆಯಲ್ಲಿ ಖಾನಾಪುರ ತಾಲ್ಲೂಕಿನ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ, ಪ್ರೌಢಶಾಲೆಗಳು‌ ಹಾಗೂ ಪಿಯು ಕಾಲೇಜುಗಳಿಗೆ ಜುಲೈ 19 ಹಾಗೂ 20 ರಂದು ಎರಡು ದಿನ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಖಾನಾಪೂರ ತಾಲ್ಲೂಕಿನ ಶಾಲಾ ಕಾಲೇಜುಗಳುಗೆ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

Read More »

ರಾಕಸಕೊಪ್ಪ ಜಲಾಶಯ ಭರ್ತಿ, ಎರಡು ಗೇಟ್ ಓಪನ್ ನೀರು ಬಿಡುಗಡೆ

ಬೆಳಗಾವಿ – ಬಹುಶ ಬೆಳಗಾವಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಹು ಬೇಗ ಬೆಳಗಾವಿ ಮಹಾನಗರದ ಜಲದ ಮೂಲ ರಾಕಸಕೊಫ್ಪ ಜಲಾಶಯ ಭರ್ತಿಯಾಗಿದ್ದು ಇವತ್ತು ಎರಡು ಗೇಟ್ ಗಳನ್ನು ಓಪನ್ ಮಾಡಿ ನೀರು ಬಿಡುಗಡೆ ಮಾಡಲಾಗಿದೆ. ರಾಕಸಕೊಪ್ಪ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನಲೆಯಲ್ಲಿ ಬೆಳಗಾವಿ ನಗರದ ಪಕ್ಕದಲ್ಲೇ ಹರಿಯುತ್ತಿರುವ ಮಾರ್ಕಂಡೇಯ ನದಿಯ ಒಳ ಹರಿವು ಹೆಚ್ಚಾಗಿದೆ. ರಾಕಸಕೊಪ್ಪ ಜಲಾಶಯ ಪ್ರತಿವರ್ಷ ಜುಲೈ ತಿಂಗಳ ಅಂತ್ಯದಲ್ಲಿ ಇಲ್ಲವಾದ್ರೆ ಅಗಸ್ಟ ತಿಂಗಳಲ್ಲಿ ತುಂಬುತ್ತದೆ.ಆದ್ರೆ …

Read More »