Breaking News

Breaking News

ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಪುಸ್ತಕ ಬಿಡುಗಡೆ

ಪತ್ರಕರ್ತ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗುತ್ತಿದೆ. ಇದೇ ಜುಲೈ 14, ಭಾನುವಾರದಂದು ಬೆಂಗಳೂರು ವಿಜಯನಗರದಲ್ಲಿರುವ ಎಂ. ಚಿದಾನಂದಮೂರ್ತಿ ಸಭಾಂಗಣದಲ್ಲಿ ಜರುಗುವ ಈ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಬರಹಗಾರರಾದ ಜೋಗಿ, ಯತಿರಾಜ್ ವೀರಾಂಬುಧಿ, ಪೂರ್ಣಿಮಾ ಮಾಳಗಿಮನಿ, ಮಹೇಶ್ ಅರಬಳ್ಳಿ ಹಾಗೂ ವೀರಲೋಕ ಸಂಸ್ಥೆಯ ವೀರಕಪುತ್ರ ಶ್ರೀನಿವಾಸ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಿಗ್ನಲ್ ಜಂಪ್’ ನಲ್ಲಿ ನಾಡಿನ ಹತ್ತು ಬರಹಗಾರರು* ರವೀಂದ್ರ …

Read More »

ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಡಿಸಿ ಮಹ್ಮದ್ ರೋಷನ್ ಸೂಚನೆ…

ಡೆಂಗ್ಯೂ ಪ್ರಕರಣಗಳ ನಿಯಂತ್ರಣಕ್ಕೆ ಪರೀಕ್ಷೆ ಹೆಚ್ಚಿಸಿ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಬೆಳಗಾವಿ ಜು.10(ಕರ್ನಾಟಕ ವಾರ್ತೆ): ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಡೆಂಗ್ಯೂ‌ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು. ಡೆಂಗ್ಯೂ ಪತ್ತೆಗೆ ಪರೀಕ್ಷೆ ಹೆಚ್ಚಿಸಬೇಕು. ಡೆಂಗ್ಯೂ ಪಾಸಿಟಿವ್‌ ಇರುವ ವ್ಯಕ್ತಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ‌ ರೋಷನ್ ಅವರು ಸೂಚನೆ‌ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ (ಜು.10) ವಿಪತ್ತು ನಿರ್ವಹಣೆ ಹಾಗೂ …

Read More »

ಡಿವೈಡರ್ ಗೆ ಬೈಕ್ ಡಿಕ್ಕಿ ಓರ್ವನ ಸಾವು, ಓರ್ವನಿಗೆ ಗಂಭೀರ ಗಾಯ..

ಬೆಳಗಾವಿ – ಇಬ್ಬರೂ ಗೆಳೆಯರು ಮೋಬೈಲ್ ಖರೀಧಿ ಮಾಡಲು ಎಂ.ಕೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬಂದಿದ್ರು ರಾತ್ರಿ ಮೋಬೈಲ್ ಕೊಂಡು ಮರಳಿ ಹೋಗುವಾಗ ಬೈಕ್ ಡಿವೈಡರ್ ಗೆ ಡಿಕ್ಕಿ ಹೊಡೆದು ಓರ್ವ ಮೃತಪಟ್ಟಿದ್ದು ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ನಡೆದಿದೆ. ಎಂ.ಕೆ ಹುಬ್ಬಳ್ಳಿ ಗ್ರಾಮದ 34 ವರ್ಷದ ಬಸವರಾಜ್ ಕಿಲ್ಲೆದಾರ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ.ಪ್ರವೀಣ ಕಮ್ಮಾರ್ ಎಂಬಾತ ಗಾಯಗೊಂಡಿದ್ದಾನೆ. ಇಬ್ಬರು ಗೆಳೆಯರು ನಿನ್ನೆ ಬೆಳಗಾವಿಗೆ ಬಂದಿದ್ರು ಮೋಬೈಲ್ …

Read More »

ಮನೆಗಳ್ಳತನ ಪ್ರಕರಣದಲ್ಲಿ ಎರಡು ಜನ ಆರೋಪಿತರ ಬಂಧನ

ಬೆಳಗಾವಿ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಉಪ ಪೊಲೀಸ್ ಆಯುಕ್ತರು (ಅ&ಸಂ) ಮತ್ತು ಸಹಾಯಕ ಪೊಲೀಸ್ ಆಯುಕ್ತರು ಖಡೇಬಜಾರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಖಡೇಬಜಾರ ಪೊಲೀಸ್ ಠಾಣೆ ಇನ್ಸಪೇಕ್ಟರ್ ಹಾಗೂ ಕ್ಯಾಂಪ್ ಪೊಲೀಸ್ ಇನ್ಸಪೇಕ್ಟರ ರವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿ ಜನರ ತಂಡವು ದಿನಾಂಕ: 09/07/2024 ರಂದು ಎರಡು ಜನ ಆರೋಪಿತರನ್ನು ಬಂಧಿಸಿ ಮಾನ್ಯ …

Read More »

ಬೆಳಗಾವಿ ಪಾಲಿಕೆಯ ಸ್ಟ್ಯಾಂಡೀಂಗ್ ಕಮೀಟಿ ಚೇರಮನ್ಸ್ ….

ಬೆಳಗಾವಿ: ಸ್ಥಳೀಯ ಮಹಾನಗರ ಪಾಲಿಕೆಯಲ್ಲಿ ಮಂಗಳವಾರ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಆದರೆ, ನಾಲ್ಕು ಸ್ಥಾನಕ್ಕೆ ನಾಲ್ಕೇ ಉಮೇದುವಾರಿಕೆ ಸಲ್ಲಿಕೆಯಾದ್ದರಿಂದ ಎಲ್ಲ ಅಧ್ಯಕ್ಷರೂ ಅವಿರೋಧವಾಗಿ ಆಯ್ಕೆಗೊಂಡರು. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಶ್ರೀಶೈಲ ಕಾಂಬಳೆ ಆಯ್ಕೆಗೊಂಡರು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ನೇತ್ರಾವತಿ ಭಾಗವತ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ …

Read More »

ವಿಠೋಬಾ…….ಜಲ್ದೀ ಬಾ……!!! ಗುಡ್ಬಾಯ್ ವಿಠ್ಠಲಾ….!!

  ಬೆಳಗಾವಿ ಜಿಲ್ಹೆಯ ಹಿಡಕಲ್ ಡ್ಯಾಂ ಭರ್ತಿ ಆಗ್ತಾ ಇದೆ. ಡ್ಯಾಂ ಪಾತ್ರದಲ್ಲಿರುವ ವಿಠ್ಠಲನ ಮಂದಿರ ಮುಳುಗುತ್ತಿದೆ. ಗೋಪುರ ಮಾತ್ರ ಕಾಣಿಸುತ್ತಿದೆ. ಡ್ಯಾಂ ದಂಡೆಯ ಮೇಲೆ ನಿಂತು ವಿಠ್ಠಲನ ಭಕ್ತರು ವಿಠೋಬಾ….ಲೌಕರ್ ಬಾ     ಗುಡ್ಬಾಯ್ ವಿಠ್ಠಲಾ ಎಂದು ಭಕ್ತರು ನಮಸ್ಕರಿಸುವ ದೃಶ್ಯ ಅಲ್ಲಿ ಸಮಾನ್ಯವಾಗಿದೆ. ಬೆಳಗಾವಿ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸಪ್ತನದಿಗಳು, ಜಲಾಶಯಗಳು, ಜಲಪಾತಗಳಿಗೆ ಜೀವ ಕಳೆ ಬಂದಿದ್ದು, ರೈತರ …

Read More »

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ನಡೆದಿದ್ದೇನು….??

ಬೆಳಗಾವಿ- ಬೆಳಗಾವಿಯ ಐತಿಹಾಸಿಕ ಹಿಂಡಲಗಾ ಜೈಲು ಈಗ ಫುಲ್ ಸಸ್ಪೆನ್ಸ್ ಜೈಲಿನ ಗೋಡೆಗಳ ಆಚೆ ಏನು ನಡೆಯುತ್ತಿದೆ,ಎನ್ನುವದು ನಿಗೂಢವಾಗಿದೆ.ಹಿಂಡಲಗಾ ಜೈಲಿನ ಕೈದಿಯೊಬ್ಬ ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಜೈಲಿನಲ್ಲಿ ಕೈದಿಗಳ ನಡುವೆ ಮಾರಾಮಾರಿ ಆಗಿದೆಯೋ ಅಥವಾ ಇಬ್ಬರು ಕೈದಿಗಳು ಹೊಡೆದಾಡಿಕೊಂಡಿದ್ದಾರೋ ಗೊತ್ತಿಲ್ಲ ಆದ್ರೆ ಆಸ್ಪತ್ರೆಗೆ ದಾಖಲಾಗಿರುವ ಕೈದಿ, ಬಿದ್ದು ಗಾಯವಾಗಿದೆ ಎಂದು ಹೇಳಿಕೊಂಡಿದ್ದಾನೆ. ಕೈದಿಯ ಹೇಳಿಕೆಯಿಂದ ಪೋಲೀಸರಿಗೆ ಅನುಮಾನ ಬಂದಿದೆ,ಬೆಳಗಾವಿ ಗ್ರಾಮೀಣ ಠಾಣೆಯ ಪೋಲೀಸರು ವಿಚಾರಣೆ ಶುರು ಮಾಡಿದ್ದಾರೆ. ನಿಜವಾಗಿಯೂ …

Read More »

ಶಾಸಕರ ಮನೆಯಲ್ಲಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿಗೆ ಸಮ್ಮಾನ…

ಬೆಳಗಾವಿ: ಶಿವಬಸವ ನಗರದಲ್ಲಿರುವ ಶಾಸಕ ಆಸೀಫ್ (ರಾಜು) ಸೇಠ್ ಅವರ ಮನೆಗೆ ಸಂಸದ ಪ್ರಿಯಂಕಾ ಜಾರಕಿಹೊಳಿ ಅವರು ಭೇಟಿ ನೀಡಿ ಸತ್ಕಾರವನ್ನು ಸ್ವೀಕರಿಸಿದರು. ಶಿವಬಸವ ನಗರದ ಶಾಸಕ ಆಸೀಫ್ (ರಾಜು) ಸೇಠ್ ಅವರ ಮನೆಯಲ್ಲಿ ಮುಸ್ಲಿಂ ಸಮುದಾಯದ ನೂರಾರು ಮುಖಂಡರು ಚಿಕ್ಕ ವಯಸ್ಸಿನಲ್ಲೇ ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದ ಪ್ರಿಯಂಕಾ ಜಾರಕಿಹೊಳಿ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಶಾಸಕ ಆಸೀಫ್ ಸೇಠ್ ಕುಟುಂಬಸ್ಥರು ಸಂಸದೆ ಪ್ರಿಯಂಕಾ ಜಾರಕಿಹೊಳಿಗೆ ಆಶೀರ್ವದಿಸಿ, …

Read More »

ಸೋಮವಾರ ಬೆಳಗಾವಿ ನಗರದಲ್ಲಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಪ್ರವಾಸ

ಬೆಳಗಾವಿ- ಪ್ರಿಯಾಂಕಾ ಜಾರಕಿಹೊಳಿ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದ ಬಳಿಕ ಮದಲ ಬಾರಿಗೆ ಸೋಮವಾರ ಬೆಳಗಾವಿ ನಗರದಲ್ಲಿ ಪ್ರವಾಸ ಮಾಡಲಿದ್ದಾರೆ. ಬೆಳಗ್ಗೆ 11-00 ಗಂಟೆಗೆ ಬೆಳಗಾವಿಯ ನಾಗನೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ನಗರದಲ್ಲಿರುವ ಮಹಾಪುರುಷರ ಪ್ರತಿಮೆಗಳಿಗೆ ಪುಷ್ಪಗೌರವ ಸಮರ್ಪಿಸಿ ನಂತರ ಕಾಂಗ್ರೆಸ್ ಕಚೇರಿಗೆ ಮಧ್ಯಾಹ್ನ 2-00 ಗಂಟೆಗೆ ಬರಲಿದ್ದಾರೆ. ನಂತರ ವಿವಿಧ ಕಾಂಗ್ರೆಸ್ ಮುಖಂಡರ ಮನೆಗಳಿಗೆ ಭೇಟಿ ನೀಡಲಿದ್ದಾರೆ.

Read More »

ಗೋವಾ ಸಿಎಂ ಮಾಡಿದ ಟ್ವೀಟ್ ನಿಂದ ಕಳಸಾ ಬಂಡೂರಿಗೆ ಹೊಸ ಟ್ವಿಸ್ಟ್…..!!!

ಬೆಳಗಾವಿ – ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕಳಸಾ ಬಂಡೂರಿ ಮಹಾದಾಯಿ ಸಮಸ್ಯೆ ಮುಗಿದು ಹೋಯ್ತು ಎಂದು ಪೇಡೆ ತಿಂದಿದ್ದು ಆಯ್ತು, ಸಂಭ್ರಮ ಪಟ್ಟಿದ್ದು ಆಯ್ತು ಆದ್ರೆ ಕಳಸಾ ಬಂಡೂರಿ ನಾಲೆಯಲ್ಲಿ ನೀರು ಹರಿಯಲಿಲ್ಲ ತಡೆ ಗೋಡೆ ತೆರವು ಆಗಲಿಲ್ಲ,ಕಳೆದ ಎರಡು ವರ್ಷಗಳಿಂದ ಮೌನವಾಗಿದ್ದ ಈ ವಿಚಾರಕ್ಕೆ ಈಗ ಮತ್ತೆ ಮರುಜೀವ ಬಂದಿದೆ ಎರಡು ದಿನದ ಹಿಂದೆ ಗೋವಾ ಸಿಎಂ ಮಾಡಿದ ಟ್ವೀಟ್ ನಿಂದಾಗಿ ಕಳಸಾ ಬಂಡೂರಿ,ಮಹಾದಾಯಿ ಜಲಾನಯನ ಪ್ರದೇಶ …

Read More »