LOCAL NEWS

ಬೆಳಗಾವಿಯಲ್ಲಿ ತ್ರಿವಳಿ ಕೊಲೆ,ಆರೋಪಿ ನಿರ್ದೋಶಿ..

ಬೆಳಗಾವಿ: ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ತಾಯಿ-ಇಬ್ಬರು ಮಕ್ಕಳ ಕಗ್ಗೋಲೆ ‌ಪ್ರಕರಣದ ಆರೋಪಿ ಪ್ರವೀಣ್ ಭಟ್ ನಿರ್ದೋಷಿ ಎಂದು ಧಾರವಾಡ ಹೈಕೋರ್ಟ್ ಪೀಠ ತೀರ್ಪು ನೀಡಿದೆ. ಬೆಳಗಾವಿ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ತಿರಸ್ಕರಿಸಿದ ಹೈಕೋರ್ಟ್, ಜೂನ್ 21ರಂದು ತೀರ್ಪು ನೀಡಿದೆ.ನ್ಯಾಯಾಧೀಶರಾದ ಕೆ.ಎಸ್. ಮುದಗಲ್, ಎಂಜಿಎಸ್ ಕಮಲ್ ಆದೇಶ ಹೊರಡಿಸಿದ್ದಾರೆ. 2018ರ ಏಪ್ರಿಲ್.ನಲ್ಲಿ ಪ್ರವೀಣ್ ಭಟ್‌ ಅವರಿಗೆ ಬೆಳಗಾವಿಯ ಕೋರ್ಟ್ಜೀವಾವಧಿ ಶಿಕ್ಷೆ ವಿಧಿಸಿತ್ತು.2015 ಆ.16ರಂದುಬೆಳಗಾವಿಯ ಕುವೆಂಪು ನಗರದಲ್ಲಿ ನಸುಕಿನ ಜಾವ …

Read More »

ಬೆಳಗಾವಿಯಲ್ಲಿ, ನಾಡದ್ರೋಹಿಗಳ ವಿರುದ್ಧ ಬಿತ್ತು ಕೇಸ್…!!!

  – ಬೆಳಗಾವಿ- ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಪುಂಡಾಟಿಕೆ ಮುಂದುವರೆದಿದೆ‌.ಸೋಶಿಯಲ್ ಮಿಡಿಯಾದಲ್ಲಿ ಕಿರಿಕ್ ಮಾಡುತ್ತಿರುವ ಕಂಗಾಲ್ ಕಂಪನಿ ಎಂಇಎಸ್ ಗೆ ಖಾಕಿ ಪಡೆ ಖದರ್ ತೋರಿಸಿದೆ. ಸೋಶಿಯಲ್ ಮಿಡಿಯಾದಲ್ಲಿ ಸರ್ಕಾರಕ್ಕೆ ಧಮಕಿ ಹಾಕಿದ,ನಾಡದ್ರೋಹಿಗಳ ವಿರುದ್ಧ ಕೇಸ್ ಬುಕ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೈಟ್ ವಿರುದ್ಧ ಕೇಸ್ ದಾಖಲಾಗಿದೆ. ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಂಇಎಸ್ ವಿರುದ್ಧ ಸೋಮೋಟೋ ಕೇಸ್ ದಾಖಲು ಮಾಡಲಾಗಿದ್ದು, ಹೆಡ್ ಕಾನ್ಸ್‌ಟೇಬಲ್ ಬಿ.ಎನ್. ನಾಕುಡೆಯಿಂದ ದೂರು …

Read More »

ಬೆಳಗಾವಿ ಡಿಸಿ ವಿಶೇಷ ಕಾಳಜಿ, ಎರಡೇ ದಿನದಲ್ಲಿ ಪಾಸ್ ಪೋರ್ಟ್…!!

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ವಿಶೇಷ ಕಾಳಜಿಯಿಂದಾಗಿ ಬೆಳಗಾವಿಯ ಜುಡೋ ಕ್ರಿಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಅನಕೂಲವಾಗಿದೆ. ಥಾಯ್ಲೆಂಡ್ ನಲ್ಲಿ‌ ನಡೆಯಲಿರುವ ಜುಡೋ ಚಾಂಪಿಯನ್ ಷಿಪ್ ಗೆ ತೆರಳುತ್ತಿದ್ದ 18 ಜನ ಕ್ರೀಡಾಪಟುಗಳಿಗೆ ಎರಡೇ ದಿನಗಳಲ್ಲಿ ‌ಪಾಸ್ ಪೋರ್ಟ್ ಒದಗಿಸಲು ನೆರವಾದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ. ಜಿಲ್ಲಾಧಿಕಾರಿಗಳ ನೆರವಿನಿಂದ ಬೆಳಗಾವಿಯ ಕ್ರೀಡಾಶಾಲೆಯ ಎಲ್ಲ 18 ಬಾಲಕರ ತಂಡವು ಅಂತರರಾಷ್ಟ್ರೀಯ ಜುಡೋ ಸ್ಪರ್ಧೆಯಲ್ಲಿ ‌ಭಾಗವಹಿಸಲು …

Read More »

ಲಂಚ ಪಡೆದಿದ್ದು ಇಪ್ಪತ್ತು ಸಾವಿರ,ಸಿಕ್ಕಿದ್ದು ಲಕ್ಷ..ಲಕ್ಷ..₹

ಬೆಳಗಾವಿ: ರಾಜ್ಯ ಸಿಟಿ ಕಂಪೋಸ್ಟ್ ಮಾರ್ಕೆಟ್ ಲೈಸನ್ಸ್ ನೀಡಲು ಲಂಚ 20 ಸಾವಿರ ರೂ.‌ಲಂಚ‌ ಪಡೆಯುತ್ತಿದ್ದ ಕೃಷಿ ಅಧಿಕಾರಿ ಭ್ರಷ್ಟಾಚಾರ ನಿಗ್ರಹ ದಳ ಬಲೆಗೆ ಬಿದ್ದಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೋಗೇಶ ಫಕೀರೇಶ ಅಗಡಿ ಎಸಿಬಿ ಬಲೆಗೆ ಬಿದ್ದಿದ್ದು, ಕಚೇರಿಯಲ್ಲಿ 44 ಸಾವಿರ ರೂ.‌ಹಾಗೂ ಮನೆಯಲ್ಲಿ ಶೋಧ ನಡೆಸಿದಾಗ 3.54 ಲಕ್ಷ ರೂ. ನಗದು ಸಿಕ್ಕಿದೆ. ಅನಗೋಳದ ಮೋನೇಶ್ವರ ಕಮ್ಮಾರ ಎಂಬವರು ಸಿಟಿ ಕಂಪೋಸ್ಟ್ ಮಾರ್ಕೆಟ್ …

Read More »

ಆದಿವಾಸಿ ಮಹಿಳೆ ಆಗ್ತಾರೆ ಭಾರತದ ರಾಷ್ಟ್ರಪತಿ

ಬೆಳಗಾವಿ-ಎನ್ ಡಿ ಎ ಮೈತ್ರಿ ಇಂದು ಆದಿವಾಸಿ ಮಹಿಳೆ,ದ್ರೌಪದಿ ಮರ್ಮು ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ದ್ರೌಪದಿ ಮರ್ಮು ಅವರು ಜಾರ್ಖಂಡ್ ರಾಜ್ಯದ ಮೊದಲ ಮಹಿಳಾ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿದ್ದಾರೆ.ಜೊತೆಗೆ ಓಡಿಸಾ ಸರ್ಕಾರದಲ್ಲಿ ಸಚಿವರಾಗಿ ದ್ರೌಪದಿ ಮರ್ಮು ಸೇವೆ ಸಲ್ಲಿಸಿದ್ದಾರೆ. ವಿರೋಧ ಪಕ್ಷಗಳು ಯಶ್ವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಬೆನ್ನಲ್ಲಿಯೇ ಎನ್ ಡಿ ಎ ಮೈತ್ರಿಕೂಟ ಆದಿವಾಸಿ ಮಹಿಳೆ ದ್ರೌಪದಿ ಮರ್ಮು …

Read More »

ಬೆಳಗಾವಿಯಲ್ಲಿ, “ಅಮೃತ ಭಾರತಿಗೆ ಕನ್ನಡದಾರತಿ” ಆಗೋದು ಗ್ಯಾರಂಟಿ…!!

ಬೆಳಗಾವಿ, – “ಆಝಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ ಜಿಲ್ಲೆಯ 5 ಸ್ಥಳಗಳಾದ ಹುಲಕುಂದ, ಹುದಲಿ, ಬೆಳವಡಿ, ಕಿತ್ತೂರು ಹಾಗೂ ನಂದಗಡದಲ್ಲಿ ಶನಿವಾರ (ಜೂ.25) ನಡೆಯಲಿರುವ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮದ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ (ಜೂ.21) ನಡೆದ “ಆಝಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಅಮೃತ ಭಾರತಿಗೆ ಕನ್ನಡದಾರತಿ” ಕಾರ್ಯಕ್ರಮ -2022 ರ …

Read More »

ಬೆಳಗಾವಿಯ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆಯಲ್ಲಿ ಏನೇನು ಇರುತ್ತೆ ಗೊತ್ತಾ..??

ಶೀಘ್ರದಲ್ಲೇ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆ ಉದ್ಘಾಟನೆ: ಶಾಸಕ ಅನಿಲ ಬೆನಕೆ ಬೆಳಗಾವಿ: ಬೆಳಗಾವಿ ನಗರದಲ್ಲಿ 140 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಕಾಮಗಾರಿ ಮುಗಿಯುವ ಹಂತದಲ್ಲಿ ಇದ್ದು, ಇನ್ನು ನಾಲ್ಕೈದು ತಿಂಗಳಲ್ಲಿ ಜನರ ಉಪಯೋಗಗಕ್ಕೆ ಬರಲಿದೆ ಎಂದು ಶಾಸಕ ಅನಿಲ ಬೆನೆಕ ಅವರು ತಿಳಿಸಿದರು. ಮಂಗಳವಾರ ಬಿಮ್ಸ್ ಆವರಣದಲ್ಲಿ ನಿರ್ಮಾಣ ಆಗುತ್ತಿರುವ ಸೂಪರ್ ಮಲ್ಟಿ ಸ್ಪೇಷಾಲಟಿ ಆಸ್ಪತ್ರೆಯ ಕಾಮಗಾರಿಯನ್ನು ಶಾಸಕ ಅನಿಲ ಬೆನಕೆ, …

Read More »

ಆಲಮ್‌ ನದಾಫ್ ಅತ್ಯುತ್ತಮ ಸಾಧನೆ

ಮಂಗಳೂರು: 2021-22ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಂಗಳೂರಿನ‌ ಎಕ್ಸ್ ಪರ್ಟ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿ ಆಲಮ್ ಆರ್. ನದಾಫ್ ವಿಜ್ಞಾನ ವಿಭಾಗದಲ್ಲಿ ಪ್ರತಿಶತ ಶೇ 90ರಷ್ಟು ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆಗೈದಿದ್ದಾನೆ. ಜೀವಶಾಸ್ತ್ರ -95, ಗಣಿತ-94, ಕೆಮೆಸ್ಟ್ರಿ – 83  ಹಾಗೂ ಭೌತಶಾಸ್ತ್ರ ದಲ್ಲಿ  82  ಸೇರಿದಂತೆ PCMBಯಲ್ಲಿ ಒಟ್ಟು ಶೇ.88.5 ಅಂಕ ಗಳಿಸಿ ಗಮನಾರ್ಹ ಸಾಧನೆ ಗೈದಿದ್ದಾನೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ‌ ಆಡಳಿತ …

Read More »

ಸುವರ್ಣ ವಿಧಾನಸೌಧದ ಎದುರು ಯೋಗಾ ಯೋಗ…!!

ಬೆಳಗಾವಿ-ಮಾನವೀಯತೆಗಾಗಿ ಯೋಗ” ಎಂಬ ಘೋಷವಾಕ್ಯದೊಂದಿಗೆ ಇಲ್ಲಿನ ಸುವರ್ಣ ವಿಧಾನಸೌಧದ ಮುಂಭಾಗದ ಆವರಣದಲ್ಲಿ ಮಂಗಳವಾರ (ಜೂ.21) 8ನೇ ಅಂತರರಾಷ್ಟ್ರೀಯ ಯೋಗ ದಿನವನ್ನು ಅತ್ಯಂತ ಸಂಭ್ರಮದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಆಯುಷ್ ಇಲಾಖೆ, ಯುವ ಸಬಲೀಕರಣ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರವಾಸೋದ್ಯಮ ಇಲಾಖೆ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳ, ನೆಹರೂ ಯುವ ಕೇಂದ್ರ ಹಾಗೂ ಪತಂಜಲಿ ಯೋಗ ಸಮಿತಿಯ ಸಹಯೋಗದೊಂದಿಗೆ ಕಾರ್ಯಕ್ರಮವನ್ನು …

Read More »

ಬೆಳಗಾವಿಯಲ್ಲಿ ಮೋಸ್ಟ್ ವಾಂಟೆಡ್,ಕೊಲೆ ಆರೋಪಿ ಮೇಲೆ ಫೈರಿಂಗ್….

ಬೆಳಗಾವಿಯಲ್ಲಿ ಕೊಲೆ ಆರೋಪಿ ಮೇಲೆ ಫೈರಿಂಗ್.. ಬೆಳಗಾವಿ-*ಬೆಳಗಾವಿಯಲ್ಲಿ ಕೊಲೆ ಆರೋಪಿ ಮೇಲೆ ತಡರಾತ್ರಿ ಪೋಲೀಸರು ಫೈರಿಂಗ್ ನಡೆಸಿದ ಕಾರಣ ಮೋಸ್ಟ್ ವಾಂಟೆಡ್‌ ಕೊಲೆ ಸುಲಿಗೆ ನಡೆಸಿದ ಆರೋಪಿ ಕಾಲಿಗೆ ಗುಂಡೇಟು ತಗಲಿದೆ. ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಕೊಲೆ ಮಾಡಿದ ಆರೋಪಿ ವಿಶಾಲ್‌ಸಿಂಗ್ ಚೌಹಾನ್ ಪರಾರಿಯಾಗುತ್ತಿದ್ದಾಗ ಎಸಿಪಿ ನಾರಾಯಣ ಭರಮಣಿ ಅವರು ಆರೋಪಿ ಕಾಲಿಗೆ ಶೂಟ್ ಮಾಡಿದ ಘಟನೆಬೆಳಗಾವಿಯ ವೀರಭದ್ರೇಶ್ವರ ನಗರದ ಕೋಯ್ಲಾ ಹೋಟೆಲ್ ಬಳಿ ನಡೆದಿದೆ. ಬೆಳಗಿನ …

Read More »

ಮಂಗಳವಾರ ಬೆಳಗ್ಗೆ 6 ಗಂಟೆಗೆ ಸುವರ್ಣಸೌಧಕ್ಕೆ ಬರಬೇಕ್ರಿ…!!

ಸುವರ್ಣ ವಿಧಾನಸೌಧದಲ್ಲಿ ಯೋಗ ದಿನಾಚರಣೆ ಆಚರಣೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, ಜೂ.19(ಕರ್ನಾಟಕ ವಾರ್ತೆ): ಭಾರತ ಸರ್ಕಾರದ ಆಯುಷ್ ಮಂತ್ರಾಲಯದ ಸೂಚನೆಯಂತೆ 2022 ರ ಘೋಷವಾಕ್ಯ “ಮಾನವೀಯತೆಗಾಗಿ ಯೋಗ” ಎಂಬ ಘೋಷ ವಾಕ್ಯದೊಂದಿಗೆ ಆರೋಗ್ಯಯುತ ಜೀವನಕ್ಕಾಗಿ ಮಂಗಳವಾರ (ಜೂ.21) “8 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” 75 ಸಾಂಪ್ರದಾಯಿಕ ಮತ್ತು ಪಾರಂಪರಿಕ ಸ್ಥಳಗಳಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಆಯುಷ್ …

Read More »

ವಾಹನಗಳಿಗೆ ಬೆಂಕಿ,ಕಲ್ಲು ತೂರಾಟ,ಮಾರಾಮಾರಿ,ಓರ್ವನ ಕೊಲೆ

ಬೆಳಗಾವಿ:ಅದೊಂದು ಜಮೀನು ವಿವಾದ,ಈ ವಿವಾದ ಇವತ್ತು ಕಾರು ಪಾರ್ಕಿಂಗ್ ವಿಚಾರದಲ್ಲಿ ಮತ್ತೆ ಭುಗಿಲೆದ್ದು,ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಯಿತು. ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಕೆಲ ವರ್ಷಗಳಿಂದ ದೇವಸ್ಥಾನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಇದ್ದ ಜಗಳ ಶನಿವಾರ ರಾತ್ರಿ ಕಾರು ಪಾರ್ಕಿಂಗ್ ಮಾಡುವ ವಿಷಯಕ್ಕೆ ಘರ್ಷಣೆಯಾಗಿ,ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆಯಿತು ಈ ಗಲಾಟೆಯಲ್ಲಿ ವ್ಯಕ್ತಿಯನ್ನು ಕೊಲೆ ಮಾಡಲಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ವಾಹನಗಳಿಗೆ ಬೆಂಕಿ ಹಚ್ಚಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಗೌಂಡವಾಡ ಗ್ರಾಮದ …

Read More »

ನಾಳೆ ಪಿಯುಸಿ ಫಲಿತಾಂಶ- ಸಚಿವರಿಂದ ಟ್ವೀಟ್…

ನಾಳೆ ಪಿಯುಸಿ ಫಲಿತಾಂಶ- ಸಚಿವರಿಂದ ಟ್ವೀಟ್… ಬೆಳಗಾವಿ: ಪಿಯು ದ್ವಿತೀಯ ವರ್ಷದ ಪರೀಕ್ಷೆ ಫಲಿತಾಂಶ ನಾಳೆ ಮಧ್ಯಾಹ್ನ 12ಕ್ಕೆ ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂತ್ರಿ ನಾಗೇಶ್‌ ಟ್ವಿಟ್‌ ಮಾಡಿದ್ದಾರೆ. ಏಪ್ರಿಲ್‌ 22ರಿಂದ ಮೇ 18ನೇ ತಾರೀಖಿನವರೆಗೆ ಪರೀಕ್ಷೆ ನಡೆದಿತ್ತು.ಪರೀಕ್ಷೆ ಫಲಿತಾಂಶಕ್ಕೆ ಮಕ್ಕಳು ಕಾತರಾಗಿದ್ದು, ಎಲ್ಲರಿಗೂ ಸಚಿವರು ಶುಭ ಹಾರೈಸಿದ್ಸಾರೆ.

Read More »

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ರೇಡ್…

ಬೆಳಗಾವಿಯಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ರೇಡ್… ಬೆಳಗಾವಿ- ಬೆಳಗಾವಿಯಲ್ಲಿ ಇವತ್ತು ಬೆಳ್ಳಂ ಬೆಳಗ್ಗೆ ಎಸಿಬಿ ಅಧಿಕಾರಿಗಳು ಅಧಿಕಾರಿಗಳು ರೇಡ್ ಮಾಡಿದ್ದಾರೆ. *ಜೂ.30ರಂದು ನಿವೃತ್ತಿಯಾಗಬೇಕಿದ್ದ ಹಿರಿಯ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು,ಬೆಳಗಾವಿಯ ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಇಂಜಿನಿಯರ್ ಮನೆ, ಕಚೇರಿ ಸೇರಿ 6 ಕಡೆ ದಾಳಿ ನಡೆದಿದೆ‌ PWD ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ.ವೈ ಪವಾರ್ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ.ಬೆಳಗಾವಿಯ ಜಕ್ಕೇರಿ ಹೊಂಡದಲ್ಲಿರುವ ಸ್ವಂತ ಬಂಗಲೆ, ಸರ್ಕಾರಿ ಮನೆ, …

Read More »

ಬೆಳಗಾವಿ ಬಾರ್ಡರ್ ನಲ್ಲಿ ಸದ್ದು ಮಾಡಿದ ಬುಲ್ಡೇಜರ್…..!!

ಬೆಳಗಾವಿ ಗಡಿಯಲ್ಲಿ ಸದ್ದು ಮಾಡಿದ ಬುಲ್ಡೇಜರ್…..!! ಬೆಳಗಾವಿ-ಬೆಳಗಾವಿ ಗಡಿಯಲ್ಲಿ ಕನ್ನಡದ ಹುಡುಗರು ಈಗ ಜಾಗೃತರಾಗಿದ್ದಾರೆ,ಕನ್ನಡದ ನೆಲ,ಜಲ,ಭಾಷೆ,ಮತ್ತು ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಆದಾಗ ಕನ್ನಡದ ಸೇನಾನಿಗಳು ಸಿಡಿದೆದ್ದು ಕನ್ನಡದ ಹಿತ ಕಾಯುತ್ತಿದ್ದಾರೆ ಅನ್ನೋದಕ್ಕೆ ಬೆಳಗಾವಿಯ ಗಡಿಭಾಗದಲ್ಲಿರುವ ಸಂಕೇಶ್ವರದಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಸಂಕೇಶ್ವರದಲ್ಲಿ ಪೂನಾ- ಬೆಂಗಳೂರು ಹೈವೇ ಪಕ್ಕದ ಗಡಿಂಗ್ಲಜ್- ಸಂಕೇಶ್ವರ ರಸ್ತೆಯ ಸೇತುವೆ ಪಕ್ಕದಲ್ಲಿ,ಮಹಾರಾಷ್ಟ್ರದ ಲೋಕೋಪಯೋಗಿ ಇಲಾಖೆ ಕರ್ನಾಟಕ ಗಡಿಯ ಮೂರು ಕಿ.ಮೀ ಒಳಗೆ,ಕನ್ನಡದ ನೆಲದಲ್ಲಿ ಕರ್ನಾಟಕದ ವ್ಯಾಪ್ತಿಯಲ್ಲಿ ಮಹಾರಾಷ್ಟ್ರ …

Read More »