Breaking News

LOCAL NEWS

ಡಿಜಿಟಲ್ ವಿಶ್ವಕ್ಕೆ‌ ಭಾರತವೇ ಗುರು: ಓಂ ಬಿರ್ಲಾ

ಬೆಳಗಾವಿ-‌ಭಾರತದಲ್ಲಿ ಡಿಜಿಟಲ್ ಶಿಕ್ಷಣದ ಹೊಸ ಯುಗ ಆರಂಭಗೊಂಡಿದೆ. ಡಿಜಿಟಲ್ ಶಿಕ್ಷಣದಲ್ಲಿ ಹಲವು ಸವಾಲುಗಳಿವೆ. ಆದಾಗ್ಯೂ ‌ಇವುಗಳನ್ನು ಮೀರಿ ಭಾರತವು ಡಿಜಿಟಲ್ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದು‌ ಜಗತ್ತಿನಲ್ಲಿ ವಿಶಿಷ್ಟ ಕೀರ್ತಿಗೆ ಪಾತ್ರವಾಗಿದೆ ಎಂದು ಲೋಕಸಭೆ ಸಭಾಧ್ಯಕ್ಷರಾದ ಓಂ ಬಿರ್ಲಾ ಅವರು ಹೇಳಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ (ಮಾ .10) ನಡೆದ ವಿಟಿಯು 21 ನೇ ಘಟಿಕೋತ್ಸವದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. …

Read More »

ಬೆಳಗಾವಿ ರೈಲು ನಿಲ್ಧಾಣದಲ್ಲೇ ಉಸಿರು ನಿಲ್ಲಿಸಿದ ಮಹಿಳೆ…..

ಬೆಳಗಾವಿ- ಜೀವನದಲ್ಲಿ ಚಿಗುಪ್ಸೆ ಹೊಂದಿ,ದೂರದ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡ ಸಾವಿರಾರು ಪ್ರಕರಣಗಳನ್ನು ನೋಡಿದ್ದೇವೆ. ಆದ್ರೆ ಇವತ್ತು ರಾತ್ರಿ 9-00 ಗಂಟೆ ಸುಮಾರಿಗೆ ಬೆಳಗಾವಿ ರೇಲ್ವೆ ನಿಲ್ಧಾಣದಲ್ಲಿ ನಡೆದಿದ್ದೇ ಬೇರೆ. ರಾತ್ರಿ 9-00 ಗಂಟೆಗೆ ದಿ.ಸುರೇಶ್ ಅಂಗಡಿ ಟ್ರೇನ್ ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿತ್ತು,ರೈಲು ಹೊರಡುವ ಮೊದಲೇ ಅಪರಿಚಿತ ಮಹಿಳೆಯೊಬ್ಬಳು ಟ್ರ್ಯಾಕ್ ಮೇಲೆ ಮಲಗಿ ಉಸಿರು ನಿಲ್ಲಿಸಿದ ಘಟನೆ ನಡೆದಿದೆ. ರೈಲು ಹೊರಡುವ ಮೊದಲೇ ಈ ಮಹಿಳೆ ಟ್ರ್ಯಾಕ್ …

Read More »

ಛೇ….ಇದು ಹೋಪ್ ಲೆಸ್… ಈಗ ಲಂಚಾವತಾರವೂ ಕ್ಯಾಶ್ ಲೆಸ್…!!!

ಬೆಳಗಾವಿ: ಈಗ ಏನಿದ್ದರೂ ಡಿಜಿಟಲ್ ಪರ್ವ ಹೀಗಾಗಿ ಈಗ ಕ್ಯಾಶ್ ಲೆಸ್ ರೋಗ  ಬ್ರಷ್ಟಾಚಾರದ ಕ್ಷೇತ್ರಕ್ಕೂ ಹರಡಿದ್ದು ,ಲಂವವನ್ನು ಪೇಟಿಯಮ್ ಮಾಡಿಸಿಕೊಂಡ ಇಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಅನ್ನೋದು ವಿಶೇಷ ಪಿತ್ರಾರ್ಜಿತ ಆಸ್ತಿ ಪರಭಾರೆಗೆ ಸಂಬಂಧಪಟ್ಟ ದಾಖಲಾತಿಗಳನ್ನು ನೀಡಲು ರೂ.4,000 ಲಂಚ ಕೇಳಿದ ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಮತ್ತು ಸಬ್ ರಿಜಿಸ್ಟ್ರಾರ್ ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್ ಬುಧವಾರ …

Read More »

ಆಯುಷ್ಮಾನ್ ಭಾರತ ಫಲಾನುಭವಿಗಳ ಜತೆ ಮಾತನಾಡಿದ ರಾಜ್ಯಪಾಲರು

  ಬೆಳಗಾವಿ ಮಾರ್ಚ್ 09, 2022: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಬುಧವಾರ ಬೆಳಗಾವಿ ಜಿಲ್ಲೆಯ ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು. ಎಲ್ಲ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಒದಗಿಸುವ ಮಹತ್ವಾಕಾಂಕ್ಷಿ ‘ಆಯುಷ್ಮಾನ್‌ ಭಾರತ್‌-ಆರೋಗ್ಯ ಕರ್ನಾಟಕ’ (ಎಬಿ-ಎಆರ್‌ಕೆ) ಯೋಜನೆಯನ್ನು ಜಾರಿಗೊಳಿಸಲಾಗಿದೆ. ದೇಶದ ಪ್ರತಿಯೊಬ್ಬರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತಾಗಬೇಕು. ಎಲ್ಲಾ ವರ್ಗದ ಸಾರ್ವಜನಿಕರಿಗೆ ಉತ್ತಮ ಚಿಕಿತ್ಸೆ ನೀಡಲು ಈ …

Read More »

ಏಕ ಭಾರತ; ಶ್ರೇಷ್ಠ ಭಾರತ’ ನಿರ್ಮಿಸೋಣ: ರಾಜ್ಯಪಾಲ ಥಾವರಚಂದ್ ಗೆಹ್ಲೊಟ್

ಬೆಳಗಾವಿ, : ಯುವ ಸಮುದಾಯವು ಸಂವಿಧಾನಾತ್ಮಕ ಕರ್ತವ್ಯಗಳನ್ನು ನಿಭಾಯಿಸಿ ‘ಏಕ ಭಾರತ ಶ್ರೇಷ್ಠ ಭಾರತ’ ನಿರ್ಮಿಸುವ ಗುರಿಯನ್ನು ಹೊಂದಬೇಕಿದೆ. ಭಾರತಕ್ಕೆ ವಿಶ್ವಗುರುವಿನ ಗೌರವವನ್ನು ಮತ್ತೆ ದೊರಕಿಸಿಕೊಡುವ ನಿಟ್ಟಿನಲ್ಲಿ ‌ನಾವೆಲ್ಲರೂ ದೃಢಹೆಜ್ಜೆಯನ್ನು ಇಡಬೇಕಿದೆ ಎಂದು ಘನತೆವೆತ್ತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೊಟ್ ಅವರು ಕರೆ ನೀಡಿದರು. ಸುವರ್ಣ ವಿಧಾನಸೌಧ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ (ಮಾ.9) ನಡೆದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 9 ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜ್ಞಾನ ಗಳಿಸುವುದು ಶಿಕ್ಷಣದ …

Read More »

ಧಿಡೀರ್ ಗೋವಾಗೆ ತೆರಳಿದ ಸತೀಶ್ ಜಾರಕಿಹೊಳಿ

ಬೆಳಗಾವಿ: ಮಾರ್ಚ್ 10ರಂದು ಪಂಚ ರಾಜ್ಯಗಳ ಫಲಿತಾಂಶ ಪ್ರಕಟವಾಗಲಿದ್ದು, ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ಮೇರೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಅವರು ಈಗಾಗಲೇ ಗೋವಾದಲ್ಲಿ ಠಿಕಾಣಿ ಹೂಡಿದ್ದಾರೆ. ಚುನಾವಣೋತ್ತರ ಸಮೀಕ್ಷೆಗಳು ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದ ಬೆನ್ನಲ್ಲೇ ಕಾಂಗ್ರೆಸ್ ಹೈ ಕಮಾಂಡ್ ಅಲರ್ಟ್‌ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ …

Read More »

ಕಿತ್ತೂರಿನ ಚೆನ್ನಮ್ಮನ ಕೋಟೆಗೆ ರಾಜ್ಯಪಾಲರ ಭೇಟಿ

ಸ್ವಾತಂತ್ರ್ಯ ಹೋರಾಟಕ್ಕೆ ರಾಣಿ ಚೆನ್ನಮ್ಮ ಕೊಡುಗೆ ಅಪಾರ : ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಬೆಳಗಾವಿ,   ರಾಣಿ ಚನ್ನಮ್ಮನ ನಾಡಿಗೆ ಬೇಟಿ ನೀಡಿದ್ದು, ನನಗೆ ಬಹಳ ಸಂತೋಷ ತಂದಿದೆ. 18 ನೇ ಶತಮಾನದ ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ರಾಣಿ ಚನ್ನಮ್ಮ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರೇಪಿಸಿದರು. ದೇಶಕ್ಕೆ ಅವರ ಕೊಡುಗೆ ಅಪಾರ ಎಂದು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು. ಚೆನ್ನಮ್ಮನ ಕಿತ್ತೂರಿಗೆ …

Read More »

ರಿಟಾಯರ್ಡ್ ಪಿಎಸ್ಐ ರಾಜಗೋಳಿ ಇನ್ನಿಲ್ಲ..

ಬೆಳಗಾವಿ- ನಗರದ ಮಾರುತಿ ಠಾಣೆಯಲ್ಲಿ ಪಿಎಸ್ಐ,ಅಗಿ ಸೇವೆ ಸಲ್ಲಿಸಿದ್ದಪ ಸದಾಶಿವ ನಗರದ ನಿವಾಸಿ ದಿ. ಶ್ರೀ ನಾಸಿರುದ್ಧಿನ ಅಬ್ದುಲ್ ಕರೀಮ್ ರಾಜಗೋಳಿ ಇವರು ದಿನಾಂಕ 08/03/2022 ರಂದು ನಿಧನರಾಗಿದ್ದಾರೆ. ಮೃತರಿಗೆ ಮಗಳು ಅಳಿಯ ಮೊಮ್ಮಕ್ಕಳು ಹಾಗೂ ಸಹೋದರ ಸಹೋದರಿ ಅಪಾರ ಬಂದು ಬಳಗವನ್ನು ಅಗಲಿದ್ದಾರೆ ಮೃತರ ಅಂತ್ಯ ಕ್ರಿಯೇಯು ನಾಳೆ ಬೆಳಗಾವಿಯ ಭೀಮ್ಸ್ ಕಾಲೇಜಿನ ಎದುರಿಗೆ ನೂರಾನಿ ಮಜ್ಜಿದ್ ಖಬರಸ್ತಾನ್ ನಲ್ಲಿ ಬೆಳಿಗ್ಗೆ 11.30 ಗಂಟೆಗೆ ಅಂತ್ಯ ಕ್ರಿಯೇ ನೆರೆವೇರಿಸಲಾಗುವದು

Read More »

ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರ ಪಡೆದ ಬೆಳಗಾವಿಯ ಸಾಧಕಿ ಯಾರು ಗೊತ್ತಾ…!!!

ಬೆಳಗಾವಿ- ಬೆಳಗಾವಿ ಪಾಲಿಗೆ ಇವತ್ತು ಹೆಮ್ಮೆಯ ದಿನ,ಮಹಿಳಾ ದಿನಾಚರಣೆಯ ದಿನವೇ ಬೆಳಗಾವಿಯ ಸಾಧಕಿಗೆ ರಾಷ್ಟ್ರಪತಿಗಳು ಇವತ್ತು ನಾರಿ ಶಕ್ತಿ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ನಮ್ಮ ಬೆಳಗಾವಿ ಜಿಲ್ಲೆಯ ಶ್ರೀಮತಿ ಶೋಭಾ ಗಸ್ತಿ ಅವರು ಈ ಬಾರಿಯ ಪ್ರತಿಷ್ಠಿತ ನಾರಿಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಬೆಳಗಾವಿಯಲ್ಲಿ ಎನ್‌ಜಿಒ ಆರಂಭಿಸಿ 3600 ಕ್ಕೂ ಹೆಚ್ಚು ದೇವದಾಸಿ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತರಲು ದುಡಿಯುತ್ತಿರುವ ಶೋಭಾ ಗಸ್ತಿ ಅವರು ನಾರಿ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದು ಬೆಳಗಾವಿ …

Read More »

ಸಾಂಸ್ಕೃತಿಕ ನಗರಿ ಬೆಳಗಾವಿಗೆ ಆಗಮಿಸಿದ ಕರ್ನಾಟಕದ ರಾಜ್ಯಪಾಲರು

ಬೆಳಗಾವಿ ಮಾರ್ಚ್ 08, 2022: ಶ್ರೀಮಂತ ಸಾಂಸ್ಕೃತಿಕ ನಗರ ಬೆಳಗಾವಿಗೆ ಮೂರು ದಿನಗಳಕಾಲ ಪ್ರವಾಸ ಕೈಗೊಂಡಿರುವ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಂದು ಸ್ವಾಗತಿಸಲಾಯಿತು. ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ ಹಿರೇಮಠ ಅವರು ಹೂಗುಚ್ಚ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ ಬೋರಲಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ, …

Read More »

ಬೆಳಗಾವಿಯಲ್ಲಿ ಇಂಡೋ ಜಪಾನ್ ಆರ್ಮಿ ಜಂಟಿ ಸಮರಭ್ಯಾಸ….

ಬೆಳಗಾವಿ- ಬೆಳಗಾವಿಯ ಮರಾಠಾ ರೆಜ್ಮೆಂಟ್ ಈಗಾಗಲೇ ಹಲವಾರು ದೇಶಗಳ ಜೊತೆಗೆ ಜಂಟಿ ಸಮರಭ್ಯಾಸ ನಡೆಸಿದ್ದು.ಇಂದಿನಿಂದ ಮೂರು ದಿನಗಳ ಕಾಲ ಬೆಳಗಾವಿಯ ಎಂ ಎಲ್ ಐ ಆರ್ ಸಿ ಕ್ಯಾಂಪ್ ನಲ್ಲಿ ಜಪಾನ್ ಆರ್ಮಿ ಭಾರತೀತೀಯ ಸೈನ್ಯ ಜಂಟಿ ಸಮರಭ್ಯಾಸ ನಡೆಸಲಿದೆ. ಬೆಳಗಾವಿಯ ಮರಾಠಾ ರೆಜ್ಮೆಂಟ್ ಕ್ಯಾಂಪ್ ನಲ್ಲಿ ಜಪಾನ್ ಸೈನಿಕರು,ಮತ್ತು ಭಾರತೀಯ ಸೈನಿಕರು ಸಮರಭ್ಯಾಸವನ್ನು ಆರಂಭಿಸಿದ್ದಾರೆ. ಸಮರದ ಸಮಯದಲ್ಲಿ ಅನುಸರಿಸುವ ವಿವಿಧ ಕಸರತ್ತುಗಳ ಕುರಿತು ಹಲವಾರು ವಿಚಾರಗಳನ್ನು ಎರಡೂ ದೇಶದ …

Read More »

ಇಪ್ಪತ್ತು ಮಕ್ಕಳ ತಾಯಿಗೊಂದು ಸಲಾಂ….!!

ಅಂತರರಾಷ್ಡ್ರೀಯ ಮಹಿಳಾ ದಿನಾಚರಣೆ ನಿಮಿತ್ಯ ವಿಶೇಷ ವರದಿ ರೋಗ ಇದೆ ಎಂದು ಹೆದರಲಿಲ್ಲ,ಬದುಕುವ ಛಲ ಬಿಡಲಿಲ್ಲ,ಎಲ್ಲ ಸವಾಲುಗಳನ್ನು ಎದುರಿಸಿ,ಸುಮಾರು ಇಪ್ಪತ್ತು ಮಕ್ಕಳಿಗೆ ಆಶ್ರಯ ನೀಡಿ,ಇಲ್ಲಿ ಆಶ್ರಯ ಪಡೆದ ಮಕ್ಕಳ ಅರೈಕೆ ಮಾಡಿದ ಈ ಮಹಾತಾಯಿಯ ಮಾನವೀಯ ಸೇವೆಗೊಂದು ಸಲಾಂ….!!! ಬೆಳಗಾವಿ- ಮಾರಕ ಎಚ್‌ಐವಿಗೆ ಸವಾಲೆಸೆದು, ಎಚ್‌ಐವಿ ಪೀಡತರಿಗೆ ಬದುಕು ನೀಡಿದ ಮಾದರಿ ಮಹಿಳೆ – ಬೆಳಗಾವಿಯ ನಾಗರತ್ನ ಸುನಿಲ್ ರಾಮಗೌಡ ಎಚ್‌ಐವಿ ಒಂದು ಮಾರಣಾಂತಿಕ ಖಾಯಿಲೆ ಎಂದು ಪರಿಗಣಿಸಲಾಗಿದೆ. ಈ …

Read More »

ಬೆಳಗಾವಿಯಲ್ಲಿ ಪನ್ನಿ ಮಾರಾಟ ಇಬ್ಬರನ್ನ ಅರೆಸ್ಟ್ ಮಾಡಿದ ಖಡೇಬಜಾರ ಪೊಲೀಸರು..!

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಗಾಂಜಾ,ಪನ್ನಿ ಸೇರಿದಂತೆ ಇತರ ಮಾದಕ ವಸ್ತುಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ‌,ಎನ್ನುವ ಆರೋಪಗಳು ದಟ್ಡವಾದ ಬೆನ್ನಲ್ಲಿ ಬೆಳಗಾವಿ ಪೋಲೀಸ್ರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಬೆಳಗಾವಿ: ಪನ್ನಿ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಖಡೇಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಪನ್ನಿ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಖಡೇಬಜಾರ್ ಸಿಪಿಐ ಡಿ.ಪಿ.ನಿಂಬಾಳ್ಕರ್ ನೇತೃತ್ವದ ತಂಡವು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದೆ. ಉಜ್ವಲ್ …

Read More »

ರಾಜರಥದಲ್ಲಿ ಗುರು…ಕೈತುತ್ತು ಊಟ…ಇದು ರಿಯಲ್ ನೋಟ…!!

ಬೆಳಗಾವಿ: ಪುಷ್ಪಗಳಿಂದ ಸಿಂಗರಿಸಿದ ರಥದಲ್ಲಿ ಆಸೀನರಾಗಿದ್ದ ಗುರುಗಳು… ಬೀದಿ ಬೀದಿಗಳಲ್ಲಿ ಅದ್ದೂರು ಮೆರವಣಿಗೆ… ಶಿಷ್ಯರಿಂದ ಹೂಮಳೆ…ಬಳಿಕ ಅಕ್ಷರ ಕಲಿಸಿದ ಗುರುಗಳಿಗೆ ಕೈತುತ್ತು ತಿನ್ನಿಸಿ ಸಾರ್ಥಕತೆ ಮೆರೆದ ವಿದ್ಯಾರ್ಥಿಗಳು… ಇದು ಯಾವುದೋ ಕಾಲದ ಕತೆಯನ್ನಾಧರಿಸಿದ ಸಿನಿಮಾ ದೃಶ್ಯ ಎಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಎಲ್ಲ ಸಂಬಂಧಗಳು ಯಾಂತ್ರಿಕವಾಗಿರುವ ಇಂದಿನ ದಿನಗಳಲ್ಲಿ ಹುಕ್ಕೇರಿಯಲ್ಲಿ ಇಂದು ಕಂಡುಬಂದ ದೃಶ್ಯ. ಹೌದು, ಶ್ರೀ ಕಾಡಸಿದ್ದೇಶ್ವರ ಪ್ರೌಢಶಾಲೆಯ 1988-89 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪುನರ್ಮಿಲನ ಮತ್ತು …

Read More »

6 ಕೋಟಿ ಲೂಟಿ ಮಾಡಿ ಸಿಸಿ ಟಿವ್ಹಿ ಕ್ಯಾಮರಾ ಹೊತ್ಕೊಂಡ ಹೋದ್ರು…..!!

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕಿನ ಮುರುಗೋಡ ಶಾಖೆಯಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳುವ ದರೋಡೆ ನಡೆದಿದೆ.ನಾಲ್ಕು ಕೋಟಿ ಕ್ಯಾಶ್ ಬ್ಯಾಂಕಿನಲ್ಲಿ ಅಡವಿಟ್ಡ ಗೋಲ್ಡ್ ಸೇರಿದಂತೆ ಒಟ್ಟು ಆರು ಕೋಟಿಯಷ್ಟು ಲೂಟಿಯಾಗಿದ್ದು ದರೋಡೆಕೋರರು ಸಸಿಟಿವ್ಹಿ ಕ್ಯಾಮರಾದ ಡಿವ್ಹಿಆರ್ ಹೊತ್ಕೊಂಡು ಹೋಗಿದ್ದಾರೆ.ಕೀಲಿ ಮುರಿಯದೇ ನಕಲಿ ಕೀ ಬಳಿಸಿ,ವ್ಯೆವಸ್ಥಿತವಾಗಿ ದರೋಡೆ ಮಾಡಲಾಗಿದ್ದು ನಿನ್ನೆ ನಡೆದಿರುವ ಈ ಘಟನೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಹಣ ದರೋಡೆ- ಹಲವು …

Read More »