Breaking News

LOCAL NEWS

ಬೆಳಗಾವಿಯಲ್ಲಿ ಕೊರೊನಾ‌ ಯೋಧರಿಗೆ ಸನ್ಮಾನ

ಬೆಳಗಾವಿ -: ವಿಶ್ವ ಮಾನವ ಹಕ್ಕುಗಳ ದಿನಾಚರಣೆಯ ಮುಖ್ಯ ಉದ್ದೇಶ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆ ಆದರೆ ಮಾನವ ಹಕ್ಕುಗಳ ಆಯೋಗಕ್ಕೆ ಮೊರೆ ಹೋಗುವ ಮೂಲಕ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಕಿವಿಮಾತು ಹೇಳಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ‌ ಶಾಖೆ, ಗೃಹರಕ್ಷಕದಳ ಮತ್ತು ಪೌರರಕ್ಷಣೆ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಡಿ.10) ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ …

Read More »

ಬೆಳಗಾವಿಯಲ್ಲಿ ಧಿಡೀರ್ ಬಸ್ ಬಂದ್,ಸಾರಿಗೆ ನೌಕರರ ಮುಷ್ಕರ.

ಬೆ ಬೆಳಗಾವಿ- ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಗಣಿಸುವಂತೆ ಆಗ್ರಹಿಸಿ ರಾಜಧಾನಿ ಬೆಂಗಳೂರಿನಲ್ಲಿ ಹೋರಾಟ ನಡೆದಿದ್ದು ಬೆಳಗಾವಿಯ ಸಾರಿಗೆ ನೌಕರರು ಈ ಹೋರಾಟಕ್ಕೆ ಬೆಂಬಲ ವ್ಯೆಕ್ತ ಪಡಿಸಿ ಇಂದು ಬೆಳ್ಳಂ ಬೆಳಗ್ಗೆ ಮುಷ್ಕರ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಬೆಳಗಾವಿಯ ನಗರ ಸಾರಿಗೆ,ಮತ್ತು ಕೇಂದ್ರ ಬಸ್ ನಿಲ್ಧಾಣದಲ್ಲಿ ,ಹಾಗೂ ನಗರದ ಎಲ್ಲ ಡಿಪೋಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರಿಗೆ ನೌಕರರು ಧಿಢೀರ್ ಮುಷ್ಕರ ಆರಂಭಿಸಿದ್ದಾರೆ. ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣದಲ್ಲಿ ಸಾವಿರಾರು ನೌಕರರು ಸೇರದ್ದು,ಸರ್ಕಾರ …

Read More »

ಹಿಂಡಲಗಾ ಜೈಲಿಗೆ ಬಂದಿದ್ರು ವಿನಯ್ ಕುಲಕರ್ಣಿ ಕುಟುಂಬಸ್ಥರು

ವಿನಯ್ ಕುಲಕರ್ಣಿ ಭೇಟಿಗೆ ಕುಟುಂಬಸ್ಥರಿಗೆ ಅವಕಾಶ ಬೆಳಗಾವಿ-ಕೊಲೆ ಪ್ರಕರಣದಲ್ಲಿ ಸಿಬಿಐ ನಿಂದ ಬಂಧನಕ್ಕೊಳಗಾಗಿ ಹಿಂಡಲಗಾ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭೇಟಿಗೆ ಮಾನ್ಯ ನ್ಯಾಯಾಲಯ ಕುಲಕರ್ಣಿ ಕುಟುಂಬಸ್ಥರಿಗೆ ಅವಕಾಶ ನೀಡಿತ್ತು. ಧಾರವಾಡ ಮೂರನೇ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಅವಕಾಶ ದೊರೆತ ಹಿನ್ನಲೆಯಲ್ಲಿ, ಈ ಸಂಬಂಧ ಜೈಲು ಅಧೀಕ್ಷಕರಿಗೆ ಪತ್ರ ರವಾನೆ ಆಗಿತ್ತು, ಇಂದು ಸಂಜೆ 4 ಗಂಟೆಯಿಂದ 5 ಗಂಟೆ ಮಧ್ಯದೊಳಗೆ ಭೇಟಿಗೆ ಅವಕಾಶ ನೀಡಲಾಗಿತ್ತು …

Read More »

ರಸ್ತೆಯಲ್ಲಿ ಲಂಚ್….ಕೇಂದ್ರದ ಕೃಷಿ ನೀತಿಗೆ, ಪಂಚ್…!!!

ರಸ್ತೆಯಲ್ಲೇ ಅಡುಗೆ, ರಸ್ತೆಯಲ್ಲೇ ಊಟ…!!! ಬೆಳಗಾವಿ-/ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತರು, ಬೆಳಗಾವಿಯ ಸುವರ್ಣಸೌಧ ಎದುರು ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ರೈತರ ಧರಣಿ ಮುಂದುವರೆದಿದೆ. ರೈತರು, ರಸ್ತೆಯಲ್ಲಿ ಅಡುಗೆ ಮಾಡಿಕೊಂಡು, ಎನ್‌ಹೆಚ್‌4 ಪಕ್ಕದ ಸರ್ವೀಸ್ ರಸ್ತೆಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಧರಣಿ ನಿರತ ರೈತರು ನ್ಯಾಷನಲ್ ಹೈವೇ ಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಊಟ ಮಾಡಿ ಮತ್ತೆ ಪ್ರತಿಭಟನೆ ಮುಂದುವರೆಸಿರುವ ರೈತರ ಧರಣಿಯಲ್ಲಿ ರಾಜ್ಯ ರೈತ ಸಂಘ, …

Read More »

ಕಾಂಗ್ರೆಸ್ಸಿನಲ್ಲಿ ಬಾಬಾಸಾಹೇಬ್ ಫಿಕ್ಸ್..ಬದಲಾದ ಕಿತ್ತೂರು ಪಾಲಿಟಿಕ್ಸ್…!!

ಬೆಳಗಾವಿ-ಸಂಘಟನಾ ಚತುರ ಕಿತ್ತೂರ ಕ್ಷೇತ್ರದ ನಾಯಕ ಬಾಬಾಸಾಹೇಬ್ ಪಾಟೀಲ್ ಕೊನೆಗೂ,ಕೆಪಿಸಿಸಿ ಅದ್ಯಕ್ಷ ಡಿಕೆ ಶಿವಕುಮಾರ್ ಮತ್ರು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕಿತ್ತೂರು ಕ್ಷೇತ್ರದ ಪ್ರಭಾವಿ ನಾಯಕರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಬಾಬಾಸಾಹೇಬ್ ಪಾಟೀಲ್ ,ಕಿತ್ತೂರ ಕ್ಷೇತ್ರದ ರಾಜಕೀಯ ಸಮರದಲ್ಲಿ ಧುಮುಕಿದ್ದಾರೆ. ಕಿತ್ತೂರು ಕ್ಷೇತ್ರದಲ್ಲಿ ಅಪಾರ ಬೆಂಬಲಿಗರ ಪಡೆಯನ್ನು ಹೊಂದಿರುವ ಬಾಬಾಸಾಹೇಬ್ ಪಾಟೀಲ ಅವರ …

Read More »

ಕೃಷಿ ನೀತಿ ಖಂಡಿಸಿ ಸುವರ್ಣಸೌಧದ ಎದುರು ರೈತರ ಧರಣಿ

ಬೆಳಗಾವಿ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿ ಬೆಳಗಾವಿಯ ಸುವರ್ಣಸೌಧದ ಮುಂದೆ ರೈತರು ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ ನೇತೃತ್ವ ವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ನೀತಿ ಖಂಡಿಸಿ ರೈತರು ದೆಹಲಿ ಮತ್ತು ಬೆಂಗಳೂರಿನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ನೂರಾರು ರೈತರು ಗುರುವಾರ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ …

Read More »

ಹಿರಿಯ ಪತ್ರಕರ್ತ ಅಶೋಕ ಯಾಳಗಿ ನಿಧನ

ಬೆಳಗಾವಿ- ಹಲವಾರು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಅಶೋಕ ಯಾಳಗಿ ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಗಾವಿಯ ವಿನಾಯಕ ನಗರದ ನಿವಾಸಿಯಾಗಿದ್ತ ಅವರು ತರುಣ ಭಾರತ ದಿನಪತ್ರಿಕೆ ಯಲ್ಲಿ ಮುಖ್ಯ ವರದಿಗಾರರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು ಲೋಕಮಾನ್ಯ ಗ್ರಂಥಾಲಯ,ಮತ್ತು ವಾಂಗ್ಮಯ ಚರ್ಚಾ ಮಂಡಳದ ಕಾರ್ಯಾಧ್ಯಕ್ಷರಾಗಿದ್ದ ಅಶೋಕ ಯಾಳಗಿ ಅವರಿಗೆ-82 ವರ್ಷ ವಯಸ್ಸಾಗಿತ್ತು ಇಂದು ಬೆಳಗಿನ ಜಾವ ಅವರು ನಿಧನರಾಗಿದ್ದು,ಅಂತ್ಯಕ್ರಿಯೆ …

Read More »

ಸದನದಲ್ಲಿ ಸದ್ದು ಮಾಡಲಿರುವ ಬೆಳಗಾವಿಯ ಎರಡು ಯೋಜನೆಗಳು

ಬೆಳಗಾವಿ- ಶಾಸಕ ಅಭಯ ಪಾಟೀಲ ಅವರು ಕಳೆದ ಬಾರಿಯ ಅಧಿವೇಶನದಲ್ಲಿ, ಬೆಳಗಾವಿಯಲ್ಲಿ ಹೈಟೆಕ್ ಐಟಿ ಪಾರ್ಕ್ ನಿರ್ಮಾಣ, ಮತ್ತು, ಐತಿಹಾಸಿಕ ಸ್ಮಾರಕಗಳ ( ರಿಪ್ಲಿಕಾ) ನಿರ್ಮಾಣ ಮಾಡುವಂತೆ ಸರ್ಕಾರದ ಗಮನ ಸೆಳೆಯಲು ಎರಡು ಖಾಸಗಿ ನಿರ್ಣಯಗಳನ್ನು ಮಂಡಿಸಿದ್ದು ಈ ಎರಡು ಖಾಸಗಿ ನಿರ್ಣಯಗಳು ನಾಳೆ ಗುರುವಾರ ಸದನದಲ್ಲಿ ಚರ್ಚೆಗೆ ಬರಲಿವೆ. ಶಾಸಕ ಅಭಯ ಪಾಟೀಲ ಅವರು ಕಳೆದ ಅಧಿವೇಶನದಲ್ಲಿ ಮಂಡಿಸಿರುವ ಎರಡು ಖಾಸಗಿ ನಿರ್ಣಯಗಳು,ನಾಳೆ ಗುರುವಾರ ಸದನದಲ್ಲಿ ಚರ್ಚೆಗೆ ಬರುವ …

Read More »

ವಿಧಾನಸಭೆಯಲ್ಲಿ,ಗೋ ಹತ್ಯೆ ನಿಷೇಧ ಬಿಲ್ ಪಾಸ್….

ಬೆಳಗಾವಿ-ಕಾಂಗ್ರೆಸ್ಸಿನ ವಿರೋಧದ ನಡುವೆಯೂ ಸದನದಲ್ಲಿ ಸರ್ಕಾರ,ಪ್ರಬಲವಾದ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದಾರೆ,ವಿಧಾನಸಭೆಯಲ್ಲಿ ಬಿಲ್ ಪಾಸ್ ಆಗಿದೆ. ವಿಧಾನಸಭೆಯಲ್ಲಿ ಗೋಹತ್ಯೆ ನಿಷೇಧ ವಿದೇಯಕ ಅಂಗೀಕಾರವಾಗಿದೆ.ಸರ್ಕಾರ ಗೋಹತ್ಯೆ ನಿಷೇಧ ಮಸೂದೆ ವಿಧೇಯಕ ವನ್ನು ಮಂಡಿಸಿತು,ಸ್ಪೀಕರ್ ಮತಕ್ಕೆ ಹಾಕಿದಾಗ ಗೋಹತ್ಯೆ ನಿಷೇಧದ ವಿದೇಯಕದ ಪರವಾಗಿ ಹೆಚ್ಚಿನ ಮತಗಳು ಲಭಿಸಿರುವದರಿಂದ ವಿಧೇಯಕ ಅಂಗೀಕಾರವಾಗಿದೆ. ವಿಪಕ್ಷಗಳ ಗಲಾಟೆಯ ನಡುವೆ ವಿಧೇಯಕ ಅಂಗೀಕಾರವಾಗಿದೆ, ಬಿಎಸಿ ಸಭೆಯಲ್ಲಿ ವಿಧೇಯಕ ಬಗ್ಗೆ ಹೇಳಿಲ್ಲ, ಏಕ ಪಕ್ಷೀಯವಾಗಿ ನಿರ್ಧಾರ ಕೈಗೊಳ್ಳಲಾಗಿದೆ.ಎಂದು ಆರೋಪಿಸಿ …

Read More »

ತಂಬಾಕು,ಸಿಗರೇಟು,ಗುಟಕಾ,ಸೇವನೆಗೆ ಬ್ರೇಕ್ ಹಾಕಲು ಕೋಟ್ಪಾ ಕಾಯ್ದೆ

ಬೆಳಗಾವಿ,-: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ, ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಇವರ ಸಹಯೋಗದಲ್ಲಿ “ಕಾನೂನು ಜಾರಿಗೂಳಿಸಲು ಪೊಲೀಸ್ ಅಧಿಕಾರಿಗಳಿಗೆ” ತಂಬಾಕು ಹಾಗೂ ತಂಬಾಕಿನಿಂದಾಗುವ ದುಷ್ಪರಿಣಾಮದ ಬಗ್ಗೆ ಬುಧವಾರ(ಡಿ.9) ಒಂದು ದಿನದ ತರಬೇತಿ ಕಾರ್ಯಾಗಾರ ಜಿಲ್ಲಾ ತರಬೇತಿ ಕೇಂದ್ರ ಬೆಳಗಾವಿಯಲ್ಲಿ ಜರುಗಿತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸಿಪಿಐ ಕುಬೇರ ರಾಯಮನಿ ಅವರು, “ತಂಬಾಕು ಹಾಗೂ ತಂಬಾಕಿನ ಉತ್ಪನ್ನಗಳಿಂದ ಮನುಷ್ಯನ ಆರೋಗ್ಯದ ಮೇಲೆ ಹಲವಾರು …

Read More »

ಬೆಳಗಾವಿ – ಹುಬ್ಬಳ್ಳಿ ನಡುವೆ,ನಾನ್ ಸ್ಟಾಪ್ ವೋಲ್ವೋ ಬಸ್ ಸರ್ವಿಸ್…

ಬೆಳಗಾವಿ – ಪ್ರಯಾಣಿಕರ ಅನಕೂಲಕ್ಕಾಗಿ NWKSRTC ಬೆಳಗಾವಿ- ಹುಬ್ಬಳ್ಳಿ ನಡೆವೆ ತಡೆ ರಹಿತ ವೋಲ್ವೋ ಬಸ್ ಸೇವೆ ಆರಂಭಿಸಿದೆ. ಪ್ರಯಾಣದ ದರ ಒಬ್ಬರಿಗೆ 150 ₹ , ಬೆಳಿಗ್ಗೆ 8-30 ,9-00 am,11-45, 12-45, 3-00 ಗಂಟೆ,3-30,5-30 6-00 ಗಂಟೆಗೆ ಬೆಳಗಾವಿಯಿಂದ ಹುಬ್ಬಳ್ಳಿ,ಹುಬ್ಬಳ್ಳಿಯಿಂದ ಬೆಳಗಾವಿಗೆ ಎರಡೂ ಕಡೆಯಿಂದ ವೋಲ್ವೋ ಬಸ್ ಗಳು ಹೊರಡಲಿವೆ. ಪ್ರಯಾಣಿಕರ ವೋಲ್ವೋ ಬಸ್ ಗಳ ಸೇವೆಯ ಲಾಭವನ್ನು ಪಡೆಯಬಹುದಾಗಿದೆ. NWKRTC Belagavi – Hubballi Non-Stop …

Read More »

ಇಲ್ಲಿ ಆತ್ಮಗಳು ವಾಸಿಸುತ್ತಿವೆ ಅಂತಾ ಸರ್ಕಾರವೇ ಬೋರ್ಡ್ ಹಾಕಿದೆ…!!!

ಬೆಳಗಾವ-ಉರಿನ ಹೆಸರು,ಜನಸಂಖ್ಯೆ ಬರೆದು ಬೋರ್ಡ್ ಹಾಕಿದ್ದನ್ನು ನಾವು ನೋಡಿದ್ದೇವೆ.ಆದ್ರೆ ಊರಿನ ಹೆಸರು,ಊರಿನಲ್ಲಿ ಇಷ್ಟು ಆತ್ಮಗಳು ಬದುಕುತ್ತಿವೆ ಅಂತಾ ಸರ್ಕಾರವೇ ಬೋರ್ಡ್ ಹಾಕಿ ಅಚ್ಚರಿ ಮೂಡಿಸಿದೆ. ಬೆಳಗಾವಿ ಸಾಂಬ್ರಾ ರಸ್ತೆಯಲ್ಲಿ ಸಂಚರಿಸಿ ನೋಡಿ,ಈ ರಸ್ತೆಯಲ್ಲಿ ಬರುವ ಪ್ರತಿಯೊಂದು ಗ್ರಾಮದಲ್ಲೂ ಬೆಳಗಾವಿ – ಬಾಗಲಕೋಟೆ ಹೈವೇ ಪಕ್ಕ ಬೋರ್ಡ್ ಹಾಕಿದ್ದಾರೆ.ಈ ಬೋರ್ಡ್ ನಲ್ಲಿ ಗ್ರಾಮದ ಹೆಸರು,ಜನಸಂಖ್ಯೆ ಬರೆದಿದ್ದಾರೆ ಜೊತೆಗೆ souls ಎಂಬ ಪದ ಬಳಕೆ ಮಾಡಿದ್ದಾರೆ souls ಅಂದ್ರೆ ಆತ್ಮ ಈ ಗ್ರಾಮದಲ್ಲಿ …

Read More »

ಅಭಯ ಪಾಟೀಲ ಪ್ರಶ್ನೆ ಕೇಳಿದ್ರು…ಜೊಲ್ಲೆ ಉತ್ತರ ಕೊಟ್ರು…!!!

ಬೆಳಗಾವಿ-ನೇಕಾರರು ಸಂಕಕಷ್ಟದಲ್ಲಿದ್ದಾರೆ,ನೇಕಾರರು ಸಿದ್ಧಪಡಿಸಿದ ಸೀರೆಗಳನ್ನು ಸರ್ಕಾರ ಖರೀಧಿ ಮಾಡಬೇಕೆಂದು ಅಧಿವೇಶನದಲ್ಲಿ ಶಾಸಕ ಅಭಯ ಪಾಟೀಲ ಸಿದ್ಧು ಸವದಿ,ಮಹಾದೇವಪ್ಪಾ ಯಾದವಾಡ ಸರ್ಕಾರದ ಗಮನ ಸೆಳೆದರು. ಶಾಸಕ ಅಭಯ ಪಾಟೀಲ ಮಾತನಾಡಿ,ನನ್ನ ಕ್ಷೇತ್ರದಲ್ಲಿ ನೇಕಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ‌.ಸಂಕಷ್ಟದಲ್ಲಿರುವ ಬಹಳಷ್ಟು ನೇಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನೇಕಾರರ ಸೀರೆ ಖರೀಧಿ ಮಾಡುವ ಕುರಿತು ಅನೇಕ ಬಾರಿ ನಿಯೋಗ ತಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ.ಕಾರಣಾಂತರಗಳಿಂದ ಸೀರೆ ಖರೀಧಿಗೆ ಚಾಲನೆ ಸಿಕ್ಕಿಲ್ಲ ,ಸರ್ಕಾರ ಆದಷ್ಟು ಬೇಗನೆ ನೇಕಾರರ ಸೀರೆ ಖರೀಧಿ …

Read More »

ಬಾವಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲು….

ಬೆಳಗಾವಿ- ಆಟವಾಡಲು ಹೋಗಿ,ಬಾವಿಯಲ್ಲಿ ಮುಳುಗಿ ಇಬ್ಬರು ಮಕ್ಕಳು ನೀರು ಪಾಲಾದ ಘಟನೆ,ಬೆಳಗಾವಿ ಸಮೀಪದ ಬೆಕ್ಕಿನಕೇರಿಯಲ್ಲಿ ನಡೆದಿದೆ. ಮೈತ ಮಕ್ಕಳು 1) ಲೋಕೇಶ ವಿಠ್ಠಲ ಪಾಟೀಲ್ 10 ವರ್ಷ ಸಾ= ಬೆಕ್ಕಿನಕೇರೆ 2) ನಿಕೀಲ ರಾಮು ಬೊಂದ್ರೆ 7 ವರ್ಷ ಸಾ=ದೆಕೂಳೆ (MH), ಬಾವಿಯಲ್ಲಿ ಮುಳುಗಿ ಸಾವನ್ನೊಪ್ಪಿದ್ದಾರೆ. ಬೆಕ್ಕಿನಕೇರಿಯಲ್ಲಿ ಚಿಕ್ಕ ಚಿಕ್ಜ,ಬಾವಿಗಳಿದ್ದು,ಬಾವಿಯಲ್ಲಿನ ಏಡಿಗಳನ್ನು ಹಿಡಿಯುತ್ತ ಆಟವಾಡುತ್ತಿರುವಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಕಾಕತಿ ಪೋಲೀಸರು ದೌಡಾಯಿಸಿದ್ದು ತನಿಖೆ …

Read More »

ಬೆಳಗಾವಿ ಪಾಲಿಕೆ ಆಯುಕ್ತರ ಕನ್ನಡ ಪ್ರೇಮ…..

” ಬೆಳಗಾಮ್” ಫಲಕ ಕಿತ್ತು ಹಾಕಿದ ಮಹಾನಗರ ಪಾಲಿಕೆ: ರಂಗೋಲಿಗೊಂದು ” ಗೋಲಿ”!! ಪಾಲಿಕೆಯ ಆಯುಕ್ತರ ತುರ್ತು ಕ್ರಮ. ಬೆಳಗಾವಿಯಲ್ಲಿ ವಸ್ತು ಪ್ರದರ್ಶನ ನಡೆಸುವ ಸಂಬಂಧ ಕೆಲವು ಕಡೆ ನಿಲ್ಲಿಸಿದ್ದ ಫಲಕಗಳಲ್ಲಿ ” ಬೆಲಗಾಮ್” ಎಂದು ಇಂಗ್ಲೀಷಿನಲ್ಲಿ ಬರೆಸಿದ್ದನ್ನು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಇಂದು ಮಂಗಳವಾರ ಮುಂಜಾನೆ ಆಕ್ಷೇಪಿಸಿತ್ತು.ಬೆಳಗಾವಿ ಹಿಂಡಲಗಾ ಗಣಪತಿ ಗುಡಿಯ ಹಿಂದೆ ನಿಲ್ಲಿಸಿದ್ದ ಫಲಕದ ಫೋಟೊ ಸಹಿತ ಮಹಾನಗರ ಪಾಲಿಕೆಯ ಆಯುಕ್ತ ಶ್ರೀ …

Read More »