Breaking News

LOCAL NEWS

ಎಂಟು ಬೈಕ್ ಸೀಜ್, ನಾಲ್ಕು ಜನ ಆರೋಪಿಗಳು ಅರೆಸ್ಟ್ .

ಬೆಳಗಾವಿ- ಬೆಳಗಾವಿ ಮಹಾನಗರದ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ನಾಲ್ಕು ಜನ ಖದೀಮರನ್ನು ಬಂಧಿಸುವಲ್ಲಿ ಮಾರ್ಕೆಟ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ. ಮಾರ್ಕೆಟ್ ಠಾಣೆಯ ಇನೆಸ್ಪೆಕ್ಟರ್ ಸಂಗಮೇಶ ಶಿವಯೋಗಿ ಅವರ ನೇತ್ರತ್ವದಲ್ಲಿ ಕಾರ್ಯಚರಣೆ ನಡೆಸಿದ ಪೋಲೀಸರು,ಸುಮಾರು 3 ಲಕ್ಷ ರೂ ಮೌಲ್ಯದ 8 ಬೈಕ್ ಗಳನ್ನು ವಶಪಡಿಸಿಕೊಂಡು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬೈಕ್ ಕಳ್ಳತನ ಮಾಡುವ ಆರೋಪದ ಮೇಲೆ, ಬೆಳಗಾವಿ – ಯಳ್ಳೂರ ರಸ್ತೆಯಲ್ಲಿರುವ ಕೆಎಲ್ಇ ಆಸ್ಪತ್ರೆ …

Read More »

ಸಾಹುಕಾರ್ ರಮೇಶ್ ಜಾರಕಿಹೋಳಿ ಅವರನ್ನು ಹೊಗಳಿದ ಸ್ವಾಮೀಜಿ

ಬೆಳಗಾವಿ- ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಗೆ ಸೇರಿಸುವಂತೆ ಆಗ್ರಹಿಸಿ ಬೆಳಗಾವಿ ಸುವರ್ಣಸೌಧದ ಮುಂದೆ ಧರಣಿ ನಡೆಯುತ್ತಿದೆ. ಪಂಚಮಸಾಲಿ ಸಮಾಜದ ನೂರಾರು ಜನ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಧರ್ಭದಲ್ಲಿ ಮಾತನಾಡಿದ  ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ,ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಅವರನ್ನು ಹೊಗಳಿದ್ದಾರೆ. ರಮೇಶ ಜಾರಕಿಹೊಳಿ ಅವರು ಕಿಂಗ್ ಆಗುವ ಅವಕಾಶವಿತ್ತು, ಆದರೆ ಕಿಂಗ್ ಆಗದೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಮೂಲಕ ಕಿಂಗ್ …

Read More »

ಬೆಳಗಾವಿಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಳಗಾವಿ- ಸರ್ಕಾರ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ 65 ಜನರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಸರ್ಕಾರ ಇಂದು ಬೆಳಗಾವಿ ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಬೆಳಗಾವಿಯ ಬಯಲಾಟದ ಕೆಂಪವ್ವ ಹರಿಜನ, ಅನಂತ ತೇರದಾಳ (ಸಂಗೀತ) ಅಶೋಕ ಶೆಟ್ಟರ್ (ಶಿಕ್ಷಣ) ಸೇರಿ 65 ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದೆ.

Read More »

ಬೆಳಗಾವಿಯ ವಿಕಾಸ ಎಕ್ಸಪ್ರೆಸ್ ಸ್ಟೇರಿಂಗ್ ಯಾರ ಕೈಯಲ್ಲಿದೆ ಗೊತ್ತಾ….??

ಬೆಳಗಾವಿ- ಸುರ್ಯೋದಯವಾಗುತ್ತಿದ್ದಂತೆಯೇ ಅವರು ಮನೆ ಬಿಟ್ಟು ಹೊರಗೆ ಬರ್ತಾರೆ,ಬೆಳಗಾವಿ ನಗರವನ್ನು ಸುಂದರಗೊಳಿಸಲು ಹೊಸ,ಹೊಸ ಆಲೋಚನೆಗಳನ್ನು ಮಾಡಿ,ಎಲ್ಲರಿಗೂ ಮಾದರಿಯಾಗುವಂತಹ ಯೋಜನೆಗಳನ್ನು ರೂಪಿಸುತ್ತಾರೆ,ಈಗ ಸದ್ಯೆ ಬೆಳಗಾವಿ ಮಹಾನಗರದ ವಿಕಾಸ ಎಕ್ಸ್‌ಪ್ರೆಸ್‌ ಗಾಡಿ ಓಡುತ್ತಿದೆ,ಅದಕ್ಕೆ ಎರಡು ಸ್ಟೇರಿಂಗ್ ಇದೆ,ಒಂದು ಸ್ಟೇರಿಂಗ್ ಶಾಸಕ ಅಭಯ ಪಾಟೀಲ ಅವರ ಕೈಯಲ್ಲಿದೆ,ಇನ್ನೊಂದು ಶಾಸಕ ಅನೀಲ ಬೆನಕೆ ಅವರ ಕೈಯಲ್ಲಿದೆ. ಇಂದು ಬೆಳ್ಳಂ ಬೆಳಿಗ್ಗೆ ಶಾಸಕ ಅಭಯ ಪಾಟೀಲ ಬೆಳಗಾವಿ ಮಹಾನಗರದ ಛತ್ರಪತಿ ಶಿವಾಜಿ ಗಾರ್ಡನ್ ಗೆ ಭೇಟಿ ನೀಡಿದ್ರು,ಅಲ್ಲಿ …

Read More »

ಎಕ್ಕಾ ರಾಜಾ ರಾಣಿ ಆಟ….ಹನ್ನೊಂದು ಜನ ಅರೆಸ್ಟ್..

ಶ್ರೀ ಮಂಜುನಾಥ ಪಿ ಎಸ್ ಐ (ಕಾ & ಸು) ಶಹಾಪೂರ ಪೊಲೀಸ್ ಠಾಣೆ ರವರ ನೇತೃತ್ವದ ತಂಡವು ಬೆಳಗಾವಿ ನಗರದ ಜುನ್ನೆ ಬೆಳಗಾವಿಯ ಕನಕದಾಸನಗರದ ಸಾರ್ವಜನಿಕ ಸ್ಥಳದಲ್ಲಿ *ಜೂಜಾಟ* ಆಡುತ್ತಿರುವವರ ಮೇಲೆ ದಾಳಿ ಕೈಕೊಂಡು, ದಾಳಿ ಸಂದರ್ಭದಲ್ಲಿ ಒಟ್ಟು 11 ಜನ ಆರೋಪಿತರಾದ 1) ವಿಜಯ ಪ್ರಕಾಶ ಯಲಾಜಿ ವಯಸ್ಸು:41 ವರ್ಷ ಸಾ: ಕನಕದಾಸ ನಗರ ಜುನ್ನೆ ಬೆಳಗಾವಿ, 2) ಮನೋಜ ಸದಾಶಿವ ಕುರಬರ ವಯಸ್ಸು:26 ವರ್ಷ ಸಾ: …

Read More »

ಪ್ರಕಾಶ ಹುಕ್ಕೇರಿ ಸಿರೀಯಸ್ ರಾಜಕಾರಣಿಯಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ-ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಸಿರೀಯಸ್ ರಾಜಕಾರಣಿಯಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ಹೇಳಿದ್ದಾರೆ. ಬೆಳಗಾವಿಯಲ್ಲಿ ಖಾಸಗಿ ಸುದ್ಧಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಕಾಶ್ ಹುಕ್ಕೇರಿ ವಿರುದ್ಧ ವಾಗ್ದಾಳಿ ಮಾಡಿದ ಅವರು, ಕಾಂಗ್ರೆಸ್ ನಲ್ಲಿ ಇದ್ರೂ ಒಳ್ಳೆಯದು ಹೋದ್ರೂ ಒಳ್ಳೆಯದು,ನಾವೇನು ಕಾಂಗ್ರೆಸ್ ಹೈಕಮಾಂಡ ಮುಂದೆ ಹೊರಹಾಕಿ, ಇಟ್ಟುಕೊಳ್ಳಿ ಅಂತ ಹೇಳುವುದಿಲ್ಲ. ಕಾಂಗ್ರೆಸ್ ನಲ್ಲಿದ್ದು ಬಿಜೆಪಿ ಅಭ್ಯರ್ಥಿ ಬೆಂಬಲಿಸುವ ಪ್ರಕಾಶ ಹುಕ್ಕೇರಿ ಹೇಳಿಕೆ ವಿಚಾರ ಈ ಹೇಳಿಕೆ ಪ್ರಕಾಶ ಹುಕ್ಮೇರಿ ಅವರ …

Read More »

ರಾಜ್ಯೋತ್ಸವದ ದಿನ ಕಿತಾಪತಿ ಮಾಡಲು ಎಂಈಎಸ್ ನಿಂದ ಹೊಸ ಐಡಿಯಾ…!!

ರಾಜ್ಯೋತ್ಸವದ ದಿನ ಕಿತಾಪತಿ ಮಾಡಲು ಎಂಈಎಸ್ ನಿಂದ ಹೊಸ ಐಡಿಯಾ…!! ಬೆಳಗಾವಿ- ರಾಜ್ಯೋತ್ಸವದ ದಿನ ಕನ್ನಡಿಗರು ಹಬ್ಬದ ಸಂಭ್ರಮ ದಲ್ಲಿರುವಾಗ ನಾಡವಿರೋಧಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ನಾಯಕರು ಕನ್ನಡಿಗರನ್ನು ಪ್ರಚೋದಿಸಲು ಹೊಸ ತಂತ್ರ ರೂಪಿಸಿದೆ. ಈ ಬಾರಿ ರಾಜ್ಯೋತ್ಸವದ ದಿನ ಸೈಕಲ್ ರ್ಯಾಲಿ ಗೆ ಅನುಮತಿ ಸಿಗೋದಿಲ್ಲ ಅಂತಾ ಖಾತ್ರಿಯಾದ ಮೇಲೆ ಎಂಈಎಸ್ ಬೇರೆ ರೀತಿಯ ಕಿತಾಪತಿ ನಡೆಸಲಿದೆ. ರಾಜ್ಯೋತ್ಸವದ ದಿನ ಎಂಈಎಸ್ ನಾಯಕರು ಬೆಳಗಾವಿ ಮಹಾನಗರದ ಬಾನಂಗಳದಲ್ಲಿ ಒಂದು …

Read More »

ಅಂದು ಕಾಕತಿಯಲ್ಲಿ ರಾಡಿ ಸಿಡಿದಿತ್ತು,ನಿನ್ನೆ ಬೆಳಗಾವಿಯಲ್ಲಿ ರಕ್ತ ಸಿಡಿಯಿತು…!

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಗ್ಯಾಂಗ್ ವಾಡಿ ಪ್ರದೇಶದಲ್ಲಿ ನಡೆದ ಭಯನಾಕ ಮರ್ಡರ್ ಹಿಂದೆ,ಹಳೆಯ ವೈಷಮ್ಯ,ಸೇಡು ಎಲ್ಲವೂ ಅಡಗಿದೆ. ನಿನ್ನೆ ಮದ್ಯರಾತ್ರಿ ಬೆಳಗಾವಿಯಲ್ಲಿ ಶಹಬಾಜ್ ಪಠಾಣ್,ಉರ್ಫ ಶಹಬಾಜ್ ರೌಡಿ ಎಂಬಾತನ ಕೊಲೆ ಮಾಡಲಾಗಿತ್ರು,ಈ ಕೊಲೆಗೆ ಹಳೆಯ ವೈಷಮ್ಯವೇ ಕಾರಣ ಎಂಬುದು ಗೊತ್ತಾಗಿದೆ, ಬೈಕ್ ಮೇಲೆ ಸಾಗುವಾಗ ಸಿಡಿದ ರಾಡಿಯಿಂದ ಆರಂಭವಾದ ಈ ಜಗಳ ನಿನ್ನೆ ಮಿಡ್ ನೈಟ್ ಕೊನೆಯಲ್ಲಿ ಅಂತ್ಯವಾಗಿದೆ. ಮುತ್ಯಾನಟ್ಟಿಯ ಯುವಕನೊಬ್ಬ ಬೈಕ್ ಮೇಲೆ ಹೋಗುವಾಗ ಶಹಬಾಜ್ …

Read More »

ಲುಕಿಂಗ್ ಲಂಡನ್ ಟಾಕಿಂಗ್ ಟೋಕಿಯೋ…!

ಬೆಳಗಾವಿ-ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಮೇಲೆ ಕಣ್ಣಿಟ್ಟಿರುವ ಮಾಜಿ ಮಂತ್ರಿ ,ಮೀಸೆ ಮಾವ ,ವರ್ಕರ್ ಪ್ರಕಾಶ್ ಹುಕ್ಕೇರಿ,ಈಗ ಬಿಜೆಪಿ ಗೆಲ್ಲಿಸುವ ಹೆಳಿಕೆ ನೀಡಿದ್ದು,ಅವರ ಪರಿಸ್ಥಿತಿ ಈಗ ಲುಕಿಂಗ್ ಲಂಡನ್ ಟಾಕಿಂಗ್ ಟೋಕಿಯೋ ಎನ್ನುವಂತಾಗಿದೆ. ಈ ಹಿಂದೆ ಮಂತ್ರಿಯಾಗಿದ್ದಾಗ,ರಾಜೀನಾಮೆ ನೀಡಿ,ನಂತರ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿ ಗೆದ್ದು ಬಂದಿದ್ದ ಪ್ರಕಾಶ್ ಹುಕ್ಕೇರಿ,ಈಗ ಹುದ್ದೆ ಇಲ್ಲದ ನಾಯಕ,ರಾಜಕೀಯ ಕಿತ್ತಾಟದಿಂದ ದೂರ ಉಳಿದಿರುವ ಅವರು ಈಗ ಏಕಾ ಏಕಿ,ನಾನು ಸುರೇಶ್ …

Read More »

ಬೆಳಗಾವಿಯಲ್ಲಿ ಮಿಡ್ ನೈಟ್ ಮರ್ಡರ್ ಇಬ್ಬರು ಪೋಲೀಸರ ವಶಕ್ಕೆ

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ನಿನ್ನೆ ಮಿಡ್ ನೈಟ್ ನಡೆದ ಯುವಕನ ಮರ್ಡರ್ ಕೇಸ್ ಗೆ ಸಮಂಧಿಸಿದಂತೆ ಮಾಳಮಾರುತಿ ಪೋಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಬೆಳಗಾವಿಯಲ್ಲಿ ನಡೆದಿದ್ದು,ಗ್ಯಾಂಗ್ ವಾರ್ , ಅದು ಗ್ಯಾಂಗ್ ವಾಡಿ ಪ್ರದೇಶದಲ್ಲಿ,ಶೆಹಬಾಜ್ ಪಠಾಣ ನಿಕ್ ನೇಮ್ ಶಬಾಜ್ ರೌಡಿ,ಎಂಬಾತನ ಮೇಲೆ ಅಟ್ಯಾಕ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ಹಳೆಯ ವೈಷಮ್ಯವೇ ಕಾರಣ ಎಂದು ಹೇಳಲಾಗುತ್ತಿದ್ದು,ಈ …

Read More »

ಬೆಳಗಾವಿ ನಗರದಲ್ಲಿ ಯುವಕನ ಮರ್ಡರ್

  ಬೆಳಗಾವಿ -ಕೆಲವು ದುಷ್ಕರ್ಮಿಗಳು ಯುವಕನ ಮೇಲೆ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಗಾವಿ ನಗರದ ಶೇಖ್ ಆಸ್ಪತ್ರೆಯ ಬಳಿ ನಡೆದಿದೆ. ಹತ್ಯೆಯಾದ ಯುವಕನನ್ನು ಶೆಹಬಾಜ್ ರೌಡಿ ಎಂದು ಗೊತ್ತಾಗಿದೆ ಆದ್ರೆ ಕೊಲೆಗೆ ನಿಖರವಾದ ಕಾರಣ ಗೊತ್ತಾಗಿಲ್ಲ ದುಷ್ಕರ್ಮಿಗಳು ಶೇಖ್ ಆಸ್ಪತ್ರೆಯ ಬಳಿ ಶೇಹಬಾಜ್ ಮೇಲೆ ಅಟ್ಯಾಕ್ ಮಾಡಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಶೆಹಬಾಜ್ ನನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮೃತಪಟ್ಟಿದ್ದಾನೆ ಎಂದು …

Read More »

ಎಂಈಎಸ್ ನಾಯಕರು ಲವ್ ಲೆಟರ್ ಬರೆದಿದ್ದು ಯಾರಿಗೆ ಗೊತ್ತಾ…??

ಬೆಳಗಾವಿ-ರಾಜ್ಯೋತ್ಸವದ ದಿನ ಈ ಬಾರಿ ಸೈಕಲ್ ರ್ಯಾಲಿ,ಕರಾಳದಿನ ಆಚರಣೆಗೆ ಅನುಮತಿ ಸಿಗೋದಿಲ್ಲ ಎಂದು ಖಾತ್ರಿ ಮಾಡಿಕೊಂಡಿರುವ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮೀತಿ ಈ ಬಾರಿ ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಬೆಳಗಾವಿಯಲ್ಲಿ ಈ ಬಾರಿ ನಮಗೆ ಕಪ್ಪು ದಿನ ಆಚರಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡುತ್ತಿಲ್ಲ,ನಾವು ಮಾಡುವ ಕೆಲಸ ನೀವು ಮಾಡಿ ಎಂದು ಬೆಳಗಾವಿಯ ಎಂಈಎಸ್ ನಾಯಕರು ಮಹಾರಾಷ್ಟ್ರದ ಎಲ್ಲ ಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಬೆಳಗಾವಿಯ ಮರಾಠಿ ಭಾಷಿಕರ …

Read More »

ಮಟಕಾ ವಿರುದ್ಧ,ಬೆಳಗಾವಿ ಪೋಲೀಸರಿಂದ ಮಹಾ ಯುದ್ಧ…!

ಸಮರ್ಥ ನಗರದಲ್ಲಿ ಮಟಕಾ ದಾಳಿ… ಬೆಳಗಾವಿ- ರಾತ್ರಿ ಮಾರ್ಕೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಸಮರ್ಥನಗರದಲ್ಲಿ *ಮಟ್ಕಾ ದಾಳಿ* ಕೈಕಾಂಡಿದ್ದು, ಈ ಸಂದರ್ಭದಲ್ಲಿ *11 ಜನ* ಆರೋಪಿತರಾದ 1) ಸರ್ಫರಾಜ್ ಮಹಮ್ಮದಾಗೌಸ್ ಶಹಾಪಿರಿ ವಯಸ್ಸು 21, ಸಾ: ಕಾಕತಿ 2) ದಶರಥ ಭೀಮಶಿ ಕಾಂಬಳೆ ವಯಸ್ಸು 40, ಸಾ: ಉಪ್ಪಾರಗಲ್ಲಿ, ಖಾಸಬಾಗ 3)ಪ್ರಕಾಶ ಪಾಂಡುರಂಗ ಮಲಸೂರೆ ವಯಸ್ಸು 64, ಸಾ: ಮೀರಾಪೂರ ಗಲ್ಲಿ ಶಹಾಪೂರ 4) ಬಸವರಾಜ ಜ್ಯೋತಿಬಾ ಪಾಟೀಲ ವಯಸ್ಸು …

Read More »

ಬೆಳಗಾವಿ ಜಿಲ್ಲೆಯಲ್ಲಿ ಆಕ್ಸೀಜನ್ ಬೇಡಿಕೆ ಕಡಿಮೆಯಾಗಿದೆ- ಡಿಸಿ

  ಬೆಳಗಾವಿ, -: ಜಿಲ್ಲೆಯಲ್ಲಿ ಒಟ್ಟು ಕೋವಿಡ್-೧೯ ಸೋಂಕಿತರ ಪೈಕಿ ಶೇ.94 ರಷ್ಟು ಜನರು ಗುಣಮುಖರಾಗಿದ್ದು, ಕಳೆದ ಹದಿನೈದು ದಿನಗಳಲ್ಲಿ ಮರಣ ಪ್ರಮಾಣ ಶೇ.0.4 ಕ್ಕೆ ಇಳಿಮುಖಗೊಂಡಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ. ಈ ಕುರಿತು ಶನಿವಾರ(ಅ.24) ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಇದುವರೆಗೆ 24,039 ಜನರಿಗೆ ಕೋವಿಡ್-೧೯ ಸೋಂಕು ತಗುಲಿದೆ ಎಂದು ತಿಳಿಸಿದ್ದಾರೆ. ಒಟ್ಟು ಸೋಂಕಿತರ ಪೈಕಿ 23,020 ಜನರು ಗುಣಮುಖರಾಗಿದ್ದಾರೆ. ಸದ್ಯಕ್ಕೆ 961 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ …

Read More »

ಚನ್ನಮ್ಮ ಯುನಿವರ್ಸಿಟಿ ಜಾಗೆಯ ಬಗ್ಗೆ ರಾಜಕೀಯ ಬೇಡ- ಡಿಸಿಎಂ

ಬೆಳಗಾವಿ-ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಸ್ವಂತ ಕಟ್ಟಡಬೇಕು ಎನ್ನುವ ಬೇಡಿಕೆ ಇದೆ.ಇದಕ್ಕೆ ಸರ್ಕಾರ ಸ್ಪಂದಿಸಿದೆ,ಹನ್ನೆರಡು ಎಕರೆ ಜಾಗೆ ನೀಡಿದೆ ರೈತರು ಇನ್ನಷ್ಟು ಭೂಮಿ ಕೊಟ್ಟರೆ ಅನಕೂಲವಾಗುತ್ತದೆ,ಈ ವಿಚಾರದಲ್ಲಿ ರಾಜಕೀಯ ಮಾಡುವದು ಸರಿಯಲ್ಲ,ಕಿತ್ತೂರಿಗೆ ಏನ್ ಮಾಡಬೇಕೋ ಅದನ್ನು ಮಾಡ್ತೀವಿ,ಚನ್ನಮ್ಮ ಯುನಿವರ್ಸಿಟಿಯ ಕಟ್ಟಡ ನಿರ್ಮಾಣಕ್ಕೆ ನೂರು ಕೋಟಿ ರೂ ಅನುದಾನ ಮೀಸಲಿಡಲಾಗಿದೆ ಎಂದು ಬೆಳಗಾವಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ಹೇಳಿದ್ರು. ಕರ್ನಾಟಕದ ಜನರಿಗೆ ಉಚಿತ ಕೊರೊನಾ ಲಸಿಕೆ ಕೊಡಿಸುವ ಧಮ್ ಇದೆಯಾ ಎಂಬ …

Read More »