Breaking News

LOCAL NEWS

ಬೆಳಗಾವಿ ತಾಲ್ಲೂಕಿನಲ್ಲಿ ಲಾಕ್ ಡೌನ್ ಇಲ್ಲ,ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್ ಡೌನ್

ಬೆಳಗಾವಿ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಾತ್ರ ಲಾಕ್‌ಡೌನ್ ಜಾರಿ ————————————————————— ಬೆಳಗಾವಿ, ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಮಾತ್ರ ದಿನಾಂಕ:14.07.2020ರ ರಾತ್ರಿ 8.00 ಗಂಟೆಯಿಂದ 22.07.2020ರ ಬೆಳಿಗ್ಗೆ 5.00 ಗಂಟೆಯವರೆಗೆ 7 ದಿನಗಳ ಅವಧಿಯವರೆಗೆ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಘೋಷಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಗೆ ಮಾತ್ರ ಸೀಮಿತವಾಗಿ ಲಾಕ್ ಡೌನ್ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಡಿಸೆಂಬರ್ ತಿಂಗಳ ನಂತರ ಇಲೆಕ್ಷನ್

ಬೆಳಗಾವಿ- ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು ಜಿಲ್ಲೆಯ ಘಟಾನುಘಟಿಗಳು ಅಲ್ಲಲ್ಲಿ ಪಾರ್ಟಿ ನಡೆಸುತ್ತಿರುವ ಬೆನ್ನಲ್ಲಿಯೇ ಸರ್ಕಾರ ಚುನಾವಣೆಯನ್ನು ಡಿಸಬರ್ ತಿಂಗಳಿಗೆ ಮುಂದೂಡಿ ಆದೇಶ ಹೊರಡಿಸಿದೆ. ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಗಸ್ಟ್ ತಿಂಗಳಲ್ಲಿ ನಡೆಯಬೇಕಿತ್ತು ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಕರ್ಮಕಾಂಡ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಚುನಾವಣೆಯನ್ನು ಡಿಸೆಂಬರ್ ತಿಂಗಳಿಗೆ ಮುಂದೂಡಲಾಗಿದೆ. ಬೆಳಗಾವಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು ಕೆಲವು ಆಕಾಂಕ್ಷಗಳಂತೂ ಮಟನ್ …

Read More »

ಪಿಯುಸಿ ಫಲಿತಾಂಶ ಬೆಳಗಾವಿಗೆ 27 ಸ್ಥಾನ ಚಿಕ್ಕೋಡಿ ಗೆ 20 ನೇ ಸ್ಥಾನ

  ಬೆಳಗಾವಿ- ಇಂದು ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು,ಬೆಳಗಾವಿ ಜಿಲ್ಲೆ ರಾಜ್ಯದಲ್ಲಿ 27 ನೇಯ ಸ್ಥಾನ ಪಡೆದರೆ,ಚಿಕ್ಕೋಡಿ 20 ನೇಯ ಸ್ಥಾನ ಪಡೆದಿದೆ. ಕಳೆದ ವರ್ಷದ ಫಲಿತಾಂಶಕ್ಕೆ ಹೋಲೀಸಿದರೆ ಚಿಕ್ಕೋಡಿ ಕಳೆದ ವರ್ಷ 25 ನೇ ಸ್ಥಾನ ಪಡೆದಿತ್ತು ಈ ವರ್ಷ 20 ನೇಯ ಸ್ಥಾನ ಪಡೆದಿದೆ‌. ಬೆಳಗಾವಿಗೆ ಒಂದೇ ಸ್ಥಾನ ಬಡ್ತಿ ಸಿಕಗಕಿದ್ದು 28 ನೇ ಸ್ಥಾನದಿಂದ 27 ನೇಯ ಸ್ಥಾನ ಪಡೆದಿದೆ. ಕಳೆದ ವರ್ಷ ಪಿಯುಸಿ ದ್ವಿತೀಯ ವರ್ಷದ …

Read More »

ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾಗೆ ಯುವಕ ಬಲಿ

ಬೆಳಗಾವಿ- ಇಂದು ಮಂಗಳವಾರ ಆದ್ರೆ ಇವತ್ತು ಕೊರೋನಾ ವೈರಸ್ ಗಿಂತ ವದಂತಿಗಳೇ ಜೋರಾಗಿ ಹರಡುತ್ತಿವೆ. ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಚೆಲ್ಲಾಟ ನಡೆಸಿದೆ.ಶಾಸಕ ಅನೀಲ ಬೆನಕೆ ಅವರಿಗೂ ಕೊರೋನಾ ಲಕ್ಷಣಗಳು ಕಂಡು ಬಂದಿವೆ ಅವರನ್ನು ಕ್ವಾರಂಟೈನ್ ಮಾಡಲಾಗಿದೆ ಸುದ್ಧಿ ಹರಡಿದ್ದರೂ ಈ ಕುರಿತು ಅನೀಲ ಬೆನಕೆ ಯಾವುದೇ ರೀತಿಯ ರಿಸ್ಪಾನ್ಸ್ ಕೊಟ್ಟಿಲ್ಲ. ಬೆಳಗಾವಿ ನಗರದಲ್ಲಿ ಕೆಲವು ಖ್ಯಾತ ವೈದ್ಯರಿಗೂ ಸೊಂಕು ತಗಲಿದೆ ಎನ್ನಲಾಗಿದೆ.ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ ಇಂದು ಮಂಗಳವಾರ …

Read More »

ಕಿಲ್ಲರ್ ವೈರಸ್ ಗೆ ಬೆಳಗಾವಿಯಲ್ಲಿ ಒಂದೇ ದಿನ ಮೂವರ ಬಲಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿಲ್ಲರ್ ಕೊರೋನಾ ಚೆಲ್ಲಾಟ ನಡೆಸಿದೆ,ಇಂದು ಭಾನುವಾರ ಒಂದೇ ದಿನ ಈ ಮಹಾಮಾರಿ ವೈರಸ್ ಮೂವರ ಬಲಿ ಪಡೆದಿದೆ. ಕೊರೋನಾ ಸೊಂಕಿಗೆ ಮರಣ ಹೊಂದಿರುವ ಮೂವರ ಕುರಿತ ಮಾಹಿತಿ.ಇಲ್ಲಿದೆ ನೋಡಿ ೧. ಅಥಣಿ – ಪುರುಷ(62) ೨. ಶಿವಬಸವನಗರ, ಬೆಳಗಾವಿ- ಮಹಿಳೆ(80) ೩. ವಿಜಯನಗರ, ಬೆಳಗಾವಿ – ಪುರುಷ(57)

Read More »

ಇಂದು ಬೆಳಗಾವಿಯಲ್ಲಿ ಮತ್ತೊಂದು ಬಲಿ ಪಡೆದ ಮಹಾಮಾರಿ

ಪೋಟೋ ಶಿರ್ಷಿಕೆ. ಬೆಳಗಾವಿಯ ಕಂಗ್ರಾಳ ಗಲ್ಲಿಗೂ ಅಂಬ್ಯುಲೆನ್ಸ ದೌಡಾಯಿಸಿದ್ದು ಇಲ್ಲಿಯೂ ಸೊಂಕಿತ ಪತ್ತೆಯಾದ ಶಂಕೆ ಇದೆ. ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿಯ ಮರಣಮೃದಂಗ ಮುಂದುವರೆದಿದೆ ಈ ಕಿಲ್ಲರ್ ವೈರಸ್ ಗೆ ಬೆಳಗಾವಿಯ ಮತ್ತೊಬ್ಬ ವ್ಯೆಕ್ತಿ ಬಲಿಯಾಗಿದ್ದಾನೆ. ಬೆಳಗಾವಿಯ ಚವ್ಹಾಟ ಗಲ್ಲಿಯಲ್ಲಿ ಟೇಲರಿಂಗ್ ಉದ್ಯೋಗ ಮಾಡುತ್ತಿದ್ದ ಹಿಂಡಲಗಾ ರಕ್ಷಕ ಕಾಲೋನಿಯ ನಿವಾಸಿಯಾಗಿದ್ದ 58 ವರ್ಷದ ವ್ಯೆಕ್ತಿಯೊಬ್ಬ  ಮೃತಪಟ್ಟಿದ್ದಾನೆ.ಈತನ ರಿಪೋರ್ಟ್ ಪಾಸಿಟೀವ್ ಎಂದು ದೃಡವಾಗಿದೆ ಎಂದು ನಂಬಲರ್ಹ ಮೂಗಳು ಖಚಿತಪಡಿಸಿವೆ. ಕೆಲ ದಿನಗಳ …

Read More »

ಮೌಢ್ಯತೆ ವಿರುದ್ದ ಸತೀಶ ಜಾರಕಿಹೊಳಿ ಮುಖಾಮುಖಿ ಸಮರ

ಬೆಳಗಾವಿ ಸುದ್ಧಿ ಜಾತ್ಯತೀತ, ಧರ್ಮಾತೀತ, ಸಮಾನತೆ, ವ್ಯಕ್ತಿಸ್ವಾತಂತ್ರ್ಯ, ಭಾತೃತ್ವದಂಥಹ ಮನುಷ್ಯ ಕುಲದ ಶ್ರೇಯೋಭಿವೃಧ್ಧಿಯ ಸಂಗತಿಗಳೆನ್ನಲ್ಲ ಹೊತ್ತಿರುವ ಭಾರತದ ಸಂವಿಧಾನದ ಗೌರವ ಕಾಪಾಡುವ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧ – ಸಂಸತ್ತನ್ನು ಪ್ರವೇಶಿಸುವ ಬಹುತೇಕ ರಾಜಕಾರಣಿಗಳು ಜಾತಿಯತೆ, ಕೋಮಭಾವ, ಧಾರ್ಮಿಕ ಮೌಢ್ಯಗಳನ್ನು ತಲೆಯಲ್ಲಿ ತುಂಬಿಕೊಂಡೇ ಭಾರವಾಗಿರುತ್ತಾರೆ. ಮನೆಯ ಜಗಲಿಗಳ ಮೇಲೆ, ದೇವಾಲಯಗಳಲ್ಲಿ ಪೂಜೆ ಮಾಡಿ ಭಕ್ತಿ ತೋರಿಸಬೇಕಾದ ಈಜನಪ್ರತಿನಿಧಿಗಳು ವಿಧಾನಸೌಧದಲ್ಲಿನ ತಮ್ಮ ಚೇಂಬರ್‍ಗಳಲ್ಲಿ ಹೋಮ ಹವನದ ಹೊಗೆ ಎಬ್ಬಿಸುವುದನ್ನು ನೋಡುತ್ತೇವೆ. ತೀರ …

Read More »

ಬೆಳಗಾವಿಯಲ್ಲಿ ಖಾಕಿ ಖದರ್…ಇನ್ ಕಮೀಂಗ್ ಔಟ್ ಗೋಯಿಂಗ್ ಬಂದ್…ಬಂದ್….!

ಬೆಳಗಾವಿ-ಗಡಿನಾಡು ಗುಡಿ ಕುಂದಾನಗರಿ ಇಂದು ಸಂಪೂರ್ಣವಾಗಿ ಸ್ತಬ್ಧ ವಾಗಿದೆ,ನಗರದ ಎಲ್ಲ ಪ್ರಮುಖ ರಸ್ತೆಗಳಲ್ಲಿ ಪೋಲೀಸರ ಖಡಕ್ ಪಹರೆ ಇದ್ದು ಸಿಟಿಯಲ್ಲಿ ಇನ್ನ್ ಕಮೀಂಗ್ ಔಟ್ ಗೋಯಿಂಗ್ ಎರಡೂ ಬಂದ್ ಆಗಿದೆ. ಕೊರೋನಾ ಸೊಂಕು ಹರಡುವದನ್ನು ತಡೆಯಲು ಪ್ರತಿ ಭಾನುವಾರ ಸರ್ಕಾರ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲಿ ಖಡಕ್ ಲಾಕ್ ಡೌನ್ ಅನುಷ್ಠಾನಗೊಂಡಿದೆ ನಗರ ಪ್ರವೇಶ ಮಾಡುವ ನಾಲ್ಕೂ ದಿಕ್ಕುಗಳಲ್ಲಿ ಎಲ್ಲ ಪ್ರವೇಶ ಮಾರ್ಗಗಳಲ್ಲಿ ಪೋಲೀಸರ ಬಿಗಿ …

Read More »

ಸೂಪರ್ ಸ್ಟಾರ್ ಅಮೀತಾಬಚ್ಚನ್ ಗೂ ಕೊರೋನಾ ಸೊಂಕು

ಬೆಳಗಾವಿ-ಬಾಲಿವುಡ್ ಸೂಪರ್ ಸ್ಟಾರ್ ಖ್ಯಾತ ಹಿಂದಿ ಚಲನಚಿತ್ರನಟ ಅಮೀತಾ ಬಚ್ಚನ್ನಗೂ ಕೊರೋನಾ ಸೊಂಕು ತಗಲಿದೆ ಎಂದು ಸ್ವತಹ ಅವರೇ ಟ್ವೀಟ್ ಮಾಡಿದ್ದಾರೆ. ಸದ್ಯಕ್ಕೆ ಮುಂಬಯಿ ನಾನಾವಟಿ ಆಸ್ಪತ್ರೆಗೆ ದಾಖಲಾಗಿರುವ ಬಚ್ಚನ್ ನನಗೆ ಕೊರೋನಾ ಸೊಂಕು ತಗಲಿದೆ,ರಿಪೋರ್ಟ್ ಪಾಸಿಟಿವ್ ಬಂದಿದೆ ಎಂದು ಅಮೀತಾಬಚ್ಚನ್ನ ಟ್ವೀಟ್ ಮೂಲಕ ದೃಡಪಡಿಸಿದ್ದಾರೆ. ಅಮೀತಾಬಚ್ಚನ್ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಅವರ ಕುಟುಂಬ ದವರನ್ನು ಮತ್ತು ಇತರರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಮರಾಠಿ ದಿನಪತ್ರಿಕೆಗಳು ಆನ್ ಲೈನ್ …

Read More »

ಕೊರೋನಾ ತಡೆಗೆ ಕೈಜೋಡಿಸಿ- ಡಿಸಿಎಂ ಕಾರಜೋಳ

ನಿಪ್ಪಾಣಿಯಲ್ಲಿ ಅಂಬೇಡ್ಕರ್ ಭವನ ಉದ್ಘಾಟನೆ ———————————————————— ಬೆಳಗಾವಿ, ): ಕೋವಿಡ್-೧೯ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಆದಾಯ ಬರುತ್ತಿಲ್ಲ ಆದಾಗ್ಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ಆಗಿರುವ ನಷ್ಟ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ. ಮುಂಬರುವ ದಿನಗಳಲ್ಲಿ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಲಿದೆ ಎಂದು ಉಪ ಮುಖ್ಯಮಂತ್ರಿ, ಸಮಾಜ ಕಲ್ಯಾಣ‌‌‌ ಹಾಗೂ ಲೋಕೋಪಯೋಗಿ ಇಲಾಖೆಯ ಸಚಿವರಾದ ಗೋವಿಂದ ಕಾರಜೋಳ ಹೇಳಿದರು. ಲೋಕೋಪಯೋಗಿ ಇಲಾಖೆಯಿಂದ ನಿಪ್ಪಾಣಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಪ್ರವಾಸಿ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಗೂ ಕೊರೋನಾ ಕಾಟ….!

ಬೆಳಗಾವಿ-ಕಳೆದ ಮೂರು ತಿಂಗಳಿನಿಂದ ಬೆಳಗಾವಿ ಜಿಲ್ಲೆಯ ಜನತೆಗೆ ಕಾಡುತ್ತಿರುವ ಕೊರೋನಾ ಮಹಾಮಾರಿಯ ಕಾಟ ಈಗ ಬೆಳಗಾವಿ ಜಿಲ್ಲಾ ಆಸ್ಪತ್ರೆಗೂ ವಕ್ಕರಿಸಿದೆ,OPD ಯಲ್ಲಿ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ 23 ವರ್ಷದ ಡಾಕ್ಟರ್ ಗೂ ಸೊಂಕು ತಗಲಿರುವ ಕಾರಣ ಬೆಳಗಾವಿ ಜಿಲ್ಲಾ ಆಸ್ಪತ್ರೆಯ OPD ವಿಭಾಗವನ್ನೇ ಸೀಲ್ ಡೌನ್ ಮಾಡಲಾಗಿದೆ. ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ಮತ್ತು ಕೋವಿಡ್ ವಾರ್ಡ್ ಒಂದೇ ಕಟ್ಟಡದಲ್ಲಿ ಇರುವದರಿಂದ ಓಪಿಡಿಯನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರ ಮಾಡಲು …

Read More »

ಕುಡಚಿ- ಬಾಗಲಕೋಟೆ, ರೈಲುಮಾರ್ಗ,ಭೂಮಿ ಕೊಟ್ಟರೆ ಶೀಘ್ರದಲ್ಲೇ ಕಾಮಗಾರಿ

ಬೆಳಗಾವಿ, – ಕುಡಚಿ-ಬಾಗಲಕೋಟೆ ರೈಲು ಮಾರ್ಗ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಿದರೆ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವುದು ರೈಲ್ವೆ ಇಲಾಖೆಯ ಪ್ರಥಮ ಆದ್ಯತೆಯಾಗಿದೆ ಎಂದು ಸಚಿವ ಸುರೇಶ್ ಅಂಗಡಿ ಹೇಳಿದರು. ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಜು.11) ನಡೆದ ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಒಮ್ಮೆ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಂಡರೆ …

Read More »

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಹಿರೇಮಠ ಆದೇಶ

ಕೋವಿಡ್-೧೯: ಬಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಹಿರೇಮಠ ಆದೇಶ ಬೆಳಗಾವಿ, ಜು.10(ಕರ್ನಾಟಕ ವಾರ್ತೆ): ಕೋವಿಡ್-19 ಆಸ್ಪತ್ರೆ ಹಾಗೂ ಬಿಮ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರಿಗೆ, ನರ್ಸಗಳಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್-19 (ಕರೋನಾ ವೈರಾಣು ಕಾಯಿಲೆ-2019) ಹರಡದಂತೆ ಹಾಗೂ ಸಾರ್ವಜನಿಕರ ಆರೋಗ್ಯಕಾಪಾಡುವ ಹಿತದೃಷ್ಟಿಯಿಂದ ಕೋವಿಡ್-19 ಆಸ್ಪತ್ರೆಗೆ ರೋಗಿಗಳು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ನಿಗದಿತ ಕೋವಿಡ್-೧೯ ಆಸ್ಪತ್ರೆ …

Read More »

ಬೆಳಗಾವಿ ಜಿಲ್ಲೆಯಲ್ಲಿ ಶುಕ್ರವಾರ 15 ಸೊಂಕಿತರ ಪತ್ತೆ 465 ಕ್ಕೇರಿದ ಸೊಂಕಿತರ ಸಂಖ್ಯೆ

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಇಂದು ಶುಕ್ರವಾರ 15 ಕೊರೋನಾ ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 465 ಕ್ಕೇರಿದೆ. ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾದ 15 ಜನ ಸೊಂಕಿತರಲ್ಲಿ ಬೆಳಗಾವಿ ನಗರದ ಹಿಂದವಾಡಿ1,ಖಾಸಬಾಗ,1, ಯಲ್ಲೇಬೈಲ ಗ್ರಾಮದಲ್ಲಿ 1,ಬಸವನ ಕುಡಚಿ 1,ಬೆಳಗಾವಿ ನಗರ 1 ಸೊಂಕಿತರು ಪತ್ತೆಯಾಗಿದ್ದು ಬೆಳಗಾವಿ ತಾಲ್ಲೂಕಿನಲ್ಲಿ ಒಟ್ಟು 6 ಜನ ಸೊಂಕಿತರು ಪತ್ತೆಯಾಗಿದ್ದಾರೆ ಬೈಲಹೊಂಗಲ ತಾಲ್ಲೂಕಿನ ಮಲ್ಲಾಪೂರ ಗ್ರಾಮದಲ್ಲಿ 2 ಸೊಂಕಿತರು ಹುಕ್ಕೇರಿಯಲ್ಲಿ 1 ಸೊಂಕಿತರು …

Read More »