LOCAL NEWS

ಬಿಜೆಪಿ ಪಾದಯಾತ್ರೆಯ ಅಂಡರ್ ಕರೆಂಟ್ ಯಾರಿಗೆ ಶಾಕ್….?

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತ್ರತ್ವದಲ್ಲಿ ನಡೆಯುವ ಈ ಪಾದಯಾತ್ರೆ ಬಿಜೆಪಿ ಪೂರಕವಾಗಬಹುದೋ ? ಕಾಂಗ್ರೆಸ್ಸಿಗೆ ಮಾರಕ ವಾಗಬಹುದೋ ಅನ್ನೋದು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ.ಏಕೆಂದರೆ ಬಿಜೆಪಿಯ ಹಿರಿಯ ನಾಯಕ ಬಸನಗೌಡ ಯತ್ನಾಳ ಅವರು ಬಿಜೆಪಿಯ ಈ ಪಾದಯಾತ್ರೆಯ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.ವಿಜಯೇಂದ್ರ ಮತ್ತು ಡಿಕೆಶಿ ನಡುವೆ ಒಳ ಒಪ್ಪಂದ ಆಗಿದೆ .ಸಿಎಂ ಸಿದ್ರಾಮಯ್ಯ ನವರನ್ನು ಕೆಳಗಿಳಿಸಿ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಿ ಉಪಕಾರ …

Read More »

ಬೆಳಗಾವಿಯಲ್ಲಿ ವಿಪರೀತ ಮಳೆಗೆ ಅಪಾರ ಹಾನಿ, ನಗರದಲ್ಲಿ ಶಾಸಕ ರಾಜು ಸೇಠ ಸಂಚಾರ…

ಬೆಳಗಾವಿ – ಬೆಳಗಾವಿ ಮಹಾನಗರದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿದೆ ಮಳೆಗೆ ಎಲ್ಲೆಡೆ ಅಪಾರ ಪ್ರಮಾಣದ ಹಾನಿಯಾಗಿದ್ದು ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ ಇಂದು ಬೆಳಗಾವಿ ಉತ್ತರ ಕ್ಷೇತ್ರದ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಮಳೆ ಹಾನಿಯ ಪರಿಸ್ಥಿತಿಯನ್ನು ಅವಲೋಕಿಸಿದರು. ಬೆಳಗಾವಿ ಉತ್ತರ ಕ್ಷೇತ್ರದ ಬಸವನ ಕುಡಚಿ, ಬಿ.ಕೆ ಕಂಗ್ರಾಳಿ ಕ್ಯಾಂಪ್ ಪ್ರದೇಶ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಸುತ್ತಾಡಿ ಮಳೆಯಿಂದ ಆಗಿರುವ ಮಳೆ ಹಾನಿಯ ಬಗ್ಗೆ ಪರಶೀಲನೆ ಮಾಡಿದರು. …

Read More »

ಲೈಂಗಿಕ ಕಿರುಕಳದ ಆರೋಪ: ಡಾಕ್ಟರ್ ಮುತ್ತುರಾಜನಿಗೆ ಗೂಸಾ

ಬೆಳಗಾವಿ-ಅಪ್ರಾಪ್ತ ಬಾಲಕಿ ಮೇಲೆ ವೈದ್ಯನಿಂದ ಲೈಂಗಿಕ ಕಿರುಕುಳ ಆರೋಪದ ಹಿನ್ನಲೆಯಲ್ಲಿ ಡಾಕ್ಟರ್ ಬಿತ್ತು ಬಾಲಕಿ ಸಂಬಂಧಿಕರಿಂದ ಗೂಸಾ. ಈ ಘಟನೆ ನಡೆದಿದ್ದುಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಹುಕ್ಕೇರಿ ಪಟ್ಟಣದ ವೈದ್ಯ ಮುತ್ತುರಾಜ ಹೂಗಾರ ಎಂಬ ವೈದ್ಯನಿಂದ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳದ ನೀಡಿದ ಆರೋಪದ ಹಿನ್ನಲೆಯಲ್ಲಿ ಅನ್ಯ ಕೋಮಿನ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಡ ಆರೋಪದ ವಿಚಾರದಲ್ಲಿ,ಬಾಲಕಿಯ ತಂದೆ ಹಾಗೂ ಸಂಬಂಧಿಕರಿಂದ ವೈದ್ಯನ ಮೇಲೆ ಹಲ್ಲೆ ಮಾಡಲಾಗಿದೆ. ಹುಕ್ಕೇರಿ …

Read More »

ರಾಜ್ಯದಲ್ಲಿ ಪರಿಸ್ಥಿತಿ ಸೂಕ್ಷ್ಮವಿದೆ- ಜಗದೀಶ್ ಶೆಟ್ಟರ್

ಬೆಳಗಾವಿ – ಮೂಡಾ ಮತ್ತು ವಾಲ್ಮೀಕಿ ಹಗರಣಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರು ಕೇಳಿ ಬಂದಿದ್ದು ಸಿದ್ರಾಮಯ್ಯ ನವರು ಯಾವುದೇ ಸಮಯದಲ್ಲಿ ರಾಜಿನಾಮೆ ಕೊಡಬೇಕಾದ ಪರಿಸ್ಥಿತಿ ಎದುರಾಗಬಹುದು ರಾಜ್ಯದಲ್ಲಿ ಈಗ ಪರಿಸ್ಥಿತಿ ಸೂಕ್ಷ್ಮವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಸಂಸದ ಜಗದೀಶ್ ಶೆಟ್ಡರ್ ಹೇಳಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಮೂಡಾ ಹಗರಣದ ಕುರಿತು ವಿಧಾನಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಲಿಲ್ಲ, ಸ್ಪೀಕರ್ ಕಡೆಯಿಂದ ಚರ್ಚೆಯ ಪ್ರಸ್ತಾವನೆಯನ್ನು ತಿರಸ್ಕರಿಸಿದ ಸಿಎಂ ಸಿದ್ರಾಮಯ್ಯ …

Read More »

ಸಂಸತ್ತಿನಲ್ಲಿ ಧ್ವನಿ ಎತ್ತಿ,ಎಲ್ಲರ ಗಮನ ಸೆಳೆದ ಪ್ರಿಯಾಂಕಾ ಜಾರಕಿಹೊಳಿ

ಬೆಳಗಾವಿ ಜಿಲ್ಲೆ, ಯುವಕರ ಪ್ರಗತಿಗಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಅಮೂಲ್ಯ ಮತ ನೀಡಿ ಸದನಕ್ಕೆ ಕಳುಹಿಸಿದ ಚಿಕ್ಕೋಡಿ ಜನತೆಗೆ ಸದನ ದಲ್ಲಿಯೇ ಧನ್ಯವಾದ ತಿಳಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ಚಿಕ್ಕೋಡಿ ನ್ಯಾಯಾಲಯದಲ್ಲಿ ವಾದ ಮಾಡಿದ್ದರು. ಅಲ್ಲಿಂದ ಈ ಸದನ ಪ್ರವೇಶ ಮಾಡಿದಕ್ಕೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಸದನಕ್ಕೆ ತಿಳಿಸಿದರು. ಇಂದು ಮಳೆಗಾಲದ ಸಂಸತ್ …

Read More »

ಬೆಳಗಾವಿ ನಗರದ ಹಾಳಾದ ರಸ್ತೆಗಳನ್ನು ಪರಿಶೀಲಿಸಿದ ಡಿಸಿ

ಬೆಳಗಾವಿ- ಬೆಳಗಾವಿ ನಗರದ ರೈಲ್ವೆ ಮೂರನೇ ಗೇಟ್ ರಸ್ತೆ ಮೇಲ್ಸೇತುವೆಯ ರಸ್ತೆ ಹಾಳಾಗಿರುವುದನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಗುರುವಾರ ಪರಿಶೀಲಿಸಿದರು. ಬೆಳಗಾವಿ ಮಹಾನಗರದ ಮಹಾಂತೇಶ್ ನಗರದಲ್ಲಿ ಇರುವ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬೆಳಗಾವಿಯ ಔಟ್ ಗೋಯಿಂಗ್ ಸರ್ವಿಸ್ ರಸ್ತೆ,ಹಾಗು ಬೆಳಗಾವಿ ಕೇಂದ್ರ ಬಸ್ ನಿಲ್ಧಾಣ ಎದುರಿನ ಖಡೇಬಝಾರ ರಸ್ತೆಯ ಪ್ರವೇಶ ಮಾಡುವ ರಸ್ತೆಗಳಲ್ಲಿ ದೊಡ್ಡ ದೊಡ್ಡ ತಗ್ಗು ಬಿದ್ದಿವೆ ಈ ತಗ್ಗುಗಳಲ್ಲಿ ರಾತ್ರಿಹೊತ್ತು ದ್ವಿಚಕ್ರವಾಹನಗಳು ಬಿದ್ದು ಅಪಘಾತಗಳು ಸಂಭವಿಸುತ್ತಿವೆ. ಈ …

Read More »

ಬೆಳಗಾವಿ: NDRF ಬೋಟ್ ಪಲ್ಟಿ, ತಪ್ಪಿದ ಅನಾಹುತ ಎಲ್ಲರೂ ಸೇಫ್….

  ಬೆಳಗಾವಿ- ರಾಯಬಾಗದ ಕುಡಚಿ ಸೇತುವೆ ಮುಳುಗಡೆಯಾಗಿದೆ.ಈ ಸೇತುವೆಯ ಪಕ್ಕದಲ್ಲೇ ಇರುವ ಜಾಕವೇಲ್ ರಿಪೇರಿ ಮಾಡಲು ಹೆಸ್ಕಾಂ ಸಿಬ್ಬಂದಿ ಮತ್ತು ಇತರರು ಬೋಟ್ ನಲ್ಲಿ NDRF ತಂಡದ ಜೊತೆ ಹೋಗುತ್ತಿರುವಾಗ ಅವಘಡ ಸಂಭವಿಸಿದ್ದು ದೊಡ್ಡ ಅನಾಹುತವೇ ತಪ್ಪಿದಂತಾಗಿದೆ. ಕೃಷ್ಣಾ ನದಿಯಲ್ಲಿ NDRF ಬೋಟ್ ಪಲ್ಟಿಯಾಗಿ ಭಾರಿ ಅನಾಹುತ ತಪ್ಪಿದೆಕೃಷ್ಣಾ ನದಿಗೆ ಭಾರಿ ಪ್ರಮಾಣದ ನೀರು ಹಿನ್ನಲೆ ಪಟ್ಟಣಕ್ಕೆ ನೀರು ಕೊಡುವ ಜಾಕವೆಲ್ ಮುಳುಗಡೆಯಾಗಿದೆ.ಈಜಾಕವೆಲ್ ದುರಸ್ತಿಗೆ ಎಂದು ಎಂದು ತೆರಳಿದ್ದ NDRF. …

Read More »

ಅಜ್ಜಿಗೆ ಮೋಸ ಆಗಿದ್ದು ಚೆನ್ನಮ್ಮನ ಹುಟ್ಟೂರಿನಲ್ಲಿ ಸಾಹುಕಾರ್ ಕ್ಷೇತ್ರದಲ್ಲಿ….!!

ಬೆಳಗಾವಿ- ಕಣ್ಣೀರು ಹಾಕುತ್ತಿರುವ ಅಜ್ಜಿಗೆ ಮಕ್ಕಳು ಇಲ್ಲ,ಗಂಡನನ್ನು ಕಳೆದುಕೊಂಡು ಏಕಾಂಗಿಯಾಗಿರುವ ಅಜ್ಜಿಗೆ ಬೆಳಗಾವಿ ಪಕ್ಕದ ಕಾಕತಿಯಲ್ಲಿ ವ್ಯಕ್ತಿಯೊಬ್ಬ ಅನ್ನಾಯ ಮಾಡಿದ್ದು ಈ ಅಜ್ಜಿ ವೃದ್ಧಾಶ್ರಮ ಸೇರುವಂತೆ ಮಾಡಿರುವ ಕರಾಳ ಕಹಾನಿಯನ್ನು ಅಜ್ಜಿ ಸುರಿಸಿದ ಕಣ್ಣೀರು ಹೇಳುತ್ತಿದೆ. ನನಗೆ ಅನ್ಯಾಯವಾಗಿದೆ.ನನಗೆ ಮೋಸ ಮಾಡಿದ್ದಾರೆ ನನಗೆ ನ್ಯಾಯಕೊಡಿ ಎಂದು ಅನ್ಯಾಯಕ್ಕೊಳಗಾದ ಅಜ್ಜಿ ಈಗ ಬೆಳಗಾವಿಯ ಮಾದ್ಯಮಗಳ ಎದುರು ಕಣ್ಣೀರು ಸುರಿಸಿದ್ದಾಳೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಯಮಕನಮರ್ಡಿ ಕ್ಷೇತ್ರದವಳಾದ …

Read More »

ಬೆಳಗಾವಿ ಹುಡುಗನಿಗೆ INSTAGRAM ಲವ್ ದೋಖಾ…..!!

  ಬೆಳಗಾವಿ ಹುಡುಗ ರೋಹೀತ್ ಕೋಲಕಾರ್ ಜೊತೆ ಮದುವೆಯಾದ ಪ್ರೀಯಾಂಕಾ ಗೌಡ… ಬೆಳಗಾವಿ-ಒಬ್ಬರ ಜೋತೆ ಅರೇಂಜ್ ಮ್ಯಾರೇಜ್ ಇನ್ನೊಬ್ಬನ ಜೊತೆ ಮದುವೆ ಇನ್ಸಟಾ ಗ್ರಾಮಲ್ಲಿ ಲವ್ವಿ ಡವ್ವಿ ಒಟ್ಟು ಮೂರು ಮದುವೆ ಮೋಸದ ಮೇಲೊಂದು ಮೋಸ, ಈ ರೀತಿಯ ಘಟನೆ ನಡೆದಿದ್ದು ಕುಂದಾನಗರಿ ಬೆಳಗಾವಿಯಲ್ಲಿ. ಬೆಂಗಳೂರಿನ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು Instagram ನಲ್ಲಿ ಲವ್ ಮಾಡಿ ಮೊನ್ನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದ …

Read More »

ನಾಲೆಯಲ್ಲಿ ತೇಲಿಕೊಂಡ ಬಂದ ಅಪರಿಚಿತ ವ್ಯಕ್ತಿಯ ಶವ…!!

ಬೆಳಗಾವಿ- ಬೆಳಗಾವಿ ನಗರದ ನಾಲೆಯೊಂದರಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ತೇಲಿ ಬಂದಿರುವ ಘಟನೆ ನಡೆದಿದೆ.ಬೆಳಗಾವಿಯ ಉಜ್ವಲ ನಗರದಲ್ಲಿ ಹರಿಯುತ್ತಿರುವ ಕಿಲ್ಲಾ ಕೆರೆಯ ನಾಲೆಯಲ್ಲಿ ಅಪರಿಚಿತ ಶವ ತೇಲಿ ಬಂದಿದೆ, ನಾಲೆಯಲ್ಲಿ ಜೋತು ಬಿದ್ದಿರುವ ಮರದ ಟೊಂಗೆಯಲ್ಲಿ ಈ ಶವ ಸಿಲುಕಿದ್ದರಿಂದ ಇಂದು ಮಧ್ಯಾಹ್ನ ಬೆಳಕಿಗೆ ಬಂದಿದೆ. ಬೆಳಗಾವಿ ಮಾಳಮಾರುತಿ ಪೋಲೀಸ್ ಠಾಣೆಯ ಪೋಲೀಸರು ದೌಡಾಯಿಸಿದ್ದು ಅಪರಿಚಿತ ಶವವನ್ನು ಹೊರತೆಗೆದು ತನಿಖೆ ಮುಂದುವರೆಸಿದ್ದಾರೆ. ವಿಪರೀತ ಮಳೆಯ ಕಾರಣ ನಾಲೆಯ ಪ್ರವಾಹಕ್ಕೆ ಶವ …

Read More »

ಬೈಕ್ ನೀರಿನಲ್ಲಿ ಕೊಚ್ಚಿ ಹೋಯ್ತು…,ಬೈಕ್ ಸವಾರ, ಮರ ಏರಿ ಕುಳಿತ….!!!

ಬೆಳಗಾವಿ- ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಬೆಳಗಾವಿ- ಗೋವಾ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಲತ್ರಿ ಹಳ್ಳ ಉಕ್ಕಿ ಹರಿಯುತ್ತಿದೆ. ರಸ್ತೆಯ ಮೇಲೆ ಹರಿಯುತ್ತಿರುವ ಹಳ್ಳ ದಾಟುವ ಸಂಧರ್ಭದಲ್ಲಿ ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಬೈಕ್ ಸವಾರ ಮರ ಏರಿ ಕುಳಿತ ಘಟನೆ ನಿನ್ನೆ ಸಂಜೆ ಹೊತ್ತಿಗೆ ನಡೆದಿದೆ. ಗೋವಾದಿಂದ ಬೆಳಗಾವಿಯ ಕಡೆ ಹೆಮ್ಮಡಗಾ ರಸ್ತೆಯ ಮೂಲಕ ಬರುತ್ತಿದ್ದ ಯುವಕನೊಬ್ಬ ನಿನ್ನೆ ಸಂಜೆ ಹಾಲತ್ರಿ ಹಳ್ಳ ದಾಟುವಾಗ ಈ ಘಟನೆ ನಡೆದಿದೆ. ಮರ …

Read More »

ಬೆಳಗಾವಿಯಲ್ಲಿ ಸಾಹೇಬ್ರು ಅರೆಸ್ಟ್ ಆದ್ರು…..!!

    ಬೆಳಗಾವಿ- ನಾನು ಸೆಂಟ್ರಲ್ ಬ್ಯುರೋ ಆಫೀಸರ್ ,ನಾನು ಎಕ್ಸೈಜ್ ಆಫೀಸರ್, ನಾನು ಪೋಲೀಸ್ ಕಮಿಷ್ನರ್ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ‌.ಅಲ್ಲಿ ನೌಕರಿ ಕೊಡಿಸುತ್ತೇನೆ.ಇಲ್ಲಿ ನೌಕರಿ ಕೊಡಿಸುತ್ತೇನೆ ಎಂದು ನಂಬಿಸಿ ಲಕ್ಷಾಂತರ ರೂ ಲಪಟಾಯಿಸಿದ ಲೋಫರ್ ಈಗ ಬೆಳಗಾವಿ ಪೋಲೀಸರ ಬಲೆಗೆ ಬಿದ್ದಿದ್ದಾನೆ. ನಾನು ಸೆಂಟ್ರೆಲ್ ಬ್ಯುರೋ ಆಫೀಸರ್ ನನ್ನ ಸ್ನೇಹಿತನ ಆ್ಯಕ್ಸಿಡೆಂಟ್ ಆಗಿದೆ ಅರ್ಜಂಟ್ ಐದು ಲಕ್ಷ ಬೇಕಾಗಿದೆ ಎಂದು ಬೆಳಗಾವಿಯ ರಿಯಲ್ ಇಸ್ಟೇಟ್ ಉದ್ಯಮಿಯೊಬ್ಬನಿಗೆ ನಂಬಿಸಿ ಐದು …

Read More »

ಸಮರ್ಪಕ ನೀರು ಬಿಡುಗಡೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೂಚನೆ

ಬೆಳಗಾವಿ, – ಕಳೆದ ವರ್ಷ ಸರಿಯಾದ ಮಳೆಯಾಗದ ಕಾರಣ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಆಗಿದೆ. ಆದರೆ ಈ ವರ್ಷ ಯಾವುದೇ ತೊಂದರೆ ಇಲ್ಲ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಮುಂದಿನ ವರ್ಷದವರೆಗೆ ರೈತರ ಜಮೀನುಗಳಿಗೆ ಹಾಗೂ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು. ಸವದತ್ತಿಯ ನವಿಲುತೀರ್ಥದ ಸುಪರಿಂಟೆಂಡಿಂಗ್ ಎಂಜಿನಿಯರ್ ಕಚೇರಿಯಲ್ಲಿ …

Read More »

ನಿನ್ನೆ ಲವ್ ಮ್ಯಾರೇಜ್ ,ಇಂದು ವೈಫ್ ಆಫ್ ಸುಧಾಕರ್…..!!

ಬೆಳಗಾವಿ-ಬೆಂಗಳೂರಿನ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು Instagram ನಲ್ಲಿ ಲವ್ ಮಾಡಿ ನಿನ್ನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿದ್ದರು.ಮದುವೆಯಾದ ಈ ಜೋಡಿ ರಕ್ಷಣೆ ನೀಡುವಂತೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡ ವಿಚಾರ ನಿನ್ನೆ ದೊಡ್ಡ ಸುದ್ದಿಯಾಗಿತ್ತು. ನಿನ್ನೆ ಮದುವೆಯಾದ ಬೆಂಗಳೂರಿನ ಪ್ರೀಯಾಂಕಾ ಗೌಡ,ಪ್ರೀತಿ ಪ್ರೇಮದ ಹೆಸರಿನಲ್ಲಿ ಬೆಳಗಾವಿ ಹುಡುಗ ರೋಹೀತ್ ನಿಗೆ ಮೋಸ ಮಾಡಿದಳಾ ? ಎನ್ನುವ ಪ್ರಶ್ನೆ …

Read More »

ನೀರಿನಲ್ಲಿ ಧುಮುಕಿ ಕರೆಂಟ್ ಕಟ್ ಮಾಡಿ ಅನಾಹುತ ತಪ್ಪಿಸಿದ ರಿಯಲ್ ಹಿರೋ…!!

ಬೆಳಗಾವಿ- ನದಿಗಳು ಉಕ್ಕಿ ಹರಿಯುತ್ತಿವೆ.ನದಿ ತೀರದ ಗದ್ದೆಗಳು ಸಮುದ್ರದ ಸ್ವರೂಪ ಪಡೆದುಕೊಂಡಿವೆ.ಇಂತಹ ಪರಿಸ್ಥಿತಿಯಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು, ನೀರಿನಲ್ಲಿ ಧುಮುಕಿ ಜಲಾವ್ರತಗೊಂಡಿದ್ದ ಟಿಸಿ ಏರಿ ಕರೆಂಟ್ ಕಟ್ ಮಾಡಿ ದೊಡ್ಡ ಅನಾಹುತ ತಪ್ಪಿಸಿ,ಕರ್ತವ್ಯದಲ್ಲೂ ಜನಪರ ಕಾಳಜಿ ತೋರಿಸಿದ ಆ ಪಾವರ್ ಮ್ಯಾನ್ ನಿಜವಾಗಲೂ ರಿಯಲ್ ಹಿರೋ…. ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ.ಸಮುದ್ರಗಳಂತಾದ ಚಿಕ್ಕೋಡಿ ಉಪವಿಭಾಗದ ನದಿಗಳು ಅಪಾಯದ ಮಟ್ಟ ಮೀರಿ ಪಕ್ಕದ ಹೊಲಗದ್ದೆಗಳನ್ನು ಆಕ್ರಮಿಸಿಕೊಂಡಿವೆ.ಪ್ರವಾಹ ಸಮಯದಲ್ಲಿ ಕರ್ತವ್ಯ ನಿಷ್ಠೆ ಮೆರೆದ …

Read More »