Breaking News

LOCAL NEWS

ಡಾಲ್ಬಿಗೆ ಖರ್ಚು ಮಾಡುವ ಹಣ ಸಂತ್ರಸ್ಥರಿಗೆ ಖರ್ಚು ಮಾಡಲಿ

ಬೆಳಗಾವಿ ಗಣೇಶ ಉತ್ಸವದಲ್ಲಿ ಮಂಡಳಮುಖಂಡರು ಡಾಲ್ಬಿಗೆ ಖರ್ಚು ಮಾಡುವಹಣವನ್ನು ಕೊಡಗು, ಮಡಿಕೇರಿ ನೆರೆಸಂತ್ರಸ್ತರಿಗೆ ನೀಡಿ ಮಾದರಿಯಾಗಬೇಕುಎಂದು ಪೊಲೀಸ್ ಆಯುಕ್ತಡಾ.ಡಿ.ಸಿ.ರಾಜಪ್ಪ ಹೇಳಿದರು. ಶುಕ್ರವಾರ ನಗರದ ಪೊಲೀಸ್ ಜಿಮ್‍ಖಾನ್ ಸಭಾಂಗಣದಲ್ಲಿಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ಗಣೇಶೋತ್ಸವಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ.ಅದರಲ್ಲಿ ಗಣೇಶ ಮಂಡಳದವರು ಡಾಲ್ಬಿಹಚ್ಚಿ ಲಕ್ಷಾಂತರ ರು. ಖರ್ಚು ಮಾಡುವಬದಲು ನೆರೆಯ ಸಂತ್ರಸ್ತರಿಗೆ ಆಹಣವನ್ನು ನೀಡಿದರೆಮಾದರೆಯಾಗುತ್ತದೆ. ಡಾಲ್ಬಿ ಹಚ್ಚುನಿರ್ಧಾರ ಮಾಡಿದರೆ ಕಳೆದ ಬಾರಿಯಕಾನೂನು ಚೌಕಟ್ಟಿನಲ್ಲಿ ಇತಿಮಿತಿಗಳನ್ನುಅಳವಡಿಸಲಾಗುವುದು ಎಂದರು. ಕಳೆದ ಬಾರಿ 357 ಮಂಡಳದವರುಗಣೇಶ ಮೂರ್ತಿಗಳನು ಪ್ರತಿಷ್ಠಾಮಾಡಿದ್ದರು. ಈ ವರ್ಷ 378 ಗಣೇಶಪ್ರತಿಷ್ಠಾಪನೆಯಾಗಿವೆ. ಯಾವುದೇ ರೀತಿಕಾನೂನು ಸುವ್ಯವಸ್ಥೆ ಕದಡದಂತೆಮಂಡಳದವರು ನೋಡಿಕೊಳ್ಳಬೇಕು.ಪೊಲೀಸರು ಎಲ್ಲ ರೀತಿಯಲ್ಲಿ ಸಹಕಾರನೀಡಲಾಗುವುದು. ಯಾವುದೇಕಾರಣಕ್ಕೂ ಅಹೀತಕರ ಘಟನೆನಡೆಯದಂತೆ ನೋಡಿಕೊಳ್ಳಬೇಕೆಂದರು. ಪಾಲಿಕೆ ಸದಸ್ಯ ರಮೇಶ ಸೊಂಟಕ್ಕಿ ಮಾತನಾಡಿ, ಪ್ರತಿವರ್ಷ ಗಣೇಶ ಹಬ್ಬದಂದು ಪ್ರತಿ ಮಂಡಳದವರಿಗೆಕೆಇಬಿ,ಅಗ್ನಿಶಾಮಕ, ಹೆಸ್ಕಾಂ ಸೇರಿದಂತೆ ಇನ್ನಿತರಇಲಾಖೆಗಳಿಂದ ಅನುಮತಿ ಪಡೆದುಕೊಳ್ಳಬೇಕಾದರೆ ತುಂಬತೊಂದರೆ ಉಂಟಾಗುತ್ತದೆ.ಆದ್ದರಿಂದ ಜಿಲ್ಲಾಡಳಿತವತಿಯಿಂದ ಸರಳವಾಗಿ ಅನುಮತಿ ನೀಡುವ ವ್ಯವಸ್ಥೆಮಾಡಬೇಕೆಂದರು. ಸಭೆಯಲ್ಲಿ ಜಿಲ್ಲಾಧಿಕಾರಿ ಜಿಯಾವುಲ್ಲಾಎಸ್., ಪಾಲಿಕೆ ಆಯುಕ್ತ ಶಶಿಧರಕುರೇರ್, ಡಿಸಿಪಿಗಳಾದ ಸೀಮಾಲಾಟ್ಕರ್, ಮಹಾನಿಂಗ ನಂದಗಾವಿ,ಗಣೇಶ ಮಂಡಳದ ರಮಾಕಾಂತಕೊಂಡುಸ್ಕರ್ ಸೇರಿದಂತೆಮೊದಲಾದವರು ಹಾಜರಿದ್ದರು.

Read More »

ಜಿಲ್ಲಾ ಕಾಂಗ್ರೆಸ್ ಸಮೀತಿ ವಿಸರ್ಜಿಸಲು ಶಂಕರ ಮುನವಳ್ಳಿ ಆಗ್ರಹ

ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಿರ್ನಾಮ. ಶಾಸಕರಿಂದ ಪಕ್ಷ ಅಧೋಗತಿಗೆ ಹೋಗಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆರೋಪಿಸಿದ್ದಾರೆ. ಬಿಜಿನೆಸ್ ಗ್ರುಪ್ ಕೈಯಲ್ಲಿ ಕಾಂಗ್ರೆಸ್ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಬೇಜವಾಬ್ದಾರಿ ಹೇಳಿಕೆ. ನೀಡುತ್ತಿರುವುದು ಸರಿಯಲ್ಲ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ನಮ್ಮ ಪಕ್ಷದ ನಾಯಕರಿಂದ ಕಾರ್ಯಕರ್ತರಿಗೆ ಭಯ ಭೀತಿ ಉಂಟಾಗುತ್ತಿದೆ. ಕೂಡಲೇ ಜಿಲ್ಲಾ ಕಾಂಗ್ರೆಸ್ ಕಮೀಟಿ ವಿಸರ್ಜನೆಗೆ ಆಗ್ರಹಿಸಿದರು. ಪಿಎಲ್ ಡಿ ಬ್ಯಾಂಕ್ …

Read More »

ಹದಗೆಟ್ಟ ಶಾಲೆಗಳನ್ನು ರಿಪೇರಿ ಮಾಡಿ

ಬೆಳಗಾವಿ: ಜಿಲ್ಲೆಯಲ್ಲಿ ಶಿಥಿಲಾ ವ್ಯವಸ್ಥೆಯಲ್ಲಿರುವ ಸರಕಾರಿ ಶಾಲಾ ಕಾಲೇಜುಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ‌ ಬುಧವಾರ ಎಬಿವಿಪಿ ಕಾರ್ಯಕರ್ತರು ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಪ್ರತಿಷ್ಟಿತ ಸರಕಾರಿ ಶಿಕ್ಷಣ ಸಂಸ್ಥೆಗಳಾದ ಸರಸ್ವತಿ ಪ.ಪೂ ಕಾಲೇಜು, ಸರಕಾರಿ ಡಿಪ್ಲೋಮಾ ಕಾಲೇಜು ಹಾಗೂ ಸರಕಾರಿ ಬಿ.ಎಡ್ ಕಾಲೇಜುಗಳಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸರಿಯಾದ ಭೋದನಾ ಕೊಠಡಿ ಸೇರಿದಂತೆ ‌ಮೂಲಭೂತ ಸೌಕರ್ಯಗಳ ಕೊರತೆಯಿಂದ ಸರಕಾರಿ ಕಾಲೇಜುಗಳು ಸೊರಗುತ್ತಿವೆ ಅವುಗಳನ್ನು …

Read More »

ವಿಧ್ಯಾರ್ಥಿಗೆ ಶಿಕ್ಷಕಿಯಿಂದ ಥಳಿತ ಶಾಲೆಗೆ ನೂರಾರು ಪಾಲಕರ ಮುತ್ತಿಗೆ

ಬೆಳಗಾವಿ- ಶಾಲೆಯ ಶಿಕ್ಷಕಿಯೊಬ್ಬಳು ವಿಧ್ಯಾರ್ಥಿಗೆ ಮನಬಂದಂತೆ ಥಳಿಸಿ ಕಾಲಿನ ಮೇಲೆ ಬರೆ ಎಳೆದಿರುವದನ್ನು ವಿರೋಧಿಸಿ ನೂರಾರು ಜನ ಪಾಲಕರು ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಘಟನೆ ಬೆಳಗಾವಿಯ ವಡಗಾಂವ ಪ್ರದೇಶದಲ್ಲಿ ನಡೆದಿದೆ ವಡಗಾಂವಿ ಶಾಲೆ ನಂ 3 ರ ಶಾಲೆಯಲ್ಲಿ ಈ ಘಟನೆ ನಡೆದಿದೆ ಶಾಲೆಯ ಶಿಕ್ಷಕಿ ಎಸ್ ಆರ್ ಢವಳಿ ವಿಧ್ಯಾರ್ಥಿಯೊಬ್ಬನಿಗೆ ಮನಬಂದಂತೆ ಥಳಿಸಿದ ಪರಿಣಾಮ ಆತನ ಕಾಲಿಗೆ ಗಾಯವಾಗಿದೆ ಇದನ್ನು ಖಂಡಿಸಿ ಶಾಲೆಗೆ ಮುತ್ತಿಗೆ ಹಾಕಿದ ಪಾಲಕರು …

Read More »

ನನ್ನ ಮಹಾಗುರು ಸತೀಶ – ಲಕ್ಷ್ಮೀ ಹೆಬ್ಬಾಳರ

ಬೆಳಗಾವಿ ತಾಲೂಕಿನ ಪಿಎಲ್‍ಡಿ ಬ್ಯಾಂಕ್ ಚುನಾವಣೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ ನಾನು ಸದಸ್ಯರನ್ನು ಅಪಹರಣ ಮಾಡಿದ್ದಾರೆ ಎಂಬ ಆರೋಪಕ್ಕೆ ಪೊಲೀಸರು ಬಿ ಫಾರ್ಮ್ ನೀಡಿದ್ದಾರೆ. ಇನ್ನೆರಡು ದಿನದಲ್ಲಿ ಚುನಾವಣೆ ನಿಗಧಿ ಪಡಿಸದಿದ್ದಲ್ಲಿ ಗ್ರಾಮೀಣ ಭಾಗದ ಜನರೊಂದಿಗೆ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪಿಎಲ್‍ಡಿ ಚುನಾವಣೆ ಮುಂದುಡಿಕೆಯ ಬಗ್ಗೆ ಈಗಾಗಲೇ ಪಕ್ಷದ ವರಿಷ್ಠರು, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅವರು ಎರಡು ದಿನದಲ್ಲಿ …

Read More »

ಲಕ್ಷ್ಮೀ ಹೆಬ್ಬಾಳಕರ ಸತೀಶ ಕಾಲಿನ ಕಸಕ್ಕೂ ಸಮವಲ್ಲ- ರಮೇಶ ಜಾರಕಿಹೊಳಿ ಗರಂ

ಬೆಳಗಾವಿಯಲ್ಲಿ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳಕ ಸತೀಶ ಜಾರಕಿಹೋಳಿ ಅವರ ಕಾಲಿನ ಕಸಾ ಆಗಲೂ ಯೋಗ್ಯಳಲ್ಲ ಎಂದು ರಮೇಶ ಜಾರಕಿಹೊಳಿ ಕಿಡಿಕಾರಿದ್ದಾರೆ ಅವಳು ನಮ್ಮ ಮೆಲೆ ಪಿ ಎಲ್ ಡಿ ಬ್ಯಾಂಕ ಚುಣಾವಣೆಯ ಅದ್ಯಕ್ಷ ಉಪಾದ್ಯಕ್ಷ ಆಯ್ಕೆಯಲ್ಲಿ ಜಾರಕಿಹೋಳಿ ಕುಟುಂಬ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪ ಮಾಡುತ್ತಿದ್ದಾಳೆ. ಗೆದ್ದು ಶಾಸಕಿಯಾಗಿದ್ದೀನಿ ಅಂತ ಮೆರೆಯಬಾರದು ನಾನು ಕೂಡ ಮೊದಲ ಬಾರೀ 50 ಸಾವಿರ ಅಂತರದಿಂದ ಗೆದ್ದು …

Read More »

ಪಿ ಎಲ್ ಡಿ ಸದಸ್ಯರಿಗೆ ಹೆಬ್ಬಾಳಕರ ಆಮೀಷ ,ಸತೀಶ ಜಾರಕಿಹೊಳಿ ಆರೋಪ

ಬೆಳಗಾವಿ- ಬೆಳಗಾವಿ ಪಿಎಲಡಿ ಬ್ಯಾಂಕ್ ಚುನಾವಣಾ ಮುಂದೂಡಿದ ಹಿನ್ನೆಲೆ ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊ ಳಿ ಪ್ರತಿಕ್ರಿಯೆ ನಿಡಿದ್ದಾರೆ.. ಪಿಎಲಡಿ ಬ್ಯಾಂಕ್ ಚುನಾವಣೆ ನಮಗೆ ಪ್ರತಿಷ್ಠೆಯಾಗಿದೆ‌ಈ ಹಿಂದೆ ನಡೆದುಕೊಂಡು ಬಂದ ಪರಂಪರೆಯಂತೆ ಅವಿರೋಧ ಆಯ್ಕೆಯಾಗಿಬೇಕಿತ್ತು,ಇದರಲ್ಲಿ ಗ್ರಾಮೀಣ ಶಾಸಕಿ ಭಾಗವಹಿಸಿದ್ದಾರೆ ಸದಸ್ಯರಿಗೆ ಆಮಿಷ್ ನೀಡಿ ತಮ್ಮ ಬಣದಲ್ಲಿ 9 ಜನ ನಿರ್ದೇಶಕರು ಇದ್ದಾರೆ ಅಂತಾ ಹೇಳ್ತಿದ್ದಾರೆ. ಇದರಲ್ಲಿ ನಮ್ಮ ಸದಸ್ಯರು ಕಿಡ್ನಾಪ ಆಗಿದ್ದಾರೆ ಆ ಕೇಸ್ ಆಧರಿಸಿ ಚುನಾವಣೆ ಮುಂದೂಡಲಾಗಿದೆ ಈ …

Read More »

ಲಿಂಗಾಯತ ಹೆಣ್ಣು ಮಗಳನ್ನು ಕೆಣಕ ಬೇಡಿ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲಿಂಗಾಯತ ಸಮಾಜದ ಹೆಣ್ಣು ರಾಜಕೀಯವಾಗಿ ಮುಂದೆ ಬರುತ್ತಿದ್ದಾಳೆ ಎಂದು ಬೆಳಗಾವಿ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷರ ಚುನಾವಣೆ ವಿನಾಕಾರಣ ಮುಂದೂಡಿರುವ ತಹಶೀಲ್ದಾರ ಕ್ರಮ ಖಂಡಿಸಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ತಹಶೀಲ್ದಾರ ಕಚೇರಿ ಎದುರು ಅಹೋ ರಾತ್ರಿ ಧರಣಿ ನಡೆಸಿದ್ದಾರೆ ಈ ಸಂಧರ್ಭದಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ ನಾನು ಲಿಂಗಾಯತ ಸಮಾಜದ ಹೆಣ್ಣು ನನ್ನ ರಾಜಕೀಯ …

Read More »

ಬಸ್ಸಿಗೆ ಕಾರು ಡಿಕ್ಕಿ ಇಬ್ಬರ ಸಾವು ಇಬ್ಬರಿಗೆ ಗಂಭೀರ ಗಾಯ

ಬೆಳಗಾವಿ-ಸರ್ಕಾರಿ ಬಸ್, ಕಾರಿನ ನಡುವೆ ಡಿಕ್ಕಿಯಾದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನೊಪ್ಪಿದ ಘಟನೆಬೆ ಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಇಡವನ್ ಗ್ರಾಸ್ ಬಳಿ ನಡೆದಿದೆ ಬೆಳಗಾವಿಯಿಂದ ಹಳಿಯಾಳಕ್ಕೆ ಹೊರಟ್ಟಿದ್ದ ಬಸ್ ಕಾರ ನಡುವೆ ಡಿಕ್ಕಿ ಯಾಗಿದ್ದು ಸ್ಥಳದಲ್ಲಿ ಕಾರ ನಲ್ಲಿ ಇದ್ದ ಇಬ್ಬರು ಸಾವನ್ನೊಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ ಸ್ಥಳಕ್ಕೆ ಖಾನಾಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Read More »

ಮಾರಕಾಸ್ತ್ರಗಳಿಂದ ಹಲ್ಲೆ..ಗೆಳೆಯರಿಂದ ಗೆಳೆಯನ ಮೇಲೆ ಹಲ್ಲೆ

ಬೆಳಗಾವಿ ಕಳೆದ ರಾತ್ರಿ ಹಳೆ ವೈಷಮ್ಯದ ಹಿನ್ನಲೆಯಲ್ಲಿ ಗೆಳೆಯರೇ ಸೇರಿಕೊಂಡು ಗೆಳೆಯನೊಬ್ಬನಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಹೋಟೆಲ್ ಒಂದರ ಬಳಿ ನಡೆದಿದೆ. ಬಾಳೆಕುಂದ್ರಿ ಗ್ರಾಮದ ನಿವಾಸಿ ಸಾಹಿಲ್ ಎಂಬಾತ ಊಟ ಮುಗಿಸಿಕೊಂಡು ಮನೆಗೆ ಹಿಂತಿರುಗುವಾಗ ಐದು ಜನ ದುಷ್ಕರ್ಮಿಗಳು ಲಾಂಗು ಹಾಗೂ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ತಕ್ಷಣ ಸ್ಥಳೀಯರು ಸಾಹಿಲ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ತಲೆ ಬಾಗಕ್ಕೆ ಬಲವಾದ ಪೆಟ್ಟು …

Read More »

ಸ್ಮಾರ್ಟ್ ಸಿಟಿಯಲ್ಲಿ ಬಿಗ್ ಫ್ರಾಡ್ ಬಿಜೆಪಿ ಶಾಸಕ ಅಭಯ ಪಾಟೀಲ ಆರೋಪ

ಬೆಳಗಾವಿ- ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಗರದ ವ್ಯಾಕ್ಸೀನ್ ಡಿಪೋದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ಸಂಪೂರ್ಣವಾಗಿ ಕಳಪೆಮಟ್ಟದಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಗಳಲ್ಲಿ ಅವ್ಯೆವಹಾರ ನಡೆಯುತ್ತಿದೆ ಎಂದು ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಗಂಬೀರ ಆರೋಪ ಮಾಡಿದ್ದಾರೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ವ್ಯಾಕ್ಸೀನ್ ಡಿಪೋದಲ್ಲಿ ಸುಮಾರು ಎರಡು ನೂರು ಅಡಿ ಆಳದಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿಯನ್ನು ಪರಶೀಲನೆ ಮಾಡಿರುವ ಅಭಯ ಪಾಟೀಲ ಈ ಕಾಮಗಾರಿಯಲ್ಲಿ ಶೇ80 ರಷ್ಟು ಮಣ್ಣು …

Read More »

ಪಿ ಎಲ್ ಡಿ ಅಧ್ಯಕ್ಷ ಸ್ಥಾನಕ್ಕಾಗಿ ಬಿಗ್ ಫೈಟ್ …

ಬೆಳಗಾವಿ- ನಾಳೆ ಮಂಗಳವಾರ ಬೆಳಗಾವಿ ತಾಲ್ಲೂಕಿನ ಪಿ ಎಲ್ ಡಿ ಬ್ಯಾಂಕಿನ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಡೆಯಲಿದ್ದು ಜಿಲ್ಲೆಯ ಒಂದೇ ಪಕ್ಷದ ಇಬ್ಬರು ರಾಜಕೀಯ ನಾಯಕರ ನಡುವೆ ಬಿಗ್ ಫೈಟ್ ನಡೆಯಲಿದ್ದು ಚುನಾವಣೆಯ ಸಂಧರ್ಭದಲ್ಲಿ ಅಹಿತಕರ ಘಟನೆ ನಡೆಯದಂತೆ ಡಿಸಿಪಿ ಕ್ರೈಂ ಸಂಪಗಾವಿ ಅವರನ್ನು ಬಂದೋಬಸ್ತಿಯ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ ಪಿ ಎಲ್ ಡಿ ಬ್ಯಾಂಕಿನ ನಿರ್ದೇಶಕರ ಚುನಾವಣೆ ಮುಗಿದಿದೆ 14 ಜನ ನಿರ್ದೇಶಕರು ಆಯ್ಕೆ ಆಗಿದ್ದಾರೆ ಸರ್ಕಾರ ಒಬ್ಬ ಸದಸ್ಯನನ್ನು …

Read More »

ವಿಟಿಯು ಸಮೀಪದಲ್ಲಿ ಸರಾಯಿ ಅಂಗಡಿ ಬೇಡ

ಬೆಳಗಾವಿ – ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಮೀಪದಲ್ಲಿರುವ ಸಂತಿ ಬಸ್ತವಾಡ ಗ್ರಾಮದಲ್ಲಿ MSIL ಸರಾಯಿ ಅಂಗಡಿ ತೆರೆಯಲು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಸಂತಿ ಬಸ್ತವಾಡ ಗ್ರಾಮಸ್ಥರು ಹಾಗು ಗ್ರಾಮ ಪಂಚಾಯತ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ ಸರಾಯಿ ಅಂಗಡಿಯನ್ನು ವಿರೋಧಸಿ ಗ್ರಾಮ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಿ ಗ್ರಾಸ್ಥರೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದ ಗ್ರಾ ಪಂ ಸದಸ್ಯರು ಗ್ರಾಮದಲ್ಲಿ ಮೂರಾರ್ಜಿ ಶಾಲೆ ಮಂದಿರ ಮಸೀದಿ ಚರ್ಚ …

Read More »

ರಾಯಣ್ಣನ ಪ್ರತಿಮೆ ನಿರ್ಮಾಣಕ್ಕೆ ವಿರೋಧಿಸಿದವರಿಗೆ ತಕ್ಕಪಾಠ

ಬೆಳಗಾವಿ ರಾಯಣ್ಣನನ್ನು, ಚನ್ನಮ್ಮನನ್ನು ಒಪ್ಪಿಕೊಳ್ಳದ ಕೆಲ ಪುಂಡರು ಅವರ ಪುತ್ಥಳಿ ನಿರ್ಮಾಣ‌ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಕನ್ನಡಿಗರಾದ ನಾವು ಶಿವಾಜಿಯನ್ನು ಹೇಗೆ ಒಪ್ಪಿಕೊಳ್ಳಬೇಕು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಹೇಳಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೀರನವಾಡಿಯಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪನೆ ಮಾಡಲು ಬಿಡದ ಕಿಡಿಗೇಡಿಗಳು ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯಾಕೆ ನಿರ್ಮಾಣ ಮಾಡಬೇಕು. ಪೀರನವಾಡಿಯಲ್ಲಿ ರಾಯಣ್ಣನ ಪ್ರತಿಷ್ಠಾಪನೆ ಮಾಡಲು ಬಿಡದ …

Read More »

ಭಾಂಧವ್ಯ ಇನ್ನಷ್ಟು ಗಟ್ಟಿಗೊಳಿಸಿದಸಹೋದರಿ ಲಕ್ಷ್ಮೀ ಹೆಬ್ಬಾಳಕರ

ಬೆಳಗಾವಿ ಕಳೆದ ಮೂರು ವರ್ಷಗಳ ಹಿಂದೆಸಾಮೂಹಿಕವಾಗಿ ರಾಕಿಕಟ್ಟುವುದನ್ನು ಆರಂಭಿಸಿಸಹೋದರತ್ವಕ್ಕೆ ಸಾಮಾಜಿಕಮಾನ್ಯತೆ ಮುದ್ರೆಯೊತ್ತಿ ಜನರಪ್ರೀತಿಗೆ ಪಾತ್ರವಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರು,ರಕ್ಷಾಬಂಧನದ ನಿಮಿತ್ಯ ಇಂದು ತಮ್ಮಮನೆಯ ಅಂಗಳದಲ್ಲಿ ಸೇರಿದಸಾವಿರಾರು ಸಂಖ್ಯೆಯಸಹೋದರರಿಗೆ ತುಂಬಾಖುಷಿಯಿಂದ ಸಡಗರ ಸಂಭ್ರಮದಮಧ್ಯ ರಾಕಿ ಕಟ್ಟುವುದರ ಮೂಲಕಸಹೋದರ ಸಹೋದರಿಯಭಾಂಧತ್ವವನ್ನು ಇನ್ನಷ್ಟುಗಟ್ಟಿಗೊಳಿಸಿದ್ದಾರೆ. ಈ ಮೊದಲು ಲಕ್ಷ್ಮೀ ಹೆಬ್ಬಾಳಕರಅವರು ತಮ್ಮ ಮನೆಯಲ್ಲಿಸಂಬಂಧಿಕರಿಗೆ ಮತ್ತು ಕೆಲ ಹೊರಸಂಬಂಧಿಗಳಿಗೆ ವೈಯಕ್ತಿಕವಾಗಿ ರಾಕಿಕಟ್ಟುವ ಸಂಪ್ರದಾಯಅನುಸರಿಸುತ್ತಿದ್ದರು. ನಂತರ ಅವರು,ಮನೆಯ ಅಂಗಳಕ್ಕೆ ಬಂಧುಸಹೋದರ ಸಂಬಂಧವನ್ನು ವೃದ್ಧಿಸಿ,ಜನರ ಪ್ರೀತಿ ವಿಶ್ವಾಸ ಗಳಿಸಿಬೆಳಸಿಕೊಳ್ಳುವ ಮಾನವೀಯಸ್ವಭಾವವನ್ನುಮುಂದುವರೆಸಿಕೊಂಡು ನಡೆದಿದ್ದರೆ.ರಾಕಿ ಕಟ್ಟುವುದು ಮಾತ್ರವಲ್ಲ,ಅವರು ವಿವಿಧ ಹಬ್ಬ ಹರಿದಿನಗಳಸಂದರ್ಭಗಳಲ್ಲಿ ವರ್ಷದ ಉದ್ದಕ್ಕೂಅನೇಕ ಸಭೆ ಸಮಾರಂಭಗಳನ್ನುಹಮ್ಮಿಕೊಳ್ಳುವುದರ ಮೂಲಕ, ಕಷ್ಟಕಾಲದಲ್ಲಿ ಸಮಸ್ಯೆಗಳಿಗೆಸ್ಪಂದಿಸುವುದರ ಮೂಲಕ ತಮ್ಮಸಾಮಾಜಿಕ ಬದ್ಧತೆಯನ್ನುನೆರವೇರಿಸುತ್ತ ಬಂದಿದ್ದಾರೆ. ಆಮೂಲಕ ಭಾರತೀಯಸಂಸ್ಕøತಿಯೊಳಗಿನ ನಿಜವಾದಮಾನವೀಯ ಗುಣಗಳಿಗೆ ಸ್ಪರ್ಶನೀಡಿಎತ್ತಿಹಿಡಿಯುತ್ತ ಬಂದಿದ್ದಾರೆ. ಅದರಿಂದ ತಾವು ಖುಷಿಅನುಭವಿಸುವುದರ ಮೂಲಕಜನರಲ್ಲಿ ನೆಮ್ಮದಿ ಕಾಣುವಂತೆ ತಮ್ಮಪ್ರಾಮಾಣಿಕ ಪ್ರಯತ್ನ ಮಾಡುತ್ತಬಂದಿದ್ದಾರೆ. ಅವರ ಈ ಪ್ರಾಮಾಣಿಕಸೇವೆ ಇಂದು ಕೇವಲ ಅವರಮನೆಯ ಅಂಗದ ಸುತ್ತಸುತ್ತಮಾತ್ರವಲ್ಲ ಬೆಳಗಾವಿಯ ಪರಿಸರದಮನೆಯ ಮಾತಾಗಿದೆ. ರಕ್ಷಾಬಂಧನದ ನಿಮಿತ್ಯ ಇಂದು ಅವರಮನೆಯ ಅಂಗಳದಲ್ಲಿಬಹುಸಂಖ್ಯೆಯಲ್ಲಿ ಸೇರಿದ ಜನರೇಇದಕ್ಕೆ ಸಾಕ್ಷಿಯಾಗಿದ್ದಾರೆ. ಮುಂಜಾನೆ 9 ಗಂಟೆಯಿಂದಮಧ್ಯಹ್ನಾ 3 ಗಂಟೆಯ ವರೆಗೆನಿರಂತರವಾಗಿ ರಾಕಿ ಕಟ್ಟುವುದರಮೂಲಕ ಅವರ ರಕ್ಷಣೆಯಜವಾಬ್ದಾರಿ ನನ್ನ ಮೇಲಿದೆ ಹಾಗೂನನ್ನ ಸಾಹಸ ಕಾರ್ಯಕ್ಕೆ ಇವರೆಲ್ಲರಪ್ರೀತಿ ಆಧಾರವಾಗಿದೆ ಎನ್ನುವುದಕ್ಕೆಸಾಕ್ಷಿಯಾಗಿ ಸಮಾರಂಭ ಜರುಗಿತು. ಸಹೋಧರಿ ಸ್ಥಾನದಲ್ಲಿ ನಿಂತು ರಾಕಿಕಟ್ಟಿದ ಲಕ್ಷ್ಮೀ ಹೆಬ್ಬಾಳಕರಅವರಿಗೆ ತಮ್ಮ ಪ್ರೀತಿಯಸಹೋದರಿಗೆ ಪ್ರೀತಿಯ ಕಾಣಿಕೆನೀಡಿದ ಆತ್ಮೀಯತೆಮನೆಯಂಗಳದಲ್ಲಿ ನೆಲೆಯೂರಿತ್ತು.ಮನೆಗೆ ಬಂದ ಸಹೋದರರಿಗೆ,ಅಭಿಮಾನಿಗಳಿಗೆ, ಕ್ಷೇತ್ರದ ಜನತೆಗೆರಕ್ಷಣೆಯ ಮಾತು ನೀಡಿದ ಲಕ್ಷ್ಮೀಅವರು, ಭೋಜನ ವ್ಯವಸ್ಥೆ ಮಾಡಿ,ಹರಸಿ, ಹಾರೈಕೆ ಪಡೆದರು. ಈಸಂದರ್ಭದಲ್ಲಿ ಅತ್ಯಂತ ಪ್ರೀತಿಯಿಂದಮಾತನಾಡಿದ ಅವರು, “ಉಳಿದುಕೊಳ್ಳಲು ನನಗೊಂದುಮನೆಯಿರಬಹುದು. ಆದರೆ,ಬೆಳಗಾವಿ ಗ್ರಾಮೀಣ ಕ್ಷೇತ್ರವೇ ನನ್ನಮನೆಯಾಗಿದೆ. ನಾನು ಇದನ್ನುಮನಸ್ಸಾರೆ ಒಪ್ಪಿಕೊಂಡುಸಾಗುತ್ತಿದ್ದೇನೆ. ಇದಕ್ಕೆ ಪ್ರತಿಯಾಗಿಕ್ಷೇತ್ರದ ಜನತೆ ಅಷ್ಟೇ ಪ್ರೀತಿವಿಶ್ವಾಸದಿಂದ ನೋಡಿಕೊಳ್ಳುತ್ತಿದ್ದಾರೆ.ನನ್ನ ಕ್ಷೇತ್ರದಬಾಂಧವರು ಇಂದು ಮನೆಯವರೆಗೆಬಂಧು ತಮ್ಮ ಸಹೋದರತ್ವದಪ್ರೀತಿಯನ್ನು ಧಾರೆಎರೆದಿದ್ದಾರೆ. ಇವರ ಆರ್ಶೀವಾದಿಂದನನಗೆ ಶಾಸಕಿಯಾಗಲು ನೀಡಿದಅವಕಾಶ ಅವರುತೋರುತ್ತಿರುವ ಪ್ರೀತಿ ನನ್ನ ಪೂರ್ವಜನ್ಮದ ಪುಣ್ಯ ಎಂದು ಭಾವಿಸಿದ್ದೇನೆ. ಕ್ಷೇತ್ರದ ಜನಪ್ರತಿನಿಧಿ ಅನ್ನುವ ರಾಜಕೀಯಸಂಬಂಧ ಮೀರಿ ಈ ಭಾಂಧವ್ಯ ನನ್ನಜನತೆಯೊಂದಿಗೆ ಬೆಳೆದುಬಂದಿರುವುದು ಸಾರ್ಥಕ ಎನಿಸುತ್ತದೆ.ಇವರ ರಕ್ಷಣೆಯ ಜವಾಬ್ದಾರಿಯನ್ನುಇಂದು ರಕ್ಷಾ ಬಂಧನದ ಮೂಲಕಮತ್ತೊಮ್ಮೆ ಪ್ರಮಾಣೀಕರಿಸಲುಸಾಧ್ಯವಾಗಿದೆ. ಭಾರತೀಯಸಂಸ್ಕøತಿಯ ಈ ಭಾವನಾತ್ಮಕ ರಕ್ಷಾಬಂಧನ ಜನರೊಂದಿಗಿನ ಬಂಧನಮತ್ತಷ್ಟು ಗಟ್ಟಿಗೊಳಿಸಿದೆ”ಎಂದುಹೇಳಿದರು.ಸಹೋದರಿಯಿಂದ ರಾಕಿ ಕಟ್ಟಿಕೊಂಡಯುವರಾಜ್ ಕದಮ್ ಅವರು ಲಕ್ಷ್ಮೀಹೆಬ್ಬಾಳಕರ ಅವರ ಬಗ್ಗೆ ತುಂಬಾಪ್ರೀತಿಯಿಂದ ಮಾತನಾಡಿ,ಲಕ್ಷ್ಮೀಹೆಬ್ಬಾಳಕರ ಅವರು ಕಳೆದ ಅನೇಕ ವರ್ಷಗಳಿಂದ ಅನೇಕ ಸಾಮಾಜಿಕಕಾರ್ಯಕ್ರಮಗಳನ್ನು ನಿರ್ವಹಿಸುತ್ತಬಂದಿದ್ದಾರೆ.ಅವುಗಳಲ್ಲಿ ಕಳೆದ ಮೂರುವರ್ಷಗಳಿಂದ ರಕ್ಷ ಬಂಧನಕಾರ್ಯಕ್ರಮವನ್ನು ತುಂಬಾಸಂಭ್ರಮದಿಂದ ನಡೆಸಿಕೊಂಡುಬರುತ್ತಿದ್ದಾರೆ. ಈ ರೀತಿ ಒಬ್ಬಶಾಸಕಿಯಾಗಿ, ರಾಜಕಾರಣಿಯಾಗಿ ಸಾಮಾಜಿಕಕಾರ್ಯಕ್ರಮಗಳನ್ನುನಿರ್ವಹಿಸುವುದು ಅಪರೂಪ. ಅವರರಕ್ಷಾ ಬಂಧನ ಒಂದು ಮಾದರಿಕಾರ್ಯಕ್ರಮವಾಗಿದೆ. ಕ್ಷೇತ್ರದಜನರನ್ನು ಇನ್ನಷ್ಟು ಹತ್ತಿರಕ್ಕೆ ಕರೆದುಕೊಂಡು ಅವರ ಸಾಮಾಜಿಕಸಮಸ್ಯೆಗಳಿಗೆ ಮಾತ್ರವಲ್ಲ ವೈಯಕ್ತಿಭವನೆ ಮತ್ತು ಭಾನೆಗಳಿಗೂ ಸಕಾರಾತ್ಮಕವಾಗಿಸ್ಪಂದಿಸುವುದಕ್ಕೆ ನಾಂಧಿ ಹಾಡಿದ್ದಾರೆ.ಸಾಮಾನ್ಯವಾಗಿ ಅಧಿಕಾರ ಲಭಿಸುವ ಪೂರ್ವದಲ್ಲಿ ಈರೀತಿ ಕಾರ್ಯಕ್ರಮಗಳನ್ನು ನಡೆಸಿನಂತರ ಮರೆಯುವ ಸಾಧ್ಯತೆಯುಂಟು. ಆದರೆ, ಲಕ್ಷ್ಮೀಹೆಬ್ಬಾಳಕರ ಅವರು ಅಧಿಕಾರಲಭಿಸಿದ ಮೇಲೆ ಇಂಥ ಸಾಮಾಜಿಕ ಸಂವೇಧನೆಯಕಾರ್ಯಕ್ರಮಗಳನ್ನು ಮತ್ತುಷ್ಟುಗಟ್ಟಿಗೊಳಿಸಿ ಜನರ ಪ್ರೀತಿ ವಿಶ್ವಾಸದ ಬೆಳವಣಿಗೆಗೆಕಾರಣರಾಗಿದ್ದಾರೆ” ಎಂದುಅಭಿಪ್ರಾಯಪಟ್ಟಿದ್ದಾರೆ .ಈ ರಕ್ಷಾ ಬಂಧನದ ಅಪರೂಪಆತ್ಮೀಯವಾದ ಸಮಾರಂಭಕ್ಕೆಅಭಿಮಾನ ಪ್ರೀತಿಯಿಂದ ಆಗಮಿಸಿದಅಧಿಕಾರಿಗಳು, ಇತರೆಜನಪ್ರತಿನಿಧಿಗಳು, ಮಾಧ್ಯಮದಬಾಂಧವರು, ಅಭಿಮಾನಿಗಳು,ಕ್ಷೇತ್ರದ ಜನರು ಸಾಕ್ಷಿಯಾಗಿದ್ದರು.ಮನೆಯ ಅಂಗಗಳಲ್ಲಿ ದೊಡ್ಡದಾದಮಂಟಪ ವೇದಿಕೆ ಸುಂದರವಾದದೃಶ್ಯದ ಮೂಲಕ ಸಡಗರಸಂಭ್ರಮದ ಹಬ್ಬದ ವಾತಾವರಣಸೃಷ್ಟಯಾಗಿತ್ತು. ಸಹೋದರಿಯಪ್ರೀತಿಗೆ ಪಾತ್ರವಾದ ಸಹೋದರರುಮುಂವರುವ ದಿನಗಳಲ್ಲಿ ಇವರ ಪ್ರೀತಿಇನ್ನಷ್ಟು ಗಟ್ಟಿಗೊಂಡು ಅದರ ವ್ಯಾಪಕತೆ ಹೆಚ್ಚಾಗಲಿ ಎಂದುಹರಿಸಿದರು.

Read More »