Breaking News

LOCAL NEWS

ಗೃಹಲಕ್ಷ್ಮೀ ಬೆಳಗಾವಿ ಜಿಲ್ಲೆಯ ಮಹಿಳೆಯರಿಗೆ 195.63 ಕೋಟಿ ಮೊದಲ ಕಂತಿನ ಗೀಫ್ಟ್…!

ಬೆಳಗಾವಿ,-ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಯನ್ನು ಅಗಸ್ಟ್ 30 ರಂದು ಮೈಸೂರಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಉಪಮುಖ್ಯಮಂತ್ರಿಗಳು, ಇಲಾಖಾ ಸಚಿವರು ಹಾಗೂ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಅದರಂತೆ ಬೆಳಗಾವಿ ಜಿಲ್ಲೆಯಲ್ಲಿ Two Way Interaction ಮಾಡಲು ಬೆಳಗಾವಿ ತಾಲೂಕು ಹಿರೇಬಾಗೆವಾಡಿಯ ಶಿವಾಲಯ ಕಲ್ಯಾಣ ಮಂಟಪ ಹಾಗೂ ಬೆಳಗಾವಿ ನಗರದ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ಬುಧವಾರ (ಆ.30) ಬೆಳಿಗ್ಗೆ 11. 30 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ಎಲ್ಲಾ …

Read More »

ಮದುವೆ ಊಟ ಸೇವಿಸಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥ

ಬೆಳಗಾವಿ- ಮದುವೆ ಕಾರ್ಯಕ್ರಮದಲ್ಲಿ ಬಿರ್ಯಾನಿನೋ ಇನ್ನೊಂದೋ ಮೌಂಸಾಹಾರಿ ಊಟ ಸೇವಿಸಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಚಿಕ್ಕೋಡಿ ಪಕ್ಕದ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ. ಮದುವೆಯಲ್ಲಿ ಮೌಂಸಾಹಾರಿ ಊಟ ಸೇವಿಸಿದವವರು ಮಾತ್ರ ಅಸ್ವಸ್ಥರಾಗಿದ್ದು ಶಾಖಾಹಾರಿ ಊಟ ಸೇವಿಸಿದವರು ಸೇಫ್ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೀರಜ್ ಮೂಲದ ಬೀಗರು ಸಂಬಂಧಿಗಳು ಅಸ್ವಸ್ಥರಾಗಿದ್ದು ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಮದುವೆ ಊಟ ಸೇವಿಸಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥ …

Read More »

ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಅಭಿವೃದ್ಧಿಯ ಭಾಗ್ಯ…..!!!

ಬೆಳಗಾವಿ – ರಾಜ್ಯದಲ್ಲಿಯೇ ಅತೀ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಸವದತ್ತಿ ಯಲ್ಲಮ್ಮನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಚಿಂತನೆ ನಡೆಸಿದ್ದು ಅಗಸ್ಟ್ 31 ರಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ತಂಡ ಯಲ್ಲಮ್ಮನ ಗುಡ್ಡಕ್ಕೆ ಭೇಟಿ ನೀಡಲಿದೆ. ಪ್ರವಾಸೋದ್ಯಮ ಇಲಾಖೆಯ ಸಚಿವ ಹೆಚ್ ಕೆ ಪಾಟೀಲ ಅವರು ಸವದತ್ತಿ ಯಲ್ಲಮ್ಮನ ಕ್ಷೇತ್ರದ ಶಾಸಕ ವಿಶ್ವಾಸ ವೈದ್ಯ ಅವರ ವಿಶೇಷ ಮನವಿ ಮತ್ತು ಒತ್ತಾಯದ ಮೇರೆಗೆ ಸಚಿವರು ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೆ ಅಗಸ್ಟ್ …

Read More »

ಪ್ರಭಾಶುಗರ ಅಧ್ಯಕ್ಷರಾಗಿ ಅಶೋಕ ಪಾಟೀಲ, ಉಪಾಧ್ಯಕ್ಷರಾಗಿ ರಾಮಣ್ಣಾ ಮಹಾರಡ್ಡಿ ಪುನರಾಯ್ಕೆ

ಗೋಕಾಕ* : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನೂತನ ಅಧ್ಯಕ್ಷರಾಗಿ ಅಶೋಕ ರಾಮನಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ರಾಮಣ್ಣಾ ಕೃಷ್ಣಪ್ಪ ಮಹಾರಡ್ಡಿ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸೋಮವಾರದಂದು ಸಕ್ಕರೆ ಕಾರ್ಖಾನೆಯ ಸಭಾಂಗಣದಲ್ಲಿ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಬ್ಬರು ನಾಮಪತ್ರಗಳನ್ನು ಸಲ್ಲಿಸಿದ್ದರಿಂದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಬೈಲಹೊಂಗಲ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಶಾಹೀನ್ ಅಖ್ತರ ಅವರು ಪ್ರಕಟಿಸಿದರು. ಅಧ್ಯಕ್ಷ-ಉಪಾಧ್ಯಕ್ಷರಾಗಿ ಅವಿರೋಧವಾಗಿ …

Read More »

ಸಂಬಂಧ ಅಂತ್ಯವಾಯಿತು ಸಂಸ್ಕಾರ ಸಮಾಧಿ ಆಯಿತು….!!

ಬೆಳಗಾವಿ- ಬಹುಶ ಭೂಮಿಯ ಮೇಲಿನ ಕರುಣೆ ದಯೆ,ಸಂಬಂಧಳ ಜೊತೆ ಸಂಸ್ಕಾರವೂ ಸಮಾಧಿಯಾದಂತೆ ಕಾಣುತ್ತಿದೆ.ಮಕ್ಕಳಿಗೆ ಹೆತ್ತವರ ಮೇಲೆಯೇ ಕರುಣೆ ಬರುತ್ತಿಲ್ಲ.ಮಕ್ಕಳು ಜೀವಂತ ಇದ್ದಾಗಲೂ ಅವರ ಕಣ್ಮುಂದೆ ಹೆತ್ತವರು ಬೀದಿ ಹೆಣವಾಗುವ ಘಟನೆಗಳು ನಡೆಯುತ್ತಿವೆ.ಇಂತಹ ಘಟನೆ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿರುವದು ದುರ್ದೈವ. ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ಭಾರತೀಯ ಸಂಸ್ಕೃತಿಯ ಆಧಾರಸ್ತಂಭವಾದ ಕುಟುಂಬ ವ್ಯವಸ್ಥೆಯ ಬುಡವನ್ನೇ ಅಲ್ಲಾಡಿಸುತ್ತಿದೆ. ತಂದೆ-ತಾಯಿ ಸಾಕ್ಷಾತ್ ದೇವರೆಂದು ನಡೆದುಕೊಳ್ಳುತ್ತಿದ್ದ ಮಕ್ಕಳಿಗೆ ಈಗ ವೃದ್ಧ …

Read More »

ಕುಂದಾನಗರಿಯಲ್ಲಿ ಪ್ರತ್ಯಕ್ಷವಾದ ನರಿ…!!

ಬೆಳಗಾವಿ- ಇವತ್ತು ಸೋಮವಾರ ಬೆಳಗಾವಿಯ ಶಾಸ್ತ್ರಿ ನಗರದ ಹುಲಬತ್ತೆ ಕಾಲೋನಿಯಲ್ಲಿ ನರಿ ಕಾಣಿಸಿಕೊಂಡಾಗ ಇದು ವಿಚಿತ್ರ ನಾಯಿಯೋ ನರಿಯೋ ಎಂದು ಜನ ಗಾಬರಿಯಾಗಿದ್ದರು. ನರಿ ಬಂದಿದೆ ನರಿ,ಎನ್ನುವ ಸುದ್ಧಿ ಹರಡುತ್ತಿದ್ದಂತೆ ಶ್ರೀರಾಮ ಸೇನೆ ಹಿಂದೂಸ್ತಾನ,ಹಾಗೂ ಫೇಸ್ ಬುಕ್ ಫ್ರೆಂಡ್ಸ್ ಸರ್ಕಲ್ ಕಾರ್ಯಕರ್ತರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಕೊನೆಗೂ ನರಿಯನ್ನು ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. Fox was spotted in Hulbatty Colony surrrounding area near …

Read More »

ಬೆಳಗಾವಿ ಮಹಾನಗರ ಪಾಲಿಕೆಯಿಂದ ವಿನೂತನ ಪ್ರಯೋಗ…!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಅಶೋಕ ದುಡಗುಂಟಿ ಅವರು ಆಯುಕ್ತರಾಗಿ ಬಂದಾಗಿನಿಂದ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ.ಬೆಳಗಾವಿಯ ದೇವಾಲಯ ಗಳಲ್ಲಿ ಸಂಗ್ರಹವಾಗುವ ಹೂವಿನ ವೇಸ್ಟೇಜ್ ನಿಂದ ಉದಬತ್ತಿ ತಯಾರಿಸಲು ಪಾಲಿಕೆ ಹೊಸ ಯೋಜನೆ ರೂಪಿಸಿದೆ. ಬೆಳಗಾವಿಯ ಹೋಲ್ ಸೇಲ್ ಫ್ಲವರ್ ಮಾರ್ಕೆಟ್ ನಲ್ಲಿ ದಿನನಿತ್ಯ ವೇಸ್ಟ್ ಫ್ಲವರ್ ಸಂಗ್ರಹವಾಗುತ್ತದೆ ಜೊತೆಗೆ ಬೆಳಗಾವಿಯ ಮಂದಿರ,ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಹೂವಿನ ವೇಸ್ಟೇಜ್ ಬರುತ್ತದೆ.ಇದನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇದನ್ನು ರೀಸೈಕಲ್ ಮಾಡಿ ಉದಬತ್ತಿ …

Read More »

ಮಾನವೀಯತೆ ಮೆರೆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಚಾಮರಾಜನಗರ : ಬೈಕ್ ಹಾಗೂ‌ ಆಟೋ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಇಬ್ಬರು ಯುವಕರ ನೆರವಿಗೆ ಧಾವಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾನವೀಯತೆಯ ಮೆರೆದಿದ್ದಾರೆ. ಗೃಹಲಕ್ಷ್ಮಿ ಯೋಜನೆ ಚಾಲಾನಾ ಸಮಾರಂಭದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಬಳಿಕ ಸಚಿವರು ಮಂಡ್ಯಕ್ಕೆ ತೆರಳುತ್ತಿದ್ದರು. ನಗರದ ಹೊರವಲಯದ ಸಂತೇಮರಳ್ಳಿ ಮುಖ್ಯ ರಸ್ತೆಯ ದೊಡ್ಡಪೇಟೆ ಕ್ರಾಸ್ ಬಳಿ ಬೈಕ್ ನಲ್ಲಿ …

Read More »

ಚಿಕ್ಕೋಡಿ ಬಿಜೆಪಿ ಟಿಕೆಟ್ ಗಾಗಿ ತ್ರೀಮೂರ್ತಿಗಳ ನಡುವೆ ಗುದ್ದಾಟ…!!

ಬೆಳಗಾವಿ-ಮಾಜಿ ಡಿಸಿಎಂ,ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆಗಿತ್ತು.ಈಗ ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮ ಧ್ರುವೀಕರಣ ಆಗೋದು ಶತಸಿದ್ಧ ಎನ್ನುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟಾಗ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿತ್ತು.ಈಗ ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ರಮೇಶ್ ಕತ್ತಿ ಸಹ ಸವದಿ ಸಾಲಿನಲ್ಲಿ ನಿಂತುಕೊಂಡಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ …

Read More »

ಬೆಳಗಾವಿ: ಹಾವು ಕಚ್ಚಿ ರೈತ ಮಹಿಳೆಯ ಸಾವು…

ಬೆಳಗಾವಿ – ಹೊಲದ ಗದ್ದೆಯಲ್ಲಿ ಕಸ ತೆಗೆಯುತ್ತಿದ್ದ ಕೃಷಿ ಕೂಲಿಕಾರ್ಮಿಕ ಮಹಿಳೆಗೆ ಹಾವು ಕಚ್ಚಿದ ಪರಿಣಾಮ ಮಹಿಳೆ ಸಾವನ್ನೊಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಚನಕೇಬೈಲು ಗ್ರಾಮದಲ್ಲಿ ನಡೆದಿದೆ. 39 ವಯಸ್ಸಿನ ರೈತ ಮಹಿಳೆ ರಶೀದಾ ಮೆಹಬೂಬಸುಬಾನಿ ಕುದಣ್ಣವರ ಹಾವು ಕಚ್ಚಿದ ಪರಿಣಾಮ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಅಗಸ್ಟ್ 16 ರಂದು ಈ ಮಹಿಳೆಗೆ ಹಾವು ಕಚ್ಚಿದ ಕಾರಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇವತ್ತು ಈ …

Read More »

ಬೆಳಗಾವಿ ಮಾರ್ಕೆಟ್ ಪೋಲೀಸರಿಂದ ಭರ್ಜರಿ ಬೇಟೆ…

ಬೆಳಗಾವಿ -ಇತ್ತೀಚಿಗೆ ಬೆಳಗಾವಿಯ ಸಮರ್ಥ ನಗರದಲ್ಲಿ ಮನೆಯ ಕಳ್ಳತನ ನಡೆದ ಬಗ್ಗೆ ಬೆಳಗಾವಿಯ ಮಾರ್ಕೆಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ತನಿಖೆ ಶುರು ಮಾಡಿದ ಪೋಲೀಸರು ಕಳುವಾದ ಚಿನ್ನಾಭರಣಗಳ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ‌. ಕಳುವಾಗಿದ್ದ 231 ಗಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದು ನಿಪ್ಪಾಣಿಯ ನಿವಾಸಿ ಆರೋಪಿ ಯಾಸೀನ ಹಾಸೀಮ ಶೇಖ 23 ಎಂಬಾತನನ್ನು ಬಂಧಿಸಲಾಗಿದ್ದು ಈತ ಕಳವು ಮಾಡಿದ್ದ 231 ಗ್ರಾಂ ಚಿನ್ನಾಭರಣ ಮತ್ತು 140 ಬೆಳ್ಳಿಯ ಆಭರಣಗಳು ಸೇರಿದಂತೆ ಹತ್ತು ಲಕ್ಷಕ್ಕೂ …

Read More »

ಬೆಳಗಾವಿಯಲ್ಲಿ ನೈತಿಕ ಪೋಲೀಸಗಿರಿ ಮೂವರು ಪೋಲೀಸರ ವಶಕ್ಕೆ

ಬೆಳಗಾವಿ- ನಿನ್ನೆ ಶುಕ್ರವಾರ ಸಂಜೆ ಬೆಳಗಾವಿಯ ಖಡೇಬಝಾರ್ ನಲ್ಲಿ ಶಿವಾನಂದ ಚೌಕಿ ಹತ್ತಿರ ಅನ್ಯಕೋಮಿನ ಯುವತಿಯ ಜೊತೆಗಿದ್ದ ಯುವಕನ ಮೇಲೆ ಒಂದು ಗುಂಪು ಹಲ್ಲೆ ಮಾಡಿದ ಘಟನೆ ನಡೆದಿದ್ದು ಈ ಪ್ರಕರಣ ಪೋಲೀಸ್ ಠಾಣೆಯ ಮೆಟ್ಟಲೇರಿದೆ. ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರ ಬೇರೆ,ಬೇರೆ ಕೋಮಿನ ಯುವಕ ಮತ್ತು ಯುವತಿ ಸುತ್ತಾಡುತ್ತಿರುವದನ್ನು ಗಮನಿಸಿದ ಯುವಕರ ಗುಂಪೊಂದು ಯುವಕನ ಮೇಲೆ ಹಲ್ಲೆ ಮಾಡುವ ಮೂಲಕ ನೈತಿಕ ಪೋಲೀಸ್ ಗಿರಿ ಮಾಡಿದೆ.ಘಟನಾ ಸ್ಥಳಕ್ಕೆ …

Read More »

ಬೆಳಗಾವಿ – ದೆಹಲಿ ವಿಮಾನ ಬುಕ್ಕಿಂಗ್ ಆರಂಭ..

ಬೆಳಗಾವಿ-ಇಂಡಿಗೋ ಏರಲೈನ್ಸ್ ವತಿಯಿಂದ ಬೆಳಗಾವಿ-ದೆಹಲಿ ನಡುವೆ ಅಕ್ಟೋಬರ್ 5 ರಿಂದ ವಿಮಾನಯಾನ ಸಂಚಾರ ಆರಂಭವಾಗಲಿದ್ದು ಈಗ ಬುಕಿಂಗ್ ಪ್ರಾರಂಭವಾಗಿದೆ. ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮನವಿ ಮಾಡಿಕೊಂಡಿದ್ದಾರೆ. ವೇಳಾಪಟ್ಟಿ- ಅಕ್ಟೋಬರ್ 5 ರಿಂದ ಪ್ರತಿದಿನ IndiGo Airlines 6E-2378 ದೆಹಲಿಯಿಂದ ಮಧ್ಯಾಹ್ನ 03.45ಕ್ಕೆ ಹೊರಟು 06.05ಕ್ಕೆ ಬೆಳಗಾವಿಗೆ ಆಗಮಿಸುತ್ತದೆ. IndiGo Airlines 6E-2379 ಬೆಳಗಾವಿಯಿಂದ ಸಂಜೆ 06.35 ಗಂಟೆಗೆ ಹೊರಟು ರಾತ್ರಿ 09.00 …

Read More »

ಬೆಳಗಾವಿ:ಕೋಟೆ ಕೆರೆಯ ಮ್ಯುಸಿಕ್ ಫೌಂಟೇನ್ ಆಗುತ್ತಿಲ್ಲ ಮೇಂಟೇನ್….!!

ಬೆಳಗಾವಿ-;ಸರ್ಕಾರದ ಯೋಜನೆಗಳ ಕಥೆ ಇಷ್ಟೇ ಆ ಯೋಜನೆ ಅನುಷ್ಠಾನ ಆಗುವ ಮೊದಲೇ ಹಳ್ಳ ಹಿಡೀತೈತಿ ಇಲ್ಲಾ ಅಂದ್ರೆ ಆದ್ಮೇಲೆ ಹಳ್ಳ ಹಿಡಿತೈತಿ.ಸರ್ಕಾರದ ಅನುದಾನ,ಸರ್ಕಾರದ ಯೋಜನೆ, ಅಂದ್ರೆ ಬೇವರ್ಸಿ ಎನ್ನುವ ಪರಿಸ್ಥಿತಿ ಈಗ ಸಾಮನ್ಯವಾಗಿದೆ. ಬೆಳಗಾವಿ ಮಹಾನಗರದ ಹೃದಯಭಾಗದಲ್ಲಿ ಇರುವ ಕೋಟೆ ಕೆರೆಯ ಅಭಿವೃದ್ದಿಗೆ ಕೋಟಿ,ಕೋಟಿ ಸುರಿದರೂ ಅದೇನು ಸುಧಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಬೆಳಗಾವಿ ಮಹಾನಗರದ ಮಕ್ಕಳ ಮನರಂಜನೆಗೆ ಕೋಟೆ ಕೆರೆ ಬಿಟ್ರೆ ಬೇರೆ ಜಾಗವೇ ಇಲ್ಲ.ಬೆಳಗಾವಿಯ ಜನ ಕೋಟೆ ಕೆರೆಯ …

Read More »

ಬೆಳಗಾವಿ: ಮರ್ಡರ್ ಆರೋಪಿಗಳ ಸುಳಿವು ಕೊಟ್ಟ ಸುಣ್ಣದ ಡಬ್ಬಿ….!!

ಬೆಳಗಾವಿ-ಮಗ ದಿನನಿತ್ಯ ಕುಡಿದು ಗಲಾಟೆ ಮಾಡಿ ಎಲ್ಲರಿಗೂ ತೊಂದರೆ ಕೊಡುತ್ತಿದ್ದಾನೆ ಎಂದು ಬೇಸತ್ತ ತಂದೆ ಮಗನ ಕೊಲೆಗೆ ಸುಪಾರಿ ಕೊಟ್ಟು ಹೆತ್ತ ಮಗನನ್ನೇ ಭೀಕರವಾಗಿ ಕೊಲೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಹಲವಾರು ದಿನಗಳಿಂದ ಕೊಲೆ ಮಾಡಿದ್ದು ಯಾರು ? ಅನ್ನೋದೇ ಗೊತ್ತಾಗಿರಲಿಲ್ಲ.ಮೃತ ವ್ಯಕ್ತಿಯ ಜೇಬಿನಲ್ಲಿ ಸಿಕ್ಕಿದ್ದ ಸುಣ್ಣದ ಡಬ್ಬಿ ಆರೋಪಿಗಳ ಸುಳಿವು ನೀಡಿದ್ದು.ಮುರಗೋಡ ಪೋಲೀಸರು ಇದೇ ಸುಳಿವು ಆಧರಿಸಿ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆ …

Read More »