LOCAL NEWS

೧೭ ಜನ ಹಿಂಡಲಗಾ ಜೈಲು ಹಕ್ಕಿಗಳಿಗೆ ಬಿಡುಗಡೆಯ ಭಾಗ್ಯ..೧೮ ಅರ್ಜಿಗಳು ರಿಜೆಕ್ಟ

ಬೆಳಗಾವಿ-ಸನ್ನಢತೆ ಆಧಾರದ ಮೇಲೆ ಹಿಂಡಲಗಾ ಕೇಂದ್ರ ಕಾರಾಗೃಹದ 17 ಕೈದಿಗಳು ಜನವರಿ 26 ರ ಗಣಜಾಜ್ಯೋತ್ಸವದಿನ ಸರ್ಕಾರದಿಂದ ಬಿಡುಗಡೆ ಭಾಗ್ಯ ಕಾಣಲಿದ್ದಾರೆ. ಸನ್ನಢತೆ ಆಧಾರದ ಮೇಲೆ ಐತಿಹಾಸಿಕ ಹಿಂಡಲಗಾ ಕೇಂದ್ರ ಕಾರಾಗೃಹದ 25 ಕೈದಿಗಳನ್ನು ಬಿಡುಗಡೆಗೊಳಿಸುವಂತೆ ಕಾರಾಗೃಹದ ಅಧೀಕ್ಷಕರ ರಾಜ್ಯ ಗೃಹಸಚಿವಾಲಯಕ್ಕೆ ಶಿಫಾರಸು ಮಾಡಿದ್ದರು. ಒಟ್ಟಾರೆ ಕೈದಿಗಳ ಚಾರಿತ್ರ್ಯ, ಸನ್ನಡತೆ, ಶಿಕ್ಷೆಯ ಅವಧಿಯಲ್ಲಿ ಅವರ ಸ್ವಭಾವ ಮತ್ತು ಕೆಲಸ ಕಾರ್ಯಗಳನ್ನು ಪರಿಗಣಿಸಿ, ರಾಜ್ಯ ಗೃಹ ಸಚಿವಾಲಯವು 17 ಕೈದಿಗಳಿಗೆ ಬಿಡುಗಡೆ …

Read More »

ಸತೀಶ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ಹೊರಹಾಕಿ-ಶಂಕರ ಮುನವಳ್ಳಿ

ಬೆಳಗಾವಿ-ಮಾಜಿ ಸಚಿವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಈ ಹಿಂದೆ ನಡೆದ ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಅವರನ್ನು ಕೂಡಲೇ ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಬೇಕು ಎಂದು ಕಾಂಗ್ರೆಸ್ ಮುಖಂಡ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಸತೀಶ ಜಾರಕಿಹೊಳಿ ಅವರು ಜಿಲ್ಲಾ ಮಂತ್ರಿಗಳಾಗಿದ್ದಾಗ ಪಕ್ಷಕ್ಕಾಗಿ ಏನೂ ಮಾಡಿಲ್ಲ ಪಕ್ಷದ ಸಂಘಟನೆಗೂ …

Read More »

ಶಾಸಕ ಕಾಗೆ ಸೇರಿ ಎಂಟು ಜನರಿಗೆ ಜಾಮೀನು

ಬೆಳಗಾವಿ- ವಿವೇಕ ಶೆಟ್ಟಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲ್ ಬಂಧನಕ್ಕೊಳಗಾಗಿದ್ದ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಅವರ ಕುಟುಂಬದ ಎಂಟು ಜನರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ ರಾಜು ಕಾಗೆ ಅವರು ಹಿಂಡಲಗಾ ಜೈಲಿನಲ್ಲಿ ಇದ್ದು ನ್ಯಾಯ್ಯಾಲಯದ ಜಾಮೀನು ಪ್ರತಿಯನ್ನು ಪಡೆದಿರುವ ರಾಜು ಕಾಗೆ ಅವರ ವಕೀಲರು ಹಿಂಡಲಗಾ ಜೈಲಿನತ್ತ ಧಾವಿಸಿದ್ದಾರೆ ಸಂಜೆ ಹೊತ್ತಿಗೆ ರಾಜು ಕಾಗೆ ಸೇರಿದಂತೆ ಅವರ ಕುಟುಂಬದ ಎಂಟು ಜನ ಜೈಲಿನಿಂದ ಬಿಡುಗಡೆ …

Read More »

ಬೈಲಹೊಂಗಲದ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ/ಬೈಲಹೊಂಗಲ:(ಸಂಗೊಳ್ಳಿ ರಾಯಣ್ಣ ಸಭಾಂಗಣ) ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆ ವತಿಯಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ವಿದ್ಯಾನಗರದ ಮೂಗಿಯವರ ಹೊಲದಲ್ಲಿ ಆಯೋಜಿಸಿರುವ 37ನೇ ರಾಜ್ಯ ಕೃಷಿ ಮೇಳ ಉದ್ಘಾಟನೆಯಾಯಿತು.. ಕೃಷಿ ವಸ್ತು ಪ್ರದರ್ಶನವನ್ನು ಗಣಿ ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು. ಕೃಷಿ ಯಂತ್ರೋಪಕರಣ ವಿಭಾಗವನ್ನು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‍ಇ ಆಡಳಿತ ಮಂಡಳಿ ಚೇರಮನ ಡಾ. ಪ್ರಭಾಕರ ಕೋರೆ, ಕರಕುಶಲ ವಸ್ತುಪ್ರದರ್ಶನವನ್ನು ಬೆಳಗಾವಿ ಸಂಸದ ಸುರೇಶ ಅಂಗಡಿ …

Read More »

ಸಿಎಂ ಸಿದ್ಧರಾಮಯ್ಯ, ಯಡಿಯೂರಪ್ಪಗೆ ,ಕಾಮನ್ ಸೆನ್ಸ ಇಲ್ಲ-ಕುಮಾರಸ್ವಾಮಿ

ಬೆಳಗಾವಿ- ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಪ್ರಕರಣ. ಐಟಿ ದಾಳಿ ವಿಚಾರಕ್ಕೆ ರಾಜಕೀಯ ಬಣ್ಣ ಕಟ್ಟಲ್ಲ. ಪಕ್ಷಕ್ಕಿಂತ ಹೆಚ್ಚಾಗಿ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ಕೆಲ ನಾಯಕರು ಐಟಿ ರೇಡ್ ಮಾಡಿಸಿದ್ದಾರೆ ಎಂಬ ಆರೋಪವಿದೆ. ಈ ರೇಡ್ ಗಳು ಕೇವಲ ಕಾಟಾಚಾರಕ್ಕೆ ಸಿಮೀತವಾಗಬಾರದು.ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾದ್ಯಮಗಳ …

Read More »

ಸಿಸಿಬಿ ಪೋಲೀಸರಿಂದ ಭರ್ಜರಿ… ರಿಕವರಿ..!

ಬೆಳಗಾವಿ- ಬೆಳಗಾವಿ ನಗರದ ವಿವಿಧ ಪೋಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ  ನಡೆದ ಹದಿನಾಲ್ಕು ಕಳ್ಳತನದ ಪ್ರಕರಣಗಳನ್ನ ಪತ್ತೆ ಮಾಡಿರುವ ಸಿಸಿಬಿ ಪೋಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಅಪಾರ ಪ್ರಮಾಣದ ಬಂಗಾರದ ಆಭರಣ ಹಾಗು ಬೆಳ್ಳಿಯ ವಸ್ತುಗಳನ್ನು ವಶ ಪಡಿಸಿಕೊಂಡು ಭರ್ಜರಿ ರಿಕವರಿ ಮಾಡಿದ್ಸಾರೆ ಸಿಪಿಐ ಗಡ್ಡೇಕರ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೋಲೀಸರು ಬೆಳಗಾವಿಯ ಜಿನಾಬಕುಲ್ ಫ್ಯಾಕ್ಟರಿ ಬಳಿ ಇಬ್ಬರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೋಲೀಸರು …

Read More »

ರಾಯಣ್ಣನ ಉತ್ಸವ, ಮುಖ್ಯಮಂತ್ರಿಗಳಿಂದ ಉದ್ಘಾಟನೆ

.ಬೆಳಗಾವಿ- ಕ್ರಾಂತಿ ವೀರ ,ರಾಣಿ ಚನ್ನಮ್ಮಾಜಿಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣನ ಉತ್ಸವ ಇದೇ ತಿಂಗಳ ೨೭ ರಿಂದ ಆರಂಭ ವಾಗಲಿದ್ದು ಈ ಉತ್ಸವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದಾರೆ ಕ್ರಾಂತಿಯ ನೆಲ ಶೂರರ ನಾಡು ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ಈ ಉತ್ಸವವ ಜನೇವರಿ ೨೭ ಹಾಗು ೨೮ ರಂದು ಎರಡು ದಿನಗಳ ಕಾಲ ನಡೆಯಲಿದೆ ಕಿತ್ತೂರ ಉತ್ಸವಕ್ಕೆ ಬಾರದ ಮುಖ್ಯಮಂತ್ರಿ ರಾಯಣ್ಣನ ಉತ್ಸವಕ್ಕೆ ಬರುತ್ತಿರುವದರಿಂದ …

Read More »

ನಾಳೆಯಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈ- ಫೈ ಸೇವೆ

ಬೆಳಗಾವಿ- ಬೆಳಗಾವಿ ಜಿಲ್ಲೆ ರಾಜ್ಯದಲ್ಲಿಯೇ ಅತೀ ದೊಡ್ಡ ಜಿಲ್ಲೆಯಾಗಿದೆ ಈ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯ ರೋಗಿಗಳ ಮನರಂಜನೆಗಾಗಿ ಬಿಎಸ್ಎನ್ಎಲ್ ನಾಳೆ ಬುಧವಾರದಿಂದ ವೈಫೈ ಸೇವೆ ಆರಂಭವಾಗಲಿದೆ ಬುಧವಾರ ಬೆಳಿಗ್ಗೆ ೧೧ ಘಂಟೆಗೆ ಬಿಎಸ್ಎನ್ಎಲ್ ಜಿಲ್ಲಾ ಮುಖ್ಯ ವ್ಯೆವಸ್ಥಾಪಕ ತ್ಯಾಗಿ ಅವರು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ವೈಫೈ ಸೇವೆಗೆ ಚಾಲನೆ ನೀಡಲಿದ್ದಾರೆ ಏಸಿಯಾ ಖಂಡದಲ್ಲಿಯೇ ಸ್ವಚ್ಛ ಮತ್ತು ಬೃಹತ್ತ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾವ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಮೋಬೈಲ್ ನೆಟವರ್ಕ …

Read More »

ಸುರೇಶ ಅಂಗಡಿ ಅವರ ಎರಡನೇಯ ಅಭಿವೃದ್ಧಿಯ ಮೈಲಿಗಲ್ಲು…

  ಬೆಳಗಾವಿ:ನಗರದಲ್ಲಿ ಮೊಟ್ಟಮೊದಲ ರೈಲ್ವೇ ಓವರ್ ಬ್ರಿಡ್ಜ್ ಕಪಿಲೇಶ್ವರ ಮಂದಿರದ ಬಳಿ ನಿರ್ಮಾಣಗೊಂಡು ಸೆವೆಗೆ ಸಮರ್ಪಣೆಯಾದ ಬಳಿಕ ಈಗ ಎರಡನೇ ಓವರ್ ಬ್ರಿಡ್ಜ್ ಕಾಮಗಾರಿಗೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ಹಳೆ ಪಿಬಿ ರಸ್ತೆಯ ಬಾಜಿ ಮಾರ್ಕೇಟ್ ಬಳಿ ಓವರ್ ಬ್ರಿಡ್ಜ್ ಕಾಮಗಾರಿಗೆ ಬೆಳಗಾವಿ ಸಂಸದ ಸುರೇಶ ಅಂಗಡಿ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಸುಮಾರು ೨೫.೦೪ ಕೋಟಿ ವೆಚ್ಚದಲ್ಲಿ ಬರುವ ಮೇ ತಿಂಗಳ ಅಂತ್ಯದ ವೇಳೆಗೆ ಕಾಮಗಾರಿ ಮುಗಿಯಲಿದೆ. …

Read More »

ಶಿಸ್ತಿನ ಕ್ರಮ,ಪದದ ಬೆಲೆ ಕಳೆಯಬೇಡಿ….ಯಡಿಯೂರಪ್ಪನ ವಿರುದ್ಧ ಈಶ್ವರಪ್ಪ ಲೇವಡಿ…!

 ಬೆಳಗಾವಿ- ನನ್ನ ಜೀವ ಇರೋ ವರೆಗೆ ಬ್ರೀಗೆಡ್ ಒಪ್ಪಲ್ಲ ಎಂದು ಯಡಿಯೂರಪ್ಪ ಹೇಳಿಕೆ ವಿಚಾರ. ಇದು ಯಡಿಯೂರಪ್ಪ ಅವರದು ಬಹಳ ಅವಸರದ ಹೇಳಿಕೆ. ಹಿಂದೆ ಕೆಜೆಪಿ ಕಟ್ಟಿದಾಗ ಉಸಿರು ಇರೋ ವರೆಗೆ ಬಿಜೆಪಿಗೆ ಬರಲ್ಲ ಎಂದು ಅವಸರದ ಹೇಳಿಕೆ ನೀಡಿದ್ದರು. ಇದು ಸಹ ಅವಸರದ ಹೇಳಿಕೆಯಾಗಿದೆ. ಎಂದು ಬೆಳಗಾವಿಯಲ್ಲಿ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ  ಬೆಳಗಾವಿಯ ಸರ್ಕ್ಯಟ್ ಹೌಸ್ ನಲ್ಲಿ ಅವರನ್ನು ಭೇಟಿಯಾದ ಮಾದ್ಯಮಗಳ ಜೊತೆ ಮಾತನಾಡಿದ ಅವರು ರಾಷ್ಟ್ರೀಯ …

Read More »

ಮಹತ್ವದ ಘಟ್ಟ ತಲುಪಿದ ಬೆಳಗಾವಿ ಗಡಿವಿವಾದ

ಹಳ್ಳಾ ಹಿಡಿದ ಮನಮೋಹನ ಸರಿನ್ ಕಮಿಟಿ:ಸಾಕ್ಷಿ ಸಂಗ್ರಹಕ್ಕೆ ತಿಣಕಾಡಿದ್ದ ಮಹಾರಾಷ್ಟ್ರಕ್ಕೆ ಭಾರೀ ಹಿನ್ನೆಡೆ!! ಇಂದು ಸೋಮವಾರ ಸರ್ವೋನ್ನತ ನ್ಯಾಯಾಲಯದ ಎದುರು ವಿಚಾರಣೆಗೆ ಬಂದಿದ್ದ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣವನ್ನು ಮಾರ್ಚ 10ಕ್ಕೆ ಮುಂದೂಡಲಾಗಿದೆ. 2014 ರಲ್ಲಿ ಅಂದಿನ ಮು.ನ್ಯಾ.ಮೂ.ಎಮ್.ಆರ್ ಲೋಧಾ ಅವರು ಪ್ರಕರಣದ ವಿಚಾರಣೆಗಾಗಿ ಸಾಕ್ಷಿ ಕೇಳಲು ನಿ.ನ್ಯಾ.ಮೂ.ಮನಮೋಹನ್ ಸರಿನ್ ಕಮಿಟಿಯನ್ನು ನೇಮಕ ಮಾಡಿದ್ದರು.ನ್ಯಾಯಾಲಯದ ಅಧಿಕಾರವ್ಯಾಪ್ತಿಗೆ ಈ ಪ್ರಕರಣ ಬರುವದಿಲ್ಲವೆಂದು ಕರ್ನಾಟಕವು ವಾದಿಸುತ್ತಲೇ ಬಂದಿತ್ತು. ವ್ಯಾಪ್ತಿಯ ಬಗ್ಗೆ ಉಭಯ ರಾಜ್ಯಗಳ …

Read More »

ಫೆ,7 ರಿಂದ ಬೆಳಗಾವಿಯಲ್ಲಿ ಬೆನಕೆ ಬೌಂಡರಿ,

ಬೆಳಗಾವಿ: ಅನೀಲ ಬೆನಕೆ ಸ್ಪೋಟ್ಸ ಸಂಸ್ಥೆ ಆಶ್ರಯದಲ್ಲಿ ಫೆ.7 ರಿಂದ ನಗರದ ಸಿಪಿಎಡ್ ಮೈದಾನದಲ್ಲಿ ನಾಲ್ಕನೇ ಆವೃತ್ತಿಯ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗಳು ನಡೆಯಲಿವೆ ಎಂದು ಸಂಸ್ಥೆಯ ಮುಖ್ಯಸ್ಥ ಅನೀಲ ಬೆನಕೆ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಕ್ರಿಕೇಟ್ ಪಂದ್ಯಾವಳಿಗಳನ್ನು ಆಯೋಜಿಸುತ್ತ ಬರಲಾಗಿದೆ. ಇದರಿಂದ ಯುವ ಆಟಗಾರರಿಗೆ ಪ್ರೋತ್ಸಾಹ ನೀಡಿದಂತ್ತಾಗ್ಯೂ ಆಗುತ್ತಿದೆ. ಸ್ಪರ್ಧೇಯಲ್ಲಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯದ ಆಟಗಾರರು ಆ ಭಾಗವಹಿಸಲಿದ್ದಾರೆ. ಸ್ಪರ್ಧೇಯಲ್ಲಿ …

Read More »

ಪಾರ್ಕಿಂಗ್ ಸ್ಥಳವಾಯ್ತು ಮೋಡಕಾ ಬಝಾರ್

ಬೆಳಗಾವಿ- ಬೆಳಗಾವಿ ನಗರದ ಖಂಜರ್ ಗಲ್ಲಿಯಲ್ಲಿನ ಗುಜ್ಜರಿ ಅಂಗಡಿಗಳನ್ನು ತೆರವು ಮಾಡಿ ನಂತರ ಉದ್ಭವಿಸಿದ ನಕಲಿ ಗೋರಿಯನ್ನು ತೆಗೆದು ಬರೊಬ್ಬರಿ ಎರಡು ವರ್ಷಗಳು ಗತಿಸಿವೆ ಆದರೂ ಪಾಲಿಕೆ ಅಧಿಕಾರಿಗಳು ಈ ಸ್ಥಳದಲ್ಲಿ ಪಾರ್ಕಿಂಗ್ ಶುರು ಮಾಡದೇ ಇರುವದರಿಂದ ಗುಜ್ಜರಿ ವ್ಯಾಪಾರಿಗಳು ಪಾರ್ಕಿಂಗ್ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ವಿಷಯದಲ್ಲಿ ಯಾರ ಮರ್ಜಿ ಕಾಯುತ್ತಿದ್ದಾರೆ ಗೊತ್ತಿಲ್ಲ ಖಂಜರ ಗಲ್ಲಿಯ ಪಾರ್ಕಿಂಗ್ ಸ್ಥಳ ಈಗ ಬೇ ವಾರಸಾ ಅಂದ್ರೆ …

Read More »

ಜೀವಂತ ಗೂಗಿ,ಚಿರತೆ ಚರ್ಮ ವಶಕ್ಕೆ ಆರು ಜನರ ಬಂಧನ

ಬೆಳಗಾವಿ: ಖಚಿತ ಮಾಹಿತಿ ಮೇರೆಗೆ ತಡರಾತ್ರಿ ದಾಳಿ ನಡೆಸಿದ ಬೆಳಗಾವಿ ಸಿಸಿಐಬಿ ಪೊಲೀಸರು ಜೀವಂತ ಗೂಬೆ ಹಾಗೂ ಚಿರತೆ ಚರ್ಮವನ್ನು ಪತ್ತೆಹಚ್ಚಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿದ್ದಾರೆ. ಸುವರ್ಣಸೌಧದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೂಬೆ ವಶಪಡಿಸಿಕೊಂಡ ಪೊಲೀಸರು, ನಗರದ ಕಿಲ್ಲಾ ಬಳಿಯ ದುರ್ಗಾ ದೇವಸ್ಥಾನದ ಬಳಿ ಚಿರತೆ ಚರ್ಮ ವಶಕ್ಕೆ ಪಡೆದಿದ್ದಾರೆ. ಸಲೀಂ ಮುಬಾರಕಲಿ ಕೊಪ್ಪಳ ಜಿಲ್ಲೆ, ರಾಘವೇಂದ್ರ ಸದಾನಂದ ಪೈ ಕೊಪ್ಪಳ ಜಿಲ್ಲೆ, ನಾರಾಯಣ ಗಣಪತಿ ಶೆಟ್ಟಿ …

Read More »

ಬೆಳಗಾವಿಯಲ್ಲಿ, ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ಗೆ ಬೆಂಕಿ

ಬೆಳಗಾವಿ- ಬೆಳಗಾವಿಯಿಂದ ಕಣಬರ್ಗಿ ಕಡೆಗೆ ಮೌಂಸ ಸಾಗಿಸುತ್ತಿದ್ದ ಟಾಟಾ ಎಸ್ ವಾಹನಕ್ಕೆ ಕೆಲವು ಕಿಡಗೇಡಿಗಳು ಬೆಂಕಿ ಹಚ್ವಿದ ಘಟನೆ ಬೆಳಗಾವಿಯ ಅಟೋನಗರದ ಬಳಿ ನಡೆದಿದೆ ಬೆಳಗಾವಿಯದ ಕಣಬರ್ಗಿಯ ಕಡೆಗೆ ಹೊರಟಿದ್ದ ಟಾಟಾ ಎಸ್ ವಾಹನ ಅಟೋನಗರದ ಬಳಿ ಹೊತ್ತಿ ಉರಿದಾಗ ಅದನ್ನು ಆರಿಸಲು ಕೆಲವರು ಪ್ರಯತ್ನಿಸಿದ್ದಾರೆ ಆದರೆ ವಾಹನದಲ್ಲಿ ಮೌಂಸ ಇರುವದನ್ನು ನೋಡಿ ದೂರ ಸರಿದಿದ್ದಾರೆ ಮೌಂಸದಿಂದ ತುಂಬಿಕೊಂಡಿದ್ದ ಟಾಟಾ ಎಸ್ ವಾಹನದ ಮುಂಬಾಗ ಸುಟ್ಟಿದೆ ಮೌಂಸವೂ ಬೆಂಕಿಗಾಹುತಿಯಾಗಿದೆ ವಾಹನದಲ್ಲಿದ್ದ …

Read More »