LOCAL NEWS

ಬೆಳಗಾವಿಯಲ್ಲಿ ಆಸ್ಸಾಂ ಉಗ್ರನ ಬಂಧನ

ನಿಷೇಧಿತ ಉಗ್ರವಾದಿ ಸಂಘಟನೆಯೊಂದಿಗೆ ಗುರುತಿಸಿಕೊಂಡ ಓರ್ವ ಉಗ್ರ ಆರೋಪಿಯ ಬಂಧನ ನಿಷೇಧಿತ ಉಗ್ರವಾದಿ ಸಂಘಟನೆ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೂಡೋಲ್ಯಾಂಡ್ (ಎಸ್) ನೊಂದಿಗೆ ನಿಕಟ ಸಂಬಂಧ ಹೊಂದಿದ ಆಸ್ಸಾಂ ರಾಜ್ಯದ ಓರ್ವ ವ್ಯಕ್ತಿಯನ್ನು ಬೆಳಗಾವಿ ಜಿಲ್ಲಾ ಪೊಲೀಸ್‍ರು ಹಾಗೂ ಆಸ್ಸಾಂ ರಾಜ್ಯದ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಿನ್ನೆ ಬೆಳಗಾವಿ ಜಿಲ್ಲೆ  ರಾಯಬಾಗ ತಾಲ್ಲೂಕಿನ ಯಡ್ರಾವ ಗ್ರಾಮದ  ಸಕ್ಕರೆ ಕಾರ್ಖಾನೆಯ ಹತ್ತಿರ ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲಾ ಪೊಲೀಸ್ ಅಧೀಕ್ಷಕರು …

Read More »

ಸಿಐಡಿ ಪೋಲೀಸರ ದಾಳಿ ೨೦ ಕೆಜಿ ಗಾಂಜಾ ವಶ

  ಬೆಳಗಾವಿ ನಗರ ಹಾಗು ಜಿಲ್ಲೆಯ ಕಾಲೇಜು ವಿಧ್ಯಾರ್ಥಿಗಳು ಗಾಂಜಾ ಚಟಕ್ಕೆ ಬಲಿಯಾಗುತ್ತಿರುವದನ್ನು ಗಂಭೀರವಾಗಿ ಪರಗಣಿಸಿರುವ ಸಿಐಡಿ ಪೋಲೀಸರು ಸಿಐಡಿ ಇನ್ಸ್ಪೆಕ್ಟರ್ ಎನ್.ವಿ. ಬರಮನಿ ನೇತೃತ್ವದ ತಂಡದ ದಾಳಿ..ಮಾಡಿ ಸುಮಾರು ೨೦ ಕೆಜಿ ಗಾಂಜಾ ವಶಪಡಿಸಿಕೊಂಡಿದೆ ಕಬ್ಬಿನ ಗದ್ದೆಯಲ್ಲಿ ಬೇಳೆದ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಸಿದ್ದಪ್ಪಾ ಹಿರೇಕೊಡಿ ಎಂಬುವವರ ಹೊಲದಲ್ಲಿ ಬೆಳೆದ ಗಾಂಜಾ..ಇದಾಗಿದೆ ಆರೋಪಿ ಸಿದ್ದಪ್ಪಾ ಹಿರೇಕೊಡಿ ಎಂಬಾತನನ್ನು ಬಂಧಿಸಲಾಗಿದೆ. ಇನ್ನೊರ್ವ ಆರೋಪಿ ಪರಾರಿಯಾಗಿದ್ದಾನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ …

Read More »

ಬೆಳಗಾವಿ ನಗರದಲ್ಲಿ ಈಜು ಸ್ಪರ್ಧೆ

ನಗರದ ಕೆಎಲ್‍ಇ ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜ್ ಈಜುಕೊಳದಲ್ಲಿ ಜ. 6 ರಿಂದ 8ರವರೆಗೆ 29 ನೇ ದಕ್ಷಿಣ ವಲಯ ಈಜು ಸ್ಪರ್ದೆ ನಡೆಯಲಿದೆ ಎಂದು  ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್ ಅಧ್ಯಕ್ಷ ನೀಲಕಂಠರಾವ್ ಆರ್ ಜಗದಾಳೆ ಹೇಳಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೆಎಲ್‍ಇ ಸಂಸ್ಥೆ, ಬೆಳಗಾವಿಯ ಸ್ವಿಮ್ಮರ್ಸ್ ಕ್ಲಬ್ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ ಇವರ ಸಹಯೋಗದೊಂದಿಗೆ ಕರ್ನಾಟಕ ಸ್ವಿಮ್ಮಿಂಗ್ ಅಸೊಸಿಯೇಶನ್‍ನವರು ಈ ಸ್ಪರ್ದೆಯನ್ನು ಆಯೋಜಿಸಿದ್ದಾರೆ. ಈ ಈಜು …

Read More »

ಮಾರುತಿ ಗಲ್ಲಿಯಲ್ಲಿ ವ್ಯಾಪಾರಿಗಳಿಂದಲೇ ಟ್ರಾಫಿಕ್ ಮ್ಯಾನೇಜ್

ಬೆಳಗಾವಿ-ಬೆಳಗಾವಿ ನಗರದಲ್ಲಿ ಬೇಕಾಬಿಟ್ಟಿ ಪಾರ್ಕಿಂಗ್ ನಿಂದಾಗಿ ನಗರದ ಟ್ರಾಫಿಕ್ ವ್ಯೆವಸ್ಥೆ ಹದಗೆಟ್ಟು ಹೋಗಿದೆ ನಗರದ ಟ್ರಾಫಿಕ್ ಪೋಲೀಸರಿಂದ ಟ್ರಾಫಿಕ್ ವ್ಯೆವಸ್ಥೆ ಸುಧಾರಣೆ ಸಾಧ್ಯವೇ ಇಲ್ಲ ಎಂದು ಮನವರಿಕೆ ಮಾಡಿಕೊಂಡ ಮಾರುತಿ ಗಲ್ಲಿಯ ವ್ಯಾಪಾರಿಗಳು ಸ್ವತಹ ತಾವೇ ಮುಂದಾಗಿ ಶಿಸ್ತಿನ ಪಾರ್ಕಿಂಗ್ ಸಿಸ್ಟಂ ಜಾರಿಗೆ ತಂದಿದ್ದಾರೆ ಮಾರುತಿ ಗಲ್ಲಿ ವ್ಯಾಪಾರಿಗಳ ಸಂಘ ಈಗ ಅಸ್ತಿತ್ವಕ್ಕೆ ಬಂದಿದೆ ಮಾರುತಿ ಗಲ್ಲಿಯಲ್ಲಿ ಯಾವದೇ ವ್ಯಾಪಾರಿ ರಸ್ತೆ ಬದಿಯ ಚರಂಡಿ ದಾಟಿ ರಸ್ತೆ ಅತೀಕ್ರಮಣ ಮಾಡಬಾರದು …

Read More »

ಶಿಥಿಲಗೊಂಡಿರುವ ಸೇತುವೆ ಪರಶೀಲಿಸಿದ ರೆಲ್ವೆ ಇಂಜನೀಯರಗಳು

ಬೆಳಗಾವಿ: ನಗರದ ಬೆಳಗಾವಿ ಖಾನಾಪೂರ ರಸ್ತೆಯಲ್ಲಿತುವ ಅತ್ಯಂತ ಹಳೆಯದಾದ ರೈಲ್ವೈ ಸೇತುವೆ ಶಿಥಿಲಗೊಂಡು ಅಪಾಯದ ಮಟ್ಟದಲ್ಲಿದ್ದು, ಬುಧವಾರ ರೈಲ್ವೈ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದರು. ರೈಲ್ವೆ ಇಲಾಖೆ ಇಂಜಿನಿಯರ್ ಅಮರಗುಂಡಪ್ಪ ಹಾಗೂ ಪಾಲಿಕೆ ಆಯುಕ್ತ ಶಶೀಧರ್ ಕುರೇರ್, ಹಿರಿಯ ಅಭಿಯಂತರ ಆರ್.ಎಸ್. ನಾಯಕ, ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಅನೇಕ ತಾಂತ್ರಿಕ ತಜ್ಞರು ಸೇತುವೆಯ ಪರಿಶೀಲನೆ ಮಾಡಿದರು. ಪರಿಶೀಲನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ …

Read More »

ಸವದತ್ತಿ ಬಳಿ ರಸ್ತೆ ಅಪಘಾತ ಮೂವರ ಸಾವು

  ಸವದತ್ತಿ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ಕಾರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟ ಘಟನೆ ನಡೆದಿದೆ ಸ್ವಿಪ್ಟ್ ಕಾರು ಮತ್ತು ರಾಜ್ಯಹಂಸ ಬಸ್ ಮಧ್ಯೆ ಮುಖಾಮುಖಿ ಢಿಕ್ಕಿಅಗಿದ ಪರಿಣಾಮ ಈ ಘಟನೆ ನಡೆದಿದೆ ಸವದತ್ತಿ ಪಟ್ಟಣದ ಹೊರ ವಲಯದ ಪ್ರದೇಶದಲ್ಲಿ ಈ ಘಟನೆ ನಡೆದಿರುವದರಿಂದ ಸವದತ್ತಿ ಧಾರವಾಡ ಮಧ್ಯದ ರಸ್ತೆಯಲ್ಲಿ ತಳಮಳವನ್ನುಂಟು ಮಾಡಿದೆ ಕಾರ ನಂಬರ ka 25 Ma 8387 ಮತ್ತು ಗೋಕಾಕ …

Read More »

ಬೆಳಗಾವಿಯ ಹಳೆಯ ಸೇತುವೆ ಡ್ಯೆಮಾಲಿಶ್ ಮಾಡಲು ರೆಲ್ವೆ ಇಲಾಖೆಯ ನಿರ್ಧಾರ

ಬೆಳಗಾವಿ- ಬೆಳಗಾವಿ-ಖಾನಾಪೂರ ರಸ್ತೆಯಲ್ಲಿರುವ ರೆಲ್ವೆ ಮೆಲ್ಸೆತುವೆ ಶಿಥಿಲ ಗೊಂಡಿದ್ದು ಅತ್ಯಂತ ಹಳೆಯದಾಗಿರುವ ಈ ಸೇತುವೆಯನ್ನು ಡ್ಯೆಮಾಲಿಶ್ ಮಾಡಿ ಅದೇ ಸ್ಥಳದಲ್ಲಿ ದ್ವಿ ಪಥದ ಸೇತುವೆ ನಿರ್ಮಿಸಲು ರೆಲ್ವೆ ಇಲಾಖೆ ನಿರ್ಧರಿಸಿದ್ದು ಶಿಘ್ರದಲ್ಲಿಯೇ ರೆಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಸೇತುವೆಯನ್ನು ಪರಶೀಲಿಸಲು ಬೆಳಗಾವಿಗೆ ಆಗಮಿಸುತ್ತಿದ್ದಾರೆ ಬೆಳಗಾವಿಯ ಗೋಗಟೆ ಸರ್ಕಲ್ ಬಳಿಯ ಈ ಸೇತುವೆ ಶೀಥಿಲಗೊಂಡಿರುವ ಬಗ್ಗೆ ಮದ್ಯಮಗಳಲ್ಲಿ ಸುದ್ಧಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತುಗೊಂಡಿರುವ ರೆಲ್ವೆ ಇಲಾಖೆ ಹಳೆಯ ಸೇತುವೆಯನ್ನು ನೆಲಸಮ ಮಾಡಿ …

Read More »

ಸಚಿವ ಮಹಾದೇವ ಪ್ರಸಾದ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ಕಾಂಗ್ರೆಸ್

ಬೆಳಗಾವಿ- ಹೃದಯಾಘಾತದಿಂದ ಅಕಾಲಿಕ ನಿಧನ ಹೊಂದಿದ ಸಹಕಾರಿ ಸಚಿ ಎಚ್ ಸಿ ಮಹಾದೇವ ಪ್ರಸಾದ ಅವರ ನಿಧನಕ್ಕೆ ಕಂಬಿನಿ ಮಿಡಿದ ಬೆಳಗಾವಿ ನಗರ ಹಾಗೂ ಗ್ರಾಮೀಣ ಕಾಂಗ್ರೆಸ್ ಸಮೀತಿಗಳು ನಿಯೋಜಿತ ಪತ್ರಿಕಾಗೋಷ್ಠಿಯನ್ನು ರದ್ದುಪಡಿಸಿ ಶೃದ್ಧಾಂಜಲಿ ಸಭೆಯನ್ನು ಏರ್ಪಡಿಸಿ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿತು ಬೆಳಗಾವಿ ನಗರ ಕಾಂಗ್ರೆಸ್ ಸಮೀತಿಯ ಕಚೇರಿಯಲ್ಲಿ ಸಚಿವ ಮಹಾದೇವ ಪ್ರಸಾದ ಅವರ ಭಾವ ಚಿತ್ರಕ್ಕೆ ಪುಷ್ಪ ಗೌರವ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಿದರು ಕೆಪಿಸಿಸಿ ಮಹಿಳಾ ಘಟಕದ …

Read More »

ಮುದುಡಿದ ತಾವರೆ ಅರಳಿತು..ಹಳೆಯ ದೋಸ್ತಿ ಮತ್ತೆ ಚಿಗುರಿತು..!

ಬೆಳಗಾವಿ- ರಮೇಶ ಕುಡಚಿ ಅವರಿಗೆ ಕಾಂಗ್ರೆಸ್ ಟಿಕೇಟ್ ತಪ್ಪಿಸಿ ಫಿರೋಜ್ ಸೇಠ ಅವರಿಗೆ ಟಿಕೇಟ್ ಕೊಡಿಸಿ ಅವರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕಾಂಗ್ರೆಸ್ ಮುಖಂಡ ಅನೀಲ ಪೋತದಾರ ಕೆಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಿಂದ ದೂರಾಗಿದ್ದರೂ ಆದರೆ ಇಂದು ಮಂಗಳವಾರ ನಗರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಹೆಚ್ ಸಿ ಮಹಾದೇವ ಪ್ರಸಾದ ಅವರ ಶೃದ್ಧಾಂಜಲಿ  ಸಭೆಯಲ್ಲಿ ಅವರು ಸೇಠ ಅವರ ಜೊತೆ ಕಾಣಿಸಿಕೊಳ್ಳುವದರ ಮೂಲಕ ಎಲ್ಲರಲ್ಲಿ ಅಚ್ಚರಿ ಮೂಡಿಸಿದರು ವಿಶ್ವ …

Read More »

ಜನನ ಮರಣಕ್ಕೆ ಡಿಜಿಟಲ್ ಸಹಿ,ಪಾಲಿಕೆಯಲ್ಲಿ ಸೂಪರ್ ಫಾಸ್ಟ ಸೇವೆ..!

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತಿದೆ ಪಾಲಿಕೆ ಕಮಿಷ್ನರ್ ಶಶಿಧರ ಕುರೇರ ಅವರು ಸದ್ಧಿಲ್ಲದೇ ಪಾಲಿಕೆ ಆಡಳಿತ ವ್ಯೆವಸ್ಥೆ ಸುಧಾರಿಸುವಲ್ಲಿ ಶ್ರಮಿಸಿ ಸಾರ್ವಜನಿಕ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಜನನ ಹಾಗು ಮರಣ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ದಿನವಿಡೀ ಕಾಯಬೇಕಾಗಿತ್ತು ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ದಿನನಿತ್ಯ ಸಾವಿರಾರು ಪ್ರಮಾಣ ಪತ್ರಗಳಿಗೆ ಸಹಿ ಹಾಕಿದ ನಂತರವೇ ಪ್ರಮಾಣ ಪತ್ರ ಸಿಗುವ ಪರಿಸ್ಥಿತಿ …

Read More »

ಶಿಷ್ಟಾಚಾರ ಉಲ್ಲಂಘನೆ ಶಾಸಕರಿಂದ ಸ್ಪೀಕರಗೆ ದೂರು….

  ಬೆಳಗಾವಿ ಕಪಿಲೇಶ್ವರದ ಬಳಿ ಇತ್ತೀಚಿಗೆ ಉದ್ಘಾಟನೆಗೊಂಡ ರೈಲ್ವೆ ಓವರ್ ಬ್ರೀಡ್ಜ್ ಇದೀಗ ಮತ್ತೊಂದು ವಿವಾದಕ್ಕೆ ಸಿಲುಕಿದೆ. ಇಷ್ಟುದಿನ ನಾಮಕರಣ ವಿಚಾರವಾಗಿ ಕನ್ನಡ ಪರ ಹೋರಾಟಗಾರರು ಹಾಗೂ ಎಂಇಎಸ್ ಸಂಘಟನೆ ಹೋರಾಟ ಪ್ರತಿ ಹೋರಾಟ ನಡೆಯುತ್ತಿತ್ತು. ಆದರೇ ಇದೀಗ ಉದ್ಘಾಟನೆಗೆ ಸ್ಥಳೀಯ ಶಾಸಕರಿಗೆ ಆಹ್ವಾನ ನೀಡಲ್ಲ ಎಂದು ಶಾಸಕ ಫಿರೋಜ್ ಸೇಠ್ ಶಿಷ್ಟಾಚಾರ ಉಲ್ಲಂಘನೆಯ ಆರೋಪದ ಬಗ್ಗೆ ಸ್ಪೀಕರಗೆ ದೂರು ನೀಡಿದ್ದಾರೆ. ಡಿ. 25ರಂದು ಕಪಿಲೇಶ್ವರ ಬಳಿಯ ರೈಲ್ವೆ ಓವರ್ …

Read More »

ದೇಶದ ಜನರಿಗೆ ಪ್ರಧಾನಿ ಮೋದಿ ಬಂಪರ್ ಕೊಡುಗೆ

ಬೆಳಗಾವಿ-ದೀಪಾವಳಿಯ ನಂತರ ದೇಶದಲ್ಲಿ ಬದಲಾವಣೆಯ ಸಂಘರ್ಷ ನಡೆಯುತ್ತಿದೆ ದೇಶದ ೧೨೫ ಕೋಟಿ ಜನ ದೇಶವಾಸಿಗಳು ಡಿಸೆಂಬರ ೮ ರ ನಂತರ ಹಲವಾರು ತೊಂದರೆಗಳನ್ನು ಅನುಭವಿಸಿ ದೇಶವನ್ನು ಸ್ವಚ್ಛಗೊಳಿಸುವ ಯದ್ಞದಲ್ಲಿ ಪಶಲ್ಗೊಂಡು ಒಳ್ಳೆಯತನಕ್ಕೆ ಮತ್ತು ಪ್ರಾಮಾಣಿಕತೆಗೆ ಬೆಂಬಲ ಸೂಚಿಸಿ ದೇಶದ ಉತ್ತಮ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಭಾರತಿಯರು ಕೈ ಜೋಡಿಸಿದ್ದಾರೆ ಎಂದು ಪ್ರಧಾನಿ ಮೋದಿ ದೇಶವಾಸಿಗಳ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು ಸಂಜೆ ೭-೩೦ ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು ಭಾರತದಲ್ಲಿರುವಷ್ಟು …

Read More »

ಬೆಲಗಾಮ್ ಕ್ಲಬ್‍ನಲ್ಲಿ ಬಲ್ಲೇ..ಬಲ್ಲೇ..ಡ್ಯಾನ್ಸ,,..!

ಬೆಳಗಾವಿ – ಕುಂದಾ ನಗರಿ ಬೆಳಗಾವಿಯ ಜನ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದಾರೆ.ಶನಿವಾರ ಬೆಳಿಗ್ಗೆಯಿಂದಲೇ ಪಾರ್ಟಿ ಶುರು ಮಾಡಿಕೊಂಡಿದ್ದು ಫುಲ್ ಎಂಜಾಯ್ ಮೂಡ್ ನಲ್ಲಿದ್ದಾರೆ ಬೆಳಗಾವಿ ಕ್ಲಬ್‍ನಲ್ಲಿ ಲೈವ್ ಮ್ಯಜಿಕ್ ಜೊತೆ ರಷಿಯನ್ ಬೆಡಗಿಯರಿಂದ ಬಲ್ಲೆ ಬಲ್ಲೆ ಡ್ಯಾನ್ಸ ನಡೆಯಲಿದೆ.ಜೊತೆಗೆ ನಗರದ ಸಂಕಮ್ ಹೊಟೆಲ್ ಹೊಟೆಲ್ ಕಾಮಿಡಾ,ಆದರ್ಶ ಪ್ಯಾಲೇಸ್.ಶಗುನ್ ಗಾರ್ಡನ್, ಸೋಸಿಯಲ್ ಕ್ಲಬ್ ಸೇರಿದಂತೆ ನಗರದ ವಿವಿಧ ಹೊಟೆಲ್ ಗಳಲ್ಲಿ ವಿಶೇಷ ಪಾರ್ಟಿ ನಡೆಯಲಿದೆ ನಗರದ ಎಂಎಸೈಲ್ ಸರಾಯಿ ಅಂಗಡಿಗಳ …

Read More »

ತಾರತಮ್ಯ ನಿವಾರಿಸಲು ಒತ್ತಾಯಿಸಿ ಉಪನ್ಯಾಸಕರ ಪ್ರತಿಭಟನೆ

ಬೆಳಗಾವಿ-ಪದವಿ ಪೂರ್ವ ಕಾಲೇಜು ಉಪನ್ಯಾಸಕರ ವೇತನ ತಾರತಮ್ಯ ಹಾಗೂ 2ನೇ ವಾರ್ಷಿ ಬಡ್ತಿಯನ್ನು ಶೀಘ್ರದಲ್ಲಿ ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಶನಿವಾರ ನಗರದ ಜಿಲ್ಲಾದಿಕಾರಿ ಆವರಣದಲ್ಲಿ ಸೇರಿದ ಉಪನ್ಯಾಸಕರು ಕಳೆದ 2011 ರಿಂದ ಸತತವಾಗಿ ನ್ಯಾಯುತವಾದ ಬೇಡಿಕೆಗಳನ್ನು ಸರ್ಕಾರದ ಮುಂದೆ ಸಲ್ಲಿಸುತ್ತಾ …

Read More »

ನಾಡಿನಿಂದ ಕಾಡಿಗೆ ಬಂದ ಕಾಡುಕೋಣ ಅರಣ್ಯ ಇಲಾಖೆಯ ಬಲೆಗೆ.

ಬೆಳಗಾವಿ ಕಾಡಿನಿಂದ ನಾಡಿಗೆ ಬಂದಿದ್ದ ಕಾಡುಕೋಣವನ್ನು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸಪಟ್ಟು ಬಲೆಗೆ ಬೀಳಿಸಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ 10 ದಿನಗಳಿಂದ ತಾಲೂಕಿನ ಕೊಳಚಿ, ಘಟಕನೂರ, ಚಿಂಚಖಂಡಿಯಲ್ಲಿ ಕಾಣ ಸಿಕೊಂಡಿದ್ದ ಕಾಡುಕೋಣ ಕಬ್ಬಿನ ಬೆಳೆಗಳಲ್ಲಿ ವಾಸಮಾಡಿತ್ತು. ಆತಂಕಗೊಂಡಿರುವ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ನಂತರ ಕಾರ್ಯಾಚರಣೆಗೆ ಇಳಿದ ಅರಣ್ಯ ಸಿಬ್ಬಂದಿ ಕೋಣ ಹಿಡಿಯಲು ಪ್ರಯತ್ನಿಸಿದರೂ ಸಿಕ್ಕಿರಲಿಲ್ಲ. ಅರಣ್ಯ ಇಲಾಖೆಯ ಒಬ್ಬ ಸಿಬ್ಬಂದಿಗೆ ಸಣ್ಣಪುಟ್ಟ ಗಾಯವಾಗಿರುವ ಘಟನೆ ಕೂಡಾ …

Read More »