LOCAL NEWS

ಕಿತ್ತೂರಿನಲ್ಲಿ ಮೂರ್ತಿಗಳು ರೆಡಿ..ಮುಸುಕು ತೆಗೆದು ಬಿಡಿ..!

ಬೆಳಗಾವಿ- ಕಿತ್ತೂರು ಉತ್ಸವಕ್ಕೆ ಚನ್ನಮ್ಮಾಜಿಯ ಭಕ್ತ ಸಾಗರವೇ ಹರಿದು ಬರುತ್ತಿದೆ ಚನ್ನಮ್ಮಾಜಿ ಸಂಸ್ಥಾನದ ಖಡ್ಗ ಇತ್ಯಾದಿಗಳನ್ನು ನೋಡಲು ಬಂದವರಿಗೆ ತೀವ್ರ ನಿರಾಸೆಯಾಗಿದೆ. ಉತ್ಸವದ ಸಂದರ್ಭದಲ್ಲೂ ಕಿತ್ತೂರಿನ ಮ್ಯೂಸಿಯಂ ಗೆ ದೊಡ್ಡ ಬೀಗ ಹಾಕಲಾಗಿದೆ. ಮ್ಯೂಸಿಯಂನ ದ್ವಾರಬಾಗಿಲಲ್ಲಿ ಎರಡು ಮುಸುಕುಧಾರಿ ಮೂರ್ತಿಗಳಿವೆ ಕಿತ್ತೂರಿನಲ್ಲಿ ಕ್ರಾಂತಿ ಮಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗು ಅಮಟೂರ ಬಾಳಪ್ಪನವರ ಮೂರ್ತಿಗಳು ಕಳೆದ ಒಂದೂವರೆ ವರ್ಷದಿಂದ ಮುಸುಕಿನಲ್ಲಿವೆ ಮೂರ್ತಿಗಳು ರೆಡಿ..ಮುಸುಕು ತೆಗೆದು ಬಿಡಿ ಅಂತ ರಾಯಣ್ಣನ ಅಭಮಾನಿಗಳು …

Read More »

ಮೂಡಲಗಿಯಲ್ಲಿ ಆಪರೇಶನ್.. ಎಮ್ಮೆ ..ಸೆಕ್ಸೆಸ್..!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೂಡಲಗಿ ಗ್ರಾಮದ ಹೊರ ವಲಯದಲ್ಲಿ ಎಮ್ಮೆಯೊಂದು  ಮೇಯಲು ಹೋಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ನಡೆದಿದೆ ಆಕಸ್ಮಿಕವಾಗಿ ಬಾವಿಗೆ ಬಿದ್ದ  ಎಮ್ಮೆ ಸುಮಾರು ಎರಡು ಘಂಟೆಗಳ ಕಾಲ ಬಾವಿಯಲ್ಲೆಯೇ ಪರದಾಡಿದೆ ಎಮ್ಮೆ ಬಾವಿಗೆ ಬಿದ್ದ ಮಾಹಿತಿ ಗ್ರಾಮದಲ್ಲಿ ಹರಡುತ್ತಿದ್ದಂತೇಯೇ ಸ್ಥಳಕ್ಕೆ ಜಮಾಯಿಸಿ ಗ್ರಾಮಸ್ಥರು ಸುಮಾರು ಎರಡು ಘಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ  ಎಮ್ಮೆಯನ್ನು ಬಾವಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ …

Read More »

ಕಳಸಾ ನಾಲೆ ಪರಶೀಲಿಸಿದ ಕಾಗೋಡು ತಿಮ್ಮಪ್ಪ

ಬೆಳಗಾವಿ- ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸೋಮವಾರ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿ ನಾಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು ಸಚಿವರಿಗೆ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಡಿಸಿ ಜಯರಾಮ್, ಜಿಪಂ ಸಿಇಒ ಗೌತಮ ಬಗಾದಿ ಸಾಥ್..ನೀಡಿದರು ಅಧಿಕಾರಿಗಳಿಂದ ಕಳಸಾ- ಬಂಡೂರಿ ನಾಲೆ ಯೋಜನೆ ವೆಚ್ಚ ಮತ್ತು ಗೋವಾ ವಾದ ಬಗ್ಗೆ ಮಾಹಿತಿ ಪಡೆದ ಸಚಿವ ಕಾಗೋಡು.ನಾಲಾ ತಡೆ ಗೋಡೆ ಸೇರಿದಂತೆ ನಾಲಾ ಪ್ರದೇಶವನ್ನು ಪರಶೀಲಿಸಿದರು ಕಳಸಾ ನಾಲೆ ಪರಿಶೀಲನೆ …

Read More »

ಮುಂದಿನ ವಾರ ಕೇಂದ್ರಕ್ಕೆ ನಿಯೋಗ- ಕಾಗೋಡು ತಿಮ್ಮಪ್ಪ

ಬೆಣಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಆರು ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದ್ದು ಬರಪೀಡಿತ ಪ್ರದೇಶಗಳಲ್ಲಿ ಕುಡಿಯುವ ನೀರು ಮೇವಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಬರ ಪರಿಹಾರ ಕಾಮಗಾರಿಗಳಲ್ಲಿ ಮಂದ ಗತಿ ಸಲ್ಲದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಬೆಳಗಾವಿ ಜಿಲ್ಲೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು ಜಿಲ್ಲಾಧಕಾರಿಗಳ ಕಚೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನೆ ನಡೆಸಿದ ಅವರು ಬೆಳಗಾವಿ ಜಿಲ್ಲೆಯಲ್ಲಿ ಆರು ತಾಲೂಕಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಇದನ್ನು ಹೊರತು ಪಡಿಸಿ …

Read More »

ಚನ್ನಮ್ಮನ ನಾಡಿನಲ್ಲಿ ಕಾಗೋಡು ತಿಮ್ಮಪ್ಪನವರ ಅವಾಜ್

ಎತ್ತರದ ಧ್ವನಿಯಲ್ಲಿ ಕಡಕ ಮಾತುನಾಡುವಲ್ಲಿ ಹೆಸರುವಾಸಿಯಾದ ಲೋಹಿಯಾವಾದಿ ರಾಜ್ಯ ಕಂದಾಯ ಖಾತೆ ಸಚಿವ ಕಾಗೋಡ ತಿಮ್ಮಪ್ಪನವರು ಬ್ರಿಟಿಷರ ವಿರುದ್ದ ಗುಡುಗಿ P್ಫ್ರಂತಿ ಕಹಳೆ ಊದಿದ ವೀರರಾಣಿ ಚನ್ನಮ್ಮ ನಾಡಿನಲ್ಲಿ ಗುಡುಗಿನ ಮಾತುಗಳ ಗುಡುಗು ಚನ್ನಮ್ಮನ ನಾಡಿನಲ್ಲಿ ಇರಬೇಕಾಗಿರುವುದು ಇಂಥ ಅವಜ್ ಎಂದು ನೆರೆದ ಜನಕ್ಕೆ ಕೂಗಿ ಹೇಳಿದಂತಿತ್ತು. ರವಿವಾರ ಸಂಜೆ ಕತ್ತಲು ಆವರಿಸುತ್ತಿದ್ದಂತೆ ಮುಖ್ಯವೇದಿಕೆಯಲ್ಲಿ ಕಿತ್ತೂರು ಉತ್ಸವಕ್ಕೆ ದೀಪ ಬೆಳಗಿಸಿ ಚಲನೆ ನೀಡಿ ಮಾತನಾಡಲು ಆರಂಭಿಸಿದ್ದೇ ದೊಡ್ಡದಾದ ಧ್ವನಿಯಲ್ಲಿ. ಕಾಗೋಡು …

Read More »

ಕಿತ್ತೂರ ತಾಲೂಕಿಗೆ ತಿಮ್ಮಪ್ಪರಿಂದ ಭರಪೂರ ಕೊಡುಗೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಿತ್ತೂರ ತಾಲೂಕಿಗೆ ವಿಶೇಷ ತಾಲೂಕುವಾಗಬೇಕು ಅನ್ನೋದೆ ನನ್ನ ಆಸೆ ತಿಂಗಳಲ್ಲಿ ತಾಲೂಕಿಗೆ ಪೂರ್ಣ ಪ್ರಮಾಣದ ಮಾನ್ಯತೆ ಕೊಡುತ್ತೇನೆ ಕಿತ್ತೂರಿನಲ್ಲಿ ಮಿನಿ ವಿಧಾನಸೌಧ ಕಟ್ಟಿಸುತ್ತೇನೆ ತಹಶೀಲ್ದಾರ ಸೇರಿದಂತೆ ಎಲ್ಲ ರೀತಿಯ ಸೌಲತ್ತುಗಳನ್ನು ಕೊಡುತ್ತೇನೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಕಿತ್ತೂರಿಗೆ ಭರಪೂರ ಕೊಡುಗೆ ನೀಡುವ ಭರವಸೆ ನೀಡಿದ್ದಾರೆ ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಉತ್ಸವಕ್ಕೆ ಚಾಲನೆ ನೀಡಿ ಕಿತ್ತೂರು ಹೋರಾಟದ ಪುಣ್ಯ ಭೂಮಿ ಈ ಭೂಮಿಗೆ …

Read More »

ಇತಿಹಾಸದ ಗತವೈಭವ ಬಿಂಬಿಸುವ ಕಿತ್ತೂರಿನ ಉತ್ಸವಕ್ಕೆ ಅದ್ದೂರಿ ಚಾಲನೆ

ಬೆಳಗಾವಿ: ಪರದೇಶಿಗಳ ವಿರುದ್ಧ ಸಮರ ಸಾರಿ ಕೈಯಲ್ಲಿ ಖಡ್ಗವನ್ನಿಡಿದು ಕುದುರೆಯನ್ನೇರಿ ಬ್ರಿಟಿಷ್ ಕಲೆಕ್ಟರ್ ಥ್ಯಾಕ್ರೆಯ ರುಂಡ ಚೆಂಡಾಡಿದ ವೀರರಾಣಿ ಕಿತ್ತೂರು ಚನ್ನಮ್ಮನ ಶೌರ್ಯ, ಸಾಹಸ ಮತ್ತು ಕಿತ್ತೂರಿನ ಇತಿಹಾಸದ ಗತವೈಭವವನ್ನು ಬಿಂಬಿಸುವ ಸ್ವಾಭಿಮಾನದ ಉತ್ಸವಕ್ಕೆ ಅದ್ದೂರಿ ಚಾಲನೆ ಸಿಕ್ಕಿತು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಚನ್ನಮ್ಮ ಕಿತ್ತೂರಿನ ಶಾಸಕ ಡಿ.ಬಿ.ಇನಾಮದಾರ, ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗಣೇಶ ಹುಕ್ಕೇರಿ, ಜಿಲ್ಲಾಧಿಕಾರಿ ಎನ್.ಜಯರಾಮ್, ಅಪರ ಜಿಲ್ಲಾಧಿಕಾರಿ …

Read More »

ಆಸ್ಪತ್ರೆ ಆಯ್ತು ಕಸದ ತೊಟ್ಟಿ…ಅದನ್ನು ಸ್ವಚ್ಛ ಮಾಡಿದ ಅಭಯ ಪಾಟೀಲರ ಮನಸ್ಸು ಗಟ್ಟಿ..!

ಬೆಳಗಾವಿ- ಗೌಡರ ಕೋಣ ಬರ್ತಾ ಬರ್ತಾ ಕತ್ತೆ ಆಯ್ತು ಎನ್ನುವಂತೆ ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಸುಧಾರಿಸುವ ಲಕ್ಷಣಗಳು ಕಾಣಿಸುತ್ತಿಲ್ಲ ಈ ಆಸ್ಪತ್ರೆ ದವಾಖಾನೆ ಎಂದು ಕರೆಯಲು ಲಾಯಕ್ಕಿಲ್ಲ ಇದು ಕಸಾಯಿಖಾನೆ ಎಂದು ಕರೆಯಲು ಯೋಗ್ಯವಾಗಿದೆ ಈ ಆಸ್ಪತ್ರೆ ಬೆಳಗಾವಿ ಜಿಲ್ಲಾ ಆಸ್ಪತ್ರೆ ಅಕ್ಷರಶಹ ಕಸದ ತೊಟ್ಟಿಯಾಗಿದೆ ಇಲ್ಲಿಯ ಗಲೀಜು ವ್ಯೆವಸ್ಥೆ ನೋಡಿ ಬೇಸತ್ತ ಮಾಜಿ ಶಾಸಕ ಅಭಯ ಪಾಟೀಲ ಒಂದು ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ತಮ್ಮ ಪಡೆಯೊಂದಿಗೆ ಸ್ವಚ್ಛತಾ ಅಭಿಯಾನ …

Read More »

ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಬೆಳಗಾವಿಯಲ್ಲಿ ಆಕ್ರೋಶ

ಬೆಳಗಾವಿ: ಗೋವಾ ರಾಜ್ಯದ ಟಸ್ಕ್ ಉಸಗಾಂವ್  ಮತ್ತು ಪೊಂಡಾದಲ್ಲಿ ಕನ್ನಡಿಗ ಕುಟುಂಬಗಳ ಮೇಲೆ ನಡೆದ ದಾಳಿ ನಡೆಸಿ ಮನೆ ವಾಹನ ಸುಟ್ಟ ಪ್ರಕರಣ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರು ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಗೋವಾ ವಿರುದ್ದ ಪ್ರತಿಭಟನೆ ನಡೆಸಿದರು. ಪೊಂಡಾ ನಗರ ಪ್ರದೇಶದಲ್ಲಿ ಸುಮಾರು ೫೦ ವರ್ಷಗಳಿಂದ ೫೦೦ ಕ್ಕಿಂತ ಹೆಚ್ಚು ಕುಟುಂಬಗಳು ನೆಲೆಸಿದ್ದು ಅವರ ಚಿಕ್ಕಪುಟ್ಟ ವ್ಯವಹಾರ ವ್ಯಾಪಾರ …

Read More »

ಬೆಳಗಾವಿಗೆ ಬಂತೂ..ರೆಡ್ಡಿ ಮಗಳ ಮದುವೆಯ ಆಮಂತ್ರಣ

ಬೆಳಗಾವಿ- ಗಣಿ ಧಣಿ ಜನಾರ್ಧನ ರೆಡ್ಡಿ ಮಗಳ ಮದುವೆಯ ಆಮಂತ್ರಣ ಬೆಳಗಾವಿಗೂ ಬಂದಿದೆ ರೆಡ್ಡಿ ಪರಮಾಪ್ತ ಶ್ರೀರಾಮಲು ಶನಿವಾರ ಬೆಳಗಾವಿ ನಗರ ಬಿಜೆಪಿ ಕಚೇರಿಗೆ ಬೇಟಿ ನೀಡಿ ಮದುವೆಗೆ ಆಮಂತ್ರಿಸಿದರು ಬಿಜೆಪಿ ನಗರ ಜಿಲ್ಲಾಧ್ಯಕ್ಷ ಅನೀಲ ಬೆನಕೆ,ರಾಜು ಜಿಕ್ಕನಗೌಡರ,ಲೀಣಾ ಟೋಪಣ್ಣವರ ಅವರು ಆಮಂತಣ ಸ್ವೀಕರಿಸಿದರು ಈ ಸಂಧರ್ಭದಲ್ಲಿ ಮಾತನಾಡಿದ ಅವರು ರಾಜ್ಜದಲ್ಲಿರುವ ಕಾಂಗ್ರೆಸ್    ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ರುದ್ರೇಶ ಕೊಲೆ, ಮೈಸೂರು ರಾಜು ಕೊಲೆ ಸೇರಿದಂತೆ ಹಿಂದುಪರ …

Read More »

ಪಂಡರಿ ಪರಬ್ … ಮೂಡ್ ಖರಾಬ್.!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಸಮಯ ಪ್ರದ್ಞೆ ಎನ್ನುವದೇ ಇಲ್ಲ ಪ್ರತಿ ಸಲ ಒಂದೂವರೆ ಘಂಟೆ ತಡವಾಗಿ ಆರಂಭವಾಗುವ ಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಪಂಡರಿ ಪರಬ ತಳ ಬುಡ ಇಲ್ಲದೇ ಘಂಟೆಗಟ್ಟಲೇ ಭಾಷಣ ಬಿಗಿಯುತ್ತಾರೆ ಅವರು ಪಾಲಿಕೆ ಸಭೆಯಲ್ಲಿ ಮಾತನಾಡಲು ಎದ್ದರೇ ಎಲ್ಲರೂ ತೆಲೆ ಹಿಡಿದುಕೊಳ್ಳುತ್ತಾರೆ ಯಾವದೇ ವಿಷಯ ಪ್ರಾಸ್ತಾಪ ಆಗಲಿ ಪಂಡರಿ ಪರಬ ಎದ್ದು ನಿಲ್ಲುತ್ತಾರೆ ಘಂಟೆಗಟ್ಟಲೇ ಭಾಷಣ ಬಿಗಿಯುತ್ತಾರೆ ಪಂಡರಿ ಪರಬ ಅವರು ಎಲ್ಲರಿಗೂ ಬೋರ್ …

Read More »

ರಾಜ್ಯ ಸರ್ಕಾರದ ವಿರುದ್ಧ ಸಂಸದ ಅಂಗಡಿ ವಾಗ್ದಾಳಿ

ಸ್ಮಾರ್ಟ ಸಿಟಿ ಯೋಜನೆಯ ವಿಷಯದಲ್ಲಿ ರಾಜ್ಯ ಸರ್ಕಾರ ಬೆಳಗಾವಿಯನ್ನು ಕೆಡೆಗನಿಸುತ್ತಿದೆ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಿಜೆಪಿಯ ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸದಾನಂದಗೌಡ, ಜಗದೀಶ ಶೆಟ್ಟರ್ ಅವಧಿಯಲ್ಲಿ ಬೆಳಗಾವಿಯನ್ನು ಸಾಕಷ್ಟು ಅಭಿವೃದ್ಧಿ ಮಾಡಲಾಗಿದೆ. ಈಗಾಗಲೇ ಕೇಂದ್ರ ಸರಕಾರ  ೧೯೬ಕೋಟಿ ನೀಡಿದೆ. ಈಗ ರಾಜ್ಯ ಸರಕಾರ ತನ್ನ ೨೦೦ ಕೋಟಿ ಕೊಡಬೇಕಾಗಿದೆ. ಜತೆಗೆ ಪಾಲಿಕೆ …

Read More »

ವ್ಹಾಟ ..ಏ ಸೀನ್..ವೈನ್ ..ಇಸ್.ಫೈನ್..!

ಬೆಳಗಾವಿ- ವೈನ್ ಪ್ರೀಯರಿಗೆ ಸಿಹಿ ಸುದ್ಧಿ ಬೆಳಗಾವಿ ನಗರದ ಮಲೇನಿಯಂ ಗಾರ್ಡನ್ ದಲ್ಲಿ ವೈನ್ ಉತ್ಸವ ಆರಂಭವಾಗಿದೆ ಶುಕ್ರವಾರ ಸಂಜೆ ಗಣ್ಯಾತಿ ಗಣ್ಯರು ವೈನ್ ಟೇಸ್ಟ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು ಸಂಸದ ಸುರೇಶ ಅಂಗಡಿ ಬಗೆ ಬಗೆಯ ವೈನ್ ಬಾಟಲ್ ಗಳನ್ನು ನೋಡಿದರು ಜಿಲ್ಲಾ ಪಂಚಾಯತಿ ಅದ್ಯಕ್ಷೆ ಆಶಾ ಐಹೊಳೆ ಆರೇಂಜ್ ಫ್ಲೆವರ್ ಟೇಸ್ಟ ಮಾಡಿದರು ಜಿಲ್ಲಾಧಿಕಾರಿ ಎನ್ ಜೈರಾಂ ಕೂಡಾ ವೈನ್ ಫ್ಲೇವರ್ ಟೇಸ್ಟ ಮಾಡಿದರು ಗೌತಮ …

Read More »

ಕಿತ್ತೂರು ಉತ್ಸವದಲ್ಲಿ ಪ್ರಾಣೇಶ ನಗಸ್ತಾರೆ…ಅರ್ಜುನ ಜನ್ಯ ಕುಣಿಸ್ತಾರೆ..!

ಬೆಳಗಾವಿ:ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವವನ್ನು ಬಿಂಬಿಸುವ ಕಿತ್ತೂರು ಉತ್ಸವ ಅಕ್ಟೋಬರ್ 23ರಿಂದ 25ರವರೆಗೆ ಮೂರು ದಿನ ನಡೆಯಲಿದ್ದು ಉತ್ಸವಕ್ಕಾಗಿ ಎಲ್ಲ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಮೂರು ದಿನಗಳ ಕಾಲ ಉತ್ಸವದಲ್ಲಿ ನಾಡಿನ ಸಂಸ್ಕøತಿ, ಕಲೆ ಮತ್ತು ಇತಿಹಾಸದ ಅನಾವರಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅ.23ರಂದು ಬೆಳಿಗ್ಗೆ 8ಕ್ಕೆ ಚನ್ನಮ್ಮಾಜಿಯ ಹುಟ್ಟೂರು ಕಾಕತಿಯಲ್ಲಿ ಕಾಕತಿ ಉತ್ಸವ ನಡೆಯಲಿದೆ. ಬೆಳಿಗ್ಗೆ 10ಕ್ಕೆ ಕಿತ್ತೂರಿನಲ್ಲಿ5 ಜಿಲ್ಲಾ …

Read More »

ಜಾತಿ,ಭಾಷೆ,ಗಡಿ,ಮತ್ತು ಸಾಂಸ್ಕೃತಿಕ ಭಿನ್ನಾಭಿಪ್ರಾಯಗಳಿಂದ ದೇಶದಲ್ಲಿ ಅಶಾಂತಿ

  ಬೆಳಗಾವಿ:ಭಾರತದಲ್ಲಿ ಜಾತಿ, ಭಾಷೆ, ಗಡಿ ಮತ್ತು ಸಾಂಸ್ಕ್ರತಿಕ ಭಿನ್ನಾಭಿಪ್ರಾಯಗಳಿಂದ ಆಂತರಿಕ ಅಶಾಂತಿ ಕಾಡುತ್ತಿದೆ ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶ ಅಶೋಕ ನಿಜಗನ್ನವರ ತಿಳಿಸಿದರು. ಇಂದು ನಗರದ ಡಿಎಆರ್ ಹುತಾತ್ಮ ಸ್ಮಾರಕ ಮೈದಾನದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ದೇಶಕ್ಕೆ ಬಾಹ್ಯ ಶಕ್ತಿಗಿಂತ ಆಂತರಿಕ ದುಷ್ಟ ಸ್ವಹಿತಾಸಕ್ತಿಗಳ ಆಟಾಟೋಪ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರತಿಯೊಂದು ದೇಶ ಶಾಂತಿಯ ಜೀವನ ನಡೆಸಲು ಪೊಲೀಸ್ …

Read More »