Breaking News

LOCAL NEWS

ಪಾಲಿಕೆ ಸಾಮಾನ್ಯ ಸಭೆ ದಿನಾಂಕ ಫಿಕ್ಸ ಮಾಡಲು ನಡೆದಿದೆ ಕಿತ್ತಾಟ

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಸಂಜೋತಾ ಬಾಂಧೇಕರ ತಮ್ಮ ಅಧಿಕಾರ ಚಲಾಯಿಸುವ ಮೂಲಕ ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕವನ್ನು ಫಿಕ್ಸ ಮಾಡಿದ್ದರು ಆದರೆ ಮೇಯರ್ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಉಪ ಮಹಾಪೌರ ನಾಗೇಶ ಮಂಡೋಲ್ಕರ್ ಮತ್ತು ವಿರೋಧ ಪಕ್ಷದ ನಾಯಕ ರವಿ ಧೋತ್ರೆ ವಿರೋಧ ವ್ಯೆಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ ಮೇಯರ್ ಸಂಜೋತಾ ಬಾಂಧೇಕರ್ ಎಪ್ರಿಲ್ 4 ರಂದು ಪಾಲಿಕೆಯ ಸಾಮಾನ್ಯ ಸಭೆಯ ದಿನಾಂಕ ಫಿಕ್ಸ ಮಾಡಿದ್ದರು …

Read More »

ಗಡಿ.ಗೆ ಗತಿ…ಇಲ್ಲದ, ಗಡಿ ಉಸ್ತೂವಾರಿ..ಬೆಳಗಾವಿಗೆ ಬರುತ್ತಿಲ್ಲ ಇವರ ಸವಾರಿ..!

ಬೆಳಗಾವಿ- ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನಾಗಿ ಹೆಚ್ ಕೆ ಪಾಟೀಲರನ್ನು ನೇಮಕ ಮಾಡಿದ ಬಳಿಕ ಗಡಿನಾಡ ಕನ್ನಡಿಗರ ಸಂಬ್ರಮಕ್ಕೆ ಮಿತಿ ಇರಲಿಲ್ಲ ಮೂರು ವರ್ಷದ ಹಿಂದೆ ಬೆಳಗಾವಿಯಲ್ಲಿ ಸಭೆ ನಡೆಸಿ ಹೋದ ಸಚಿವ ಮಹಾಶಯಯರು ಮರಳಿ ಗಡಿನಾಡ ಗುಡಿಯ ದರ್ಶನ ಮಾಡಿದ ಉದಾಹರಣೆ ಇಲ್ಲ ಗಡಿನಾಡ ಕನ್ನಡಿಗರು ಅನಾಥ ಪ್ರಜ್ಞೆ ಅನುಭವಿಸಬೇಡಿ ನಾನು ತಿಂಗಳಿಗೊಮ್ಮೆ ಬರ್ತೇನಿ..ಇಲ್ಲಿಯ ಕನ್ನಡಿಗರ ಸಮಸ್ಯೆ ಆಲಿಸುತ್ತೇನೆ ಬೆಳಗಾವಿಯಲ್ಲಿ ಗಡಿ ವಿವಾದಕ್ಕೆ ಸಮಂಧಿಸಿದಂತೆ ಪ್ರಾದೇಶಿಕ ಕಚೇರಿಯನ್ನು ಆರಂಭ …

Read More »

ಕೇಂದ್ರ ಕಾನೂನು ಆಯೋಗದ ಕಾಯ್ದೆ ತಿದ್ದುಪಡಿಗೆ ವಕೀಲರ ವಿರೋಧ

ಬೆಳಗಾವಿ- ಕೇಂದ್ರ ಕಾನೂನು ಆಯೋಗ ವಕೀಲರಿಗೆ ಮಾರಕವಾಗುವ ತಿದ್ದುಪಡಿ ತರಲು ಹೊರಟಿದ್ದು ಇದಕ್ಕೆ ಬೆಳಗಾವಿ ವಕೀಲರ ಸಂಘ ತೀವ್ರ ವಿರೋಧ ವ್ಯೆಕ್ತಪಡಿಸಿದೆ ನಗರದಲ್ಲಿ ಪ್ರತಿಭಟನೆ ನಡೆಸಿದ ವಕೀಲರ ಸಂಘದ ಸದಸ್ಯರು ಕೇಂದ್ರ ಕಾನೂನು ಆಯೋಗ ಶಿಸ್ತು ಸುಧಾರಣಾ ಸಮೀತಿಯಲ್ಲಿ ಖಾಸಗಿ ವ್ಯೆಕ್ತಿಗಳನ್ನು ಸೇರಿಸುವ ಮತ್ತು ಕೇಂದ್ರ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತಿನ ಹಕ್ಕುಗಳನ್ನು ಮತ್ತು ಸ್ವತಂತ್ರತೆಯನ್ನು ಕಸಿದುಕೊಳ್ಳುವ ತಿದ್ದುಪಡಿಗಳನ್ನು ತರಲು ಹೊರಟಿದ್ದು ಇದಕ್ಕೆ ಅವಕಾಶ ನೀಡಬಾರದು ಎಂದು …

Read More »

ವಿಡಿಯೋ ತೋರಿಸಿ ಬಾಲಕಿಗೆ ಬ್ಲ್ಯಾಕ್ ಮೇಲ್ ಮಾಡಿದ ಕಾಮುಕ.

ಬೆಳಗಾವಿ  ಏಳನೇಯ ತರಗತಿಯ ವಿಧ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆಸಿ ಇದನ್ನು ಮೋಬೈಲ್ ನಲ್ಲಿ ಶೂಟ್ ಮಾಡಿ ಇದನ್ನೇ ದುರುಪಯೋಗ ಪಡಿಸಿಕೊಂಡು ಮುಗ್ಧ ಬಾಲೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ ಇಂಜನಿಯರಿಂಗ್ ವಿಧ್ಯಾರ್ಥಿಯೊಬ್ಬನ ಕಾಮುಕನ ಕರ್ಮಕಾಂಡ ಬೆಳಕಿಗೆ ಬಂದಿದೆ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿಯಿಂದ ನಿರಂತರ ಅತ್ಯಾಚಾರ.ನಡೆಸಿದ್ದಾನೆ ೭ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗುತ್ತಿರುವ ವಿಡಿಯೋ ಮಾಡಿದ ಕಾಮುಕ. ಅತ್ಯಾಚಾರದ ವಿಡಿಯೋ ತೋರಿಸಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ. ನಡೆಸಿದ್ದ …

Read More »

ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚಿದ ಇರಾಣಿ ಗ್ಯಾಂಗ್ .ಏಕಕಾಲಕ್ಕೆ ಎರಡು ಕಡೆ ಸರಗಳ್ಳತನ

ಬೆಳಗಾವಿ-ಬಾಲ ಮುದುಡಿಕೊಂಡು ಗೂಡು ಸೇರಿದ್ದ ಇರಾಣಿ ಗ್ಯಾಂಗ್ ಬೆಳಗಾವಿಯಲ್ಲಿ ಮತ್ತೇ ಬಾಲ ಬಿಚ್ಚಿದ್ದು ನಗರದಲ್ಲಿ ಮಟ ಮಟ ಮಧ್ಯಾಹ್ನ ವೇ    ಏಕ ಕಾಲಕ್ಕೆ ಎರಡು ಕಡೆ ಸರಗಳ್ಳತನ ನಡೆದಿದೆ ಮೊದಲು ಬೆಳಗಾವಿ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಹನುಮಾನ ನಗರದ TV ಸೇಂಟರ್ ಬಳಿ ಮಹಿಳೆಯ ಮೇಲೆ ಅಟ್ಯಾಕ್ ಮಾಡಿರುವ ಕಿರಾತಕರು ೩೫ ವರ್ಷ ವಯಸ್ಸಿನ ಸೀಮಾ ಹೂಲಿ ಎಂಬ ಮಹಿಳೆಯ ಎರಡುವರೆ ತೊಲೆ ಚಿನ್ನದ ಮಂಗಳಸೂತ್ರವನ್ನು ದೋಚಿದ್ದಾರೆ ಇದಾದ …

Read More »

ಅಳಿಯನ ಆಸ್ತಿ ರಕ್ಷಣೆಗಾಗಿ ಎಸ್ ಎಂ ಕೃಷ್ಣಾ ಬಿಜೆಪಿಗೆ- ಶಂಕರ ಮುನವಳ್ಳಿ

ಬೆಳಗಾವಿ- ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರದ ರುಚಿ ನೋಡಿ ತಮ್ಮ ಸ್ವಾರ್ಥ ಗೋಸ್ಕರ ಅಳಿಯ ಸಿದ್ಧಾರ್ಥನ ಕಾಫಿ ಡೇ ಆಕ್ರಮ ಆಸ್ತಿಯ ರಕ್ಣೆಗಾಗಿ ಮಾತೃಪಕ್ಷ ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಗಂಭೀರ ಆರೋಪ ಮಾಡಿದ್ದಾರೆ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಂಕರ ಮುನವಳ್ಳಿ ಎಸ್ ಎಂ ಕೃಷ್ಣಾ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಎಂದು ತಿಳಿದುಕೊಂಡಿದ್ದೆ …

Read More »

ಪರೀಕ್ಷೆಯಲ್ಲಿ ಫೇಲಾಗುವ ಭಯ ವಿಧ್ಯಾರ್ಥಿನಿ ಆತ್ಮಹತ್ಯೆ

ಬೆಳಗಾವಿ- ಪರೀಕ್ಷೆ ಸರಿ ಬರೆದಿಲ್ಲ ಎಂದು ನೊಂದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ.ಮಾಡಿಕೊಂಡ ಘಟನೆ ಖಾನಾಪೂರದಲ್ಲಿ ನಡೆದಿದೆ ಕೀಟಗಳನ್ನು ನಾಶ ಮಾಡಲು ಬಳಿಸುವ ಲಕ್ಷ್ಮಣ ರೇಖೆ ಕ್ರಿಮಿನಾಶಕ ಸೇವಿಸಿ ವಿಧ್ಯಾರ್ಥಿನಿ ಆತ್ಮಹತ್ಯೆ. ಮಾಡಿಕೊಂಡಿದ್ದಾಳೆ ರೇವತಿ ರೋಡ್ಕರ್ (೧೪) ಮೃತ ವಿದ್ಯಾರ್ಥಿನಿ.ಯಾಗಿದ್ದು ಖಾನಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ.ಮಾಡಿದ್ದಳು ನಿನ್ನೆ ಬೆಳಗಾವಿ ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಯನ್ನು ದಾಖಲು ಮಾಡಲಾಗಿತ್ತು. ತಡರಾತ್ರಿ ಚಿಕಿತ್ಸೆ ಫಲಿಸದೆ ವಿಧ್ಯಾರ್ಥಿನಿ ಸಾವನ್ನೊಪ್ಪಿದ್ದಾಳೆ ನಿನ್ನೆ ೮ ನೇ ತರಗತಿಯ ಗಣಿತ ಪರೀಕ್ಷೆ ಬರೆದಿದ್ದ …

Read More »

ಪ್ರೋಫೆಸರ್ ಕಿಡ್ನಾಪ್ ಪ್ರಕರಣ ಸುಖಾಂತ್ಯ..

ಬೆಳಗಾವಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದ್ದ ಅಪಹರಣ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿರುವ ಪೊಲೀಸರು, ಮೂವರು ಆರೋಪಗಳನ್ನು ಬಂಧಿಸಿದ್ದಾರೆ. ಅಪಹರಣಕ್ಕೆ ಒಳಗಾದವರನ್ನು ಸುಧೀಂದ್ರ ಧೂಳಖೇಡ ಎಂದು ಗುರುತಿಸಲಾಗಿದೆ. ಅಶೋಕ ಮತ್ತಿಕೊಪ್ಪ, ಭೀಮಪ್ಪ ನಾಯಕ ಹಾಗೂ ಅಡಿವೆಪ್ಪ ಕೋರಿ ಬಂಧಿತ ಆರೋಪಿಗಳು. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಡಿಸಿಪಿ ಜಿ. ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಮ್ಮನ್ನು ಕಾಯಂ ಮಾಡಿಕೊಡುತ್ತೇವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧಿಕಾರಿಗಳು ಹಣ ಪಡೆದು ವಂಚಿಸಿದ್ದಾರೆ …

Read More »

ಬೆಳಗಾವಿಯಲ್ಲಿ ರಾಜಕುಮಾರ್..ಪವರ್ ಸ್ಟಾರ್ ಪುನೀತ್ ಗೆ ಜೈಕಾರ್…

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ ಪವರ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ ರಾಜಕುಮಾರ್ ಚಿತ್ರದ ಕ್ರೇಜ್ ಜೋರಾಗಿದೆ. ನಗರದ ಚಿತ್ರ ಮತ್ತು ಐನಾಕ್ಸ್ ಚಿತ್ರಮಂದಿರದಲ್ಲಿ ರಾಜಕುಮಾರ ಚಿತ್ರ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಚಿತ್ರ ಮಂದಿರ ಮುಂದೆ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಾಚರಣೆ ಮಾಡಿದ್ರು. ಚಿತ್ರ ನಟ ಪುನೀತ್ ರಾಜಕುಮಾರ ಕಟೌಟ್ ಕೆ ಕ್ಷೀರಾಭಿಷೆಕ ಮಾಡಿ ಸಂಭ್ರಮಿಸಿದ ಪುನೀತ್ ಅಭಿಮಾನಿಗಳು. ನಗರದ ಚಿತ್ರಾ ಚಿತ್ರ ಮಂದಿರದಲ್ಲಿ ಸಂಭ್ರಾಚರಣೆ ಜೋರಾಗಿದ್ದು, ಬೆಳಗಾವಿ ರಾವಂಶ ಯುವ ಸೇನೆ, …

Read More »

ಅಟ್ರಾಸಿಟಿ ಕೇಸ್ ಗಳನ್ನು ತ್ವರಿತಗತಿಯಲ್ಲಿ ತನಿಖೆ ಮಾಡಿ- ಡಿಸಿ ಜಯರಾಂ

ಬೆಳಗಾವಿ-  ದಲಿತ ದೌರ್ಜನ್ಯ ಪ್ರಕರಣಕ್ಕೆ ದಮಂಧಿಸಿದಂತೆ ಅರವತ್ತು ದಿನಗಳಲ್ಲಿ ತನಿಖೆ ಮುಗಿಸಬೇಕು ಎನ್ನುವದು ನಿಯಮವಿದೆ ಆದರೆ ಬೆಳಗಾವಿ ಜಿಲ್ಲೆಯಲ್ಲಿ ಡಿಸೆಂಬರ ತಿಂಗಳಲ್ಲಿ 7 ಪ್ರಕರಣಗಳು ದಾಖಲಾಗಿದ್ದರೂ ಇನ್ನುವರೆಗೆ ತನಿಖೆ ಮುಗಿದಿಲ್ಲ ಪೋಲೀಸ್ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎನ್ ಜಯರಾಂ ಸೂಚಿಸಿದರು ಜಿಲ್ಲಾಧಿಕಾರಿಗ ಅಧ್ಯಕ್ಷತೆಯಲ್ಲಿ ಅನಸೂಚಿತ ಜಾತಿ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾ ಜಾಗೃತಿ ಉಸ್ತುವಾರಿ ಸಮೀತಿ ಸಭೆ ನಡೆಯಿತು ಸಭೆಯಲ್ಲಿ ಮಾತನಾಡಿದ ಅವರು ದಲಿತ ದೌರ್ಜನ್ಯ …

Read More »

ಬೆಳಗಾವಿಯ ವಿಕಲಚೇತನಕ್ಕೆ ಎರಡು ಗೋಲ್ಡ ಮೆಡಲ್..

ಬೆಳಗಾವಿ-ಇತ್ತೀಚಿಗೆ ಹೈದ್ರಾಬಾದ ನಲ್ಲಿ ನಡೆದ ಹ್ಯಾಂಡಿಕ್ಯಾಪ್ಟ ಫಿಜಿಕಲಿ ಚಾಲೇಂಜ್ ಅಥ್ಲೆಟಿಕ್ ಗೇಮ್ಸ ನಲ್ಲಿ ಬೆಳಗಾವಿಯ ಈ ವಿಕಲಚೇತನ ಎರಡು ಗೋಲ್ಡ ಮೆಡಲ್ ಗಳನ್ನು ಗಿಟ್ಟಿಸಿಕೊಂಡಿದೆ ಬೆಳಗಾವಿಯ ವೀರಭದ್ರ ನಗರದ ನಿವಾಸಿಯಾಗಿರುವ 31 ವರ್ಷ ವಯಸ್ಸಿನ ರಿಜ್ವಾನಾ ಆರ್ ಜಮಾದಾರ  ಶಾಟ್ ಪೂಟ್ ಮತ್ತು ಡಿಸ್ಕ ನಲ್ಲಿ ಚಿನ್ನದ ಪದಕ,ಜಾವಲಿಂಗ್ ನಲ್ಲಿ ಬೆಳ್ಳಿ ಪದಕ ವ್ಹೀಲ್ ಚೇರ್ ರೇಸ್ ನಲ್ಲಿ ಕಂಚಿನ ಪದಕ ಪಡೆದು ಬೆಳಗಾವಿಗೆ ಕೀರ್ತಿ ತಂದಿದ್ದಾಳೆ ಇದರ ಜೊತೆಗೆ …

Read More »

ಬೆಳಗಾವಿ KIDB ಅಧಿಕಾರಿಗಳು ACB ಬಲೆಗೆ

ಬೆಳಗಾವಿ- ಬೆಳಗಾವಿಯ ACB ಈಗ ಫುಲ್ ಆ್ಯಕ್ಟಿವ್ ಆಗಿದ್ದು ನಗರದ ಲಂಚಕೋರ ಅಧಿಕಾರಿಗಳ ಮೇಲೆ ಬಲೆ ಬೀಸುತ್ತಿದೆ ಬೆಳಗಾವಿಯಲ್ಲಿ ಎಸಿಬಿ ಅಧಿಕಾರುಗ ದಾಳಿ ನಡೆಸಿ ಲಂಚಕೊರ ಅಧಿಕಾರಿಯನ್ನ ಖೆಡ್ಡಾಗೆ ಕೆಡವಿದ್ದಾರೆ. ಬೆಳಗಾವಿಯ ಕೆ ಐ ಡಿ ಬಿ ವಲಯ ಅಧಿಕಾರಿ ಕಚೇರಿಯ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕೆ ಐ ಡಿ ಬಿ ವಲಯ ಅಧಿಕಾರಿ ಪ್ರಕಾಶ ಕುಮಾರ ಹಾಗೂ ಕೇಸ್ ವರ್ಕರ್ ಬಸು ಪೂಜಾರ್ ಲಂಚ್ ತೆಗೆದುಕೊಳ್ಳುವಾಗ ರೆಡ್ …

Read More »

ಅಡ್ಮೀಶನ್ ಫಾರ್ಮ ಪಡೆಯಲು ಕಿಮೀ..ಕ್ಯೂ..! ಶಾಲೆಯ ಎದುರು ವಸತಿ…!!!

ಬೆಳಗಾವಿ – ನಮ್ಮ ಮಗ ಹಾಯ್..ಹಲೋ..ಅನ್ಬೇಕು.ಇಂಗ್ಲಿಷ್ ಕಲಿಯಬೇಕು ಎನ್ನುವ ಕನಸು ಕಾಣುವ ಬೆಳಗಾವಿ ನಗರದ ಸಾವಿರಾರು ಜನ ಪಾಲಕರು ಇಂಗ್ಲಿಷ್ ಶಾಲೆಗಳಲ್ಲಿ ಪ್ರವೇಶ ಪಡೆಯಲು ಇಂಗ್ಲಿಷ್ ಶಾಲೆಗಳ ಎದುರು ಕೀಲೋ ಮೀ ನಷ್ಟು ಕ್ಯೂ ನಿಂತುಕೊಂಡು ಶಾಲೆಗಳ ಎದುರೇ ರಾತ್ರಿಯಲ್ಲ ವಸತಿ ಮಾಡುವ ಪರಿಸ್ಥಿತಿ ಬೆಳಗಾವಿಯಲ್ಲಿ ಎದುರಾಗಿದೆ ಪ್ರತಿ ವರ್ಷ ಇದೇ ಹಾಡು ನಗರದ ಇಂಗ್ಲೀಷ್ ಮಾದ್ಯಮ ಶಾಲೆಗಳಾದ ಸೆಂಟ್ ಪಾಲ್ಸ,ಸೇಂಟ್ ಮೇರಿ,ಸೇಂಟ್ ಜೋಸೆಫ್ ಸೇಂಟ್ ಝೇವಿಯರ್ಸ ಶಾಲೆಗಳಲ್ಲಿ ಪ್ರತಿ …

Read More »

ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು.

ಅಪರಿಚಿತ ವಾಹನ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ ಅಪಘಾತದಲ್ಲಿ ಲಕ್ಕಪ್ಪ (30 )ಸಂಗಪ್ಪ (22 )ಮೃತ ದುರ್ದೈವಿಗಳಾಗಿದ್ದಾರೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಬೆಳಗಿನಜಾವ ಘಟನೆ. ಕಟಕೋಳ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ ಪ್ರಕರಣ ದಾಖಲಿಸಿಕೊಂಡಿರುವ ಕಡಕೋಳ ಠಾಣೆಯ ಪೋಲೀಸರು ತನಿಖೆ ಮಂದುವರೆಸಿದ್ದಾರೆ

Read More »

ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಲು ಪಣ-ವೆಂಕಟಸ್ವಾಮಿ

ಬೆಳಗಾವಿ- ಬಡ್ತಿ ಮೀಸಲಾತಿಯಲ್ಲಿ ಪರಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಅನ್ಯಾಯವಾಗಿರುವದಕ್ಕೆ ಮುಖ್ಯಮಂತ್ರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ರಾಜ್ಯಾಧ್ಯಕ್ಷ ಡಾ ಎಂ ವೆಂಕಟಸ್ವಾಮಿ ಆರೋಪಿಸಿದ್ದಾರೆ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಬಡ್ತಿಯಲ್ಲಿ ಮೀಸಲಾತಿಗೆ ಸಮಂಧಿಸಿದಂತೆ ಸುಪ್ರೀಂ ಕೋರ್ಟನಲ್ಲಿ ರಾಜ್ಯ ಸರ್ಕಾರ ಸರಿಯಾದ ದಾಖಲೆಗಳನ್ನು ಒದಗಿಸಿಲ್ಲ ಸಮರ್ಥವಾಗಿ ವಾದ ಮಂಡಿಸದೇ ಇರುವದರಿಂದ ಬಡ್ತಿ ವಿಚಾರದಲ್ಲಿ ದಲಿತರಿಗೆ ಅನ್ಯಾಯವಾಗಿದೆ ಇದಕ್ಕೆ ಮುಖ್ಯಮಂತ್ರಿ ಗಳೇ ಹೊಣೆಗಾರ ಎಂದು ವೆಂಕಟಸ್ವಾಮಿ …

Read More »