Breaking News

LOCAL NEWS

ಬೆಳಗಾವಿ ದಕ್ಷಿಣದಲ್ಲಿ ಲೈಟ್ , ಗ್ರಾಮೀಣದಲ್ಲಿ ಫೈಟ್…..!!!

ಬೆಳಗಾವಿಯಲ್ಲಿ ಡಿಸೆಂಬರ್  31 ರಂದು ಅಣ್ಣಪ್ಪಾ ಜವಾರಿ ಊಟ ಆರಂಭ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಶಾಸಕ ಅಭಯ ಪಾಟೀಲ ಅವರು ಅಳವಡಿಸಿರುವ ಆಕರ್ಷಕ ಬೀದಿ ದೀಪಗಳು ಬೆಳಗಾವಿ-ರಾಜ್ಯದ ಯಾವ ಕ್ಷೇತ್ರದಲ್ಲೂ ಈ ರೀತಿಯ ಚುನಾವಣಾ ತಯಾರಿ ನಡೆದಿಲ್ಲ,ಆದ್ರೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಮಾತ್ರ ಪವರ್ ಫುಲ್ ಪಾಲಿಟಿಕ್ಸ್ ನಡೆದಿರುವುದು ಸತ್ಯ. ಬೆಳಗಾವಿ ಜಿಲ್ಲೆಯ ರಾಜಕೀಯ ಕಡುವೈರಿಗಳಾದ ಲಕ್ಷ್ಮೀ ಹೆಬ್ಬಾಳಕರ ಮತ್ತು ರಮೇಶ್ ಜಾರಕಿಹೊಳಿ ನಡುವೆ ರಾಜಕೀಯ ಗುದ್ದಾಟ ಶುರುವಾಗಿದೆ.ರಮೇಶ್ ಜಾರಕಿಹೊಳಿ …

Read More »

ಮಂತ್ರಿಮಂಡಲದ ವಿಸ್ತರಣೆ,ಪಂಚಮಸಾಲಿ ಮೀಸಲಾತಿ,ದೆಹಲಿಯಲ್ಲಿ ಡಿಸೈಡ್..!!

ಬೆಳಗಾವಿ: ಬಿಜೆಪಿ ನಾಯಕರಾದ ಕೆ.ಎಸ್.ಈಶ್ವರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಹಲವು ಆಕಾಂಕ್ಷಿಗಳನ್ನು ಸಂಪುಟಕ್ಕೆ ಸೇರ್ಪಡೆ ಕುರಿತು ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನ ನಡುವಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ನವದೆಹಲಿಗೆ ಭೇಟಿ ನೀಡುತ್ತಿದ್ದಾರೆಂದು ತಿಳಿದುಬಂದಿದೆ. ದೆಹಲಿಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಅಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪಕ್ಷದ ನಾಯಕರನ್ನು ಭೇಟಿ ಮಾಡಲಿದ್ದಾರೆ. ರಾಜ್ಯ ಸರಕಾರವು …

Read More »

ನಿನ್ನೆ ರಾತ್ರಿ ಬೆಳಗಾವಿಯಲ್ಲಿ ಡಬಲ್ ಮರ್ಡರ್…

ಬೆಳಗಾವಿ-ಬೆಳಗಾವಿ ಪಕ್ಕದ ಸಿಂದೊಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ.ಮಾರಿಹಾಳ ಪೋಲೀಸ್ರು ನಿನ್ನೆ ರಾತ್ರಿ 11-00 ಗಂಟೆಗೆ, ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡು ಎಸ್ಕಾಟ್ ಮಾಡುವ ಹೊತ್ತಿನಲ್ಲಿಯೇ ಸಾಂಬ್ರಾ ಪಕ್ಕದ ಮಾರಿಹಾಳದಲ್ಲಿ ಡಬಲ್ ಮರ್ಡರ್ ಆಗಿದೆ. ಸಿಂಧೊಳ್ಳಿಯಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಇಪ್ಪತ್ತು ನಾಲ್ಕು ವರ್ಷದ ಯುವಕನೊಬ್ಬನ ಹತ್ಯೆಯಾಗಿದ್ದು ಇನ್ನೋರ್ವ ಯುವಕನ ಸ್ಥಿತಿ ಚಿಂತಾಜನಕವಾಗಿತ್ತು ನಿನ್ನೆ ಮಧ್ಯರಾತ್ರಿ ಆತನೂ ಪ್ರಾಣಬಿಟ್ಟಿದ …

Read More »

ಬೆಳಗಾವಿ : ಯುವಕನ ಮರ್ಡರ್ ಇನ್ನೋರ್ವನ ಸ್ಥಿತಿ ಚಿಂತಾಜನಕ..

ಬೆಳಗಾವಿ-ಬೆಳಗಾವಿ ಪಕ್ಕದ ಸಿಂದೊಳ್ಳಿ ಗ್ರಾಮದಲ್ಲಿ ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಇಪ್ಪತ್ತು ನಾಲ್ಕು ವರ್ಷದ ಯುವಕನೊಬ್ಬನ ಹತ್ಯೆಯಾಗಿದ್ದು ಇನ್ನೋರ್ವ ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಬಸವರಾಜ್ ಬೆಳಗಾಂವಕರ 24 ಎಂಬ ಯುವಕನ ಕೊಲೆಯಾಗಿದ್ದು ಗಿರೀಶ್ ಎಂಬ ಯುವಕನ ಸ್ಣತಿ ಚಿಂತಾಜನಕವಾಗಿದೆ.ಹಲ್ಲೆಯಾದ ತಕ್ಷಣ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಯಿತು. ಬಸವರಾಜ್ ಬೆಳಗಾಂವಕರ ಎಂಬಾತ ಮೃತಪಟ್ಟಿದ್ದು ಗಿರೀಶ್ ಎಂಬಾತನ ಸ್ಣಿತಿ ಚಿಂತಾಜನಕವಾಗಿದೆ. ಕೊಲೆಗೆ ವಾಹನದ ವ್ಯವಹಾರ, ವ್ಯಯಕ್ತಿಕ ದ್ವೇಷವೇ ಕಾರಣ …

Read More »

ಎಡಿಜಿಪಿ ಕಮಾಲ್, ಕನ್ನಡ ,ಮರಾಠಿ ಹೋರಾಟಗಾರರು ಈಗ ಭಾಯೀ,ಭಾಯೀ…!!

ಬೆಳಗಾವಿ-ಬೆಳಗಾವಿಯ ಗಡಿವಿವಾದದ ಹೋರಾಟದ ಇತಿಹಾಸದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಮತ್ತು ಎಂಇಎಸ್ ನಾಯಕರು ಒಂದೇ ಕಡೆ ಕುಳಿತುಕೊಂಡು, ಪರಸ್ಪರ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು,ಕ್ಯಾಮರಾ ಎದುರು ನಗುತ್ತಲೇ ಪೋಜು ಕೊಟ್ಟ ಉದಾಹರಣೆ ಇಲ್ಲ.ಆದ್ರೆ ಶುಕ್ರವಾರ ಇದು ಎಡಿಜಿಪಿ ಅಲೋಕ್ ಕುಮಾರ್ ಅವರ ವಿಶೇಷ ಕಾಳಜಿ ಮತ್ತು ಮುತವರ್ಜಿಯಿಂದ ಇದು ಸಾಧ್ಯವಾಗಿದೆ. ಶುಕ್ರವಾರ ಬೆಳಗಾವಿಯ ಟಿಳಕವಾಡಿ ಪೋಲೀಸ್ ಠಾಣೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಕನ್ಬಡಪರ ಸಂಘಟನೆಗಳ ನಾಯಕರು ಹಾಗೂ ಎಂಇಎಸ್ ನಾಯಕರ …

Read More »

ಕ್ಯಾಬಿನೇಟ್ ಮೀಟೀಂಗ್ ನಲ್ಲಿ ಬಂಪರ್ ಗಿಪ್ಟ್..!!

*ಶಾಸಕ ಬಾಲಚಂದ್ರ ಜಾರಕಿಹೊಳಿಯವರ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದ ಸರ್ಕಾರ* *ಮೆಳವಂಕಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 475 ಕೋಟಿ, 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ 385 ಕೋಟಿ ಸೇರಿ ಒಟ್ಟು 860 ಕೋಟಿ ರೂಗಳ ಕಾಮಗಾರಿಗಳಿಗೆ ಅನುಮೋದನೆ ನೀಡಿದ ಸಚಿವ ಸಂಪುಟ* *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಗೋಕಾಕ*: ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರತಿನಿಧಿಸುವ ಅರಭಾವಿ ವಿಧಾನ ಸಭಾ …

Read More »

ಪಂಚಮಸಾಲಿ ಮೀಸಲಾತಿ ಬಗ್ಗೆ ಇವತ್ತು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದೇನು ಗೊತ್ತಾ..??

*ವರದಿ ಬಂದ ತಕ್ಷಣ ಕ್ರಮ :* ಪಂಚಮಸಾಲಿ ಮೀಸಲಾತಿ ಕುರಿತು ನಾಳೆ ಅಂತಿಮ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರೆಲ್ಲರೂ ನಮ್ಮವರೇ, ನಾನು ಹಿಂದುಳಿದ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಸಂಪರ್ಕದಲ್ಲಿದ್ದೇನೆ. ಕೂಡಲೇ ಈ ಬಗ್ಗೆ ವರದಿ ನೀಡಲು ತಿಳಿಸಲಾಗಿದೆ. ವರದಿ ನೀಡಿದ ತಕ್ಷಣ ಮುಂದಿನ ಕ್ರಮಗಳನ್ನು ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಬೆಳಗಾವಿ ಮಹಾರಾಷ್ಟ್ರದ ವಿರೋಧ ಪಕ್ಷದ ಶಾಸಕರು ಶಾಸನ ಸಭೆಯಲ್ಲಿ ಮತ್ತು ಹೊರಗಡೆ …

Read More »

ಸಿಎಂ ಜೊತೆ ರಮೇಶ್ ಜಾರಕಿಹೊಳಿ,ಈಶ್ವರಪ್ಪ ಮೀಟೀಂಗ್..!!

ಬೆಳಗಾವಿ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸ್ಥಾನದ ಆಕಾಂಕ್ಷಿಗಳಾದ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಹಾಗೂ ರಮೇಶ ಜಾರಕಿಹೊಳಿ ಅವರ ಜೊತೆ ಸುದೀರ್ಘ ಚರ್ಚೆ ನಡೆಸಿದರು. ಈಶ್ವರಪ್ಪ ಮತ್ತು ರಮೇಶ ಜಾರಕಿಹೊಳಿ ಅವರು ಸಚಿವ ಸಂಪುಟ ಸೇರ್ಪಡೆಯಾಗುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮನದಲ್ಲಿರುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ವರಿಷ್ಠರು ಹಸಿರು ನಿಶಾನೆ ತೋರಿದರೆ ಸಚಿವ ಸಂಪುಟ ವಿಸ್ತರಣೆಗೆ ಜನವರಿಯಲ್ಲಿ ಚಾಲನೆ ಸಿಗಬಹುದು ಎನ್ನಲಾಗಿದೆ. ಸಂಪುಟ …

Read More »

ಬೆಳಗಾವಿಗೆ ವಾಪಸ್ಸಾದ ಜೋಡಿ ಹಕ್ಕಿ, ಈಶ್ವರಪ್ಪ-ಜಾರಕಿಹೊಳಿ ಸಾಥ್ ಸಾಥ್ ಹೈ..!!

ಬೆಳಗಾವಿ- ಬಿಜೆಪಿ ನಾಯಕರ ವಿರುದ್ದ ಬಂಡಾಯದ ಬಾವುಟ ಹಾರಿಸಿ,ಧಿಡೀರ್ ಬೆಂಗಳೂರಿಗೆ ಹಾರಿದ್ದ ಮಾಜಿ ಸಚಿವರಾದ ಈಶ್ವರಪ್ಪ ಮತ್ತು ರಮೇಶ್ ಜಾರಕಿಹೊಳಿ ಇಂದು ಬೆಳಗಾವಿಗೆ ವಾಪಸ್ಸಾಗಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಈಶ್ವರಪ್ಪ, ಸಿಎಂ ಬಸವರಾಜ ಬೊಮ್ಮಾಯಿ‌ ಕರೆದಿದಕ್ಕೆ‌ ನಾನನು ಬಂದಿದ್ದೇನೆ ಅವರನ್ನು ಇಂದು ಭೇಟಿ ಮಾಡುತ್ತೇನೆ ನನಗೆ ಯಾವುದೇ ಮಾಹಿತಿ ಇಲ್ಲ,ಅವರು‌ ಮಾತನಾಡಿದ ನಂತರ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಜಾತಿ ಮಧ್ಯ …

Read More »

ಬೆಳಗಾವಿಯ ಎಂಇಎಸ್ ಹೋರಾಟ ಮಹಾರಾಷ್ಟ್ರಕ್ಕೆ ಪಲಾಯನ….!!

ಬೆಳಗಾವಿ- ಕರ್ನಾಟಕ ಸರ್ಕಾರ ಮರಾಠಿ ಮಹಾ ಮೇಳಾವ್ ಗೆ ಬ್ರೇಕ್ ಹಾಕುತ್ತಿದ್ದಂತೆಯೇ ಬೆಳಗಾವಿಯ ಎಂಇಎಸ್ ನಾಯಕರು ಈಗ ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಬೆಳಗಾವಿಯ ಮರಾಠಿಗರ ಮೇಲೆ ದಬ್ಬಾಳಿಕೆ ನಡೆಸಿದೆ.ಮರಾಠಿಗರ ಮೇಲೆ ಪೋಲೀಸರ ದೌರ್ಜನ್ಯ ಹೆಚ್ಚಾಗಿದೆ ಎಂದು ಮೊಸಳೆ ಕಣ್ಣೀರು ಹಾಕಲು ಬೆಳಗಾವಿಯ ಎಂಇಎಸ್ ನಾಯಕರು ಮಹಾರಾಷ್ಟ್ರಕ್ಕೆ ಪಲಾಯನ ಮಾಡುತ್ತಿದ್ದಾರೆ. ಡಿಸೆಂಬರ್ 26 ರಂದು ಬೆಳಗಾವಿಯ ಎಂಇಎಸ್ ನಾಯಕರು ಕೊಲ್ಹಾಪೂರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಲಿದ್ದಾರೆ ಚಲೋ …

Read More »

ವಿಮಾನಗಳು ರದ್ದಾದ ಮೇಲೆ ಎಚ್ಚೆತ್ತುಕೊಂಡ ಬೆಳಗಾವಿಯ ಸಂಸದರು..!!

ಬೆಳಗಾವಿ: ಬೆಳಗಾವಿಯಿಂದ ದೆಹಲಿ ಮತ್ತು ಮುಂಬೈಯ ನಡುವೆ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಿಮಾನಗಳು ತಮ್ಮ ಸೇವೆಯನ್ನು ನಿಲ್ಲಿಸಿದ್ದು ಅವುಗಳನ್ನು ಪುನರಾರಂಭಿಸಬೇಕೆಂದು ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮನವಿ ನೀಡಿ ಒತ್ತಾಯಿಸಿದರು. ಬುಧವಾರ ಡಿ-21 ರಂದು ನವದೆಹಲಿಯ ಸಂಸತ್ತಿನಲ್ಲಿ ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆ ಮತ್ತು ಬೆಳಗಾವಿ ವಿಮಾನ …

Read More »

ನಿರಾಣಿ ಮುಖ್ಯಮಂತ್ರಿ ಆದ್ರೆ,ವಿಧಾನಸೌಧದ ಮರ್ಯಾದೆ ಹೋಗುತ್ತೆ- ಯತ್ನಾಳ

ಬೆಳಗಾವಿ- ಬುಧವಾರ ಸುವರ್ಣ ಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಎಂದಿನ ಶೈಲಿಯಲ್ಲಿ ರಸವತ್ತಾಗಿ ಮಾತನಾಡಿದ್ದಾರೆ.. ಪಂಚಮಸಾಲಿ ಮೀಸಲಾತಿಯ ಬಗ್ಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳ ಮೇಲೆ ಸಂಪೂರ್ಣ ವಿಶ್ವಾಸ ಇದೆ, ನಾಳೆಯೇ ನಮ್ಮ ಸಮುದಾಯದ ಮೀಸಲಾತಿ ಘೋಷಣೆ ಆಗುತ್ತದೆ, ಅದರಲ್ಲಿ ಎರಡನೇ ಮಾತೇ ಇಲ್ಲ ಎಂದರು.. ಇನ್ನು ಮೀಸಲಾತಿಯ ವಿಚಾರವಾಗಿ ತಮ್ಮ ಬಗ್ಗೆ ವ್ಯಂಗ್ಯವಾಡಿದರು ಸಚಿವ ನಿರಾಣಿ ಅವರ ಬಗ್ಗೆ …

Read More »

ಬೆಳಗಾವಿಯಲ್ಲಿ ಕನ್ನಡದ ಸದನ,ಮಹಾರಾಷ್ಟ್ರದಲ್ಲಿ ಪುಂಡಾಟಿಕೆಯ ಕದನ..!!

ಬೆಳಗಾವಿಯಲ್ಲಿ ಸದನ… ಮಹಾರಾಷ್ಟ್ರದಲ್ಲಿ ಕದನ…!! ಬೆಳಗಾವಿ- ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶದಲ್ಲಿ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮಹಾರಾಷ್ಡ್ರದ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲಿಯೇ ಅತ್ತ ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಹಾರಾಷ್ಟ್ರದ ನಾಯಕರು ಕರ್ನಾಟಕದ ವಿರುದ್ಧ ತಿರುಗಿಬಿದ್ದಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದದ ಹಿನ್ನಲೆಯಲ್ಲಿ ಮಹಾರಾಷ್ಟ್ರದ ಪುಂಡ ನಾಯಕರ ಮತ್ತೊಂದು ತಗಾದೆ ತೆಗೆದಿದ್ದಾರೆ.ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಗಡಿ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈ …

Read More »

ನಾಳೆ ಬೆಳಗಾವಿಯಲ್ಲಿ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಫೈನಲ್ ಮ್ಯಾಚ್…!!

ಬೆಳಗಾವಿ-ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಾತಿಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಕೊನೆಯ ಹಂತ ತಲುಪಿದೆ. ನಾಳೆಯೊಳಗೆ ಮೀಸಲಾತಿ ಘೋಷಿಸಲು ಪಂಚಮಸಾಲಿ ಸಮುದಾಯ ಗಡುವು ನೀಡಿದೆ. ಮೀಸಲಾತಿ ಘೋಷಿಸಿದ್ರೆ ನಾಳೆ ನಡೆಯುವ ವಿರಾಟ ಪಂಚಶಕ್ತಿ ಸಮಾವೇಶದಲ್ಲಿ ಸಿಎಂಗೆ ಸನ್ಮಾನ ಇಲ್ಲವಾದ್ರೆ ಹೋರಾಟ ಮಾಡೋದಾಗಿ ಕೂಡಲಸಂಗಮ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟ ಅಂತಿಮ ಹಂತ ತಲುಪಿದೆ. ನಾಳೆಯೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ …

Read More »

ಜೈಕಾರ ಕೂಗಿ ,ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿ..!!

ಬೆಳಗಾವಿ: ಕರ್ನಾಟಕ ಮರಾಠಾ ಮಹಾಒಕ್ಕೂಟದಿಂದ ಆಯೋಜಿಸಿದ್ದ ಪ್ರತಿಭಟನೆ ವೇದಿಕೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಭಾಷಣಕ್ಕೆ ಅಡ್ಡಿಪಡಿಸಿದ ಘಟನೆ ಮಂಗಳವಾರ ನಡೆಯಿತು. ಪ್ರವರ್ಗ 2ಎ‌ ಮೀಸಲಾತಿಗಾಗಿ ಆಗ್ರಹಿಸಿ ಕೊಂಡಸಕೊಪ್ಪ ಬಳಿ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಬೆಂಬಲ ಸೂಚಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಸತೀಶ್ ಜಾರಕಿಹೊಳಿ ವೇದಿಕೆಗೆ ಬಂದಿದ್ದರು. ಸತೀಶ್ ಜಾರಕಿಹೊಳಿ ಮಾತನಾಡಲು ಬಂದಾಗ, ಮರಾಠಾ ಸಮುದಾಯದ ಬಗ್ಗೆ ಹಿಂದೂ ದರ್ಮದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ, ಹೀಗಾಗಿ ಭಾಷಣ ಬೇಡ …

Read More »