LOCAL NEWS

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ , ಮನೆ ಮಾಡಿದ ಚಿರತೆ..ಟೆಂಟ್ ಹಾಕಿದ ಅರಣ್ಯ ಇಲಾಖೆ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ , ಮನೆ ಮಾಡಿದ ಚಿರತೆ…!! ಬೆಳಗಾವಿ-ಕಳೆದ 11 ದಿನಗಳ ಹಿಂದೆ ಇಲ್ಲಿನ ಜಾಧವ ನಗರದಲ್ಲಿ ಕಟ್ಟಡ ಕಾರ್ಮಿಕನ ಮೇಲೆ ದಾಳಿ ನಡೆಸಿ ಗಾಲ್ಫ್ ಮೈದಾನದ‌ಲ್ಲಿ ಅರಣ್ಯ ಇಲಾಖೆ ಅಳವಡಿಸಿದ್ದ ಟ್ರ್ಯಾಪ್ ಕ್ಯಾಮರಾದಲ್ಲಿ ಪತ್ತೆಯಾಗಿದ್ದ ಚಿರತೆ ಮತ್ತೇ ಇಂದು ಕಾಣಿಸಿಕೊಂಡಿದೆ.ಅದಕ್ಕಾಗಿಯೇ ಗಾಲ್ಫ್ ಮೈದಾನದ ಸುತ್ತ ಪೋಲೀಸ್ ಬಂದೋಬಸ್ತಿ ಹೆಚ್ವಿಸಲಾಗಿದೆ. ನಗರಕ್ಕೆ ಬಂದ ಚಿರತೆಯನ್ನು‌ಹಿಡಿಯಲು ಅರಣ್ಯ ಇಲಾಖೆ ಹರಸಾಹಸ ಪಡುತ್ತಿದೆ. ಬೆಳಗಾವಿ ನಗರದ ಜಾಧವ ನಗರದಲ್ಲಿ ಆ.5 ರಂದು …

Read More »

ಬೆಳಗಾವಿಯ ಚನ್ನಮ್ಮ ವೃತ್ತಕ್ಕೆ ಕ್ಯಾಂಟರ್ ಡಿಕ್ಕಿ…

ಬೆಳಗಾವಿ- ಬೆಳಗಾವಿ ಮಹಾನಗರದ ಚನ್ನಮ್ಮ ವೃತ್ತದ ಚನ್ನಮ್ಮಾಜಿಯ ಅಶ್ವಾರೂಢ ಮೂರ್ತಿಯ ಕಟ್ಟಿಗೆ ಕ್ಯಾಂಟರ್ ವಾಹನವೊಂದು ಡಿಕ್ಕಿ ಹೊಡೆದ ಘಟನೆ ಈಗ ರಾತ್ರಿ 11-00 ರ ಸುಮಾರಿಗೆ ನಡೆದಿದೆ. ಡಾ.ಬಾಬಾಸಾಹೇಬ್ ಅಂಬೇಡ್ಕರ್ ಉದ್ಯಾನವನದ ಕಡೆಯಿಂದ ವೇಗವಾಗಿ ಬಂದ ಕ್ಯಾಂಟರ್ ವಾಹನ ನಿಯಂತ್ರಣ ತಪ್ಪಿ ಚನ್ನಮ್ಮ ಮೂರ್ತಿಯ ಕಟ್ಟೆಗೆ ಡಿಕ್ಕಿ ಹೊಡೆದಿದ್ದು ಮೂರ್ತಿಗೆ ಯಾವುದೇ ರೀತಿಯ ಧಕ್ಕೆ ಆಗಿಲ್ಲ. ಮೂರ್ತಿ ಪ್ರತಿಷ್ಠಾಪಿತ ಕಟ್ಟೆ ಸುತ್ತಲು ಅಳವಡಿಸಿರುವ ಕಬ್ಬಿಣದ ರಾಡ್ ನುಜ್ಜಾಗಿದ್ದು ಸ್ಥಳಕ್ಕೆ ಪೋಲೀಸರು …

Read More »

ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಸ್ಥಳಕ್ಕೆ ಭೇಟಿ ನೀಡದ ಕೈ ನಾಯಕರು

ಗಾಂಧೀಜಿ ಮರೆದ ಕಾಂಗ್ರೆಸ್ ಐತಿಹಾಸಿಕ ಕಾಂಗ್ರೆಸ್ ಅಧಿವೇಶನದ ಸ್ಥಳಕ್ಕೆ ಭೇಟಿ ನೀಡದ ಕೈ ನಾಯಕರು ಬೆಳಗಾವಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮ ಇಡೀ ದೇಶ, ರಾಜ್ಯದ ಮೂಲೆ ಮೂಲೆಯಲ್ಲೂ ಜನರಲ್ಲಿ ಮನೆ ಮಾಡಿದೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಕಾಂಗ್ರೆಸ್ ಅಧಿವೇಶನ ನಡೆದ ಐತಿಹಾಸಿಕ ಸ್ಥಳವಾದ ಟಿಳಕವಾಡಿಯ ಕಾಂಗ್ರೆಸ್ ಭಾವಿ ಸ್ಥಳವನ್ನೇ ಕಾಂಗ್ರೆಸ್ ಮರೆದಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಕಾಂಗ್ರೆಸ್ಸಿಗರು ಈ ಹಿಂದೆ ಕಾಂಗ್ರೆಸ್ ಭಾವಿಗೆ ಭೇಟಿ ನೀಡಿ, …

Read More »

ಮಹೋತ್ಸವ ಮಾಡಿದ್ರ ಹಿಂಗ್ ಮಾಡಬೇಕ್…!!

ಬೆಳಗಾವಿ‌ ಆ.16: ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆ ಹಾಗೂ ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಗಸ್ಟ 15 ರಂದು ಹಮ್ಮಿಕೊಳ್ಳಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 801 ಜನರು ರಕ್ತದಾನ ಮಾಡುವ ಮೂಲಕ ದಾಖಲೆ ನಿರ್ಮಿರ್ಸಿದ್ದಾರೆ. ಬೆಳಗಾವಿಯ ಮಹಾವೀರ ಭವನದಲ್ಲಿ ಸೋಮವಾರದಂದು ನಡೆದ ರಕ್ತದಾನ ಶಿಬಿರದಲ್ಲಿ ಈ ದಾಖಲೆ ದಾಖಲಿಸಲಾುತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ …

Read More »

ಚಿರತೆ,ಕತ್ತೆ ಕಿರುಬ,ಜಿಂಕೆ ಆಯ್ತು ಈಗ ಆನೆಯೂ ಬಂತು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಪಯಣ ಮುಂದುವರೆದಿದೆ.ಮೂರು ಚಿರತೆ ,ಎರಡು ಕತ್ತೆ ಕಿರುಬು,ಜಿಂಕೆಯ ಬಳಿಕ ಇವತ್ತು ಆನೆಯೂ ರಸ್ತೆಗೆ ಬಂದಿದೆ. ಉಮೇಶ್ ಕತ್ತಿ ಅವರಿಗೆ ಕಾಡು ಪ್ರಾಣಿಗಳ ಮೇಲೆ ಪ್ರೀತಿಯೋ..? ಅಥವಾ ಕಾಡು ಪ್ರಾಣಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಭೀತಿಯೋ ಗೊತ್ತಿಲ್ಲ.ಆದ್ರೆ ಒಂದರ ಮೇಲೊಂದು ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ರಿವೆ.ಸಚಿವರ ತವರು ಜಿಲ್ಲೆಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ. ಖಾನಾಪೂರ ತಾಲ್ಲೂಕಿನ …

Read More »

ಬೆಳಗಾವಿಯಲ್ಲಿ, ಅದ್ಭುತ..ಅದ್ಭುತ….ಅಭಿಯಾನ….!!!

ಬೆಳಗಾವಿಯ ಈ ಅದ್ಭುತಕ್ಕೆ ವೋಟ್ ಮಾಡಿ ಭರದಿಂದ ಸಾಗಿದೆ ಕರ್ನಾಟಕದ ಏಳು ಅದ್ಭುತ ಅಭಿಯಾನ. ಇದರಲ್ಲಿ ನೀವು ಪಾಲ್ಗೊಳ್ಳಿ. ಬೆಳಗಾವಿ: ವಿಶ್ವದ ಏಳು ಅದ್ಭುತಗಳ ಮಾದರಿಯಲ್ಲಿ ಕರ್ನಾಟಕದ ಏಳು ಅದ್ಭುತಗಳನ್ನು ಗುರುತಿಸಲು ಈಗ ರಾಜ್ಯವ್ಯಾಪಿ ಅಭಿಯಾನ ನಡೆಯುತ್ತಿದೆ. ಈ ವಿಶೇಷ ಅಭಿಯಾನದಲ್ಲಿ ನೀವು ಪಾಲ್ಗೊಂಡು ಬೆಳಗಾವಿಯ ಅದ್ಭುತವನ್ನು ಕರುನಾಡಿನ ಏಳು ಅದ್ಭುತಗಳ ಸಾಲಿನಲ್ಲಿ ನಿಲ್ಲಿಸುವ ಸುವರ್ಣಾವಕಾಶವಿದೆ. ಬೆಳಗಾವಿ ಜಿಲ್ಲೆಯ ಈ ಒಂದು ಸ್ಥಳ ಈಗಾಗಲೇ ಕರ್ನಾಟಕದ ನೂರು ಅದ್ಭುಗಳ ಪಟ್ಟಿಯಲ್ಲಿ …

Read More »

ಬೆಳಗಾವಿ, ಚಿರತೆ ಹಿಡ್ಯಾಕ್ ಮುಧೋಳ್ ನಾಯಿ ಬರಾತೈತಿ….!!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಒಂದಲ್ಲ, ಎರಡಲ್ಲ, ಮೂರು ಚಿರತೆ ಪ್ರತ್ಯಕ್ಷವಾಗಿದ್ದು ಈ ವಿಚಾರವಾಗಿಬೆಳಗಾವಿ ಗಾಲ್ಫ್ ಮೈದಾನದಲ್ಲಿ ಎಂಟು ಕಡೆ ಬೋನು ಇಟ್ಟು ಕಾಯುತ್ತಿದ್ದಾರೆ.ಆದ್ರೂ ಚಿರತೆ ಬೋನಿಗೆ ಬಿದ್ದಿಲ್ಲ.ಚಿರತೆ ಸಿಗದಿದ್ರೆ ನೋಡೋಣ ಕಡೆಗೆ ಮುಧೋಳ ನಾಯಿಗಳನ್ನು ತರೋಣ ಎಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಧ್ವಜಾರೋಹಣದ ಬಳಿಕ,ಬೆಳಗಾವಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.ಬೋನಿನಲ್ಲಿ ಸಿಬ್ಬಂದಿಯೇ ಕುಳಿತು ಚಿರತೆಗಾಗಿ ಕಾಯುತ್ತಿದ್ದಾರೆ. ಚಿರತೆ ಸೆರೆಗೆ 50 …

Read More »

ಬೇಸಿಗೆಯಲ್ಲಿ ನಿರಂತರವಾಗಿ ಧ್ವಜ ಹಾರಿಸಲು ಪ್ರಯತ್ನ

ಬೆಳಗಾವಿ ಕೋಟೆಕೆರೆ ಆವರಣದಲ್ಲಿ ಬೃಹತ್ ಧ್ವಜಾರೋಹಣ; ತಿರಂಗಾ ಯಾತ್ರೆ ——————————————————– ನೀಲಿ ಬಾನಂಗಳದಲ್ಲಿ ಬೃಹತ್ ತಿರಂಗಾ ಬೆಳಗಾವಿ, ): ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಮೃತ ಘಳಿಗೆಯಲ್ಲಿ ದೇಶದ‌ ಅತೀ ಎತ್ತರದ ಧ್ವಜಸ್ತಂಭಗಳಲ್ಲಿ ಒಂದಾಗಿರುವ ಇಲ್ಲಿನ ಕೋಟೆಕೆರೆ ಆವರಣದ 110 ಮೀಟರ್ ಎತ್ತರದ ಧ್ವಜಸ್ತಂಭದಲ್ಲಿ 9600 ಚದುರ ಅಡಿಯ ಬೃಹತ್ ತ್ರಿವರ್ಣ ಧ್ವಜವು ಜಿಟಿಜಿಟಿ ಮಳೆಯ ನಡುವೆಯೂ ನೀಲಿಬಾನಂಗಳಲ್ಲಿ ಹಾರಿತು. 110 ಮೀಟರ್ ಎತ್ತರದ ಬೃಹತ್ ಧ್ವಜಸ್ತಂಭದಲ್ಲಿ 36.60×24.40(120×90 ಅಡಿ=9600 ಚದುರ …

Read More »

ಬೆಳಗಾವಿಯ ನವಿಲುತೀರ್ಥ ಡ್ಯಾಂ ಭರ್ತಿಗೆ ಕೇವಲ ಮೂರು ಅಡಿ, ಬಾಕಿ

ನವಿಲುತೀರ್ಥ ಭರ್ತಿಗೆ ಕೇವಲ ಮೂರು ಅಡಿ, ಬಾಕಿ ಬೆಳಗಾವಿ-ಪಶ್ಚಿಮಘಟ್ಟ ಪ್ರದೇಶ ಹಾಗೂ, ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಮಲಪ್ರಭಾ ನದಿ ನೀರಿನ ಒಳಹರಿವು ಪ್ರಮಾಣ ಹೆಚ್ಚಳವಾಗಿದ್ದುಮಲಪ್ರಭಾ ನದಿಗೆ 14,453 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.ರಾಮದುರ್ಗ ತಾಲೂಕಿನ ಮಲಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.ನವಿಲುತೀರ್ಥ ಜಲಾಶಯ ಭರ್ತಿಯಾಗಲು ಕೇವಲ ಮೂರು ಅಡಿ ಮಾತ್ರ ಬಾಕಿ ಇದೆ. ನವಿಲು ತೀರ್ಥ …

Read More »

ಸರಳತೆ ಮೆರೆದ ಪರಿಷತ್ ಸದಸ್ಯ ನಾಗರಾಜ್ ಯಾದವ್..!

ಸಾರಿಗೆ ಬಸ್ ನಲ್ಲಿಯೇ ಬೆಂಗಳೂರಿಗೆ ಹೋಗುವ ಮೂಲಕ ಸರಳತೆ ಮೆರೆದ ಪರಿಷತ್ ಸದಸ್ಯ ನಾಗರಾಜ್ ಯಾದವ್..! ಬೆಳಗಾವಿ: ರಾಜಕೀಯ ವ್ಯಕ್ತಿಗಳೆಂದರೆ ಸಾಕು ಅವರೊಳಗೆ ಜಗತ್ತಿನಲ್ಲಿ ತನಗಿಂತ ಮಿಗಿಲಿಲ್ಲ ಎನ್ನುವ ಭಾವನೆ ಮೂಡಿ ಬಿಡುತ್ತದೆ. ಇಷ್ಟೇ ಅಲ್ಲದೇ ಶಾಸಕರು ಅಂದ್ರೆ ಅವರಿಗೊಂದು ಕಾರು ಹಿಂಬಾಲಕರು ಇರೋದ ಸಹಜ.ಅಂತಹುದರಲ್ಲಿ ಇಲ್ಲೊಬ್ಬ ಶಾಸಕರು ಯಾವುದೇ ರೀತಿಯ ಹಮ್ಮುಬಿಮ್ಮು ಇಲ್ಲದೇ ಸಾಮಾನ್ಯರಂತೆ ಸಾಮಾನ್ಯರಾಗಿ ಸಾರಿಗೆ ಬಸ್ ನ ಸೀಟಿನಲ್ಲಿ ಕುಳಿತು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಎಲ್ಲರ …

Read More »

ಬೆಳಗಾವಿಯ 22 ಶಾಲೆಗಳಿಗೆ ಶನಿವಾರವೂ ಚಿರತೆ,ರಜೆ…

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಿರತೆ ಆತಂಕ ಮುಂದುವರೆದಿದ್ದು,ನಾಳೆ ಶನಿವಾರವೂ,ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬೆಳಗಾವಿಯ ಹನುಮಾನ ನಗರದ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷವಾದ ಕಾರಣ ಚಿರತೆ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರೆಸಿದೆ. ಮುಂಜಾಗೃತವಾಗಿ,ಬೆಳಗಾವಿಯ ಹನುಮಾನ ನಗರ,ಜಾಧವ ನಗರ,ದೂರದರ್ಶನ ನಗರ,ಜಯ ನಗರ ಹಾಗೂ ಹಿಂಡಲಗಾ ಪ್ರದೇಶದ 22 ಶಾಲೆಗಳಿಗೆ ನಾಳೆ ಶನಿವಾರವೂ ಚಿರತೆ ರಜೆ ಸಿಗಲಿದೆ. ನಾಳೆ ಶನಿವಾರವೂ 22 ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಬೆಳಗಾವಿ …

Read More »

ಕೋಯ್ನಾ ಡ್ಯಾಂ ನಿಂದ ನೀರ ಬಿಟ್ಟಾರ ಹುಷಾರ್…!!

*ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆ;ಕೃಷ್ಣಾ ನದಿಗೆ 2,06,532 ಕ್ಯೂಸೆಕ್ ನೀರಿನ ಒಳಹರಿವು..!* ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಚಿಕ್ಕೋಡಿ ಉಪವಿಭಾಗದಲ್ಲಿ ಬರುವ ರಾಯಭಾಗ, ನಿಪ್ಪಾಣಿ, ಅಥಣಿ , ಕಾಗವಾಡ, ಚಿಕ್ಕೋಡಿ ತಾಲೂಕಿನಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು ಕೃಷ್ಣಾ ನದಿಗೆ 2,06,532 ಕ್ಯೂಸೆಕ್ ನೀರಿನ ಒಳಹರಿವು ಹರಿದು ಬರುತ್ತಿದೆ. ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಕಳೆದ ಎಂಟು ದಿನಗಳಿಂದ ಧಾರಾಕಾರ ಮಳೆ ಹಿನ್ನೆಲೆ ನಿತ್ಯ 49,524ಕ್ಯೂಸೆಕ್ ಒಳಹರಿವಿನೊಂದಿಗೆ …

Read More »

ಭೂತರಾಮನಮಟ್ಟಿ ಗ್ರಾಮಕ್ಕೆ ನುಗ್ಗಿದ ಜಿಂಕೆ….!!

ಬೆಳಗಾವಿ- ಮೂರು ಚಿರತೆ,ಎರಡು ಕತ್ತೆ ಕಿರುಬು ಆಯ್ತು ..ಈಗ ಗ್ರಾಮಕ್ಕೆ ಜಿಂಕೆ ನುಗ್ಗಿ ಎಲ್ಲರಲ್ಲಿ ಅಚ್ಚರಿ ಮೂಡಿಸಿದ ಘಟನೆ ನಡೆದಿದೆ. ಆಹಾರ ಅರಸಿ ಭೂತರಾಮನಮಟ್ಟಿ ಗ್ರಾಮಕ್ಕೆ ಜಿಂಕೆ ನುಗ್ಗಿದೆ.ಬೆಳಗಾವಿ ಹೊರವಲಯದ ಭೂತರಾಮನಮಟ್ಟಿ ಗ್ರಾಮದಲ್ಲಿ ಜಿಂಕೆಯ ಓಡಾಟ ನೋಡಿ ಎಲ್ಲರೂ ಚಿರಾಡಿ,ಬೊಬ್ಬೆ ಹಾಕಿ ಆನಂದಿಸಿದ್ದಾರೆ. ಹಾಡು ಹಗಲೇ ಗ್ರಾಮಕ್ಕೆ ಬಂದ ಚಿರತೆ ಕಂಡು ಗ್ರಾಮಸ್ಥರಿಗೆ ಆಶ್ಚರ್ಯವಾಗಿದೆ.ಗ್ರಾಮದಲ್ಲಿ ಕೆಲ ಕಾಲ ಓಡಾಡಿದ ಜಿಂಕೆ ನಂತರ ಅರಣ್ಯದೊಳಗೆ ಓಡಿ ಹೋಗಿದೆ.ಒಟ್ಟಾರೆ ಬೆಳಗಾವಿ ಜಿಲ್ಲೆಯಲ್ಲಿ ಕಾಡು …

Read More »

ಮೂರು ಚಿರತೆ ಬಳಿಕ,ಬೆಳಗಾವಿಗೆ ಬಂತು ಕತ್ತೆ ಕಿರುಬು….!!

ಬೆಳಗಾವಿಗೆ ಬಂತು ಕತ್ತೆ ಕಿರುಬು….!! ಬೆಳಗಾವಿ-ಬೆಳಗಾವಿ ಜಿಲ್ಲೆಯ ಮೂರು ಕಡೆ ಚಿರತೆ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿ ಪಕ್ಕದ ಮೋದಗಾ ಗ್ರಾಮದ ಪರಿಸರದಲ್ಲಿ ಕತ್ತೆ ಕಿರುಬು ಕಾಣಿಸಿಕೊಂಡಿದೆ. ಮೋದಗಾ,ಪಂತ ಬಾಳೆಕುಂದ್ರಿ ಗ್ರಾಮದ ಹದ್ದಿಯಲ್ಲಿ ಎರಡು ಕತ್ತೆ ಕಿರುಬು ಕಾಣಿಸಿಕೊಂಡಿವೆ. ಮೋದಗಾ ಗ್ರಾಮಸ್ಥರು,ಇದನ್ನು ನೋಡಿ ಭಯಭೀತರಾಗಿದ್ದು,ಊರಿಗೆ ಕಾಡು ನಾಯಿ,ಬಂದಿದೆ,ತೋಳ ಬಂದಿದೆ ಎಂದು ಇಲ್ಲಿಯ ಜನ ಆತಂಕಕ್ಕೊಳಗಾಗಿದ್ದಾರೆ. ಕತ್ತೆ ಕಿರುಬು ಡೇಂಜರ್ ಪ್ರಾಣಿ,ಹಳ್ಳಿಯ ಜನ ಇದಕ್ಕೆ ಕಾಡು ನಾಯಿ ಅಂತಾರೆ,ಇದು ಮನುಷ್ಯರ ಮೇಲೆ ದಾಳಿ …

Read More »

ಬೆಳಗಾವಿಯ 22 ಶಾಲೆಗಳಿಗೆ ಶುಕ್ರವಾರವೂ ರಜೆ..

ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಮುಂದುವರಿದಿರುವುದರಿಂದ ಬೆಳಗಾವಿ ನಗರ ಮತ್ತು ಗ್ರಾಮೀಣ ಶಿಕ್ಷಣ ವಲಯದ ವ್ಯಾಪ್ತಿಯ 22 ಶಾಲೆಗಳಿಗೆ ಶುಕ್ರವಾರ(ಆ.12) ರಜೆಯನ್ನು ಮುಂದುವರಿಸಲಾಗಿದೆ ಎಂದು ಡಿಡಿಪಿಐ ಬಸವರಾಜ ನಾಲತವಾಡ ತಿಳಿಸಿರುತ್ತಾರೆ. ಸದರಿ ಪ್ರದೇಶಗಳಿಂದ ಬೇರೆ ಬೇರೆ ಕಡೆಯ ಶಾಲೆಗಳಿಗೆ ಮಕ್ಕಳನ್ನು ಕಳಿಸುವಾಗ ಪಾಲಕರು ಸೂಕ್ತ ಎಚ್ಚರಿಕೆಯನ್ನು ವಹಿಸಬೇಕು ಎಂದು ಅವರು ತಿಳಿಸಿದ್ದಾರೆ. ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.ಹನುಮಾನ ನಗರ,ಕುವೆಂಪು ನಗರ,ಜಾಧವ ನಗರ,ಸದಾಶಿವ ನಗರ,ಹಾಗು ದೂರದರ್ಶನ ನಗರದ …

Read More »