Breaking News
Home / Breaking News (page 114)

Breaking News

ಡಬಲ್ ಮರ್ಡರ್ ಕೇಸ್ ಆರು ಜನ ಆರೋಪಿಗಳ ಅರೆಸ್ಟ್…!!!

ಬೆಳಗಾವಿ-ಬೆಳಗಾವಿ ತಾಲೂಕಿನ ಸುಳೇಭಾವಿಯಲ್ಲಿ ಜೋಡಿಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ(24) ಅಲಿಯಾಸ್ ಸಸ್ಸಾ, ಯಲ್ಲೇಶ್ ಹುಂಕ್ರಿ ಪಾಟೀಲ್(22) ,ಮಂಜುನಾಥ ಶಿವಾಜಿ ಪರೋಜಿ(22), ದೇವಪ್ಪ ರವಿ ಕುಕಡೊಳ್ಳಿ(26),ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ‌ ಹಣಬರಟ್ಟಿ(20), ಭರಮಣ್ಣ ನಾಗಪ್ಪ ನಾಯಕ(20) ಬಂಧಿಸಲಾಗಿದೆ ಎಂದುಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಹೇಳಿದ್ದಾರೆ. ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಹತ್ಯೆಯಾಗಿತ್ತು,ಎರಡು ಗ್ಯಾಂಗ್‌ಗಳ ಮಧ್ಯೆ ವೈಷಮ್ಯ …

Read More »

ಬೆಳಗಾವಿ ಡಿಸಿ ಕಚೇರಿ ಆವರಣದಲ್ಲೂ ನಂದಿನಿ ಮಹಿಮೆ….!!

ಬೆಳಗಾವಿ, ಅ.7: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿಯ ಪಕ್ಕದಲ್ಲಿ ಕೆ.ಎಂ.ಎಫ್. ಸಂಸ್ಥೆಯ‌ ನಂದಿನಿ ಕ್ಷೀರ‌ ಮಳಿಗೆಯನ್ನು ಬೆಳಗಾವಿ ನಗರ ಉಪ ಪೊಲೀಸ್ ಆಯುಕ್ತರಾದ ರವೀಂದ್ರ ಗಡಾದಿ ಅವರು ಶುಕ್ರವಾರ(ಅ.7) ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತೀ ಹೆಚ್ಚು ಜನಸಂದಣಿ ಇರುವ ಜಿಲ್ಲಾಧಿಕಾರಿ ಕಚೇರಿ ಹಾಗೂ ನ್ಯಾಯಾಲಯ ಆವರಣದಲ್ಲಿ ನಂದಿನಿ ಕ್ಷೀರ ಮಳಿಗೆಯನ್ನು ಆರಂಭಿಸಿರುವುದರಿಂದ ಜನರಿಗೆ ಅನುಕೂಲವಾಗಲಿದೆ ಎಂದರು. ಜಿಲ್ಲಾಧಿಕಾರಿ ಕಚೇರಿಗೆ ಪ್ರತಿದಿನ ಸಾವಿರಾರು ಜನರು …

Read More »

ಸುಳೇಭಾವಿಯಲ್ಲಿ ಕೊಲೆಯಾದ ಇಬ್ಬರೂ ಜೈಲಿಗೆ ಹೋಗಿ ಬಂದವರು…..

ಸುಳೇಭಾವಿಯಲ್ಲಿ ಕೊಲೆ, ಆದವರು ಈ ಹಿಂದೆ ಜೈಲಿಗೆ ಹೋಗಿ ಬಂದವರು….. ನಿನ್ನೆ ರಾತ್ರಿ ಬೆಳಗಾವಿ ನಗರದ ಪಕ್ಕದಲ್ಲಿ ಇರುವ ಸುಳೆಭಾವಿ ಗ್ರಾಮದಲ್ಲಿ ಇಬ್ಬರು ಯುವಕರ ಕೊಲೆಯಾಗಿದೆ,ಈ ಯುವಕರು ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದವರು, ಕೊಲೆ ಮಾಡಿ ಜೈಲಿಗೆ ಹೋದಾಗ ಇವರ ಜೊತೆಗೆ ಜೈಲಿನಲ್ಲಿದ್ದ ಗೆಳೆಯರ ಜೊತೆ ಜಗಳಾಡಿಕೊಂಡಿದ್ದರು.ಜೈಲಿನಿಂದ ಹೊರಗೆ ಬಂದಾಗಲೂ ಜಗಳಾಡಿಕೊಂಡಿದ್ದರು,ಈ ಏರಿಯಾದ ಹಿರಿಯರು ಈ ಗ್ಯಾಂಗ್ ಜಗಳಾಡದಂತೆ ರಾಜಿ ಪಂಚಾಯ್ತಿ ಮಾಡಿದ್ದರೂ ಕಚ್ಚಾಟ ಮುಂದುವರೆದಿತ್ತು …

Read More »

ಬೆಳಗಾವಿಯಲ್ಲಿ ಇಬ್ಬರು ಯುವಕರ ಡಬಲ್ ಮರ್ಡರ್….

ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಕಮಿಷ್ನರೇಟ್ ವ್ಯಾಪ್ತಿಯ ಸುಳೆಭಾವಿ ಗ್ರಾಮದಲ್ಲಿ ಇಬ್ಬರು ಯುವಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ನಡೆದಿದೆ. ಸುಳೆಭಾವಿ ಗ್ರಾಮದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಬಳಿ  ಹಂತಕರು ಇಬ್ಬರು ಯುವಕರ ಮೇಲೆ ಅಟ್ಯಾಕ್ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ,ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಘರ್ಷಣೆಗೆ ಹಳೆಯ ವೈಷಮ್ಯಮೇ ಕಾರಣವೆಂದು ತಿಳಿದು ಬಂದಿದೆ. ಸುಳೆಭಾವಿ ಗ್ರಾಮದ ಮಹೇಶ್ …

Read More »

ಶ್ರೀನಗರದಲ್ಲಿ ಬೆಳಗಾವಿ ಜಿಲ್ಲೆಯ ಸೈನಿಕನ ಸಾವು..

ಬೆಳಗಾವಿ ಜಿಲ್ಲೆಯ ಬಡಕುಂದ್ರಿ ಗ್ರಾಮದ ಸೈನಿಕನೊಬ್ಬ ಶ್ರೀನಗರದಲ್ಲಿ ಕರ್ತವ್ಯ ನಿಭಾಯಿಸುತ್ತಿರುವಾಗ ಹೃದಯಾಘಾತದಿಂದ ಮರಣ ಹೊಂದಿದ್ದು ,ಸೈನಿಕ ಪಾರ್ಥಿವ ಶರೀರ ನಾಳೆ ಸಂಜೆ ಅಥವಾ ನಾಡಿದ್ದು ಸ್ವಗ್ರಾಮಕ್ಕೆ ಬರುವ ಸಾಧ್ಯತೆ ಇದೆ. ಶಿವಾನಂದ ಬಾಬು ಸಿರಗಾಂವಿ ವಯಸ್ಸು 42 ಸಾ||ಬಡಕುಂದ್ರಿ ಪೋಸ್ಟಿಂಗ್ – ಶ್ರೀನಗರ 55 RR ಬೇಟಾಲಿಯಾನ್ ಮಕ್ಕಳು – 2 ಗಂಡು ಹಾಗೂ ಹೆಂಡತಿ ತಾಯಿ ಇರುವರುು ದಿವಸ ಶ್ರೀನಗರ ದಲ್ಲಿ ಸೇನೆ ಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಹೃದಯಘಾತ …

Read More »

ನದಿಗೆ ಹಾರಿ,75 ವರ್ಷದ ಅಜ್ಜಿಯನ್ನು ರಕ್ಷಿಸಿದ ಯುವಕ..

ಬೆಳಗಾವಿ- ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ 75 ವರ್ಷದ ಅಜ್ಜಿಯನ್ನು ಪಾರಿಶ್ವಾಡ ಗ್ರಾಮದ ಯುವಕನೊಬ್ಬ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ನಡೆದಿದೆ. ಬಾಳಮ್ಮಾ ನಾವಲಗಿ 75 ಬಸದಸಾಪೂರ ಗ್ರಾಮ, ಎಂಬ ಅಜ್ಜಿ ಪಾರಿಶ್ವಾಡ ಗ್ರಾಮದ ಮಲಪ್ರಭಾ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ, ಪಾರಿಶ್ವಾಡ ಗ್ರಾಮದ ಎಜಾಜ್ ನಾಝೀಲ್ ಮಾರಿಹಾಳ ಎಂಬ ಯುವಕ ಅಜ್ಜಿಯನ್ನು ರಕ್ಷಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

Read More »

ಗಾಳಿಪಟ, ಹನ್ನೊಂದು ವರ್ಷದ ಬಾಲಕನ ಸಾವಿಗೆ ಕಾರಣವಾಯ್ತು…

ಬೆಳಗಾವಿ- ಈಗ ಶಾಲೆಗೆ ದಸರಾ ರಜೆ ಹೀಗಾಗಿ ಶಾಲಾ ಮಕ್ಕಳು ಮನೆಯಲ್ಲಿ ಇರುವದು ಸಹಜ, ಮನೆ ಕೆಲಸಕ್ಕೆ ತೆರಳುತ್ತಿದ್ದ ತಾಯಿ ತನ್ನ ಜೊತೆ ಮಗನನ್ನು ಕರೆದುಕೊಂಡು ಹೋಗಿದ್ದಳು, ಆದ್ರೆ ಅಲ್ಲಿ ಯಡವಟ್ಟಾಗಿ ಬಾಲಕನ ಜೀವ ಉಳಿಯಲ್ಲಿಲ್ಲ. ಬೆಳಗಾವಿ ಉಜ್ವಲ ನಗರದ ನಿವಾಸಿ ದಫೇದಾರ್ ಎಂಬ ಮಹಿಳೆ ಮನೆ ಕೆಲಸಕ್ಕೆ ಅಶೋಕ ನಗರಕ್ಕೆ ಹೋಗುವಾಗ ಜೊತೆಗೆ ತನ್ನ ಮಗ ಅರಮಾನ್ ನನ್ನು ಕರೆದುಕೊಂಡು ಹೋಗಿದ್ದಳು,ತಾಯಿ ಮನೆ ಕೆಲಸದಲ್ಲಿ ತೊಡಗಿರುವಾಗ ಮಗ ಟೆರಿಸ್ …

Read More »

ಅಕ್ಟೋಬರ್ 15 ಪ್ರಭಾಕರ ಕೋರೆ ಅವರಿಗೆ ಸ್ಪೇಷಲ್ ಡೇ…!!

ಇದೇ ತಿಂಗಳು ದಿ. 15 ರಂದು ಡಾ. ಪ್ರಭಾಕರ ಕೋರೆ ಅವರ 75ನೇ ಜನ್ಮ ದಿನಾಚರಣೆಯ ಅಮೃತ ಮಹೋತ್ಸವದಂಗವಾಗಿ ಪೂರ್ವಭಾವಿ ಸಭೆಯನ್ನು ಗ್ರಾಮೀಣ ಮುಖಂಡರೊಂದಿಗೆ ಇಂದು ಲಿಂಗರಾಜ ಕಾಲೇಜಿನ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು. ಮಾಜಿ ಶಾಸಕರು ಹಾಗೂ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಅವರು ಮಾತನಾಡಿ, ಈ ನಾಡಿನಲ್ಲಿ ಶೈಕ್ಷಣಿಕ ಕ್ರಾಂತಿಯೊಂದಿಗೆ ಹಿಂದುಳಿದ ಜನರಲ್ಲಿ ಶಿಕ್ಷಣದ ಅರಿವು ಮೂಡಿಸುತ್ತ, ಅವರ ಜೀವನದಲ್ಲಿ ಬೆಳಕಾಗಿ ಪರಿಣಮಿಸಿದ ಡಾ. ಪ್ರಭಾಕರ ಕೋರೆ ಅವರು …

Read More »

ನಿಂತ ಲಾರಿಗೆ ಗುದ್ದಿದ ಕಾರು ಓರ್ವನ ಸಾವು,ನಾಲ್ವರಿಗೆ ಗಂಭೀರ ಗಾಯ…

ಬೆಳಗಾವಿ: ಬೆಳಂಬೆಳಗ್ಗೆ ಯರಗಟ್ಟಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಕಾರಿನಲ್ಲಿದ್ದ ತಂದೆ-ಮಗ ಸೇರಿ ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಪಟ್ಟಣದಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ‌ ಹುಲಕುಂದ ಗ್ರಾಮದ ರಂಗಪ್ಪ ಗುರುಸಿದ್ದಪ್ಪ ಪಾಟೀಲ (30) ಸಾವನ್ನಪ್ಪಿದವರು.ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಭೀರೇಶ್ವರ ಬ್ಯಾಂಕ್ ಎದುರಿನ ರಸ್ತೆ ಪಕ್ಕದಲ್ಲಿ ಮೃತ ಲಾರಿ ಚಾಲಕ ಲಾರಿಯನ್ನು ಸೈಡ್ ಗೆ ಹಾಕಿ ಲಾರಿಯಲ್ಲಿದ್ದ ಸರಕಿಗೆ ಹಗ್ಗ ಕಟ್ಟಿ ಪ್ಯಾಕ್ …

Read More »

ಈತನ ಬಳಿ ಸಿಕ್ಕಿದ್ದು ಒಂದಲ್ಲ,ಎರಡಲ್ಲ,ಬರೊಬ್ಬರಿ 51 ಎಟಿಎಂ ಕಾರ್ಡ್…..!!

ಬೆಳಗಾವಿ- ಆತ ಖಿಲಾಡಿ,ಎಟಿಎಂ ಹತ್ತಿರ ಸುತ್ತಾಡಿ,ಮಹಿಳೆಯರಿಗೆ,ವೃದ್ಧರಿಗೆ ಸಹಾಯ ಮಾಡುವದಾಗಿ ನಂಬಿಸಿ,ಎಟಿಎಂ ಬದಲಾಯಿಸಿ ಹಣ ದೋಚುತ್ತಿದ್ದ ವಂಚಕನನ್ನು ಚಿಕ್ಕೋಡಿ ಪೋಲೀಸರು ಬಂಧಿಸಿದ್ದಾರೆ. ಅಮೂಲ ದಿಲೀಪ್ ಸಖಟೆ (30) ಈತ ಮೂಲತಃ ಮಹಾರಾಷ್ಟ್ರದ ಕೊಲ್ಹಾಪೂರದ ನಿವಾಸಿಯಾಗಿದ್ದು,ಚಿಕ್ಕೋಡಿಯ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಢಾಲೆ ಎಂಬ ಮಹಿಳೆಗೆ ಎಟಿಎಂ ನಿಂದ ಹಣ ತಗೆಯಲು ಸಹಾಯ ಮಾಡುವದಾಗಿ ಹೇಳಿ 37 ,500 ರೂ ಹಣ ಡ್ರಾ ಮಾಡಿ, ದೋಚಿಕೊಂಡು ಪರಾರಿಯಾಗಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ …

Read More »